ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಲತಾ  ಎ ಆರ್ ಬಾಳೆಹೊನ್ನೂರುಅವರ ಕವಿತೆ-ಗೆಳೆಯ

ಕಾವ್ಯ ಸಂಗಾತಿ ಲತಾ  ಎ ಆರ್ ಬಾಳೆಹೊನ್ನೂರು ಗೆಳೆಯ ನನ್ನೆದೆಯ ಗೂಡಿನಲಿ ನೀನೇಗೆ ಬಂದೆನನ್ನ ಮನಸಿಗೆ ಕುರುಹು ನೀಡದೆಮೆಲುಧ್ವನಿಯಲಿ ಪ್ರೀತಿಯ ನುಡಿಯುತಿದೆನನಗೆ ಅದೇನೆಂದು ಅರಿವಿಲ್ಲದೆ ಹೋದ ಜನ್ಮದ ಋಣಾನುಭಂದನವೋಜೊತೆ ಸಾಗಿ ಸಂತೈಸಿದ ಹೃದಯವೋಕೈ ಹಿಡಿದು ಹಾರಾಡಿದ ಬಾನಂಗಳವೋನನ್ನೊಳಗೆ ಭರವಸೆ ತುಂಬಿದ ಒಲವೋ ಏನೆಂದು ಬರೆಯಲಿ ಬಿಳಿ ಹಾಳೆಯ ಮೇಲೆಹಾಕಲಾಗುವುದಿಲ್ಲ ಕೊರಳಿಗೆ ಮಾಲೆಹೊಸತನದ ಹರುಷ ತುಂಬಿದ ಸೆಲೆನವ ನವೀನತೆಯ ಪರಿಚಯಿಸುವ ಕಲೆ ಜೀವನ ಪಯಣದಲಿ ಇರು ಗೆಳೆಯನಾಗಿತಪ್ಪು ಒಪ್ಪುಗಳ ತಿಳಿಸುವ ಮನವಾಗಿಹರುಷ ತುಂಬುವ ಸುಮಧುರ ಪಯಣಿಗನಾಗಿನೀನಿರು ನಾ ಬರೆವ ಕವಿತೆಯಲಿ ಮೌನವಾಗಿ ಲತಾ  ಎ ಆರ್ ಬಾಳೆಹೊನ್ನೂರು

ಲತಾ  ಎ ಆರ್ ಬಾಳೆಹೊನ್ನೂರುಅವರ ಕವಿತೆ-ಗೆಳೆಯ Read Post »

ಅನುವಾದ

ತೆಲುಗು ಕವಿತೆ “ಬದುಕು ಮೂಟೆ”ಯ ಕನ್ನಡಾನುವಾದ ಕೋಡಿಹಳ್ಳಿ‌ ಮುರಳಿ ಮೋಹನ್

ಅನುವಾದ ಸಂಗಾತಿ ಬದುಕು ಮೂಟೆ ತೆಲುಗು ಮೂಲ: ಗಜ್ಜೆಲ ರಾಮಕೃಷ್ಣ ಕನ್ನಡಕ್ಕೆ: ಕೋಡಿಹಳ್ಳಿ ಮುರಳಿಮೋಹನ್ ಯಾವುದೋ ಜಾತ್ರೆ ಶುರುವಾದಂತೆ,ದೇವ್ರ ಆಭರಣ ಹೊತ್ತು ತಂದಂತೆ,ಬೀದಿಲಿ ಸುತ್ತೋ ಮೆರವಣಿಗೆ. ನೋಡೋಕೆ ಚಿಕ್ಕದೇ, ಆದ್ರೆಮೂಟೆ ಬಿಚ್ಚಿದ್ರೆ,ಮ್ಯಾಜಿಕ್ ಶೋ ನೋಡಿದಂಗೆ,ರಾಜ-ರಾಣಿ ಡ್ರೆಸ್‌ಗಳನ್ನೇನೋ ಪ್ರದರ್ಶನಕ್ಕಿಟ್ಟಂಗೆ.ಬಾಗಿಲ ತುಂಬಾ ಹರಡಿಕೊಳ್ಳೋ ಬಟ್ಟೆ ಅಂಗಡಿ. ” ಚಿನರಾಯುಡು ಪೆದರಾಯುಡು ಲುಂಗಿ” ಅಂದ್ಬಿಟ್ಟು,“ರಂಭಾ, ರಮ್ಯಾಕೃಷ್ಣ ಸೀರೆ” ಅಂತಾ ಹೇಳ್ತಾನಲ್ಲ,ಅವನೆಷ್ಟು ಕನಸುಗಳನ್ನ ಗಂಟಿಗ್ ತುಂಬ್ಕೊಂಡು ಬಂದಿರ್ತಾನೋ! ಒಂದು ರೇಟ್ ಹೇಳ್ತಾನೆ.ನಾವು ‘ಬೇಡ’ ಅಂತೀವಿ.ಅವನೊಂದು ಮಾತು ಹೇಳ್ತಾನೆ.ನಾವು ಇನ್ನೊಂದು ಮಾತು ಹೇಳ್ತೀವಿ.ಅವನೊಂದು ಸ್ಟೆಪ್ ಕೆಳಗಿಳಿದು,ಕೂಲಿ ಸಿಕ್ತು, ವ್ಯಾಪಾರ ಸೆಟ್ ಆಯ್ತು ಅಂದ್ಕೊಂಡು,ಕಣ್ಣಲ್ಲಿ ನಗ್ತಾನೆ. ಉದ್ರಿ (ಕಂತು)ಗೂ ಒಪ್ಕೋತಾನೆ.ಎಷ್ಟು ಹೊತ್ತು ಚೌಕಾಸಿ ಮಾಡಿದ್ರೂ,ನೆತ್ತಿ ಮೇಲೆ ಬೇಜಾರಿನ ಗೆರೆ ಮೂಡದಂತೆ ನೋಡ್ಕೋತಾನೆ. ಸೂರ್ಯಕಾಂತಿ ಹೂವಿನ ಹಾಗೆ,ಈ ಕೇರಿ ಆ ಕೇರಿ ತಿರುಗಿ ಸಾಯಂಕಾಲಕ್ಕೆ,ಮೂಟೆ ಕೊಡವಿ, ಜೇಬು ತುಂಬಿದ ಖುಷಿನಜೊತೆಗಿಟ್ಕೊಂಡು ಮನೆಗೆ ಹೋಗ್ತಾನೆ. ಕಾಲ ಸುಮ್ನೆ ಇರೋದಿಲ್ಲ ತಾನೇ?ಬಲಗೈಲಿ ತಳ್ಳಿದ್ದ ಗಾಳಿನಎಡಗೈಲಿ ವಾಪಸ್ ಕಳ್ಸ್ತಿದೆ. ಇವನ ಐಡಿಯಾನ ಕಾಪಿ ಮಾಡಿ,ಬೀದಿ ಮಧ್ಯೆ ತಲೆ ಎತ್ತಿದ ಶಾಪಿಂಗ್ ಮಾಲ್,ಅವನ ಹೊಟ್ಟೆಗೆ ಹೊಡೀತಾ,ಬದುಕಿನ ಮೇಲೆ ಪ್ರಳಯ ಡಾನ್ಸ್ ಮಾಡ್ತಿದೆ. ಆಲಿಕಲ್ಲಿಗೆ ಉದುರಿ ಹೋದ ಭತ್ತದ ಕಾಳಿನ ಹಾಗೆ,ಎಲ್ಲೋ…ಕುತ್ತಿಗೆ ಕಟ್ ಆಗ್ತಿದೆ

ತೆಲುಗು ಕವಿತೆ “ಬದುಕು ಮೂಟೆ”ಯ ಕನ್ನಡಾನುವಾದ ಕೋಡಿಹಳ್ಳಿ‌ ಮುರಳಿ ಮೋಹನ್ Read Post »

ಕಾವ್ಯಯಾನ

ರಾಜೇಶ್ವರಿ ಶೀಲವಂತ ಅವರ ಎರಡು ಕವಿತೆಗಳು

ಕಾವ್ಯಸಂಗಾತಿ ರಾಜೇಶ್ವರಿ ಶೀಲವಂತ ಅವರ ಎರಡು ಕವಿತೆಗಳು ಕವಿತೆ- ಒಂದು ಅವಳು ಕವಿಯೂ ಅಲ್ಲಸಾಹಿತಿಯೂ ಅಲ್ಲನಿಸ್ವಾರ್ಥ ಮನದ ಗೆಳತಿಮನಸ್ಥಿತಿಗೆ ತಕ್ಕಂತೆಕಾವ್ಯದಲ್ಲಿ  ಸಾಹಿತ್ಯದಲ್ಲಿ ಅವನ ಗೋಚರಅವನ ಮನಸ್ಥಿತಿಗಿಲ್ಲಅವಳ  ಭಾವಗಳ ವಿಚಾರಭಾವಗಳೇಸಾರೀ ಸಾರೀ ಹೇಳಿ ಸಾಹಿತಿಗಳಿಗೆಕೂಗಿ ಕೂಗಿ ಹೇಳಿ ಕವಿಗಳಿಗೆಅವಳದು ಪುಟ್ಟ ನೊಂದಭಾವುಕ ಹೃದಯಅದಕಿಲ್ಲ ಸಾಮರ್ಥ್ಯ          ಆ ನೋವ ಭರಿಸುವತಿಳಿಸಿರವರಿಗೆ ಭಾವನೆಗಳ ಸ್ಪಂದನವಅವಳ ಮನದಾಳದ ನೋವ. ***** ಕವಿತೆ-ಎರಡು ತಾಯಿ,ಅಬ್ಬೆ, ಅವ್ವಾ, ಅಮ್ಮಹಲವಾರುನಾಮಧೇಯ ನಿನಗೆನೀನು ಮಮತೆಜವಾಬ್ದಾರಿಯ ಸಾಕಾರನೀ ಹಂಚಿದೆ ಸಮ ಪ್ರೀತಿನಿನ್ನೆಲ್ಲ  ಮಕ್ಕಳಿಗೆನಿನ್ನೊಬ್ಬಳಿಗೆ ನೀಡಲಾರರುಆ ಪ್ರಬುದ್ಧ ಮಕ್ಕಳು  ಹಿಂತಿರುಗಿ ಆ ಪ್ರೀತಿಅವರಿಗಿಲ್ಲನಿನ್ನ ಸಲಹುವ ತವಕಅವರೆಲ್ಲತಮ್ಮ ಹೆಂಡತಿ ಮಕ್ಕಳಿಗೆ ಭಾವುಕನಿನಗೆ ಮಾತ್ರವೃದ್ಧಾಶ್ರಮದ  ಆಸರೆಅವ್ವಾ ಬೇಕಿತ್ತಾನಿನಗೆ ಇದೆಲ್ಲದರ ಹೊರೆಇನ್ನಾದರೂ  ನಿನ್ನಷ್ಟಕ್ಕೆ ನೀನೆ ಇರೆ. ರಾಜೇಶ್ವರಿ ಶೀಲವಂತ

ರಾಜೇಶ್ವರಿ ಶೀಲವಂತ ಅವರ ಎರಡು ಕವಿತೆಗಳು Read Post »

ಇತರೆ

“ಸ್ಥಾವರದೇವರಲ್ಲ, ಜಂಗಮಜಾತಿವಾಚಕವಲ್ಲ: ಅದರ ಕಂದಾಚಾರವೇ ಧರ್ಮದ್ರೋಹ”-ಡಾ. ಸತೀಶ ಕೆ. ಇಟಗಿ

ಶರಣ ಸಂಗಾತಿ “ಸ್ಥಾವರದೇವರಲ್ಲ, ಜಂಗಮಜಾತಿವಾಚಕವಲ್ಲ: ಅದರ ಕಂದಾಚಾರವೇ ಧರ್ಮದ್ರೋಹ”- ಡಾ. ಸತೀಶ ಕೆ. ಇಟಗಿ “ಜಂಗಮ” ಎಂಬ ಪದವು ಸಂಸ್ಕೃತ ಮೂಲದಾಗಿದ್ದು, ಕನ್ನಡದಲ್ಲಿ ಚಲಿಸುವ, ನಡುಗುವ ರ‍್ಥದಲ್ಲಿ ಬಳಕೆಯಾಗುತ್ತದೆ. ಶಿವ ಅಥವಾ ಚಲಿಸುವ ಶಿವಸ್ವರೂಪ ಎಂಬ ರ‍್ಥದಲ್ಲಿ ಉಲ್ಲೇಖವಾಗುತ್ತದೆ. ಜಂಗಮರು ಎಂದರೆ ಶಿವಭಕ್ತರಾದ ಸಾಧುಗಳು ಅಥವಾ ಲಿಂಗಾಯತ ಪಂಥದ ಧರ‍್ಮಿಕ ಗುರುಗಳು, ಅವರು ತಾವು ಧರಿಸುವ ಇಷ್ಟಲಿಂಗದ ಮೂಲಕ ಶಿವನನ್ನು ಪ್ರತಿಪಾದಿಸುತ್ತಾರೆ. ಜಂಗಮನು ಸಜೀವ ಶಿವನ ಪ್ರತೀಕ. ಬಸವಾದಿ ಪ್ರಮಥರ ಪ್ರಕಾರ, “ಜಂಗಮ ಪದದ ವಿಶೇಷ ವ್ಯಾಖ್ಯಾನವು ಬಹುಮಾನ್ಯವಾಗಿದೆ. ಈ ವ್ಯಾಖ್ಯಾನವು ವಿಶೇಷವಾಗಿ ವಚನ ಸಾಹಿತ್ಯ ಮತ್ತು ಶರಣ ಪರಂಪರೆಯೊಂದಿಗೆ ಸಂಬಂಧ ಹೊಂದಿದೆ,”ಗಮ” ಎಂದರೆ ಹೋಗು, ಚಲನೆ. “ಜಂಗಮ” ಎಂದರೆ ಚಲಿಸುವ, ಅಲೆದಾಡುವ, ಸ್ಥಿರವಲ್ಲದ. ಅಲ್ಲಲ್ಲಿ ಅಲೆದಾಡುತ್ತಾ, ಇಷ್ಟಲಿಂಗವನ್ನು ಧರಿಸಿ, ಶಿವದರ‍್ಶನವನ್ನು ಪಸರಿಸುವ ಶ್ರೇಷ್ಠ ವ್ಯಕ್ತಿ. ಇನ್ನು ಕೆಲ ಕಡೆ “ಜಂಗಮ” ಎಂಬ ಶಬ್ದವನ್ನು ಶಿವನ ಚರ ರೂಪಕ್ಕೂ ಉಪಯೋಗಿಸುತ್ತಾರೆ.ಮೂರು ಲಿಂಗಗಳು:೧ಇಷ್ಟಲಿಂಗ: ವ್ಯಕ್ತಿಯ ಹೃದಯದಲ್ಲಿ ಧ್ಯಾನಿಸುವ ದೇವರೂಪ.೨.ಪ್ರಾಣಲಿಂಗ: ಶ್ವಾಸ, ಜೀವನ ಶಕ್ತಿ.೩.ಜಂಗಮಲಿಂಗ: ಭಕ್ತಿಗೆ ಪಾಠ ಮಾಡುವ ಜೀವಂತ ಜಂಗಮ.ಜಂಗಮರು ಸಮಾಜದಲ್ಲಿ ಸನ್ಯಾಸಿಗಳಂತೆ ಭ್ರಮಣ ಮಾಡುತ್ತಿದ್ದರು. ತತ್ವ ಬೋಧನೆ, ಧರ‍್ಮ ಪ್ರಚಾರ, ದಾನ ಸ್ವೀಕಾರ ಮುಂತಾದ ಕರ‍್ಯಗಳಲ್ಲಿ ತೊಡಗಿದ್ದರು. ಇವರು ಆಚಾರ-ವಿಚಾರ, ಶುದ್ಧ ಜೀವನ, ಸಮಾನತೆಯ ತತ್ವಗಳಿಗೆ ಬದ್ಧರಾಗಿದ್ದರು. ಬಸವಣ್ಣ ಮತ್ತು ಇತರ ಶರಣರು “ಜಂಗಮ” ಎಂಬ ಪದಕ್ಕೆ ಆಧ್ಯಾತ್ಮಿಕ ಮತ್ತು ತಾತ್ವಿಕ ರ‍್ಥ ನೀಡುತ್ತಾರೆ. ಇದನ್ನು ಅವರು ದೈಹಿಕ ಚಲನೆಗಿಂತ ಹೆಚ್ಚಾಗಿ ಒಂದು ಧರ‍್ಮಿಕ ಹಾಗೂ ತತ್ತ್ವಜ್ಞಾನದ ದೃಷ್ಟಿಕೋನದಿಂದ ವಿವರಣೆ ಮಾಡುತ್ತಾರೆ. “ಜಂಗಮವು ಸ್ಥಾವರವಲ್ಲ, ಜಡವಲ್ಲ; ಜ್ಞಾನದಿಂದ ಜೀವನವಂತಾಗಿರುವ ಶಿವಸ್ವರೂಪ.”. ಇಷ್ಟಲಿಂಗವನ್ನು ಧರಿಸಿ, ತನ್ನ ಜೀವನವನ್ನು ಶಿವಭಕ್ತಿಗೆ ಮೀಸಲಿಟ್ಟ ವ್ಯಕ್ತಿ. ಜಂಗಮನು. ಅಹಂಕಾರವಿಲ್ಲದ, ವೈರಾಗ್ಯವಿರುವ, ಶುದ್ಧ ಚರಿತ್ರೆಯುಳ್ಳ, ಜನಸೇವೆಗೆ ತೊಡಗಿದ ಶರಣ. ಜಂಗಮ. ಸಮಾಜದಲ್ಲಿ ತಿರುಗಿ, ರ‍್ಮಬೋಧನೆ ಮಾಡುವ ಚಲಿಸುವ ದೇವರು. ಸ್ಥಾವರ ದೈವ ಅಲ್ಲ, ಜಂಗಮವೇ ದೈವ”, ಅಂದರೆ ಶಿವ ರ‍್ಭಗುಡಿ, ದೇವಸ್ಥಾನದಲ್ಲಿ ಇರದೆ, ಚಲಿಸುವ ವ್ಯಕ್ತಿಯಲ್ಲಿಯೇ ದೇವರ ತತ್ವವಿದೆ ಎಂಬ ಬಸವಣ್ಣನವರ ತತ್ತ್ವ.“ಸ್ಥಾವರವು ದೈವವಲ್ಲ, ಜಂಗಮವೇ ದೈವಸ್ಥಾವರ ಪೂಜಿಸಿ ಪಾಪ ಹರವುದೆ?ಜಂಗಮ ಸೇವಿಸಿ ಪಾವನರಾಗುವುದೆ?-ಕೂಡಲಸಂಗಮದೇವಾ”ಈ ವಚನದಲ್ಲಿ ಬಸವಣ್ಣನು ಸ್ಥಾವರ (ಸ್ಥಿರವಾದ ವಸ್ತುಗಳು) ಮತ್ತು ಜಂಗಮ (ಚಲಿಸುವ, ಜೀವಂತ) ಎಂಬ ಎರಡು ತತ್ತ್ವಗಳನ್ನು ಹೋಲಿಸಿ, ಶರಣ ರ‍್ಮದ ಅಂತರಂಗ ತತ್ತ್ವವನ್ನು ನಿರೂಪಿಸುತ್ತಾನೆ. “ಸ್ಥಾವರಕ್ಕು ದೈವವಲ್ಲ”, ದೇವರನ್ನು ಕಲ್ಲಿನಲ್ಲಿ, ಮರ‍್ತಿಯಲ್ಲಿ, ದೇವಾಲಯದ ಗೋಡೆಗಳಲ್ಲಿ ಹುಡುಕುವುದು ನಿಷ್ಪ್ರಯೋಜಕ. ಅಲ್ಲಿ ಜಡತೆಯಿದೆ, ಚೇತನವಿಲ್ಲ. ತತ್ತ್ವಜ್ಞಾನ, ಸತ್ಪ್ರವೃತ್ತಿ, ಸತ್ಯಾಚರಣೆ, ಭಕ್ತಿಶ್ರದ್ಧೆ ಇಷ್ಟಲಿಂಗ ಧರಿಸಿದ ವ್ಯಕ್ತಿ ಆತನೆ ಸಜೀವ ದೇವರು. ಅಂತಹ ವ್ಯಕ್ತಿಯ ಸೇವೆ, ಸತ್ಸಂಗ, ಅವರ ಮರ‍್ಗರ‍್ಶನ ಇವೇ ನಿಜವಾದ ದೇವಪೂಜೆ. “ಸ್ಥಾವರ ಪೂಜಿಸಿ ಪಾಪ ಹರವುದೆ?” -ಕಲ್ಲಿನ ಮರ‍್ತಿಗೆ ಪೂಜೆ ಮಾಡುವುದು ಪಾಪ ಪರಿಹಾರಕ್ಕೆ ಕಾರಣವಾಗದು, ಯಾಕಂದರೆ ಅದು ಚೈತನ್ಯವಿಲ್ಲದ ಜಡ ವಸ್ತು. “ಜಂಗಮ ಸೇವಿಸಿ ಪಾವನರಾಗುದೆ?” – ಜಂಗಮನ ಸೇವೆ (ಅಥವಾ ಜ್ಞಾನಿಗಳ ಜೊತೆಗಿನ ಸತ್ಸಂಗ, ಶ್ರದ್ಧಾ) ನಮಗೆ ಪವಿತ್ರತೆಯನ್ನು ನೀಡುತ್ತದೆ. ಆತ್ಮಶುದ್ಧಿಗೆ ದಾರಿ ಒದಗಿಸುತ್ತದೆ.ಜಂಗಮ ಜಾತಿ ವಾಚಕವೇ:ಮೂಲತಃ ಜಂಗಮ ಎನ್ನುವುದು ಜಾತಿವಾಚಕ ಅಲ್ಲ. ಜಂಗಮ ಎಂಬ ಪದವು ಮೊದಲು ಆಧ್ಯಾತ್ಮಿಕ ಸ್ಥಿತಿಯನ್ನು ಸೂಚಿಸುವ ತಾತ್ವಿಕ ಶಬ್ದವಾಗಿತ್ತು, ಜಾತಿಯನ್ನಲ್ಲ. ಆದರೆ… ಇತಿಹಾಸದಲ್ಲಿ ಕೆಲ ವಂಶಗಳು, ಮಠಗಳಿಗೆ ಮತ್ತು ರ‍್ಮಸೇವೆಗೆ ನಿರಂತರವಾಗಿ ಸಲ್ಲಿಸಿದವರ ವಂಶಾವಳಿಗೆ “ಜಂಗಮ” ಎಂಬ ಪದವು ಪರಂಪರೆಯ ಗುರುತ್ವದವಾಗಿ ಬಳಕೆಯಾಗತೊಡಗಿತು. ಈ ಕಾರಣದಿಂದ ಕೆಲವರು ಜಂಗಮರನ್ನು ಜಾತಿ/ರ‍್ಗ ಎಂದು ಪರಿಗಣಿಸುತ್ತಾರೆ. ಇದು ಸಾಂಸ್ಕೃತಿಕ, ಸಾಮಾಜಿಕ ಬಳಕೆ, ರ‍್ಮ ತಾತ್ವಿಕ ರ‍್ಥವಲ್ಲ. ಶರಣರ ನುಡಿಗಳ ಪ್ರಕಾರ “ಜಾತಿ ಇಲ್ಲ, ಭೇದ ಇಲ್ಲ, ಶುದ್ಧ ಭಕ್ತಿಯ”ಜಂಗಮ ಎಂದರೆ ಶಿವನ ದೂತ, ಎಲ್ಲರಿಗೂ ಸಮಾನ. ವಂಶಪಾರಂರ‍್ಯ ಜಂಗಮ, ಗುರು, ದೀಕ್ಷಿತ ವಂಶಪಾರಂರ‍್ಯ ಜಂಗಮ. ತಾವು ಆಧ್ಯಾತ್ಮಿಕ ಗುರುಕುಲದಿಂದ ಬಂದವರು ಎಂಬ ನಂಬಿಕೆಯುಳ್ಳ ಕುಟುಂಬಗಳು, ಜಂಗಮ ಜಾತಿವಾಚಕವಲ್ಲ. ಆದರೆ “ಜಂಗಮ” ಎಂಬುದು ವೈಯಕ್ತಿಕ ರ‍್ಹತೆ ಆಧಾರಿತ ಪದವಾಗಿದೆ. ಅಂದರೆ, ಜಂಗಮತ್ವವು ವ್ಯಕ್ತಿಯ ಔಪಚಾರಿಕ ಜಾತಿಯಿಂದ ಬರುವುದಿಲ್ಲ. ಅವನು ನರ‍್ಜಾತೀಯ, ಶುದ್ಧ ಚರಿತ್ರೆ, ಲಿಂಗಧಾರಿ, ಆತ್ಮಸಾಧನೆ ಮಾಡಿದವನೇ ಜಂಗಮ. “ಜಾತಿ ಬೇರೆ ಭಕ್ತಿ ಬೇರೆ ಎನಿಸಿದರೆ, ಅವನು ಶಿವನಲ್ಲ”, ಬಸವಣ್ಣ ಹೇಳುತ್ತಾರೆ, ಎಲ್ಲ ಶರಣರು ಅಲ್ಲಮಪ್ರಭು, ಅಕ್ಕಮಹಾದೇವಿ, ಮಡಿವಾಳ ಮಾಚದೇವರು ವಿಭಿನ್ನ ಜಾತಿಗಳಿಂದ ಬಂದಿದ್ದರೂ, ಜಂಗಮತ್ವಕ್ಕೆ ರ‍್ಹರಾದರು. ಅವರಿಗೆ “ಜಂಗಮ” ಎಂಬ ಹುದ್ದೆ ಲಭಿಸಿದ್ದು, ಅವರ ಆತ್ಮಸಾಧನೆ, ಭಕ್ತಿ, ಲಿಂಗಪೂಜಾ ನಿಷ್ಠೆಯಿಂದ, ಜಾತಿಯಿಂದಲ್ಲ.ಐತಿಹಾಸಿಕ ಹಿನ್ನೆಲೆ:ಆಂಧ್ರಪ್ರದೇಶದಲ್ಲಿ ಮಲ್ಲಕಾರ್ಜುನ ಪಂಡಿತರಾಧ್ಯ ಎಂಬ ಶೈವ ಪಂಥದ ಪ್ರತಿಪಾದಕನಿದ್ದ. ಕಲ್ಯಾಣದ ವಚನ ಚಳುವಳಿ ಮತ್ತು ಶರಣ ತತ್ವದ ಬೆಳವಣಿಗೆ ಗಮನಿಸಿ, ಬೆರಗಾಗಿ ತನ್ನ ಶೈವ ತತ್ವ ಕೈಬಿಟ್ಟು, ಲಿಂಗಾಯತ ಜಂಗಮನಾದ. ಅದೇ ಸಂದರ್ಭದಲ್ಲಿ ಕಲ್ಯಾಣದಿಂದ ತೆಲುಗು ಭಾಷೆಯ ಪ್ರದೇಶದ ಕಡೆಗೆ ವಚನ ಪ್ರಚಾರ ಮತ್ತುಲಿಂಗಾಯತ ತತ್ವ ಪ್ರಸಾರಕ್ಕಾಗಿ ಸ್ವತಃ ಬಸವಣ್ಣನವರೆ ಕೆಲವು ಸಾದಕರನ್ನು ನೇಮಿಸಿದ್ದರು. ಅವರ ಕಾಲಿಗೆ ಜಂಗ್ (ಗೆಜ್ಜೆ) ಕಟ್ಟುತ್ತಿದ್ದರು. ಸದ್ದು ಮಾಡುತ್ತ ಮನೆಯಿಂದ ಮನೆಗೆ ಸಂಚರಿಸಿ ಭಕ್ತರು ಭಸ್ಮ ಧಾರಣೆ ಮತ್ತು ಲಿಂಗ ಧಾರಣೆ ಮಾಡಿದ್ದನ್ನು ಪರಿಕ್ಷೀಸುವುದು ಅವರ ಕಾಯಕವಾಗಿತ್ತು. ಅವರನ್ನೇ ಸಾರುವ ಐನಾರು, ಕಂಬಿ ಐನಾರು, ಜಂಗಿನ ಐನಾರು ಎಂದು ಕರೆಯಲಾಯ್ತು. ಕ್ರಮೇಣ ಅಂತಹ ಮನೆತನದವರನ್ನು ಓದುಸುಮಠ, ಭಿಕ್ಷÄಮಠ, ಸಾಲಿಮಠ, ಹಿರೇಮಠ ಎಂದೆಲ್ಲಾ ಪರಿವರ್ತಿಸಲಾಯಿತು. ಅವರುಗಳ ಮನೆಯಲ್ಲಿ ಬಸಯ್ಯ, ಮಡಿವಾಳಯ್ಯ, ಚನ್ನಯ್ಯ, ಶರಣಯ್ಯ, ಪ್ರಭಯ್ಯ, ಪ್ರಭುಸ್ವಾಮಿ, ಚನ್ನಬಸವಯ್ಯ, ಸಿದ್ದಯ್ಯ, ಸಿದ್ದಲಿಂಗಯ್ಯ, ಸಿದ್ರಾಮಯ್ಯ, ಮುಂತಾದ ಹೆಸರುಗಳ ನಾಮಕರಣ ಸಂಸ್ಕೃತಿ ಬೆಳೆಯಿತು. ಇಂದಿಗೂ ಬಹುತೇಕ ಜಂಗಮ ಕುಟುಂಬಗಳ ಮನೆ ದೇವರು (ಕುಲದೇವರು) ಉಳುವಿ, ಎಡೆಯೂರು, ಗುಡ್ಡಾಪುರ, ಸೊನ್ನಲಗಿ, ಮಲೈಮಹದೇಶ್ವರ ಎಂಬ ಪುಣ್ಯಕ್ಷೇತ್ರಗಳಾಗಿವೆ. ಅಂದರೆ ಕಲ್ಯಾಣ ಕ್ರಾಂತಿಯ ಬಳಿಕ ಬಹುತೇಕ ಜಂಗಮರು ಬಸವಾದಿ ಶರಣರನ್ನು ತಮ್ಮ ಕುಲದ ಗುರುಗಳನ್ನಾಗಿ ಸ್ವೀಕರಿಸಿ ಆರಾಧಿಸ ತೊಡಗಿದರು. ಅವರಲ್ಲಿ ಪ್ರಮುಖರೆಂದರೆ ಕಲ್ಬುರ್ಗಿ ಶರಣ ಬಸವೇಶ್ವರರು, ನಾಲತ್ವಾಡದ ವಿರೇಶ ಶರಣರು, ಅಥಣಿ ಶಿವಯೋಗಿಗಳು, ಧಾರವಾಡದ ಮೃತ್ಯಂಜಯ ಅಪ್ಪಗಳು, ಚಿತ್ತರಗಿ ವಿಜಯ ಮಹಾಂತೇಶ್ವರರು, ಕೊಲ್ಹಾಪುರದ ಕಾಡಸಿದ್ದೇಶ್ವರರು, ಗದಗ ತೋಂಟದಾರ್ಯರು, ಹುಬ್ಬಳ್ಳಿ ಮೂರುಸಾವಿರ ಮಠದ ಗುರು ಪರಂಪರೆ ಸೇರಿದಂತೆ ಬಹುತೇಕರು ಮೂಲತಃ ಜಂಗಮರಾಗಿದ್ದರೂ ಬಸವಾದಿ ಶರಣರ ತತ್ವವನ್ನು ಆರಾಧಿಸುವವರಾಗಿದ್ದಾರೆ.“ಬರಿಯ ಬೋಳುಗಳೆಲ್ಲಾ ಜಂಗಮವೆ?ಜಡಜೀವಿಗಳೆಲ್ಲಾ ಜಂಗಮವೆ?ವೇಷಧಾರಿಗಳೆಲ್ಲಾ ಜಂಗಮವೆ?ಇನ್ನಾವುದು ಜಂಗಮವೆದಡೆ;ನಿಸ್ಸೀಮನೆ ಜಂಗಮ,ನಿಜೈಕ್ಯನೆ ಜಂಗಮ,ಇAಥ ಜಂಗಮದ ಸುಳುಹ ಕಾಣದೆ,ಕೂಡಲ ಚನ್ನಸಂಗಮದೆವ ತಾನೆ ಜಂಗಮನಾದ”-ಅವಿರಳಜ್ಞಾನಿ, ಚನ್ನಬಸವಣ್ಣಜಂಗಮರು ಎಂಬವರು ಭಾರತೀಯ ಲಿಂಗಾಯತ ರ‍್ಮದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರ ತತ್ವ, ಜೀವನ ಶೈಲಿ, ಸಮಾಜ ಸೇವೆಯ ಮೂಲಕ ಅವರು ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ. ಜಂಗಮ ಪರಂಪರೆ ಲಕ್ಷಾಂತರ ರ‍್ಷಗಳ ಹಿಂದೆಯೇ ಆರಂಭವಾಯಿತು ಎಂಬ ನಂಬಿಕೆ ಇದೆ. ಲಿಂಗಾಯತ ರ‍್ಮದ ಪ್ರಕಾರ ಬಸವಣ್ಣ, ಅಕ್ಕ ಮಹಾದೇವಿ, ಚನ್ನಬಸವಣ್ಣ, ಇವರು ಜಂಗಮ ಪರಂಪರೆಯ ಮಹತ್ವವನ್ನು ಗಟ್ಟಿಯಾಗಿ ಸಾರಿದರು. ೧೨ನೇ ಶತಮಾನದಲ್ಲಿ ಬಸವಣ್ಣನೇ ಜಂಗಮ ಪರಂಪರೆಯ ಸಾರಥಿಯಾಗಿದ್ದು, ಜಂಗಮರ ಹೆಗ್ಗುರುತು ನೀಡಿದರು. ಅವರು ಜಂಗಮರನ್ನು ಶಿವನ ಜೀವಂತ ರೂಪವೆಂದು ಪರಿಗಣಿಸಿದರು. ದರ‍್ಬಲರಿಗೆ ರ‍್ಮೋಪದೇಶ ನೀಡುವ ಕರ‍್ಯ ಮಾಡಿದರು. ಸಮಾನತೆಯ ಸಂದೇಶ ಸಾರಿದರು. ಹಲವಾರು ಜಂಗಮ ಮಠಗಳು ರ‍್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು ಹಾಗೂ ಉತ್ತರ ಭಾರತದ ಭಾಗಗಳಲ್ಲಿ ಸ್ಥಾಪಿತವಾದವು. ಈ ಮಠಗಳು ಶಿಕ್ಷಣ, ಧರ‍್ಮಿಕ ಆಚರಣೆ ಮತ್ತು ಸಮಾಜ ಸೇವೆಯ ಕೇಂದ್ರಗಳಾಗಿದ್ದವು. ವಚನಕಾರರು ತಮ್ಮ ವಚನಗಳಲ್ಲಿ ಜಂಗಮರ ಮಹಿಮೆ, ಪಾತ್ರ, ಸಿದ್ಧಾಂತಗಳನ್ನು ಪ್ರಶಂಸಿಸಿದ್ದಾರೆ. ಜಂಗಮರನ್ನು ರ‍್ಶನ ಮಾಡಿದವನು ಶಿವನನ್ನು ಕಂಡವನಂತೆ ಎಂದು ಹಲವಾರು ವಚನಗಳು ನುಡಿದಿವೆ. ಜಂಗಮರು ಜಾತಿ ಭೇದ, ಲಿಂಗ ಭೇದ, ಶ್ರೇಣಿಭೇದಗಳ ವಿರೋಧ ಮಾಡಿ ಸಮಾನತೆಯ ಸಂದೇಶ ಸಾರಿದರು. ಅವರು ಯಾವುದೇ ಭಿನ್ನತೆ ಇಲ್ಲದೆ ಎಲ್ಲರ ಮನೆಗಳಿಗೆ ಹೋಗಿ ಶಿವತತ್ವ ಸಾರಿದವರು.ಉತ್ತರ ಕರ‍್ನಾಟಕ ಮತ್ತು ಆಂಧ್ರದ ಕೆಲವು ಪ್ರದೇಶಗಳಲ್ಲಿ “ಬಸಳ ಜಂಗಮ”ಎಂಬ ಶಾಖೆ ಇದೆ. ಇವರು ಮಠ ಸೇವೆಗೆ ಮತ್ತು ಧರ‍್ಮಿಕ ಕರ‍್ಯಗಳಿಗೆ ಬದ್ಧರಾಗಿರುತ್ತಾರೆ. ಪಂಚಮಸಾಲಿ ಸಮುದಾಯದಲ್ಲಿ ಕೆಲವರೆಗೆ ಜಂಗಮ ಸೇವೆಯ ಪರಂಪರೆಯ ಹಿನ್ನಲೆ ಇದೆ. ಕೆಲ ಭಾಗಗಳಲ್ಲಿ “ಬಂಟನಾಡು ಜಂಗಮರು” ಎಂಬ ಪ್ರತ್ಯೇಕ ಗುರುಕುಲ ಪ್ರಚಾರದಲ್ಲಿದೆ. ತೆಲಂಗಾಣ, ಆಂಧ್ರಪ್ರದೇಶದಲ್ಲಿ “ವೀರಶೈವ ಜಂಗಮರು” ತಮ್ಮನ್ನು ಪ್ರತ್ಯೇಕ ಗುಂಪಾಗಿ ಗುರುತಿಸಿಕೊಂಡಿದ್ದಾರೆ. ಇವರು ಪೂಜಾ, ಪಾಠ, ಲಿಂಗ ಧಾರಣೆ, ಹಾಗೂ ಗ್ರಾಮೋಪದೇಶಕಾರರಾಗಿರುತ್ತಾರೆ. ಈ ವಂಶಗಳು ಜಂಗಮ ಗುರುಗಳಿಗೆ ಸೇವೆ ಮಾಡಿದವರು ಅಥವಾ ಅವರ ವಂಶಜರು ತಮ್ಮನ್ನು “ಜಂಗಮ” ಎಂದು ಗುರುತಿಸಿಕೊಂಡಿದ್ದಾರೆ: ಸೋಲಾಪುರ, ನಾಂದೇಡ್, ಲಾತೂರ್ ಮುಂತಾದ ಕಡೆಗಳಲ್ಲಿ ವೀರಶೈವ ಜಂಗಮ ಎಂಬ ಪ್ರತ್ಯೇಕ ಗುಂಪು ಕಂಡುಬರುತ್ತದೆ. ಈ ವಂಶಗಳು “ಜಂಗಮ” ಎಂಬ ಪದವನ್ನು ತಮ್ಮ ಗುರುತಾಗಿ ಬಳಸಿದರೂ, ಜಾತಿ ಅಥವಾ ವಂಶ ಬದಲಾಗಿಸಿಕೊಂಡಿದ್ದಾರೆ.ಜಂಗಮ ಹೆಸರಿನಿಂದ ಕಂದಾಚಾರ:ಅಲ್ಲಮಪ್ರಭು, ಬಸವಣ್ಣ, ಚನ್ನಬಸವಣ್ಣ ಮತ್ತು ಇತರ ಶರಣರು ನಕಲಿ ಜಂಗಮರ ವಿರುದ್ಧ ತೀವ್ರ ಎಚ್ಚರಿಕೆ ನೀಡಿದ್ದಾರೆ. ಬಸವಣ್ಣ ಹೇಳುತ್ತಾರೆ, “ಜಂಗಮವೆಂಬ ಪೈಲಾಸಕ್ಕೆ ಹೊದಿದ ಬಡವನು, ಜಾತಿಯನು ಮರೆಯದೆ, ಪಾಡಿನಲ್ಲಿ ಉರುಳಿದನು,ಅವನನ್ನು ಭಕ್ತನೆಂಬುದು ದೋಷ.” ಈ ವಚನದ ತಾತ್ರ‍್ಯ: ಕೆಲವರು ಹೊರಗೆ ಜಂಗಮದ ವೇಷ ಧರಿಸಿ, ಒಳಗೆ ಅಹಂಕಾರ, ಕಾಮ, ಲೋಭ ಇತ್ಯಾದಿ ತೊಟ್ಟುಕೊಂಡಿರುವರು. ಅಂತಹವರು ಕಂದಾಚಾರ (ಅರ‍್ಮಾಚರಣೆ) ಮಾಡುತ್ತಿದ್ದರೆ, ಅವರಿಗೆ ‘ಜಂಗಮ’ ಪದ ಹಕ್ಕಾಗಿಲ್ಲ. ಕಂದಾಚಾರದಲ್ಲಿ ತೊಡಗಿರುವ ಜಂಗಮರು ಭಾವವಿಲ್ಲದ ಲಿಂಗಪೂಜೆ, ಹಣಕ್ಕೆ ರ‍್ಮ ಮಾರಾಟ, ಲೈಂಗಿಕ ದರ‍್ಬಳಕೆ, ದುರಾಚಾರ ಇವೆಲ್ಲ ಶರಣ ರ‍್ಮದಲ್ಲಿ ತೀವ್ರ ಅಪರಾಧ. ಶರಣ ತತ್ತ್ವದ ವಿರುದ್ಧ. ಶರಣ ಪರಂಪರೆ ಅವರಿಗೆ ಮಾನ್ಯತೆ ನೀಡುವುದಿಲ್ಲ. ಅಂತಹವರಿಂದ ದೂರವಿರಬೇಕು. “ಜಂಗಮ” ಎಂಬ ಹೆಸರಿನಲ್ಲಿ ಹಣ, ಶೋಷಣೆ ಮಾಡುತ್ತಿರುವ ಸ್ಥಿತಿಗಳು ಕಂಡುಬರುತ್ತಿವೆ. ಇದು ರ‍್ಮ ದ್ರೋಹವೇ ಸರಿ. ಜಂಗಮ ಎಂಬ ಪದವನ್ನು ದುರುಪಯೋಗಪಡಿಸಿಕೊಂಡು, ಕಂದಾಚಾರದ ಅಪರಾಧಗಳಲ್ಲಿ ತೊಡಗಿರುವವರು ಶರಣ ರ‍್ಮದ, ಬಸವ ತತ್ತ್ವದ, ಲಿಂಗಾಯತ ಪರಂಪರೆಯ ಶತ್ರುಗಳೇ ಆಗಿದ್ದಾರೆ. ಜಂಗಮ ಎಂದು ಹೇಳಿಕೊಂಡು ಪಾದಪೂಜೆ, ಪಲ್ಲಕ್ಕಿ ಉತ್ಸವ, ಹಣ ವಸೂಲಿಗಳು ಶರಣ ರ‍್ಮದ ತತ್ತ್ವಕ್ಕೆ ವಿರುದ್ಧ. ಜಂಗಮನು ಕಪಟ ವಿರಹಿತ, ಲೋಭ ರಹಿತ, ಭಕ್ತರ ಸೇವಕ. ಜಂಗಮ ಪದವನ್ನು ಹೇಳಿಕೊಂಡು ಗೌರವ ಕೇಳಿಕೊಳ್ಳುವುದು ಸರಿಯಲ್ಲ. ನಿಜವಾದ ಜಂಗಮನು ಸ್ವಂತ ಏಳಿಗೆಗೆ ಅಲ್ಲ, ಭಕ್ತರ ಮರ‍್ಗರ‍್ಶನಕ್ಕಾಗಿರಬೇಕು. ಜಂಗಮನು ಭಕ್ತನ ಮನೆಗೆ ಬಂದು ಇಷ್ಟಲಿಂಗಕ್ಕೆ ಅನುಭವ ಬೋಧಿಸಬೇಕು. ಭಕ್ತನು ಹಣ ನೀಡಿದರೆ ಅದನ್ನು ಸ್ವೀಕರಿಸದಿರಬೇಕು. ಇಂದು ಜಂಗಮ ಎಂಬ ಪವಿತ್ರ ಪದವನ್ನು ವ್ಯಾಪಾರದಂತೆ ಬಳಸುತ್ತಿದ್ದಾರೆ. ಪಾದಪೂಜೆಗೆ ಪಾವತಿಸಬೇಕು, ಪಲ್ಲಕ್ಕಿಗೆ ಹಣ ನೀಡಬೇಕು. ಬಸವ ತತ್ತ್ವ, ಶರಣ ಸಂಪ್ರದಾಯ ಮತ್ತು ವಚನ ಸಾಹಿತ್ಯದಲ್ಲಿ ಜಾತಿವಾದ, ಬಾಹ್ಯಾಚಾರ, ಮರ‍್ತಿ ಪೂಜೆ, ಪಾದಪೂಜೆ ಎಲ್ಲವನ್ನೂ ತಿರಸ್ಕರಿಸಲಾಗಿದೆ. — . -ಡಾ. ಸತೀಶ ಕೆ. ಇಟಗಿಪತ್ರಿಕೋದ್ಯಮ ಉಪನ್ಯಾಸಕಅಂಚೆ: ಕೋಳೂರು-೫೮೬೧೨೯ತಾ: ಮುದ್ದೇಬಿಹಾಳ, ಜಿ: ವಿಜಯಪುರ (ಕರ್ನಾಟಕ ರಾಜ್ಯ)ಮೊ: ೯೨೪೧೨೮೬೪೨೨Email: satshitagi10@gmail.com,

“ಸ್ಥಾವರದೇವರಲ್ಲ, ಜಂಗಮಜಾತಿವಾಚಕವಲ್ಲ: ಅದರ ಕಂದಾಚಾರವೇ ಧರ್ಮದ್ರೋಹ”-ಡಾ. ಸತೀಶ ಕೆ. ಇಟಗಿ Read Post »

ನಿಮ್ಮೊಂದಿಗೆ

“ಎಳ್ಳು ಅಮಾವಾಸ್ಯೆಯ ಸಡಗರ” ಡಾ. ಮೀನಾಕ್ಷಿ ಪಾಟೀಲ

ಸಂಸ್ಕೃತಿ ಸಂಗಾತಿ ಡಾ. ಮೀನಾಕ್ಷಿ ಪಾಟೀಲ “ಎಳ್ಳು ಅಮಾವಾಸ್ಯೆಯ ಸಡಗರ” “ಎಳ್ಳಮ್ಮಾಸೆ “ ಜನಪದರ ದೇಸಿ ಮಾತಿನಲ್ಲಿ ಕರೆಯಲ್ಪಡುವ ಎಳ್ಳು ಅಮವಾಸೆ ಉತ್ತರ ಕರ್ನಾಟಕದ ರೈತರ ಹಬ್ಬ. “ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು” ಎಂಬ ನುಡಿ ಕೃಷಿಯ ಮಹತ್ವವನ್ನು ಕುರಿತು ಹೇಳುತ್ತದೆ. ಕೃಷಿ ಪ್ರಧಾನವಾದ ಭಾರತ ದೇಶದಲ್ಲಿ ಬೇರೆ ಬೇರೆ ಕಡೆಗಳಲ್ಲಿ ಬೇರೆ ಬೇರೆ ರೀತಿಯ ರೈತರ ಹಬ್ಬಗಳನ್ನು ಆಚರಿಸಲಾಗುತ್ತದೆ. ವೈವಿಧ್ಯಮಯವಾಗಿ ವಿಭಿನ್ನ ರೀತಿಯಲ್ಲಿ ರೈತರು ಭೂತಾಯಿಯ ಹಬ್ಬವನ್ನು ಮಾಡುತ್ತಾರೆ. ಇದು ಜನಪದರ ಹಬ್ಬ. ಹಿಂದಿನಿಂದಲೂ ಹಿರಿಯರು ಆಚರಿಸಿಕೊಂಡು ಬರುತ್ತಿರುವ ಈ ಹಬ್ಬ ನಮ್ಮ ಪರಂಪರೆ,ಸಂಸ್ಕೃತಿ, ನೆಲ,ಜಲ ಈ ಎಲ್ಲವುಗಳ ಪ್ರಾತಿನಿಧಿಕ ಆಚರಣೆಯಾಗಿದೆ. ಮಾರ್ಗಶಿರ ಮಾಸದ ಅಂದರೆ ಚಳಿಗಾಲದಲ್ಲಿ ಬರುವ ಅಮಾವಾಸ್ಯೆ ಹೊತ್ತಿಗೆ ರೈತರು ಎಳ್ಳಿನ ಸುಗ್ಗಿ ಮಾಡಿರುತ್ತಾರೆ. ಒಕ್ಕಲು ಮಾಡಿದ ಹೊಸ ಎಳ್ಳಿನ ಪದಾರ್ಥವನ್ನು ಮೊದಲು ಭೂತಾಯಿಗೆ ನೈವೇದ್ಯ ಅರ್ಪಿಸುವುದು ವಾಡಿಕೆ.  ರೈತ ಕುಟುಂಬಗಳ ಒಂದು ದೈವ ನಂಬಿಕೆಯು ಆಗಿದೆ. ಆ ಕಾರಣದಿಂದಲೋ ಎನೊ ಈ ಅಮಾವಾಸ್ಯೆಗೆ ಎಳ್ಳುಅಮಾವಾಸ್ಯೆಯೆಂದು ಹೆಸರು ಬಂದಿರಬಹುದು. ನಾವು ಪ್ರಕೃತಿಯನ್ನು ಹೆಣ್ಣಿಗೆ ಹೋಲಿಸುತ್ತೇವೆ. ಹೆಣ್ಣು ಫಲವಂತಿಕೆಯ ಒಡಲು ಹೊತ್ತವಳು. ಹಾಗೆ ಪ್ರಕೃತಿ ಕೂಡ ತನ್ನ ಒಡಲಿನಲ್ಲಿ ಸೃಷ್ಟಿಯನ್ನೇ ಹೊತ್ತವಳು. ಭೂಮಿ ಮತ್ತು ಹೆಣ್ಣು ಸೃಷ್ಟಿಕ್ರಿಯೆಯಲ್ಲಿ ಸಮಾನರು. ಹೆಣ್ಣು ತನ್ನ ಗರ್ಭದಲ್ಲಿ ಮಗುವನ್ನು ಹೊತ್ತು ಹೆತ್ತು  ಪಾಲನೆ ಪೋಷಣೆ ಮಾಡಿ ಸಲಹುತ್ತಾಳೆ. ಹಾಗೆ ಭೂಮಿ ಕೂಡ ಈ ಪ್ರಕ್ರಿಯೆಗೆ ಹೊರತಲ್ಲ. ತನ್ನ ಒಡಲಿನಲ್ಲಿ ಅಗಾಧವಾದ  ಬೆಳೆಗಳನ್ನು ತುಂಬಿಕೊಂಡು ಜಗಕೆ ಅನ್ನ ನೀಡುತ್ತಾಳೆ. ಭೂತಾಯಿಯನ್ನು ಹೆಣ್ಣೆಂದು ಭಾವಿಸಿಕೊಂಡು ಗರ್ಭ ಧರಿಸಿದ ಹೆಣ್ಣು ಮಕ್ಕಳಿಗೆ ಸೀಮಂತ ಕಾರ್ಯವನ್ನು ನೆರವೇರಿಸುವ ಹಾಗೆ ಭೂತಾಯಿಗೆ ಕೂಡ ಮಡಿಲು ತುಂಬುವ ಕಾರ್ಯ ಮಾಡುತ್ತಾರೆ. ಮುಂಗಾರಿನಲ್ಲಿ ಸೀಗೆ ಹುಣ್ಣಿಮೆ ಹಿಂಗಾರಿನಲ್ಲಿ ಎಳ್ಳು ಅಮಾವಾಸ್ಯೆಯನ್ನು ಸಾಂಪ್ರದಾಯಿಕವಾಗಿ ಭೂತಾಯಿಯ  (ಸೀಮಂತ ಕಾರ್ಯ)ಶುಭ ಕಾರ್ಯವನ್ನು ಚರಗದ ಹೆಸರಿನಲ್ಲಿ ಮಾಡುತ್ತಾರೆ..ಹಿಂಗಾರು ಬೆಳೆ ಕಾಳು ಕಟ್ಟುವ ಸಮಯದಲ್ಲಿ ( ಜೋಳ ಕಡಲೆ ಇತರೆ ಬೆಳೆಗಳು) ಬರುವ ಎಳ್ಳು ಅಮಾವಾಸ್ಯೆ ರೈತರ ಪಾಲಿಗೆ ವೈಭವದ ಆಚರಣೆ. ಪ್ರಾದೇಶಿಕ ಸೊಗಡಿನಿಂದ ಕೂಡಿದ ವಿಶಿಷ್ಟ ಪೂರ್ಣವಾದ ಒಂದು ಪರ್ವ. ಹಲವು ನಂಬಿಕೆ ಆಶಯಗಳೊಂದಿಗೆ ರೈತರು ನಿಸರ್ಗದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುತ್ತಾರೆ. ಪ್ರಕೃತಿ ಮತ್ತದರ ಸಂಗತಿಗಳನ್ನು ಅತ್ಯಂತ ಭಾವನಾತ್ಮಕ ಮನಸ್ಸಿನಿಂದ ನೋಡುತ್ತಾರೆ. ಒಕ್ಕಲು ಮಕ್ಕಳು ಪರಂಪರಾಗತವಾಗಿ ರೂಢಿಸಿಕೊಂಡು ಬಂದ ವೃತ್ತಿ ಜೀವನದ ಒಂದು ಕ್ರಮವೂ ಹೌದು. ಅನ್ನ ನೀಡುವ ಭೂತಾಯಿಗೆ ಅಪಾರ ಗೌರವ ಪ್ರೀತಿಯನ್ನು ತೋರಿಸುತ್ತಾರೆ. ಭೂತಾಯಿಯ ಸಾಂಗತ್ಯದಲ್ಲಿ ಹತ್ತು ಹಲವು ಬಗೆಯ ಪೂಜಾ ವಿಧಿಗಳನ್ನು ಮಾಡುತ್ತಾರೆ. ಬಿತ್ತುವ ಮುನ್ನ ಕೂರಿಗೆ ಪೂಜೆ ಸಲ್ಲಿಸುವುದಾಗಲಿ , ಬೆಳೆ ಬೆಳೆದು ನಿಂತಾಗ ಚರಗದ ವಿಧಿ, ಮೇಟಿ ಕಂಬಕ್ಕೆ ಹಂತಿ ಹೂಡುವುದಾಗಲಿ, ಕಣದ ಪೂಜೆ ಸಲ್ಲಿಸುವುದಾಗಲಿ, ರಾಶಿಯನ್ನು ಚೀಲಕ್ಕೆ ತುಂಬುವಾಗಿನ ಪೂಜೆಯಾಗಲಿ ಇವೆಲ್ಲವೂ  ಒಕ್ಕಲು ಸಮೃದ್ಧಿಗೆ ಭೂತಾಯಿಯನ್ನು ಬೇಡಿಕೊಳ್ಳುವ ಪರಿಗಳೇ ಆಗಿವೆ. ಇವೆಲ್ಲದರ ಮಧ್ಯೆ ಹಚ್ಚ ಹಸುರಿನ ಬೆಳಗಳ  ಚರಗದ ಸಂಭ್ರಮವಂತು ಮಹಾಪರ್ವದಂತೆ ಕಾಣಿಸುತ್ತದೆ. ಬೆಳೆ ಬೆಳೆದು ನಿಂತ ಹೊಲದಲ್ಲಿ ಭೂತಾಯಿ ಬಯಕೆ ತೀರಿಸಲು ವಿವಿಧ ರೀತಿಯ ಭಕ್ಷ ಭೋಜನಗಳನ್ನು ತಯಾರಿಸುತ್ತಾರೆ. ಅಮಾವಾಸ್ಯೆಯ ಹಿಂದಿನ ದಿನ ಹೆಣ್ಣು ಮಕ್ಕಳು ರಾತ್ರಿ ಇಡೀ ಅಡುಗೆ ತಯಾರಿಸುವಲ್ಲಿ ನಿರತರಾಗುತ್ತಾರೆ. ಅಕ್ಕಪಕ್ಕದ ಮನೆಯ ಗೆಳತಿಯರು ಕೈಗೂಡಿಸುತ್ತಾರೆ. ಎಳ್ಳು ಶೇಂಗಾ ಬೆಲ್ಲ ಸೇರಿಸಿ ಮಾಡುವ ಹೋಳಿಗೆಗೆ ಅಗ್ರಸ್ಥಾನ. ಎಳ್ಳು ಅಮಾವಾಸ್ಯೆಗೆ ಎಳ್ಳು ಹೋಳಿಗೆ ಅನ್ವರ್ಥಕವಾಗಿರುತ್ತಿತ್ತು. ಹೂರಣದ ಹೋಳಿಗೆ ಕರಿಗಡಬು, ನೀರುಗಿಯಲ್ಲಿ ಬೇಯಿಸಿದ ಜೋಳ ಇಲ್ಲವೆ ಸಜ್ಜೆ ಕಡಬು.ಮೊಸರುಬಾನ,ಅನ್ನ,ಬೇಳೆ ಕಟ್ಟಿನ ಸಾರು (ಹೋಳಿಗೆ ಸಾರು) ನವಣಕ್ಕಿ ಅನ್ನ , ಮ್ಯಾಣದಂತೆ ಮಗುಚಿದ   ಹುಳಿ ಪುಂಡಿ ಪಲ್ಯ ಕುಚ್ಚಿದ ಹಸಿಮೆಣಸಿನಕಾಯಿ ಪಲ್ಯ,  ಚವಳಿ ಕಾಯಿ ಪಲ್ಯ ಐದು ಬಗೆಯ ದ್ವಿದಳ ಧಾನ್ಯಗಳನ್ನು ಕೂಡಿಸಿ ಮಾಡಿದ ಉದುರು ಕಾಳು ಪಲ್ಯ, ತುಂಬು ಬದನೆಕಾಯಿ, ಕೆನೆ ಮೊಸರು, ಕಾರೆಳ್ಳು, ಅಗಸಿಯ ಕಮ್ಮನೆಯ ಹಿಂಡಿ, ಎಳ್ಳು ಹಚ್ಚಿದ ಸಜ್ಜಿ ರೊಟ್ಟಿ, ಜೇನಿನಂತ ಕಂಚಿಕಾಯಿ ಉಪ್ಪಿನಕಾಯಿ…. ಲೆಕ್ಕವಿಲ್ಲದಷ್ಟು, ಭೋಜನ ಸಂಗೀತವೆಲ್ಲ, ಚುಮು ಚುಮು ಬೆಳಗಾಗುವುದರೊಳಗೆ ಸಿದ್ಧವಾಗುತ್ತಿತ್ತು. ಅತ್ತ ಗಂಡಸರು ನಸುಕಿನಲ್ಲೇ ಎದ್ದು ಎತ್ತುಗಳ ಮೈ ತೊಳೆದು ಅವುಗಳ ಮೈಗೆ ಒಂದಿಷ್ಟು ಬಣ್ಣ ಬಳಿದು ಕೋಡುಗಳಿಗೆ ಝೂಲಾವನ್ನು ಮತ್ತು ಬಣ್ಣದ ರಿಬ್ಬನ್ನು ಕಟ್ಟಿ ಅಲಂಕಾರ ಮಾಡುತ್ತಾರೆ. ಬಂಡಿಯನ್ನು ಸ್ವಚ್ಛಗೊಳಿಸಿ ಎತ್ತು ಮತ್ತು ಬಂಡಿಗೆ ಪೂಜೆ ನೆರವೇರಿಸುತ್ತಾರೆ.ಇತ್ತ ಹೆಣ್ಣು ಮಕ್ಕಳು ಅಡುಗೆ ಕೆಲಸ ಮುಗಿಸಿ ವಿಶೇಷವಾಗಿ ದೇಸಿ ಉಡುಗೆ ತೊಟ್ಟು (ಇಲಕಲ್ ಸೀರೆ ಉಟ್ಟುಕೊಂಡು) ಸಿಂಗಾರವಾಗುತ್ತಾರೆ. ಮಾಡಿದ ಅಡುಗೆಯನ್ನು ಒಂದೂ ಮರೆಯದೆ ದೊಡ್ಡ ಬಿದಿರಿನ ಬುಟ್ಟಿಯಲ್ಲಿ ಇಟ್ಟು ಅಡುಗೆ ಬುಟ್ಟಿಯನ್ನು ಪೂಜಿಸಿ ನಂತರ ಬಿಳಿ ಧೋತರದ ಅರಿವೆಯಲ್ಲಿ ಬುಟ್ಟಿಯನ್ನು ಇಟ್ಟು ಗಟ್ಟಿಯಾಗಿ ಕಟ್ಟಿ ಜೋಪಾನವಾಗಿ ತಂದು ಬಂಡಿಯಲ್ಲಿಡುತ್ತಾರೆ. ಮನೆಯ ಎಲ್ಲಾ ಹೆಣ್ಣು ಮಕ್ಕಳು, ಬಂಧು ಬಾಂಧವರು, ಮಕ್ಕಳು ಬಂಡಿಯಲ್ಲಿ ಹೊರಡುತ್ತಾರೆ. ಗುಡ್ಡಗಳ ದಾರಿ ಹಿಡಿದು ಎರೆ ಹೊಲದ ಕಡೆಗೆ ಎತ್ತುಗಳು ದಾರಿ ತುಳಿಯುತ್ತಿದ್ದಂತೆ ದಿಬ್ಬಣದ ವೈಭವದಂತೆ ಕಾಣುತ್ತದೆ.ಹೊಲದಲ್ಲಿ ದಟ್ಟ ಜೋಳದ ಬೆಳೆಯ ಮಧ್ಯೆ ತೆನೆ ತುಂಬಿದ ಐದು ಜೋಳದ ದಂಟುಗಳನ್ನು ಸೇರಿಸಿ ಕಟ್ಟಿ ಬುಡದಲ್ಲಿ ಐದು ಕಲ್ಲು ಅಥವಾ ಮಣ್ಣಿನ ಹೆಂಟೆಯನ್ನು ಇಟ್ಟು ಪಾಂಡವರ ಪೂಜೆ ಮಾಡುವರು (ಇದು ವನವಾಸದಲ್ಲಿದ್ದ ಪಾಂಡವರು ಕಷ್ಟಪಟ್ಟು ಕೃಷಿಗೈದ ನೆನಪಂತೆ) ಪೂಜೆಯ ನಂತರ ಮಾಡಿದ ಅಡುಗೆಯ ನೈವೇದ್ಯವನ್ನು ಇಡೀ ಹೊಲದ ತುಂಬ ಚರಗ ಚೆಲ್ಲುವ ವಿಧಿಯಾಚರಣೆ ಹುಲ್ಲುಲ್ಲಿಗೋ ……. ಚಲ್ಲಾಂಬರಿಗೋ ಎನ್ನುತ್ತಾ ಎಲ್ಲ ಅಡುಗೆ ಪದಾರ್ಥಗಳನ್ನು ಇಷ್ಟಿಷ್ಟು ಹೊಲದ ತುಂಬ ಚೆಲ್ಲಾಡುತ್ತ ನೀರನ್ನು ಸಿಂಪಡಿಸುತ್ತ ಭೂತಾಯಿ ಬಯಕೆಯನ್ನು ತೀರಿಸುತ್ತಾರೆ . ನಂತರ ಬನ್ನಿ ಗಿಡದ ಬುಡದಲ್ಲಿ ಲಕ್ಷ್ಮಿ ಪೂಜೆ ಮತ್ತು ಬನ್ನಿ ಗಿಡದ ಪೂಜೆ ನಡೆಯುತ್ತದೆ. ಎಲ್ಲ ಪೂಜಾ ವಿಧಿಗಳು ಮುಗಿದ ನಂತರ ಎಲ್ಲರೂ ಊಟಕ್ಕೆ ಕುಳಿತುಕೊಳ್ಳುವರು. ಮಾಡಿದ ಅಡುಗೆಯ ಪದಾರ್ಥಗಳು ತಾಟಿನಲ್ಲಿ (ತಟ್ಟೆ) ಸಾಲಲಾರದಷ್ಟು ಏನೇನು ತಿನ್ನುವುದು ಎಂಬ ಗೊಂದಲವಾಗುತ್ತದೆ. ಊಟದ ನಡುವೆ ಬಾಡಿಸಿಕೊಳ್ಳಲು ಅಲ್ಲೇ ಹೊಲದಲ್ಲಿಯೇ ಇದ್ದ ಹಸಿ ಉಳ್ಳಾಗಡ್ಡಿ, ಮೆಂತ್ಯ ಪಲ್ಯ, ಹತ್ತರಕಿಯನ್ನು ತಂದು ಇಡುವರು. ಹೀಗೆ ಹಿರಿಯರು ಬಂದು ಬಾಂಧವರು ಸ್ನೇಹಿತರು, ಮಕ್ಕಳು ಹರಟುತ್ತ ಸುಖ ದುಃಖ ಮಾತನಾಡುತ್ತಾ ಪರಸ್ಪರರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾ ಸಂತೋಷದಿಂದ ನಗುನಗುತ್ತ ಊಟ ಮಾಡುತ್ತಾರೆ. ಊಟದ ನಂತರ ಮಕ್ಕಳೆಲ್ಲ ಸುಲಗಾಯಿ ಎಂದರೆ ಹಸಿ ಕಡಲೆಯನ್ನು ತಿನ್ನಲು ಓಡುವರು. ಮನೆಯ ಹೆಣ್ಣು ಮಕ್ಕಳೆಲ್ಲ ಜೋಳದ ಬೆಳೆಯ ಮಧ್ಯೆ ಬೆಳೆದ ಪುಟ್ಟಿ ಹಣ್ಣನ್ನು (ಸೌತೆ ಹಣ್ಣು) ಹುಡುಕಾಡುವ ನೆಪದಲ್ಲಿ ಇಡೀ ಹೊಲವನ್ನೆಲ್ಲ ಸುತ್ತಾಡಿ ಸುಲಗಾಯಿ ಪುಟ್ಟಿ ಹಣ್ಣು ಕಡಗಾಯಿ(ಕಸುಕಾದ ದೊಡ್ಡ ಸೌತೆಕಾಯಿ ಇದನ್ನು ಉಪ್ಪಿನಕಾಯಿ ಹಾಕಲು ಬಳಸುತ್ತಾರೆ) ಇವನ್ನೆಲ್ಲ ಸಂಗ್ರಹಿಸಿಕೊಂಡು ಬರುತ್ತಾರೆ. ಅಷ್ಟೊತ್ತಿಗೆ ಇಳಿ ಹೊತ್ತು.ಹೊತ್ತು ಜಾರುತ್ತಿದ್ದಂತೆ ಎತ್ತಿನ ಕೊರಳು ಕಟ್ಟುತ್ತಿದ್ದ ಯಜಮಾನನನ್ನ ನೋಡಿ ಎಲ್ಲರೂ ಬಂದು ಬಂಡಿಯಲ್ಲಿ ಕುಳಿತುಕೊಳ್ಳುತ್ತಾರೆ. ಚರಗದ ಸಂಭ್ರಮವನ್ನು ಮೆಲುಕು ಹಾಕುತ್ತಾ ಬೆಳೆಯ ಸಮೃದ್ಧಿಯ ನಿರೀಕ್ಷೆಯಲ್ಲಿ ಮತ್ತೊಂದು ಎಳ್ಳು ಅಮಾವಾಸ್ಯೆಯನ್ನು ಎದುರು ನೋಡುತ್ತ ಮನೆ ಕಡೆಗೆ ಹೆಜ್ಜೆ ಹಾಕುತ್ತಾರೆ. ಡಾ. ಮೀನಾಕ್ಷಿ ಪಾಟೀಲ

“ಎಳ್ಳು ಅಮಾವಾಸ್ಯೆಯ ಸಡಗರ” ಡಾ. ಮೀನಾಕ್ಷಿ ಪಾಟೀಲ Read Post »

ಕಾವ್ಯಯಾನ, ಗಝಲ್

ಮಾಜಾನ್‌ ಮಸ್ಕಿ ಗಜಲ್

ಕಾವ್ಯ ಸಂಗಾತಿ ಮಾಜಾನ್‌ ಮಸ್ಕಿ ಗಜಲ್ ಹೊಕ್ಕಳ ಬಳ್ಳಿ ಹೃದಯದ ಬಡಿತ ನೀನಲ್ಲವೆಜಗಮರೆಸುವ ಕಂದ ನಗುವ ಹಿತ ನೀನಲ್ಲವೆ ಪ್ರಪಂಚದಲಿ ಒಂಟಿಯಲ್ಲ ಜೊತೆ ನೀನಿರಲುಪ್ರೀತಿ ವಾತ್ಸಲ್ಯ ಬಾಂಧವ್ಯದ ತುಡಿತ ನೀನಲ್ಲವೆ ಮರುಭೂಮಿಯಲಿ ಒಯಸಿಸ್ ಸಿಕ್ಕಂತಾದೆಅಕ್ಕರೆ ಆಸರೆ  ಕಾರಂಜಿಯ ಪುಟಿತ ನೀನಲ್ಲವೆ ಪಾಲನೆಯಲಿ ಕಳೆದ ದಿನಗಳು ತಿಳಿಯಲಿಲ್ಲಇಳಿ ವಯಸ್ಸಿನ ಉತ್ಸಾಹದ ಮಿಡಿತ ನೀನಲ್ಲವೆ ತುಂಬಿದ ನವಮಾಸದಲ್ಲಿ ಬಂದ ಜೀವ ನೀನುಮಾಜಾ ಜನುಮಜನುಮದ ಸೆಳೆತ ನೀನಲ್ಲವೆ ಮಾಜಾನ್ ಮಸ್ಕಿ

ಮಾಜಾನ್‌ ಮಸ್ಕಿ ಗಜಲ್ Read Post »

ಕಾವ್ಯಯಾನ

ಅನಸೂಯ ಜಹಗೀರದಾರ ಕವಿತೆ “ಹಲವು ಬಲಿದಾನಗಳು”

ಕಾವ್ಯ ಸಂಗಾತಿ ಅನಸೂಯ ಜಹಗೀರದಾರ “ಹಲವು ಬಲಿದಾನಗಳು” ಸುಧಾರಣೆಯಾಗುತ್ತವೆ..ಹೀಗೆಅಂದುಕೊಳ್ಳುತ್ತೇವೆ. ಕೆಲವು ಆಹುತಿಯಿಂದಕೆಲವು ಬಲಿದಾನದಿಂದಹಾಗೆಯೇ ನನ್ನ ವಾತಾವರಣವೂ.. ಅರೆ..! ಏನಾಗಿಹೋಯ್ತು..ಅಂತ ಚಿಂತಿಸಬಾರದು..ಬಲಿದಾನಕ್ಕೆ ಬೆದರಬಾರದು..ಆಹುತಿಗೆ ಅಂಜಬಾರದು.. ಇಲ್ಲದಿರೆ..;ಭಗತಸಿಂಗ್ ಶಹೀದನಾಗುತ್ತಿರಲಿಲ್ಲ..ಲಕ್ಷೀಬಾಯಿ ಸಂತಾನ ಕಳೆದುಕೊಳ್ಳುತ್ತಿರಲಿಲ್ಲ..! ನಿಜ..!ದೇವರೂ ಸಹ ವರ ದಯಪಾಲಿಸಲುತಪಸ್ಸು ಬೇಡುತ್ತಾನೆಹವಿಸ್ಸಿನ ನಂತರವೇ ಕಣ್ಣು ತೆರೆಯುತ್ತಾನೆ..! ಇದಕ್ಕಲ್ಲವೆ..,ಪಾನಾ ಹೈತೋ ಕುಛ ಖೋನಾ ಹೈ..!ಹಸನಾ ಹೈ ತೋ ಕುಛ ರೋನಾ ಹೈ.. ಇಷ್ಟೇ….,ನಾವು ಬಂದದ್ದು ಏಕೆಂದುಇರುವುದು ಏಕೆಂದುತಿಳಿದರೆ ಸಾಕು… ಒಂದು,ಆಂದೋಲನಒಂದು ಕ್ರಾಂತಿ ಆಗಬೇಕಾದರೆಹಲವು ಬಲಿದಾನವೂ ಬೇಕು..!ಹಲವು ಗಂದಗಿ ತೊಲಗಲುಗಂಧ ಹೊತ್ತ ಮರುತ ಬೇಕುಹಾಗಾದರೆ ಮಾತ್ರಸುಧಾರಣೆಯ ಸುಗಂಧ ಹರಡೀತು..!! ಅನಸೂಯ ಜಹಗೀರದಾರ

ಅನಸೂಯ ಜಹಗೀರದಾರ ಕವಿತೆ “ಹಲವು ಬಲಿದಾನಗಳು” Read Post »

ನಿಮ್ಮೊಂದಿಗೆ

“ಮಾದರಿ ನಾಯಕತ್ವ” ವೀಣಾ ಹೇಮಂತ್‌ ಗೌಡ ಪಾಟೀಲ್

ಸ್ಫೂರ್ತಿ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ್ “ಮಾದರಿ ನಾಯಕತ್ವ” ಚಿಕ್ಕಂದಿನಲ್ಲಿ ಮೇಲಧಿಕಾರಿ ಮತ್ತು ನಾಯಕ ಇವೆರಡರ ನಡುವಿನ ವ್ಯತ್ಯಾಸವನ್ನು ಓದಿದ್ದೆ. ಅದರಲ್ಲಿನ ಕೆಲ ವಾಕ್ಯಗಳು ನನಗೆ ತುಂಬಾ ಇಷ್ಟವಾಗಿ ನನ್ನ ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದೆ ಕೂಡ.  ಬಾಸ್ ಅಥವಾ ಮೇಲಧಿಕಾರಿ ಆದವನು ತನ್ನ ಸಹೋದ್ಯೋಗಿಗಳೊಂದಿಗೆ ಯಾವುದಾದರೂ ವಿಷಯವನ್ನು ಇಲ್ಲವೇ ಕೆಲಸವನ್ನು ಹೇಳಬೇಕಾದರೆ ನಾನು ಎಂದು ಆರಂಭಿಸುತ್ತಾನೆ…. ಆದರೆ ನಿಜವಾದ ಲೀಡರ್ ಅಥವಾ ನಾಯಕನಾದವನು ನಾವು ಎಂದು ಹೇಳುತ್ತಾನೆ ಎಂಬ ಮಾತುಗಳು ಮನಸ್ಸಿಗೆ ಬಹಳ ಹಿಡಿಸಿದ್ದವು. ಇದಕ್ಕೆ ಪೂರಕವಾಗಿ ನಮ್ಮ ಮಾಜಿ ರಾಷ್ಟ್ರಪತಿ ಆಗಿರುವ ಕ್ಷಿಪಣಿ ತಜ್ಞ ಎಂದೇ ಹೆಸರಾದ  ಡಾಕ್ಟರ್ ಎಪಿಜೆ ಅಬ್ದುಲ್ ಕಲಾಮ್ ಅವರು ಹೇಳಿದ ಒಂದು ವಿಷಯವನ್ನು ನಾನು ಇಲ್ಲಿ ಪ್ರಸ್ತಾಪ ಮಾಡಲೇಬೇಕು. ವಿಕ್ರಮ್ ಸಾರಾಭಾಯಿ ಅವರು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷರಾಗಿದ್ದಾಗ ಡಾಕ್ಟರ್ ಎ ಪಿ ಜೆ ಅಬ್ದುಲ್ ಕಲಾಂ ಮತ್ತು ಅವರ ಸಹೋದ್ಯೋಗಿಗಳ ಅವಿರತ ಪ್ರಯತ್ನದ ಫಲವಾಗಿಪಿಎಸ್ಎಲ್ ವಿ ಉಪಗ್ರಹ  ಉಡಾವಣೆಯಾಯಿತು…. ಆದರೆ ಉಡ್ಡಯನಗೊಂಡ ಕೆಲವೇ ಕ್ಷಣಗಳಲ್ಲಿ ಉಪಗ್ರಹವು ಪತನವಾಯಿತು. ಇದು ದೇಶದ ಜನರ ಬೇಸರಕ್ಕೂ ರಾಜಕೀಯ ವಿರೋಧ ಪಕ್ಷಗಳ ಕೆಂಗಣ್ಣಿಗೂ ಗುರಿಯಾಯಿತು. ಕೋಟ್ಯಾಂತರ ಜನರು ಹೊಟ್ಟೆ ಹಸಿವಿನಿಂದ ಒದ್ದಾಡುತ್ತಿರುವ ಭಾರತದಂತಹ ದೇಶದಲ್ಲಿ ನೂರಾರು ಕೋಟಿಗಳಷ್ಟು ಹಣವನ್ನು ಖರ್ಚು ಮಾಡಿ ಉಪಗ್ರಹವನ್ನು ಉಡಾಯಿಸುವ ಅವಶ್ಯಕತೆ ಇದೆಯೇ ಎಂಬ ಕುರಿತು ಈಗಾಗಲೇ ಸಾಕಷ್ಟು ಪರ-ವಿರೋಧ ಚರ್ಚೆಗಳಾಗಿದ್ದವು. ಅಂತಹ ಸಮಯದಲ್ಲಿ ಉಪಗ್ರಹವು ಪತನಗೊಂಡದ್ದು ಇಸ್ರೋದ ಎಲ್ಲ ವಿಜ್ಞಾನಿಗಳಿಗೆ ಬೇಸರವನ್ನುಂಟು ಮಾಡಿದ್ದರೂ ಮುಂದಿನ ಅರ್ಧ ಗಂಟೆಯಲ್ಲಿ ಜರುಗುವ ಪತ್ರಿಕಾಗೋಷ್ಠಿಗೆ ಹಾಜರಾಗಬೇಕಾದದ್ದು ಅವಶ್ಯ ವಾಗಿತ್ತು. ಎಲ್ಲಾ ವಿಜ್ಞಾನಿಗಳು ಪತ್ರಿಕಾಗೋಷ್ಠಿಗೆ ಹೋಗಲು ಹಿಂಜರಿಯುತ್ತಿರುವಾಗ  ಸಂಸ್ಥೆಯ ನಿರ್ದೇಶಕರಾದ ವಿಕ್ರಂ ಸಾರಾಭಾಯಿ ಅವರು ತಾವೇ ಖುದ್ದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ತಮ್ಮ ಕಾರ್ಯ ವೈಖರಿಯ ಕುರಿತು ಮಾಧ್ಯಮದವರಿಗೆ ಮನದಟ್ಟು ಮಾಡಿಕೊಟ್ಟರು ಮಾತ್ರವಲ್ಲದೇ ಉಪಗ್ರಹ ಪತನದ ಹಿಂದಿನ ಎಲ್ಲಾ ಸೋಲನ್ನು ತಮ್ಮ ಮೇಲೆ ಹಾಕಿಕೊಂಡರು. ಈ ವಿಷಯ ಎಲ್ಲ ಯುವ ಬಾಹ್ಯಾಕಾಶ ವಿಜ್ಞಾನಿಗಳ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿತ್ತು. ಮುಂದಿನ ಕೆಲವೇ ತಿಂಗಳುಗಳಲ್ಲಿ ಮತ್ತೊಂದು ಉಪಗ್ರಹವನ್ನು ಉಡಾಯಿಸಲು ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿದ್ದರು ಕೂಡ ಈ ಹಿಂದಿನ ಸೋಲು ಎಲ್ಲರಲ್ಲೂ ತುಸು ಆತಂಕವನ್ನು ಸೃಷ್ಟಿ ಮಾಡಿತ್ತು. ಉಪಗ್ರಹ ಯಶಸ್ವಿಯಾಗಿ ಉದಾವಣೆಯಾಗಿ ಎಲ್ಲರ ಚಪ್ಪಾಳೆಯ ಝೇಂಕಾರ ವೀಕ್ಷಣಾ ಕೋಣೆಯನ್ನು ತುಂಬಿತ್ತು. ಈ ಯಶಸ್ಸಿನ ಕುರಿತು ಬರೆಯಲು ಪತ್ರಕರ್ತರು ಕಾಯುತ್ತಿದ್ದರು…. ಆಗ ತಮ್ಮ ಸಹೋದ್ಯೋಗಿಗಳನ್ನು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲು ಕಳುಹಿಸಿಕೊಟ್ಟ ವಿಕ್ರಂ ಸಾರಾಭಾಯಿ ತಾವು ಹಿಂದೆ ಉಳಿದರು.ಸೋಲಿನ ಎಲ್ಲ ಭಾರವನ್ನು, ಜವಾಬ್ದಾರಿಯನ್ನು ತನ್ನ ಮೇಲೆ ಹೇರಿಕೊಳ್ಳುವ ಮತ್ತು ಗೆಲುವನ್ನು ಸಂಭ್ರಮಿಸಲು ಸಹೋದ್ಯೋಗಿಗಳಿಗೆ ಅವಕಾಶ ಮಾಡಿಕೊಟ್ಟ ವಿಕ್ರಂ ಸಾರಾಭಾಯಿಯವರ ಅಂದಿನ ನಡೆ ನಿಜವಾದ ನಾಯಕತ್ವ ಹೇಗಿರಬೇಕು ಎಂಬುದಕ್ಕೆ ಅತ್ಯುತ್ತಮ ಉದಾಹರಣೆ ಎಂದು ಕಲಾಂ ಅವರ ಈ ಅನುಭವದಿಂದ ನಾವು ತಿಳಿದುಕೊಳ್ಳಬಹುದು. ಇದೀಗ ನಾವು ಸಣ್ಣಪುಟ್ಟ ಹಳ್ಳಿಗಳಿಂದ ಹಿಡಿದು ದಿಲ್ಲಿಯವರೆಗಿನ ಎಲ್ಲ ಭಾಗಗಳಲ್ಲಿ ಸ್ವಯಂ ಘೋಷಿತ ನಾಯಕರನ್ನು, ದೇವಮಾನವರನ್ನು ಕಾಣುತ್ತೇವೆ. ಮತ್ತು ಅವರ ಅಭಿಮಾನಿ ಸಂಘಗಳನ್ನು ಕೂಡ. ನಿಜವಾದ ನಾಯಕತ್ವ ಎಂದರೇನು ಎಂಬುದರ ಪರಿಕಲ್ಪನೆಯೇ ಇಲ್ಲದ ಸಾಕಷ್ಟು ಜನ ತಮ್ಮನ್ನು ತಾವು ನಾಯಕರೆಂದು ಹೇಳಿಕೊಳ್ಳುತ್ತಿರುವುದು ಸ್ವಯಂ ಘೋಷಿತ ನಾಯಕರ ಅಜ್ಞಾನವೋ  ಅಥವಾ ಹಾಗೆ ಹೇಳಿಕೊಳ್ಳುತ್ತಿರುವವರನ್ನು ಅತಿಯಾಗಿ ಪುರಸ್ಕರಿಸುವ ಜನರ ತಪ್ಪೋ ಎಂಬುದು ಗೊತ್ತಾಗುತ್ತಿಲ್ಲ. ಹಾಗಾದರೆ ನಾಯಕ ಎಂದರೇನು? ನಾಯಕತ್ವದ ಲಕ್ಷಣಗಳು ಯಾವುವು ಎಂಬ ಸಂದೇಹ ನಮ್ಮಲ್ಲಿ ಕಾಡಬಹುದು ಅದಕ್ಕೆ ಉತ್ತರವನ್ನು ಹುಡುಕುವ ಒಂದು ಸಣ್ಣ ಪ್ರಯತ್ನ ಇಲ್ಲಿದೆ. ಒಳ್ಳೆಯ ನಾಯಕ ಎಂದರೆ ಎಲ್ಲ ವಿಷಯಗಳ ಕುರಿತು ಅರಿವನ್ನು ಹೊಂದಿರುವುದು ಮತ್ತು ಎಲ್ಲ ವಿಷಯಗಳಲ್ಲಿಯೂ ಪರಿಪೂರ್ಣತೆಯನ್ನು ಹೊಂದಿರುವ ವ್ಯಕ್ತಿ  ಎಂದಲ್ಲ. ನಾಯಕತ್ವ ಎನ್ನುವುದು ನೀವು ಜನರೊಂದಿಗೆ ಯಾವ ರೀತಿ  ವರ್ತಿಸುತ್ತೀರಿ, ಯಾವ ರೀತಿ ಸಹಾಯ ಮಾಡುತ್ತೀರಿ ಮತ್ತು ನೀವು ಮಾಡುವ ಸಹಾಯ ಅವರ ಬದುಕಿನಲ್ಲಿ ಬೀರಬಹುದಾದ ಪರಿಣಾಮಗಳ ಕುರಿತು ಯೋಚಿಸುವುದು ನಾಯಕತ್ವ ಎಂದೆನಿಸಿಕೊಳ್ಳುತ್ತದೆ.  ಕೆಳಗಿನ ಏಳು ಸರಳ ವಿಧಾನಗಳು ಉತ್ತಮ ನಾಯಕತ್ವಕ್ಕೆ ಮಾದರಿ *ನಾಯಕನಾದವನು ದಯಾಳುವಾಗಿರಬೇಕು…. ಒಳ್ಳೆಯ ನಾಯಕನಾದ ವ್ಯಕ್ತಿ ಇತರರೊಂದಿಗೆ ಗೌರವ ಮತ್ತು ಕಾಳಜಿಯಿಂದ ವರ್ತಿಸುತ್ತಾನೆ. ದಯಾ ಗುಣವು ನಂಬಿಕೆಯನ್ನು ವೃದ್ಧಿಸುತ್ತದೆ. ವಿಶ್ವಾಸವನ್ನು ಹೊಂದಲು ಕಾರಣವಾಗುತ್ತದೆ. ಆದ್ದರಿಂದ ಒಳ್ಳೆಯ ನಾಯಕನಾದವನು ಅವರು ತನ್ನ ವಿರೋಧಿಯೇ ಇರಲಿ, ತನ್ನನ್ನು ಹೀಯಾಳಿಸುವ ವ್ಯಕ್ತಿಯೇ ಇರಲಿ ಅವರೊಂದಿಗೆ ಪ್ರೀತಿಪೂರ್ವಕವಾಗಿ ನಡೆದುಕೊಳ್ಳಬೇಕು. * ನಾಯಕ ಮಿತ ಭಾಷಿಯಾಗಿರಬೇಕು…. ಒಳ್ಳೆಯ ನಾಯಕತ್ವ ಗುಣ ಹೊಂದಿರುವವನು ತನ್ನ ಎದುರಿಗಿರುವವರ ಮಾತನ್ನು ಗಮನವಿಟ್ಟು ಆಲಿಸುತ್ತಾನೆ. ತಾನು ಮಿತಭಾಷಿಯಾಗಿದ್ದು ತನ್ನ ಸಂಪೂರ್ಣ ಲಕ್ಷವನ್ನು ಇತರರ ಮಾತುಗಳನ್ನು ಕೇಳುವುದರಲ್ಲಿ ವಿನಿಯೋಗಿಸುವ ವ್ಯಕ್ತಿ ಒಳ್ಳೆಯ ನಾಯಕತ್ವಕ್ಕೆ ಉದಾಹರಣೆ. ಜನರಿಗೆ ನಿಜವಾಗಿಯೂ ಏನು ಬೇಕಾಗಿರುತ್ತದೆ ಎಂಬುದನ್ನು ಅರಿಯುವ ಮತ್ತು ಅದನ್ನು ಕಾರ್ಯರೂಪಕ್ಕೆ ತರುವ ವ್ಯಕ್ತಿ ನಿಜವಾದ ನಾಯಕ. * ನಾಯಕ ಎಲ್ಲರಿಗೂ ಸಿಗುವಂತಿರಬೇಕು….. ಮಹಡಿಯ ಮೇಲೆ ನಿಂತು ಕೈ ಬೀಸುವ, ವೇದಿಕೆಗಳಲ್ಲಿ ನಮಸ್ಕರಿಸುವ ವ್ಯಕ್ತಿಗಳಿಗಿಂತ ಜನಸಾಮಾನ್ಯರ ನಡುವೆ ಬೆರೆಯುವ ಜನರ ಕಷ್ಟ ಸುಖಗಳಿಗೆ ಪ್ರತಿ ಸ್ಪಂದಿಸುವ, ಜನರ ನೋವಿಗೆ ಕಿವಿಯಾಗುವ, ಅವರ ತೊಂದರೆಗೆ ದನಿಯಾಗುವ ವ್ಯಕ್ತಿ ನಿಜವಾದ ನಾಯಕ. ಜನರು ತಮ್ಮ ನಾಯಕನ ಬಳಿ ಬಂದು ತಮ್ಮ ತೊಂದರೆಗಳನ್ನು ಮತ್ತು ಯೋಜನೆಗಳನ್ನು ಸರಳವಾಗಿ ಹಂಚಿಕೊಳ್ಳುವಂತಹ ವಾತಾವರಣವನ್ನು ಕಲ್ಪಿಸಿ ಕೊಡುವ ವ್ಯಕ್ತಿ ನಿಜವಾದ ನಾಯಕ ಎನಿಸಿಕೊಳ್ಳುತ್ತಾನೆ. *ತನ್ನ ಸಹೋದ್ಯೋಗಿಗಳಿಗೆ, ಹಿಂಬಾಲಕರಿಗೆ ವಿಶ್ರಾಂತಿಗೆ ಅವಕಾಶ ನೀಡುವ ವ್ಯಕ್ತಿ ನಿಜವಾದ ನಾಯಕ. *ನಿಜವಾದ ನಾಯಕ ತನ್ನ ಜೊತೆ ಕೆಲಸ ಮಾಡುವವರಿಗೆ ತಪ್ಪು ಮಾಡಿದಾಗ ಅವಹೇಳನ ಮಾಡುವುದಿಲ್ಲ… ಆತನಿಗೆ ಗೊತ್ತು ತಪ್ಪುಗಳು ಕಲಿಕೆಗೆ ಮತ್ತು ಬೆಳವಣಿಗೆಗೆ ಸಹಾಯಕ ಎಂದು. ನಾಯಕನಾದವನು ತಪ್ಪನ್ನು ತಿದ್ದಿಕೊಂಡು ಮುನ್ನಡೆಯಲು ಪ್ರೋತ್ಸಾಹಿಸುತ್ತಾನೆ. *ನಿಜವಾದ ನಾಯಕತ್ವ ಗುಣವಿರುವ ವ್ಯಕ್ತಿ ಜನರ ಸಾಮರ್ಥ್ಯ ಗಳನ್ನು ಅರಿಯುವ ಶಕ್ತಿಯನ್ನು ಹೊಂದಿರುತ್ತಾನೆ. *ಉತ್ತಮ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತಾನೆ. ಅವರ ಅನುಭವಕ್ಕೆ ಬೆಲೆ ನೀಡುತ್ತಾನೆ. ನಾಯಕತ್ವ ಗುಣವನ್ನು ಹೊಂದಿರುವುದು ದೈವದತ್ತ ಕಲೆ. ಕಲಿಕೆ ಮತ್ತು ಪ್ರಯತ್ನದ ಮೂಲಕ ನಾಯಕತ್ವ ಗುಣವನ್ನು ಅಳವಡಿಸಿಕೊಳ್ಳುವ ಮೂಲಕ ಪ್ರತಿ ಮಗುವೂ ಉತ್ತಮ ನಾಯಕರಾಗಿ ಬೆಳೆಯಲಿ ಎಂಬ ಆಶಯದೊಂದಿಗೆ ವೀಣಾ ಹೇಮಂತ್ ಗೌಡ ಪಾಟೀಲ್

“ಮಾದರಿ ನಾಯಕತ್ವ” ವೀಣಾ ಹೇಮಂತ್‌ ಗೌಡ ಪಾಟೀಲ್ Read Post »

ಕಾವ್ಯಯಾನ

“ಸಗ್ಗ ಬಂದಿತು ಇಳೆಗೆ” ಡಾ. ಪಿ. ಜಿ. ಕೆಂಪಣ್ಣವರ

ಕಾವ್ಯ ಸಂಗಾತಿ ಡಾ. ಪಿ. ಜಿ. ಕೆಂಪಣ್ಣವರ “ಸಗ್ಗ ಬಂದಿತು ಇಳೆಗೆ” ಎರಳೆಗಂಗಳ ಚೆಲುವೆನಗುವ ಮೋಹಕ ತಾರೆನಿನ್ನ ನೋಡುತ ನಾನು   ಮರುಳನಾದೆ!ಬರಿ ಚಣದ ಬದುಕಿನಲಿಒಲವ ಬಿತ್ತಿದ ನೀನುಬಾಳ ದಾರಿಗೆ ನಿತ್ಯ ದೀಪವಾದೆ ಬಿರಿದ ಮಲ್ಲಿಗೆ ದಂಡೆಮುಡಿದು ನೀ ಬರುತಿರಲುಪಿಕವು ಕೂಗಿತು ಅರಸಿ ಬಂದಳೆಂದು!ಬದುಕ ಬಂಡಿಗೆ ಎರಡುಗಾಲಿ ನಾವಿರುತಿರಲುಹದುಳ ತುಂಬುವುದಿಲ್ಲಿ ಬಳಿಗೆ ಬಂದು! ಬಾಳ ಪಯಣದ ತುಂಬಹಸಿರು ತುಂಬಿತು ನಲ್ಲೆನಿನ್ನ ಒಲುಮೆಯ ತೊರೆಯು ಹರಿಯುತಿರಲು!ಬಂದ ಜಂಜಡವೆಲ್ಲಕರಗಿ ಹೋಯಿತು ಸಖಿಯೇಸಗ್ಗ ಬಂದಿತು ಇಳೆಗೆ ನೀನು ನಗಲು! ಡಾ. ಪಿ. ಜಿ. ಕೆಂಪಣ್ಣವರ

“ಸಗ್ಗ ಬಂದಿತು ಇಳೆಗೆ” ಡಾ. ಪಿ. ಜಿ. ಕೆಂಪಣ್ಣವರ Read Post »

ಕಥಾಗುಚ್ಛ

“ಕ್ಷಮೆ” ಸುಮತಿ ಪಿ ಅವರ ಸಣ್ಣ ಕಥೆ

ಕಥಾ ಸಂಗಾತಿ ಸುಮತಿ ಪಿ “ಕ್ಷಮೆ” ಅಂದು ಕೋಮಲ ಅದೆಷ್ಟು ಬೇಡಿಕೊಂಡರೂ ನಾನು ಅವಳಿಗೆ ತವರಿಗೆ ಹೋಗುವುದಕ್ಕೆ ಒಪ್ಪಿಗೆ ನೀಡದೇ ತಪ್ಪು ಮಾಡಿದೆನಲ್ಲ!!!. ಪಾಪ! ಕೋಮಲ ತವರಿಗೆ ಹೋಗಬೇಕೆಂಬ ಹಿರಿದಾಸೆಯನ್ನು ಇಟ್ಟುಕೊಂಡಿದ್ದಳು. ಅಂದು ಮಾವಯ್ಯನವರ ಬಾಯಿಯಿಂದ ತಪ್ಪಿ ಬಂದ ಒಂದೇ ಒಂದು ಮಾತಿನಿಂದಾಗಿ ಸಿಟ್ಟುಗೊಂಡಂತಹ ನಾನು ನಿನಗೆ ತವರು ಮನೆ ಬೇಕಾ ? ಗಂಡನ ಮನೆ ಬೇಕಾ?..ಎರಡರಲ್ಲಿ ಒಂದನ್ನು ನೀನೇ ಆರಿಸಿಕೊ…ಎಂದು ಗಟ್ಟಿಯಾಗಿ ಹೇಳಿದಾಗ, ಹೆಣ್ಣಿಗೆ ಮದುವೆಯಾದ ಮೇಲೆ ಗಂಡನ ಮನೆಯೇ ಸರ್ವಸ್ವವೆಂದರಿತ ಕೋಮಲ, ಕಣ್ಣೀರು ಹಾಕುತ್ತಾ ಹಿಂತಿರುಗಿ ನೋಡದೆ ನನ್ನ ಹಿಂದೆ ಬಂದಿದ್ದಾಗಲೂ,ನಾನು ಅವಳ ಮನಸ್ಸನ್ನು ಅರಿಯದೆ ಹೋದೆನಲ್ಲ!!!. ಪಾಪ ಅವಳ ತಂದೆ ಇಹಲೋಕ ತ್ಯಜಿಸಿದಾಗಲೂ ನನ್ನ ಅನುಮತಿ ಸಿಗಲಾರದೆಂದು ತವರಿಗೆ ಹೋಗದೆ, ಗಂಡನೇ ಸರ್ವಸ್ವವೆಂದು ಗಂಡನಿಗಾಗಿ, ತನ್ನಿಬ್ಬರು ಮಕ್ಕಳಿಗಾಗಿ ನೋವನ್ನೆಲ್ಲ ನುಂಗಿ, ತನ್ನ ಮಕ್ಕಳು ಗಂಡನಿಗಾಗಿ ಜೀವನವಿಡೀ ದುಡಿದು,ಪ್ರಾಣವನ್ನೇ ತ್ಯಜಿಸಿದಳಲ್ಲ! ನನ್ನನ್ನು ಒಂಟಿಯಾಗಿ ಬಿಟ್ಟು ಹೋಗಿದ್ದಾಳೆ. ಅಂದು ಅವಳು “ಒಂದು ಬಾರಿ ನಮ್ಮಪ್ಪನನ್ನು ಕ್ಷಮಿಸಿ ಬಿಡಿರಿ”ಎಂದು ಗೋಗರೆದು ಕೇಳಿದಾಗಲೂ ನಾನು, ಅದೆಂಥ ಕಠೋರ ಮನಸ್ಸಿನವನಾಗಿದ್ದೆ. ಅಂದು ಅವಳನ್ನು ಸಮಾಧಾನಿಸಿ, ನನ್ನ ಸಿಟ್ಟು ಕಡಿಮೆ ಮಾಡಿ, ಅವಳೊಂದಿಗೆ ತವರಿಗೆ ಹೋಗಬೇಕಿತ್ತು.ಆದರೆ ನನ್ನ ಅಹಂ ನನಗೆ ಹೆಚ್ಚಾಗಿತ್ತು. ಕ್ಷಮೆ ಎನ್ನುವ ಶಬ್ದ ಕೇಳಿದಾಗಲೇ ನನಗೆ ಸಿಟ್ಟು ನೆತ್ತಿಗೇರುತ್ತಿತ್ತು. ಆದರೆ ನನ್ನ ಕೋಮಲ ಎಲ್ಲವನ್ನು ಸಹಿಸಿ, “ಈ ಗಂಡಸರೇ ಹೀಗೆ” ಎಂದು ಗೊಣಗುತ್ತಿದ್ದರೂ, ನನ್ನೊಂದಿಗೆ ಹೊಂದಿಕೊಂಡು ಹೋಗುತ್ತಿದ್ದಳು. ಆ ನೆನಪು ಇಂದಿಗೂ ನನ್ನನ್ನು  ಸೂಜಿಯ ಮೊನೆಯಂತೆ ಚುಚ್ಚುತ್ತನೋಯಿಸುತ್ತಿದೆ. ರಾಮರಾಯರು ಆ ಹಳ್ಳಿಯಲ್ಲಿ ಗುತ್ತಿನ ಮನೆಯ ಗುರಿಕಾರರಾಗಿದ್ದರು. ಅವರ ಹಿರಿಯ ಮಗಳೇ ಕೋಮಲ.ಕೋಮಲಳನ್ನು ಮೆಚ್ಚಿ ಮದುವೆಯಾಗಿದ್ದ ಕೀರ್ತನ ರಾಮರಾಯರ ಹಿರಿಯಳಿಯನಾಗಿದ್ದ. ರಾಮರಾಯರಿಗೆ ಮತ್ತಿಬ್ಬರು ಹೆಣ್ಣು ಮಕ್ಕಳಿದ್ದರು. ರಾಮರಾಯರ ಹೆಂಡತಿ ಮೊದಲೇ ಮರಣ ಹೊಂದಿದ್ದರಿಂದ, ಹಿರಿಯ ಮಗಳಾದ ಕೋಮಲ ತನ ಇಬ್ಬರು ತಂಗಿಯರಿಗೆ ಅಮ್ಮನ ಸ್ಥಾನದಲ್ಲಿ ಇದ್ದುಕೊಂಡು, ಒಳ್ಳೆಯ ಸಂಸ್ಕಾರವನ್ನು ನೀಡಿದ್ದಳು. ಗುತ್ತಿನ ಮನೆಯವರಾದ್ದರಿಂದ ಊರಿನ ನಾಲ್ಕು ಜನರಿಗೆ ನೀತಿ ಮಾತನ್ನು ಹೇಳುವ ಮನೆತನದಲ್ಲಿ ಯಾವುದೇ ಕೆಟ್ಟ ನಡವಳಿಕೆಗಳು ನಡೆಯದಂತೆ ಬಹಳ ಎಚ್ಚರಿಕೆಯಿಂದ ರಾಮರಾಯರು ನನ್ನ ಮೂವರು ಹೆಣ್ಣು ಮಕ್ಕಳನ್ನು ಸಾಕಿ ಸಲಹಿದ್ದರು. ಮದುವೆಯಾದ ಪ್ರಾರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಕೋಮಲ ಆಗಾಗ ತವರಿಗೆ ಹೋಗಿ ತನ್ನಿಬ್ಬರು ತಂಗಿಯಂದಿರಿಗೆ ಎಚ್ಚರಿಕೆಯ ಮಾತನ್ನು ಹೇಳುತ್ತಾ, ಸಲಹೆ ಸೂಚನೆಗಳನ್ನು ನೀಡುತ್ತಾ, ತಾಯಿಯ ಸ್ಥಾನದ ತನ್ನ ಕರ್ತವ್ಯವನ್ನು ನೆರವೇರಿಸುತ್ತಾ, ತವರು ಮನೆ ಹಾಗೂ ಗಂಡನ ಮನೆ ಎರಡೂ ಮನೆಯಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಳು. ಮೂರು ನಾಲ್ಕು ವರ್ಷಗಳಲ್ಲಿ ಕೋಮಲಳ ತಂಗಿಯಂದಿರಿಗೆ ಮದುವೆಯಾಯಿತು. ಇಬ್ಬರ ಗಂಡಂದಿರು ಒಳ್ಳೆಯ ಸ್ಥಿತಿವಂತರಾಗಿದ್ದರು. ಹಾಗೆ ನೋಡಿದರೆ ಕೋಮಲಳ ಗಂಡ ಕೀರ್ತನ್ ನಿಗೆ ಗುಮಾಸ್ತ ಕೆಲಸವನ್ನು ಬಿಟ್ಟರೆ,  ಆಸ್ತಿ ಪಾಸ್ತಿ ಏನೂ ಇರಲಿಲ್ಲ.ಅಂದಿನಿಂದ ಕೀರ್ತನ ನ ಮನೆಯಲ್ಲಿ ಇರುಸು ಮುರುಸು ಪ್ರಾರಂಭವಾಯಿತು . ಇದಕ್ಕೆ ಮುಖ್ಯ ಕಾರಣ ಕೀರ್ತನನ ಮನಸಲ್ಲಿದ್ದ ಕೀಳರಿಮೆ. ಮಾವ ಕರೆದಾಗಲಿಲ್ಲ ಕೋಮಲಳೊಂದಿಗೆ ಹೋಗುತ್ತಿದ್ದ ಕೀರ್ತನ ಇದೀಗ ಹೋಗುವುದನ್ನು ಕಡಿಮೆ ಮಾಡತೊಡಗಿದ. ಕೋಮಲ ಒತ್ತಾಯಿಸಿದರೂ, ನೀನು ಹೋಗಿ ಬಾ ನನಗೆ ಕೆಲಸ ಇದೆ ಎಂದು ಅವಳೊಬ್ಬಳನ್ನೇ ಕಳುಹಿಸುತ್ತಿದ್ದ. ಮಕ್ಕಳು “ಅಪ್ಪಾ ನೀನೂ ಬಾ” ಎಂದು ಹಠ ಮಾಡಿ ಕರೆದರೆ ಏನು ಮಾಡಲಾಗದೆ ಮಕ್ಕಳೊಂದಿಗೆ ಹೋಗಿ ಅವರನ್ನು ಅಲ್ಲಿ ಬಿಟ್ಟು, ತಾನು ರಾತ್ರಿ ಉಳಿದುಕೊಳ್ಳದೆ ಹಿಂದಿರುಗಿ ಬರುತ್ತಿದ್ದ. ಅದೊಂದು ದಿನ ಕೋಮಲಳ ಮನೆಯಲ್ಲಿ ಪೂಜೆ ನಡೆಯುವುದಿತ್ತು. ಕೋಮಲ ಈ ಬಾರಿ ಗಂಡ ಕೀರ್ತನನಿಗೆ ನೀವು ಬರಲೇಬೇಕೆಂದು ಹಠ ಹಿಡಿದಳು.“ನೀನು ಮಕ್ಕಳು ಹೋಗಿ ಬನ್ನಿ “ಎಂದಾಗ ಕೇಳಿಸದೆ ಒತ್ತಾಯಪೂರ್ವಕವಾಗಿ ಗಂಡನನ್ನು ಕರೆದುಕೊಂಡು ಮಕ್ಕಳ ಜೊತೆಗೆ ಹೊರಟಳು. ಆ ದಿನ  ತನ್ನ ಮಾವ ಉಳಿದಿಬ್ಬರು ಅಳಿಯಂದಿರಿಗೆ ಕೊಟ್ಟಷ್ಟು ಗೌರವ ಹಿರಿಯ ಅಳಿಯನಾದ ನನಗೆ ಕೊಡುತ್ತಿಲ್ಲ ಎಂದು ಕೋಪಗೊಂಡು ಕೀರ್ತನ್  ಜಗಳ ಮಾಡಿಕೊಂಡು, ಊಟವನ್ನೂ ಮಾಡದೆ ಹೊರಡಲನುವಾದಾಗ, ಕೋಮಲ ನಮ್ಮ ತಂದೆಯವರಿಗೆ ಪ್ರಾಯವಾಗಿದೆ ಏನೋ ತಪ್ಪಿ ಬಾಯಿಂದ ಮಾತು ಬಂದಿರಬಹುದು ಕಣ್ರಿ. ಅದನ್ನೇ ಏಕೆ ದೊಡ್ಡದು ಮಾಡುತ್ತೀರಾ. ಅಪ್ಪನ ಪರವಾಗಿ ನಾನು ಕ್ಷಮೆ ಕೇಳುತ್ತಿದ್ದೇನೆ ಹೋಗಬೇಡಿ, ಊಟ ಮಾಡಿ ಒಟ್ಟಿಗೆ ಹೋಗೋಣವಂತೆ ಎಂದಾಗ, ಇಲ್ಲ ಕಣೇ ನನಗೆ ಅನುಭವಿಸಿದ್ದೆ ಬೇಕಾದಷ್ಟು ಆಯಿತು ಈ ಮನೆಯ ಊಟ ಯಾರಿಗೆ ಬೇಕಾಗಿದೆ? “ನಿನಗೆ ತವರು ಮನೆ ಹೆಚ್ಚೊ ಗಂಡನ ಮನೆ ಹೆಚ್ಚೊ ನಿನ್ನ ನಿರ್ಧಾರಕ್ಕೆ ಬಿಟ್ಟಿದ್ದು” ಎಂದು ಹೊರಡಲನುವಾದಾಗ,ಕೋಮಲ ನೋವಿನಿಂದಲೇ ಗಂಡ ಕೀರ್ತನನ ಹಿಂದೆಯೇ ಬಂದುಬಿಟ್ಟಿದ್ದಳು. ಅಂದಿನಿಂದ ಮಕ್ಕಳಾಗಲಿ, ಅವಳಾಗಲಿ ಆ ಮನೆಗೆ ಕಾಲಿಡಲಿಲ್ಲ. ಎರಡೂ ಮನೆಗಳ ಸಂಪರ್ಕ ಕಡಿದಂತೆ ಆಯಿತು. ಮುಂದೊಂದು ದಿನ ಕೋಮಲಳ ತಂದೆ ತೀರಿ ಹೋದ ಸುದ್ದಿಯನ್ನು ಕೋಮಲ ಊರಿನವರಿಂದ ತಿಳಿದು, “ನಾನೊಂದು ಸಲ ತಂದೆಯ ಮುಖವನ್ನು ನೋಡಬೇಕು” ಎಂದು ಗಂಡನನ್ನು ಅಂಗಲಾಚಿದರೂ ಕೀರ್ತನ್ ಒಪ್ಪಿಗೆಯನ್ನು ನೀಡಿರಲಿಲ್ಲ. ಅತ್ತು ಅತ್ತು ಕೋಮಲ ಸುಮ್ಮನಾಗಿದ್ದಳು. ಹೌದು ಕ್ಷಮೆ ಎನ್ನುವ ಪದಕ್ಕೆ ಬಹಳ ಹಿರಿದಾದ ಅರ್ಥವಿದೆ. ಎರಡು ಮನಸ್ಸುಗಳನ್ನು ಬೆಸೆಯುವ ಎರಡು ಕುಟುಂಬಗಳನ್ನು ಹೊಸೆಯುವ, ಸಮಾಜವನ್ನು ಒಂದುಗೂಡಿಸುವ ಶಕ್ತಿ ಇದೆ. ಅಂದು ನಾನು ಕೋಮಲ ಸಾರಿ ಸಾರಿ ಬೇಡಿದಾಗ ನನ್ನ ಅಹಂ ಬಿಟ್ಟು ನಾನು ಕ್ಷಮಿಸುತ್ತಿದ್ದರೆ ಎರಡು  ಕುಟುಂಬಗಳ ನಡುವೆ ಗೋಡೆ ನಿರ್ಮಾಣವಾಗುತ್ತಿರಲಿಲ್ಲ. ಅವಳು ಆ ಸಂದರ್ಭದಲ್ಲಿ ಎಷ್ಟು ನೊಂದಿದ್ದಳೊ !! ಸಾಯುವಾಗಲೂ ಅದೇ ನೋವಿನಲ್ಲಿ ಆಕೆ ಇಹಲೋಕ ತ್ಯಜಿಸಿದ್ದಳು. ನಾನು ಮಾಡಿದ ತಪ್ಪಿಗೆ ನನಗೀಗ ಶಿಕ್ಷೆಯಾಗುತ್ತಿದೆ. ನನ್ನ ಮಕ್ಕಳಿಗೆ ತವರಿಗೆ ಹೋಗಬೇಕು, ತಾಯಿ ಇಲ್ಲದಿದ್ದರೂ ತಂದೆಯನ್ನು ಕಾಣಬೇಕು ಎಂಬ ತುಡಿತವೂ ಇಲ್ಲದೆ ಗಂಡ ಮಕ್ಕಳು ಎಂದು ಹಾಯಾಗಿದ್ದಾರೆ. ಇದು ದೇವರು ನನಗೆ ಕೊಟ್ಟ ಶಿಕ್ಷೆ ಅಲ್ಲದೆ ಮತ್ತಿನ್ನೇನು? ಅಂದು ನಾನು ಮಾವಯ್ಯ ಹೇಳಿದ ಮಾತನ್ನು ಮರೆತು ಕ್ಷಮಿಸಿ ಬಿಡುತ್ತಿದ್ದರೆ, ಇಷ್ಟೆಲ್ಲ ನೋವು ಅನುಭವಿಸುವ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ಕಾಲ ಮಿಂಚಿ ಹೋಗಿದೆ, ಇನ್ನು ಕ್ಷಮಿಸಬೇಕೆಂದರೆ ನನ್ನವಳಿಲ್ಲ. ಮನಸ್ಸಿನ ತೊಳಲಾಟವನ್ನು ಮಕ್ಕಳಲ್ಲಿ ಹೇಳಬೇಕೆಂದರೆ ಮಕ್ಕಳೂ ಬರುತ್ತಿಲ್ಲ. ನಾನು ನೀಡದ ಕ್ಷಮೆಗೆ ಪಶ್ಚಾತ್ತಾಪವೇ ಪ್ರಾಯಶ್ಚಿತ್ತ. ನಾನು ತಪ್ಪಿ ಬಿದ್ದರೂ ಹಿಂಸೆ ಅನುಭವಿಸಿದರೂ ಪರವಾಗಿಲ್ಲ. ನನ್ನ ಮಕ್ಕಳಿಗೆ ಕ್ಷಮಾ ಗುಣದ ಬಗ್ಗೆ ಹೇಳಬೇಕು. ಕ್ಷಮೆ ಎನ್ನುವುದು ಮನುಷ್ಯನ  ಬದುಕಿನಲ್ಲಿ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ.ದೇವರೇ ಆ ಅವಕಾಶವನ್ನಾದರೂ ಒದಗಿಸಿ ಕೊಡುವೆಯಾ? ನನ್ನ ಮನಸ್ಸಿಗೆ ನೆಮ್ಮದಿಯನ್ನು ಕರುಣಿಸುವೆಯಾ……. ಡಾ.ಸುಮತಿ ಪಿ

“ಕ್ಷಮೆ” ಸುಮತಿ ಪಿ ಅವರ ಸಣ್ಣ ಕಥೆ Read Post »

You cannot copy content of this page

Scroll to Top