ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಎಮ್ಮಾರ್ಕೆ ಕವಿತೆ”ಸದ್ದಿಲ್ಲದ ಬಂದೈತಿ”

ಕಾವ್ಯ ಸಂಗಾತಿ ಎಮ್ಮಾರ್ಕೆ “ಸದ್ದಿಲ್ಲದ ಬಂದೈತಿ” ಸದ್ದಿಲ್ಲದ ಬಂದೈತಿ ಈ ಸಂಕ್ರಾಂತಿತರಲಿ ಪ್ರತಿ ಜೀವಿಗೂ ಸುಖಶಾಂತಿಬನ್ನಿ ನೂಕೋಣ ನಮ್ಮೆಲ್ಲ ನೋವಪ್ರತಿ ಮನದಾಗೂ ಅರಳಲಿ ಹೂವ ಎಳ್ಳು ಬೆಲ್ಲವ ಸವಿಯೋಣ ಕೂಡಿನಾಕು ಒಳ್ಳೊಳ್ಳೆ ಮಾತುಗಳ ಆಡಿಸುಗ್ಗಿ ಮಾಡೋಣ ಹಿರಿ ಹಿರಿ ಹಿಗ್ಗಿಹೊಟ್ಟ್ತುಂಬ ಉಣ್ಣೋಣ ಹಾಲ್ಹುಗ್ಗಿ ನೇಸರ ಬದಲಿ ಮಾಡ್ಯಾನೋ ದಿಕ್ಕಬಲ್ಲವರಾರಯ್ಯ ಆ ದೇವರ ಲೆಕ್ಕಈ ಸಂಕ್ರಾಂತಿ ಕರಿಯ ಕಟ್ಟು ಹಬ್ಬನೋಡಬೇಕ ಮ್ಯಾಲೇರಿಸಿ ಹುಬ್ಬ ಹಳ್ಳಿಯ ಹಾದಿ-ಬೀದೆಲ್ಲ ಸಿಂಗಾರಬಿತ್ತಿ ಬೆಳೆದಾರೋ ಬಗಸಿ ಬಂಗಾರಮನಿ ಮುಂದ ಬಿಡಿಸಿ ರಂಗೋಲಿಮೈ ಮರೆತಾರ ಖುಷಿಯ ಗುಂಗಲ್ಲಿ ಬನ್ನಿ ಕುಣಿಯೋಣ ಮೈ ಚಳಿ ಬಿಟ್ಟಭಗವಂತನ ಮ್ಯಾಲ ನಂಬಿಕಿ ಇಟ್ಟನೋಡಲಾಕತ್ಯಾನು ಕುಂತ ಮ್ಯಾಲಅವಗ ಒಪ್ಪಿಸಿವ್ನಿ  ನನ್ನೆರಡು ಸಾಲ ಎಮ್ಮಾರ್ಕೆ

ಎಮ್ಮಾರ್ಕೆ ಕವಿತೆ”ಸದ್ದಿಲ್ಲದ ಬಂದೈತಿ” Read Post »

ಇತರೆ

“ಕುಟುಂಬಗಳ ಮಧ್ಯೆ ಬಾಂಧವ್ಯ ಬೆಸೆಯುವ ಸಂಕ್ರಾಂತಿ ಹಬ್ಬ” ನಾಗರತ್ನ ಹೆಚ್‌ ಗಂಗಾವತಿ

ಸಂಕ್ರಾಂತಿ ಸಂಗಾತಿ ನಾಗರತ್ನ ಹೆಚ್‌ ಗಂಗಾವತಿ “ಕುಟುಂಬಗಳ ಮಧ್ಯೆ ಬಾಂಧವ್ಯ ಬೆಸೆಯುವ ಸಂಕ್ರಾಂತಿ ಹಬ್ಬ” ಸಂಕ್ರಾಂತಿ ಹಬ್ಬದ ಪ್ರತೀಕವಾಗಿದ್ದು  .ಇದು ರೈತನ ಸುಗ್ಗಿ ಹಬ್ಬವಾಗಿದೆ ಅಷ್ಟೇ ಅಲ್ಲದೆ ಜಾನುವಾರುಗಳಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವಾಗಿದೆ ಮತ್ತು ಕುಟುಂಬದ ನಡುವೆ ಬಾಂಧವ್ಯ ಬೆಸುವ ಹಬ್ಬ ವಾಗಿದೆ  . ಎಲ್ಲಾ ರಾಜ್ಯಗಳಲ್ಲಿ ಒಂದೊಂದು ಬಗೆಯ ಹೆಸರಿನಿಂದ ಕರೆಯಲಾಗುತ್ತದೆ ಕರ್ನಾಟಕದಲ್ಲಿ ಸಂಕ್ರಾಂತಿ, ಆಂಧ್ರಪ್ರದೇಶದಲ್ಲಿ ಸಂಕ್ರಾಂತಿ, ತಮಿಳುನಾಡಿನಲ್ಲಿ ಪೊಂಗಲ್, ಪಂಜಾಬ್ ಮತ್ತು ಹರಿಯಾಣದಲ್ಲಿ ಲೋಹರಿ ಮತ್ತು ಅಸ್ಸಾಂನಲ್ಲಿ ,ಮಘಾ ಎಂದು ಆಚರಿಸಲಾಗುತ್ತದೆ. ಹೊಸ ಬೆಳೆ ಬಂದ ಸಮಯದಲ್ಲಿ ಆಚರಿಸುವ ಹಬ್ಬ ಇದು ರೈತರ ತಮ್ಮ ಜಾನುವಾರುಗಳಿಗೆ ಕೃತಜ್ಞತೆ ಸಲ್ಲಿಸಿ ಅಲಂಕರಿಸುತ್ತಾರೆ ಮತ್ತು ಕೆಲವೆಡೆ ಎತ್ತುಗಳನ್ನು ಸಿಂಗರಿಸಿ ಓಟದ ಸ್ಪರ್ಧೆಯನ್ನು ಕೂಡ ಮಾಡಲಾಗುತ್ತದೆ.ಸೂರ್ಯದೇವ ,ಬ್ರಹ್ಮ ವಿಷ್ಣು, ಮಹೇಶ್ವರ ಗಣೇಶ ಮತ್ತು ಆದಿಶಕ್ತಿಯನ್ನು ಕೂಡ ಈ ಹಬ್ಬದಲ್ಲಿ ವಿಶೇಷವಾಗಿ ಪೂಜಿಸಲಾಗುತ್ತದೆ. ಹಾಗೂ ಚಿಕ್ಕ ಮಕ್ಕಳಿಗೆ ಆರತಿ ಮಾಡಿ ಶುಭ ಹಾರೈಸಲಾಗುತ್ತದೆ. ಸಂಕ್ರಾಂತಿ ಕೇವಲ ಧಾರ್ಮಿಕ ಹಬ್ಬವಲ್ಲ ಇದು ಸಂಸ್ಕೃತಿ ಮತ್ತು ಕೃಷಿ ಮತ್ತು ಕುಟುಂಬದ ನಡುವಿನ ಭಾಂಧವ್ಯ ಬೆಳೆಸುವ ಒಂದು ಸಂಭ್ರಮದ ಹಬ್ಬವಾಗಿದೆ . ಹಾಗೂ ವಿಶೇಷ ಸ್ಥಳದಲ್ಲಿ ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ಬೀಳುವ ವಿದ್ಯಮಾನಗಳು ಕೂಡ ನಾವು ಕಾಣಬಹುದು. ಸಾಮಾನ್ಯವಾಗಿ ಈ ದಿನ ಸೂರ್ಯನ ತನ್ನ ಪಥ ಬದಲಿಸಿ ಉತ್ತರಾಯಣಕ್ಕೆ ಚಲಿಸುತ್ತಾನೆ ಎಂದು ನಂಬಲಾಗುತ್ತದೆ ಉತ್ತರಾಯಣಕ್ಕೆ ಎಂದರೆ ಸೂರ್ಯನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಸಂಚರಿಸಲು ಪ್ರಾರಂಭಿಸುವ ಪವಿತ್ರ ಕಾಲ ಎಂದು ಕೂಡ ಕರೆಯಲಾಗುತ್ತದೆ. ಹಿಂದೂ ಸಂಸ್ಕೃತಿಯಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ ಈ ದಿನದಂದು ಸ್ನಾನ ಮಾಡೋದು ಮತ್ತು ದಾನ ಮಾಡುವುದು ಮುಂತಾದ ಆಚರಣೆಯನ್ನು ಮಾಡುವುದರಿಂದ ಶುಭ ಫಲಿತಾಂಶ ದೊರೆಯುತ್ತವೆ ಎಂದು ನಂಬಿಕೆ ಅಷ್ಟೇ ಅಲ್ಲದೆ ಸಂತೋಷ ಸಮೃದ್ಧಿ ತುಂಬಿದ ಬದುಕು ಸಿಗುತ್ತದೆ. ಈ ದಿನ ಗಂಗಾ ಸ್ನಾನ ಮಾಡೋದು ಪವಿತ್ರ ಎಂದು ನಂಬಲಾಗಿದೆ ಬೆಳಿಗ್ಗೆ ಬೇಗ ಎನ್ನು ಸ್ನಾನ ಮುಗಿಸಿ ಗಂಗಾನದಿಯಲ್ಲಿ ಸ್ನಾನ ಮಾಡುವುದರಿಂದ ಒಳ್ಳೆಯ ಶುಭ ಫಲವನ್ನು ಕೂಡ ಪಡೆಯಬಹುದು ಎಂಬ ನಂಬಿಕೆ ಇದೆ. ಸಂಕ್ರಾಂತಿಯಲ್ಲಿ ಎಳ್ಳನ್ನು ಅದೃಷ್ಟ ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸುತ್ತಾರೆ ಉದಾಹರಣೆಗೆ:  ನಿನ್ನ ಸ್ನಾನ ಮಾಡಿ ಎಳ್ಳು ಬೆಲ್ಲವನ್ನು ಸೇವಿಸುವುದು ಹಾಗೂ ಇತರರಿಗೂ ಕೊಡುವುದು ಪೂಜ್ಯರಿಗೆ  ಎಳ್ಳು ದಾನ ಮಾಡುವುದು ಶಿವಮಂದಿರಗಳಲ್ಲಿ ಎಳ್ಳೆಣ್ಣೆ ದೀಪ ಹಚ್ಚುವುದು ಉತ್ತಮ ಎಂದು ಹಿರಿಯರ ಸಂಪ್ರದಾಯ. ನಾಗರತ್ನ ಹೆಚ್ ಗಂಗಾವತಿ.

“ಕುಟುಂಬಗಳ ಮಧ್ಯೆ ಬಾಂಧವ್ಯ ಬೆಸೆಯುವ ಸಂಕ್ರಾಂತಿ ಹಬ್ಬ” ನಾಗರತ್ನ ಹೆಚ್‌ ಗಂಗಾವತಿ Read Post »

ಕಾವ್ಯಯಾನ

ಇಮಾಮ್ ಮದ್ಗಾರ “ಬಾಡದಿರಲಿ ಅನ್ನದಾತನ ಮುಖದ ಕಾಂತಿ”

ಕಾವ್ಯ ಸಂಗಾತಿ ಇಮಾಮ್ ಮದ್ಗಾರ “ಬಾಡದಿರಲಿ ಅನ್ನದಾತನ ಮುಖದ ಕಾಂತಿ” ಮೈ ನಡುಗುವ ತಂಪುಗಾಳಿಯುಕಂಪ ಸೂಸುತ್ತಿತ್ತು ಅದು…ನೀ ಮುಡಿದ ದುಂಡುಮಲ್ಲಿಗೆ ಘಮವೆಂದು ಮನಸು ಹೇಳುತ್ತಿತ್ತು. ಹಚ್ಚಹಸುರಿನ ಪಚ್ಚೆಪೈರಿನಬೆಳೆಯ ನೋಡುತ ಕೋಗಿಲೆಕೂಗುತ್ತಿತ್ತು. ಬರುವ ಸಂಕ್ರಾಂತಿಮುದತರಲಿ ರೈತರಿಗೆ ಎಂದು ಹಾಡುತ್ತಿತ್ತು. ಉಡಿತುಂಬಿದ ಧರೆಮುಡಿಗೇರಿದ ಫಸಲುಮುತ್ತಿಕ್ಕುವ ಚಳಿ ತಾ….ಮುನುಗುತ್ತಾ ಸುಗ್ಗಿಯಹಾಡಗುನುಗುತ್ತಾ.ಬರುವ ಸಂಕ್ರಾಂತಿಯಲಿ ಹಸನಾಗಿರಲಿ ಅನ್ನದಾತನ ಬದುಕುಎಂದು ದೇವರ ಬೇಡುತ್ತಿತ್ತು. ತಳಿರು ತೋರಣ ಕಟ್ಟುತಚಾಮರ ಬೀಸಿದೆ ಮಾಮರ.ಕರಗದಿರಲಿ ಅನ್ನದಾತನ ಕನಸುಈ ವರುಷ ಬರದೇ ಇರಲಿ ಬರ. ಹಸನಾಗಿರಲಿ ಅನ್ನದಾತನ ಮನಸುಹರಿದೋಗಿ ಬಿಡಲಿ ಈ ವರುಷ.ಸಾಲ ಸಾಲದ ಬಡ್ಡಿಮತ್ತೆಂದೂ ಕಾಡದಿರಲಿ ಸಾಲದ ಕನಸು. ಆ ಪಥ ಬದಲಿಸಿ ಈ ಪಥದಲಿಚಲಿಸಿ.ಆ ರಾಶಿ ಈ ರಾಶಿಯಲಿ ಸಾಗಿಕತ್ತೆ.ಕಪ್ಪೆ.ಗೋವು.ಮಾವುಯಾವುದೇ ವಾಹನ ಏರುಮಡಿವಾಳರ ಮನೆಯಲ್ಲೇ ವಾಸವಿರು  ಮಡಿಯುಳ್ಳವರ ಮನೆಯಲ್ಲೇ ಮಲಗು  ಒಟ್ಟಾರೆ ಅನ್ನದಾತನ ಮನೆಯಲ್ಲಿ ಅನವರತವಾಗಿರಲು ಬಂದುಬಿಡುಸಂಕ್ರಾಂತಿ ಬಾಡದಿರಲಿಅನ್ನದಾತನ ಮುಖದ ಕಾಂತಿ ಇಮಾಮ್ ಮದ್ಗಾರ

ಇಮಾಮ್ ಮದ್ಗಾರ “ಬಾಡದಿರಲಿ ಅನ್ನದಾತನ ಮುಖದ ಕಾಂತಿ” Read Post »

ಕಾವ್ಯಯಾನ

ಲತಾ ಎ ಆರ್ ಬಾಳೆಹೊನ್ನೂರು “ಸಂಕ್ರಾಂತಿ”

ಕಾವ್ಯ ಸಂಗಾತಿ ಲತಾ ಎ ಆರ್ ಬಾಳೆಹೊನ್ನೂರು “ಸಂಕ್ರಾಂತಿ” ಬಂದಿತೋ ಬಂದಿತು ಮೊದಲ ಹಬ್ಬಸರಿಸಿ ಎಲ್ಲರ ಮನದ ಮಬ್ಬಸವಿಯಲು ಕರೆಯಿತು ಸಿಹಿ ಕಬ್ಬಒಟ್ಟಿಗೆ ಆಡೋಣ ಎತ್ತರದ ದಿಬ್ಬ ದ್ವೇಷದ ಯೋಚನೆ ಎಂದಿಗೂ ಸಲ್ಲಒಟ್ಟಿಗೆ ಸವಿಯೋಣ ಎಳ್ಳು ಬೆಲ್ಲಸ್ನೇಹ ಸಂಪಾದಿಸೋಣ ಮೆಲ್ಲ ಮೆಲ್ಲಪ್ರೀತಿಯಲಿ ಸಿಹಿ ಮಾತಾಡೋಣ ಎಲ್ಲಾ ಉತ್ತರಾಯಣದ ಪುಣ್ಯಪರ್ವ ಕಾಲವಿದುಮಕರ ಸಂಕ್ರಮಣದ ಜ್ಯೋತಿಯಿದು.ಸೂರ್ಯದೇವನ ಕರುಣೆ ನಮಗೆಂದುಮನುಕುಲದ ಉನ್ನತಿಗೆ ಸಹಕರಿಸೆಂದು ಮಾನವರಲ್ಲಿ ತುಂಬಿರಲಿ ಪ್ರೀತಿ ಶಾಂತಿಮನದಿಂದ ದೂರಗಲಿ ಕಲ್ಮಶದ ಬ್ರಾಂತಿಸಾದಿಸಲು ಬೇಕಿದೆ ಸ್ವಲ್ಪ ಕ್ರಾಂತಿಅದಕಾಗಿ ಬಂದಿಹುದು ಮಕರ ಸಂ…..ಕ್ರಾಂತಿ. ದಬ್ಬಾಳಿಕೆ ಕಂಡರೆ ವಿರೋಧವಿರಲಿಲಂಚದ ಅಧಿಕಾರಕ್ಕೆ ತಲೆ ಬಾಗದಿರಲಿಪ್ರತಿ ಹೆಜ್ಜೆಯಲಿ ನಮ್ಮತನದ ದೃಢತನವಿರಲಿದಿಟ್ಟತನದ ಬದುಕು ಎಂದೆಂದೂ ಸಾಗುತಿರಲಿ. ಲತಾ ಎ ಆರ್ ಬಾಳೆಹೊನ್ನೂರು.

ಲತಾ ಎ ಆರ್ ಬಾಳೆಹೊನ್ನೂರು “ಸಂಕ್ರಾಂತಿ” Read Post »

ಕಾವ್ಯಯಾನ

ಗೀತಾ ಆರ್‌ ಅವರ ಕವಿತೆ “ಸುಗ್ಗಿ ಸಂಕ್ರಾಂತಿ”

ಕಾವ್ಯ ಸಂಗಾತಿ ಗೀತಾ ಆರ್‌ “ಸುಗ್ಗಿ ಸಂಕ್ರಾಂತಿ” ಹೊಸ ವರುಷದ ಹೊಸತುಬೆಳೆ ಹರುಷದಲಿ….ಸುಗ್ಗಿ ಸುಗ್ಗಿ ಸಂಭ್ರಮವುಮನೆಯಲಿ ಸಡಗರವು….ಕಷ್ಟವೆಂಬ ಕಹಿಎಳ್ಳು ಮರೆವಕಬ್ಬು ಬೆಲ್ಲದ ಸವಿಯಲಿ…ಸೂರ್ಯ ಪಥ ಬದಲಿಸುವಸಂಚಲನ ಕಾಲಚಕ್ರದಲಿ…ತುಂಬಿರಲಿ ಸುಖ ಸಂತೋಷಮಕರ ಸಂಕ್ರಾಂತಿಯಲಿ….ರಂಗೋಲಿಯ ಬಣ್ಣಗಳಲ್ಲಿಪಚ್ಚೆ ತಳಿರುತೋರಣದಲಿ…ಜೀವನದ ನೋವುಗಳೆಲ್ಲಾಮರೆವ ನಾವು ಬಾಳಿನಲ್ಲಿ….ಸ್ನೇಹ ಪ್ರೀತಿ ಸಂಬಂಧಗಳುಇರಲಿ ಸಾಮರಸ್ಯದಲಿ….ಆಯುಷ್ಯ ಆರೋಗ್ಯ ಆನಂದಪ್ರಾರ್ಥಿಸು ದೇವರಲಿ….ಧನ ಧಾನ್ಯ ಸಂಪತ್ತು ಸಮೃದ್ಧಿಏಲ್ಲಾರ ಬದುಕಿನಲಿ….ಸುಖ ಶಾಂತಿ ನೆಮ್ಮದಿ ಸಿಗಲಿಎಲ್ಲಾರಿಗೂ ಸುಗ್ಗಿಯಲಿ…ಸಂಭ್ರಮಿಸಿರಿ ಏಲ್ಲಾರೂಮಕರ ಸಂಕ್ರಾಂತಿಯಲಿ….  ಗೀತಾ ಆರ್.

ಗೀತಾ ಆರ್‌ ಅವರ ಕವಿತೆ “ಸುಗ್ಗಿ ಸಂಕ್ರಾಂತಿ” Read Post »

ಕಾವ್ಯಯಾನ

ಡಾ ತಾರಾ ಬಿ ಎನ್ ಅವರ ಕವಿತೆ,”ಸಂಕ್ರಾಂತಿ ಸಂಭ್ರಮ”

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ “ಸಂಕ್ರಾಂತಿ ಸಂಭ್ರಮ” ಭಾನು ಉದಯಿಸಿಕಿರಣ ಚೆಲ್ಲಿದ ದಿನಶೀತದ ನೆರಳು ಸರಿದುಹೊಸ ಕಾಲ ಅದುಬೆಳೆದು ನಿಂತ ಪೈರುಗಳು ನಗುವಿನ ಗೀತೆ ಮುಗುಳು ಮನೆ ಮನ ತುಂಬಿತುಸಂಕ್ರಾಂತಿಯ ಸಂಭ್ರಮ ಎಳ್ಳು–ಬೆಲ್ಲ ಹಂಚಿಹೃದಯ ಬೆಸೆಯುವಸಂಪ್ರದಾಯ,ಕಹಿ–ಸಿಹಿಯ ಸಂಗಮವೇಬದುಕಿನ ಸತ್ಯೋಪಾಯ,ಸಂಕ್ರಾಂತಿಯ ಸಂಭ್ರಮ “ಎಳ್ಳು ಬೆಲ್ಲ ತಿನ್ನಿಒಳ್ಳೇ ಮಾತಾಡಿ”  ಹಾರೈಕೆ,ಸ್ನೇಹದ ಬೀಜ ಬಿತ್ತುವಮಧುರ ಸಂಸ್ಕೃತಿಯ ಸಖ್ಯಹಸಿರು ಹೊಲಗಳಲ್ಲಿಕಂಗೊಳಿಸುವ ದವಸ,ಸಂಕ್ರಾಂತಿಯ ಸಂಭ್ರಮ ರೈತನ ಶ್ರಮಕ್ಕೆ  ಸಿಕ್ಕಿತುಸಾರ್ಥಕ ಉತ್ಸವ,ನೇಗಿಲು ಹಿಡಿದ ಕೈಗಳಿಗೆಗೌರವದ ನಮನ,ಅನ್ನದಾತನ ಬದುಕಿಗೆಬೆಳಕಿನ ಕಿರಣ.ಸಂಕ್ರಾಂತಿಯ ಸಂಭ್ರಮ ಗೋ  ಮಾತೆಗೂ ಹಬ್ಬ, ಕೊಂಬುಗಳಿಗೆ ಬಣ್ಣಗಂಟೆಯ ನಾದದಲ್ಲಿತುಂಬಿತು ಹಳ್ಳಿ–ಹಾಡುಉತ್ಸಾಹದ ಆಟ–ಪಾಠಸಂಕ್ರಾಂತಿ ತಂದಿತುಸಂಕ್ರಾಂತಿಯ ಸಂಭ್ರಮ ಸಂಭ್ರಮದ  ನೋಟ.ಆಕಾಶದಲ್ಲಿ ಗಾಳಿಪಟಬಣ್ಣದ ಬಣ್ಣದ  ಕೂಟಸಕ್ಕರೆ ಕಬ್ಬು ಕೈಯಲ್ಲಿಕನಸ  ಮನದಲ್ಲಿ,ಸಂತಸದ ಸಿಹಿ ಬೆಲ್ಲ ಎಲ್ಲರ ಬದುಕಿನಲ್ಲಿ.ಸಂಕ್ರಾಂತಿಯ ಸಂಭ್ರಮ ಸೂರ್ಯನಿಗೆ ನಮಿಸಿಹೊಸ ದಾರಿಗೆ ಪಯಣ ಭವಿಷ್ಯ ಕಟ್ಟುವೆವು, ಪಣಒಗ್ಗಟ್ಟಿನ ಸಂದೇಶ ಸಾರುವಪುಣ್ಯದ ಹಬ್ಬ,ಸಂಕ್ರಾಂತಿ , ಸಂಸ್ಕೃತಿ ಸಂಭ್ರಮ, ಸೌಭಾಗ್ಯಸಂಕ್ರಾಂತಿಯ ಸಂಭ್ರಮ. ಡಾ ತಾರಾ ಬಿ ಎನ್

ಡಾ ತಾರಾ ಬಿ ಎನ್ ಅವರ ಕವಿತೆ,”ಸಂಕ್ರಾಂತಿ ಸಂಭ್ರಮ” Read Post »

You cannot copy content of this page

Scroll to Top