ಯುವ ಗಜಲ್‌ ಕವಿ

ಶಿವಪ್ರಕಾಶ ರು ಕುಂಬಾರ

ಹೆಸರು: ಶಿವಪ್ರಕಾಶ ರು ಕುಂಬಾರ(ನಂರುಶಿ ಕಡೂರು)

ವಯಸ್ಸು: ೩೨

ಶಿಕ್ಷಣ: ಐಟಿಐ ,ಡಿಪ್ಲೋಮಾ

ವೃತ್ತಿ: ಬೆಂಗಳೂರು ಮೆಟ್ರೋ ರೈಲ್ವೆನಲ್ಲಿ ಕಿರಿಯ ಅಭಿಯಂತರ

ಪ್ರಕಟಿತ ಕೃತಿಗಳು : ೧) ಅಮೃತ ಸಿಂಚನವು ನಿಮಗಾಗಿ ( ಕವನ ಸಂಕಲನ)

೨) ಕಾಮನ ಬಿಲ್ಲು ಬಣ್ಣ ಬೇಡುತಿದೆ (ಗಜಲ್ ಸಂಕಲನ)

೩) ನೇರಿಶಾ (ಗಜಲ್ ಸಂಕಲನ)

ಸಂಗಾತಿಓದುಗರಿಗೆ ಇವರದೊಂದು ಗಜಲ್

ಸತ್ತವನ ಮನೆಯ ಗೋಳು ನನಗೂ ಕೇಳುತಿದೆ ಗಾಲಿಬ್
ಯಮ ಕಿಂಕರರ ನರ್ತನ ಎಲ್ಲೇ ಮೀರುತಿದೆ ಗಾಲಿಬ್

ಹಸಿದ ಹೆಬ್ಬುಲಿಯಂತೆ ರಣಕೇಕೆ ಹಾಕುವುದು ಏಕೆ
ಮಸಣವು ನರ ಜೀವಗಳ ತಾನೇ ಬೇಡುತಿದೆ ಗಾಲಿಬ್

ಅಂಗುಲಿಮಾಲನಂತೆ ಕೊರಳಲಿ ಅದೆಷ್ಟು ಬುರುಡೆಗಳೋ
ಜಗವನು ಸುತ್ತುತ ತಮಟೆ ಬಡಿದು ಸಾರುತಿದೆ ಗಾಲಿಬ್

ಮೊಗ್ಗುಗಳನೂ ಬಿಡದೆ ಚಿವುಟಿ ಊದುವುದು ನ್ಯಾಯವೇ
ರಾಶಿ ಹೆಣಗಳ ತೋರಿಸಿ ಎಚ್ಚರ‌ ನೀಡುತಿದೆ ಗಾಲಿಬ್

ಹೇಡಿಯಂತೆ ಹೆದರಿ ಇನ್ನೆಷ್ಟು ದಿನ ಉಸಿರ ಹಿಡಿದಿಡಲಿ
ನಂರುಶಿ ಜೀವ ಕೂಡ ಎಲ್ಲರಲಿ ಸೇರುತಿದೆ ಗಾಲಿಬ್.

**********************************

Leave a Reply

Back To Top