ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ರಾಜೇಶ್ವರಿ ಎಸ್ ಹೆಗಡೆ “ಸಗ್ಗದ ಸಂಕ್ರಾಂತಿ”

ಕಾವ್ಯ ಸಂಗಾತಿ ರಾಜೇಶ್ವರಿ ಎಸ್ ಹೆಗಡೆ “ಸಗ್ಗದ ಸಂಕ್ರಾಂತಿ” ಮಾಗಿಯ ಚಳಿಯಲ್ಲಿಅಂಗಳಕೆ ನೀರೆರೆದುಚಿತ್ತಾರವ ಬಿಡಿಸುತ್ತಾಮಾಧವನ ನೆನೆನೆನೆದುಸುಗ್ಗಿ ಸಂಭ್ರಮದಿ ಮುಳುಗುವುದು. ವರುಷಕ್ಕೊಮ್ಮೆ ಹರುಷತರುವ ಸಂಕ್ರಮಣವುಎಳ್ಳಹೋಳಿಗೆ ಮಾದಲಿ ತಿನಿಸಿಭೂರಿಭೋಜನ ಉಣಿಸುವುದುಸಂಕ್ರಾಂತಿ ಸಂಭ್ರಮದಿ ಮುಳುಗುವುದು. ರೈತನ ಫಸಲಿಗೆ ಭಕ್ತಿಯಿಂ ನಮಿಸಿರಾಸುಗಳಿಗೆ ಗೆಜ್ಜೆಕಟ್ಟಿ ಸಿಂಗರಿಸಿಜನಪದ ಸೊಗಡ ಎಲ್ಲೆಡೆ ಬೀರಿಭೂತಾಯಿ ಪೂಜೆ ಮಾಡುವೆವುಸಂಕ್ರಾಂತಿ ಹರುಷದಿ ಮುಳುಗುವುದು ವರುಷದ ಮೊದಲ ಹಬ್ಬಉತ್ತರಾಯಣ ಆರಂಭಸೂರ್ಯನ ಪಥ ಸಂಚಲನಮಕರ ರಾಶಿಗೆ ಸಾಗುವ ನೇಸರಸಂಕ್ರಾಂತಿ ಹರುಷ ತುಂಬುವನು. ರವಿಯ ಕಾಂತಿ ಹೊಳೆಯಲುಮನಕೆ ಶಾಂತಿ ಮೂಡಲುಕ್ರಾಂತಿ ಬ್ರಾಂತಿ ಹೊರದೂಡಿಹೊಸತನದ ಕಳೆ ಕಾಣುವೆವುಮಕರ ಸಂಕ್ರಾಂತಿಲಿ ಮುಳುಗುವುದು. ಎಳ್ಳು ಬೆಲ್ಲದ ಸಿಹಿ ಜೆಗೆದುಕಬ್ಬಿನ ರಸವನು ಕುಡಿದುಹುಗ್ಗಿಯ ಸವಿ ಸವಿದುಹೊಲದಲಿ ಊಟ ಮಾಡುವೆವುಸಗ್ಗದ ಸಂಕ್ರಾಂತಿಲಿ ಮುಳುಗುವುದು.  ರಾಜೇಶ್ವರಿ ಎಸ್ ಹೆಗಡೆ.

ರಾಜೇಶ್ವರಿ ಎಸ್ ಹೆಗಡೆ “ಸಗ್ಗದ ಸಂಕ್ರಾಂತಿ” Read Post »

ಇತರೆ, ಜೀವನ

“ಇದಕ್ಕೆಲ್ಲ ಕಡಿವಾಣ ಹೇಗೆ ಮತ್ತು ಯಾವಾಗ?”ವನಜ ಮಹಾಲಿಂಗಯ್ಯ

ವಿಚಾರ ಸಂಗಾತಿ ವನಜ ಮಹಾಲಿಂಗಯ್ಯ “ಇದಕ್ಕೆಲ್ಲ ಕಡಿವಾಣ ಹೇಗೆ ಮತ್ತು ಯಾವಾಗ?” ಹಿಂದಿನ ಕಾಲದಲ್ಲಿ ಈ ಜ್ಯೋತಿಷ್ಯಕ್ಕೆ  ಈಗ ಕೊಡುವಷ್ಟು ಪ್ರಾಮುಖ್ಯತೆಯನ್ನು ಕೊಡತ್ತಿರಲಿಲ್ಲ. ಯಾಕೆಂದರೆ ಕಷ್ಟಪಟ್ಟು ದುಡಿಯೋದು  ಹೊಟ್ಟೆತುಂಬ ತಿನ್ನೋದು  ಕಣ್ತುಂಬ ನಿದ್ದೆ ಮಾಡೋದು ಅಷ್ಷೆ.   ಕಲ್ಲನ್ನು ಜೋಡಿಸಿ ಮಣ್ಣು ಕಲಸಿ ಮೆತ್ತಿ ಮನೆ ಕಟ್ಟಿ, ಅದಕ್ಕೆ ಸುಣ್ಣ, ಕೆಂಪುಬಣ್ಣ (ಉರುಮಂಜು) ಬಳಿದು ಕೊಂಡು ಬಂಗಾರದ ಬದುಕು ಬದುಕಿದವರು ನಮ್ಮ ಹಿರಿಯರು. ಹಬ್ಬ, ಮದುವೆ ಗಳಿಗೆ ಸಂಬಂಧಿ ಕರೆಲ್ಲ ಕೂಡಿಕೊಂಡು ಅವರ ಸಂಭ್ರಮ ಹೇಳತೀರದು. ಆಗ ಮನಸ್ಸನ್ನು ಹಾಳುಮಾಡುವ ಈ ಟಿ ವಿ , ಮೊಬೈಲು,   ಅಲ್ಲದೆ ಬೈಕು ಕಾರು ಇವ್ಯಾವು ಇರಲಿಲ್ಲ. ಅಂದು ಎತ್ತಿನ ಗಾಡಿ, ಕುದುರೆ ಸಾರೋಟ, ಸೈಕಲ್,ಇವ್ಯಾವು ಇಲ್ಲ ಅಂದ್ರೆ ಕಾಲ್ನಡಿಗೆ ಅಷ್ಟೇ. ಆದರೂ ಅಂದಿನಜನರೆಲ್ಲ ನೆಮ್ಮದಿಯಿಂದ  ಸಮಾಧಾನದಿಂದ ಪ್ರೀತಿ ವಿಶ್ವಾಸ ನಂಬಿಕೆಯಿಂದ ಹೊಂದಾಣಿಕಯಿಂದ ಜೀವಿಸುತ್ತಿದ್ದರು. ಎಲ್ಲವೂ ತನ್ನಷ್ಟಕ್ಕೆ ತಾನು ನಡೆಯುತ್ತಾ ಹೋಗುತ್ತಿತ್ತು. ಅಂದರೆ ಪ್ರಕೃತಿಯ ನಿಯಮಗಳನ್ನು ಪಾಲಿಸುತ್ತಾ ಜನ ಸೌಖ್ಯವಾಗಿ, ಖಷಿಯಿಂದ , ಹೊಂದಾಣಿಕೆಯಿಂದಬದುಕುತ್ತಿದ್ದರು. ಆಡಂಬರವಿಲ್ಲ, ಅತಿಯಾಸೆ ಇಲ್ಲ, ಅಸೂಯೆಯಿಲ್ಲ .  ಕಂಪ್ಲೇಟಿಲ್ಲ , ಕೋರ್ಟು ಕಚೇರಿಗಳಿಲ್ಲ. ಆದರೆ ಈಗ ವಿದ್ಯಾವಂತರು ಜಾಸ್ತಿಯಾಗಿ , ಅವರವರೇ ನಿಯಮಗಳನ್ನು ಹಾಕಿಕೊಂಡಿದ್ದಾರೆ. ಅಂದರೆ ಬದುಕಿನ ಅರ್ಥವೇ ಬದಲಾಗಿದೆ. ಎಲ್ಲವೂ ಕ್ಷಣಿಕ ಎನ್ನಿಸಿದೆ.ಕಾರಣ ಅವಸರದ ಅಪಾಯದ ಪಯಣ. ತಂತ್ರಜಾನದ ಮುಂದೆ ಯಾಂತ್ರಿಕ ಜೀವನ.10 ರಿಂದ 1 ಲಕ್ಷದವರೆಗಿನ  ಅಂಗೈಯಲ್ಲಿರುವ  ಮೊಬೈಲ್ ಎಲ್ಲವನ್ನು  ಎಲ್ಲರನ್ನೂ ಬದಲಾಯಿಸಿದೆ.  ಟಿ ವಿ ಧಾರಾವಾಹಿಗಳ ಅಬ್ಬರ. ಸಂಬಂಧಗಳ ದೂರ ತೀರ,  ಎಲ್ಲವೂ ಆನ್ಲೈನ್, ಅಮ್ಮನ ಕೈರುಚಿಯಿಂದ ವಂಚಿತರಾಗಿ,  ದುಡ್ಡೇ ದೊಡ್ಡಪ್ಪ ಅದಿಲ್ಲ ಅಂದರೆ ಬದುಕೇ ಇಲ್ಲಪ್ಪ ಅನ್ನುವ ಹಾಗೆ, ಬೇರೆ ಬೇರೆ ಊರು, ರಾಜ್ಯ, ದೇಶಗಳಿಗೆ ದುಡಿಯಲೆಂದು ಹೋದ ಮಕ್ಕಳು ತಂದೆ ತಾಯಿಯ ಸುಖಕ್ಕಲ್ಲ  ಅವರ ಶವಕ್ಕು ಬರದಂತಹ ಪರಿಸ್ಥಿತಿಯಲ್ಲಿ ಬದುಕು ಕಳೆಯುತ್ತಿದ್ದಾರೆ ಎಂದರೆ ಎಲ್ಲಿಗೋಯಿತು? ನಮ್ಮ  ಜೀವನ?  ಅದರ ನಡು ವೆ ಜ್ಯೋತಿಷ್ಯ, ವಾಸ್ತು ಅಂತ ಜನ ಮುಗಿಬಿದ್ದಿದ್ದಾರೆ. ಬೆಳಗ್ಗೆ ಎಂಟು ಗಂಟೆಗೆ ಎಲ್ಲಾ ನ್ಯೂಸ್ ಚಾನಲ್ಗಳಲ್ಲಿ ಬರುವ ಜ್ಯೋತಿಷಿಗಳು ಅವರ ಬದುಕೆ ಅದ್ವಾನಕ್ಕಿಟ್ಟಿರುತ್ತದೆ , ಅದರೆ ಅವರು ಎಲ್ಲರ ಬದುಕಿನ ಬಗ್ಗೆ ಹೇಳಲು ಕೂತಿರುತ್ತಾರೆ. ಅವರ ಹಿನ್ನೆಲೆ ಹೇಗಿದೆ,  ಅವರಿಗೆ ಅವರ ಭವಿಷ್ಯದ ಬಗ್ಗೆಯೇ ಅವರಿಗೆ ಗೊತ್ತಿಲ್ಲ, ಇತ್ತೀಚೆಗೆ ನಡೆದ ಜ್ಯೊತಿಷಿಯ ಕೊಲೆಯನಂತರವಾದರು ,ಟಿ ವಿ ಮಾಧ್ಯಮಗಳು ಅಂತಹ  ಕಾರ್ಯಕ್ರಮಳಿಗೆ   ಹಾಗೂ ಟಿವಿಗಳಲ್ಲಿ ಬರುವ ಕೆಲವು ಜಾಹೀರಾತುಗಳು ನಿಜಕ್ಕೂ ಮನೆ ಮಂದಿಯನ್ನು ಮುಜುಗರ ಪಡಿಸುತ್ತಿವೆ. ಅದೂ ಅಲ್ಲದೆ ಮಹಿಳೆರ ಒಳ ಉಡುಪುಗಳ ಜಾಹೀರಾತು ಗಳು ಹಾಗೂ ಪ್ಯಾಡ್ ಮತ್ತು IVF  ಜಾಹೀರಾತು ಗಳು ನಿಜಕ್ಕೂ ಬೇಜಾರು ತರುತ್ತವೆ. ಹಾಗೆಯೇ ಕೆಲವು ರಿಯಾಲಿಟಿ ಷೋಗಳು  ಡಬಲ್ ಮೀನಿಂಗ್ ಬಳಸುವುದು ಹಾಗೂ ಕೆಟ್ಟ ಕೆಟ್ಟ ದೃಶ್ಯ ಗಳನ್ನು ವೈಭವೀಕರಿಸಿ ತೋರಿಸುವುದು ನಿಜಕ್ಕೂ ಅಸಹ್ಯವಾಗುತ್ತಿದೆ.ಇದಕ್ಕೆಲ್ಲ ಕಡಿವಾಣ ಹಾಕಬೇಕಿತ್ತು ಅಲ್ಲವೇ  ? ಕಡಿವಾಣ ಹಾಕುವವರು ಯಾರು? ವನಜ ಮಹಾಲಿಂಗಯ್ಯ                          

“ಇದಕ್ಕೆಲ್ಲ ಕಡಿವಾಣ ಹೇಗೆ ಮತ್ತು ಯಾವಾಗ?”ವನಜ ಮಹಾಲಿಂಗಯ್ಯ Read Post »

ಇತರೆ

“ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ”ಗೊರೂರು ಅನಂತ ರಾಜು ಹಾಸನ.

ಪ್ರವಾಸಿ ಸಂಗಾತಿ ಗೊರೂರು ಅನಂತ ರಾಜು “ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ” ನಾವು ಶಿರಸಿಯಿಂದ ಬನವಾಸಿ ಬಸ್ಸು ಹತ್ತಿದಾಗಲೇ ನಾಲ್ಕೂವರೆ ಆಗಿತ್ತು. ಶಾಲೆ ಬಿಡುವ ವೇಳೆ ಬಸ್ ರಷ್ ಆಗಿತ್ತು. ನುಗ್ಗಿ ಬಸ್ ಹತ್ತಿ  ಬನವಾಸಿಯಲ್ಲಿ ಇಳಿದಾಗ ಐದೂವರೆ ಆಗಿತ್ತು. ಕ್ಯಾಂಟಿನ್‌ನಲ್ಲಿ ಟೀ ಕುಡಿದು ಮೈಂಡ್ ಪ್ರೆಶ್ ಆಯಿತು. ಅಲ್ಲಿ ದೇವಾಲಯದ ದಾರಿ ಕೇಳಲು ನೀವು ಆಟೋದಲ್ಲಿ ಹೋಗಿ ಆರೂವರೆಗೆ ದೇವಸ್ಥಾನದ ಬಳಿಗೆಯೇ ಬಸ್ ಬರುತ್ತದೆ ಅಲ್ಲಿ ವಾಪಸ್ಸು ಹತ್ತಬಹುದು ಎಂದರು. ಎರಡು ಆಟೋದಲ್ಲಿ  ಮಧುಕೇಶ್ವರ ದೇವಸ್ಥಾನಕ್ಕೆ ಹೋದವು. ದೇವಸ್ಥಾನದ ಪ್ರವೇಶದ್ವಾರದಲ್ಲಿ ನಾವು ಐವರು ಎ.ಹೆಚ್.ಗಣೇಶ್, ಪುಟ್ಟಸ್ವಾಮಿಗೌಡರು, ಬೇಕ್ರೀ ರಾಜೇಗೌಡರು, ಪಟ್ನ ವೆಂಕಟೇಗೌಡರು ಪೋಟೋ ತೆಗೆಸಿಕೊಂಡವು.   ಅರ್ಚಕರು ನಿಮಗೆ ಗೈಡ್ ಬೇಕೆ ಎಂದರು. ಹೌದೆಂದು ಅವರಿಂದ ಅನೇಕ ಐತಿಹಾಸಿಕ ಮಾಹಿತಿ ಪಡೆದೆವು.  ಸಿರಸಿಯಿಂದ ಬನವಾಸಿಗೆ ೨೨ ಕಿ.ಮೀ. ದೂರದ ಪ್ರಯಣ. ನಾವು ಪ್ರಯಣಿಸಿದ್ದು ಸೊರಬ ರಸ್ತೆಯಲ್ಲಿ. ವರದಾ ನದಿ ದಂಡೆಯಲ್ಲಿ ಬನವಾಸಿ ಇದೆ. ಇದು ಶಿರಸಿ ತಾಲ್ಲೂಕಿಗೆ ಸೇರಿದೆ.  ಕ್ರಿ.ಶ. ೧ನೇ ಶತಮಾನದಲ್ಲಿ ಬಾರತಕ್ಕೆ ಬಂದಿದ್ದ ಗ್ರೀಕ್ ಪ್ರವಾಸಿ ಟಾಲೆಮಿ ಈ ಪಟ್ಟಣವನ್ನು ಬನೌಸಿ ಇಂದು ಕರೆದಿದ್ದಾನೆ. ಕ್ರಿ.ಶ.೪ನೇ ಶತಮಾನದಲ್ಲಿ ಜಯಂತಿಪುರ ಅಥವಾ ವೈಜಯಂತಿ ಎಂದು ಕರೆಯಲಾಗುತ್ತಿತ್ತು. ಪಾಂಡವರು ತಮ್ಮ ವನವಾಸದ ಕೆಲಕಾಲ ಇಲ್ಲೇ ಕಳೆದರೆಂದೂ ಧರ್ಮರಾಜನ ಅಶ್ವಮೇಧಯಾಗದ ಸಂದರ್ಭ ಸಹದೇವ ದಕ್ಷಿಣ ಭಾರತದ ದಿಗ್ವಿಜಯ ಕಾಲದಲ್ಲಿ ವನವಾಸಕಾ ನಗರವನ್ನು ಗೆದ್ದನೆಂದೂ ಮಹಾಭಾರತದಲ್ಲಿ ಬನವಾಸಿಯನ್ನು ವನವಾಸಕ ಎಂಬ ಉಲ್ಲೇಖವಿದೆ. ವೈಜಯಂತಿ ಎಂದು ಹೆಸರಾದ ಈ ನಗರದಲ್ಲಿ ಮಧು ಕೈಟಭರೆಂಬ ದೈತ್ಯರನ್ನು ವಿಷ್ಣು ಕೊಂದನೆಂದು, ಶಿವಭಕ್ತರಾದ ಈ ದೈತ್ಯರ ಹೆಸರಿನಲ್ಲಿ ಬನವಾಸಿಯಲ್ಲಿ ಮಧುಕೇಶ್ವರ ಮತ್ತು ನದಿಯ ಇನ್ನೊಂದು ದಂಡೆಯಲ್ಲಿರುವ ಅವನಟ್ಟಿ ಅಥವಾ ಕುಪ್ಪತ್ತೂರಿನಲ್ಲಿ ಕೈಟಭೇಶ್ವರ ದೇವಾಲಯ ನಿರ್ಮಿಸಲಾಗಿದೆ ಎಂದು ಹೇಳಲಾಗಿದ್ದರೂ ಈಗಿರುವಂತೆ ಆ ದೇವಾಲಯಗಳು ಅನಂತರ ಕಾಲದವು. ನಾನು ಹಾಸನದಲ್ಲಿ ನೋಡಿದ ದೇವಿ ಮಹಾತ್ಮೆ ನಾಟಕದಲ್ಲಿ ಈ ಎರಡು ಪಾತ್ರಗಳು ಬರುತ್ತವೆ. ಬೌದ್ಧ ಧರ್ಮ ಪ್ರಸಾರಕ್ಕಾಗಿ ಅಶೋಕ ಚಕ್ರವರ್ತಿ ಕಳುಹಿಸಿದ  ಬೌದ್ಧ ಭಿಕ್ಷು ರಖ್ಖಿತ ಬನವಾಸಿ ಪ್ರಾಂತ್ಯಕ್ಕೆ ಬಂದಿದ್ದನೆಂದು ಮಹಾವಂಶ ಎಂಬ ಬೌದ್ಧಗ್ರಂಥ ತಿಳಿಸುತ್ತದೆ.  ನಾಗಾರ್ಜುನಕೊಂಡದ ಒಂದು ಶಾಸನದ ಪ್ರಕಾರ  ಸಿಂಹಳದ ಭೌದ್ಧ ಭಿಕ್ಷುಗಳು ಧರ್ಮ ಪ್ರಸಾರಕ್ಕಾಗಿ ಬನವಾಸಿಗೆ ಬಂದಿದ್ದರಂತೆ.  ಬನವಾಸಿ ಗೌತಮೀ ಪುತ್ರ ಸಾತಕರ್ಣಿಯ ನೇರ ಆಡಳಿತಕ್ಕೆ ಸೇರಿದ್ದು ಅವನು ತನ್ನ ಸೈನ್ಯದೊಡನೆ ವಿಜಯ ವೈಜಯಂತಿಯಲ್ಲಿ ಬೀಡುಬಿಟ್ಟಿದ್ದನೆಂದು ನಾಸಿಕದ ಶಾಸನ ಹೇಳುತ್ತದೆ.  ಬನವಾಸಿಯಲ್ಲಿ ದೊರಕಿದ ಸಾತವಾಹನ ದೊರೆ ವಾಸಿಷ್ಠೀ ಪುತ್ರ ಸಿವಸಿರಿ ಪುಳುಮಾವಿನ ಅನಂತರ ಬಂದ (ಕ್ರಿ.ಶ.೨ನೇ ಶತಮಾನ) ಶಿವಶ್ರೀ ಪುಳುಮಾವಿಯ ಶಾಸನ ಅವನ ರಾಣಿಯ ಸ್ಮಾರಕ ಶಿಲೆಯಾಗಿದ್ದು ಆ ಕಾಲದಲ್ಲಿ ಬನವಾಸಿಯ ಪ್ರಾಮುಖ್ಯವನ್ನು ಸೂಚಿಸುತ್ತದೆ. ಮುಂದೆ ಸಾತವಾಹನರ ಸಾಮಂತರೂ ಆ ವಂಶದ ಶಾಖೆಗೆ ಸೇರಿದವರೂ ಆದ ಚಟುಸಾತಕರ್ಣಿ ದೊರೆಗಳ ಕಾಲದಲ್ಲೂ ಬನವಾಸಿ ಪ್ರಮುಖ ನಗರವಾಗಿತ್ತು.  ಮಧುಕೇಶ್ವರ ದೇವಾಲಯದ ಕಂಬದ ಮೇಲೆ ರಾಷ್ಟ್ರಕೂಟ, ಕಲ್ಯಾಣ ಚಾಳುಕ್ಯ, ವಿಜಯನಗರ ಮತ್ತು ಸೋದೆ ಅರಸರ ಹಲವಾರು ಶಾಸನಗಳು ದೇವಸ್ಥಾನದ ಜೀರ್ಣೋದ್ದಾರ ದಾನದತ್ತಿಗಳ ಬಗ್ಗೆ ತಿಳಿಸುತ್ತವೆ.  ಕನ್ನಡವನ್ನು ರಾಜ್ಯ ಭಾಷೆಯಾಗಿ ಬಳಸಿದ ಪ್ರಪ್ರಥಮ ರಾಜವಂಶ ಕದಂಬರು.  ಈ ರಾಜ್ಯದ ಸ್ಥಾಪಕ ಮಯೂರಶರ್ಮ (ಕ್ರಿ.ಶ.೩೪೫-೩೬೫) ಈತನ ರಾಜಧಾನಿ ಬನವಾಸಿ. ರಾಜಾ ಕಾಕುಸ್ಥವರ್ಮನ ಕಾಲದಲ್ಲಿ (೪೩೫-೪೫೫) ಉಚ್ರ್ರಾಯ ಸ್ಥಿತಿಯಲ್ಲಿತ್ತು. ಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತ ಆರಂಕುಶವಿಟ್ಟೊಡಂ  ನೆನೆವುದೆನ್ನ ಮನಂ ಬನವಾಸಿ ದೇಶಮಂ  ಎಂದಿದ್ದಾನೆ. ಬನ ಮತ್ತು ವಾಸಿ ಪದಗಳಿಂದ ಬನವಾಸಿ ಎಂಬ ಹೆಸರು ಬಂದಿದ್ದು ಕ್ರಮವಾಗಿ ಕಾಡು ಮತ್ತು ವಸಂತ ಎಂಬ ಅರ್ಥ ಕೊಡುತ್ತದೆ. ಬನವಾಸಿ ಕರ್ನಾಟಕದ ಹಳೆಯ ಪಟ್ಟಣಗಳಲ್ಲಿ ಒಂದು. ಕದಂಬರ ಕಾಲದ ಅನೇಕ ಬಾರಿ ನವೀಕರಿಸಿದ ಸುಂದರ ಮಧುಕೇಶ್ವರ ದೇವಾಲಯ ಪ್ರಾಚೀನ ಇತಿಹಾಸ ಮತ್ತು ಶಾಸನಗಳಿಂದ ಕೂಡಿದೆ. ಇದು ಶಿವನಿಗೆ ಸಮರ್ಪಿತವಾದ ದೇವಾಲಯ. ಗರ್ಭಗುಡಿಯಲ್ಲಿ ಜೇನು ಬಣ್ಣದ ಲಿಂಗವಿದೆ.  ಇಲ್ಲಿಯ ಕೋಟೆ ಬಹಳ ಪುರಾತನವಾದದ್ದು. ಚಾಲುಕ್ಯ ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದಲ್ಲಿ ಈ ಕೋಟೆಯ ಪ್ರಸ್ತಾಪವಿದೆ. ತಾಳಗುಂದ ಗುಂಡನೂರು ಚಂದ್ರವಳ್ಳಿ ಹಲಸಿ ಮತ್ತು ಹಲ್ಮಿಡಿ ಶಾಸನಗಳು ಈ ಕನ್ನಡ ವಂಶದ ಬಗ್ಗೆ ಬೆಳಕು ಚೆಲ್ಲುತ್ತವೆ.  ಕನ್ನಡದ  ಮೊಟ್ಟಮೊದಲ ಶಾಸನವೆಂದು ಹೆಸರಾಗಿರುವ ಹಲ್ಮಿಡಿ ಶಾಸನ (ಕ್ರಿ.ಶ.೪೫೦) ಬೇಲೂರು ತಾ. ಹಲ್ಮಿಡಿ ಗ್ರಾಮದಲ್ಲಿ ದೊರಕಿದೆ. ರಾಜಾ ಶಾಂತಿವರ್ಮನ (ಕ್ರಿ.ಶ.೪೫೦) ಕಾಲದ ತಾಳಗುಂದದ ಶಾಸನವು ಬನವಾಸಿ ಕದಂಬರ ಸಾಮ್ರಾಜ್ಯದ ಹುಟ್ಟಿನ ಸಂಭವನೀಯ ವಿವರ ನೀಡುತ್ತದೆ. ತಾಳಗುಂದದ ನಿವಾಸಿ ಮಯೂರವರ್ಮನು ತನ್ನ ಅಜ್ಜ ಮತ್ತು ಗುರು ವೀರವರ್ಮನೊಂದಿಗೆ  ವೈದಿಕ ವಿದ್ಯಾರ್ಜನೆಗಾಗಿ ಕಂಚಿಗೆ ಹೋಗುತ್ತಾನೆ. ಅಲ್ಲಿ ಪಲ್ಲವರ ಕಾವಲು ಭಟರೊಂದಿಗೆ ಮನಸ್ತಾಪವಾಗಿ ಅವರಿಂದ ಅವಮಾನಿತನಾಗುತ್ತಾನೆ. ಇದರಿಂದ ಕೋಪಿತನಾಗಿ ಪ್ರತೀಕಾರದ ಪ್ರತಿಜ್ಞೆಗೈದು ಕಂಚಿಯನ್ನು ಬಿಟ್ಟು ವಾಪಸ್ಸು ಬಂದು ಶಸ್ತ್ರಾಭ್ಯಾಸ ಪ್ರಾರಂಭಿಸುತ್ತಾನೆ.  ಸೈನ್ಯ ಕಟ್ಟಿ ಪಲ್ಲವರೊಂದಿಗೆ ದೀರ್ಘಕಾಲದ ಯುದ್ಧ ನಂತರ ಕದಂಬರು ಸ್ವತಂತ್ರ ರಾಜ್ಯ ಘೋಷಿಸಿ ಕದಂಬರನ್ನು ಹತ್ತಿಕ್ಕಲಾರದೆ ಪಲ್ಲವರು ಅವರ ಸ್ವತಂತ್ರ ರಾಜ್ಯವನ್ನು ಒಪ್ಪಬೇಕಾಯಿತು. ಅಂತಿಮವಾಗಿ ಬಾದಾಮಿಯ ಚಾಲುಕ್ಯರಿಂದ ಈ ಸಾಮ್ರಾಜ್ಯ ಪತನವಾಯಿತು. ಅಲ್ಲಿಂದ ಮುಂದೆ ಬಾದಾಮಿ ಚಾಲುಕ್ಯರು ನಂತರ ರಾಷ್ಟ್ರಕೂಟರ  ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಈ ವಂಶ ಮುಂದುವರಿಯಿತು.     ದೇವಸ್ಥಾನದ ಆವರಣದಲ್ಲಿ ಇರುವ ಫಲಕದಲ್ಲಿ ದೇವಸ್ಥಾನ ಕುರಿತ್ತಾದ ಕೆಲವು ಐತಿಹಾಸಿಕ ಮಾಹಿತಿಗಳಿವೆ. ಕದಂಬರ ಕಾಲದ ಮಧುಕೇಶ್ವರ ದೇವಾಲಯ ಕಲ್ಯಾಣ ಚಾಲುಕ್ಯರಿಂದ ಸೋಂದಾ ಅರಸರ ಕಾಲದವರೆಗೆ ಅನೇಕ ವಾಸ್ತು ಸೇರ್ಪಡೆ ಬದಲಾವಣೆಗಳನ್ನು ಮಾಡುತ್ತಾ ಬಂದಿರುವುದು ಇಲ್ಲಿನ ವಾಸ್ತು ಶೈಲಿ  ಮತ್ತು ದೊರಕಿರುವ ೧೨ ಶಾಸನಗಳಿಂದ ತಿಳಿಯಬಹುದಾಗಿದೆ.  ಕದಂಬರು ಶಾತವಾಹನರ ಶಿಲ್ಪ ಕಲಾ ಶೈಲಿಯನ್ನು ಅಳವಡಿಸಿಕೊಂಡರು. ಪೂರ್ವಾಭಿಮುಖವಾಗಿ ಇರುವ ದೇವಾಲಯದ ಚೌಕಾಕಾರ ಗರ್ಭ ಗೃಹದ ಸುತ್ತಲೂ ಪ್ರದಕ್ಷಿಣಾ ಪಥವಿದೆ. ಗರ್ಭಗೃಹದಲ್ಲಿ ಪೀಠದ ಮೇಲೆ ಮಧುಕೇಶ್ವರ ಲಿಂಗವಿದೆ. ಲಿಂಗವು ಜೇನುತುಪ್ಪದ ಬಣ್ಣದಲ್ಲಿದೆ. ಎಡಭಾಗದಲ್ಲಿ ಪಾರ್ವತಿ ದೇವಾಲಯವಿದೆ. ಪೂರ್ವಭಾಗದ ಗೋಡೆಗೆ ಅಂಟಿಕೊಂಡoತೆ ಇರುವ  ೨ ಉಪಗುಡಿಗಳಲ್ಲಿ ಮಹಿಷಮರ್ದಿನಿ ಗಣೇಶನ ಶಿಲ್ಪಗಳಿವೆ ಮತ್ತು ದೊಡ್ಡ ಕಂಬಗಳಿರುವ ವಿಶಾಲ ಮಂಟಪವಿದೆ. ಈ ಎಲ್ಲಾ ರಚನೆಗಳು ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದವುಗಳಾಗಿವೆ. ಈ ಮಂಟಪದ ಮುಂಭಾಗದಲ್ಲಿ ತಿರುಗಣಿ ಯಂತ್ರದಿಂದ ರಚಿತವಾದ  ಅಲಂಕೃತ ಕಂಬಗಳಿರುವ ನವರಂಗವಿದೆ. ಅದರಲ್ಲಿ ಕುಳಿತ ನಂದಿಯ ಶಿಲ್ಪವಿದೆ. ನಂದಿಯ ಒಂದು ಕಣ್ಣು ಮಧುಕೇಶ್ವರನನ್ನು ಇನ್ನೊಂದು ಕಣ್ಣು ಪಾರ್ವತಿಯನ್ನು ನೋಡುತ್ತಿದೆ ನೋಡಿ ಎಂದರು ಅರ್ಚಕರು. ನವರಂಗದ ಸುತ್ತಲೂ ಕಕ್ಷಾಸನವಿದ್ದು ನವರಂಗಕ್ಕೆ ಮೂರು ಪ್ರವೇಶ ದ್ವಾರಗಳಿವೆ. ಇವುಗಳು ಸಹ ಕಲ್ಯಾಣ ಚಾಲುಕ್ಯರ ಕಾಲದ ನಿರ್ಮಿತಿಗಳಾಗಿವೆ. ದೇವಾಲಯದ ಒಳಭಾಗದಲ್ಲಿ ಪ್ರಾಚೀನ ಶಿಲ್ಪ ಶೈಲಿಯ ಲಕ್ಷಣಗಳಿರುವ  ಆದಿಮಾಧವ ಮತ್ತು ಕಾರ್ತಿಕೇಯನ ಶಿಲ್ಪಗಳಿವೆ. ದೇವಾಲಯಕ್ಕೆ ಈಗಿರುವ  ಶಿಖರವು ವಿಜಯನಗರ ಸೋಂದಾ ಅರಸರ ಕಾಲಕ್ಕೆ ಸೇರಿದ್ದು ಸುಖನಾಸಿಯನ್ನು ಹೊಂದಿರುವ ಕದಂಬ ನಾಗರ ಶಿಖರವು ಪಿರಮಿಡ್ಡು ಆಕಾರದಲ್ಲಿ ಮೇಲಕ್ಕೇರುತ್ತದೆ.  ನಾಲ್ಕು ಮೂಲೆಗಳಲ್ಲಿ ನಂದಿ ವಿಷ್ಣುವಿನ ದಶಾವತಾರ ೧೨ ಆದಿತ್ಯರು, ದಿಕ್ಪಾಲಕರು, ನಾಗಬಂಧ ಮತ್ತು ಇತರ ದೇವತೆಗಳ ಗಾರೆ ಶಿಲ್ಪಗಳಿಂದ ಶಿಖರವನ್ನು ಅಲಂಕರಿಸಲಾಗಿದೆ. ನವರಂಗದ ಛಾವಣಿಯ ಸಮತಟ್ಟಾಗಿ ಅದರ ಅಂಚು ಇಳಿಜಾರಿನಿಂದ ಕೂಡಿದೆ. ದೇವಾಲಯದ ಮುಂಭಾಗ ದ್ವಜ ಸ್ಥಂಭವಿದೆ. ಪ್ರಾಕಾರದಲ್ಲಿರುವ ಉಪ ಗುಡಿಗಳಲ್ಲಿ ಸೋಂದಾ ಅರಸರ ಕಾಲದ ದಿಕ್ಪಾಲರು ದುಂಡಿರಾಜ, ಗಣಪತಿ ಚಿಂತಾಮಣಿ ನರಸಿಂಹ ಮತ್ತಿತರ ಶಿಲ್ಪಗಳಿವೆ. ಶಾಸನ ಸಹಿತ ನಾಗಶಿಲ್ಪ ಮತ್ತು ಅಲಂಕೃತ ಶಿಲಾಮಂಟಪದoತಿರುವ ಮಂಟಪವು ದೇವಾಲಯದಲ್ಲಿರುವ ಮುಖ್ಯ ರಚನೆಗಳಾಗಿವೆ. ಆಯತಾಕಾರದ ತೆಳು ಶಿಲಾ ಫಲಕದ ಮಧ್ಯದಲ್ಲಿ ಸುತ್ತಿಕೊಂಡಂತೆ ಇರುವ ೫ ಹೆಡಗಳುಳ್ಳ ನಾಗಶಿಲ್ಪವಿದೆ. ಶಿಲಾಫಲಕದ ಎರಡೂ ಬದಿಯ ಅಂಚಿನಲ್ಲಿ ಕ್ರಿ.ಶ.೨ನೇ ಶತಮಾನಕ್ಕೆ ಸೇರುವ ಬ್ರಾಹ್ಮಿ ಲಿಪಿಯ ಪ್ರಾಕೃತ ಶಾಸನವಿದೆ. ಅದು ಹರಿತಪುತ್ರ ವಿನುಕಡೆ ಚುಟುಕುಲಾನಂದ ಶಾಕಕರ್ಣಿಯ ೧೨ನೇ ಆಳ್ವಿಕೆಯ ವರ್ಷದಲ್ಲಿ ಅವನ ಪುತ್ರಿ ಶಿವಸ್ಕಂದ ನಾಗಶ್ರೀಯು ಒಂದು ಕೆರೆ ಹಾಗೂ ವಿಹಾರದೊಂದಿಗೆ ಈ ಕಲಾತ್ಮಕ ನಾಗಶಿಲ್ಪವನ್ನು ನಿರ್ಮಿಸಿ ಕೊಡುಗೆಯಾಗಿ ನೀಡಿದ್ದಾಗಿ ತಿಳಿಸುತ್ತದೆ. ಸಂಜಯoತಿಯ (ಬನವಾಸಿ) ನಿವಾಸಿ ಅಚಾರ್ಯ ದಾಮೋರಕನ ಶಿಷ್ಯ ನಾಟಕನೆಂಬ ಶಿಲ್ಪಿಯು ಈ ನಾಗಶಿಲ್ಪವನ್ನು ಕೆತ್ತಿದನೆಂದು ಶಾಸನವು ದಾಖಲಿಸಿದೆ.  ಸೋಂದಾ ಅರಸ ಸದಾಶಿವ ನಾಯಕನು (ಕ್ರಿ.ಶ.೧೬ನೇ ಶತಮಾನ) ನಿರ್ಮಿಸಿರುವ ಅತ್ಯಂತ ಸೂಕ್ಷ್ಮ ಕೆತ್ತನೆಗಳಿಂದ ಕೂಡಿದ ತ್ರಿಲೋಕ ಮಂಟಪವೆಂದು ಕರೆಯಲಾಗುವ ಶಿಲೆಯು ನವರಂಗದಲ್ಲಿದೆ. ರಘುನಾಥ ನಾಯಕ (ಕ್ರಿ.ಶ.೧೬೨೮) ಕೊಡುಗೆಯಾಗಿ ನೀಡಿದ ಶಿಲಾಮಂಟಪದಲ್ಲಿ ಗಿಡ, ಬಳ್ಳಿ, ಪ್ರಾಣಿ  ಮತ್ತು ಜಾಮಿತಿಯ ಅಲಂಕರಣಿಗಳಿಂದ ಕೂಡಿದ ಸೂಕ್ಷ್ಮ ಕೆತ್ತನೆಗಳಿವೆ. ಇಲ್ಲಿನ ಗಣೇಶನ ಅರ್ಧಬಾಗ ಮಾತ್ರ ಇರುವ ಮೂರ್ತಿ ಇದರ ಇನ್ನರ್ದ ವಾರಣಾಸಿಯಲ್ಲಿದೆಯಂತೆ.   ದೇವಾಲಯ ಸಮುಚ್ಛಯದ ಪೂರ್ವ ಭಾಗದಲ್ಲಿರುವ ಮುಖ್ಯ ಪ್ರವೇಶ ದ್ವಾರದಲ್ಲಿರುವ ಮೆಟ್ಟಿಲುಗಳ ಕೈಪಿಡಿ ಗೋಡೆಗಳನ್ನು ಎರಡು ಅಲಂಕೃತ ಆನೆಗಳ ಶಿಲ್ಪಗಳಿಂದ ಕೆತ್ತಲಾಗಿದೆ.  ಇಲ್ಲಿಯ ಕಲ್ಲಿನ ಮಂಚ ಪ್ರಧಾನ ಆಕರ್ಷಣೆಗಳಲ್ಲೊಂದು. ಬನವಾಸಿ ಪರಿಸರದಲ್ಲಿ ಸಾಮಾನ್ಯ ಅಲಂಕರಣೆಗಳ  ಆದಿ ಕದಂಬರೇಶ್ವರ, ಆದಿ ಮಧುಕೇಶ್ವರ, ಅಲ್ಲಮಪ್ರಭು  ದೇವಾಲಯಗಳಿವೆ. ನಾವು ದೇವಸ್ಥಾನದಿಂದ ಹೊರಬಂದಾಗ ಕತ್ತಲು ಆವರಿಸುತ್ತಿತ್ತು. ದೇವಾಲಯದ ಹೊರಬಾಗದಲ್ಲಿ ಎರಡು ರಥಗಳನ್ನು ಎತ್ತರಕ್ಕೆ ಮನೆ ನಿರ್ಮಿಸಿ ನಿಲ್ಲಿಸಲಾಗಿದೆ. ಈಗ ರಥೋತ್ಸವಕ್ಕೆ ಹೊಸ ರಥ ಬಳಸಲಾಗುತ್ತಿದ್ದು ಹಳೆಯ ರಥವನ್ನು ಸಂರಕ್ಷಿಸಲಾಗಿದೆ. ಹೊರಗಡೆ ಒಂದು  ಸುತ್ತು ಹಾಕಿ ನಡೆದುಕೊಂಡೆ ಬಸ್‌ಸ್ಟ್ಯಾಂಡ್‌ಗೆ  ಬಂದೆವು. ಕೆಲಹೊತ್ತಿಗೆ ಬಸ್ಸು ಬಂತು. ಹತ್ತಲು ಹೋದೆವು. ದೇವಸ್ಥಾನಕ್ಕೆ ಹೋಗಿ ಬರುತ್ತೇವೆ ಇಲ್ಲೇ ಇರಿ ಎಂದ ಕಂಡಕ್ಟರ್ ಮೇಡಂ ಹತ್ತಿಸಿಕೊಳ್ಳಲಿಲ್ಲ. ಕದಂಬ ಸೈನ್ಯ ಅಧ್ಯಕ್ಷರು ಬೇಕ್ರಿ ರಮೇಶ್ ನಮಗೆ ಬನವಾಸಿಯ ಗುತ್ಯಪ್ಪ ಮಾದರ್ ಕಪ್ಪಗೇರಿ ಅವರ ಪೋನ್ ನಂಬರ್ ನೀಡಿದ್ದರು. ನಾವು ಬಸ್ ಕಾಯುವಾಗ ಗುತ್ಯಪ್ಪರು ಪೋನ್ ಮಾಡಿ ನಮ್ಮನ್ನು ಗುರುತಿಸಿ   ಮಾತನಾಡಿಸಲು ಬಂದರು. ಅಷ್ಟರಲ್ಲಿ ದೇವಸ್ಥಾನದಿಂದ ಬಸ್ಸು ಬಂತು. ನಾಳೇ ಭುವನಗಿರಿಯಲ್ಲಿ ಭೇಟಿಯಾಗೋಣ ಎಂದು ಗುತ್ಯಪ್ಪರಿಗೆ ವಿಶ್ ಮಾಡಿ ಶಿರಸಿ ಬಸ್ಸು ಹತ್ತಿದವು. ಗೊರೂರು ಅನಂತರಾಜು, ಹಾಸನ.

“ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ”ಗೊರೂರು ಅನಂತ ರಾಜು ಹಾಸನ. Read Post »

ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ ಕವಿತೆ,”ಮಕರ ಸಂಕ್ರಾಂತಿ”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಮಕರ ಸಂಕ್ರಾಂತಿ” ಬೆಳಗುವ ಸೂರ್ಯಸಂತೋಷ ಸಮೃದ್ಧಿಬಾಳಲ್ಲಿ ತರಲಿಸುಖ ಶಾಂತಿ ಕರುಣಿಸಲಿಸಂಕ್ರಾಂತಿಯ ಸಂಭ್ರಮ ನಿತ್ಯ// ಸೂರ್ಯದೇವನುಉತ್ತರಾಯನ ಪಥಬದಲಿಸುವ ಹಾಗೆನಮ್ಮ ಜೀವನದದಾರಿ ಸಂತೋಷದಪಥದಲ್ಲಿ ಸಾಗಿಸೋಣ ನಿತ್ಯ// ಉದಯಿಸಲಿ ರವಿಬೆಳಕಿನ ಚಿಲುಮೆಯಂತೆಬಾಳು ಸಮೃದ್ಧಿಯಲಿದುಃಖವನ್ನು ಹಾರಿಬಿಟ್ಟುಎಳ್ಳಿನಲ್ಲಿ ಬೆಲ್ಲ ಬೆರತಂತೆ  ಸಂಬಂಧ ಬೆರೆಸೋಣ ನಿತ್ಯ// ಮಕರ ಸಂಕ್ರಾಂತಿನಮ್ಮ ನಿಮ್ಮಜೀವನದ ಹೊಸದೊಂದು ಕ್ರಾಂತಿಯನ್ನು ಮೂಡಿಸಲಿದೀಪ ಬೆಳಗಿಸಿಕಷ್ಟಕಾರ್ಪಣ್ಯವ ದೂರಮಾಡಿ ಯಶಸ್ಸಿನಸರಮಾಲೆಯನ್ನೇ ತರಲಿಸಂಕ್ರಾಂತಿ ಸಂಭ್ರಮ ನಿತ್ಯ//  ವಿಜಯಲಕ್ಷ್ಮಿ ಹಂಗರಗಿ

ವಿಜಯಲಕ್ಷ್ಮಿ ಹಂಗರಗಿ ಕವಿತೆ,”ಮಕರ ಸಂಕ್ರಾಂತಿ” Read Post »

ಇತರೆ

“ಮಕರ ಸಂಕ್ರಮಣ ಕ್ಯಾಲೆಂಡರ್ ವರ್ಷದ ಮೊದಲ ಹಬ್ಬ”‌ ವೀಣಾ ಹೇಮಂತ್‌ ಗೌಡ ಪಾಟೀಲ್

ಸಂಕ್ರಾಂತಿ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ “ಮಕರ ಸಂಕ್ರಮಣ ಕ್ಯಾಲೆಂಡರ್ ವರ್ಷದ ಮೊದಲ ಹಬ್ಬ”‌ ಭಾರತ ದೇಶ ಹಲವು ಭಾಷೆಗಳ ಹಲವು ಜಾತಿಗಳ ನೂರಾರು ಸಂಸ್ಕೃತಿಗಳ ನೆಲೆವೀಡು. ಒಂದು ಮಾಹಿತಿಯ ಪ್ರಕಾರ ಪ್ರತಿ ೪೦ ಕಿಲೋಮೀಟರಿಗೆ ಒಮ್ಮೆ ಈ ದೇಶದ ಜನರು ಮಾತನಾಡುವ ಭಾಷೆ, ಸಂಸ್ಕೃತಿ, ನೆಲ,ಜಲ, ರೀತಿ ನೀತಿಗಳು ಬದಲಾಗುತ್ತದೆ. ಭಾವನೆಗಳು, ಬಣ್ಣಗಳು, ಭಾಷೆಗಳು, ಜಾತಿ ಧರ್ಮಗಳು ಬದಲಾದರೂ ಬಹುತೇಕ ಎಲ್ಲ ಸಂಪ್ರದಾಯಗಳ ಹೂರಣವು ಒಂದೇ ಅದು ಭಾವೈಕ್ಯತೆ. ಇಲ್ಲಿ ಹಿಂದೂ ದೇವರನ್ನು ಪೂಜಿಸುವ, ಗಣೇಶೋತ್ಸವದಲ್ಲಿ ಪಾಲ್ಗೊಳ್ಳುವ ಮುಸಲ್ಮಾನರಿದ್ದಾರೆ. ದರ್ಗಗಳಿಗೆ ಹೋಗುವ, ಸಕ್ಕರೆ ಓದಿಸುವ, ಮೊಹರಂ ಹಬ್ಬದ ಕುಣಿತಗಳಲ್ಲಿ ಮಕ್ಕಳನ್ನು ತೊಡಗಿಸುವ, ಫಕೀರರನ್ನಾಗಿಸುವ ಹಿಂದುಗಳಿದ್ದಾರೆ. ನಾವು ದೇವಸ್ಥಾನಗಳಿಗೆ ಹೋಗುವಷ್ಟೇ ಸಲೀಸಾಗಿ ದರ್ಗಗಳಿಗೂ ಹೋಗುತ್ತೇವೆ ಚರ್ಚುಗಳಿಗೂ ಹೋಗುತ್ತೇವೆ. ಇದು ಭವ್ಯ ಭಾರತದ ಪರಂಪರೆ ಸಾವಿರಾರು ವರ್ಷಗಳಿಂದಲೂ ಇದು ನಡೆದು ಬಂದಿದೆ.ಭಾರತದಲ್ಲಿ ಅಮಾವಾಸ್ಯೆಗೊಂದು ಹುಣ್ಣಿಮೆ ಗೊಂದು ಹಬ್ಬಗಳು ಬರುತ್ತವೆ. ಹಬ್ಬಗಳು ನಮ್ಮ ಸಂಸ್ಕೃತಿಯ, ನೆಲದ ಪ್ರತೀಕ. ಯುಗಾದಿ ನಮ್ಮ ಹೊಸ ವರ್ಷವಾದರೆ ಶಿವರಾತ್ರಿ ನಮ್ಮ ವರ್ಷದ ಕೊನೆಯ ಹಬ್ಬ. ಎಳ್ಳ ಅಮವಾಸೆ, ಶೀಗಿ ಹುಣ್ಣಿಮೆ, ಸಂಕ್ರಾಂತಿಗಳು ನಮ್ಮ ರೈತರ ಮುಖ್ಯ ಹಬ್ಬಗಳು. ಅದರಲ್ಲೂ ಸಂಕ್ರಾಂತಿ ಹಬ್ಬ ರೈತ ತಾನು ಬೆಳೆದ ಬೆಳೆಯನ್ನು ಕೊಯ್ದು ಒಕ್ಕಲು ಮಾಡುವ, ರಾಶಿ ಮಾಡುವ ಹಬ್ಬ.ಹಿಂದೂ ಪಂಚಾಂಗದ ಪ್ರಕಾರ ಜೂನ್ 22 ರಂದು ಸೂರ್ಯನು ಉತ್ತರಾಯಣದಿಂದ ದಕ್ಷಿಣಾಯಣದ ಕಡೆಗೆ ಪಥವನ್ನು ಬದಲಿಸಿದರೆ ಜನವರಿ 14ರಂದು ದಕ್ಷಿಣಾಯಣದಿಂದ ಉತ್ತರಾಯಣದ ಕಡೆಗೆ ಪಥವನ್ನು ಬದಲಾಯಿಸುತ್ತಾನೆ. ಅದು ಮಕರ ರಾಶಿಯ ದಿನ. ಈ ಜನವರಿ ತಿಂಗಳಲ್ಲಿ 14 ಇಲ್ಲವೇ 15ನೇ ತಾರೀಕಿನಂದು ಬರುವ ಈ ದಿನವನ್ನು ಸಂಕ್ರಾಂತಿ, ಸಂಕ್ರಮಣ, ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ.ಈ ಹಬ್ಬವನ್ನು ವಿವಿಧ ರಾಜ್ಯಗಳಲ್ಲಿ ಒಂದೊಂದು ಹೆಸರಿನಲ್ಲಿ ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಸುಗ್ಗಿ, ತಮಿಳುನಾಡಿನಲ್ಲಿ ಪೊಂಗಲ್, ಕೇರಳದಲ್ಲಿ ಮಕರವಿಳಕ್ಕು ಹಾಗೂ ತೆಲುಗು ರಾಜ್ಯಗಳಾದ ಆಂಧ್ರ, ತೆಲಂಗಾಣದಲ್ಲಿ ಭೋಗಿ ಹಬ್ಬವನ್ನಾಗಿ ಆಚರಿಸುತ್ತಾರೆ. ಮಕರ ಸಂಕ್ರಮಣದ ದಿನದಂದು ಕೇರಳದ ಶಬರಿಮಲೆಯ ಅಯ್ಯಪ್ಪನ ದೇವಸ್ಥಾನದಲ್ಲಿ ವಿಶೇಷ ಪೂಜೆ-ಪುನಸ್ಕಾರಗಳು ನಡೆಯುತ್ತವೆ.  ಸಂಜೆ ಮಕರ ಜ್ಯೋತಿ ದರ್ಶನ ಹಿನ್ನೆಲೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಆಗಮಿಸಿ ಜ್ಯೋತಿ ದರ್ಶನ ಪಡೆಯುವುದು ವಾಡಿಕೆ.  ಈ ದಿನದಂದು ಬೆಳಿಗ್ಗೆ ಬೇಗನೆ ಏಳುವ ಮನೆಯ ಕಿರಿಕಿರಿಯ ಸದಸ್ಯರೆಲ್ಲ ತಲೆಗೆ ಎಣ್ಣೆಯನ್ನು ಹಚ್ಚಿ  ಸಾಬೂನಿನ ಬದಲು ಎಳ್ಳು ಪುಡಿಯನ್ನು ಹಚ್ಚಿ ಸ್ನಾನ ಮಾಡುತ್ತಾರೆ. ವೈಜ್ಞಾನಿಕವಾಗಿ ಹೇಮಂತ ಋತುವಿನ ಕುಳಿರ್ಗಾಳಿಗೆ ಮೈಯಲ್ಲಿನ ಎಣ್ಣೆಯ ಅಂಶ ಮಾಯವಾಗಿ ಚರ್ಮ ವಿಪರೀತ ಶುಷ್ಕವಾಗಿರುತ್ತದೆ. ಹೀಗೆ ಶುಷ್ಕವಾದ ಚರ್ಮಕ್ಕೆ ಕಾಲಕಾಲಕ್ಕೆ ಹಬ್ಬದ ನೆಪದಲ್ಲಿ ಎಳ್ಳಿನ ಸೇವನೆ, ಎಣ್ಣೆಯ ಲೇಪನ ಮಾಡುವ ಮೂಲಕ ಚರ್ಮದ ಮೃದುತ್ವಕ್ಕೆ ಕಾರಣವಾಗುತ್ತವೆ  ನಮ್ಮ ಸಂಪ್ರದಾಯಗಳು. ಆಹಾರದಲ್ಲಿಯೂ ಅಷ್ಟೇ ಹುರಿದ ಎಳ್ಳು ಮತ್ತು ಹುರಿದ ಕಡಲೆ ಬೀಜ ಇಂದಿನ ಪ್ರಮುಖ ಆಹಾರವಾಗಿ ಬಳಸಲ್ಪಡುತ್ತದೆ.ಎಳ್ಳಮಾವಾಸೆಯಿಂದ ಹಿಡಿದು ಸಂಕ್ರಮಣದವರೆಗೆ ಒಂದಲ್ಲ ಒಂದು ಕಾರಣದಿಂದ ಎಳ್ಳು ಮತ್ತು ಶೇಂಗಾ (ನೆಲಗಡಲೆ) ಬಳಸುತ್ತ ದೇಹದಲ್ಲಿ ಜಿಡ್ಡಿನ ಅಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ  ಹಬ್ಬಗಳ ಹೆಸರಿನಲ್ಲಿ ಕಡ್ಡಾಯವಾಗಿ ನಾವು ಈ ಸಂಪ್ರದಾಯವನ್ನು ಪಾಲಿಸುತ್ತೇವೆ. ಉತ್ತರ ಭಾರತದಲ್ಲಿ ನದಿಗಳು ಮತ್ತು ಸಮುದ್ರಗಳಲ್ಲಿ ಸ್ನಾನ, ಸೂರ್ಯದೇವನಿಗೆ ಪೂಜೆ, ಗಾಳಿಪಟಗಳನ್ನು ಹಾರಿಸುವ ಮೂಲಕ ಈ ಹಬ್ಬವನ್ನು ಆಚರಿಸಿದರೆ, ದಕ್ಷಿಣ ಭಾರತದಲ್ಲಿ ಅದರಲ್ಲೂ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳಗಳಲ್ಲಿ ಸುಗ್ಗಿಯಾಗಿ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಮನೆ ಮನೆಗಳಲ್ಲಿ ಕಬ್ಬು, ಜೋಳದ ದಂಟುಗಳನ್ನು ತಲೆಬಾಗಿಲಿಗೆ ಕಟ್ಟಿ ಶೃಂಗರಿಸಿ ದನಗಳಿಗೆ ಸ್ನಾನ ಮಾಡಿಸಿ ಅವುಗಳ ಕೊಂಬುಗಳಿಗೆ ಬಣ್ಣ ಹಚ್ಚಿ ಸಿಂಗರಿಸುತ್ತಾರೆ. ಮನೆ ಮಂದಿಯೆಲ್ಲ ಎಳ್ಳು ಹಚ್ಚಿ ಅಭ್ಯಂಗಸ್ನಾನ ಮಾಡುತ್ತಾರೆ. ಮನೆಯ ದೇವರಿಗೆ ಮತ್ತು ಸೂರ್ಯದೇವನಿಗೆ ಪೂಜಿಸಿ ಹೊಸ ಅಕ್ಕಿಯಿಂದ ತಯಾರಿಸಿದ ಪೊಂಗಲ್, ಅಕ್ಕಿ ಪಾಯಸ ಮುಂತಾದ ವಿಶೇಷ ಅಡುಗೆಗಳನ್ನು ದೇವರಿಗೆ ನೈವೇದ್ಯ ಮಾಡುತ್ತಾರೆ. ಗ್ರಾಮೀಣ ಭಾಗದಲ್ಲಿ ವಿಧ ವಿಧ ತರಕಾರಿಗಳ ಅಡುಗೆ, ಎಳ್ಳು ಹೋಳಿಗೆ, ಶೇಂಗಾ ಹೋಳಿಗೆ, ಸಿಹಿ ಪೊಂಗಲ್, ಖಾರದ ಪೊಂಗಲ್, ಚಿತ್ರಾನ್ನ ಮೊಸರನ್ನ ಜೊತೆಗೆ ಹಬ್ಬದ ವೈಶಿಷ್ಟ್ಯವೆಂಬಂತೆ (ಕೆಲವೆಡೆ ಎಲ್ಲಾ ರೀತಿಯ ಸೊಪ್ಪುಗಳನ್ನು ಹಾಕಿ) ಗೆಣಸು, ಗಜ್ಜರಿ, ಬದನೆಕಾಯಿ, ಚಳ್ಳವರೆ ಮತ್ತು ಕುಂಬಳಕಾಯಿಯನ್ನು ಚೆನ್ನಾಗಿ ಕುದಿಸಿ ಅದನ್ನು ನುಣ್ಣಗೆ ಅರೆದು ಹಸಿಮೆಣಸಿನಕಾಯಿ  ಹಾಕಿ ಉಪ್ಪು ಬೆಲ್ಲ ಮತ್ತು ಎಳ್ಳಿನ ಪುಡಿಯನ್ನು ಹಾಕಿ ಕುದಿಸಿದ ಬರ್ಥವನ್ನು ತಯಾರು ಮಾಡುತ್ತಾರೆ  ಇದು ಆರೋಗ್ಯಕ್ಕೆ ಪುಷ್ಟಿದಾಯಕವೂ ಹಿತಕರವೂ ಹೌದು. ಇದನ್ನು  ಚಪಾತಿ, ತೆಳ್ಳಗೆ ಎಳ್ಳು ಮೆಣಸಿನ ಬೀಜ ಹಾಕಿ ಬಡಿದು ತಯಾರಿಸಿದ ಜೋಳದ ಮತ್ತು ಸಜ್ಜೆಯ ರೊಟ್ಟಿಗಳ ಜೊತೆಗೆ ತಿನ್ನಬಹುದು. ಇನ್ನು ಕೆಲವರು ಮನೆಯಲ್ಲಿ ಅಡುಗೆ ಮಾಡಿಕೊಂಡು ಹತ್ತಿರದ ನದಿ ತೀರಗಳಿಗೆ ಹೋಗಿ ಅಲ್ಲಿಯೇ ನದಿಯಲ್ಲಿ ಸ್ನಾನ ಮಾಡಿ ಗಂಗಾಮಾತೆಯನ್ನು, ಸೂರ್ಯ ದೇವರನ್ನು ಪೂಜಿಸಿ, ತಾವು ಮನೆಯಲ್ಲಿ ತಯಾರಿಸಿ ತಂದ ನೈವೇದ್ಯವನ್ನು ಅರ್ಪಿಸಿ ಬಂದು ಬಾಂಧವರೊಂದಿಗೆ ನದಿ ತೀರದಲ್ಲಿಯೇ ಊಟ ಮಾಡಿ ಸಂತಸ ಪಡುತ್ತಾರೆ. ಪುಣ್ಯಕ್ಷೇತ್ರ ದರ್ಶನದ ಜೊತೆ ಒಂದು ಸಂತಸದ ವನವಿಹಾರವು ನಡೆದು ಹೋಗುತ್ತದೆ. ನಂತರ ಸಾಯಂಕಾಲದ ಸಮಯದಲ್ಲಿ ಹುರಿದ ಎಳ್ಳು, ಹುರಿದ ಕಡಲೆ ಬೀಜ, ಕೊಬ್ಬರಿ, ಬೆಲ್ಲದ ಅತ್ಯಂತ ಚಿಕ್ಕ ತುಂಡುಗಳು ಇಲ್ಲವೇ ಸಕ್ಕರೆಯ ಪುಡಿ, ಏಲಕ್ಕಿ ಪುಡಿ ಹಾಗೂ ಬಣ್ಣ ಬಣ್ಣದ ಕುಸುರೆಳ್ಳು (ಎಳ್ಳು ಸಕ್ಕರೆಯ ಪಾಕದಿಂದ ತಯಾರಿಸಿದ ಮಿಶ್ರಣ) ಸೇರಿಸಿದ ಮಿಶ್ರಣವನ್ನು ಈಗಾಗಲೇ ದೇವರಿಗೆ ನೈವೇದ್ಯ ಮಾಡಿರುವುದರಿಂದ ಸಂಜೆ ಮನೆಮನೆಗೂ ತೆರಳಿ ಒಬ್ಬರಿಗೊಬ್ಬರು ಪರಸ್ಪರ ಕೊಟ್ಟು ಕೊಂಡು ಎಳ್ಳು ಬೆಲ್ಲ ತಗೊಂಡು ಒಳ್ಳೆದನ್ನೇ ಮಾತಾಡೋಣ ಎಂದು ಹೇಳಿಕೊಳ್ಳುತ್ತಾರೆ. ಇಲ್ಲಿಯೂ ಕೂಡ ಕಹಿಯಾದ ಎಳ್ಳು ಮತ್ತು ಸಿಹಿಯಾದ ಬೆಲ್ಲ ನಮ್ಮ ಬದುಕಿನ ನೋವು ನಲಿವಿನ ದೃಷ್ಟಾಂತಗಳು. ಎಷ್ಟೇ ಕಷ್ಟ ಬಂದರೂ ಎದೆಗುಂದದೆ ಎಷ್ಟೇ ಸುಖ ಬಂದರೂ ತಗ್ಗದೆ ಎಳ್ಳು ಬೆಲ್ಲದ ಮಿಶ್ರಣದಂತೆ ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸಬೇಕು ಎಂಬ ಸಂದೇಶವನ್ನು ಈ ಹಬ್ಬ ನಮಗೆ ನೀಡುತ್ತದೆ. ಮೈಸೂರು ಭಾಗದಲ್ಲಿ ಕಬ್ಬಿನ ತುಂಡುಗಳನ್ನು, ಬೆಲ್ಲದ ಅಚ್ಚು ಸಕ್ಕರೆಯ ಅಚ್ಚು ಕುಸುರೆಳ್ಳು ಕೊಬ್ಬರಿಯ ಬಾಗಿನವನ್ನು ಚಿಕ್ಕ ಮಕ್ಕಳು ಮನೆ ಮನೆಗೆ ಹೋಗಿ ಕೊಟ್ಟು ಬರುತ್ತಾರೆ. ಇನ್ನು ಕೆಲವು ಕಡೆ ಚಿಕ್ಕ ಮಕ್ಕಳನ್ನು ಮನೆಯ ಮುಖ್ಯ ಹೊಸ್ತಿಲಿನ ಮೇಲೆ ಕೂಡಿಸಿ ಚಿನ್ನದ ಸರ ಉಂಗುರ ಹವಳ ಮುತ್ತು ಹುಳಿ ಕಡಲೆಕಾಯಿ, ಮಂಡಕ್ಕಿ ಬೆಂಡು ಬೆತ್ತಾಸಗಳ ಮತ್ತಿತರ ವಿವಿಧ ಬಗೆಯ ಹಣ್ಣುಗಳನ್ನು ಒಂದು ಸೇರಿನಲ್ಲಿ ತುಂಬಿ ಮಗುವಿನ ತಲೆಯ ಮೇಲೆ ಸುರಿದು ಆರತಿ ಮಾಡುತ್ತಾರೆ. ಇದನ್ನು ಹಣ್ಣೆರೆಯುವುದು ಎಂದು ಕರೆಯುತ್ತಾರೆ. ಇದು ಮಕ್ಕಳ ವಿಶೇಷ ಆರೋಗ್ಯ, ಆಯುಸ್ಸು ಮತ್ತು ಶ್ರೇಯೋಭಿವೃದ್ಧಿಗಾಗಿ ಮಾಡುವ ಹಬ್ಬ.ಇಂಗ್ಲಿಷ್ ಕ್ಯಾಲೆಂಡರ್ ತಿಂಗಳ ಮೊದಲ ಹಬ್ಬಸಂಕ್ರಾಂತಿಯ ಶುಭಾಶಯಗಳು…..ಬನ್ನಿ ಎಳ್ಳು ಬೆಲ್ಲ ತಿಂದು ಒಳ್ಳೆಯದನ್ನೆ ಮಾತನಾಡೋಣ. ವೀಣಾ ಹೇಮಂತ್ ಗೌಡ ಪಾಟೀಲ್ 

“ಮಕರ ಸಂಕ್ರಮಣ ಕ್ಯಾಲೆಂಡರ್ ವರ್ಷದ ಮೊದಲ ಹಬ್ಬ”‌ ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ನಿಮ್ಮೊಂದಿಗೆ

ಎಮ್ಮಾರ್ಕೆ ಅವರಕವಿತೆ, “ಕೆಂಪಿ(ಕೆಂಡ ನುಂಗಿದವಳು)”

ಕಾವ್ಯ ಸಂಗಾತಿ ಎಮ್ಮಾರ್ಕೆ “ಕೆಂಪಿ(ಕೆಂಡ ನುಂಗಿದವಳು)“ ಬಹುತೇಕ ನಿಮಗನಿಸಬಹುದುಮತ್ತೇಕೆ ಬಂದಳೋ ಈ ಕೆಂಪಿ?,ಹೌದು…ಅವಳಾಗಾಗ ಬರುವವಳೇ,ಹಳೆ ಮೂಸೆಯಲಿ ಹೊಸತು ಹೊತ್ತುಅವಳ ಕಷ್ಟ ಅವಳಿಗಷ್ಟೇ ಗೊತ್ತು ಇನ್ನೂ ಹಸುಳೆಯವಳುಮೊಸಳೆ ಬಾಯ್ಗೆ ಬಿದ್ದವಳು,ಪರದೇಶಿ ಕೂಸವಳುಪರರ ಪಾಲೇ ಆದವಳು,ಸಾಕುವೆನೆಂದವಳ ಒಯ್ದುಯಾರಿಗೋ ಮಾರಿದರು,ಇಲ್ಲಸಲ್ಲದ ಸಬೂಬು ಹೇಳಿಮೆಲ್ಲ ಮೆಲ್ಲಗೆ ಜಾರಿದರು,ಮೈಯ ಮಾರಿಕೊಳ್ಳುವವರಮಾರಕಟ್ಟೆಗೆ ದೂಡಿದರು,ಸ್ವಾರ್ಥಕ್ಕೆ ಕೆಂಪಿಯ ಬಾಳನ್ನೇದಾ(ಗಾ)ಳಕ್ಕೆ ಹೂ(ನೀ)ಡಿದರು ಬಂದು ಹೋಗುವವರಲ್ಲಿಯಾರೂ ಬಂಧುಗಳಲ್ಲ,ಮನಬಂದಂತೆ ಭೋಗಿಸಿಕಾಸು ಎಸೆಯುವರಲ್ಲ,ಬೇಕು ಬೇಡಗಳೆನಿತನುಕೇಳುವ ಕಿವಿಗಳಲ್ಲಿಲ್ಲ,ಕಣ್ಣು,ಕರುಳು ಎರಡೂಅರಿಯುತ್ತಲಿರಲಿಲ್ಲ,ಹಗಲು ಇರುಳಿಗೂ ಅಲ್ಲಿವ್ಯತ್ಯಾಸವೇ ಇರಲಿಲ್ಲ,ಯಾಕೆಂದರೆ ‘ಕಾಮ’ಗಾರಿಒಂದು ದಿನವೂ ನಿಲ್ಲಲಿಲ್ಲ ಉದರವ ಹೊರೆಯಲುದರ ನಿಗದಿಯಾಯಿತಲ್ಲ,ಒಲ್ಲದಿದ್ದರೂ ದೇಹವದುಒಗ್ಗಿಕೊಳ್ಳದೇ ವಿಧಿಯಿಲ್ಲ,ದಣಿದು,ಕುಣಿದು,ಮಣಿದುದೇಹದಿ ಏನೂ ಉಳಿದಿಲ್ಲ,ಕೆಂಡವನೇ ನುಂಗಿದವಳೀಕೆಸೆರಗಿಗೆ ಕಟ್ಟಿಕೊಂಡವಳಲ್ಲ, ವ್ಯಥೆಯ ಕಥೆ ಹೇಳಲೆಂದೇಹುಟ್ಟಿ ಬಂದಿರುವಳು,ಆಗಾಗ ತನ್ನೊಡಲ ಕಿಚ್ಚನುಕೊಂಚ ಬಿಚ್ಚಿಡುವಳು,ಸುತ್ತಿ ಸುತ್ತಿ ನೋವಿನತ್ತಲೇಮತ್ತೆ ಹೊರಳುವವಳು,ಮತ್ತೆ ಬರುವವಳು ಕೆಂಪಿಸದ್ಯಕ್ಕೆ ತೆರಳುವಳು,ಅಲ್ಲಿಯತನಕ ಅಯ್ಯೋ!ಪಾಪ…ಎಂದು ಬಿಡಿ ಎಮ್ಮಾರ್ಕೆ

ಎಮ್ಮಾರ್ಕೆ ಅವರಕವಿತೆ, “ಕೆಂಪಿ(ಕೆಂಡ ನುಂಗಿದವಳು)” Read Post »

ಕಾವ್ಯಯಾನ

ಡಾ ತಾರಾ  ಬಿ ಎನ್ ಧಾರವಾಡ ಅವರ ಕವಿತೆ,”ಅನುಬಂಧ”

ಕಾವ್ಯ ಸಂಗಾತಿ ಡಾ ತಾರಾ  ಬಿ ಎನ್ ಧಾರವಾಡ “ಅನುಬಂಧ” ಕಾಣದ ದಾರಿಯಲ್ಲಿಬೆಸೆದ ನಂಟು,ಹೆಸರಿಲ್ಲದರೂ ಹೃದಯಕ್ಕೆಪರಿಚಿತವಾದ ಬಂಧ…ಕಾಲದ ಹೊಳೆ ಹರಿದರೂಕಳೆಯದ ಗುರುತು, ಗಂಟುಅದು ಅನುಬಂಧ.ಮೌನದಲ್ಲೂ ಮಾತಾಡುವಸಂಬಂಧ, ಬಂಧ..ಕಣ್ಣಂಚಿನ ನೀರನ್ನೂಓದುತ್ತದೆ ಒರೆಸುತ್ತದೆ.ಹೃದಯ ಮುರಿದುನೊಂದ ಕ್ಷಣದಲ್ಲಿಅದೃಶ್ಯವಾಗಿ ಕೈಹಿಡಿದುಕೊಳ್ಳುತ್ತದೆ.ಮಣ್ಣಿನ ವಾಸನೆಯಂತೆಸಹಜ,ಬೆಳಗಿನ ಬೆಳಕಿನಂತೆಮೃದುವು.ನಗುವಿನಲ್ಲೂ, ನೋವಿನಲ್ಲೂಉಸಿರಾಡುವ ನಂಟು.ತಾಯಿ–ಮಗುವಿನಹಸಿರು ಪ್ರೀತಿಯಂತೆಸ್ನೇಹಿತರ ನಿಷ್ಕಪಟ ನಗು,ಗುರುವಿನ ಮಾರ್ಗದರ್ಶನ,ಅಸ್ಪಷ್ಟ ಮೌನಅನುಬಂಧದ ಬೇರೆ ಬೇರೆರೂಪಗಳು ಒಂದೇಕಾಲ ದೂರಸಿದರೂ,ಸ್ಮೃತಿ ಪಟದಲ್ಲಿ ಹತ್ತಿರ.ದೇಹಗಳು ದೂರವಾದರೂ,ಮನಗಳು ಒಡಲಿನಂತೆಬಿರುಗಾಳಿಯಲ್ಲಿ ಮರವನ್ನೆತ್ತಿದಬೇರುಗಳಂತೆ, ಗಟ್ಟಿಎತ್ತುವ ಶಕ್ತಿಯೇ ಅನುಬಂಧ.ಜಗತ್ತು ಕೈಬಿಟ್ಟ ಸಂದರ್ಭದಲ್ಲಿಉಳಿಸುವ ನಂಬಿಕೆ.ಅನುಬಂಧವೆಂದರೆಸಂಬಂಧವಲ್ಲ,ಬದುಕಿಗೆ ಅರ್ಥನೀಡುವ ಭಾವನೆ.ನಮ್ಮನ್ನು ನಾವುಗುರುತಿಸುವ ಕನ್ನಡಿ,ಜೀವನದ ದೀರ್ಘಪಯಣದಲ್ಲಿ ಜೊತೆಯಾದ ನೆರಳು.ಅರಿಯದಿದ್ದರೂ,ಮೌಲ್ಯ ಗೊತ್ತಾಗುವುದು.ಅದಕ್ಕಾಗಿಯೇ ಅನುಬಂಧ…ಹೃದಯದೊಳಗೆ ಮೌನವಾಗಿ ,ಹೂ ಬಿಡುವ ಅಮೂಲ್ಯ ವರ. ಡಾ ತಾರಾ ಬಿ ಎನ್ ಧಾರವಾಡ.

ಡಾ ತಾರಾ  ಬಿ ಎನ್ ಧಾರವಾಡ ಅವರ ಕವಿತೆ,”ಅನುಬಂಧ” Read Post »

ಕಾವ್ಯಯಾನ

ಸುಮತಿ ನಿರಂಜನ್‌ ಅವರ ಕವಿತೆ “ಪದ್ಯವೆಂದರೆ …. ಉತ್ಸವ !!!”

ಕಾವ್ಯ ಸಂಗಾತಿ ಸುಮತಿ ನಿರಂಜನ್‌ “ಪದ್ಯವೆಂದರೆ …. ಉತ್ಸವ !!!” The Hollow Men, The Waste Land ಬರೆದ ಮಹಾನ್ ಕವಿ ಟಿ.ಎಸ್. ಎಲಿಯಟ್ ಯಾವುದೋ ಲಹರಿಯಲ್ಲಿ ಹೇಳಿದನಂತೆ ಒಮ್ಮೆ – “Poetry is a mug’s game..”. ಪದ್ಯವೆಂದರೆಪದಗಳ ದೊಂಬರಾಟಅದು ಬರಿ ಹುಂಬರಾಟ !ಎಂದ ಪಶ್ಚಿಮದ ಕವಿಗೆಕಂಡದ್ದು ಬರಡುಬಂಜರು ಭೂಮಿಬೆಳೆವುದಲ್ಲಿ ಬರಿದೆಪಾಪಾಸುಕಳ್ಳಿ !ಬಟ್ಟೆ ತುಂಬಿಸಿಟ್ಟಬೆದರು ಬೊಂಬೆಗಳುತಲೆ ತುಂಬ ಬೈಹುಲ್ಲುಸುಮ್ಮ ಸುಮ್ಮನೆ ಗುಲ್ಲು … ಮೂಡಣ ಮನೆಯಮುತ್ತಿನ ನೀರುಕಾಣುವುದೇನುಪಡುವಣದಲ್ಲಿ ?ನುಣ್ಣನೆ ಎರಕದಬೆಳ್ಳಿಯ ಹೊಳೆ ಅದುಬರಿ ಬೆಳಗಲ್ಲೋ ಅಣ್ಣಾ !ಇದ ತಿಳಿಯಲು ಬಾರೋಸಾಧನಕೇರಿಗೆ ವಂದಿಸಿಬಾರೋ ಪಾಕಶಾಲೆಗೆಬೆಂದರೆ ಏನಾಗುವೆಯೋತಿಂದು ಹೇಳಲು ಬಾರೋ!,ಕರೆದೊಯ್ಯುವೆನುಕವಿಶೈಲಕೆ ನಿನ್ನಅನಿಕೇತನವೆಂದರೆಏನೆನ್ನಲಿ ಅಣ್ಣಾ !ಹಾಗೆಯೇ ಜೋಗದಸಿರಿ ಬೆಳಕಿನಲಿಕಾಣುವೆ ನೀನಿತ್ಯೋತ್ಸವ !ಪದಗಳ ಹುಂಬರಾಟವಲ್ಲೋಇದು ನಾದಬ್ರಹ್ಮೋತ್ಸವತಂತಿ ನಾಕು ವೇದಕಲರವ… ಸುಮತಿ ನಿರಂಜನ್

ಸುಮತಿ ನಿರಂಜನ್‌ ಅವರ ಕವಿತೆ “ಪದ್ಯವೆಂದರೆ …. ಉತ್ಸವ !!!” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಕವಿತೆ,”ತಾಯಿಮನೆ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ತಾಯಿಮನೆ” ನಾನು ಹುಟ್ಟಿ ಬೆಳೆದ‌ ನನ್ನ ಆ ಭವ್ಯ ಮನೆಯು ನನ್ನ ತಂದೆಯ ಬೆವರಾಗಿತ್ತು ತಾಯಿಯ ಮಮತೆಯಾಗಿತ್ತು, ನಮ್ಮ ಬದುಕಿಗೊಂದು ಬೆಚ್ಚನೆಯ ಸೂರಾಗಿತ್ತು, ಆದರೆ ಇಂದು ಮರ ಬಿದ್ದಾಗ ಹಕ್ಕಿ ಹಾರಿತು ಗೂಡು ಕಳಚಿ ರಸ್ತೆ ಪಾಲಾಯಿತ್ತು, ಹಕ್ಕಿಗಳು ತಮ್ಮ ತಮ್ಮ ಪಾಡಿಗೆ ಹಾರಿ ಹೋದಂತೆ ಆ ಮನೆಯ ಸ್ಥಿತಿಲತೆಯ ಕಂಡು ನೋವಿಂದ ಬರೆದ ಕವನವಿದು. *ತಾಯಿ ಮನೆ* ಬೆವರ ಸುರಿಸಿ ದುಡಿದುತಂದೆ ಕಟ್ಟಿಸಿದ, ನಮ್ಮ ಮನೆಆಶ್ರಯ ನೀಡಿದ ಆ “ತಾಯಿ ಮನೆ”ಹಲವು ಕನಸುಗಳ ಅವರು ಕಂಡ ಮನೆ,! ನಮ್ಮ ತಾಯಿ ಮನೆನಾವು ಹುಟ್ಟಿ ಬೆಳೆದ ಮನೆಬಾಲ್ಯದಾಟದಲಿ ನಲಿದ ಮನೆತಾಯಿ ಮಮತೆಯ ಕಾರುಣ್ಯ ಮನೆ,! ಮತ್ತೇ ಬೆಳಗೊ ಕಾತರತಂದೆಯ ರಕ್ತದ ಆ ಬೆವರುನಿತ್ಯ ಸುವಾಸಿಸುವ ನಮ್ಮ ತವರುಮರೆಯಲಾರೆವು ನಾವೆಂದು ಕುವರರು,! ಕತ್ತಲಲಿ ಕೊಠಡಿಗಳುಗಾಜು ಹೊಡೆದ ಕಿಟಕಿಗಳುಬೀಡು ಬಿಟ್ಟ ಜೇಡ ಜಾಲಗಳುಕಾಡುತ್ತಿದೆ ಬಾಲ್ಯದ ಆ ನೆನಪುಗಳು,! ಅಂದು ರಾಜ ಮನೆತನಸಂಭ್ರಮ ಮೆರೆದಾಡಿತ್ತು ಕಣ್ಮನವೈವಾಹಿಕ ವೈಭವಗಳ ಜೊತೆ ಜೀವನಕತ್ತಲ ದಾಟಿ ಪಯನ, ವೈಭವದತ್ತ ಬೆಳಕಿನ.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಕವಿತೆ,”ತಾಯಿಮನೆ” Read Post »

You cannot copy content of this page

Scroll to Top