ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ.ಶಶಿಕಾಂತ.ಪಟ್ಟಣ ರಾಮದುರ್ಗ “ನನ್ನವರು ಸಾಯುವುದು”

ಕಾವ್ಯ ಸಂಗಾತಿ ಡಾ.ಶಶಿಕಾಂತ.ಪಟ್ಟಣ ರಾಮದುರ್ಗ “ನನ್ನವರು ಸಾಯುವುದು“ ನನ್ನವರು ಸಾಯುವುದು ಗುಂಡಿನಿಂದಲ್ಲಎದೆ ಹಣೆ ಸೀಳಿದ್ದುಪಿಸ್ತೂಲು ಬಂದೂಕಿನಿಂದಲ್ಲ.ರುಂಡ ಮುಂಡ ಕತ್ತರಿಸಿದ್ದುಚಾಕು ಲಾಂಗುಗಳಲ್ಲ.ಸತ್ಯವಂತ ಸಾಯುವುದುದುಷ್ಟ ಹಂತಕರಿಂದಲ್ಲ.ಸಜ್ಜನ ಹೇಡಿಗಳಿಂದ ಅವರು ಇದ್ದಾಗ ಬೆಂಬಲಿಸಲಿಲ್ಲ.ಬೆನ್ನು ತಟ್ಟಿ ಕೈಜೋಡಿಸಲಿಲ್ಲ.ಸತ್ತಾಗ ಬಿಕ್ಕಿ ಬಿಕ್ಕಿ ಅಳುತ್ತೇವೆ.ಮಾನವ ಸರಪಳಿ ಪ್ರತಿಭಟನೆ.ಟಿವಿ ಪತ್ರಿಕೆಯಲ್ಲಿ ಭಾರಿ ಸುದ್ಧಿಆಕ್ರೋಶ ಅಬ್ಬರಹಂತಕರ ಹಿಡಿಯಲು ಸಮಿತಿಸರಕಾರ ಮಲಗುತ್ತದೆ.ಕೊಳಕು ವ್ಯವಸ್ಥೆ ನಾವೂ ಮಲಗುತ್ತೇವೆ . ಸತ್ಯವಂತ ಸಾಯುತ್ತಾನೆ.ಬದುಕಿನಿದ್ದಕ್ಕೂ ಹೋರಾಡುತ್ತಾನೆಸತ್ಯ ಶಾಂತಿ ಹಕ್ಕಿಗಾಗಿ.ಇದ್ದಾಗಲೂ ಒಬ್ಬಂಟಿಗಸತ್ತಾಗಲೂ ಒಬ್ಬನೇಸಾವು ಬೆನ್ನು ಬಿಡಲಿಲ್ಲ.ಸತ್ತವರಿಗೆ ಸಂತನ ಪಟ್ಟ ಕಟ್ಟಿ.ಕೊರಳಲ್ಲಿ ಬೋರ್ಡ್ ಹಾಕುತ್ತೇವೆ. ಅವರು ಸಾಯುವುದು ಗುಂಡಿನಿಂದಲ್ಲ.ನಮ್ಮ ಉದಾಸೀನ ಮೌನದಿಂದ. ಡಾ.ಶಶಿಕಾಂತ.ಪಟ್ಟಣ ರಾಮದುರ್ಗ

ಡಾ.ಶಶಿಕಾಂತ.ಪಟ್ಟಣ ರಾಮದುರ್ಗ “ನನ್ನವರು ಸಾಯುವುದು” Read Post »

ಕಾವ್ಯಯಾನ

ರಶ್ಮಿ ಶಮಂತ್ ಅವರ ಕವಿತೆ, “ಅತ್ಯಾಚಾರ”

ಕಾವ್ಯ ಸಂಗಾತಿ ರಶ್ಮಿ ಶಮಂತ್ “ಅತ್ಯಾಚಾರ” ಮುಗಿಯದ ಕಥೆಯಿದುಸುಡುತ್ತೇವೆನೂರಾರು ಮೇಣದಬತ್ತಿಯನ್ನುಬಿಗಿಯುತ್ತೇವೆ ಭಾಷಣದುಃಖಿಸುತ್ತೇವೆ, ಕೊರಗುತ್ತೇವೆನೆನೆ ನೆನೆದು‘ಅಯ್ಯೋ ಸಣ್ಣ ಮಗುವಂತೆ’ಉದ್ಘರಿಸುತ್ತೇವೆ,ಚೆಲ್ಲುವೆವು ನಿಟ್ಟುಸಿರಚಿಂತಿಸುವೆವು ಮುಂದೇನೆಂದುಹೆಣ್ಣೇಕೆ ಹುಟ್ಟಿತೆಂದುಕೊಡುತ್ತೇವೆ ನೂರಾರು ಸಲಹೆಗಳನ್ನುಮರೆತು ಬಿಡುತ್ತೇವೆಆಕ್ಷಣವನ್ನು ನಡೆಯುತ್ತದೆ? ——- ಏನು?ಮತ್ತೊಮ್ಮೆ ಮಗದೊಮ್ಮೆ  ಅಲ್ಲೆಲ್ಲೋ ಇನ್ನೆಲ್ಲೋ ಮತ್ತೆಲ್ಲೋಕೊನೆಗೊಮ್ಮೆ ನಡೆದರೂ ನಮ್ಮ ಪಕ್ಕದಲ್ಲಿದಿವ್ಯ ನಿರ್ಲಕ್ಷ್ಯ ನಮ್ಮದುಅದೇ ಪುನರಾವರ್ತನೆದೂಷಿಸುತ್ತೇವೆ , ಮರುಗುತ್ತೇವೆಹಾಗೆಯೇ ತೇಲಿಬಿಡುತ್ತೇವೆ ವಿಷಯವನು ಹೊಣೆಯಾಗಿಸುತ್ತೇವೆಪಕ್ಷಗಳನ್ನು , ಜಾತಿಗಳನ್ನು, ಧರ್ಮಗಳನ್ನುತಿಳಿಯಲಾರೆವು ಮೂಲ ಕಾರಣವನಿಂದಿಸಿ, ಆರೋಪಿಸಿ, ನಡೆಸಿ ಜಾಥಾ,ಮಾಧ್ಯಮಗಳಲ್ಲಿ ಕುಳಿತುನಡೆಸುವಾಗ ವಿತಂಡವಾದವಟಿ ಆರ್ ಪಿ ಯ ಸರಕಾಗುತ್ತದೆ ಅವಳ ಕಣ್ಣೀರುಮರೆಯುತ್ತೇವೆ ಮತ್ತೆತಣ್ಣಗಾಗುತ್ತೇವೆ ಎಂದಿನಂತೆಏನೂ ಆಗದಂತೆ ಬಳಸುತ್ತವೆಪಕ್ಷಗಳು ತಮ್ಮ ಬೇಳೆಯ ಬೇಯುವಿಕೆಗೆಹಳಿಯುತ್ತದೆ  ವಿರೋಧ ಪಕ್ಷವುಆಡಳಿತ ಪಕ್ಷವನುಕೊನೆಗೊಮ್ಮೆ ನೀಡುತ್ತಾರೆ ಧರ್ಮ ಜಾತಿಯಹಣೆ ಪಟ್ಟಿಯನುನಗು ನಗುತ್ತಾ ಚರ್ಚಿಸುವರು ಸದನದಲಿಘೋಷವಾಕ್ಯವೊಂದು ತಯಾರಾಗುತ್ತದೆ‘ಮಲಗಿ ಆನಂದಿಸಿ’ ಬಿಸಿ ತಟ್ಟುತ್ತದೆ ಒಮ್ಮೆಸಂತ್ರಸ್ತೆ ನಮ್ಮದೇ ಮನೆಯ ಮಗಳಾದಾಗಎಚ್ಚರವಿರಲಿ ಮೊದಲಾಗಲಿ ಬದಲಾವಣೆ ನಮ್ಮಿಂದಲೇತಡೆಯೋಣ ಮುಂದಾಗದಂತೆ ಅತ್ಯಾಚಾರಗಳುನಿರೂಪಿಸೋಣ ಅಬಲೆಯಲ್ಲ ಅವಳು ಸಬಲಳುಬಲಹೀನತೆಯ ತೊರೆದುನನಸಾಗಿಸೋಣ ಸ್ವಸ್ಥ ಸಮಾಜದ ನಮ್ಮ ಕನಸು ರಶ್ಮಿ ಶಮಂತ್

ರಶ್ಮಿ ಶಮಂತ್ ಅವರ ಕವಿತೆ, “ಅತ್ಯಾಚಾರ” Read Post »

ಇತರೆ, ಜೀವನ

“ಯಾರಿಗಿದೆ ನೆಮ್ಮದಿ?” ವನಜ ಮಹಾಲಿoಗಯ್ಯ ಮಾದಾಪುರ

ಬದುಕಿನ ಸಂಗಾತಿ “ಯಾರಿಗಿದೆ ನೆಮ್ಮದಿ?” ವನಜ ಮಹಾಲಿoಗಯ್ಯ ನಾನು ಯಾರನ್ನು ಉದ್ದೇಶಿಸಿ ಈ ಮಾತನ್ನು ಹೇಳುತ್ತಿಲ್ಲ ಜಗತ್ತಿನ ಪ್ರತಿ ಒಬ್ಬರು ತಿಳಿದುಕೊಳ್ಳಬೇಕಾದ ಮಾತಿದು ಎಷ್ಟೇ ಕೋಟಿ ಹಣ ಆಸ್ತಿ ಇದ್ದರೂ ನಾವು ಹೋಗುವಾಗ ಏನನ್ನು ತೆಗೆದುಕೊಂಡು ಹೋಗುವುದಿಲ್ಲ. ಇಷ್ಟೆಲ್ಲ ಇದ್ದರೂ ಅದನ್ನೆಲ್ಲವನ್ನು ಅನುಭವಿಸುವಂತಹ ಶಕ್ತಿ ಮನುಷ್ಯನಿಗೆ ಇಲ್ಲ. ಕಾರಣ ಆಸ್ತಿ ಹಣಕ್ಕೆ ಇರುವಷ್ಟು ವಯಸ್ಸು ಮನುಷ್ಯನಿಗೆ ಇಲ್ಲ.ಇದ್ದಾಗ ಇರುವಷ್ಟುನ್ನು ಅನುಭವಿಸುವಷ್ಟು ಮನೋ ಧೈರ್ಯವೂ ಮನುಷ್ಯನಿಗೆ ಇಲ್ಲ. 10 ಕಾರಿದ್ದರು ಒಂದು ಸಲಕ್ಕೆ ಒಂದೇ ಕಾರಿನಲ್ಲಿ  ಕುಳಿತು ಪ್ರಯಾಣ ಮಾಡಲು ಸಾಧ್ಯ. ಹಾಗೆಯೇ ಕೋಟಿ ಕೋಟಿ ಹಣ ವಿದ್ದರೂ ಅದನ್ನೆಲ್ಲ ಎಲ್ಲರ ಎದುರಿಗೆ ತೋರಿಸುವಷ್ಟು ಧೈರ್ಯವಿಲ್ಲ. ಕಾರಣ ಅಷ್ಟೊಂದು ಹಣ ಬರಲು ಒಳ್ಳೆಯ ದಾರಿಯಿಂದ ಅವಕಾಶವಿಲ್ಲ. ಇದ್ದ ಹಣದಲ್ಲಿ ಧಾರಾಳವಾಗಿ ಯಾರಿಗೂ ಸಹಾಯ ಮಾಡದೆ ತನ್ನಲ್ಲಿ ಹಾಗೆ ಇಟ್ಟು ಅದನ್ನು ಉಪಯೋಗಕ್ಕೆ ಬರದಂತೆ ಮಾಡುವುದು ಕೆಟ್ಟ ಮನಸ್ಥಿತಿ ಇರುವ ಮನುಷ್ಯನಿಗೆ ಮಾತ್ರ ಸಾಧ್ಯ. ಹಾಗೆ ತಾನು ಅನುಭವಿಸದೆ ತನ್ನವರಿಗೂ ಕೊಡದೆ ಸತ್ತಾಗ “ದರಿದ್ರದವರು ಬದುಕಿದ್ದು ಏನು ಪ್ರಯೋಜನ ಸತ್ತರೆ ಸಾಯಲಿ ಬಿಡಿ” ಎಂದು ಜನ ಅಂದುಕೊಳ್ಳುವಂತೆ ಬದುಕುವುದು ಏಕೆ ಬೇಕು? ನ್ಯಾಯವಾಗಿ ಬದುಕಿ ದುಡಿದದ್ದರಲ್ಲಿ ತನಗೆ ತನ್ನವರಿಗೆ ಎಂದು ಬಚ್ಚಿಡದೆ ಇರುವಷ್ಟು ದಿನ ಎಲ್ಲರೊಂದಿಗೆ ಪ್ರೀತಿಯಿಂದ ಬದುಕಿ ಸತ್ತಾಗ “ಈ ಮನುಷ್ಯ ಇನ್ನಷ್ಟು ದಿನ ಬದುಕಿರಬೇಕಿತ್ತು “ಅಂದುಕೊಳ್ಳುವಂತೆ ಬದುಕುವುದು ಎಷ್ಟು ಒಳ್ಳೆಯ ಸಾರ್ಥಕತೆಯ ಬದುಕಲ್ಲವೇ?.ಇತ್ತೀಚಿನ ದಿನಗಳಲ್ಲಿ ಮನುಷ್ಯ ಮನುಷ್ಯನಾಗಿಯೇ ಇಲ್ಲ ಅವನನ್ನು ಮೃಗಗಳಿಗೆ ಹೋಲಿಸುವುದು ಖಂಡಿತ ಬೇಡವೇ ಬೇಡ. ಮೃಗಗಳಿಗಿರುವಷ್ಟು ಒಳ್ಳೆಯತನ ಈ ಕೆಟ್ಟ ಮನುಷ್ಯನಿಗಿಲ್ಲ. ಸ್ವಾರ್ಥ ಮೋಸ ಧಗ ವಂಚನೆ ಅನ್ಯಾಯ ಇವೆಲ್ಲವೂ ಮನುಷ್ಯನ ಐದು ಅಂಗಗಳಂತಾಗಿದೆ. ಮನುಷ್ಯ ತನ್ನ ದುನ೯ಡತೆ ದುರ್ಗುಣ ಇವುಗಳಿಂದ ತನ್ನನ್ನು ತಾನು ಹಾಳು ಮಾಡಿಕೊಂಡು ತನ್ನ ಸುತ್ತಮುತ್ತಲಿನ ಸ್ವಾಸ್ಥ್ಯವನ್ನು ಹಾಳು ಮಾಡುತ್ತಿದ್ದಾನೆ. ಒಳ್ಳೆಯದು ಮಾಡಲು ಒಂದು ಕ್ಷಣ ಯೋಚನೆ ಮಾಡಿದರೆ ಸಾಕು. ಕೆಟ್ಟದ್ದನ್ನು ಮಾಡಲು ಸಾವಿರ ಸಲ ಯೋಚಿಸಬೇಕು. ಆದರೆ ಈಗಿನ ಯುವ ಜನತೆ ತಪ್ಪನ್ನು ಮಾಡಲು ಒಂದೇ ಕ್ಷಣ ಯೋಚಿಸುತ್ತಾರೆ ಒಳ್ಳೆಯದನ್ನು ಮಾಡಲು ಸಾವಿರ ಸಲ ಯೋಚಿಸುತ್ತಾರೆ. ಹಾಗಾಗಿ ಇಂದು ಎಷ್ಟೋ ಯುವಜನತೆ ತಪ್ಪುಗಳನ್ನು ಮಾಡಿ  ಜೈಲನ್ನು ಸೇರಿದ್ದಾರೆ. ಅವರನ್ನೆಲ್ಲ ನೋಡಿ ಆದರೂ ಉಳಿಧ ಜನರುಬುದ್ದಿ ಕಲಿತು ಬದುಕಬೇಕು.ಇವತ್ತಿನ ಮಕ್ಕಳು ತಂದೆ ತಾಯಿಯರ ಮಾತಿಗೆ ಬೆಲೆ ಕೊಡದೆ, ತಮ್ಮದೇ ಆದ ರೀತಿಯಲ್ಲಿ ನಡೆದುಕೊಂಡು ಜೀವನ ವನ್ನೇ ಹಾಳುಮಾಡಿಕೊಂಡು, ಕೇಳಿದರೆ ಅವ್ರೆಲ್ಲ ಹೇಳೋ ಮಾತು ಏನು ಗೊತ್ತಾ? ನಾವು ನಿಮ್ಮ ಕಾಲದವರಲ್ಲ, ಇವತ್ತಿನ ಜನರೇಷನ್ ನಾವು ಎಂದು  ಉತ್ತರಿಸುವ ರೀತಿ ಅಸಯ್ಯ ತರುತ್ತೆ. ತಂದೆ ತಾಯಿಗಳು ಈ ಮಕ್ಕಳ ಕಾಲದಲ್ಲಿ ಸೋತು ಹೋಗಿದ್ದಾರೆ. ನಾನು ತಂದೆ ತಾಯಿಗಳಿಗೆ ಒಂದು ಮಾತು ಹೇಳುತ್ತೇನೆ. ಯಾರ ಮಕ್ಕಳೇ ಆಗಲಿ ಮರ್ಯಾದೆ ತೆಗೆಯೋ ಕೆಲಸ ಮಾಡಿದರೆ ನೀವು ನೊಂದುಕೊಂಡು ಜೀವ ಕಳೆದುಕೊಳ್ಳಬೇಡಿ. ಕಾರಣ ಯಾವ ತಂದೆ ತಾಯಂದಿರು  ಮಕ್ಕಳನ್ನು  ಕೆಟ್ಟ ದಾರಿಗೆ ಹೋಗಲು ಪ್ರೇರೇಪಿಸುವುದಿಲ್ಲ. ಹಾಗೆಯೇ ಯಾರು ನೋವುಂಡ ತಂದೆ ತಾಯಿಯರಿಗೆ ದಯವಿಟ್ಟು ಅವಮಾನಿಸಿ ಮಾತನಾಡಬೇಡಿ. ಹಣ ಇಲ್ಲ ಅಂದ್ರೆ ಜನಗಳ ಎದುರಿಗೆ ಓಡಾಡಬಹುದು  ಆದ್ರೆ ಮರ್ಯಾದೆ ಹೋದರೆ ಹೇಗೆ ಓಡಾಡಬಹುದು ಅಲ್ಲವೇ,  ಮರ್ಯಾದೆ ಇಲ್ಲ ಅಂದ್ರೆ ನೆಮ್ಮದಿ ಎಲ್ಲಿರುತ್ತೆ. ವನಜ ಮಹಾಲಿoಗಯ್ಯ ಮಾದಾಪುರ

“ಯಾರಿಗಿದೆ ನೆಮ್ಮದಿ?” ವನಜ ಮಹಾಲಿoಗಯ್ಯ ಮಾದಾಪುರ Read Post »

ಕಾವ್ಯಯಾನ

ನಾಗರಾಜ ಬಿ ನಾಯ್ಕ ಅವರ ಕವಿತೆ “ತಕದಿಮಿತ”

ಕಾವ್ಯ ಸಂಗಾತಿ ನಾಗರಾಜ ಬಿ ನಾಯ್ಕ “ತಕದಿಮಿತ” ತಕದಿಮಿತಎದೆಯ ಕವಿತೆಯೊಳಗೆಭಾವದ ತಕದಿಮಿತಮೋಡ ಮಲ್ಲಿಗೆಯ ದಾಟಿಗಾಳಿ ವೀಣೆಯ ನುಡಿಸಿಪಲ್ಲವಿಯ ಹಿಡಿದೆಬ್ಬಿಸಿಜಗದ ಒಲವಿಗೆಬಾಳುವುದ ಕಲಿಸಿನಾದದಿ ಮತ್ತೆ ನಾದವಾಗಿಉಲಿವ ತಕದಿಮಿತಸುಳಿವ ತೇರಿನ ನೆರಳುಮುಂಗುರುಳ ಮಾತಾಡಿಸಿಮೌನದಲಿ ಹಬ್ಬಿರುವನಗೆಯ ನಗುವಾಗಿಸಿಕುಣಿವಂದದ ಕುಣಿತದಿಮೇಲ್ಮುಗಿಲ ತೋರಣದಿಹೆಜ್ಜೆಗೊಂದು ಕರಗಳ ಹಿಡಿದುನಡೆ ನಂಬಿ ಬಂದ ಹಕ್ಕಿಗೆಗೂಡೊಳಗೆ ಸವಿನಿದ್ದೆಬೆಟ್ಟದ ತುದಿಯಕಲ್ಲು ಮಂಚದ ಮೇಲೆಮಲಗಿದ್ದ ಉಸಿರಿನಬಡಿತವೂ ಒಂದು ತಕದಿಮಿತಹೂವರಳಿ ನಿಂತಂದಕೆಬೇರೊಳಗೆ ಸಂಚಲನಬೇರು ಮಣ್ಣೊಳಗೆಜೊತೆಗಿರುವ ಅನುಬಂಧಮಾತು ಮಾತಿಗೆಗೆರೆಯಾಗದ ಸಂಬಂಧಗರಿಗಳ ನಡುವೆ ಬೀಸುವತಂಗಾಳಿಯ ಪಿಸುಮಾತುಕೂಡ ಒಂದು ತಕದಿಮಿತ ನಾಗರಾಜ ಬಿ ನಾಯ್ಕ

ನಾಗರಾಜ ಬಿ ನಾಯ್ಕ ಅವರ ಕವಿತೆ “ತಕದಿಮಿತ” Read Post »

ಕಾವ್ಯಯಾನ

ಸುಮತಿ ನಿರಂಜನ ಕವಿತೆ, “ಪತಂಗ ಸಂಗ-ತಿ”

ಕಾವ್ಯ ಸಂಗಾತಿ ಸುಮತಿ ನಿರಂಜನ “ಪತಂಗ ಸಂಗ-ತಿ” ಹಾರೋಣ ಬನ್ನಿರಿ ಗೆಳೆಯರೇ ಹಾರೋಣನೀಲಿ ಆಕಾಶಕ್ಕೆ ಹಾಕೋಣ ಲಗ್ಗೆಒಂದೇ ದಿನವೆಂದು ಕುಂದದೆ ನಾವಿಂದುಒಂದಾಗಿ ಚಂದದಲಿ ನಲಿಯೋಣಚಂದಿರನ ಹೊಲದಲಿ ಚಿಕ್ಕೆಯ ಕುಯಿಲುಸಿಕ್ಕಷ್ಟು ಬಾಚಿ ತಬ್ಬೋಣ ಸುಗ್ಗಿಯಸಗ್ಗದ ಸುಖವ ಸವಿಯೋಣ !ಬೇರೆ ಬೇರೆ ರಂಗು ಬೇರೆ ಬೇರೆ ಗುಂಗುಲಂಗುಲಗಾಮಿಲ್ಲದೇ ಹಾರೋಣಒಬ್ಬರ ಬಿತ್ತರ ಇನ್ನೊಬ್ಬರೆತ್ತರಕಂಡು ಕರುಬದೆ ಮೇಲೆ ಹಾರೋಣರೆಕ್ಕೆ ಕತ್ತರಿಸದೆ ಕೊಕ್ಕಿಂದ ಚುಚ್ಚದೆಸಕ್ಕರೆ ಅಚ್ಚು ಹಂಚೋಣ ಸ್ನೇಹಿತರೆಅಕ್ಕರೆಯಿಂದ ಹರಸೋಣ ಕಣ್ಣಲ್ಲೆಕನಸಿನ ಗೋಪುರ ಕಟ್ಟೋಣಕೊನೆಯಿಲ್ಲ ಕಲ್ಪನೆ ಕ್ಷಿತಿಜಕ್ಕೆ ಕೆಳೆಯರೇಮಿತಿಯಿಲ್ಲ ಆತುಮ ಬಲಕೆ ಸಾಹಸಕೆಬನ್ನಿರಿ ಗೆಳೆಯರೆ ತನ್ನಿರಿ ಸುಮಶರಕಾಮನ ಬಿಲ್ಲ ಹೆದೆಗೇರಿಸೋಣಕಟ್ಟೋಣ ತೋರಣ ಬಾನ ಬಾಗಿಲಿಗೆಮುತ್ತಿನ ತೋರಣ ಕಟ್ಟೋಣ ಬನ್ನಿರಿಅಕ್ಷರ ದೀಪವ ಬೆಳಗೋಣ !! ಸುಮತಿ ನಿರಂಜನ

ಸುಮತಿ ನಿರಂಜನ ಕವಿತೆ, “ಪತಂಗ ಸಂಗ-ತಿ” Read Post »

ಕಾವ್ಯಯಾನ

ಡಾ ತಾರಾ ಬಿ ಎನ್ ಕವಿತೆ “ಅಧಿಕಾರ”

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ ಅಧಿಕಾರ ಅಧಿಕಾರವೆಂದರೆಕೈಯಲ್ಲಿರುವ ಕಿರೀಟವಲ್ಲ,ಜವಾಬ್ದಾರಿಯುತ ಹೊಣೆಗಾರಿಕೆಅದು ಗದ್ದುಗೆ ಮೇಲಿನ ಮೋಹ ಅಲ್ಲ,ನೆಲದ ಮೇಲಿನ ಬೆಳಕ ದೀವಿಗೆ.ಹೆಜ್ಜೆ ಹಾಕುವ ಪ್ರತಿ ಹಾದಿಯನ್ನೂಜವಾಬ್ದಾರಿಯಿಂದ ತೋರುವ ದೀಪ.ಕಠಿಣ ಧ್ವನಿಯಲ್ಲಿ ಕೂಗುವುದಲ್ಲ ಕೀಲುರಿಮೆಯಿಂದ  ಕಾಣುವುದಿಲ್ಲ ಕಿರಿ ಮಾಡಿ ಮೊದಲಿಸುದಲ್ಲ ಅಧಿಕಾರ,!ಮೃದು  ಭಾವದಲ್ಲಿ ನಂಬಿಕೆ  ಹುಟ್ಟಿಸುವಂಥದ್ದು. ಅಧಿಕಾರ!ಭಯ ಹುಟ್ಟಿಸುವ ಕೈಯಲ್ಲಲ್ಲ,ಆಶ್ರಯ ಕೊಡುವ ಹೃದಯದ ಆದರ್ಶ ಅರ್ಥಪೂರ್ಣ ವ್ಯವಸ್ಥೆ ಅಧಿಕಾರ!ಒಮ್ಮೆ ಅಹಂಕಾರವಾದರೆಅದು ವಿಷವಾಗುತ್ತ  ಮನಸ್ಸುಹದಗೆಡಿಸಿ ಮನಗಳ ಕೊಲೆಯಂತಪಾಪಕೃತ್ಯ ಇಳಿಸಿಬಿಡುವ ನಶೆ.ಸ್ವಂತ ಬೇರುಗಳನ್ನೇಸುಟ್ಟುಹಾಕುವ ಅಗ್ನಿ. ಅಧಿಕಾರ,,!ಸೇವೆಯಾಗಿ ಪರಿವರ್ತಿತವಾದರೆಅದು ಅಮೃತವಾಗುವ ಸಂಜೀವಿನಿಬಾಯಾರಿದ ಬದುಕುಗಳಿಗೆ  ಜೀವ  ನದಿ. ಅಧಿಕಾರ.!ಆಜ್ಞೆ ನೀಡುವುದು ಸುಲಭ,ಆದರ್ಶವಾಗಿಸುವುದು ಕಠಿಣ.ತೀರ್ಪು ಹೇಳುವುದು ಸುಲಭ,ನ್ಯಾಯ ಒದಗಿಸುವದು ಧೈರ್ಯ.ನಿಜವಾದ ಅಧಿಕಾರಎತ್ತರದಲ್ಲಿ ನಿಂತು ನೋಡುವುದಲ್ಲ,ಕೆಳಗಿಳಿದು ಕೈ ಹಿಡಿದು ನಡೆಯುವುದು.ತಾನೊಬ್ಬನೆ ಹೊಳೆಯುವುದಲ್ಲ, ಬಿದ್ದವರನ್ನು ಕೈ ಹಿಡಿದು ಎತ್ತಿ ಬದುಕ ಬೆಳಗಿಸಿ  ಮೌನವಾಗುವುದು.ಅಧಿಕಾರಗೆಲುವಿನ ಘೋಷಣೆ ಅಲ್ಲ,ಸೋಲಿನ   ಸಮಯದಲ್ಲಿಜೊತೆಯಾಗಿರುವ  ಆಪ್ತತೆ.ಗತಕಾಲದಲ್ಲಿ ಆಳಿದಗದ್ದುಗೆಗಳು ಕರಗಿಮಣ್ಣಲ್ಲಿ ಮಣ್ಣಾಗಿವೆ.ಹುದ್ದೆಗಳು ರದ್ದಾಗುತ್ತವೆ.ಉಳಿಯುವುದು ಮಾತ್ರ ನಿನ್ನ ನಡತೆ  ಘೋರತೆಯ ನೆನಪು.ಹಾಗಾಗಿಅಧಿಕಾರವನ್ನು ಧರಿಸುಭಾರವಾಗಿ ಅಲ್ಲ, ಭಕ್ತಿಯಂತೆ.ಅದನ್ನು ಬಳಸು.ಯುಕ್ತಿ, ಸ್ವಾರ್ಥಕ್ಕಾಗಿ ಅಲ್ಲ,ಸಾರ್ಥಕತೆಗಳಿಗಾಗಿ.ಏಕೆಂದರೆಅಧಿಕಾರಕ್ಕೆ ಅಂತ್ಯವಿದೆ,ಉತ್ತಮಾಧಿಕಾರದ ಮೌಲ್ಯಕ್ಕೆಅಂತ್ಯವಿಲ್ಲ. ಅದು ಶಾಶ್ವತ ಡಾ ತಾರಾ ಬಿ ಎನ್

ಡಾ ತಾರಾ ಬಿ ಎನ್ ಕವಿತೆ “ಅಧಿಕಾರ” Read Post »

ಅಂಕಣ ಸಂಗಾತಿ, ವೀಣಾ-ವಾಣಿ

“ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು”ವೀಣಾ ಹೇಮಂತ್‌ ಗೌಡ ಪಾಟೀಲ್

ಮಹಿಳಾ ಸಂಗಾತಿ ವೀಣಾ ಹೇಮಂತ್ ಗೌಡ ಪಾಟೀಲ್ ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು(ಶಾ ಬಾನು ಹಾಗೂ ತೀನ್ ತಲಾಕ್ ಮೊಕದ್ದಮೆ ) ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು(ಶಾ ಬಾನು ಹಾಗೂ ತೀನ್ ತಲಾಕ್ ಮೊಕದ್ದಮೆ ) ನನಗೆ ವಯಸ್ಸಾಗಿರಬಹುದು ಆದರೆ ನನ್ನ ಧ್ವನಿ ಉಡುಗಿಲ್ಲ…. ಎಂದು ಆಕೆ ಹೇಳಿದಾಗ ಆಕೆಯ ದುರ್ಬಲವಾದ ಕೈಗಳು ನಡುಗುತ್ತಿದ್ದರೂ ಧ್ವನಿಯಲ್ಲಿ ಹರಿತವಾದ ಪ್ರಖರತೆ ಇತ್ತು ಕಾರಣ… ಆಕೆಯ ಉದ್ದೇಶ ಅತ್ಯಂತ ಸ್ಥಿರವಾಗಿತ್ತು. ಇಂದೋರ್ ನ ಆ ಹೆಣ್ಣು ಮಗಳ ವಯಸ್ಸು 62 ವರ್ಷವಾಗಿದ್ದು ತನ್ನ ಬದುಕಿನ ಬಹು ಭಾಗವನ್ನು ಮನೆಯ ನಾಲ್ಕು ಗೋಡೆಗಳ ಒಳಗೆ ಆಕೆ ಕಳೆದಿದ್ದಳು. ಮದುವೆಯಾಗಿ ಹಲವಾರು ದಶಕಗಳ ನಂತರ ಆಕೆಯ ಪತಿ ಆಕೆಗೆ ವಿಚ್ಛೇದನ ನೀಡಿದ್ದಲ್ಲದೆ ಆಕೆಗೆ ಯಾವುದೇ ರೀತಿಯ ಸಹಾಯವನ್ನು ನೀಡಲು ನಿರಾಕರಿಸಿದನು. ಆಕೆಯ ಮನದ ಮೂಲೆಯಲ್ಲಿನ ಅಗೋಚರ ಭಾವವೊಂದು ಮಿಸುಕಿತ್ತು. ದಾಂಪತ್ಯದ ಹಲವಾರು ದಶಕಗಳನ್ನು ಕಳೆದ ಆಕೆ ಅತಿಯಾದ ತಿರಸ್ಕಾರದ ಭಾವದಿಂದ ನೊಂದು ತನ್ನ ಕಾಲ ಕೆಳಗಿನ ನೆಲವೇ ಕುಸಿದು ಹೋದಂತೆ ಭಾಸವಾಗಿ ಒದ್ದಾಡಿದಳು.  ತನ್ನ ಬದುಕಿನಲ್ಲಿ ಒಂದು ದಿನ ತಾನು ನ್ಯಾಯಾಲಯದ ಕಟ-ಕಟೆಯಲ್ಲಿ ನಿಲ್ಲಬಹುದು, ನ್ಯಾಯಾಧೀಶರ ಮುಂದೆ ಮೈಕ್ರೋಫೋನ್ ಗಳ ಮುಂದೆ ತನ್ನ ಅಹವಾಲನ್ನು ಮಂಡಿಸುತ್ತೇನೆ  ಎಂಬ ಯೋಚನೆಯನ್ನೇ ಆಕೆ ಮಾಡಿರಲಿಲ್ಲ.ತನ್ನ ಹೆಸರು ಮನೆಯ ನಾಲ್ಕು ಗೋಡೆಗಳ, ತಾನಿರುವ ಪರಿಸರದ ಆಚೆಗೆ ದೇಶದ ಮೂಲೆ ಮೂಲೆಯನ್ನು ತಲುಪಬಹುದು ಎಂದು ಆಕೆ ಖಂಡಿತವಾಗಿಯೂ ಭಾವಿಸಿರಲಿಲ್ಲ. ಆದರೆ ಹಸಿವಿಗೆ ಎಲ್ಲರನ್ನೂ, ಎಲ್ಲವನ್ನು ನಡುಗಿಸುವ ಶಕ್ತಿ ಇದೆ. ಬಡತನಕ್ಕೆ ಅದರದ್ದೇ ಆದ ಅಂತಃಶಕ್ತಿ ಇದೆ.ಆಕೆಯ ಬಳಿ ಹಣವಿರಲಿಲ್ಲ, ಭದ್ರತೆ ಇರಲಿಲ್ಲ ಹಾಗೂ ಒಬ್ಬಳೇ ದುಡಿದುಕೊಂಡು ತಿಂದು ಬದುಕಬಲ್ಲೆ ಎಂದು ಹೇಳಲು ಸಾಧ್ಯವಾಗುವ ದೈಹಿಕ ಶಕ್ತಿಯಂತೂ ಮೊದಲೇ ಇರಲಿಲ್ಲ.ಆದ್ದರಿಂದಲೇ ಆಕೆ ತನ್ನ ತಲೆಮಾರಿನ ಜನರು ಯೋಚಿಸಲು ಸಾಧ್ಯವಾಗದ ರೀತಿಯಲ್ಲಿ ಪ್ರತಿಕ್ರಿಯಿಸಿದಳು… ಆಕೆ ತನ್ನ ಹಕ್ಕಿಗಾಗಿ ಹೋರಾಡಿದಳು. ತನ್ನ ಕುಟುಂಬದ ನಿರ್ವಹಣೆಗಾಗಿ ಅದರಲ್ಲೂ ಮುಖ್ಯವಾಗಿ ತನ್ನ ಔಷಧಿಯ ಖರ್ಚಿಗಾಗಿ ಪ್ರತಿ ತಿಂಗಳು ತನಗೆ ಇಂತಿಷ್ಟು ಹಣವನ್ನು ದೊರಕಿಸಿಕೊಡಿ ಎಂದು ಆಕೆ ನ್ಯಾಯಾಲಯದ ಮೊರೆ ಹೋದಳು. ತನ್ನ ವೃದ್ದಾಪ್ಯದ ವಯಸ್ಸಿನಲ್ಲಿ ದುಡಿಯಲು ಸಾಧ್ಯವಿಲ್ಲದ ಕಾರಣ ಗೌರವಯುತವಾಗಿ ಬದುಕಲು ಅತ್ಯವಶ್ಯಕವಾದ ಆರ್ಥಿಕ ಅನುಕೂಲವನ್ನು ಮಾತ್ರ ಆಕೆ ಬಯಸಿದ್ದಳು.. ಆದರೆ ಆಕೆಯ ಈ ಬಯಕೆ ಇಡೀ ದೇಶದ ಸಮಾಜದ ಹೆಣ್ಣು ಮಕ್ಕಳ ಅಸ್ತಿತ್ವದ ಪ್ರಶ್ನೆಯಾಗಿ ಬದಲಾಯಿತು. ಆಕೆಯ ಕೌಟುಂಬಿಕ ನಿರ್ವಹಣೆಯ ಪ್ರಶ್ನೆ ಇಡೀ ಭಾರತ ದೇಶದ ರಾಷ್ಟ್ರೀಯ ವಿಷಯವಾಗಿ ಬದಲಾಯಿತು. ಆಕೆಯ ಕೇಸ್ ಸುಪ್ರೀಂ ಕೋರ್ಟ್ ನ ಮೆಟ್ಟಿಲನ್ನು ಏರಿತು. ಪ್ರತಿಯೊಂದು ಪತ್ರಿಕೆಯಲ್ಲಿಯೂ ಆಕೆಯ ಹೆಸರು ಹಾಗೂ ಕೇಸಿನ ವಿವರಗಳು ಪ್ರಕಟವಾದವು. ರಾಜಕೀಯ ನೇತಾರರು ಆಕೆಯ ಬದುಕು ತಮಗೆ ಸಂಬಂಧಿಸಿದ ವಿಷಯ ಎಂಬಂತೆ ಆಕೆಯ ಕುರಿತು ಮಾತನಾಡಿದರು. ಮಾಧ್ಯಮಗಳಲ್ಲಿ ಚರ್ಚೆಗಳು, ವಾಗ್ವಾದಗಳು ಕಾಳ್ಗಿಚ್ಚಿನಂತೆ ಹರಡಿದವು. ಇದೆಲ್ಲದರ ಹಿಂದೆ ಇದ್ದ ವ್ಯಕ್ತಿ ಕೇವಲ ತನಗೆ ಸಾಮಾಜಿಕ ನ್ಯಾಯವನ್ನು ದೊರಕಿಸಿಕೊಡಲು ಕೇಳಿಕೊಂಡಿದ್ದಳುಶಾ ಭಾನು ಎಂಬ ಆಕೆ ಅತ್ಯಂತ ಸ್ಥಿತಪ್ರಜ್ಞತೆಯಿಂದ ತನ್ನ ಸುತ್ತ ಹರಡುತ್ತಿದ್ದ ಈ ಎಲ್ಲ ವಿದ್ಯಮಾನಗಳನ್ನು ಗಮನಿಸುತ್ತಿದ್ದಳು… ದಿಗ್ಬ್ರಮೆಗೊಂಡ, ದಣಿದ ಮನಸ್ಥಿತಿಯಲ್ಲೂ ಕೂಡ ಆಕೆ ಹಿಂದೇಟು ಹಾಕಲಿಲ್ಲ. ಆಕೆ ತನ್ನ ಮನೆಯ ಕಿಟಕಿಯಲ್ಲಿ ಕುಳಿತುಕೊಂಡು ಪಕ್ಕದಲ್ಲಿಯೇ ಹರಡಿರುವ ನ್ಯಾಯಾಲಯದ ಕಾಗದ ಪತ್ರಗಳನ್ನು ಆಗಾಗ ನಿರುಕಿಸುತ್ತಿದ್ದ ಆಕೆ ತನಗೆ ತಾನೇ ಹೇಳಿಕೊಳ್ಳುತ್ತಿದ್ದುದು ಕೇವಲ ಒಂದೇ ಒಂದು ಮಾತು ಈಗ ನಾನು ಮಾತನಾಡದಿದ್ದರೆ, ನನ್ನಂತಹ ಹೆಣ್ಣು ಮಕ್ಕಳ ಪರವಾಗಿ ಮತ್ತಿನ್ನಾರು ಮಾತನಾಡಲು ಸಾಧ್ಯ ಎಂದು.  ಹಲವಾರು ವರ್ಷಗಳ ಕಾಲ ವಾದ ವಿವಾದಗಳು ನಡೆದು ಅಂತಿಮವಾಗಿ ಆಕೆಯ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ಬಂತು. ವಿಚ್ಛೇದನದ ನಂತರವೂ ಕೂಡ ಆಕೆಯ ಪೋಷಣೆಯ ಜವಾಬ್ದಾರಿಯನ್ನು ಆಕೆಯ ಪತಿ ತೆಗೆದುಕೊಳ್ಳಬೇಕು ಎಂಬ ಸುಪ್ರೀಂ ಕೋರ್ಟ್ ನ ನಿರ್ಣಯವನ್ನು ಅತ್ಯಂತ ಸ್ತಬ್ದವಾಗಿ ಇಡೀ ದೇಶದ ಜನರು ಆಲಿಸಿದರು. ಓರ್ವ ವೃದ್ಧ, ಅಸಹಾಯಕ ಮುಸ್ಲಿಂ ಹೆಣ್ಣು ಮಗಳು  ಹೆಣ್ಣು ಮಕ್ಕಳ ಸಂಭಾಷಣೆಯ, ಮಾತುಕತೆಯ ದಿಕ್ಕನ್ನೇ ಬದಲಾಯಿಸಿ ಹೆಣ್ಣು ಮಕ್ಕಳ ಹಕ್ಕುಗಳ ಹೋರಾಟದ ರಕ್ಷಕಿಯಾಗಿ ನಿಂದಳು. ತನ್ನ ವೈಯುಕ್ತಿಕ ಆರ್ಥಿಕ ನಿರ್ವಹಣೆಯ ಕುರಿತಾಗಿ ಆಕೆ ಹಚ್ಚಿದ ಪುಟ್ಟದೊಂದು ಕಿಡಿ ಬೆಂಕಿಯಾಗಿ ಪ್ರಜ್ವಲಿಸಿತ್ತು. ಬಹಳಷ್ಟು ಜನ ಇದನ್ನು ವಿರೋಧಿಸಿದರು. ಧಾರ್ಮಿಕ ಮುಖಂಡರು ಒಂದೆಡೆ ಸೇರಿ ಭಾಷಣಗಳನ್ನು ಮಾಡಿದರು. ಸರ್ಕಾರವು ಕೂಡ ಒತ್ತಡದಲ್ಲಿ ಸಿಲುಕಿತು ಆದರೆ ಇನ್ನೇನು ಗೆಲುವು ಆಕೆಯ ಕೈಗೆ ದೊರಕಿತು ಎಂಬಷ್ಟರಲ್ಲಿ ಅದು ಆಕೆಯ ಕೈಯಿಂದ ನುಣುಚಿಕೊಳ್ಳಲಾರಂಭಿಸಿತು  ತನ್ನ ಮನೆಯ ಪುಟ್ಟ ಕೋಣೆಯಲ್ಲಿ ಶಾ ಬಾನು ಅತ್ಯಂತ ಮೌನವಾಗಿ ಕುಳಿತಿದ್ದ ಸಮಯದಲ್ಲಿ ಇಡೀ ಜಗತ್ತು ಆಕೆಯ ಬದುಕಿನ ಕುರಿತು ಚರ್ಚೆಯಲ್ಲಿ ತೊಡಗಿತು. ಯಾರೊಬ್ಬರೂ ಆಕೆಯ ಕಣ್ಣಲ್ಲಿ ಕಣ್ಣಿಟ್ಟು ಆಕೆಯ ನೋವು ಏನಿರಬಹುದು ಎಂಬುದನ್ನು ಅರಿಯುವ ಪ್ರಯತ್ನ ಮಾಡಲಿಲ್ಲ. ತಾನು ಒಬ್ಬಂಟಿ ಮೋಸ ಹೋದ ಹಾಗೂ ಭಯ ಪಟ್ಟ ಏಕೈಕ ಹೆಣ್ಣುಮಗಳು ಎಂಬ ಭಾವ ಮಾತ್ರ ಆಕೆಯನ್ನು ಸತಾಯಿಸುತ್ತಿತ್ತು…. ಇದೇ ಸಮಯದಲ್ಲಿ ಚಮತ್ಕಾರದ ರೀತಿಯಲ್ಲಿ ಇಡೀ ಭಾರತ ದೇಶದಾದ್ಯಂತ ಹಿಂದೂ ಮಹಿಳೆಯರ ಗುಂಪುಗಳು ಆಕೆಯನ್ನು ಬೆಂಬಲಿಸಲು ಆರಂಭಿಸಿದವು.  ಶಿಕ್ಷಕರು, ಸಾಮಾಜಿಕ ಕಾರ್ಯಕರ್ತರು, ನ್ಯಾಯವಾದಿಗಳು, ಕಾಲೇಜ್ ವಿದ್ಯಾರ್ಥಿನಿಯರು ಹೀಗೆ ಆಕೆ ಎಂದೂ ಭೇಟಿಯಾಗದ ನೂರಾರು ಸಾವಿರಾರು ಸಂಖ್ಯೆಯ ಮಹಿಳೆಯರು ಆಕೆಯ ಬೆಂಬಲಕ್ಕೆ ನಿಂತರು. ಬೇರೊಂದು ಧರ್ಮದ, ಬೇರೊಂದು ಜಗತ್ತಿನ ಹೆಣ್ಣು ಮಕ್ಕಳು ಆಕೆಯ ಚಿತ್ರವನ್ನು ಅಂಟಿಸಿದ ಭಿತ್ತಿ ಪತ್ರಗಳನ್ನು ಹಿಡಿದು ಆಕೆಯ ಪರವಾಗಿ ಘೋಷಣೆ ಕೂಗಿದರು. ಕೋರ್ಟ್ ನಲ್ಲಿ ಪಿಟಿಷನ್ ಕರೆಯಲಾಯಿತು ಹಾಗೂ ಸಾಮೂಹಿಕ ನಡಿಗೆಯ ಮೂಲಕ ತಾಲೂಕಿನ ತಹಸೀಲ್ದಾರ್ ಕಚೇರಿಗಳಲ್ಲಿ ಆಕೆಯ ಪರವಾಗಿ ನ್ಯಾಯ ದಾನ ಮಾಡಲು ಕೇಳಿಕೊಳ್ಳಲಾಯಿತು. ಆಕೆಯ ಹೆಸರಿನಲ್ಲಿ ಜಾತಾಗಳನ್ನು ಹಮ್ಮಿಕೊಳ್ಳಲಾಯಿತು. ಆಕೆಯ ಪರವಾಗಿ ನ್ಯಾಯದ ಹೋರಾಟ ನಡೆಯಿತು. ಮೊಟ್ಟ ಮೊದಲ ಬಾರಿ ತಿಂಗಳುಗಟ್ಟಲೆ ಏಕಾಂತ ವಾಸದ ನಂತರ ಕೂಡ ಶಾ ಬಾನು ತಾನು ಒಬ್ಬಂಟಿ ಎಂಬ ಭಾವವನ್ನು ತೊರೆದು ಹಾಕಲು ಜನರ ಈ ಸಂಘಟಿತ ಪ್ರಯತ್ನ ಕಾರಣವಾಯಿತು.  ಅದೊಮ್ಮೆ ತನ್ನನ್ನು ಭೇಟಿಯಾಗಲು ಬಂದ ವ್ಯಕ್ತಿಗೆ ಆಕೆ ಹೇಳಿದ್ದು ಹೀಗೆ ನಾನು ನನ್ನ ವೈಯುಕ್ತಿಕ ನ್ಯಾಯಕ್ಕಾಗಿ ಹೋರಾಡಲು ಕಾರಣ ನನಗೆ ಬೇರೆ ಯಾವುದೇ ಆಯ್ಕೆಗಳು ಇರಲಿಲ್ಲ… ಯಾವೊಬ್ಬ ವ್ಯಕ್ತಿಯು ಕೂಡ ಹೋರಾಟದಲ್ಲಿ ಹಿಂದೆ ಉಳಿಯಬಾರದು ಎಂಬ ಕಾರಣಕ್ಕಾಗಿ ಅವರೆಲ್ಲರೂ ಮಹಿಳೆಯಾದರೂ ಕೂಡ ನನ್ನನ್ನು ಬೆಂಬಲಿಸಿದರು…. ಉಳಿಯುವಿಕೆಗಾಗಿನ ನನ್ನ ಹೋರಾಟಕ್ಕಿಂತ, ನನ್ನ ಉಳಿಯುವಿಕೆಗಾಗಿ ಅವರು ಮಾಡಿದ ಹೋರಾಟ ದೊಡ್ಡದು ಎಂದು ಆಕೆ ಹೇಳಿದಳು.  ಧರ್ಮ, ಜಾತಿ, ರಾಜಕೀಯಗಳಿಂದ ವಿಭಾಗಿಸಲ್ಪಟ್ಟ ಭಾರತ ದೇಶದಲ್ಲಿ ಆಕೆಗೆ ಪರಿಚಯವೇ ಇಲ್ಲದ ಅಪರಿಚಿತ ಜನರ ಗುಂಪು ಮಾನವೀಯ ಪ್ರಜ್ಞೆಯಿಂದಆಕೆಯ ರಕ್ಷಣೆಗಾಗಿ ಮಂಚೂಣಿಯಲ್ಲಿ ನಿಂತದ್ದು ಆಕೆಗೆ ಹೆಮ್ಮೆಯ ವಿಷಯವಾಗಿ ತೋರಿತು. ಅವರಾರೂ ಆಕೆಯ ರಕ್ತ ಹಂಚಿಕೊಂಡು ಹುಟ್ಟಿದ ಒಡಹುಟ್ಟಿದವರಲ್ಲ, ಆಕೆಯ ಭಾಷೆಯನ್ನು ಅರಿಯದವರು ಆಕೆಯ ಸಂಸ್ಕೃತಿಯ ಗಂಧ ದಾಳಿ ತಿಳಿಯದವರು ಹಾಗೂ ಆಕೆಯ ಪ್ರಾರ್ಥನೆಯ ಅರಿವನ್ನು ಹೊಂದಿರದ ಆದರೆ ಆಕೆಯ ಮೂಕವೇದನೆಯನ್ನು ಅತ್ಯಂತ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಲ್ಲ ಶಕ್ತಿ, ಸಾಮರ್ಥ್ಯಗಳು ಅವರಲ್ಲಿತ್ತು. ಕೆಲವೊಮ್ಮೆ ಯಾವುದೇ ಕಾನೂನಿಗೆ ಸಾಧ್ಯವಾಗದ ಅತ್ಯಂತ ಬಲವಾದ ಬಂಧವನ್ನು ಮಾನವೀಯ ಬಂಧನ ಉಂಟುಮಾಡುತ್ತದೆ ಎಂಬುದಕ್ಕೆ ಇದುವೇ ಸಾಕ್ಷಿ. ತಾನಂದುಕೊಂಡ ರೀತಿಯಲ್ಲಿ ಶಾ ಬಾನು ಗೆಲ್ಲಲಿಲ್ಲ ನಿಜ ಕಠಿಣ ಕಾನೂನುಗಳು ಬದಲಾಗುವುದಿಲ್ಲ. ಆಕೆಯ ಸಾಮಾಜಿಕ ಗೆಲುವು ಮುಂದಿನ ದಿನಗಳಲ್ಲಿ ಮತ್ತೆ ಹಿಂತೆಗೆದುಕೊಳ್ಳಲಾಯಿತು… ಆದರೆ ಶಾಶ್ವತವಾಗಿ ಉಳಿದದ್ದು ಆಕೆ ಸೋಲದಂತೆ ಆಕೆಯ ವಾದವನ್ನು ಎತ್ತಿ ಹಿಡಿಯಲಾಗಿದ್ದು. ಇಂದೋರ್ ನಂತಹ ಪುಟ್ಟ ಶಹರದಲ್ಲಿ ವಾಸಿಸುತ್ತಿರುವ  ಓರ್ವ ವೃದ್ಧ ಹೆಣ್ಣು ಮಗಳು ತನ್ನ ಅಚಲ ವಿಶ್ವಾಸದಿಂದ ಇಡೀ ದೇಶದ ಕಾನೂನನ್ನು ಪ್ರಶ್ನಿಸಬಲ್ಲಳು ಎಂಬ ಸಂದೇಶ ಇಡೀ ಜಗತ್ತಿಗೆ ಸಾರಲ್ಪಟ್ಟಿತು. ಅದಷ್ಟೇ ಏಕೆ ? ಹುಟ್ಟಿ ಬೆಳೆದ ಆಕೆಯದ್ದೇ ಧರ್ಮದ ಸಮಾಜವು ಆಕೆಯನ್ನು ಮೌನವಾಗಿರಿಸಲು ಪ್ರಯತ್ನಿಸಿ ಆಕೆಯ ಮೇಲೆ ಒತ್ತಡವನ್ನು ಹೇರಿದರೂ ಕೂಡ ಇಡೀ ಜಗತ್ತಿನ ಮಹಿಳೆಯರು ಆಕೆಯ ಬೆಂಬಲಕ್ಕೆ ನಿಂತದ್ದು ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕೆ ಕಾರಣವಾಯಿತು.  ಹಲವಾರು ವರ್ಷಗಳ ನಂತರ ಇಂದಿಗೂ ಕೂಡ ಆಕೆಯ ಕುರಿತು ತರಗತಿಯ ಕೋಣೆಗಳಲ್ಲಿ ನ್ಯಾಯಾಲಯದ ಚರ್ಚೆಗಳಲ್ಲಿ ಮಹಿಳೆಯರ ಹಕ್ಕುಗಳ ಕುರಿತಾದ ಸಭೆಗಳಲ್ಲಿ ಮಾತನಾಡಲಾಗುತ್ತದೆ.. ಇದಕ್ಕೆ ಕಾರಣ ಆಕೆ ಮಹಿಳೆಯರ ಹಕ್ಕುಗಳ ಕುರಿತಾಗಿ ಮಾತನಾಡಿದ್ದಲ್ಲ ಅದೆಷ್ಟೇ ತೊಂದರೆಯಾದರೂ ಕೂಡ ಒಬ್ಬಂಟಿಯಾಗಿ ನಿಂತು ಆಕೆ ಈ ಸಮಾಜವನ್ನು ಎದುರಿಸಿದ್ದು.  ರಾಜಕೀಯದ ಗಂಧ ಕೂಡ ಸೋಕದ ಇಂದೋರ್ ನ ಪುಟ್ಟ ಮನೆಯಲ್ಲಿ ಕುಳಿತಿದ್ದ ಆ ವೃದ್ಧ ಹೆಣ್ಣು ಮಗಳು ತನ್ನ ಎರಡು ಕೈಗಳನ್ನು ಜೋಡಿಸಿ ಅತ್ಯಂತ ಸೌಮ್ಯವಾಗಿ ಹೇಳಿದ್ದಳು “ನ್ಯಾಯಾಲಯದಲ್ಲಿ ನಾನು ಸಂಪೂರ್ಣವಾಗಿ ಗೆಲುವನ್ನು ಸಾಧಿಸಿಲ್ಲ ನಿಜ ಆದರೆ ನಾನು ಸೋತಿಲ್ಲ ಕೂಡ ” ಎಂದು. ನೋಡಿದಿರಾ ಸ್ನೇಹಿತರೆ, ಪ್ರತಿಯೊಂದು ನದಿಯು ತನ್ನ ಉಗಮದಲ್ಲಿ ಪುಟ್ಟ ಝರಿಯಾಗಿ ಇರುತ್ತದೆ. ಅಂತೆಯೇ ಪ್ರತಿ ಸೂರ್ಯೋದಯವೂ ಕೂಡ ಚಿಕ್ಕದೊಂದು ಕಿರಣದ ಹರಡುವಿಕೆಯಿಂದ ಆರಂಭವಾಗುತ್ತದೆ ಅಂತೆಯೇ ಪ್ರತಿಯೊಂದು ದೊಡ್ಡ ಹೋರಾಟಕ್ಕೆ ಚಿಕ್ಕದೊಂದು ನೋವಿನ, ಅಸಮಾನತೆಯ ಕುರಿತಾದ ಅಸಹಾಯಕ ಅತೃಪ್ತಿಯ ಕಿಡಿ ಕಾರಣವಾಗುತ್ತದೆ. ಇಂದಿಗೂ ಕೂಡ ನಮ್ಮ ಸಮಾಜದಲ್ಲಿ ಶಾ ಬಾನುವಿನಂತಹ ನೂರಾರು ಸಾವಿರಾರು ಜನರನ್ನು ನಾವು ಕಾಣುತ್ತಿದ್ದೇವೆ. ಒಂದಷ್ಟು ಪರಿಹಾರದ ಹಣವನ್ನು ನೀಡಿ ಕೈ ತೊಳೆಯುವ ಇಲ್ಲವೇ ಕೇಸನ್ನು ಮುಚ್ಚಿ ಹಾಕುವ ಮುನ್ನ ಸಾಮಾಜಿಕ ನ್ಯಾಯವನ್ನು ನಿರೀಕ್ಷಿಸುವ ಪ್ರತಿಯೊಬ್ಬರಿಗೂ ಅವರವರ ಧಾರ್ಮಿಕ, ಸಾಮಾಜಿಕ ನ್ಯಾಯಗಳು ದೊರೆಯಲೇಬೇಕು ಎಂಬ ಆಶಯದೊಂದಿಗೆ ವೀಣಾ ಹೇಮಂತ್ ಗೌಡ ಪಾಟೀಲ್

“ಒಂಟಿ ಧ್ವನಿಗೆ… ಜಂಟಿಯಾದ ನೂರಾರು ಧ್ವನಿಗಳು”ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಇತರೆ

“ವ್ಯಾಪಾರದ ನಡುವೆ ‘ವಕೀಲʼರಾಗಿ ಉದಯಿಸಿದ ಕುಶಾಲನಗರದ ಪರಮೇಶ್”‌ ಐಗೂರು ಮೋಹನ್ ದಾಸ್ ಜಿ

ವ್ಯಕ್ತಿ ಸಂಗಾತಿ ಐಗೂರು ಮೋಹನ್ ದಾಸ್ ಜಿ “ವ್ಯಾಪಾರದ ನಡುವೆ ‘ವಕೀಲʼರಾಗಿ ಉದಯಿಸಿದ ಕುಶಾಲನಗರದ ಪರಮೇಶ್”‌           ಒಂದನೊಂದು ಕಾಲದಲ್ಲಿ ಪಿ.ಯು.ಸಿ.ಶಿಕ್ಷಣಕ್ಕೆ ಮಂಗಳ ಹಾಡಿ, ಜೀವನಕ್ಕೆ ಭದ್ರವಾದ ಬುನಾದಿ ಹಾಕಲು ಹಲವು ‘ಉದ್ಯೋಗ ‘ ಎಂದು ಎಲ್ಲಾಡೆ ಓಡಾಡಿದ್ದರೂ ಹೆಚ್ಚಿನ ಫಲ ಮಾತ್ರ ದೊರೆಯಲಿಲ್ಲ….! ದುಡಿದು ಸಂಪಾದಿಸುತ್ತಿದ್ದ ಕಾಸು ಹೊಟ್ಟೆ – ಬಟ್ಟೆ – ಇನ್ನಿತರ ಖಚು೯ಗಳಿಗೆ ಖಾಲಿಯಾಗಿಬಿಡುತ್ತಿತ್ತು…!ಒಂದು ಮಧುರವಾದ ಕನಸು ಕಾಣುತ್ತಾ ‘ನಿದ್ರೆ’ ಮಾಡಲು ಸಹ ಸಾಧ್ಯವಾಗುತ್ತಿರಲಿಲ್ಲ….! ಆದರೆ ಜೀವನದಲ್ಲಿ ಏನಾದ್ದರೂ ಒಂದು ‘ಸಾಧನೆ’ ಮಾಡುವಂತಹ ಗುರಿ ಮಾತ್ರ ಇತ್ತು…!    ಕಾಲಚಕ್ರ ತಿರುಗ ತೊಡಗಿತ್ತು…. ನಂತರ ಒಂದು ವಿದೇಶ ಪ್ರಯಾಣ…. ಮದುವೆ…. ಮಕ್ಕಳು ಎಂದು ಹೇಳುತ್ತಾ, 40ರವಯಸ್ಸಿನ ಗಡಿ ತಲುಪಿದೇ ತಿಳಿಯಲಿಲ್ಲ…! ಬದುಕು ಸಾಗಿಸಲು ಒಂದು ಮಾರುತಿ ವ್ಯಾನ್ ನಲ್ಲಿ, ಬ್ರೆಡ್ – ಬನ್-ಕೇಕ್ – ಮಸಾಲೆ ಕಡಲೆಯಂತಹ ‘ ಬೇಕರಿ ‘ತಿಂಡಿ – ತಿನಿಸುಗಳನ್ನು ತುಂಬಿಸಿಕೊಂಡು, ವಿವಿಧ ಗ್ರಾಮಗಳ ಹೋಟೆಲ್ – ಅಂಗಡಿಗಳಿಗೆ ಈ ತಿಂಡಿ-ತಿನಿಸುಗಳನ್ನು ತಲುಪಿಸಿ, ಒರ್ವ ‘ ವ್ಯಾಪಾರಿ’ ಎಂಬ ಹಣೆಪಟ್ಟಿ ದೊರೆಯಿತ್ತು…! ಜೊತೆಗೆ ವ್ಯಾಪಾರವು ಬಹಳ ಚೆನ್ನಾಗಿ ನಡೆಯುತ್ತಿದ್ದ ಕಾರಣ, ಈ ಹಿಂದೆ ಕಂಡ ಕನಸುಗಳು ಮೆಲ್ಲನೆನನಸಾಗ ತೊಡಗಿತ್ತು….!!       ಈ ಕನಸುಗಾರ…. ಸಾಧನೆಗಾರ….. ಕೊಡಗು ಜಿಲ್ಲೆಯಕುಶಾಲನಗರದ ನ್ಯೂ ಹೌಸಿಂಗ್ ಬೋಡ್೯ ನಿವಾಸಿ   ಪರಮೇಶ್..!ಹೀಗೆ ಈ ವ್ಯಾಪಾರವು ಯಾವುದೇ ವಿಘ್ನ ಇಲ್ಲಾದೇ ಸಾಗುತ್ತಿದ್ದಾಗ, ಪ್ರಪಂಚವನ್ನು ನಡುಗಿಸಿದ ‘ಕೊರೋನಾ’ ಮಾರಿಯಿಂದ ಇವರ ವ್ಯಾಪಾರಕ್ಕೆ ತುಸು ಇಳಿಕೆ ಕಂಡು ಬಂತು.. ಯಾವುದೇ ಕಡೆ ಓಡಾಡುವಂತೆ ಇಲ್ಲ….! ನಾಲ್ಕು ಗೋಡೆಗಳ ನಡುವೆ ‘ಹಗ್ಗ ‘ಇಲ್ಲಾದೇ ಎಲ್ಲಾರ ರೀತಿ ಇವರನ್ನು ಸಹ ಕೊರೋನಾ ಮಾರಿ ಕಟ್ಟಿಹಾಕಿತ್ತು…!       ಆ ಸಮಯದಲ್ಲಿ ಈ ಹಿಂದೆ ಇವರು ಕನಸು ಕಂಡಿದ್ದ ‘ ಪದವಿ’ ಯ ಕನಸು ಪುನಃ ಮನಸ್ಸಿನಲ್ಲಿ ಮೊಳಕೆ ಹೊಡೆಯಿತ್ತು…! ಈಗ ಪುನಃ ಓದು ಮುಂದುವರಿಸಿ ಹೆಸರು ನೊಂದಿಗೆ ಕೇವಲ ‘ಪದವಿ’ ಸೇರಿಸಿ ಪ್ರಯೋಜನ ಇಲ್ಲ…. ಈ ಪದವಿಯಿಂದ ಸಮಾಜದಲ್ಲಿ ಹತ್ತು ಮಂದಿಗೆ ಪ್ರಯೋಜನವಾಗ ಬೇಕೆಂದು, ಅವರ ಮನ ನುಡಿಯಿತ್ತು…! ಆಗ ಅವರನ್ನು ಕೈ ಬೀಸಿ ಕರೆದದ್ದು ಲಾ…. ಎಲ್.. ಎಲ್.ಬಿ.ಶಿಕ್ಷಣ…!ಇದು ಇವರಿಗೆ ಸುಲುಭದ ಮಾತುವಾಗಿರಲಿಲ್ಲ !       ಈ ಹಿಂದೆ ಪಿ.ಯು.ಸಿ.ಶಿಕ್ಷಣವನ್ನು ಮುಗಿಸಿ ಸುಮಾರು 24 ವಷ೯ಗಳೇ ಕಳೆದು ಹೋಗಿದ್ದ ಕಾರಣ, ಓದು -ಬರಹ ಸುಲುಭದ ವಿಚಾರವಾಗಿರಲಿಲ್ಲ…! ಆದರೂ ಧೈರ್ಯ ಮಾಡಿ ಮೈಸೂರಿನ ‘ಕನಾ೯ಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ, ಕಾನೂನು ಕಲಿಕೆ ವಿದ್ಯಾಥಿ೯ಯಾಗಿ ದಾಖಲುಯಾಗಿಬಿಟ್ಟರು….!ಐದು ವಷ೯ಗಳ ಓದು…! ಜೊತೆಗೆ ವ್ಯಾಪಾರವು ಎಂದಿನಂತೆ ಸಾಗಬೇಕು,..! ಮನದಲ್ಲಿ ಒಂದು ಧೃಡವಾದ ಗುರಿ ಮತ್ತು ಕನಸು ಇದ್ದ ಕಾರಣ, ನಿತ್ಯ ಕುಶಾಲನಗರದಿಂದ ಮೈಸೂರಿಗೆ ಪ್ರಯಾಣ ಬೆಳೆಸುತ್ತಾ, ಪುನಃ ಅವರ ಬಾಳಿನಲ್ಲಿ ಮತ್ತೊಂದು ‘ಕಾಲೇಜ್ ಲೈಫ್’ಶುರುವಾಯಿತ್ತು…!        ನಿತ್ಯ ಬೆಳಿಗ್ಗೆ ಐದು ಗಂಟೆಗೆ ಕುಶಾಲನಗರದಿಂದ ಬಸ್ ಏರಿ, ಮೈಸೂರುಗೆ ತಲುಪಿ, ಅಲ್ಲಿಂದ ಹತ್ತು ಕಿ.ಮೀ ದೂರದಲ್ಲಿರುವ ಬನ್ನೂರು ರಸ್ತೆಯಲ್ಲಿರುವ ಕಾಲೇಜ್ ಗೆಹೋಗಿ ಜಾಣ ವಿದ್ಯಾಥಿ೯ಯಾಗಿ ಓದು ಪ್ರಾರಂಭಿಸಿಯೇ ಬಿಟ್ಟರು…! ಕೈಯಲ್ಲಿರುವ ದೊಡ್ಡ-ದೊಡ್ಡ ಗಾತ್ರದ ಪುಸ್ತಕಗಳನ್ನು ನೋಡುವಾಗ ಮನಸ್ಸಿನ ಒಂದು ಮೂಲೆಯಲ್ಲಿ ಭಯವಾಗುತ್ತಿತ್ತು…! ಆದರೂ ಮನಸ್ಸು ಗಟ್ಟಿಯಾಗಿದ್ದ ಕಾರಣ, ಓದು ಸುಗಮವಾಗಿ ಸಾಗುತ್ತಿತ್ತು…!ಕಾಲೇಜ್ ಓದು ಮುಗಿಸಿ, ಮನೆಗೆ ತಲುಪಿ ನಂತರ ಎಂದಿನಂತೆ ‘ವ್ಯಾಪಾರ’ದ ಚಟುವಟಿಕೆಗಳು ಪ್ರಾರಂಭವಾಗುತ್ತಿತ್ತು!ಈ ಕೆಲಸ ಮುಗಿಯುವ ವೇಳೆಗೆ ರಾತ್ರಿಹನ್ನೊಂದು -ಹನ್ನೇರಡು ಗಂಟೆಯಾಗುತ್ತಿತ್ತು….! ನಂತರ ಒಂದು ಸಣ್ಣ. ‘ಕೋಳಿ ನಿದ್ರೆ’..! ಮರುದಿನ ಎಂದಿನಂತೆ ಕಾಲೇಜ್ – ವ್ಯಾಪಾರ ಎಂದು ಬದುಕಿನ ಬಂಡಿ ಸಾಗುತ್ತಿತ್ತು.!!    ಮನಸ್ಸಿನಿಂದ ಸೋಮಾರಿತನವನ್ನು ಓಡಿಸಿ, ಮನಸ್ಸುನಲ್ಲಿಗುರಿ ಮತ್ತು ಕನಸುಗೆ ಭದ್ರವಾದ ಸ್ಥಾನ ನೀಡಿದ್ದ ಫಲವಾಗಿ ,ಐದು ವಷ೯ದ ಕಾನೂನು ಪದವಿ ಪರೀಕ್ಷೆ ಬರೆದು ಮುಗಿಸಿ ಫಲಿತಾಂಶ ಹೊರಬಂದಾಗ, ಈ ವ್ಯಾಪಾರಿ ಉತ್ತಮ ಅಂಕದೊಂದಿಗೆ ವಕೀಲರು ಯಾಗಿ, ಅರಳಿ ಬಿಟ್ಟರು…! ಕನಸು ನನಸಾಯಿತ್ತು….! ಪರಿಶ್ರಮಕ್ಕೆ ದೇವರು ತಕ್ಕ ಪ್ರತಿಫಲವನ್ನು ನೀಡಿತ್ತು..!ಈಗ ವ್ಯಾಪಾರಿ ಪರಮೇಶ್,ವಕೀಲ.. ಲಾಯರ್ ಪರಮೇಶ್….!ಹೆಸರು ಜೊತೆ ಪದವಿ..!      ಈಗ ಪರಮೇಶ್ ನವರ ಕೈಯಲ್ಲಿ ಎರಡು ‘ತಕ್ಕಡಿ’ಗಳು ಇದೆ..!ಒಂದು ವ್ಯಾಪಾರದ ಲಾಭ-ನಷ್ಟಗಳ ಲೆಕ್ಕಚಾರದ ತಕ್ಕಡಿ…! ಮತ್ತೊಂದು ಅನ್ಯಾಯ-ನ್ಯಾಯಗಳನ್ನು ತೂಕ ಮಾಡಿ, ನೊಂದ ಮನಸ್ಸುಗಳಿಗೆ ನ್ಯಾಯ ಒದಗಿಸುವ ನ್ಯಾಯದ ತಕ್ಕಡಿ…!      ಈ ಶುಭ ವೇಳೆಯಲ್ಲಿ ಎರಡು ತಕ್ಕಡಿಗಳ ಪೈಕಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಪರಮೇಶ್ ನವರಿಗೆ ಹೇಳಿದ್ದರೇ, ಅವರಿಗೆ ಬಲು ಕಷ್ಟವಾಗುತ್ತದೆ…! ಏಕೆಂದರೆ ವ್ಯಾಪಾರದ ತಕ್ಕಡಿ ಅವರನ್ನು ಕಷ್ಟ ಕಾಲದ ದಿನಗಳಲ್ಲಿ ಕೈ ಹಿಡಿದು ಮೇಲೆ ಕ್ಕೆ ಎತ್ತಿ, ಈ ಸಮಾಜದಲ್ಲಿ ಒಂದು ಬೆಲೆ – ಗೌರವದಿಂದ ಬಾಳುವಂತಹ ರೀತಿಯಲ್ಲಿ ಕೆತ್ತನೆ ಮಾಡಿದ್ದು…!ಈಗ ಕೈಯಲ್ಲಿ ಇರುವ ನ್ಯಾಯದ ತಕ್ಕಡಿ ಸುಮ್ಮನೆ ‘ ಟೈಂ ಪಾಸ್’ ಅಥವಾ ಅದೃಷ್ಟ ಬಲದಿಂದ ದೊರೆತದ್ದು ಅಲ್ಲ…..!ಇದಕ್ಕಾಗಿ ಐದು ವಷ೯ಗಳ ಕಾಲ ಸರ್ವ ಮೋಜು- ನಿದ್ರೆ ಹಾಳು ಮಾಡಿಕೊಂಡು, ಓಡಾಡಿ ಓದಿದ ಫಲವಾಗಿ ಮಾತ್ರ ಈ‘ಕರಿಕೋಟು’ ಧರಿಸುವಂತಹ ಸೌಭಾಗ್ಯ ಸಿಕ್ಕಿದ್ದು….!    ಈಗ ಪರಮೇಶ್ ನವರು ಪತ್ನಿ ಸುಮಿ ಮತ್ತು ಮಕ್ಕಳಾದ ಅಭಯ್ -ಜಿನಿಯೊಂದಿಗೆ ಕುಶಾಲನಗರದಲ್ಲಿ ಬದುಕನ ಬಂಡಿ ಸಾಗಿಸುತ್ತಿದ್ದಾರೆ….!ಕರಿಕೋಟು ಧರಿಸಿ ಕೋರ್ಟ್ ಗೆಹೋಗುವ ವೇಳೆ, ಪ್ರೀತಿಯಿಂದ ಪತ್ನಿಯಿಂದ ಒಂದು ನೋಟ ನೋಡಿ ಮುಂದಕ್ಕೆ ಸಾಗುತ್ತಾರೆ..!ಏಕೆಂದರೆ ಇವರ ಈ ಗೆಲುವಿನ ಹಿಂದೆ ಪತ್ನಿಯ ಪರಿಶ್ರಮವು ಬಹಳ ಇದೆ ಎಂದು ಹೇಳಲು ಪರಮೇಶ್ ಮರೆಯುವುದಿಲ್ಲ…!   ಪರಮೇಶ್ ನವರ ಈ ಸಾಧನೆಯ ಕಥೆ ಕೇಳಿದಾಗ, ನಿಮ್ಮ ಯಾವುದಾದರೂ ಬಾಡಿ ಹೋಗಿರುವ ಕನಸುಗಳಿಗೆ ಜೀವ ತುಂಬಲು ಮತ್ತು ಪರಮೇಶ್ ನವರಿಗೆ ಒಂದು ಅಭಿನಂದನೆ ತಿಳಿಸಲು 8296521805 ನಂಬರಿಗೆ ಒಂದು ಕರೆ ಮಾಡಿ..! ಐಗೂರು ಮೋಹನ್ ದಾಸ್ ಜಿ

“ವ್ಯಾಪಾರದ ನಡುವೆ ‘ವಕೀಲʼರಾಗಿ ಉದಯಿಸಿದ ಕುಶಾಲನಗರದ ಪರಮೇಶ್”‌ ಐಗೂರು ಮೋಹನ್ ದಾಸ್ ಜಿ Read Post »

ಇತರೆ

“ನಿಶ್ಶಬ್ದರತ್ನಾಕರ” ತೆಲುಗು ಕವಿತೆ- ಮೂಲ: ಪನ್ಯಾಲ ಜಗನ್ನಾಥದಾಸ್ ಕನ್ನಡಕ್ಕೆ: ಕೊಡೀಹಳ್ಳಿ ಮುರಳೀ ಮೋಹನ್

ಅನುವಾದ ಸಂಗಾತಿ “ನಿಶ್ಶಬ್ದರತ್ನಾಕರ” ತೆಲುಗು ಕವಿತೆ- ಮೂಲ: ಪನ್ಯಾಲ ಜಗನ್ನಾಥದಾಸ್ ಕನ್ನಡಕ್ಕೆ: ಕೊಡೀಹಳ್ಳಿ ಮುರಳೀ ಮೋಹನ್ ನನ್ನೊಳಗಿನ ನಿಶ್ಶಬ್ದವೇನನಗೆ ಅರ್ಥವಾಗದೆ ಸಾಯುತ್ತಿದೆ;ಇನ್ನು ಎದುರಿಗಿರುವವರ ಮೌನವನುನಾನೇಗೆ ತಾನೇ ಅರಿಯಲಿ? ಹೇಗಾದರೂ ಮಾಡಿ ಈ ಮೌನಕ್ಕೆಒಂದು ಪರಿಹಾರ ಕಂಡುಕೊಳ್ಳಬೇಕು;ಜಗದ ಮಾತುಗಳೆಲ್ಲವೂಬತ್ತಿ ಹೋಗುವ ಮುನ್ನವೇಒಂದು ‘ನಿಶ್ಶಬ್ದರತ್ನಾಕರ’ವ ರೂಪಿಸಿಕೊಳ್ಳಬೇಕು.ನಿಶ್ಶಬ್ದದ ಮರ್ಮಕ್ಕೆ ಸಾವಕಾಶವಾಗಿ ಟೀಕು-ಟಿಪ್ಪಣಿಗಳನ್ನು ಬರೆದಿಡಬೇಕು; ಎದುರಿಗಿರುವವರ ಮೌನವನ್ನಅವರ ಪಾಡಿಗೆ ಬಿಟ್ಟರೆ-ಕನಿಷ್ಠ ಪಕ್ಷ, ಆಗಲಾದರೂನನ್ನ ನಿಶ್ಶಬ್ದ ನನಗೆ ಅರ್ಥವಾಗಬಹುದೇನೋ! ಮೂಲ: ಪನ್ಯಾಲ ಜಗನ್ನಾಥದಾಸ್ ಕನ್ನಡಕ್ಕೆ: ಕೊಡೀಹಳ್ಳಿ ಮುರಳೀ ಮೋಹನ್

“ನಿಶ್ಶಬ್ದರತ್ನಾಕರ” ತೆಲುಗು ಕವಿತೆ- ಮೂಲ: ಪನ್ಯಾಲ ಜಗನ್ನಾಥದಾಸ್ ಕನ್ನಡಕ್ಕೆ: ಕೊಡೀಹಳ್ಳಿ ಮುರಳೀ ಮೋಹನ್ Read Post »

You cannot copy content of this page

Scroll to Top