ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಜೀವನವನ್ನು ರೂಪಿಸುವ ನಿರ್ಧಾರಗಳ ಆಯ್ಕೆಗಳು ನಮ್ಮ ಕೈಯಲ್ಲಿಯೇ ಇವೆ” ಪೃಥ್ವಿ ಬಸವರಾಜ್

ಜೀವನ ಸಂಗಾತಿ ಪೃಥ್ವಿ ಬಸವರಾಜ್ “ಜೀವನವನ್ನು ರೂಪಿಸುವ ನಿರ್ಧಾರಗಳ ಆಯ್ಕೆಗಳು ನಮ್ಮ ಕೈಯಲ್ಲಿಯೇ ಇವೆ” ಜೀವನವನ್ನು ರೂಪಿಸುವುದು ನಮ್ಮ ನಿರ್ಧಾರಗಳುಮಾನವ ಜೀವನವು ಒಂದು ಅದ್ಭುತ ಪ್ರಯಾಣ. ಜನ್ಮದಿಂದ ಸಾವುತನಕ ನಾವೆಂದೂ ಒಂದೊಂದು ಆಯ್ಕೆಯನ್ನು ಮಾಡುತ್ತಲೇ ಬದುಕುತ್ತೇವೆ. ಯಾವ ದಾರಿಯಲ್ಲಿ ನಡೆಯಬೇಕು, ಯಾರೊಡನೆ ಮಿಶ್ರವಾಗಿ ಬದುಕಬೇಕು, ಯಾವ ಕೆಲಸವನ್ನು ಮಾಡಬೇಕು, ಯಾವುದನ್ನು ಬಿಡಬೇಕು — ಇವೆಲ್ಲವೂ ನಮ್ಮದೇ ಕೈಯಲ್ಲಿರುವ ನಿರ್ಧಾರಗಳು. ಆದರೆ, ಅನೇಕರಿಗೆ ಒಂದು ತಪ್ಪು ಕಲ್ಪನೆ ಇರುತ್ತದೆ: “ಜೀವನ ನನ್ನನ್ನು ಎಲ್ಲಿ ಕೊಂಡೊಯ್ದರೂ ಹೋಗಬೇಕು” ಎಂದು. ಆದರೆ ನಿಜಕ್ಕೆ ಬಂದರೆ ನಾವು ಜೀವಿಸುವ ದಾರಿ, ಬದುಕುವ ರೀತಿಯಲ್ಲಿರುವ ಬದಲಾವಣೆ, ನಮ್ಮ ಜೀವನದ ಗುಣಮಟ್ಟ—ಇವೆಲ್ಲವೂ ನಮ್ಮ ಆಯ್ಕೆಯ ಮೇಲೆ ನಿಂತಿರುತ್ತವೆ. ಜೀವನದಲ್ಲಿ ಒಳ್ಳೆಯದನ್ನು ಆರಿಸಿಕೊಳ್ಳುವುದೇ ಮುಖ್ಯ. ಆದರೆ ಈ ಆರಿಸುವ ಕಾರ್ಯ ಸುಲಭವಲ್ಲ. ಯಾಕೆಂದರೆ ನಮ್ಮ ಮುಂದಿರುವ ಪ್ರತಿಯೊಂದು ಆಯ್ಕೆಯೂ ಆಕರ್ಷಕವಾಗಿ ಕಾಣಬಹುದು, ಯಾವುದು ಲಾಭ, ಯಾವುದು ನಷ್ಟ ಎಂಬುದನ್ನು ಕೆಲವೊಮ್ಮೆ ತಿಳಿದುಕೊಳ್ಳಲು ಕಷ್ಟವಾಗಬಹುದು. ಆದರೂ, “ಯೋಗ್ಯವಾದ ಆಯ್ಕೆ” ಮಾಡುವ ಕೌಶಲ್ಯವನ್ನು ರೂಢಿಸಿಕೊಂಡರೆ ಜೀವನ ಹೆಚ್ಚು ಸುಂದರವಾಗುತ್ತದೆ. ಆಯ್ಕೆಗಳು — ನಮ್ಮ ಜೀವನದ ಹಾದಿಯನ್ನು ನಿರ್ಧರಿಸುವ ಶಕ್ತಿ ನಾವೆಲ್ಲರೂ ಬೆಳಿಗ್ಗೆ ಎದ್ದ ಕ್ಷಣದಿಂದಲೇ ಆಯ್ಕೆಗಳು ಆರಂಭವಾಗುತ್ತವೆ:ಬೇಗ ಎದ್ದು ದಿನವನ್ನು ಉತ್ತಮವಾಗಿ ಪ್ರಾರಂಭಿಸಬೇಕೋ,ಅಥವಾಇನ್ನೂ ಸ್ವಲ್ಪ ಮಲಗಬೇಕೋ?ಆರೋಗ್ಯಕರ ಆಹಾರ ತಿನಬೇಕೋ,junk food ತಿನಬೇಕೋ?ವ್ಯರ್ಥವಾಗಿ ಫೋನ್ ನಲ್ಲಿ ಸಮಯ ಕಳೆಯಬೇಕೋ,ಅಥವಾ ಉಪಯುಕ್ತವಾದ ಪುಸ್ತಕ ಓದಬೇಕೋ? ಈ ಉದಾಹರಣೆಗಳು ಸರಳ, ಆದರೆ ದಿನನಿತ್ಯ ನಮ್ಮನ್ನು ನಾವು ಹೇಗೆ ರೂಪಿಸಿಕೊಳ್ಳುತ್ತೇವೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಸಣ್ಣ ಆಯ್ಕೆಗಳಿಂದಲೇ ದೊಡ್ಡ ಫಲಿತಾಂಶಗಳು ಹುಟ್ಟುತ್ತವೆ. ಒಳ್ಳೆಯ ಅಭ್ಯಾಸ ಮತ್ತು ಕೆಟ್ಟ ಅಭ್ಯಾಸ – ಆಯ್ಕೆ ನಮ್ಮದೇಮಕ್ಕಳು ಇರಲಿಲ್ಲವ ಮನೆಯಲ್ಲಿಯೇ ತಂದೆ-ತಾಯಿಗಳು ಹೇಳುವಂತೆ,“ಮಗು ಏನನ್ನೇ ನೋಡುತ್ತದೋ ಅದನ್ನೇ ಕಲಿಯುತ್ತದೆ.” ಆದರೆ ವಯಸ್ಸಾದ ನಂತರ ನಾವು ಯಾರನ್ನೂ ಹೊಣೆ ಮಾಡಲಾರೆ.ಒಳ್ಳೆಯ ಅಭ್ಯಾಸ ರೂಢಿಸಿಕೊಳ್ಳುವುದೂ, ಕೆಟ್ಟ ಅಭ್ಯಾಸಗಳನ್ನು ಬೆಳೆಸುವುದೂ ನಮ್ಮದೇ ಆಯ್ಕೆ.ಬಹಳ ಜನರು ಸಲಹೆ ನೀಡುತ್ತಾರೆ: ದಿನನಿತ್ಯ ವ್ಯಾಯಾಮ ಮಾಡಿಸದಾಚಾರವನ್ನು ರೂಢಿಸಿಕೊಳ್ಳಿಸುಳ್ಳು ಹೇಳಬೇಡಿಒಳ್ಳೆಯ ಸ್ನೇಹಿತರ ಜೊತೆಯಲ್ಲಿರಿಸಮಯ ವ್ಯಯ ಮಾಡಬೇಡಿಕೋಪ, ಅಸೂಯೆ ಇವುಗಳಿಂದ ದೂರವಿರಿ ಆದರೆ ಅವರು ಹೇಳುವುದರಿಂದ ಏನೂ ಆಗುವುದಿಲ್ಲ.ಅದರಲ್ಲಿರುವ ಯೋಗ್ಯ ಎದ್ದುಕೊಳ್ಳುವುದು ನಮ್ಮ ಹೊಣೆ.ಯಾಕೆಂದರೆ ಜೀವನವನ್ನು ನಾವು ಬದುಕುತ್ತೇವೆ, ಸಲಹೆ ನೀಡುವವರು ಅಲ್ಲ. ಒಂದು ಸ್ಪಷ್ಟ ಕಥೆ: ಇಬ್ಬರು ಸಹೋದರರ ಜೀವನದ ದಾರಿಇದನ್ನು ಒಂದು ನಿಜವಾದ ಜೀವನಪ್ರೇರಿತ ಕಥೆಯ ಮೂಲಕ ಅರ್ಥಮಾಡಿಕೊಳ್ಳಬಹುದು. ಒಂದು ಊರಿನಲ್ಲಿ ಇಬ್ಬರು ಸಹೋದರರು ಇದ್ದರು — ಅಜಯ್ ಮತ್ತು ವಿಜಯ್.ಇವರಿಬ್ಬರಿಗೂ ಒಂದೇ ಮನೆ, ಒಂದೇ ತಂದೆ-ತಾಯಿ, ಒಂದೇ ಪರಿಸರ.ಶಾಲೆ ಕೂಡ ಒಂದೇ.ಆದರೆ ಇವರಿಬ್ಬರ ಜೀವನ ಸಂಪೂರ್ಣವಾಗಿ ವಿಭಿನ್ನ ಮಾರ್ಗಗಳತ್ತ ನಡೆದು ಹೋಯಿತು. ಅಜಯ್‌ನ ಆಯ್ಕೆಗಳುಬೆಳಿಗ್ಗೆ ಬೇಗ ಎದ್ದರೆ ಆರೋಗ್ಯ ಚೆನ್ನಾಗಿರುತ್ತದೆ ಎಂದು ತಿಳಿದಿದ್ದರೂ,ಅವನು ಯಾವಾಗಲೂ ತಡವಾಗಿ ಎದ್ದ.ಸ್ನೇಹಿತರ ಜೊತೆ ಆಟಗಳಾಡುವುದನ್ನು ಅವನು ಮುಖ್ಯವಾಗಿ ಇಟ್ಟ.ಅಧ್ಯಯನಕ್ಕೆ ಸಮಯ ನೀಡಲಿಲ್ಲ.“ಇನ್ನು ಮುಂದೆ ಓದುತ್ತೇನೆ” ಎಂಬ ಮುಂಗಾರು ಮಾತುಗಳಷ್ಟೇ.Social media ಯಲ್ಲಿ ಗಂಟೆಗಳ ಕಾಲ ಕಾಲಹರಣ.ಪರೀಕ್ಷೆಗೆ ಹೊತ್ತಿಗೆ ಸರಿ ಓದದೆ, ಕೊನೆಯ ಕ್ಷಣದಲ್ಲಿ ಕಲಿಯುವ ಪ್ರಯತ್ನ.ಕೆಲವು ತಪ್ಪು ಸ್ನೇಹಿತರ ಒತ್ತಡಕ್ಕೆ ಒಳಗಾಗಿ ಸಿಗರೇಟ್, ನಶೆಯಿಂದ ದೂರ ಉಳಿಯಲಿಲ್ಲ.ಮತ್ತು ಅಂತಿಮವಾಗಿಅವನ ವಿದ್ಯಾಭ್ಯಾಸ ಕುಸಿಯಿತು.ಕುಟುಂಬದವರ ವಿಶ್ವಾಸ ಕಳೆದುಕೊಂಡ.ಆರೋಗ್ಯವೂ ಹದಗೆಟ್ಟಿತು.ಉದ್ಯೋಗ ಹುಡುಕುವಾಗ ಎಲ್ಲೆಡೆ ತಿರಸ್ಕಾರ.ಅವನು ಮಾಡಿದ ಆಯ್ಕೆಗಳಿಂದ ಅವನ ಬದುಕು ಬಿರುಕು ಬೀಳಿತು. ವಿಜಯ್‌ನ ಆಯ್ಕೆಗಳುಬೆಳಗ್ಗೆ ಬೇಗ ಎದ್ದು ವ್ಯಾಯಾಮ ಮಾಡುವ ಅಭ್ಯಾಸ ರೂಢಿಸಿಕೊಂಡ.ದಿನಕ್ಕೆ ಕನಿಷ್ಠ ಎರಡು ಗಂಟೆ ಓದುವ ಗುರಿ ಇಟ್ಟುಕೊಂಡ.ಕೆಟ್ಟ ಸ್ನೇಹ, ಕೆಟ್ಟ ಅಭ್ಯಾಸ—ಇವೆಲ್ಲದರ ಬಗ್ಗೆ ಜಾಗರೂಕ.ಉದ್ದೇಶಪೂರ್ಣ ಜೀವನ ನಡೆಸಲು ಮುಂದಾಗಿದ್ದ.Social media ಗೆ ಸಮಯವನ್ನು ನಿಗದಿಪಡಿಸಿದ್ದ.ಯಾರಿಗೆ ಬೇಕಾದರೂ ಸಹಾಯ ಮಾಡುವ ಒಳ್ಳೆಯ ಗುಣ.ಫಲಅವನು ಕಾಲೇಜು ಮೊದಲನೇ ಸ್ಥಾನ.ಶಿಕ್ಷಕರ ಮೆಚ್ಚುಗೆ, ಕುಟುಂಬದ ಹೆಮ್ಮೆ.ಒಳ್ಳೆಯ ಉದ್ಯೋಗದಿಂದ ಉತ್ತಮ ಆದಾಯ.ದೇಹ, ಮನಸೂ ಆರೋಗ್ಯಕರ.ಸಮಾಜದಲ್ಲಿ ಒಬ್ಬ ಉತ್ತಮ ವ್ಯಕ್ತಿ. ಗಮನಿಸಿಇಬ್ಬರಿಗೂ ಒಂದೇ ಪರಿಸರ, ಒಂದೇ ಕುಟುಂಬ, ಒಂದೇ ಅವಕಾಶ.ಪರಿಣಾಮ ಮಾತ್ರ ವಿಭಿನ್ನ.ಏಕೆ? ಆಯ್ಕೆಗಳು ವಿಭಿನ್ನವಾದ್ದರಿಂದ.ಅಜಯ್‌ನ ಆಯ್ಕೆಗಳು ಅವನನ್ನು ನಾಶದ ಕಡೆಗೆ ಕರೆದರೆ,ವಿಜಯ್‌ನ ಆಯ್ಕೆಗಳು ಅವನನ್ನು ಯಶಸ್ಸಿನ ದಿಕ್ಕಿಗೆ ಕರೆದೊಯ್ದವು. ಜೀವನದಲ್ಲಿ ಆಯ್ಕೆಯ ಮಹತ್ವ ಏಕೆ ಇಷ್ಟು ದೊಡ್ಡದು?1. ಆಯ್ಕೆ ನಮ್ಮ ಸ್ವಭಾವವನ್ನು ರೂಪಿಸುತ್ತದೆನಾವು ಯಾವ ದಾರಿಯನ್ನು ಆರಿಸುತ್ತೇವೋ, ನಮ್ಮ ಜೀವನಶೈಲಿ ಕೂಡ ಅದೇ ದಾರಿಯಲ್ಲಿ ಸಾಗುತ್ತದೆ.2. ಆಯ್ಕೆ ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆಇಂದಿನ ನಿರ್ಧಾರಗಳು ನಾಳೆಯ ಫಲಿತಾಂಶ.ಇಂದೇ ಮಾಡಿದ ತಪ್ಪು ಆಯ್ಕೆಗಳ ಪಶ್ಚಾತ್ತಾಪ ಜೀವನಪೂರ್ತಿ ಕಾಡಬಹುದು.3. ಆಯ್ಕೆ ನಮ್ಮ ಸಂಬಂಧಗಳನ್ನು ಕಟ್ಟುತ್ತದೆ ಅಥವಾ ಧ್ವಂಸಮಾಡುತ್ತದೆಯಾರ ಜೊತೆಯಲ್ಲಿ ಇರಬೇಕು ಎಂಬುದು ತುಂಬಾ ದೊಡ್ಡ ನಿರ್ಧಾರ.ಒಳ್ಳೆಯವರೊಂದಿಗೆ ಹೋದರೆ ಜೀವನ ಸುಂದರವಾಗುತ್ತದೆ;ತಪ್ಪು ಸ್ನೇಹಿತರ ಜೊತೆ ಹೋದರೆ ಸಂಕಷ್ಟ ಅನಿವಾರ್ಯ.4. ಆಯ್ಕೆ ನಮ್ಮ ಆರೋಗ್ಯಕ್ಕೂ ಪರಿಣಾಮಕಾರಿಯೇಅನಾರೋಗ್ಯಕರ ಆಹಾರ, ನಿದ್ರೆಕಾರಕ, ನಶೆ—ಇವು ಆಯ್ಕೆಯೇ.ಆರೋಗ್ಯ ಕಾಪಾಡುವುದು ಕೂಡ ಆಯ್ಕೆಯೇ.5. ಆಯ್ಕೆ ನಮ್ಮ ಮಾನಸಿಕ ಶಾಂತಿಯನ್ನು ನಿರ್ಧರಿಸುತ್ತದೆಚಿಕ್ಕ ಚಿಕ್ಕ ವಿಷಯಕ್ಕೆ ಕೋಪಗೊಳ್ಳುವುದೂ,ಕ್ಷಮಿಸುವುದೂ—ಎಲ್ಲವೂ ನಮ್ಮ ಆಯ್ಕೆ. ನಮ್ಮ ಆಯ್ಕೆಯನ್ನು ಉತ್ತಮಗೊಳಿಸಲು 5 ಸರಳ ವಿಧಾನಗಳು 1. ಆಯ್ಕೆ ಮಾಡುವ ಮುನ್ನ ಯೋಚನೆ ಮಾಡಿಒಂದು ಕ್ಷಣ ತಡೆದು,“ಈ ಆಯ್ಕೆ ನನ್ನ ಭವಿಷ್ಯಕ್ಕೆ ಯೋಗ್ಯವೇ?” ಎಂದು ಕೇಳಿಕೊಳ್ಳಿ.2. ಒಳ್ಳೆಯವರ ಸಲಹೆ ಕೇಳಿತಂದೆ-ತಾಯಿ, ಶಿಕ್ಷಕರು, ತಿಳಿದವರು ನೀಡುವ ಸಲಹೆಗಳಲ್ಲಿ ಜ್ಞಾನ ಇದೆ.ಆದರೆ ಅಂತಿಮವಾಗಿ ಆಯ್ಕೆ ನಮ್ಮದೇ.3. ಗುರಿ ಇಟ್ಟು ಬದುಕಿಗುರಿಯಿಲ್ಲದವನು ಎಲ್ಲ ದಾರಿಯಲ್ಲೂ ಹೋಗಿ ತಪ್ಪಿ ಹೋಗುತ್ತಾನೆ.ಗುರಿಯಿರುವವನು ಯಾವ ದಾರಿಯನ್ನು ಆರಿಸಿಕೊಳ್ಳಬೇಕೆಂಬುದು ತಿಳಿದಿರುತ್ತಾನೆ.4. ಕೆಟ್ಟ ಅಭ್ಯಾಸಗಳನ್ನು ಹಂತ ಹಂತವಾಗಿ ಬಿಡಿಒಮ್ಮೆಲ್ಲಾ ಬಿಟ್ಟೇ ಬಿಡಲು ಸಾಧ್ಯವಿಲ್ಲ.ಪ್ರತಿದಿನ ಸ್ವಲ್ಪ.ಆದರೆ ಬಿಟ್ಟೇ ಬಿಡಿ — ಅದು ನಿಮ್ಮ ಉತ್ತಮ ಆಯ್ಕೆ.5. ಒಳ್ಳೆಯವನಾಗಲು ಪ್ರಯತ್ನಿಸಿಪ್ರತಿ ದಿನ,ಪ್ರತಿ ಕ್ಷಣ,ತನ್ನ ಹಳೆಯತನಕ್ಕಿಂತ ಒಳ್ಳೆಯವನಾಗಲು ಪ್ರಯತ್ನಿಸುವವನುಸರಿ ಆಯ್ಕೆಗಳು ಮಾಡುವವನಾಗುತ್ತಾನೆ. ಜೀವನ ಯಾವಾಗಲೂ ನಮ್ಮ ಕೈಯಲ್ಲಿಲ್ಲ, ಆದರೆ ಆಯ್ಕೆ ಯಾವಾಗಲೂ ನಮ್ಮ ಕೈಯಲ್ಲೇಜೀವನದಲ್ಲಿ ಬರುವ ಕೆಲವು ವಿಷಯಗಳು ನಮ್ಮ ನಿಯಂತ್ರಣಕ್ಕೆ ಹೊರತಾಗಿರುತ್ತವೆ:ಜನನಸಾವುಇತರರ ವರ್ತನೆಪರಿಸ್ಥಿತಿಗಳ ಬದಲಾವಣೆ ಇವುಗಳಲ್ಲಿ ನಮ್ಮ ಕೈಯಲ್ಲಿರುವುದೇನೂ ಇಲ್ಲ. ಆದರೆ…ಈ ಎಲ್ಲ ಪರಿಸ್ಥಿತಿಗಳಿಗೆ ನಾವು ಹೇಗೆ ಪ್ರತಿಕ್ರಿಯಿಸಬೇಕು ಎಂಬುದು 100% ನಮ್ಮ ಆಯ್ಕೆ.ಅದೇ ನಮ್ಮನ್ನು ಬೆಳೆಸುತ್ತದೆ, ಬಲಗೊಳಿಸುತ್ತದೆ. ಪೃಥ್ವಿ ಬಸವರಾಜ್

“ಜೀವನವನ್ನು ರೂಪಿಸುವ ನಿರ್ಧಾರಗಳ ಆಯ್ಕೆಗಳು ನಮ್ಮ ಕೈಯಲ್ಲಿಯೇ ಇವೆ” ಪೃಥ್ವಿ ಬಸವರಾಜ್ Read Post »

ಕಾವ್ಯಯಾನ

ರಾಹುಲ್ ಸರೋದೆ “ಕಾಲ ಬದಲಾಯಿತು”

ಕಾವ್ಯ ಸಂಗಾತಿ ರಾಹುಲ್‌ ಸರೋದೆ ಕಾಲ ಬದಲಾಯಿತು ಚಿಕ್ಕವರಿದ್ದಾಗ ಅಪ್ಪ ಜಾತ್ರ್ಯಾಗಹೆಗಲು ಮೇಲೆ ಕೂಡಿಸಿಕೊಂಡುಊರು ಸುತ್ತುತ್ತಿದ್ದರು, ಮಗಕೇಳಿದಾಕ್ಷಣ ಬೇಕಾದ್ದು ಕೊಡಿಸುತ್ತಿದ್ದರುಕಾಲ ಬದಲಾಯಿತು. ಈಗ ಮಗ ದೂರದ ಊರಾಗಕೆಲಸಕ್ಕೆಂದು ಊರು ಬಿಟ್ಟಾನ,ಕಾಲಕ್ಕೆ ತಕ್ಕಂತೆ ಅಪಡೇಟ್ ಆಗ್ಯಾನಕೈಬೆರಳಲ್ಲಿ ಆಟೋ ಗಾಡಿ ಬುಕ್ ಮಾಡ್ತಾನಕಾಲ ಬದಲಾಯಿತು. ಬಾಳ ದಿನದ ಮೇಲೆ ನೋಡಾಕಹೋದ್ರಾ ಸ್ವಿಗಿ, ಜೋಮ್ಯಾಟೋದಾಗಬೇಕಾದ ಊಟ ಆರ್ಡರ್ ಮಾಡ್ತಾನಊರಿಗೆ ಬಂದ ತಂದೆಯನ್ನು ಬಿಟ್ಟುಕಾಲ್ ಮೇಲೆ ಕಾಲ್ ಮಾತಾಡ್ತಾ ಬಹಳ ಬ್ಯೂಸಿ ಆಗ್ಯಾನಕಾಲ ಬದಲಾಯಿತು. ನಮಗಾಗಿ ಸಮಯ ಕೊಟ್ಟವರಿಗೆನಾವೇನು ಕೊಟ್ಟೆವೂ ಕೆಲಸ, ಫೋನ್ ಕಾಲು,ಮೀಟಿಂಗು, ಡೇಟಿಂಗು, ಎಲ್ಲಾ ಬರ್ತಾವುನಮ್ಮನ್ನು ಹೆತ್ತು ಹೊತ್ತು ಸಲುಹಿದವರಿಗೆಎರಡೊತ್ತು ಮಾತು, ಒಂಚೂರು ಪ್ರೀತಿನೀಡುವುದಕ್ಕಾಗುವಲ್ದು ————- ರಾಹುಲ್ ಸರೋದೆ

ರಾಹುಲ್ ಸರೋದೆ “ಕಾಲ ಬದಲಾಯಿತು” Read Post »

ಕಾವ್ಯಯಾನ

ನಿಶ್ಚಿತ ಎಸ್ ಅವರ ಕವಿತೆ-ಅವನೆಂದರೆ “ನಿನಗೇನು”

ಕಾವ್ಯ ಸಂಗಾತಿ ನಿಶ್ಚಿತ ಎಸ್ “ನಿನಗೇನು“ ಬಂದಾಕೆ ಕೇಳಿದಳು ನನ್ನ…ಅವನೆಂದರೆ ನಿನಗೇನು…? ಕೋಪಗೊಂಡಾಗ ಕಂಗೊಳಿಸುವ ಮುಂಜಾನೆಯ ಸೂರ್ಯನು ಅವನೇ…ತಾಳ್ಮೆಯಿಂದ ನನ್ನ ಸಂತೈಸುವ ಮುಸ್ಸಂಜೆಯ ಚಂದ್ರನು ಅವನೇ…ತಂಪಾದ ಮಾತುಗಳನ್ನಾಡಿ ತಣ್ಣನೆ ಬೀಸುವ ಗಾಳಿಯು ಅವನೇ…. ಜಗಳವಾದಾಗ ಪಟಪಟನೆ ಬಯ್ಯುವ ಮಳೆಹನಿಯೂ ಅವನೇ…ಒಮ್ಮೊಮ್ಮೆ ಗುಡುಗು ಸಿಡಿಲಿನಂತೆ ಅಬ್ಬರಿಸುವ ಕೋಪಿಷ್ಟನು ಅವನೇ…ಪ್ರೀತಿಯ ಚಿಲುಮೆಯಲಿ ನನ್ನ ತೇಲಿಸುವ ಅಲೆಯು ಅವನೇ… ಹೂವಿಗೆ ದುಂಬಿ ಹೇಗೋ ಹಾಗೆ ನನ್ನ ಪೀಡಿಸುವ ಗೆಳೆಯನು ಅವನೇ…ಸದಾ ನನ್ನ ಕಾಡಿಸುವ ನನ್ನ ಹೃದಯ ಕದ್ದ ಚೋರನು ಅವನೇ…ನನ್ನೆಲ್ಲ ನಗು ಅಳುವಿನ ಒಡೆಯನುಅವನೇ… ಪ್ರತಿದಿನ ನನ್ನನ್ನು ಜೋಪಾನಿಸುವ ತಾಯಿಯು ಅವನೇ…ಬೇಕು ಬೇಡವಾದದ್ದನ್ನು ಕೊಡಿಸುವ ಜವಾಬ್ದಾರಿಯುತ ತಂದೆಯು ಅವನೇ…ನನ್ನೆಲ್ಲ ತುಂಟಾಟಗಳಿಗೆ ಆಸರೆಯಾಗಿರುವ ಮಗುವು ಅವನೇ… ಒಟ್ಟಾರೆಯಾಗಿ ಈ ಬದುಕಿನ ಭರವಸೆಯೂ ಅವನೇ..ಹುರುಪು ಅವನೇ…ಗೆಲುವು ಅವನೇ..ನಂಬಿಕೆಯು ಅವನೇ..ನನ್ನೆಲ್ಲ ನಾಳೆಗಳು ಅವನೇ… ಈಗ ನನ್ನಲ್ಲಿ ಮೂಡಿಬಂದ ಪ್ರಶ್ನೆ ಅವನಿಗೇನು ನಾನು….? ನಿಶ್ಚಿತ ಎಸ್

ನಿಶ್ಚಿತ ಎಸ್ ಅವರ ಕವಿತೆ-ಅವನೆಂದರೆ “ನಿನಗೇನು” Read Post »

ಪುಸ್ತಕ ಸಂಗಾತಿ

ವಿಜಯನಾಗ್‌ ಜಿ.ಅವರ ಕೃತಿ “ಜಪಾನಿನ ಸಾಹಿತ್ಯ ಚರಿತ್ರೆ” ಕುರಿತು ವಿಮರ್ಶಕರಾದ ಆರ್. ದಿಲೀಪ್ ಕುಮಾರ್ ಬರಹ

ಪುಸ್ತಕ ಸಂಗಾತಿ ವಿಜಯನಾಗ್‌ ಜಿ. “ಜಪಾನಿನ ಸಾಹಿತ್ಯ ಚರಿತ್ರೆ” ಆರ್. ದಿಲೀಪ್ ಕುಮಾರ್ ಪ್ರಿಯ ವಿಜಯ್ ನೀವು ಶ್ರದ್ಧೆ ಶ್ರಮಗಳಿಂದ ಅಧ್ಯಯನ ನಡೆಸಿ ರಚಿಸಿರುವ ‘ಜಪಾನಿನ ಸಾಹಿತ್ಯ ಚರಿತ್ರೆ’ ಕೃತಿಯನ್ನು ಓದಿದೆ. ಯಾವುದೇ ಭಾಷೆಯ ಸಾಹಿತ್ಯ ಚರಿತ್ರೆಯನ್ನು ದಾಖಲಿಸುವಾಗ ನೆಲ, ಭಾಷೆ, ಸಾಹಿತ್ಯ ಕೃತಿಗಳ ಬಗೆಗೆ ಅಭಿಮಾನದಷ್ಟೇ, ಒಂದು ಅಂತರವನ್ನು ಕಾಯ್ದುಕೊಂಡು ರಚಿಸಬೇಕೆನ್ನುವ ಪರಂಪರೆಯನ್ನು ಒಪ್ಪುವವರು ಮಾತ್ರ ಹೀಗೆ ಬರೆಯಲು ಸಾಧ್ಯ. ಒಂದು ಅಂತರವನ್ನು ಕಾಯ್ದುಕೊಳ್ಳದೆ ಚರಿತ್ರೆಯನ್ನು ದಾಖಲಿಸುವ ಕೆಲಸವು ಸದ್ಯದಲ್ಲಿ ಕೆಡುಕಿನ ಬೀಜಗಳನ್ನು ಬಿತ್ತುತ್ತದೆ. ಅಂತರ ಕಾಯ್ದಕೊಳ್ಳದ ಚರಿತ್ರೆಯ ದಾಖಲೀಕರಣ ಪ್ರಕ್ರಿಯೆಯು ಅಕ್ಷರವಂತರು ಬದುಕುತ್ತಿರುವ ಸಮಾಜಕ್ಕೆ ಕೊಡುವ ಕೆಟ್ಟ ಕೊಡುಗೆಯಾಗುತ್ತದೆ. ಎಂದು ಬಲವಾಗಿ ನಂಬಿರುವ ನಿಮ್ಮಂತಹವರು ಸಾಹಿತ್ಯ ಚರಿತ್ರೆಯನ್ನು, ಅದು ನಿರ್ಮಾಣವಾಗಲು ಬುನಾದಿಯಾದ ಭೌಗೋಳಿಕ, ರಾಜಕೀಯ, ಭಾಷಿಕ ಪರಿಸರಗಳನ್ನು ಹೀಗೆ ಕಟ್ಟಿಕೊಟ್ಟಿರುವುದು ಯಥೋಚಿತವಾಗಿದೆ. ಬುದ್ಧ ಗುರುವಿನ ಆದಿಯಾಗಿ ಮನುಜಕುಲದೊಳಗಿನ ಕೆಡುಕಿನ ಬೇರನ್ನು ಕತ್ತರಿಸುವ, ಕತ್ತರಿಸಿ‌ ಆ ಬೇರನ್ನು ಸೂರ್ಯನ ಬಿಸಿಲಿಗೆ ಎತ್ತಿ ಹಿಡಿದು ಮತ್ತೆಂದೂ ಚಿಗುರದಂತೆ ಮಾಡುವ ಕೆಲಸವನ್ನು ಮಾಡಿದ್ದಾರೆಂದು ಹೇಳುವ ನಾವು, ಬದಲಾಗುತ್ತಿಲ್ಲವೆಂಬುದಕ್ಕೆ ಸದ್ಯದಲ್ಲಿ ಸಾಕ್ಷಿಯಾಗಿ ನಡೆ, ನುಡಿಗಳ ಹೆಜ್ಜೆಗುರುತುಗಳನ್ನು ಬಿಡುತ್ತಲೇ ಇದ್ದೇವೆ. ಆ ಕಾರಣದಿಂದ ಸದ್ಯದ ನಮ್ಮ ಬದುಕು ‘ನರನ ದುರಿತಾಂಕುರದ ಬೇರಿನ ಬೇಗೆ’ ಎಂದು ಕುಮಾರವ್ಯಾಸ ಹೇಳುತ್ತಾನಲ್ಲ, ಆ ಬೇಗೆಯನ್ನು ಸಂತಸವಾಗಿಟ್ಟುಕೊಂಡು ನಡೆಸುತ್ತಿರುವ ‘ಅನುದಿನದ ದಂದುಗ’ ಅನಿಸುತ್ತಿದೆ. ಇದು ಬದಲಾಗಬೇಕೆಂದರೆ ಚರಿತ್ರೆಯನ್ನು ಮಮಕಾರವಿಲ್ಲದೆ ಓದುವ, ಅರ್ಥೈಸಿಕೊಳ್ಳುವ ಮತ್ತೆಂದೂ ಅಂತಹ ಘಟನೆಗಳು ನಡೆಯದಂತೆ ಎಚ್ಚರಿಕೆಯ ಹೆಜ್ಜೆಗಳನು ಇಡುವ ಕೆಲಸವನ್ನು ಮಾಡಬೇಕೆಂದು ಈ ಕೃತಿಯನ್ನು ಓದಿದೊಡನೆಯೆ ಮನಸ್ಸಿಗೆ ಬಂತು. ಜಪಾನಿನ ನೆಲ ಕೆಡುಕಿನ ಫಲವನ್ನು ಉಂಡಿರುವ ಚರಿತ್ರೆಯನ್ನು ಓದಿದರೆ ಮನುಷ್ಯ ಕುಲ ತಲೆ ತಗ್ಗಿಸುವಂತೆ ಆಗುತ್ತದೆ. ಅಲ್ಲಿನ ನೆಲ, ಜಲ, ಭಾಷೆ, ಸಂಸ್ಕೃತಿ, ಸಾಹಿತ್ಯಗಳ ಬಗೆಗೆ ಅಧ್ಯಯನದಿಂದ ಅಪಾರವಾದ ಪ್ರೀತಿ ಗೌರವಗಳನ್ನು ಬೆಳೆಸಿಕೊಂಡಿರುವ ನಿಮ್ಮಂತಹವರು ಮಾತ್ರ ಸಿಟ್ಟು, ಸೆಡವುಗಳಿಗೆ ಅವಕಾಶವನ್ನು ಕೊಡದೆ, “ಹಿಂದೆ ನಡೆದ ಘಟನೆಯಿದು, ನೋಡಿ” ಎಂದು ದಾಖಲಿಸುವಾಗ ನಿಲ್ಲುವ ನಿರ್ಮಮಕಾರದ ಸ್ಥಿತಿಯನ್ನು ಕಂಡರೆ ಬೆರಗಾಗುತ್ತದೆ. ಜಪಾನಿನ ನೆಲದಲಿ ಕೆಡುಕಿನ ಕಲೆಗಳನು ಬರೆದವರು ಇಂದು ಜಾಗತಿಕ ಮಟ್ಟದಲ್ಲಿ ಬಲು ಎತ್ತರದಲ್ಲಿ ನಿಂತು ಸಬಲರೆಂದು ಬೀಗಬಹುದು, ಆದರೆ ಚರಿತ್ರೆಯ ಅಧ್ಯಯನ ಅವರು ಬಿದ್ದಿರುವ ಪಾತಾಳವನ್ನು ಕಾಣಿಸುತ್ತಿದೆ. ಆ ದಿನ ಒಂದಷ್ಟು ಕ್ಷಣಗಳು ಕೆಡುಕನ್ನು ಹಿಡಿದು ತಡೆದು ನಿಲ್ಲಿಸಿದ್ದಿದ್ದರೆ ಕಾಲಕ್ಕೊಂದು ಘನತೆ – ಗೌರವಗಳು ಇರುತ್ತಿತ್ತೆಂದು ಅನಿಸುತ್ತದೆ. ಚಿಟ್ಟೆಯೊಂದು ಥಟ್ಟನೆ ಹಾರಿದಷ್ಟು ಕ್ಷಣದಲ್ಲಿ ಎಲ್ಲವೂ ನಡೆದು ಹೋಗಿದೆ. ಅದರ ಚಹರೆಗಳು ಇಂದಿಗೂ ಅಲ್ಲಿ ಉಳಿದಿದೆ. ಯಾವ ಫಲಾಪೇಕ್ಷೆಯನ್ನೂ ಇಟ್ಟುಕೊಳ್ಳದೆ ನೀವು ಮಾಡುತ್ತಿರುವ ಕೆಲಸ ನನ್ನಂತಹ ನೂರಾರು ಜನರಿಗೆ ಸಂತಸವನ್ನು ತಂದಿದೆ. ಭಾರತೀಯ ಮತ್ತು ಭಾರತದಿಂದ ಹೊರಗಿನ ಭಾಷೆಗಳ ಅಧ್ಯಯನ ನಡೆಸುವ, ಅನುವಾದವನ್ನೂ ಮಾಡುವ ನಿಮ್ಮನ್ನು ಕಂಡರೆ ವ್ರತ ಹಿಡಿದವರ ಹಾಗೆ ಕಾಣಿಸುತ್ತೀರಿ. ಸೃಜನಶೀಲ ಕೃತಿಗಳನ್ನು ವೇಗವಾಗಿ ನೀವು ಕನ್ನಡಕ್ಕೆ ತರುತ್ತಿರುವುದನ್ನು ಕಂಡರೆ ಸಂತಸದ ಜೊತೆಗೆ ಅಸೂಯೆ ಹುಟ್ಟುತ್ತದೆ. ನನ್ನಿಂದ ಅನುವಾದ ಮಾಡಲಾಗುತ್ತಿಲ್ಲವಲ್ಲ ಎಂದು. ನಿಮ್ಮ ಅನುವಾದದ ಕೆಲಸ ಭರದಿಂದ ಸಾಗಲಿ ಎಂದು ಹಾರೈಸುವೆ. ಸಸ್ನೇಹಪೂರ್ವಕವಾಗಿ ಆರ್. ದಿಲೀಪ್ ಕುಮಾರ್

ವಿಜಯನಾಗ್‌ ಜಿ.ಅವರ ಕೃತಿ “ಜಪಾನಿನ ಸಾಹಿತ್ಯ ಚರಿತ್ರೆ” ಕುರಿತು ವಿಮರ್ಶಕರಾದ ಆರ್. ದಿಲೀಪ್ ಕುಮಾರ್ ಬರಹ Read Post »

ಅಂಕಣ ಸಂಗಾತಿ, ವೀಣಾ-ವಾಣಿ

“ಬಾಲ್ಯ ವಿವಾಹ ನಿಷೇಧದ ಕಾನೂನು ಮತ್ತು ರುಕ್ಮಾಬಾಯಿ ಎಂಬ ದಿಟ್ಟ ಮಹಿಳೆ”ಹೇಮಂತ್‌ ಗೌಡ ಪಾಟೀಲ್

ಕಾವ್ಯ ಸಂಗಾತಿ ಹೇಮಂತ್‌ ಗೌಡ ಪಾಟೀಲ್ “ಬಾಲ್ಯ ವಿವಾಹ ನಿಷೇಧದ ಕಾನೂನು ಮತ್ತು ರುಕ್ಮಾಬಾಯಿ ಎಂಬ ದಿಟ್ಟ ಮಹಿಳೆ” ಕಾಲ್ಪನಿಕ ಚಿತ್ರ(ಗೂಗಲ್ ಕೃಪೆ) ಅದು 1887ರ ಸಮಯ. ಮುಂಬೈಯ ಹೈಕೋರ್ಟ್ ಆ ಮಹಿಳೆಗೆ ಎರಡು ಆಯ್ಕೆಗಳನ್ನು ನೀಡಿತು. ಬಾಲ್ಯದಲ್ಲಿ ನಿನ್ನನ್ನು ವಿವಾಹವಾದ ವ್ಯಕ್ತಿಯೊಂದಿಗೆ ಹೋಗಿ ಬದುಕನ್ನು ಕಟ್ಟಿಕೋ, ಇಲ್ಲವೇ ಜೈಲಿಗೆ ಹೋಗು ಎಂದು. ಆಕೆ ಜೈಲಿಗೆ ಹೋಗಲು ತಯಾರಾದಳು.  ಆಕೆಯ ಉತ್ತರ ಎಲ್ಲರಿಗೂ ದಿಗ್ಬ್ರಾಂತಿಯನ್ನು ಉಂಟು ಮಾಡಿತು. ಕೇವಲ ಭಾರತ ದೇಶವನ್ನು ಮಾತ್ರವಲ್ಲದೆ ಅಂದಿನ ಭಾರತ ದೇಶವನ್ನು ಆಳುತ್ತಿದ್ದ ಇಂಗ್ಲೆಂಡ್ ದೇಶದವರೆಗೆ ಈ ವಿಷಯದ ಕುರಿತ ಚರ್ಚೆ ಮುಂದುವರೆದು ಕಾನೂನಿನ ಕ್ರಮದಲ್ಲಿ ಬದಲಾವಣೆಯನ್ನು ಕೈಗೊಂಡು ನಂತರದ ಕೋಟ್ಯಾಂತರ ಹೆಣ್ಣುಮಕ್ಕಳ ಪಾಲಿಗೆ ವರದಾನವಾಯಿತು. ಕೇವಲ ಒಬ್ಬ ಹೆಣ್ಣುಮಗಳ ದಿಟ್ಟ ನಿರ್ಧಾರ ಒಂದು ಇಡೀ ಬ್ರಿಟೀಷ್ ಸಾಮ್ರಾಜ್ಯವನ್ನು ಮೊಳಕಾಲೂರಿ ನಿಲ್ಲುವಂತೆ ಮಾಡಿತು. ಆ ಹೆಣ್ಣು ಮಗಳೇ ರುಕ್ಮಾಬಾಯಿ.  1864 ರಲ್ಲಿ ಮುಂಬೈಯಲ್ಲಿ ಜಯಂತಿ ಬಾಯಿ ಎಂಬ ಹೆಣ್ಣು ಮಗಳನ್ನು ಕೇವಲ 14 ವರ್ಷ ವಯಸ್ಸಿನಲ್ಲಿಯೇ ಮದುವೆ ಮಾಡಿಕೊಡಲಾಯಿತು. ತನ್ನ 15ನೇ ವಯಸ್ಸಿಗೆ ಆಕೆ ಹೆಣ್ಣು ಮಗುವೊಂದನ್ನು ಹಡೆದಳು ಹಾಗೂ 17ನೇ ವಯಸ್ಸಿಗೆ ಗಂಡನನ್ನು ಕಳೆದುಕೊಂಡು ವಿಧವೆಯಾದಳು. ಮುಂದೆ ತನ್ನ ಮಗಳು ಎಂಟು ವರ್ಷದವಳಿದ್ದಾಗ ಆಕೆಯ ತಾಯಿ ಡಾ. ಸಖಾರಾಮ್ ಅರ್ಜುನ್ ಎಂಬ ವೃತ್ತಿಯಿಂದ ತಜ್ಞ ವೈದ್ಯ ಹಾಗೂ ಪ್ರವೃತ್ತಿಯಿಂದ ಸಮಾಜ ಸುಧಾರಕರಾಗಿದ್ದ ವ್ಯಕ್ತಿಯನ್ನು ವಿವಾಹವಾದಳು. ತನ್ನ ಕಾಲದ ಪುರುಷ ಸಮಾಜದ ಯೋಚನೆಗಳಿಗಿಂತ ವಿಭಿನ್ನವಾಗಿ ಯೋಚಿಸುತ್ತಿದ್ದ ಡಾ. ಸಖಾರಾಮ್ ಹೆಣ್ಣು ಮಕ್ಕಳು ಸುಶಿಕ್ಷಿತರಾಗಬೇಕು ಎಂದು ಬಯಸುತ್ತಿದ್ದರು. ತನ್ನ ಮನೆಯ ತುಂಬಾ ಪುಸ್ತಕಗಳನ್ನು ಜೋಡಿಸಿದ್ದ ಆತ ರುಕ್ಮ ಬಾಯಿಗೆ ಓದಿನಲ್ಲಿ ಆಸಕ್ತಿಯನ್ನು ವಹಿಸಲು ಪ್ರೋತ್ಸಾಹಿಸಿದ.ಸಮಾಜ ಸುಧಾರಕನಾದರೂ ಕೂಡ ಆತನಿಗೂ ಕೂಡ ತನ್ನದೇ ಆದ ಕೆಲವು ಸಾಮಾಜಿಕ ಮಿತಿಗಳು ಇದ್ದವು.  ಅಂತೆಯೇ ರುಕುಮಾ ಬಾಯಿ 11 ವರ್ಷದವಳಾದಾಗ ಆಕೆಗೆ 19ರ ಹರಯದ ದಾದಾ ಜೀ ಭಿಕಾಜಿ ಎಂಬ ವ್ಯಕ್ತಿಯೊಡನೆ ಜಯಂತಿ ಬಾಯಿಯ ತಂದೆ ಸನಾತನ ಕಾಲದಿಂದಲೂ ಆಚರಿಸುತ್ತಿದ್ದ ರೀತಿಯಲ್ಲಿ ಎಲ್ಲ ಭಾರತೀಯ ಸಂಪ್ರದಾಯಗಳನ್ನು ಪಾಲಿಸಿ ಮದುವೆ ಮಾಡಿದರು. ಪುಟ್ಟ ಬಾಲಕಿಯಾದ ಆಕೆಗೆ ಯಾವುದೇ ರೀತಿಯ ಆಯ್ಕೆಗಳಾಗಲಿ, ಮದುವೆ ಮಾಡಿಕೊಳ್ಳಲು ಒಲ್ಲೆ  ಎಂದು ಹೇಳುವ ಧೈರ್ಯವಾಗಲಿ ಇರಲಿಲ್ಲ. ಮೌನ ಒಪ್ಪಿಗೆ ಆಕೆಯದಾಗಿತ್ತು.ಅಂದಿನ ಸಮಾಜದ ನಿಯಮಾವಳಿಗಳ ಪ್ರಸಾರ ಮದುವೆ ಆದ ನಂತರವೂ ಕೂಡ ಋತುಮತಿಯಾಗುವವರೆಗೆ ತನ್ನ ತವರು ಮನೆಯಲ್ಲಿಯೇ ಉಳಿಯಬೇಕಾದ ಕಾರಣ ಆಕೆ ತನ್ನ ಶಿಕ್ಷಣವನ್ನು ರಹಸ್ಯವಾಗಿಯೇ ಮುಂದುವರಿಸಿದಳುಆಕೆಯನ್ನು ಮದುವೆಯಾದ ವ್ಯಕ್ತಿ ಅಂದಿನ ಸಾಮಾಜಿಕ ನೀತಿ ನಿಯಮಾವಳಿಗೆ ಬದ್ಧನಾಗಿದ್ದ. ತನ್ನ ಶಿಕ್ಷಣವನ್ನು ಪೂರೈಸಿದ ರುಕ್ಮಭಾಯಿ ಅತ್ಯಂತ ಜಾಣ ಹಾಗೂ ಸಂಸ್ಕಾರವಂತ ಹೆಣ್ಣುಮಗಳಾಗಿ ಪರಿವರ್ತಿತಳಾಗಿದ್ದರು. ಆಕೆಯಲ್ಲಿ ಆಧುನಿಕ ವಿಚಾರಧಾರೆಗಳ ಪ್ರಭಾವದಿಂದ ತನ್ನದೇ ಆದ ವೈಯುಕ್ತಿಕ ಅಭಿಪ್ರಾಯಗಳು ಹರಳುಗಟ್ಟಿದ್ದವು. ಅಂದಿನ ಕಾಲದ ಇತರ ಸಮಾಜ ಸುಧಾರಕರೊಂದಿಗಿನ ಭೇಟಿ, ಅಭಿಪ್ರಾಯ, ವಿಚಾರ ವಿನಿಮಯಗಳು, ಚರ್ಚೆಗಳು, ಭಾಷಣಗಳು, ಉಪನ್ಯಾಸಗಳು ಆಕೆಯ ಮೇಲೆ ಪರಿಣಾಮವನ್ನು ಬೀರಿದ್ದವು. ಆಕೆಯ ಪತಿ ದಾದಾಜಿ ತನ್ನ ಸೋಮಾರಿತನದ ಕಾರಣದಿಂದ ಶಾಲೆಯಿಂದ ಹೊರ ಹಾಕಲ್ಪಟ್ಟಿದ್ದ ಹಾಗೂ ಸಾಲದ ಸುಳಿಯಲ್ಲಿ ಸಿಲುಕಿದ್ದ. ದುಶ್ಚಟಗಳಿಗೆ ದಾಸನಾದ ಆತನ ಚಿಕ್ಕಪ್ಪನ ಕುಮ್ಮಕ್ಕು ಕೂಡ ಆತನಿಗಿತ್ತು.ತನ್ನೆಲ್ಲ ಆರ್ಥಿಕ ತೊಂದರೆಗಳನ್ನು ನಿವಾರಿಸಲು ತನ್ನ ಪತ್ನಿಯ ತವರು ಮನೆ ಆತನ ಪಾಲಿಗೆ ಅಲ್ಲಾವುದ್ದೀನನ ದೀಪವಾಗಲಿ ಎಂಬುದು ಆತನ ಬಯಕೆಯಾಗಿತ್ತು.  1884 ರಲ್ಲಿ 20 ವರ್ಷದ ರುಕುಮಾಬಾಯಿಯನ್ನು ಆತ ತನ್ನೊಂದಿಗೆ ಬಂದು ವಾಸಿಸಲು ಕೇಳಿಕೊಂಡ… ಆದರೆ ಆತನ ಕೆಟ್ಟ ಚಟಗಳ ಕುರಿತು ಅರಿವಿದ್ದ ಆಕೆ ಆತನ ಕೋರಿಕೆಯನ್ನು ಸಾರಾಸಗಟಾಗಿ ನಿರಾಕರಿಸಿದಳು.ಆಕೆಯನ್ನು ಪತ್ನಿಯಾಗಿ ಮನೆ ತುಂಬಿಸಿಕೊಂಡು ತನ್ನೆಲ್ಲ ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳಬೇಕು ಎಂದು ಆಶಿಸಿದ್ದ ದಾದಾಜಿ ಶತಾಯಗತಾಯ ಆಕೆಯನ್ನು ಹೊಂದಲೇಬೇಕೆಂಬ ಹಟದಿಂದ ನ್ಯಾಯಾಲಯದ ಮೊರೆ ಹೊಕ್ಕ. 19ನೇ ಶತಮಾನದಲ್ಲಿ ಸಾರ್ವಜನಿಕವಾಗಿ ಅತ್ಯಂತ ಚರ್ಚೆಗೆ ಒಳಗಾದ ಕಾನೂನು ಹೋರಾಟ ದಾದಾಜಿ ಮತ್ತು ರುಕ್ಮಬಾಯಿ ಅವರದಾಗಿತ್ತು. ದಾದಾ ಜೀ ದಾಂಪತ್ಯದ ಹಕ್ಕುಗಳ ಮರುಸ್ಥಾಪನೆಯ ಪ್ರಾಸ್ಟಿಟ್ಯೂಷನ್ ಆಫ್ ಕಾಂಜುಗಲ್ ರೈಟ್ಸ್ ದಾವೆಯನ್ನು ಪತ್ನಿಯ ಮೇಲೆ ಹೂಡಿದ್ದ. ಈ ಹಕ್ಕಿನ ಪ್ರಕಾರ ಪತ್ನಿ ಆತನ ಸೊತ್ತಾಗಿದ್ದು ಕಾನೂನು ಆಕೆ ತನ್ನ ಪತಿಯ ಜೊತೆಯಲ್ಲಿ ಬಾಳುವೆ ಮಾಡಬೇಕು ಎಂದು ಸೂಚಿಸಿತು. ಇದಕ್ಕೆ ರುಕ್ಮಾ ಬಾಯಿಯ ಉತ್ತರ ಹೀಗಿತ್ತು… ಅರಿಯದ ಅಬೋಧ ವಯಸ್ಸಿನಲ್ಲಿ ತನಗೆ ಮದುವೆ ಮಾಡಿಕೊಡಲಾಗಿದ್ದು ತಾನು ಅಸಹಾಯಕಳಾಗಿದ್ದೆ. ಮದುವೆ ಎಂದರೆ ಏನು ಎಂಬುದೇ ತನಗೆ ಗೊತ್ತಿರಲಿಲ್ಲ. ಅದೂ ಅಲ್ಲದೆ ಹೆಣ್ಣುಮಕ್ಕಳನ್ನು ಹೊಲ ಮನೆ,ದನ ಕರು ಒಡವೆಗಳ ರೀತಿಯಲ್ಲಿ ಆಸ್ತಿಯಂತೆ ಭಾವಿಸಬಾರದು ಎಂದು ಆಕೆ ವಾದ ಹೂಡಿದಳು. ಹೆಣ್ಣು ಮಕ್ಕಳು ಪುರುಷರಷ್ಟೇ ಸರಿ ಸಮಾನವಾಗಿ ಬದುಕುವ ಕಣ್ಣು ಹೊಂದಿದ್ದಾರೆ ಅವರನ್ನು ತಮ್ಮ ಹಕ್ಕಿನ ಸೊತ್ತಾಗಿ ಬೇರೆಯವರು ಭಾವಿಸಬಾರದು ಎಂದು ಆಕೆ ನ್ಯಾಯಾಲಯವನ್ನು ಒತ್ತಾಯಿಸಿದಳು. ಇದಕ್ಕೂ ಮುನ್ನ ಈ ರೀತಿ ಹೆಣ್ಣು ಮಕ್ಕಳ ಹಕ್ಕಿನ ಕುರಿತಾಗಿ ನ್ಯಾಯಾಲಯದ ಮುಂದೆ ಯಾರೂ ಹಕ್ಕೊತ್ತಾಯವನ್ನು ಮಂಡಿಸಿರಲಿಲ್ಲ. 1885ರಲ್ಲಿ ಜಸ್ಟಿಸ್ ರಾಬರ್ಟ್ ಪಿನ್ಹೇ ಆಕೆಯ ಅಭಿಪ್ರಾಯಕ್ಕೆ ಮನ್ನಣೆ ನೀಡಿ ತಾವು ಪಾಲಿಸುತ್ತಿರುವ ಬ್ರಿಟಿಷ್ ಕಾನೂನು ಬಾಲ್ಯ ವಿವಾಹ ಮಾಡಲ್ಪಟ್ಟ  ಅಬೋಧ ರುಕ್ಮಭಾಯಿಗೆ ಸಂಬಂಧ ಪಡುವುದಿಲ್ಲ ಎಂದು ತೀರ್ಪು ನೀಡಿತು. ಸಂಪ್ರದಾಯವಾದಿ ಭಾರತೀಯರು ಸಿಡಿದೆದ್ದರು. ಹಿಂದೂ ರೀತಿ ರಿವಾಜುಗಳನ್ನು ಪ್ರಶ್ನಿಸುವ ನ್ಯಾಯಾಲಯದ ವಿರುದ್ಧ ಸನಾತನವಾದಿಗಳು ದನಿಯೆತ್ತಿದರು.ಉಕ್ಕಿನ ಮನುಷ್ಯ ಎಂದೇ ಭಾರತೀಯ ಸ್ವತಂತ್ರ ಇತಿಹಾಸದಲ್ಲಿ ಹೆಸರಾದ ಬಾಡೋಲಿಯ ಸರದಾರ ಬಾಲಗಂಗಾಧರನಾಥ ತಿಲಕ್ ಅವರು ರುಕ್ಮಾಭಾಯಿಯ ಆಂಗ್ಲ ಶಿಕ್ಷಣದ ಪರಿಣಾಮವೇ ಆಕೆಯ ಈ ತೀರ್ಮಾನಕ್ಕೆ ಕಾರಣ ಎಂದು ಹೇಳಿದರು   ಭಾರತದ ಹಿಂದುತ್ವ ಅಪಾಯದಲ್ಲಿದೆ ಎಂದು ಸಾರ್ವಜನಿಕರು ಕೂಗು ಹಾಕಿದರು . 1886 ರಲ್ಲಿ ಮತ್ತೆ ಮರುಪರಿಶೀಲನೆಗೆ ಒಳಪಟ್ಟ ತೀರ್ಪನ್ನು ಹೆಚ್ಚುವರಿ ನ್ಯಾಯಾಲಯದ ಅಂದಿನ ಜಡ್ಜ್ ಆಗಿದ್ದ ಜಸ್ಟಿಸ್ ಫರಾನ್ ಅವರು ರುಕ್ಮಬಾಯಿ ಮರಳಿ ತನ್ನ ಪತಿಯ ಮನೆಗೆ ಹೋಗಬೇಕು ಇಲ್ಲವೇ ಆರು ತಿಂಗಳ ಕಾಲ ಕಾರಾಗ್ರಹ ವಾಸವನ್ನು ಅನುಭವಿಸುವ ನಿಟ್ಟಿನಲ್ಲಿ ಜೈಲಿಗೆ ಹೋಗಬೇಕು ಎಂದು ಆದೇಶವನ್ನು ಹೊರಡಿಸಿದರು.  ಇದೀಗ ರುಕ್ಮಭಾಯಿತಾನು ಜೈಲಿಗೆ ಹೋದರೂ ಪರವಾಗಿಲ್ಲ, ಆದರೆ ತನ್ನ ಒಪ್ಪಿಗೆ ಇಲ್ಲದೆ ಮಾಡಿದ ವಿವಾಹವನ್ನು ಹಾಗೂ ವಲ್ಲದ ಗಂಡನೊಂದಿಗಿನ ಬದುಕನ್ನು ನಡೆಸಲಾರೆ ಎಂಬ ಹೇಳಿಕೆ ನೀಡಿದ್ದು ಐತಿಹಾಸಿಕ ಸಮರ್ಥನೆಯಾಯಿತು. ಆಕೆಯ ಮಾತುಗಳು, ಕೇಸಿನ ವಿವರಗಳು ಸಮುದ್ರಗಳನ್ನು ದಾಟಿ ಬ್ರಿಟಿಷ್ ವರ್ತಮಾನ ಪತ್ರಿಕೆಗಳಲ್ಲಿ ಪ್ರಕಟವಾದವು. ಇಂಗ್ಲೆಂಡಿನ ಪ್ರಸಿದ್ಧ ಮಹಿಳಾ ನಿಯತಕಾಲಿಕವೊಂದು ರುಕ್ಮಾಬಾಯಿಯ ನಿಲುವನ್ನು ಸಮರ್ಥಿಸಿತು, ಮಾತ್ರವಲ್ಲದೇ ಪ್ರಸಿದ್ಧ ತತ್ವಜ್ಞಾನಿಯಾಗಿದ್ದ ಮ್ಯಾಕ್ಸ್ ಮುಲ್ಲರ್ ರುಕ್ಮಾಭಾಯಿಯ ಆಂಗ್ಲ ಶಿಕ್ಷಣವು ಆಕೆಗೆ ತನ್ನ ಆಯ್ಕೆಗಳ ಕುರಿತು ಸ್ಪಷ್ಟ ನಿಲುವನ್ನು ಹೊಂದಲು ಮತ್ತು ನಿರ್ಣಯಗಳನ್ನು ಕೈಗೊಳ್ಳಲು ಅತ್ಯುತ್ತಮ ನ್ಯಾಯಾಧೀಶನಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿಕೆ ನೀಡಿದರು. ಇದೇ ಸಮಯದಲ್ಲಿ ರುಕ್ಮಾ ಬಾಯಿ ಅನಾಮಿಕವಾಗಿದಿ ಹಿಂದೂ ಲೇಡಿ ಎಂಬ ಹೆಸರಿನಲ್ಲಿ ಟೈಮ್ಸ್ ಆಫ್ ಇಂಡಿಯಾ ನಿಯತಕಾಲಿಕಕ್ಕೆ ಬಾಲ್ಯ ವಿವಾಹವನ್ನು ವಿರೋಧಿಸುವ ನಿಟ್ಟಿನಲ್ಲಿ ಲೇಖನಗಳನ್ನು ಬರೆಯಲು ಆರಂಭಿಸಿದ್ದಳು. ತನ್ನ 14ನೇ ಹುಟ್ಟುಹಬ್ಬಕ್ಕೆ ಮುನ್ನವೇ ಮಕ್ಕಳನ್ನು ಪಡೆಯಲು ಹೆಣ್ಣು ಮಕ್ಕಳನ್ನು ಒತ್ತಾಯಿಸುವ ಸಂಪ್ರದಾಯವನ್ನು ವಿರೋಧಿಸಿ ಆಕೆ ಬರೆದಳು. ಕನಸುಗಳ ಸಾವಿನ ಕುರಿತು ಹೆಣ್ಣು ಮಕ್ಕಳ ಅಂತಃಸತ್ವವನ್ನು ಹೀರಿ ಎಸೆಯುವ, ಅವರ ಬಾಲ್ಯವನ್ನು ಕಸಿಯುವ ಕುರಿತು ಆಕೆ ಬರೆದ ಲೇಖನಗಳು ಬುದ್ಧಿವಂತರ, ವಿಚಾರ ಜೀವಿಗಳ ಮನಸ್ಸನ್ನು ತಾಕಿದವು. ಬಾಲ್ಯವಿವಾಹದಂತಹ ಕೆಟ್ಟ ಸಂಪ್ರದಾಯವು ನನ್ನ ಜೀವನದ ಎಲ್ಲಾ ಸಂತೋಷಗಳನ್ನು ಕಸಿದುಕೊಂಡಿತ್ತು ಎಂದು ಆಕೆ ಬರೆದಳು. ನನ್ನ ಬದುಕಿನಲ್ಲಿ ವಿವಾಹವು ನನ್ನ ವಿದ್ಯೆ ಮತ್ತು ಮಾನಸಿಕ ಬೆಳವಣಿಗೆಗೆ ಅಡ್ಡ ಬಂದಿತು ಎಂದು ಹೇಳಿದ ಆಕೆ ಅಂದು ಬ್ರಿಟನ್ ಸಾಮ್ರಾಜ್ಯವನ್ನು ಆಳುತ್ತಿದ್ದ ರಾಣಿ ವಿಕ್ಟೋರಿಯಾಗೆ ಪತ್ರ ಬರೆದು ತನಗೆ ನ್ಯಾಯ ದೊರಕಿಸಿಕೊಡಲು ಕೇಳಿಕೊಂಡಳು. ಹಿಂದೂ ಕಾನೂನಿನಲ್ಲಿ ವೈವಾಹಿಕ ವಯಸ್ಸನ್ನು ಹೆಣ್ಣು ಮಕ್ಕಳಿಗೆ 15 ವರ್ಷ ಮೇಲ್ಪಟ್ಟು ಹಾಗೂ ಗಂಡು ಮಕ್ಕಳಿಗೆ 20 ವರ್ಷ ಮೇಲ್ಪಟ್ಟ ವಯಸ್ಕರಿಗೆ ಮಾಡುವ ಮೂಲಕ ಬಾಲ್ಯ ವಿವಾಹವನ್ನು ನಿಷೇಧಿಸಲು ಕೋರಿಕೊಂಡಳು.ಬಾಲ್ಯ ವಿವಾಹವನ್ನು ನಿಷೇಧಿಸುವ ಮೂಲಕ ಹಿಂದೂ ಯುವತಿಯರಿಗೆ ಮಹದುಪಕಾರ ಮಾಡಿ ಎಂದು ಕೇಳಿಕೊಂಡಳು. 1888 ರಲ್ಲಿ ಅಂತಿಮವಾಗಿ ಒಂದು ಒಪ್ಪಂದಕ್ಕೆ ಬರಲಾಯಿತು.2 ಸಾವಿರ ರೂ ಹಣವನ್ನು ದಾದಾಜಿಗೆ ನೀಡುವ ಮೂಲಕ ಮದುವೆಯನ್ನು ರದ್ದುಗೊಳಿಸುವ ಹಾಗೂ ರುಕ್ಮಾಭಾಯಿಯ ಮೇಲೆ ಹೊರಿಸಿರುವ ಎಲ್ಲ ಮೊಕದ್ದಮೆಗಳನ್ನು ಹಿಂತೆಗೆದುಕೊಳ್ಳುವ ಒಪ್ಪಂದವಾಗಿತ್ತದು. ಅಂತಿಮವಾಗಿ ಆಕೆ ಪಂಜರದಿಂದ ಹೊರ ಬಿಟ್ಟ ಪಕ್ಷಿಯಾದಳು.ಇಲ್ಲಿಗೆ ಆಕೆಯ ಕಥೆ ಮುಗಿಯಲಿಲ್ಲ.  ಇಂಗ್ಲೆಂಡಿನ ಡಾಕ್ಟರ್ ಎಡಿತ್ ಪೆಚ್ಚಿ ಎಂಬ ತಜ್ಞ ವೈದ್ಯರ ಸಹಾಯ ಮತ್ತು ಸಹಕಾರದಿಂದ 1894 ರಲ್ಲಿ ಆಕೆ ವೈದ್ಯಕೀಯ ಪದವಿ ಪಡೆಯಲು ಇಂಗ್ಲೆಂಡಿಗೆ ತೆರಳಿದಳು. ಮಹಿಳೆಯರಿಗಾಗಿಯೇ ಇದ್ದ ಲಂಡನ್ ಸ್ಕೂಲ್ ಆಫ್ ಮೆಡಿಸಿನ್ ನಲ್ಲಿ ಆಕೆ ಓದಿ ವೈದ್ಯಕೀಯ ಪದವಿಯನ್ನು ಪಡೆದಳು. ಮುಂದೆ ಮರಳಿ ಭಾರತಕ್ಕೆ ಬಂದ ಆಕೆ ವೈದ್ಯಕೀಯ ಚಿಕಿತ್ಸಕಳಾಗಿ ಕರ್ತವ್ಯ ನಿರ್ವಹಿಸುವ ಮಹಿಳಾ ವೈದ್ಯೆ ಎಂದು ರಾಷ್ಟ್ರದ ಇತಿಹಾಸದಲ್ಲಿ ದಾಖಲಾದಳು.  ಮುಂದಿನ 35 ವರ್ಷಗಳ ಕಾಲ ರುಕ್ಮಭಾಯಿ ಸೂರತ್ ಮತ್ತು ರಾಜಕೋಟ್ಗಳಲ್ಲಿ ಮುಖ್ಯ ವೈದ್ಯಕೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಎಲ್ಲ ಜಾತಿ, ವರ್ಗಗಳ ಜನರ ಚಿಕಿತ್ಸೆಯನ್ನು ಕೈಗೊಂಡ ಆಕೆ ಸಾಕಷ್ಟು ಹೆಣ್ಣು ಮಕ್ಕಳಿಗೆ ನರ್ಸಿಂಗ್ ಕ್ಷೇತ್ರದಲ್ಲಿ ತರಬೇತಿ ನೀಡಿದಳು. ಮತ್ತೆ ನೂರಾರು ಹೆಣ್ಣು ಮಕ್ಕಳಿಗೆ ಶುಶ್ರೂಷೆ ಮತ್ತು ಸ್ವಚ್ಛತೆಯ ಕುರಿತು ತರಬೇತಿ ನೀಡಿ ಅವರನ್ನು ಆಯಕಟ್ಟಿನ ಸ್ಥಳಗಳಲ್ಲಿ ಕಾರ್ಯನಿರ್ವಹಿಸಲು ಪ್ರೋತ್ಸಾಹಿಸಿದರು. ಮಾರಣಾಂತಿಕ ಕಾಯಿಲೆಗಳು ದೇಶದಲ್ಲಿ ತಾಂಡವವಾಡುತ್ತಿದ್ದಾಗಲೂ ಆಕೆ ಸಾವಿಗೆ ಅಂಜದೆ, ರೋಗಕ್ಕೆ ಹಿಂಜರಿದು ಧೈರ್ಯಗೆಡದೆ ತಾನೇ ಮುಂಚೂಣಿಯಲ್ಲಿ ನಿಂತು ರೋಗಿಗಳನ್ನು ತಪಾಸಿಸಿ ಸೂಕ್ತ ಚಿಕಿತ್ಸೆ ನೀಡಿ ಗುಣಮುಖರನ್ನಾಗಿಸಿದಳು. ಹೋರಾಟ ಆಕೆಯ ಬದುಕಿನ ಅವಿಭಾಜ್ಯ ಅಂಗವಾಗಿದ್ದು ತನ್ನ ವೃತ್ತಿ ಜೀವನದಿಂದ ನಿವೃತ್ತಿಯಾದ ನಂತರವೂ ಕೂಡ ಆಕೆ ಪರ್ದಾ ಪದ್ಧತಿಯನ್ನು ವಿರೋಧಿಸಿ ಹೆಣ್ಣು ಮಕ್ಕಳಲ್ಲಿ ಜಾಗೃತಿಯನ್ನು ಮೂಡಿಸಿದರು. ಭಾರತೀಯ ಸಭ್ಯತೆಯ ಹೆಸರಿನಲ್ಲಿ ಹೆಣ್ಣು ಮಕ್ಕಳನ್ನು ಬಲವಂತದಿಂದ ಮನೆಯಲ್ಲಿ ಕೂಡಿ ಹಾಕುವುದನ್ನು ವಿರೋಧಿಸಿ ಆಕೆ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತಹ ಶಾಲೆಯನ್ನು ತೆರೆಯಲು ತನ್ನ ಮನೆಯನ್ನೇ ಬಿಟ್ಟುಕೊಟ್ಟಳು.  ಅಂದು ತನ್ನ ಇಪ್ಪತ್ತನೇ ವಯಸ್ಸಿನಲ್ಲಿ ರುಕ್ಮಬಾಯಿ ತೆಗೆದುಕೊಂಡ ಒಂದು ದಿಟ್ಟ ನಿರ್ಧಾರದ ಪರಿಣಾಮವಾಗಿ ತಲೆ ತಲೆಮಾರುಗಳ ಹೆಣ್ಣು ಮಕ್ಕಳು ನೆಮ್ಮದಿಯ ಬಾಲ್ಯವನ್ನು ಕಳೆಯಲು ಸಾಧ್ಯವಾಗಿದೆ. 1888 ರ ರುಕುಮಾಬಾಯಿ ಮೊಕದ್ದಮೆಯ ಐತಿಹಾಸಿಕ ತೀರ್ಪಿನ ಮೂರು ವರ್ಷಗಳ ನಂತರ 1891ರಲ್ಲಿ ಬ್ರಿಟಿಷ್ ಸರ್ಕಾರವು ‘ ದ ಏಜ್ ಆಫ್ ಕನ್ಸೆಂಟ್ ಆಕ್ಟ್’ ಅನ್ನು ಜಾರಿ ಮಾಡಿತು. ನಿರ್ದಿಷ್ಟ ವಿಷಯಗಳ ಕುರಿತು ತೀರ್ಮಾನವನ್ನು ಕೈಗೊಳ್ಳುವ ಹಕ್ಕನ್ನು ನೀಡಲಾಯಿತು. ವೈವಾಹಿಕ ವಯಸ್ಸಿನ ಮಿತಿಯನ್ನು ಹೆಚ್ಚಿಸಲಾಯಿತು. ರುಕ್ಮಾಭಾಯಿಯ ಮೊಕದ್ದಮೆಯು ಮೊಟ್ಟಮೊದಲ ಬಾಲ್ಯ ವಿವಾಹ ವಿರುದ್ಧದ ಪ್ರಕರಣ ಎಂದು ದಾಖಲಾಯಿತು, ಆದರೆ ಅದುವೇ ಕೊನೆಯ ಪ್ರಕರಣವಾಗಬೇಕಿತ್ತು… ದುರ್ದೈವವಶಾತ್ ಇಂದಿಗೂ ಕೂಡ ಬಾಲ್ಯ ವಿವಾಹ ತೆರೆ ಮರೆಯಲ್ಲಿ ನಡೆಯುತ್ತಲೇ ಇವೆ ಹಾಗೂ ಅದರ ಪರಿಣಾಮವಾಗಿ ಹೆಣ್ಣು ಮಕ್ಕಳು ಅಪ್ರಾಪ್ತ ವಯಸ್ಸಿನಲ್ಲಿ ಅನಿರೀಕ್ಷಿತ ಗರ್ಭ ಧರಿಸುವಿಕೆ, ಹೆರಿಗೆಯಲ್ಲಿ ಸಾವು, ತಾನೇ ಒಂದು ಮಗುವಾಗಿ ತನ್ನಲ್ಲಿ ಆ ಸಾಮರ್ಥ್ಯ ಇಲ್ಲದೆ ಇದ್ದಾಗಲೂ ಕೂಡ ತನ್ನದೇ ಮಗುವನ್ನು ಹೆರುವ, ಹೊರುವ ಜವಾಬ್ದಾರಿಯನ್ನು ನಿರ್ವಹಿಸುತ್ತಲೇ

“ಬಾಲ್ಯ ವಿವಾಹ ನಿಷೇಧದ ಕಾನೂನು ಮತ್ತು ರುಕ್ಮಾಬಾಯಿ ಎಂಬ ದಿಟ್ಟ ಮಹಿಳೆ”ಹೇಮಂತ್‌ ಗೌಡ ಪಾಟೀಲ್ Read Post »

ಇತರೆ

ಸಾವಿಲ್ಲದ ಶರಣರು,ಕಾಲಜ್ಞಾನಿ ಸಾಮರಸ್ಯದ ಶರಣ  ಕೊಡೇಕಲ್ ಬಸವಣ್ಣನವರು

ಸಾವಿಲ್ಲದ ಶರಣರು,ಕಾಲಜ್ಞಾನಿ ಸಾಮರಸ್ಯದ ಶರಣ  ಕೊಡೇಕಲ್ ಬಸವಣ್ಣನವರು

ಸಾವಿಲ್ಲದ ಶರಣರು,ಕಾಲಜ್ಞಾನಿ ಸಾಮರಸ್ಯದ ಶರಣ  ಕೊಡೇಕಲ್ ಬಸವಣ್ಣನವರು Read Post »

ಇತರೆ

“ನಿಮ್ಮ ಹಣೆಬರಹ ನೀವೇ ಬರೆದುಕೊಳ್ಳಿ !”ಜಯಶ್ರೀ.ಜೆ. ಅಬ್ಬಿಗೇರಿ

“ನಿಮ್ಮ ಹಣೆಬರಹ ನೀವೇ ಬರೆದುಕೊಳ್ಳಿ !”ಜಯಶ್ರೀ.ಜೆ. ಅಬ್ಬಿಗೇರಿ

“ನಿಮ್ಮ ಹಣೆಬರಹ ನೀವೇ ಬರೆದುಕೊಳ್ಳಿ !”ಜಯಶ್ರೀ.ಜೆ. ಅಬ್ಬಿಗೇರಿ Read Post »

ಇತರೆ

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚಾರಣೆ, ಗಾಯತ್ರಿಸುಂಕದ

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚಾರಣೆ, ಗಾಯತ್ರಿಸುಂಕದ

ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನಾಚಾರಣೆ, ಗಾಯತ್ರಿಸುಂಕದ Read Post »

You cannot copy content of this page

Scroll to Top