ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಕಿಲಾಪತ್ ಸೇನಾನಿಗರು.1921” ಹಮೀದ್ ಹಸನ್ ಮಾಡೂರು ಅವರ ಕವಿತೆ

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಕಿಲಾಪತ್ ಸೇನಾನಿಗರು.1921” ಸ್ವಾತಂತ್ರ್ಯದ….ವೀರಾಧಿ ವೀರರಿವರು,ಮಲೆಬಾರ ಮಣ್ಣಿನ ಧೀರರು,ಕಿಲಫತ್ ಕದನದ ಯೋಧರಿವರು,ಕೇರಳದ ಮಾಪಿಲ ಕಾಕರು,ಮಲಬಾರಿನ ಕೆಚ್ಚೆದೆಯ ಸೇನಾನಿಗರು,!    ಅಂದು ಆ ನಮ್ಮವರು,   ಹಿರಿಯರು ಕಿರಿಯರೆಲ್ಲರು,   ಎದೆಯೊಡ್ಡಿ ಹೋರಾಡಿದವರು,   ಜನ್ಮಭೂಮಿಗೆ ಸ್ವಾತಂತ್ರ್ಯ ತಂದವರು,   ಕಿಚ್ಚಿನ ಮಾಪಿನ ಕಾಕರು,   ಮಲಬಾರಿನ ಕೆಚ್ಚೆದೆಯ ಸೇನಾನಿಗರು,!   ಬಿಳಿಯರ ಬಿಲಗಳ…ಮುತ್ತಿಟ್ಟು ಘರ್ಜಿಸಿದವರು,ಸ್ವಾತಂತ್ರ್ಯಕ್ಕಾಗಿ ಬಲಿಯಾದವರು,ಬಂದೂಕಿಗೆ ಎದೆಕೊಟ್ಟ ದೇಶ ಭಕ್ತರುಭಾರತದ ಮಾಪಿಲ ಸುಪುತ್ರರು,ಮಲಬಾರಿನ ಕೆಚ್ಚೆದೆಯ ಸೇನಾನಿಗರು,!    ಸ್ವಾತಂತ್ರ್ಯದ ಕಿಚ್ಚಲಿ…   ಸೆಣದಾಡಿ ಗೆದ್ದ ಕಿಲಾಪತರು,   ಸ್ವಾತಂತ್ರ್ಯ ಭಾರತದ ಕನಸಿಗರು,   1921ರ ಧೀರಾ ಕಿಲಾಪತ್ ಸೇನಾನಿಗರು,   ಕೇರಳ ಮಣ್ಣಿನ ಮಾಣಿಕ್ಯರು   ಮಲಬಾರಿನ ಕೆಚ್ಚೆದೆಯ ಸೇನಾನಿಗರು,!   ಸ್ವಾತಂತ್ರ್ಯದ ಧ್ಯೇಯಕೆ…ಒಕ್ಕೊರಲ ಕೂಗಿಗೆ ಬ್ರಿಟಿಷರು,ಸೋಲ ಉಣಿಸಿ, ಬೆಚ್ಚಿಸಿ ಬಿಟ್ಟವರು,ಬ್ರಿಟೀಷರ ಕೋವಿಗೆ ಜೀವ ತೆತ್ತವರುಎದೆಯೊಡ್ಡಿದ ಬಲಿದಾನಿಗಳು,ಮಲಬಾರಿನ ಕೆಚ್ಚೆದೆಯ ಸೇನಾನಿಗರು.! ಹಮೀದ್ ಹಸನ್ ಮಾಡೂರು.

“ಕಿಲಾಪತ್ ಸೇನಾನಿಗರು.1921” ಹಮೀದ್ ಹಸನ್ ಮಾಡೂರು ಅವರ ಕವಿತೆ Read Post »

ಇತರೆ

‌”ಸ್ತ್ರೀ ಮತ್ತು ಬೇಂದ್ರೆ ಸಾಹಿತ್ಯ” ವಿಶೇಷ ಲೇಖನ, ಡಾ.ಯಲ್ಲಮ್ಮ ಕೆ

ಸಾಹಿತ್ಯ ಸಂಗಾತಿ ಡಾ.ಯಲ್ಲಮ್ಮ ಕೆ ‌”ಸ್ತ್ರೀ ಮತ್ತು ಬೇಂದ್ರೆ ಸಾಹಿತ್ಯ” ನಾನು ಮತ್ತೆ ಮತ್ತೆ ಏನನ್ನಾದರೂ ಬರೆಯಲೇಬೇಕು ಎಂದುಕೊಂಡಾಗಲೆಲ್ಲ.., ಬರಿಲಿಕ್ಕೇನಿದೆ? ಎಂಬ ಪ್ರಶ್ನೆ ಧುತ್ತೆಂದು ಕಣ್ಮುಂದೆ ಬಂದು ನಿಲ್ಲುತ್ತದೆ! ಈಗಾಗಲೇ ಸಾಕಷ್ಟು ಜನ ಬರೆದು-ಹೊಟ್ಟೆ ಹೊರೆದು ಹಾಕಿದ್ದು ಎದುರಿಗೆ ಗುಡ್ಡೆಬಿದ್ದಿರುವಾಗ ನಾನಿನ್ನೂ ಓದೋದು ಬಾಳಷ್ಟಿದೆ ಅನಿಸುವ ಹೊತ್ತಲೇ ನನ್ನ ಆತ್ಮೀಯರಲ್ಲೋರ್ವರು ಯಾವುದೋ ಸಮಯ-ಸಂದರ್ಭದ ನಿಮ್ಮಿತ್ತ ಲೇಖನವೊಂದನ್ನು ಬರೆದುನೀಡುವಂತೆಯೂ, ಹಾಗೆನೇ ವಿಷಯವಸ್ತುವೊಂದನ್ನು ಸೂಚಿಸಿದರು ಕೂಡ; ಉದಾ: ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ ಎಂದಿಟ್ಟುಕೊಳ್ಳೋಣ. ಇಲ್ಲಿ ಬೇಂದ್ರೆ ಎಂಬ ಹೆಸರನ್ನು ತೆಗೆದು ಕನ್ನಡದ ಖ್ಯಾತನಾಮ ಯಾವೊಬ್ಬ ಕವಿ-ಸಾಹಿತಿಯ ಹೆಸರು ಸೇರಿಸಿದರೂ ಸರಿಯೆ! ಪತ್ರಿಕಾ ವರದಿ, ದತ್ತಕಾರ‍್ಯ ರೂಪದ, ಅಕಾಡೆಮಿಕ್ ರೀತೀಯಲ್ಲಿ ಸಂಶೋಧನಾ ಲೇಖನಗಳನ್ನು ಯಾರೂ ಕೂಡ ಬರೆಯಬಹುದೆಂದು ಯೋಚಿಸುತ್ತಿರುವಾಗಲೇ.., ಒಂದು ಸಾಮಾನ್ಯ ಸರಳ ಸೂತ್ರವೆಂಬಂತೆ – ತಾಯಿ, ಪ್ರೇಯಸಿ, ಗೃಹಿಣಿ, ಮೃದು ಸ್ವಭಾವ, ಮಮತೆ ಮತ್ತು ವಾತ್ಸಲ್ಯದ ಪ್ರತಿರೂಪದ, ಗುಣವತಿ, ಸಹನಶೀಲೆ, ಕ್ಷಮಯಾ ಧರಿತ್ರಿ, ದೈವೀಶಕ್ತಿರೂಪಿಣಿ ಎಂಬ ಸ್ತ್ರೀರೂಪಗಳು ಎಲ್ಲ ಕಾಲ ಮತ್ತು ಕವಿ-ಸಾಹಿತ್ಯದಲ್ಲೂ ಕಂಡುಬರುವಂತಹ ಗಮನೀಯ ಅಂಶಗಳು ಎಂದೆನ್ನಬಹುದೇ? ಇಲ್ಲವೇ ಸ್ತ್ರೀ ವಾಸ್ತವ ಬದುಕಿನ ಅನಾವರಣ-ಚಿತ್ರಣವೆಂದೆನ್ನಬಹದೇ?ಚಾರ್ಲ್ಸ್ ಡಾರ್ವಿನ್‌ನ ಸಿದ್ಧಾಂತದನ್ವಯ ಆದಿಮಾನವನಿಂದ್ಹಿಡಿದು ಆಧುನಿಕ ಮತ್ತು ಆಧುನಿಕೋತ್ತರ ಮಾನವನ ಜೀವವಿಕಸನದ ಹಾದಿಯನ್ನೊಮ್ಮೆ ಸಿಂಹಾವಲೋಕನ ಕ್ರಮದಿ ಗ್ರಹಿಸಿದಾಗ ಮಾತು ಮತ್ತು ಬುದ್ಧಿಬಲದ ದೆಸೆಯಿಂದ ಪ್ರಾಣಿಪ್ರಪಂಚದಿಂದ ಭಿನ್ನವೆನಿಸಿಕೊಂಡು ಮುನ್ನಡೆಯ ಹಾದಿಯಲ್ಲಿ ಜೈವಿಕ ಆಧಾರದಿ ಗಂಡು-ಹೆಣ್ಣೆಂಬ ಭೇದ, ಬಲಿಷ್ಠರು-ಅಶಕ್ತರು ಎಂಬ ವರ್ಗ ಸಂಘರ್ಷದಿ ಮೇಲೂ-ಕೆಳಗೂ, ಕೆಳಗೂ-ಮೇಲಾಗಿ ಸಾಗುತ್ತಲೇ ಸಂಘಜೀವಿ ಮನುಷ್ಯ ಸುತ್ತಣ ತನ್ನದೇ ಆದ ಗುಂಪು ಅಥವಾ ಸಮುದಾಯ ಅದಕ್ಕೊಂದು ಆಚಾರ-ವಿಚಾರ, ರೀತಿ-ನೀತಿ-ನಿಯಮಗಳೆಂಬ [ವಿವಾಹ, ಕುಟುಂಬ, ಜಾತಿ, ಮತ, ಧರ್ಮ] ಸಾಮಾಜಿಕ ಚೌಕಟ್ಟನ್ನು ನಿರ್ಮಿಸಿಕೊಂಡ; ಈ ಚೌಕಟ್ಟಿನೊಳಗಡೆ ಸ್ತ್ರೀ ತನಗೊದಗಿದ ಪಾತ್ರಗಳನ್ನು ಅತ್ಯಂತ ಮನೋಜ್ಞವಾಗಿ ಅನುಭವಿಸುತ್ತ.., ಅಭಿನಯಿಸುತ್ತ ತನ್ನ ಬದುಕಿನ ಪಾಡನ್ನೇ ಹಾಡನ್ನಾಗಿಸಿ ಹಾಡುತ್ತ ಹೆಜ್ಜೆಯ ಹಿಂದೆ ಹೆಜ್ಜೆಯ ಗೆಜ್ಜೆನಾದವಗೈಯುತ ಸಾಗುತ್ತಲೇ ಗಂಡಿನ ಅವಜ್ಞೆಗೆ ಗುರಿಯಾದಳೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.ಈ ಅವಜ್ಞೆಯ ದೆಸೆಯಿಂದಾಗಿಯೇ ಸ್ತ್ರೀ ಮನುಕುಲ-ವಂಶೋದ್ಧಾರದ ತಂತ್ರವಾಗಿಯೂ, ಮಕ್ಕಳನ್ನು ಹೆರುವ ಯಂತ್ರವಾಗಿಯೂ, ಬೋಗ-ಲಾಲಸೆಯ ವಸ್ತುವಾಗಿಯೂ, ಬಿಕರಿಯ ಸರಕಾಗಿಯೂ; ಬಾಲ್ಯ, ಯವ್ವೌನ ಮತ್ತು ಮುಪ್ಪನ್ನು ಕ್ರಮವಾಗಿ ತಂದೆ-ಗಂಡ ಮತ್ತು ಮಕ್ಕಳ ಸಂರಕ್ಷಣೆಯಲ್ಲಿಯೇ ಬಾಳಿ ಬದುಕಬೇಕಾದ ದುಸ್ಥಿತಿಯನ್ನು ತಲುಪಿದ ಸಂದರ್ಭ – ವಚನ ಮತ್ತು ದಾಸ ಸಾಹಿತ್ಯದ ಜ್ಞಾನಪ್ರಕಾಶದಿ ಅಂದಕಾರವ ಕಳೆದು ಬೆಳಕಿನ ಯುಗಾದಿಯೆಡೆಗೆ ಪಯಣಿಸಿ.., ನವ್ಯ, ನವೋದಯ, ಪ್ರಗತಿಶೀಲ, ದಲಿತ ಮತ್ತು ಬಂಡಾಯ, ತರುವಾಯ ಅಸ್ಮಿತೆಯ ಕುರುಹಾಗಿ ಬೆಳೆದುಬಂದ ಸ್ತ್ರೀವಾದಿ ಸಾಹಿತ್ಯ ಇತ್ಯಾದಿ ಪ್ರಕಾರಗಳು ಬೆಳೆದುಬಂದದ್ದು ಕಣ್ಮುಂದಿನ ಇತಿಹಾಸ.ಕನ್ನಡ ಭಾಷೆ ಮತ್ತು ಸಾಹಿತ್ಯದ ಸಂದರ್ಭದಿ ಸ್ತ್ರೀ-ಹೆಣ್ಣನ್ನು ನೋಡುವುದಾದರೆ.., ಮುಖ್ಯವಾಗಿ ಹೆಣ್ಣನ್ನು ಪುರುಷ ಅಥವಾ ಪುರುಷ ಪ್ರಧಾನ ಸಮಾಜ ಕಂಡಿರುವ ದೃಷ್ಟಿ, ಹೆಣ್ಗಳ್ಳಿನ ಪುರುಷ ಹೆಣ್ಣನ್ನು ಕಂಡಿರುವ ದೃಷ್ಟಿ, ಹೆಣ್ಣನ್ನು ಹೆಣ್ಣು ಕಂಡಿರುವ ದೃಷ್ಟಿ ಎಂದು ಈ ಮೂರು ಆಯಾಮಗಳಲ್ಲಿ ಅವಲೋಕಿಸುವುದು ಉತ್ತಮ ಮಾರ್ಗವಾದೀತು ಎಂದು ನನಗನಿಸುತ್ತೆ. ನಾವು ಹೀಗೆ ಆಲೋಚಿಸುವಾಗ ಜನ್ಮದತ್ತವಾಗಿ ವರವಾಗಿಯೋ ಶಾಪವಾಗಿಯೋ ನಮಗಂಟಿಕೊಂಡು ಬಂದಿರುವ ಪೂರ್ವಾಗ್ರಹಗಳು ಯಾವುದೇ ಒಂದು ವಸ್ತು-ವಿಷಯ-ಸಂಗತಿಯ ಕುರಿತಾಗಿ ಕೇಳುವಾಗ, ಮಾತನಾಡುವಾಗ, ಓದುವಾಗ, ಬರೆಯುವಾಗ; ಚರ್ಚಿಸಲು, ತರ್ಕಿಸಲು, ವಿಶ್ಲೇಷಿಸಲು ತೊಡಗಿದಾಗ ಶೂನ್ಯದಿಂದ ಏನನ್ನೂ ಸೃಷ್ಟಿಸಲಾಗದು ಎಂಬ ಮಾತಿಗೆ ಮಣೆಹಾಕುತ್ತ.., ಹಲ-ಕೆಲವು ಪೂರ್ವಾಗ್ರಹಗಳನ್ನು ಹೊತ್ತುಕೊಂಡೇ ಮುನ್ನಡೆಯುತ್ತೇವೆ; ನೀವು ಏನೇ ಮಾತಾಡಿದರೂ ಆ ಮಾತಿನ ಲಯ ಮತ್ತು ದಾಟಿ, ಏನೇ ಬರೆದರೂ ಆಬರಹದ ಓಘ ಅಥವಾ ಶೈಲಿಯಿಂದಲೇ ಎಡ-ಬಲ-ಮಧ್ಯಂತರಗಳೆಂಬ ಕವಲಿಗೆ ಸಿಕ್ಕಿಹಾಕಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ಒಂದು ಖಯಾಲಿಯಿಂದ ಹೊರಬಂದರೇ ಮಾತ್ರ ಈ ಮೂರು ಆಯಾಮಗಳಲ್ಲಿ ಸ್ತಿçÃಯನ್ನು ಸಮಗ್ರವಾಗಿ ಗ್ರಹಿಸಬಹುದು ಎಂಬುದು ನನ್ನ ಮನದಿಂಗಿತವಾಗಿದೆ. ಹೆಣ್ಣನ್ನು ಪುರುಷ ಅಥವಾ ಪುರುಷ ಪ್ರಧಾನ ಸಮಾಜ ಕಂಡಿರುವ ದೃಷ್ಟಿ:ಅನುಕೂಲ ಮತ್ತು ಅನನಕೂಲ, ಸಮ್ಮತಿ-ಅಸಮ್ಮತಿಯ ಹಿನ್ನಲೆಯಲ್ಲಿ ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ, ಹೆಣ್ಣಿಗೆ ಹಣ್ಣೇ ಶತ್ರು, ಎರಡು ಜಡೆಯನ್ನು ಕೂಡಿಸಲಾಗದು, ಹೆಣ್ಮಕ್ಕಳ ಬುದ್ಧಿ ಮೊಣಕಾಲ ಕೆಳಗೆ ಎಂದು ಜರೆಯುವ, ಹೆಣ್ಣು ಗಂಡಿನ ಬಾಳಿಗೆ ಕಣ್ಣಾಗುವ ಅದೇ ಹೆಣ್ಣು ಹುಣ್ಣಾಗುವ ಇಬ್ಬದಿತನದ ಧೋರಣೆಯ ಪೂರ್ವಾಗ್ರಹಗಳಿಂದ, ಕಣ್ಣಿಗೆ ಮಣ್ಣೆರೆಚುವ ಮಾತುಗಳ ಪ್ರೇರೇಪಣೆಯಿಂದ ನೋಡಿದಾಗ; ತಾಯಿಯಾದವಳು ಮಗ-ಸೊಸೆಯನ್ನು, ಮಗಳು-ಅಳಿಯನನ್ನು ಕಾಣುವ ಬಗೆ, ಅತ್ತೆ ಒಡೆದ ಕಂಚಿಗೆ ಬೆಲೆಯಿಲ್ಲ ಎಂಬ ಮನೋಧೋರಣೆ, ಅದೇ ಸೊಸೆ – ಅತ್ತೆ-ಮಾವ-ನಾದಿನಿ-ಮೈದುನನ್ನು ಕಾಣುವ ಬಗೆಗೂ ಅದೇ ತನ್ನ ಅಣ್ಣ-ತಮ್ಮ, ಅಕ್ಕ-ತಂಗಿಯರನ್ನು ಕಾಣುವ ಬಗೆಗೂ ತುಂಬ ವ್ಯತ್ಯಾಸವನ್ನು ಕಾಣಬಹುದು. ಅಂಗೀಯ ಮ್ಯಾಲಂಗಿ ಚಂದೇನೋ ನನ ರಾಯ ಎಂಬ ಗರತಿಯು ಸವತಿಯನ್ನು ಕಾಣುವ ಬಗೆ, ಗಂಡನಾದವನು ಮತ್ತೊಬ್ಬಾಕೆಯ ಸಂಗಡದಲ್ಲಿರುವುದನ್ನು ತಿಳಿದು ಆಕೆಯನ್ನು ಕಾಣುವ ಬಗೆ, ತಾಯಿ ಸತ್ತಮ್ಯಾಲೆ ತಂದೆ ಚಿಗಪ್ಪ ಅಂತ! ಮಲತಾಯಿ ಆ ತಬ್ಬಲಿ ಮಕ್ಕಳನ್ನು ಹಾಗೂ ತನ್ನ ಹೊಟ್ಟೆಯ ಮಕ್ಕಳನ್ನು ಕಾಣುವ ಬಗೆಯನ್ನು ಕತೆ, ಕವಿತೆ, ಕಾದಂಬರಿಗಳಲ್ಲಿ ಅಷ್ಟೇ ಅಲ್ಲದೇ ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದು ಈ ಮೇಲಿನ ಆಯಾಮದಲ್ಲಿ ನೋಡಬಹುದಾಗಿದೆ.ಹೆಣ್ಣನ್ನು ತಾಯ್ಗಳ್ಳಿನ ಅಥವಾ ಹೆಣ್ಗಳ್ಳಿನ ಪುರುಷ ಕಂಡಿರುವ ದೃಷ್ಟಿ:ಹೆಣ್ಣು ಅಂದಂದಿನ ಕಾಲಘಟ್ಟದಿ ಕೌಟುಂಬಿಕ ಮತ್ತು ಸಾಮಾಜಿಕ ಜನ-ಜೀವನದಲ್ಲಿ ಅನುಭವಿಸಿದ ಯಮ-ಯಾತನೆಗಳನ್ನು ತುಂಬ ಹತ್ತಿರದಿಂದ ಕಂಡುಂಡ ತಾಯ್ಗಳ್ಳಿನ ಅಥವಾ ಹೆಣ್ಗಳ್ಳಿನ ಹೃದಯ ಆದ್ರವಾಗಿ ಮಿಡಿದ ಭಾವನೆಗಳ ಒಟ್ಟಂದದಿ ಚಿತ್ರಿತವಾದ ಸ್ತ್ರೀ–ತಾಯಿ, ಪ್ರೇಯಸಿ, ಸದ್ಗೃಹಿಣಿಯಾಗಿ ಕಂಡಿರುವಂತದ್ದು. ಒಟ್ಟಾರೆಯಾಗಿ ಬೇಂದ್ರೆ ಸಾಹಿತ್ಯವನ್ನು ಅವಲೋಕಿಸಿದಾಗ ಈ ಮೇಲಿನ ಆಯಾಮದಲ್ಲಿ ಮೂಡಿಬಂದಿರುವಂತದ್ದು ಎಂಬುದರಲ್ಲಿ ಎರಡು ಮಾತಿಲ್ಲ.ಸೌಂಧರ‍್ಯವೆಂಬುದುಕಣ್ಣಿನ ತುತ್ತಲ್ಲಕಣ್ಣಿಗೂ ಕಣ್ಣಾಗಿಒಳಗಿಹುದುರೂಪ-ಲಾವಣ್ಯಕೆಅಳೆಯಲುಬಾರದುಅವುಗಳೇಇದರೊಂದು ಕಣವಿಹವು.ಸೌಂಧರ‍್ಯ ಎಂದರೆ ಅದು ಬರೀ ಕಣ್ಣು ಸೆರೆಹಿಡಿಯುವ ಹೊರದೃಶ್ಯವಲ್ಲ, ಕಣ್ಣು ನೋಡುವುದಕ್ಕಿಂತ ಗಾಡವಾಗಿ, ಮನಸ್ಸು, ಹೃದಯದಿಂದ ಮಾತ್ರವೇ ಗ್ರಹಿಸಬಹುದಾದ ಒಳಗಿನ ಗುಣವೇ ನಿಜವಾದ ಸೌಂಧರ‍್ಯ. ಅದನ್ನು ನಾವು ತೂಕ, ಬಣ್ಣ, ಮುಖದ ರೀತಿ ಇತ್ಯಾದಿಗಳಿಂದ ಅಳೆಯಲು ಸಾಧ್ಯವಿಲ್ಲ, ನಾವು ಕಾಣುವ ರೂಪ-ಲಾವಣ್ಯವು ಆ ನಿಜವಾದ ಸೌಂಧರ‍್ಯದ ಒಂದು ಚಿನ್ನದ ಕಣ, ಸಣ್ಣ ಭಾಗ ಮಾತ್ರವೇ ಆಗಿದೆ. ನಿಜವಾದ ಸೌಂಧರ‍್ಯ ಕಣ್ಣಿಗೂ ಮೀರಿದ, ಹೃದಯದಿ ಅನುಭವವಾಗುವ, ಒಳಗಿನ ಮೌನ-ಮೌಲ್ಯಗಳಲ್ಲಿ ಅಡಗಿದೆ. ಮನುಷ್ಯನ ಸೌಂಧರ‍್ಯ ಬಾಹ್ಯ ರೂಪದಲ್ಲಿಲ್ಲ; ಹೃದಯ, ಗುಣ, ಸ್ವಭಾವ, ಆಂತರ‍್ಯದ ಪ್ರಕಾಶ – ಇವುಗಳೇ ನಿಜವಾದ ಸೌಂರ‍್ಯ ಎಂಬರ್ಥದಿ ಬೇಂದ್ರೆಯವರು ಸ್ತ್ರೀಯನ್ನು ಚಿತ್ರಿಸಿದ್ದಾರೆ. ಮಾತಿನಲ್ಲಿರುವಂಥಮೌನದ ಧ್ವನಿಯಿಂದವಿವ್ಹಲತೆಬೆಳೆಯುವುದಿಬ್ಬರಲಿಇಬ್ಬರ ಮನವಾಗಇಬ್ಬಗೆಯಾಗುವುದುಒಬ್ಬರಿಗೂ ಸುಖವಿಲ್ಲಬದುಕಿನಲಿ.ಮಧುರವಾದ ಸಂಬಂಧದಲ್ಲಿ ಹೇಳದಿರುವ ಮೌನ, ಒಡೆದ ಮಾತುಗಳು, ವ್ಯಕ್ತಗೊಳ್ಲದ ನೋವು-ನಲಿವು, ಇವು ಎರಡು ಹೃದಯ[ಮನಸ್ಸು]ಗಳನ್ನು ದೂರ ಮಾಡುತ್ತವೆ. ಮಾತುಕ[ವಿ]ತೆ, ನೇರ ಸಂಭಾಷಣೆಯಿರದ ಸಂಬಂಧದಲ್ಲಿ ಇಬ್ಬರೂ ಸುಖವನ್ನು ಕಾಣಲಾಗದು, ಗಂಡ-ಹೆಂಡಿರ ಗಂಧಾ ತೀಡಿದ್ಹಂಗ ಇರಬೇಕಾ, ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಜನಪದರ ಗಾದೆಮಾತು ಸುಳ್ಳಾಗೇ.., ಅದು ವಿಚ್ಛೇದನದಿ ರ‍್ಯಾವಸಾನಗೊಳ್ಳುತ್ತದೆ ಎಂಬ ಎಚ್ಚರಿಕೆಯನ್ನು ನೀಡುತ್ತಾರೆ.ಪಾದ ಪದ್ಧತಿಯಲ್ಲಿಪದ ಕೂಡಿ ಬರುವಾಗಯಾರಾರೆ ಗುರು-ಲಘು ಎಣಿಸುವರೆ?ಯಾ ರಾಗವೆಂದರುಯಾ ರಾಗ ಕೇಳುವರುಅನುರಾಗವನುರಣಿಸಿತಣಿಸುತಿರೆ!.ಪದಗಳ ನಿಯಮ, ಛಂದಸ್ಸು, ಗುರು-ಲಘು, ರಾಗ-ತಾಳ ಇವೆಲ್ಲವೂ ಕೇವಲ ತಾಂತ್ರಿಕ ಇತಿ-ಮಿತಿಗಳು, ಆದರೆ ಸಂಕಷ್ಟದ ಬದುಕಿನ ಪಾಡೇ ಹಾಡಾಗಿ ಹೃದಯದಿ ಹುಟ್ಟುವ ಪದವು [ಅನುರಾಗ, ಭಾವ, ಪ್ರೀತಿ, ನಿಸ್ಸಳ ಸ್ಪಂದನೆ] ಪಾದ ಪದ್ದತಿಯಲ್ಲಿ ಅಂದರೆ ಕಾಲ್ನಡಿಗೆಯ ರೂಪದಿ ಎಡ-ಬಲವೆಂದೆಣಿಸದೆ ಜತೆಗೂಡಿ ಮುನ್ನಡೆಯುತ್ತಿರಾಗ.., ಗುರು-ಲಘು ಎಣಿಸುವರೆ? ಇಲ್ಲಿ ನಿಯಮಗಳಿಗಿಂತ ಭಾವ ತೀವ್ರತೆಯೇ ಕವಿತೆಯ ಜೀವವಾಗಿ, ರಾಗಕೆ ಶ್ರವಣ, ಮನಸ್ಸಿಗೆ ತಣಿ[ಮುದ]ವನ್ನು ನೀಡುತ್ತದೆ ಎಂಬರ್ಥದಿ ಗಂಡು-ಹೆಣ್ಣಿನ ಅನುರಾಗ-ದಾಂಪತ್ಯ ಜೀವನಕ್ಕೆ ಮುನ್ನಡಿ ಬರೆಯುತ್ತ..,ನಾನು ಬಡವಿ ಆತ ಬಡವಒಲವೆ ನಮ್ಮ ಬದುಕುಬಳಸಿಕೊಂಡೆವದನೆ ನಾವುಅದಕು ಇದಕು ಎದಕು.ಆತ ಕೊಟ್ಟ ವಸ್ತು ಒಡವೆನನಗೆ ಅವಗೆ ಗೊತ್ತುತೋಳುಗಳಿಗೆ ತೋಳ ಬಂದಿಕೆನ್ನೆ ತುಂಬ ಮುತ್ತು.ಕುಂದು ಕೊರತೆ ತೋರಲಿಲ್ಲಬೇಕು ಹೆಚ್ಚಿಗೇನು?ಹೊಟ್ಟೆಗಿತ್ತ ಜೀವ ಫಲವತುಟಿಗೆ ಹಾಲು ಜೇನು.ಎಂದು ಒಲವೆ ನಮ್ಮ ಬದುಕು ಎಂಬೀ ಕವಿತೆಯ ಮೂಲಕ ಸಮರಸವೇ ಜೀವನವೆಂಬ ಸಾಮರಸ್ಯದ ಬದುಕಿಗೆ ಕನ್ನಡಿ ಹಿಡಿಯುತ್ತಾರೆ.ಪುಟ್ಟ ವಿಧವೆ:ಬಾಲ್ಯವಿವಾಹ, ಸತಿ ಪದ್ಧತಿ ನಿಷೇಧ, ಮಹಿಳಾ ಶಿಕ್ಷಣ, ವಿಧವಾ ಪುನರ್ವಿವಾಹ, ಮಹಿಳಾ ಹಕ್ಕುಗಳ ಪರ ಹೋರಾಟ, ಮಹಿಳಾ ಸ್ವಾತಂತ್ರ್ಯ, ಸ್ವಾವಲಂಬನೆ, ಸ್ವಾಭಿಮಾನಕ್ಕೆ ಒತ್ತಾಯ, ಗ್ರಾಮಗಳಲ್ಲಿ ಮಹಿಳಾ ಆರೋಗ್ಯ ಮತ್ತು ಅರಿವು ಎಂಬಿತ್ಯಾದಿ ವಿಚಾರಗಳ ದಿಸೆಯಲ್ಲಿನ ಸಮಾಜ ಸುಧಾರಣೆಯ ಮೊದಲ ಪ್ರಮುಖ ಧ್ವನಿಯೆಂದರೆ – ರಾಜಾ ರಾಮ್‌ಮೋಹನ್ ರಾಯ್, ತದನಂತರದಿ ಈಶ್ವರಚಂದ್ರ ವಿದ್ಯಾಸಾಗರ, ಮಹಾತ್ಮ ಗಾಂಧಿ, ಜ್ಯೋತಿರಾವ್ ಫುಲೆ ಮತ್ತು ಸಾವಿತ್ರಿ ಬಾಯಿ ಫುಲೆ, ಅನ್ನಿಬೆಸೆಂಟ್, ದ್ವಾರಕನಾಥ್ ಗಂಗೂಲಿ, ಕಸ್ತೂರಬಾ ಗಾಂಧಿ, ಕರ್ನಾಟಕದಲ್ಲಿ ಟಿ.ನರಸಿಂಹಾಚಾರ‍್ಯ, ಡಿ.ವಿ.ಗುಂಡಪ್ಪ ಈ ಎಲ್ಲ ಮಹನೀಯರ ಹೋರಾಟದ ಫಲವೆಂಬಂತೆ; ಹರಬಿಲಾಸ್ ಸರ್ಡಾ ಅವರು ಮಂಡಿಸಿದ – ೧೯೨೯ ರ ಸರ್ಡಾ ಕಾಯ್ದೆ / ಅhiಟಜ ಒಚಿಡಿಡಿiಚಿge ಖesಣಡಿಚಿiಟಿಣ ಂಛಿಣ  – ಇದು ಭಾರತೀಯ ಬಾಲ್ಯವಿವಾಹ ನಿಯಂತ್ರಣದ ಮೊದಲ ಕಾನೂನು ಜಾರಿಯಾಯಿತು.ಈ ಹಿನ್ನಲೆಯಲ್ಲಿ ಹೆಣ್ಣಿನ ವೈದವ್ಯದ ಬಾಳಿನ-ಗೋಳಿನ ಕತೆಯನ್ನು ನೋಡಲಾಗದೆ ಇದನ್ನು ಕಾನೂನಾತ್ಮಕವಾಗಿ ಸಂಪೂರ್ಣವಾಗಿ ತೊಡೆದುಹಾಕಲು ಶ್ರಮಿಸಿದವರು ಪ್ರಾತಃ ಸ್ಮರಣೀಯರು. ಇಂತದ್ದೇ ಒಂದು ನೈಜ ಘಟನೆ ಬೇಂದ್ರೆಯವರ ಮನಕಲಕಿದ್ದರ ಪರಿಣಾಮ – ಪುಟ್ಟವಿಧವೆ ಕವಿತೆಯಲ್ಲಿ ಚಿತ್ರಿಸಿದ್ದಾರೆ;ಆಕೆಯಿದ್ದಳು ಕೂಸು; ಈತನಿನ್ನೂ ಹುಡುಗಅವರ ತಾಯ್ತಂದೆಗಳ ಹಿಗ್ಗು ಎಷ್ಟು!ಧರ್ಮದಾ ಹೆಸರಿನಲಿ ಅವರ ಕೈಕೂಡಿಸಲುಇವರಿಗೆನಿಸಿತು ಹರ್ಷ ಹಬ್ಬದಷ್ಟು.ಹತ್ತು ದಿವಸಕೆ ಹಾಳು ಮುತ್ತೈದೆತನ ಹೋಗಿವೈದವ್ಯ ಸಂಪತ್ತು ಪಡೆದಳಾಕೆ;ಮನೆಯವರು ವೈದಿಕರು, ಊರು ಧರ್ಮದ ತವುರು;ಶಾಸ್ತ್ರವಿರೆ ಬೇರೆಯ ವಿಚಾರವೇಕೆ?ಕುರುಡು ಧರ್ಮಕ್ಕೆ ಸ್ಮಾರಕವು ನಿಂತಂತಾಕೆಮೈಮರೆತು ನಿಂತಾಗ ಗೂಗೆ ಹಾಡಿತ್ತು,ಮುದ್ರೆಯೊತ್ತುವ ಕಣ್ಣು ಮೋರೆ ನೋಡಿತೊಮ್ಮೆಊರ ಕೃಷ್ಣನ ಕಥೆಗೆ ಕೋಡು ಮೂಡಿತ್ತು.ಈ ಒಂದು ಕವಿತೆ: ತಂದೆ-ತಾಯಂದಿರ ಜವಾಬ್ದಾರಿ, ಕನ್ಯಾದಾನ, ಕೌಟುಂಬಿಕ ರಕ್ಷಣೆ, ಅನಿಶ್ಚಿತತೆಯ ಬಾಳು, ಅಕಾಲಿಕ ಮರಣ, ವೈದವ್ಯ ಪ್ರಾಪ್ತಿ, ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು, ನಮ್ಮ ಅಜ್ಞಾನಕ್ಕೆ ಹೆಣ್ಣಿನ ಬಾಳು ಆಹುತಿಯಾದುದರ ಕುರುಹಾಗಿ ಪುಟ್ಟ ವಿಧವೆ ನಮ್ಮ ಕಣ್ಮುಂದೆ ನಿಲ್ಲುತ್ತಾಳೆ, ಕಂಬನಿ ಮಿಡಿಯುವಂತೆ ಮಾಡುತ್ತಾಳೆ,ಹುಬ್ಬಳ್ಳಿಯಾಂವಾ:ಬೇಂದ್ರೆಯವರ ಪ್ರತಿಕಾ ಓದಿನ ಅಭಿರುಚಿ ಎಷ್ಟಿತ್ತೆಂದರೆ.., ಅದೊಂದು ಗೀಳಾಗಿ ಅಂಟಿಕೊಂಡಿತ್ತೆಂದು ಹೇಳಬಹುದೆನೋ, ಹುಬ್ಳಿಯಿಂದ ವಾರಕ್ಕೆ ಮೂರು ದಿನ ಅಚ್ಚಾಗಿ ಹೊರಡುತ್ತಿದ್ದ ಪತ್ರಿಕೆ ಅನಿವರ‍್ಯ ಕಾರಣಗಳಿಂದ ಅಚ್ಚಿನ ಮನೆಯಲ್ಲಿ ಬೆಚ್ಚಗೆ ಕುಳಿತದ್ದರಿಂದ; ಪತ್ರಿಕೆ ಬಾರದೇ ಇದ್ದಾಗ, ಓದದೇ ಇದ್ದಾಗ ಆಗುನ ಮನಸ್ಸಿನ ಚಡಪಡಿಕೆ; ಇಲ್ಲಿ ಸಾಗಂತ್ಯ ತೊರೆದು ಹೋದ ಇನಿಯನ ನೆನವರಿಕೆ, ಕನವರಿಕೆ ಭಾವ ತೀವ್ತೆಯಿಂದ ಹೊರಹೊಮ್ಮಿದ ಕವಿತೆ ಈ ಹುಬ್ಬಳ್ಳಿಯಾಂವಾ ಎಂದು ಹೇಳಬಹುದು.ಮಾತು ಮಾತಿಗೆ ನಕ್ಕನಗಿಸಿ ಆಡಿಸ್ಯಾಡಾಂವಾಏನೋ ಅಂದರ ಏನೋ ಕಟ್ಟಿ ಹಾಡ ಹಾಡಾಂವಾ.ಇರು ಅಂದರ ಬರತೇನಂತ ಎದ್ದು ಹೊರಡಾಂವಾಮಾರೀ ತೆಳಗ ಹಾಕಿತೆಂದರ ಇದ್ದು ಬಿಡಾಂವಾ ಚಹಾದ ಜೋಡಿ ಚೂಢಾಧಾಂಗ ನೀ ನನಗಂದಾಂವಾಚೌಡಿಯಲ್ಲ ನೀ ಚೂಡಾಮಣಿಯಂತ ರಮಿಸ ಬಂದಾಂವಾಕಣ್ಣಿನಾಗಿನ ಗೊಂಬೀಹಾಂಗ ಎದ್ಯಾಗ ನಟ್ಟಾಂವಾಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ?ಇಲ್ಲಿ ಗಂಡಿನ ಅನುರಾಗದಿ ಮಿಂದೆದ್ದ ಹೆಣ್ಣಿನ ಮನದಾಳದ ಇರಿಸು-ಮುರಿಸು, ಮುನಿಸು, ಸರಸ-ಸಲ್ಲಾಪ-ಸಂಭಾಷಣೆಯ ನೆನಹು, ಇನಿಯನ ಬರವಿನ ನಿರೀಕ್ಷೆ, ಕಾತರ, ಕಾವಳ ಭಾವದಿ ಬರುವ ಹಾದಿಯ ಎದುರು ನೋಡುತ್ತಾ ನಿಂತ ಪ್ರೇಯಸಿಯ ಮನದಾಳದಿ ಬಚ್ಚಿಟ್ಟ ಭಾವನೆಗಳನ್ನು ನಮ್ಮೆದುರಿಗೆ ಬೇಂದ್ರೆಯವರು ಬಿಚ್ಚಿಟ್ಟಿದ್ದಾರೆ.ಹುಣ್ಣಿವಿ ಚಂದಿರನ ಹೆಣ:ಮಗ ಸತ್ತ ಸುದ್ದಿ ತಿಳಿದು ದಿಗ್ಭ್ರಮೆಗೊಂಡು, ಕಂಬನಿಗರೆಯದೆ ಕಲ್ಲಾಗಿ ಮೂಲೆಹಿಡಿದು ಕೂತ ಹೆಂಡತಿಯ ಮುಖಭಾವವನ್ನು – ನೀ ಹೀಂಗ ನೋಡಬ್ಯಾಡ ನನ್ನ ನಿನ್ನ ನೇರ ದಿಟ್ಟಿಯನ್ನು ಎದುರಿಸುವ ಶಕ್ತಿ ನನಗಿಲ್ಲ, ಎಂದು ಪರಿಪರಿಯಾಗಿ ಸಂತೈಯಿಸುತ್ತ – ನಕ್ಯಾಕ ಮರಸತೀ ದುಃಖ? ಎದೆ ಬಡಿಸಿ ಕೆಡವು ಬಿರಿಗಣ್ಣು ಬ್ಯಾಡ

‌”ಸ್ತ್ರೀ ಮತ್ತು ಬೇಂದ್ರೆ ಸಾಹಿತ್ಯ” ವಿಶೇಷ ಲೇಖನ, ಡಾ.ಯಲ್ಲಮ್ಮ ಕೆ Read Post »

ಕಾವ್ಯಯಾನ

ʻಆತ್ಮಾಭಿಮಾನʼ ಡಾ ತಾರಾ ಬಿ ಎನ್.

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್. ʻಆತ್ಮಾಭಿಮಾನʼ ನನ್ನೊಳಗಿನ ನಾದವದು,ನನ್ನ ನಿಲುವಿನ ನೆರಳದು,ಬಾಗದ ತಲೆಗೂ ಮುರಿಯದ ಮನಕೂಹೆಸರು ಕೊಟ್ಟ ಶಕ್ತಿಯದು ಆತ್ಮಾಭಿಮಾನ. ಬಿರುಗಾಳಿಯ ನಡುವೆ ನಿಂತುಬೇರು ಬಿಟ್ಟ ಮರದಂತೆ,ಎಷ್ಟು ಹೊಡೆತ ತಿಂದರೂನೆಲ ಬಿಟ್ಟು ಸರಿಯದ ನಂಬಿಕೆಯಂತೆ.ಅದು ಗರ್ವವಲ್ಲ, ಅಹಂಕಾರವೂ ಅಲ್ಲ.ಇತರರನ್ನು ಕುಗ್ಗಿಸುವ ದುರಹಂಕಾರವಲ್ಲ, ತನ್ನ ಮೌಲ್ಯವನ್ನು ಅರಿತುತಾನೇ ತಾನಾಗಿರುವ ಧೈರ್ಯವದು.ಕಟ್ಟಿದ ಕನಸುಗಳು ನುಚ್ಚುನೂರಾದಾಗಲೂಕಣ್ಣೀರ ಮಧ್ಯೆ ನಗು ಉಳಿಸಿದಂತೆ,“ನಾನು ಸೋಲಿಲ್ಲ” ಎನ್ನುವನಿಶ್ಶಬ್ದ ಘೋಷಣೆಯೇ ಆತ್ಮಾಭಿಮಾನ. ಸತ್ಯದ ದಾರಿಯಲ್ಲಿ ನಡೆಯುವಾಗಒಂಟಿತನ ಬಂದರೂ ಭಯವಿಲ್ಲ,ನನ್ನ ನಡೆ ನನ್ನದೆ ಎನ್ನುವಸ್ಥೈರ್ಯ ತುಂಬುವ ದೀಪವದು. ಬಡತನದ ಬಟ್ಟೆ ಧರಿಸಿದರೂಮನಸ್ಸು ರಾಜಸವಾಗಿರಬಹುದು,ಅಭಿಮಾನವಿಲ್ಲದೆ ಶ್ರೀಮಂತಿಕೆಖಾಲಿ ಮಂಟಪವಾಗಿರಬಹುದು.ತಲೆಯೆತ್ತಿ ನಡೆಯಲು ಕಲಿಸುವುದು, ನ್ಯಾಯದ ಪರ ನಿಲ್ಲಲು ಪ್ರೇರೇಪಿಸುವುದು,ಯಾರ ಹಂಗೂ ಇಲ್ಲದಬೇರೆ ಯಾರ ಅನುಮತಿಯಿಲ್ಲದೆನನ್ನ ಮೌಲ್ಯವನ್ನು ಘೋಷಿಸುವುದು.ಆತ್ಮಾಭಿಮಾನ ನನ್ನ ಶಿರಸ್ಸಿನ ಕಿರೀಟವದು,ನನ್ನ ಜೀವನದ ದೀಪವದು,ಬಿದ್ದಾಗಲೂ ಏಳುವಂತೆ ಮಾಡುವನನ್ನೊಳಗಿನ ಶಾಶ್ವತ ಶಕ್ತಿ.ಅನುಪಮ ಅವ್ಯಕ್ತ   ಶಕ್ತಿಯಮೌಲ್ಯಾದರ್ಶದ ಜ್ಞಾನಶಿಸ್ತುನನ್ನೊಳಗಿನ ಶಾಶ್ವತ ಶಕ್ತಿ. ಡಾ ತಾರಾ ಬಿ ಎನ್.

ʻಆತ್ಮಾಭಿಮಾನʼ ಡಾ ತಾರಾ ಬಿ ಎನ್. Read Post »

ಕಾವ್ಯಯಾನ

ಹನಿಬಿಂದು ಅವರ ಕವಿತೆ “ಪೋಷಕ ವಾತ್ಸಲ್ಯ”

ಕಾವ್ಯ ಸಂಗಾತಿ ಹನಿಬಿಂದು ಪೋಷಕ ವಾತ್ಸಲ್ಯ ಕೌಸಲ್ಯೆ ಮಾತ್ರವಲ್ಲ ಪ್ರತಿ ತಾಯ ವಾತ್ಸಲ್ಯಪುತ್ರ ಪುತ್ರಿ ಮನೆ ಹಿರಿಯರಿಗೆಭವಿಷ್ಯತ್ತಿನ ಯೋಚನೆ, ಯೋಜನೆ ವೈಶಾಲ್ಯಉಸ್ತುವಾರಿ ಜೊತೆ ಹಣ ಸಕಲರಿಗೆ.. ರಕ್ಷಣೆಯ ಹೊಣೆ ಹೊತ್ತ ಮಾತಾಪಿತರ ನೀತಿಭಕ್ಷಣೆಗೆ ತಂದಿತ್ತರೂ ಒಣ ಭೀತಿಅಗತ್ಯಕ್ಕೆ ತಕ್ಕಂತೆ ಬೇಕಾದುದೆಲ್ಲ ಒದಗಿಸುವ ಸ್ಪೂರ್ತಿದುಡಿತವೆಲ್ಲ ಮಕ್ಕಳಿಗೆ, ಕುಟುಂಬ ಪ್ರೀತಿ ನಿರ್ಲಕ್ಷ್ಯವಿಲ್ಲ ಇಲ್ಲಿ ಪೋಷಣೆ ಗಮನ ಆರೈಕೆಸೂಕ್ತ ವ್ಯವಸ್ಥೆ ನಿತ್ಯ ಒದಗಿಸುವರುಕಲ್ಪಿಸುತ ಸೌಲಭ್ಯಗಳ ಖರ್ಚು ವೆಚ್ಚ ಭರಿಸಿಹಿಂದಿನ ಮುಂದಿನ ನಾಳೆಗಳ ಯೋಜಿಸುವರು ಸವಾಲುಗಳು ಅದೆಷ್ಟೋ ಮನುಷ್ಯ ಬದುಕ ನೋವುಗಳೋಆದರೂ ನಿರ್ಮಿಸುತ ಕನಸ ಮಹಲುಗಳಸಂಪನ್ಮೂಲಗಳ ಕೊರತೆ ಇರಬಹುದು ಅಲ್ಲೆಲ್ಲೋಕುಟುಂಬದ ಸಹಭಾಗಿತ್ಯ ಪ್ರೀತಿ ಬಯಸುವ ಜೀವಗಳು ಹನಿಬಿಂದು

ಹನಿಬಿಂದು ಅವರ ಕವಿತೆ “ಪೋಷಕ ವಾತ್ಸಲ್ಯ” Read Post »

ಅಂಕಣ ಸಂಗಾತಿ

ಗಾದೆ ಮಾತು-ʻಆನಿಗೆ ಆನಿ ಹೋಗತೈತಿ, ಬಾಲಕ್ಕೆ ಯಾಕೆ ಸ್ಯಾಣೇತನ?ʼ‌ ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಗಾದೆ ಸಂಗಾತಿ ಗಾದೆ ವಿಶ್ಲೇಷಣೆ ಶರಣಪ್ಪ ತಳ್ಳಿ ಕುಪ್ಪಿಗುಡ್ಡ ʻಆನಿಗೆ ಆನಿ ಹೋಗತೈತಿ, ಬಾಲಕ್ಕೆ ಯಾಕೆ ಸ್ಯಾಣೇತನ?ʼ‌ ​ಕನ್ನಡ ಜನಪದ ಸಾಹಿತ್ಯವು ಜೀವನದ ದೊಡ್ಡ ಸತ್ಯಗಳನ್ನು ಅತ್ಯಂತ ಸರಳ ರೂಪದಲ್ಲಿ ನಮಗೆ ಉಣಬಡಿಸುತ್ತದೆ. ಇಂತಹ ಮುತ್ತಿನಂತಹ ಗಾದೆಗಳಲ್ಲಿ “ಆನಿಗೆ ಆನಿ ಹೋಗತೈತಿ, ಬಾಲಕ್ಕೆ ಯಾಕೆ ಸ್ಯಾಣೇತನ” ಎಂಬುದು ಪ್ರಮುಖವಾದ ಮಾತು.ನಮ್ಮೆಲ್ಲರಿಗೂ ನಮ್ಮದೇ ಆದ ಒಂದು ಸ್ವಂತಿಕೆಯ ವ್ಯಕ್ತಿತ್ವವಿದೆ.ನಮ್ಮತನ ಎಂಬುದು ನಮ್ಮೊಳಗೆ ಅಡಗಿದ್ದರೂ ಸಹ ಅದನ್ನು ಸದ್ವಿನಿಯೋಗ ಮಾಡಿಕೊಳ್ಳಲಾಗದೆ,ನಾವು ನಾವೇ ಸಣ್ಣದಿರುವ ವಿಷಯವನ್ನು ಬಹು ಗಂಭೀರವಾಗಿ ತೆಗೆದುಕೊಂಡು ಎಲ್ಲೋ ಕಳೆದು ಹೋದೆವು ಎಂದು ಗೋಳಾಡಿಬಿಡುತ್ತೇವೆ.ನಮ್ಮಂತೆ ಪ್ರಾಣಿಗಳು ಬದುಕುತ್ತವೆಯೆ?ಅದಕ್ಕೆ ಎರಡು ಮಾತಿಲ್ಲ.,ಹಠವಿಲ್ಲ,ಭರದಲ್ಲಿ ಬದುಕಬೇಕೆಂಬುದಿಲ್ಲ,ಉಲ್ಟಾ ಪಲ್ಟಾ ಮಾಡಬೇಕೆಂಬುದಿಲ್ಲ,ಎಲ್ಲಾ ಪ್ರಾಣಿಗಳಿಗಿಂತ ಭಿನ್ನವಾಗಿ ಬಾಳಬೇಕೆಂಬುದಿಲ್ಲ.ಅದರ ಇಚ್ಛಾಶಕ್ತಿ ಏನೆಂದರೆ ಹೊಟ್ಟೆ ತುಂಬಿಸಿಕೊಳ್ಳುವುದು ಮಾತ್ರವಾಗಿದೆ.ಹೊಟ್ಟೆ ತುಂಬಿದರೆ ಸಾಕು ಮಲಗುವುದೆ ಅದರ ಕೆಲಸ.ಆದರೆ ಈ ಮನುಷ್ಯರಾದ ನಾವುಗಳು ಪರಿವರ್ತನೆಯನ್ನು ಮರೆತು, ಎಂಥ ಕೆಲಸ ಮಾಡಿಬಿಟ್ಟರು?,ಅದೇಕೆ ಹಾಗೆ ಅವರು ಮಾಡಬೇಕಿತ್ತು?, ಮನೆತನವೆ ಹಾಳು ಮಾಡಲು ಅನ್ಯಾಯ ಮಾಡಿದರು?;ಹೀಗೆಲ್ಲಾ ಬೈದಾಡಿ,ರೇಗಾಡಿಬಿಡುತ್ತೇವೆ.ಅವರ ತಪ್ಪಲ್ಲ.ಮೇಲ್ನೋಟಕ್ಕೆ ಕೆಲವು ನಿರ್ಧಾರಗಳು ನಮಗೆ ಹಾಗೆ ಕಾಣುವುದು ಸತ್ಯ.ಆದರೆ ನಿಜವಾದ ಸಂಗತಿ ಹಾಗಿರುವುದಿಲ್ಲ.ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಕೆಲವೊಮ್ಮೆ ಕೆಲ ಕಹಿ ನಿರ್ಧಾರಗಳನ್ನು ತೆಗೆದುಕೊಂಡು ಬಿಡುತ್ತೇವೆ.ಈ ಗಾದೆಯ ಮಾತಿನಂತೆ,ಇಲ್ಲಿ ‘ಆನಿ’ ಎಂದರೆ ಆನೆ ಅಥವಾ ದೊಡ್ಡ ವಸ್ತು.ಬಹುದೊಡ್ಡದಾದ ಮೊತ್ತ ಎಂದರ್ಥ. ಈ ಗಾದೆಯು ಮನುಷ್ಯನ ಜಿಪುಣತನ, ಆದ್ಯತೆಗಳ ತಪ್ಪು ನಿರ್ಧಾರ ಮತ್ತು ವಿವೇಕಹೀನತೆಯನ್ನು ಮಾರ್ಮಿಕವಾಗಿ ಟೀಕಿಸುತ್ತದೆ. ​ಒಬ್ಬ ವ್ಯಕ್ತಿ ಸಾವಿರಾರು ರೂಪಾಯಿ ಬೆಲೆಬಾಳುವ ಆನೆಯನ್ನೇ ಕಳೆದುಕೊಂಡಾಗ ಅಥವಾ ತನ್ನ ಮನಸಾರೆ ದಾನ ಮಾಡುತನಕ ಸುಮ್ಮನಿದ್ದು, ಕೇವಲ ಒಂದು ಪುಕ್ಕಟೆ ಸಿಗುವ ಅದರ ಕೊರಳಿಗೆ ಕಟ್ಟಿದ ಗಂಟೆಗೆ ಕ್ಯಾತೆ ತೆಗೆಯುತ್ತಾನೆ ಎಂದರೆ ಆತನು ಧರ್ಮದಿಂದ ದಾನ ಮಾಡಿಲ್ಲ. ಅಥವಾ ಅತ್ಯಂತ ಕಡಿಮೆ ಬೆಲೆಯ ಆನೆಯ ‘ಬಾಲ’ದ ವಿಷಯಕ್ಕೆ ಬಂದಾಗ ಜಾಣತನ (ಸ್ಯಾಣೇತನ) ಪ್ರದರ್ಶಿಸುವುದು ಅಥವಾ ಲೆಕ್ಕಾಚಾರ ಮಾಡುವುದು ಎಷ್ಟು ಮೂರ್ಖತನ ಎಂಬುದು ಇದರ ನೇರ ಅರ್ಥ. ಅಂದರೆ, ದೊಡ್ಡ ನಷ್ಟ ಅಥವಾ ದೊಡ್ಡ ನಿರ್ಧಾರಗಳ ಮುಂದೆ ಕ್ಷುಲ್ಲಕ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ವ್ಯರ್ಥ.​ ಹಣಕಾಸು ಮತ್ತು ವ್ಯವಹಾರದ ವಿಷಯ ಬಂದಾಗನಾವು ಜೀವನದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಐಷಾರಾಮಿ ವಸ್ತುಗಳಿಗೆ ಅಥವಾ ಅನಗತ್ಯ ಖರ್ಚುಗಳಿಗೆ ಲಕ್ಕವಿಲ್ಲದಂತೆ ಸುರಿಯುತ್ತೇವೆ. ಆದರೆ ಹಲವು ಬಡ ವ್ಯಾಪಾರಿಗಳು ಮನೆ ಮುಂದೆ ತರಕಾರಿ ಮಾರುವವರ ಜೊತೆ, ಹಣ್ಣು ಹಂಪಲು ಮಾರುವವರ ಬಳಿ ತಕರಾರು,ಆಟಿಕೆ ಸಾಮಾನು ಮಾರುವವರ ಜೊತೆ ಒಂದು,ಎರಡು ರೂಪಾಯಿಗಳಿಗೆ ಚೌಕಾಸಿ ಮಾಡುತ್ತೇವೆ. ಆನೆಯಂತಹ ದೊಡ್ಡ ಖರ್ಚನ್ನು ಒಪ್ಪಿಕೊಂಡ ಮೇಲೆ, ಬಾಲದಂತಹ ಸಣ್ಣ ಮೊತ್ತಕ್ಕೆ ಜಾಣತನ ತೋರಿಸುವುದು ನಮ್ಮ ವ್ಯಕ್ತಿತ್ವದ ಸಣ್ಣತನವನ್ನು ತೋರಿಸುತ್ತದೆ. ದೊಡ್ಡ ಗುರಿಯನ್ನು ಹೊಂದಿದವರು ಸಣ್ಣಪುಟ್ಟ ನಷ್ಟಗಳಿಗೆ ಕುಗ್ಗಬಾರದು.ಸಂಬಂಧ ಮತ್ತು ಜೀವನದ ಮೌಲ್ಯಗಳಲ್ಲೂ ನಮ್ಮ ಮನಸ್ಸು ಹಾಗೆನೆ.ಒಂದು ಸುಂದರವಾದ ಸಂಬಂಧವನ್ನು ಉಳಿಸಿಕೊಳ್ಳಲು ನಾವು ಎಷ್ಟೋ ತ್ಯಾಗಗಳನ್ನು ಮಾಡಿರುತ್ತೇವೆ (ಇದು ಆನೆಯನ್ನು ಕೊಟ್ಟಂತೆ). ಆದರೆ, ಯಾವುದೋ ಒಂದು ಸಣ್ಣ ತಪ್ಪು ಅಥವಾ ಒಂದು ಮಾತಿನ ವಿಷಯಕ್ಕೆ ಜಗಳವಾಡಿ ಆ ಸಂಬಂಧವನ್ನೇ ಮುರಿದುಕೊಳ್ಳುತ್ತೇವೆ (ಇದು ಬಾಲಕ್ಕೆ ಜಾಣತನ ತೋರಿಸಿದಂತೆ). ಇಡೀ ಆನೆಯೇ ಹೋದ ಮೇಲೆ ಬಾಲದ ಬಗ್ಗೆ ಹಠ ಹಿಡಿಯುವುದು ಸಂಬಂಧಗಳಲ್ಲಿ ಬಿರುಕು ತರುತ್ತದೆ ಎಂಬುದ ಅರಿವಿಗೆ ಬರಬೇಕು.​ಸಮಯ ಮತ್ತು ಶ್ರಮದ ಪ್ರತಿಫಲದಲ್ಲೂ ಅಷ್ಟೆ.ಯಾರೋ..ಬಡವರು ಬೆಳಿಗ್ಗೆಯಿಂದ ಸಂಜೆಯವರೆಗೆ  ಹೊಟ್ಟೆಪಾಡಿಗಾಗಿ ಕೆಲಸ ಮಾಡಿರುತ್ತಾರೆ.ಅಂತವರಿಗೆ ತಕ್ಕ ಪ್ರತಿಫಲ ನೀಡುವುದಿಲ್ಲ.ಆದರೆ ಯಾರೋ ಇನ್ನೊಬ್ಬ ಗರ್ಧಿಗಮ್ಮತ್ತಿನಿಂದ, ಜಾಣತನದಿಂದ ಮಾತಾಡಿ ಅರ್ಧಗಂಟೆಯ ಕೆಲಸ ಮಾಡಿದರೆ ಹೆಚ್ಚು ಹಣ ನೀಡಿ ಬಿಡುತ್ತಾರೆ. ಜಿಪುಣತನ ಇರಬಾರದು ಅಂತಲ್ಲ.ಇರಬೇಕು ನಿಜ.ಎಷ್ಟಿರಬಾರದೆಂದರೆ  ದೀನತೆಯನ್ನು ಮರೆತು ಹೋಗುವಷ್ಟಿರಬಾರದು.ಒಂದು ದೊಡ್ಡ ಕೆಲಸವನ್ನು ಮಾಡುವಾಗ ಅಥವಾ ಸಾಧನೆಯ ಹಾದಿಯಲ್ಲಿರುವಾಗ ನಮಗೆ ದೊಡ್ಡ ಸವಾಲುಗಳು ಎದುರಾಗುವುದು ಸರ್ವೆ ಸಾಮಾನ್ಯ.ಆ ಸವಾಲುಗಳನ್ನು ಎದುರಿಸಿ ಗೆದ್ದ ನಂತರ, ತೀರಾ ಸಣ್ಣ ವಿಷಯಗಳಲ್ಲಿ ಸೋಲು ಒಪ್ಪಿಕೊಳ್ಳುವುದು ಅಥವಾ ಅಲ್ಲಿ ಜಿಪುಣತನ ತೋರುವುದು ಸರಿಯಲ್ಲ. ಮನೆ ಕಟ್ಟಲು ಲಕ್ಷಾಂತರ ಹಣ ಖರ್ಚು ಮಾಡಿ,ಗೃಹ ಪ್ರವೇಶದ ದಿನ ಉಂಡ ಎಲೆಗಳ ತೆಗೆದು,ಅಂಗಳದಲ್ಲಿ ಚೆಲ್ಲಿದ ಅನ್ನವನ್ನು ಬಳಿದು ಹಾಕುವವರ ಜೊತೆ ಅಷ್ಟೇ ತಗೊ…ಇಷ್ಟೆ ತಗೋ..ಎನ್ನಬಾರದು. ಕೇವಲ ಕೆಲವು ರೂಪಾಯಿಗಳ ಉಳಿತಾಯಕ್ಕಾಗಿ ಅವರನ್ನು ಬೈದಾಡುವುದು ಸಭ್ಯತೆಯಾಗಲಾರದು.ಶುಭವಾಗಲಿ ಎನ್ನದೆ ಹಾಳಾಗಿ ಹೋಗು ಎಂದು ಬೈದು ಹೋಗುತ್ತಾರಷ್ಟೆ.​ಇವತ್ತಿನ ದಿನ ನಾವು ದೃಶ್ಯ ಮಾಧ್ಯಮಗಳಲ್ಲಿ,ಸಾಮಾಜಿಕ ಜಾಲತಾಣದಲ್ಲಿ,ಕಣ್ಣೆದುರಿನ ​ಸಮಾಜದಲ್ಲಿ ನಿತ್ಯವೂ ನೋಡುತ್ತೇವೆ, ದೊಡ್ಡ ದೊಡ್ಡ ಹಗರಣಗಳು ರಾಜಕೀಯದಲ್ಲಿ ನಡೆದಾಗ ಮೌನವಾಗಿರುವ ವ್ಯವಸ್ಥೆ, ಒಬ್ಬ ಸಣ್ಣ ನೌಕರ ಸಾಮಾನ್ಯ ಮನುಷ್ಯ ಸಣ್ಣ ತಪ್ಪು ಮಾಡಿದಾಗ ಕಾನೂನಿನ ಎಲ್ಲಾ ಪಟ್ಟುಗಳನ್ನು ಬಳಸಿ ಆತನನ್ನು ಶಿಕ್ಷಿಸಲು ಇವತ್ತು ಮೋಬೈಲ್ ನಲ್ಲಿ ದೃಶ್ಯವನ್ನು ಸೆರೆಹಿಡಿದು ಅಧಿಕಾರಿಗಳಿಗೆ ತೋರಿಸಿ  ಆತನಿಗೆ ಶೀಕ್ಷೆ  ಕೊಡಿಸಲು  ಮುಂದಾಗುತ್ತಾರೆ.ಆದರೆ ಅಧಿಕಾರಿ ದೊಡ್ಡ ಹಡಗವನ್ನೆ ನುಂಗಿದ್ದು ಗೊತ್ತಾಗುವುದಿಲ್ಲ.ಇದು ಇವತ್ತಿನ ನಮ್ಮ ವ್ಯವಸ್ಥೆ. “ಆನೆ ಹೋದರೂ ಪರವಾಗಿಲ್ಲ, ಬಾಲ ಮಾತ್ರ ಸಿಗಬೇಕು” ಎನ್ನುವ ವಿಪರ್ಯಾಸದಂತಿದೆ. ನಮ್ಮ ಜಾಣತನವು ದೊಡ್ಡ ಬದಲಾವಣೆಗಳಿಗೆ ಬಳಕೆಯಾಗಬೇಕೇ ಹೊರತು, ಸಣ್ಣತನದ ಪ್ರದರ್ಶನಕ್ಕಲ್ಲ.​​”ಸಣ್ಣ ವಿಷಯಗಳ ಬಗ್ಗೆ ಅತಿಯಾಗಿ ಯೋಚಿಸುವವರು ದೊಡ್ಡ ವಿಷಯಗಳಲ್ಲಿ ಸೋಲುತ್ತಾರೆ.” ಆನೆಯನ್ನು ನಿರ್ವಹಿಸುವ ಶಕ್ತಿ ಇರುವವನಿಗೆ ಬಾಲದ ಬಗ್ಗೆ ಚಿಂತೆ ಇರಬಾರದು. ನಮ್ಮ ಬದುಕು ಉದಾತ್ತವಾಗಿರಬೇಕು. ದೊಡ್ಡ ಗುರಿಯನ್ನು ತಲುಪುವ ಹಾದಿಯಲ್ಲಿ ಸಣ್ಣಪುಟ್ಟ ಅಡೆತಡೆಗಳು ಅಥವಾ ನಷ್ಟಗಳು ಸಹಜ. ಅವುಗಳನ್ನು ನಿರ್ಲಕ್ಷಿಸಿ ಮುಂದೆ ಸಾಗುವುದೇ ನಿಜವಾದ ‘ಸ್ಯಾಣೇತನ’ (ಜಾಣತನ).​ಕೇವಲ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಬಾಲಕ್ಕೆ ಗಂಟು ಬೀಳುವ ಬದಲು, ಆನೆಯಂತಹ ವಿಶಾಲ ಮನೋಭಾವವನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ. ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಗಾದೆ ಮಾತು-ʻಆನಿಗೆ ಆನಿ ಹೋಗತೈತಿ, ಬಾಲಕ್ಕೆ ಯಾಕೆ ಸ್ಯಾಣೇತನ?ʼ‌ ಶರಣಪ್ಪ ತಳ್ಳಿ ಕುಪ್ಪಿಗುಡ್ಡ Read Post »

ಕಾವ್ಯಯಾನ

ಪ್ರೊ .ರಾಜೇಶ್ವರಿ ಶೀಲವಂತ ಪುಣೆ ಅವರ ʻಅಡುಗೆʼ

ಕಾವ್ಯ ಸಂಗಾತಿ ಪ್ರೊ .ರಾಜೇಶ್ವರಿ ಶೀಲವಂತ ಪುಣೆ ʻಅಡುಗೆʼ ಏನೇ ಏನಿವತ್ತು ಊಟಕ್ಕೆ  ಊಟಕ್ಕೇನಮ್ಮಎಲ್ಲರ ಮನೆಯ  ಸಹಜ ಪ್ರಶ್ನೆಅದಕ್ಕವಳದು ಹರ ಸಾಹಸನಿನ್ನೆಯದು ಇಂದಾಗೋಲ್ಲಪ್ರತಿದಿನವೂ ಹೊಸದಿರಬೇಕಲ್ಲಉಪ್ಪು ಖಾರ ಹದವಾಗಿರಲುಅವಳ ಪರಿವೆಯಿಲ್ಲಅದು  ತಪ್ಪಿದರೆ ಅವಳಿಗೇನೆ  ಎಲ್ಲಆ ಸಿಟ್ಟಿನಲ್ಲಿ  ಮಾಡೋಲ್ಲಅವಳು ರೊಟ್ಟಿಬಡೀತಾಳೆ ಸಿಟ್ಟಿನಲ್ಲಿ ತಟ್ಟಿ ತಟ್ಟಿಸೇರಿಸೋಲ್ಲ ಪಲ್ಯಕ್ಕೆ ಉಪ್ಪು ಖಾರಸುರೀತಾಳೆ ಭರ ಭರ ಕೋಪದಬ್ಬರ  ಎಲ್ಲರೂ ಹೋಟಲ ಮೊರೆರುಚಿಯಿರದ  ತಿಂಡಿಗೆ  ಟಿಪ್ಸ ಬೇರೆ  ನೀ ಮಾಡಿದ  ಚಹಾ ನಿನ್ನಷ್ಟೇ ಸಿಹಿಚಪಾತಿ ನಿನ್ನತರಹ ಮೃದುನಿನ್ನ ಕೈ ರುಚಿ ಜೇನಿನಂತೆಅಂತ   ನೀವೂಮ್ಮೆ ಪಿಸುಗುಟ್ಟಿದರದೆ ಅವಳಿಗೆ ಹೆಮ್ಮೆ  ಹೊಸ ಹುಮ್ಮಸ್ಸಿನೊಂದಿಗೆ ಪ್ರವೇಶಿಸುವಳವಳುಅಡುಗೆ ಮನೆಯ ಮತ್ತೊಮ್ಮೆಹೊತ್ತು ನೋಡಿ  ಈ ಎಲ್ಲವನುಒಂದು ದಿನವಾದರೂಮರುದಿನವೇ ತೇನಾಲಿ ರಾಮಕೃಷ್ಣನ ಬೆಕ್ಕಿನಂತೆ  ನೀವು ಪರಾರಿ                ನಿಟ್ಟುಸಿರಿನೊಂದಿಗೆಕೊನೆಗಂದೆಅಬ್ಬಾ!!  ನೀನೆ ಸರಿಸಾಟಿ ಇದಕೆಲ್ಲ. ಪ್ರೊ .ರಾಜೇಶ್ವರಿ ಶೀಲವಂತ ಪುಣೆ

ಪ್ರೊ .ರಾಜೇಶ್ವರಿ ಶೀಲವಂತ ಪುಣೆ ಅವರ ʻಅಡುಗೆʼ Read Post »

ಕಾವ್ಯಯಾನ

“ವೇದಿಕೆಯ ಮೆಟ್ಟಿಲುಗಳು”ಡೋ ನಾ ವೆಂಕಟೇಶ

ಕಾವ್ಯ ಸಂಗಾತಿ ವೇದಿಕೆಯ ಮೆಟ್ಟಿಲುಗಳು ಡೋ ನಾ ವೆಂಕಟೇಶ್ ಆಗಿರಲಿ ವೇದಿಕೆಗಳುಪ್ರಬುದ್ಧ ಸಂವೇದನೆಗಳಕಿಚ್ಚುಆಗದಿರಲಿ ವೇದಿಕೆಗಳು ಅಬದ್ಧ ಕೊರೆತಗಳ ಕಾಳ್ಗಿಚ್ಚು ವೇದಿಕೆಯಲಿ ವಿಜೃಂಭಿಸಲಿಅಗಣಿತ ತಾರೆಗಳುದೇದೀಪ್ಯಮಾನ ಲಹರಿಗಳುಅನನ್ಯ ಸಾಂಗತ್ಯದ ಗೀತೆಗಳು ವೇದಿಕೆಗಳೊಳಗೆ ಇರಲಿವಿಚಾರವಂತನಿಗೆ ವಿನಯಅನಾಚಾರಿಗೆ ದುರ್ದಾನಮಾನವಂತನಿಗೆ ಸನ್ಮಾನ. ಹೇಳದೆಯೇ ಕೇಳಿಸಿಕೊಳ್ಳುವ ಶ್ರೋತೃಗಳುಶೋಕ ಗೀತೆಯಿಲ್ಲದೆಯೇ ಮಿಡಿಯುವ ಕಣ್ಣೀರಧಾರೆಗಳುಧ್ವನಿವರ್ಧಕವಿಲ್ಲದೇ ಮಾರ್ದನಿಸುವ ಅಮೃತ ವಚನಗಳು. ಎಲ್ಲಾಜೀವನದ ಅನುಭಾವ ಮೆಟ್ಟಿಲುಗಳು! ಡೋ ನಾ ವೆಂಕಟೇಶ

“ವೇದಿಕೆಯ ಮೆಟ್ಟಿಲುಗಳು”ಡೋ ನಾ ವೆಂಕಟೇಶ Read Post »

ಇತರೆ

“ಸಾವಿನಲ್ಲೂ ಸಾರ್ಥಕತೆ ಮೆರೆದ…ನೀರಜಾ ಭಾನೋಟ್.” ವೀಣಾ ಹೇಮಂತ್‌ ಗೌಡ ಪಾಟೀಲ್

ವ್ಯಕ್ತಿ ಸಂಗಾತಿ “ಸಾವಿನಲ್ಲೂ ಸಾರ್ಥಕತೆ ಮೆರೆದ… ನೀರಜಾ ಭಾನೋಟ್.” ವೀಣಾ ಹೇಮಂತ್‌ ಗೌಡ ಪಾಟೀಲ್ ಸಾವಿನಲ್ಲೂ ಸಾರ್ಥಕತೆ ಮೆರೆದ…ನೀರಜಾ ಭಾನೋಟ್. ಕೇವಲ 22 ವರ್ಷದ ಹರಯದಲ್ಲಿ ಆಕೆ ತನ್ನ ಬದುಕಿನಲ್ಲಿ ಮೊತ್ತ ಮೊದಲ ಬಾರಿಗೆ ಅಂತರಾಷ್ಟ್ರೀಯ ವಿಮಾನ ಯಾನ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದಳು. ಆ ದಿನ ಸಪ್ಟಂಬರ್ 5 1986. ತನ್ನ ಹುಟ್ಟು ಹಬ್ಬಕ್ಕೆ ಎರಡು ದಿನ ಮೊದಲು ಫ್ರಾಂಕ್ ಫರ್ಟ್ ಮೂಲಕವಾಗಿ ನ್ಯೂಯಾರ್ಕ್ ಗೆ ತೆರಳುತ್ತಿದ್ದ ಅಂತರಾಷ್ಟ್ರೀಯ ವಿಮಾನ ಪ್ಯಾನ್ ಆ್ಯಮ್  ವಿಮಾನ ಸಂಖ್ಯೆ 73  ಎಂಬ ಹೆಸರಿನ ಆ ವಿಮಾನವು ಕರಾಚಿಯಲ್ಲಿ ನಸುಕಿನ ಜಾವ ಐದು ಗಂಟೆಯ ಸುಮಾರಿಗೆ  ಇಂಧನವನ್ನು ತುಂಬಿಸಲು ರನ್‌ ವೇಯಲ್ಲಿ ನಿಂತಿತ್ತು. ಆಗ ಸೆಕ್ಯೂರಿಟಿ ಗಾರ್ಡ್ಗಳಂತೆ ವೇಷ ಧರಿಸಿದ ನಾಲ್ವರು ಯುವಕರು ವಿಮಾನವನ್ನು ಪ್ರವೇಶಿಸಿದರು  ಒಳ ಬಂದ ನಾಲ್ಕು ಜನ ಯುವಕರು ಜೋರಾಗಿ ಆರ್ಭಟ ಮಾಡಿದಾಗ ಪ್ರಯಾಣಿಕರೆಲ್ಲರೂ ಭಯದಿಂದ ಕಿರುಚಿದರು. ವಿಮಾನದ ಸಿಬ್ಬಂದಿಗಳು ಕೂಡ ನಿಂತಲ್ಲಿಯೇ ತಣ್ಣಗಾದರೂ…. ಆಕೆ ಮಾತ್ರ ಧೈರ್ಯದಿಂದ ಸನ್ನಿವೇಶವನ್ನು ಎದುರಿಸುವ ಮನಸ್ಥಿತಿಯನ್ನು ಹೊಂದಿದ್ದಳು.ವಿಮಾನದ ಮುಖ್ಯ ಫ್ಲೈಟ್ ಅಟೆಂಡೆಂಟಾಗಿ ಕಾರ್ಯನಿರ್ವಹಿಸುತ್ತಿದ್ದ ಕೇವಲ 22 ರ ಹರೆಯದ ಆಕೆ ತನ್ನ ಬದುಕಿನಲ್ಲಿ ಅತಿ ಮುಖ್ಯ ಮಾರ್ಗವನ್ನು ಪ್ರಥಮ ಬಾರಿಗೆ ಪ್ರಯಾಣಿಸಲಿದ್ದಳು…. ಆಕೆಯೇ ನೀರಜಾ ಭಾನೋಟ್. ವಿಮಾನವನ್ನು ಅಪಹರಿಸಿದ ಹೈಜಾಕರ್ ಗಳನ್ನು ನೋಡಿಯೇ ವಿಮಾನದ ಪ್ರಯಾಣಿಕರು ಗಾಬರಿಗೊಂಡರೆ ನೀರಜಾ ಮಾತ್ರ ಕೊಂಚವೂ ಧೃತಿಗೆಡದೆ ನೂರಾರು ಜನರ ಜೀವವನ್ನು ಉಳಿಸಿದಳು. ಅತ್ಯಂತ ಸೂಕ್ಷ್ಮವಾಗಿ ( ಅದರಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರಿಗೆ ಹಾಗೂ ಸಿಬ್ಬಂದಿಗಳಿಗೆ ಹೈಜಾಕರ್ ಗಳಿಗೂ ಕೂಡ ಗೊತ್ತಾಗದಷ್ಟು )ಆಕೆ ಹೈಜಾಕರ್ ಗಳ ಕೋಡ್ ಸಂಖ್ಯೆಯನ್ನು ಇಂಟರ್ಕಾಂನಲ್ಲಿ ತನ್ನ ಮೇಲಧಿಕಾರಿಗಳಿಗೆ ಕಳುಹಿಸಿದ್ದಳು  ಕಾಕ್ ಪಿಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ರಿವ್ ಸಿಬ್ಬಂದಿಯವರು ಅದರಲ್ಲೂ ವಿಶೇಷವಾಗಿ ಪೈಲೆಟ್ ಗಳು ತಮ್ಮ ತಲೆಯ ಮೇಲಿರುವ ಓವರ್ ಹೆಡ್ ಹ್ಯಾಚ್ಗಳ ಮೂಲಕ ಅಲ್ಲಿಂದ ತಪ್ಪಿಸಿಕೊಂಡು ಹೊರಟು ಹೋದರು…. ಸಾಧಾರಣವಾಗಿ ಹೈಜಾಕರ್ ಗಳ ಕೈಯಲ್ಲಿ ಪೈಲೆಟ್ ಗಳು ಸಿಕ್ಕಾಗ ಹೈಜಾಕರಗಳು ಅವರನ್ನು ವಿಮಾನವನ್ನು ತಮ್ಮಿಷ್ಟ ಬಂದ ಜಾಗಕ್ಕೆ ಹಾರಿಸಲು ಒತ್ತಾಯಿಸುತ್ತಾರೆ… ಅವರ ಈ ತಂತ್ರವನ್ನು ತಡೆ ಹಿಡಿಯಲು ಹಾಗೂ ವಿಮಾನವು ನೆಲದಲ್ಲಿಯೇ ಇರುವಂತೆ ಮಾಡಲು ವಿಮಾನಯಾನ ಸಿಬ್ಬಂದಿಗಳಿಗೆ ಈ ಕುರಿತು ತರಬೇತಿ ನೀಡಲಾಗಿರುತ್ತದೆ…. ಈಗಾಗಲೇ ಪ್ಯಾನ 73 ಎಂಬ ಹೆಸರಿನ ಆ ವಿಮಾನವನ್ನು ಹೈಜಾಕ್ ಮಾಡುವ ತಂತ್ರ ತುಸುಮಟ್ಟಿಗೆ ವಿಫಲಗೊಂಡಿತ್ತು ಆದರೆ 379 ಜನ ಪ್ರಯಾಣಿಕರು ಹಾಗೂ ಇನ್ನುಳಿದ ಗಗನಯಾನ ಸಿಬ್ಬಂದಿಗಳು ಉಗ್ರರ ಕೈಯಲ್ಲಿ ಸಿಲುಕಿದ್ದರು. ಮುಂದಿನ ಸುಮಾರು 17 ಗಂಟೆಗಳ ಕಾಲ ನೀರಜಾ ಉಗ್ರಗಾಮಿಗಳು ಹಾಗೂ ಮುಗ್ಧ ಪ್ರಯಾಣಿಕರ ನಡುವೆ ತಡೆಗೋಡೆಯಾಗಿ ನಿಂತುಕೊಂಡರು. ಆ ಎಲ್ಲ ಹೈಜಾಕರ್ ಗಳು ಅಬು ನಿಡಲ್ ಆರ್ಗನೈಜೇಷನ್ ಎಂಬ ಪ್ಯಾಲಸ್ಟನಿಯನ್ ಮಿಲಿಟರಿ ಗುಂಪಾಗಿತ್ತು. ಅವರ ಪ್ರಮುಖ ಗುರಿ ಅಮೆರಿಕದ ಪ್ರಜೆಗಳಾಗಿದ್ದರು…. ಎಲ್ಲ ಪ್ರಜೆಗಳ ಪಾಸ್ ಪೋರ್ಟ್ ಗಳನ್ನು ಅವರು ಪರೀಕ್ಷಿಸುತ್ತಿದ್ದರು.  ನೀರಜಾ ಮತ್ತು ಆಕೆಯ ಸಹೋದ್ಯೋಗಿಗಳು ಅತ್ಯಂತ ಸೂಕ್ಷ್ಮವಾಗಿ ಅಮೆರಿಕದ ಪಾಸ್ಪೋರ್ಟ್ ಹೊಂದಿರುವವರ ಪಾಸ್ಪೋರ್ಟ್ ಗಳನ್ನು ಸಂಗ್ರಹಿಸಿ ಸೀಟುಗಳ ಕೆಳಗೆ ಬಚ್ಚಿಡಲು ಆರಂಭಿಸಿದರು. ಮತ್ತೆ ಕೆಲವರ ಪಾಸ್ಪೋರ್ಟ್ ಗಳನ್ನು ಕಸದ ಬುಟ್ಟಿಗಳ ಹಿಂದೆಯೂ,ತಲೆಯ ಮೇಲಿರುವ ಬ್ಯಾಗುಗಳನ್ನು ಇಡುವ ಕಂಪಾರ್ಟ್ಮೆಂಟುಗಳ ನಡುವೆ  ಅಡಗಿಸಿ ಇಟ್ಟರು. ಮತ್ತೆ ಕೆಲ ಪಾಸ್ಪೋರ್ಟ್ ಗಳನ್ನು ಆಕೆ ಟಾಯ್ಲೆಟ್ ನ ನೀರಿನಲ್ಲಿ ಫ್ಲಶ್ ಮಾಡಿ ಇನ್ನಿಲ್ಲದಂತೆ ಮಾಡಿದಳು. ಅತ್ಯಂತ ಚಾಣಾಕ್ಷತೆ ಹಾಗೂ ಶಾಂತ ಮನಸ್ಥಿತಿಯಿಂದ ಆಕೆ ಅಮೆರಿಕದ ನಿವಾಸಿಗಳನ್ನು ಗುರುತಿಸಿ ಅವರನ್ನು ಸೂಕ್ಷ್ಮವಾಗಿ ಎಚ್ಚರಿಸಿದಳು. ಇಡೀ ವಿಮಾನದಲ್ಲಿರುವ ಯಾವುದೇ ಪ್ರಯಾಣಿಕರು ಗಾಬರಿಗೊಳ್ಳದೆ ಇರುವಂತೆ ಅವರನ್ನು ಪ್ರಶಾಂತವಾಗಿ ಇರಿಸಲು ಆಕೆ ಪ್ರಯತ್ನಿಸಿದಳು  ಅಳುವ ಚಿಕ್ಕ ಮಕ್ಕಳನ್ನು ಸಮಾಧಾನಿಸಿದ ಆಕೆ ಹಿರಿಯರಿಗೆ ಏನೂ ಆಗುವುದಿಲ್ಲ, ಧೈರ್ಯದಿಂದಿರಿ ಎಂದು ಭರವಸೆ ನೀಡಿದಳು. ಹಿಂದಿ, ಇಂಗ್ಲಿಷ್, ಪಂಜಾಬಿ ಭಾಷೆಗಳಲ್ಲಿ ಪ್ರಬುದ್ಧತೆಯನ್ನು ಹೊಂದಿದ್ದ ಆಕೆ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರೊಂದಿಗೆ ಲಘು ಸಂಭಾಷಣೆಯಲ್ಲಿ ನಿರತಳಾಗಿ ಅವರ ಭಯವನ್ನು ಹೋಗಲಾಡಿಸಲು ಪ್ರಯತ್ನಿಸಿದಳು. ಆಕಸ್ಮಿಕದಲ್ಲಿ ಬದುಕುಳಿದ ನೂರಾರು ಜನ ಪ್ರಯಾಣಿಕರು ಆಕೆ ಅತ್ಯಂತ ಚಿಕ್ಕ ಹುಡುಗಿಯಾಗಿದ್ದರೂ ಕೂಡ ಹೆದರಿದ್ದರೂ ಕೂಡ ತನ್ನ ಹೆದರಿಕೆಯನ್ನು ಯಾರಿಗೂ ತೋರಿಸದೆ ನಮ್ಮಂತಹ ನೂರಾರು ಜನರಿಗೆ ಧೈರ್ಯ ತುಂಬಿದ ಕಾರಣವೇ ನಾವು ನಮ್ಮ ದುಃಖವನ್ನು ಹೊರ ಹಾಕದೆ ಇರಲು ಸಾಧ್ಯವಾಯಿತು ಎಂದು ಹೇಳಿದರು ಗಂಟೆಗಳ ಕಾಲ ಹೈಜಾಕರ್ಸ್ ಮತ್ತು ವಾಯುಯಾನ ಸಂಸ್ಥೆಯ ನಡುವೆ ಮಾತುಕತೆ, ಸಂಧಾನ ಪ್ರಕ್ರಿಯೆ ನಡೆದು ಒಂದು ಹಂತದಲ್ಲಿ ನಿಲುಗಡೆಯಾಯಿತು. ಇದು ಹೈಜಾಕರ್ಸ್ ಗಳಲ್ಲಿ ತಳಮಳವನ್ನು ಉಂಟು ಮಾಡಿತು ಇದೇ ಸಮಯದಲ್ಲಿ ವಿಮಾನದ ವಿದ್ಯುತ್ ಸಂಪರ್ಕ ಕಡಿತಗೊಳ್ಳುವ ಪರಿಸ್ಥಿತಿ ಒದಗಿತು. ಕ್ಯಾಬಿನ್ ಲೈಟ್ ಗಳು ಪಕ ಪಕ ಮಾಡಲಾರಂಭಿಸಿ ಅಂತಿಮವಾಗಿ ಎಲ್ಲರನ್ನು ಕತ್ತಲೆಗೆ ದೂಡಿ ಆರಿ ಹೋದವು. ಹೀಗೆಯೇ 17 ಗಂಟೆಗಳು ಕಳೆದು ಹೋದವು. ಇದು ಹೈಜಾಕರ್ಸಗಳಲ್ಲಿ ಸಿಟ್ಟು ಮತ್ತು ಆತಂಕವನ್ನು ಹೆಚ್ಚಿಸಿ ಆಗ ಅವರು ಸರ್ಕಾರವನ್ನು ಹೆದರಿಸಲು ಗನ್ ಫೈಯರ್ ಆರಂಭಿಸಿದರು   ಜನನಿಬಿಡವಾದ ಕ್ಯಾಬಿನ್ ನಲ್ಲಿ ಒಂದೊಮ್ಮೆ ಗುಂಡಿನ ಮೊರೆತ ಶುರುವಾದಾಗ ಆ ಗಾಢವಾದ ಕತ್ತಲಿನಲ್ಲಿ ಭಯದ ಕೇಕೆ ಹಾಕುತ್ತ ಪ್ರಯಾಣಿಕರು ಸೀಟುಗಳ ಅಡಿಯಲ್ಲಿ ಕಿರುಚುತ್ತಾ ಅಡಗಿಕೊಳ್ಳಲು ಪ್ರಯತ್ನಿಸಿದರು. ಇದೇ ಸಮಯದಲ್ಲಿ ನೀರಜಾ ಅತ್ಯಂತ ಚಾಣಾಕ್ಷತೆಯಿಂದ ಓಡಿ ಹೋಗಿ ವಿಮಾನದ ತುರ್ತು ನಿರ್ಗಮನದ ಬಾಗಿಲನ್ನು ತೆರೆಯಲು ಪ್ರಯತ್ನಿಸಿದಳು. ತೆರೆಯಲು ಅಪಾರ ಶಕ್ತಿಯ ಅವಶ್ಯಕತೆ ಇದ್ದು ಆಕೆ ಪ್ರಯಾಣಿಕರನ್ನು ಬಾಗಿಲಿನ ಕಡೆ ಜೋರಾಗಿ ತಳ್ಳುತ್ತಾ ಆ ಬಾಗಿಲಿನ ಮೂಲಕ ಹಾರಿ ಓಡಿ ತಪ್ಪಿಸಿಕೊಳ್ಳಲು ಕೂಗಿ ಹೇಳಿದಳು    ಜೀವಭಯದಿಂದ ತತ್ತರಿಸಿದ ಜನರು ತುರ್ತು ನಿರ್ಗಮದ ಬಾಗಿಲಿನ ಮೂಲಕ ರನ್ ವೇ ಮೂಲಕ ಇಳಿದು ಓಡಿ ಹೋಗಲು ಪ್ರಯತ್ನಿಸಿದರು ಮತ್ತೆ ಕೆಲವರು ಬಿದ್ದು ಗಾಯಗೊಂಡರು. ಕೆಲವರಿಗೆ ಗುಂಡಿನ ಪೆಟ್ಟು ತಗುಲಿತ್ತು.. ಆದರೂ ಕೂಡ ಅವರೆಲ್ಲರೂ ಅಲ್ಲಿಂದ ತಪ್ಪಿಸಿಕೊಂಡಿದ್ದರು.ಇನ್ನೇನು ಎಲ್ಲರೂ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ ಎಂಬ ಹೊತ್ತಿಗೆ ನೀರಜಾಳ ಕಣ್ಣಿಗೆ ಮೂರು ಜನ ಪುಟ್ಟ ಮಕ್ಕಳು ತಮ್ಮ ಸೀಟಿಗೆ ಅಂಟಿಕೊಂಡು ಕುಳಿತು ಭಯದಿಂದ ತತ್ತರಿಸುತ್ತಿರುವುದು ಕಂಡು ಬಂತು. ಒಂದು ಕ್ಷಣ ಕೂಡ ಅಳುಕದೆ ಆಕೆ ಆ ಮಕ್ಕಳ ಬಳಿಗೆ ಓಡಿ ಹೋಗಿ ಅವರನ್ನು ಬಳಸಿ ಎತ್ತಿಕೊಂಡು ತುರ್ತು ನಿರ್ಗಮನದ ಬಾಗಿಲ ಬಳಿ ಧಾವಿಸಿ ಅವರನ್ನು ಎತ್ತಿ ಹೊರಗೆ ಹಾಕಿದಳು. ಇದನ್ನು ನೋಡುತ್ತಿದ್ದ ಉಗ್ರರು ಆ ಮಕ್ಕಳತ್ತ ಹಾರಿಸಿದ ಗುಂಡುಗಳು ನೀರಜಾಗೆ ತಗುಲಿದವು. ಆಕೆಯ ಪುಟ್ಟ ದೇಹ ರಕ್ತಸಿಕ್ತವಾಯಿತು.ಆಸ್ಪತ್ರೆಗೆ ತಲುಪುವ ಮುನ್ನವೇ 22 ವರ್ಷ 11 ತಿಂಗಳು 29 ದಿನಗಳ ಇನ್ನೇನು ಮುಂದಿನ ಎರಡು ದಿನಗಳಲ್ಲಿ ತನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಲಿದ್ದ ಆಕೆ ವಿಪರೀತ ರಕ್ತಸ್ರಾವದಿಂದ ಅಸು ನೀಗಿದಳು. . 20 ಜನರು ಆ ದುರ್ಘಟನೆಯಲ್ಲಿ ಮರಣ ಹೊಂದಿದರೆ ಒಟ್ಟು 359 ಪ್ರಯಾಣಿಕರು ರಕ್ಷಿಸಲ್ಪಟ್ಟರು. ದುರ್ಘಟನೆಯಲ್ಲಿ ಮರಣ ಹೊಂದಿದ ಹಾಗೂ ಬದುಕುಳಿದವರ ಸಂಖ್ಯೆಯಲ್ಲಿನ ಅಗಾಧ ವ್ಯತ್ಯಾಸದ ಅನುಪಾತವನ್ನು ನೋಡಿ ಜನ ದಿಗ್ಭ್ರಮೆಗೊಂಡರು…. ಈ ಸಮಯದಲ್ಲಿ ಎಲ್ಲರಿಗೂ ಅರಿವಾಗಿದ್ದು ನೀರಜಾಳ ಸಮಯೋಚಿತ ಆಲೋಚನೆಗಳು ಹಾಗೂ ಅವುಗಳನ್ನು ಕಾರ್ಯರೂಪಕ್ಕೆ ತರುವಲ್ಲಿನ ಪ್ರಯತ್ನ. ಅಂತಿಮ ಘಟ್ಟದಲ್ಲಿ ಪೈಲೆಟ್ ಗಳಿಗೆ ಎಚ್ಚರಿಕೆ ನೀಡಿ ಅವರು ವಿಮಾನದಿಂದ ತಪ್ಪಿಸಿಕೊಂಡು ಹೋಗುವಂತೆ ಮಾಡುವ ಮೂಲಕ ಆಕೆ ಘಟನೆಗೆ ಅತಿ ದೊಡ್ಡ ತಿರುವನ್ನು ನೀಡಿದಳು. ಅತಿ ದೊಡ್ಡ ಹತ್ಯಾಕಾಂಡವಾಗಬೇಕಿದ್ದ ದುರ್ಘಟನೆಯು ಆಕಸ್ಮಿಕ ದುರಂತದಲ್ಲಿ ಪರ್ಯವಸಾನವಾಯಿತು. ಭಾರತ ಮಾತ್ರವಲ್ಲದೆ ಪಾಕಿಸ್ತಾನ ಮತ್ತು ಅಮೆರಿಕದಲ್ಲಿ ಆಕೆಗೆ ಮರಣೋತ್ತರ ಗೌರವವನ್ನು ಸಲ್ಲಿಸಲಾಯಿತು.ಭಾರತ ದೇಶವು ಶಾಂತಿ ಸಮಯದಲ್ಲಿ ನೀಡುವ ಅತ್ಯುನ್ನತ ಗೌರವ ಪ್ರಶಸ್ತಿಯಾದ ಅಶೋಕ ಚಕ್ರ ಪ್ರಶಸ್ತಿಯನ್ನು ಮರಣೋತ್ತರವಾಗಿ ಆಕೆಗೆ ನೀಡಿ ಗೌರವಿಸಿದ್ದು, ನೀರಜಾ ಈ ಗೌರವ ಪಡೆದ ಅತ್ಯಂತ ಚಿಕ್ಕ ವಯಸ್ಸಿನ ವ್ಯಕ್ತಿ ಹಾಗೂ ಮೊದಲ ಮಹಿಳಾ ನಾಗರಿಕಳಾಗಿದ್ದಾಳೆ. ವಿಶ್ವಸಂಸ್ಥೆಯು ಆಕೆಗೆ ವಿಮಾನಯಾನ ಸುರಕ್ಷಾ ಫೌಂಡೇಶನ್ ನಾಯಕತ್ವದ ಪ್ರಶಸ್ತಿಯನ್ನು ನೀಡಿ ( ಫ್ಲೈಟ್ ಸೇಫ್ಟಿ ಫೌಂಡೇಶನ್ ಹೀರೋಯಿಸಂ ಅವಾರ್ಡ್ )ಗೌರವಿಸಿದೆ. ಇದರ ಜೊತೆಗೆ ಜಸ್ಟಿಸ್ ಫಾರ್ ಕ್ರೈಂ ಅವಾರ್ಡ್ ಪ್ರಶಸ್ತಿಯನ್ನು ನೀಡಿದೆ. ಪಾಕಿಸ್ತಾನ ಸರ್ಕಾರವು ಆಕೆಗೆ ತಂಗ ಯೇ ಇನ್ಸಾನಿಯತ್ ( ಅವಾರ್ಡ್ ಫಾರ್ ಹುಮ್ಯಾನಿಟಿ ) ಪ್ರಶಸ್ತಿಯನ್ನು ನೀಡಿ ಗೌರವಿಸಿದೆ ಆದರೆ ಇದೆಲ್ಲಕ್ಕಿಂತ ಮಿಗಿಲಾಗಿ ಆ ದಿನದ ದುರ್ಘಟನೆಯಲ್ಲಿ ರಕ್ಷಿಸಲ್ಪಟ್ಟ ಪ್ರಯಾಣಿಕರಿಂದ ಆಕೆಗೆ ದೊರೆತಿದೆ. ಅಮೆರಿಕದ ಓರ್ವ ಪ್ರಜೆ ಸನ ಶೈನ್ ವೇ ಸುವಾಲ ಎಂಬ ಹೆಣ್ಣು ಮಗಳು ತನ್ನ ಮಗಳಿಗೆ ಆಕೆಯನ್ನು ರಕ್ಷಿಸಿದ ನೀರಜಾ ಎಂಬ ಹೆಸರಿನಿಂದ ಪುನರ್ ನಾಮಕರಣ ಮಾಡಿದಳು. ಸಾಕಷ್ಟು ಜನ ಆಕೆಯನ್ನು ದೈವ ರಕ್ಷಕಿ (ಗಾರ್ಡಿಯನ್ ಏಂಜಲ್) ಎಂದು ಕರೆದರು. ಆಕೆಯಿಂದ ರಕ್ಷಿಸಲ್ಪಟ್ಟ ಮೂರು ಜನ ಮಕ್ಕಳ ಪಾಲಕರು ಆಕೆ ತನ್ನನ್ನು ತಾನು ಬಲಿಕೊಟ್ಟು ನಮ್ಮನ್ನು ಉಳಿಸಿದಳು ಎಂದು ಆಕೆಯನ್ನು ಕೊಂಡಾಡಿದರು  2016ರಲ್ಲಿ ಬಾಲಿವುಡ್ ಆಕೆಯ ಹೆಸರಿನಲ್ಲಿ ನೀರಜಾ ಎಂಬ ಚಿತ್ರವನ್ನು ನಿರ್ಮಾಣ ಮಾಡಿ ಆಕೆಯ ಕಥೆ ಲಕ್ಷಾಂತರ ಜನರಿಗೆ ತಲುಪುವಂತೆ ಮಾಡಿತು. ಏರ್ಪೋರ್ಟ್ ಗಳು, ಸ್ಕಾಲರ್ಶಿಪ್ ಗಳು ಹಾಗೂ ಪ್ರಶಸ್ತಿಗಳು ಆಕೆಯ ಹೆಸರಿನಲ್ಲಿ ನೀಡಲ್ಪಟ್ಟವು. ಇದೆಲ್ಲಕ್ಕಿಂತ ಶಾಶ್ವತವಾದ ನೆನಪನ್ನು ಕೆತ್ತಲಾಗಿದ್ದು ಯಾವುದೇ ಅಮೃತ ಶಿಲೆಯ ಇಲ್ಲವೇ ಕಂಚಿನ ಫಲಕದಲ್ಲಿ ಅಲ್ಲ ಬದಲಾಗಿ 369 ಜನ ಪ್ರಯಾಣಿಕರು ತಮ್ಮ ತಮ್ಮ ಕುಟುಂಬಗಳಿಗೆ ಮರಳಿ ದೊರೆತದ್ದು. ಇಂದಿಗೂ ಆ ಕುಟುಂಬಗಳ ಸಂತೋಷದ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ  ಮುಂತಾದ ಕಾರ್ಯಕ್ರಮಗಳನ್ನು ಆಚರಿಸಿಕೊಳ್ಳಲು ಕಾರಣವಾದದ್ದು ಪಾತಕಿಗಳ ವಿರುದ್ದ ನೀರಜಾಳ ಸೋಲೊಪ್ಪಿಕೊಳ್ಳದಿರುವ ಮನೋಭಾವ. ನೀರಜಾ ಭಾನೋಟ್ ಸೈನಿಕಳಾಗಿರಲಿಲ್ಲ.. ಆಕೆಗೆ ಇಂತಹ ಆಕಸ್ಮಿಕಗಳ ವಿರುದ್ಧ ಹೋರಾಡುವ ಯಾವುದೇ ತರಬೇತಿ ಇರಲಿಲ್ಲ. ಅತ್ಯಂತ ಚಿಕ್ಕ ವಯಸ್ಸಿನ ಸಾಮಾನ್ಯವಾಗಿ ವಿಮಾನ ಪರಿಚಾರಕರು ನಿರ್ವಹಿಸುವ ಕರ್ತವ್ಯದ ಬದ್ಧತೆ ಮಾತ್ರ ಆಕೆಯದಾಗಿತ್ತು….ಆದರೆ ದುಷ್ಟ ಶಕ್ತಿಗಳು ಆಕೆಯ ವಿಮಾನವನ್ನು ಏರಿದಾಗ ಆಕೆ ಅಲ್ಲಿಂದ ಓಡಿ ಹೋಗಲಿಲ್ಲ, ಅಡಗಿಕೊಳ್ಳಲಿಲ್ಲ ಬದಲಾಗಿ ಆಕೆ ಕತ್ತಲು ಮತ್ತು ಬೆಳಕಿನ ನಡುವೆ ಗೋಡೆಯಾಗಿ ನಿಂತಳು…. ಹಾಗೂ ತನ್ನ ಕೊನೆಯ ಉಸಿರಿನವರೆಗೂ ಅಚಲವಾದ ರಕ್ಷಣಾ ಗೋಡೆಯಾಗಿ ಪರಿಣಮಿಸಿದಳು  ಆಕೆಯ ಮುಂದೆ ಇಡೀ ಬದುಕು ಇತ್ತು. ಪ್ರೀತಿಸುವ ತಂದೆ ತಾಯಿ ಒಡಹುಟ್ಟಿದವರ ಕಾಳಜಿ ಕೂಡ…. ಆದರೆ ಆಕೆ ತನ್ನ ಬದುಕನ್ನೇ 350ಕ್ಕೂ ಹೆಚ್ಚು ಜನ ಅಪರಿಚಿತ ಪ್ರಯಾಣಿಕರ ಭವಿಷ್ಯಕ್ಕಾಗಿ ಮುಡುಪಾಗಿಟ್ಟಳು ಅದುವೇ ಆಕೆಯ ಮಹತಿ…. ಕರ್ತವ್ಯ ಪ್ರಜ್ಞೆ ಹಾಗೂ ಶಿಸ್ತಿನ ಅತ್ಯಂತ ಶುದ್ಧವಾದ ರೂಪ ನೀರಜಾ  ಈ ಜಗತ್ತಿಗೆ ನೀರಜಾ ಭಾನೋಟಿ ಏನೂ ಅಲ್ಲ ಆದರೆ ಆ 359 ಜನ ಪ್ರಯಾಣಿಕರ ಬದುಕಿಗೆ ಆಕೆಯೇ ಎಲ್ಲಾ. ಆಕೆಯಿಂದಲೇ ಅವರೆಲ್ಲ ಇಂದು ಬದುಕಿ ಬಾಳುತ್ತಿರುವುದು…… ಸಾವಿನಲ್ಲೂ ಸಾರ್ಥಕತೆ ಕಂಡವಳು ನೀರಜಾ ಆಕೆಗೆ ನಮ್ಮ ತುಂಬು ಹೃದಯದ ನಮನಗಳು ವೀಣಾ ಹೇಮಂತ್ ಗೌಡ ಪಾಟೀಲ್

“ಸಾವಿನಲ್ಲೂ ಸಾರ್ಥಕತೆ ಮೆರೆದ…ನೀರಜಾ ಭಾನೋಟ್.” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಕಾವ್ಯಯಾನ

“ಆಲದ ಮರ” ಡಾ ತಾರಾ ಬಿ ಎನ್ ಧಾರವಾಡ

ಕಾವ್ಯ ಸಂಗಾತಿ “ಆಲದ ಮರ” ಡಾ ತಾರಾ ಬಿ ಎನ್ ಧಾರವಾಡ ನೆರಳು ಕೊಡದ ಅಪ್ಪನೆಂಬಆಲದ ಮರನೆರಳು ಕೊಡದಿದ್ದರೂಬೇಸಿಗೆಯ   ಬರಡಾಗಿ ಮಧ್ಯೆ ನಿಂತಿರುವಆಲದ ಮರದಂತೆನಮ್ಮ ಅಪ್ಪಬಿಸಿಲಿಗೆ ಸುಟ್ಟು ಬಿಸಿನಲಿ ಬೆಂದುಮಳೆಯಿಲ್ಲದೆ ಒಣಗಿಬೇರುಗಳಲ್ಲಿ ನೋವು ಕಟ್ಟಿಕೊಂಡುನಿಂತವನು.ನಮಗೆ ನೆರಳು ಬೇಕಿತ್ತು,ಅವನಿಗೆ ಮಾತ್ರಆಕಾಶದಷ್ಟು ಹೊಣೆ.ಮಾತಾಡಲಿಲ್ಲ,ಅಳಲಿಲ್ಲ,ತನ್ನ ಹಸಿವನ್ನುರಾತ್ರಿಯ ಕತ್ತಲಲ್ಲಿ ಮುಚ್ಚಿಟ್ಟುಕೊಂಡುಬೆಳಗಿನ ಬೆಳಕಿಗೆನಮ್ಮ ಕನಸುಗಳನ್ನು ಎತ್ತಿಕೊಟ್ಟವನು.ಎಲೆಗಳಿಲ್ಲದ ಕೊಂಬೆಗಳ ಮೇಲೆನಮ್ಮ ನಾಳೆಗಳನ್ನೇ ಕಟ್ಟಿಕೊಂಡುಬಿರುಗಾಳಿಗೂ ಎದುರಾಗಿಅಚಲವಾಗಿ ನಿಂತವನು.ನೆರಳು ಸಿಗದಿದ್ದಕ್ಕೆನಾವು ಅವನನ್ನು ತಪ್ಪು ತಿಳಿದೆವು,ಆದರೆನೆಲದೊಳಗೆ ಅವನುನಮಗಾಗಿ ಹರಿಸಿದ್ದಅದೆಷ್ಟು ಮೌನವಾದ ಶ್ರಮ!ನೀರಿಲ್ಲದ ಆಲದ ಮರದಂತೆಅವನ ಪ್ರೀತಿಗೂಹೆಸರು ಇರಲಿಲ್ಲ,ಬಣ್ಣವೂ ಇರಲಿಲ್ಲ,ಆದರೆಅದು ಜೀವ ಉಳಿಸುವ ಬೇರು.ಇಂದು ನಾವುಎತ್ತರಕ್ಕೆ ಬೆಳೆದಾಗಹಿಂದೆ ನೋಡಿದರೆನೆರಳು ಕಾಣುವುದಿಲ್ಲ,ಆದರೆನೆಲದೊಳಗೆ ಕೈ ಹಾಕಿದರೆಅಪ್ಪನ ತ್ಯಾಗಇನ್ನೂ ತೇವವಾಗಿಯೇ ಇದೆ.ನೆರಳು ಕೊಡದ ಅಪ್ಪನೆಂಬ ಆಲದ ಮರ—ಬೀಳದೆ ನಿಂತುಬೇರೂರಿನಮ್ಮ ಬದುಕನ್ನೇತುಂಬಿಸಿಕೊಂಡವನು. ಡಾ ತಾರಾ ಬಿ ಎನ್ ಧಾರವಾಡ

“ಆಲದ ಮರ” ಡಾ ತಾರಾ ಬಿ ಎನ್ ಧಾರವಾಡ Read Post »

You cannot copy content of this page

Scroll to Top