ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ನಿಮ್ಮೊಂದಿಗೆ

“ತಿರುಗುತ್ತಿಲ್ಲ ಬಿಚ್ಚಿಟ್ಟ ಗಡಿಯಾರ” ನಾಗೊಂಡಹಳ್ಳಿ ಸುನಿಲ್

ಕಾವ್ಯ ಸಂಗಾತಿ ನಾಗೊಂಡಹಳ್ಳಿ ಸುನಿಲ್ “ತಿರುಗುತ್ತಿಲ್ಲ ಬಿಚ್ಚಿಟ್ಟ ಗಡಿಯಾರ” ವಿಶಾಲವಾದ ಬಟಾಬಯಲು ನಡುವಲ್ಲೊಂದು ಮನೆಆ ಮನೆಯ ಮೂಲೆಯಲ್ಲೊಂದು ಕೋಣೆತಿರುಗುತ್ತಿದೆ ಕೋಣೆಯಲ್ಲಿ ತಣ್ಣನೆಯ ಫ್ಯಾನುಅವನ ಉದ್ವೇಗಕ್ಕಾಗಿಯೋ ಅವಳ ಆವೇಗಾಕ್ಕಾಗಿಯೋ ಪ್ರೇಮ ಕಾಮಗಳ ಪರಾಕಾಷ್ಠೆಗೆನೆರೆಹೊರೆಗೆ ಸದ್ದು ಕೇಳಿಸದಿರಲೆಂದುಮೈ ಜುಮ್ಮೆನ್ನುವ ಗಡುವಿಗೆಕಿವಿಗಡಚುವಂತೆ ಏರಿಸಿದಗಮನಿಸದ ಹಾಡು ತಿರುಗುತ್ತಿಲ್ಲ ಬಿಚ್ಚಿಟ್ಟ ಗಡಿಯಾರಕಳಚಿಟ್ಟ ಬಟ್ಟೆಯೂ ನೆನಪಿಸುತ್ತಿಲ್ಲಬಂಧಿಸಿದ ಭಾವನೆಗಳ ತಳಮಳದಲ್ಲಿಅವರಿಬ್ಬರೂ ತನ್ಮಯರುಲೋಕದ ರೂಢಿಯಲ್ಲಿ ಅವ್ಯಕ್ತಮೂಕ ವಿಸ್ಮಿತರು ಬೆವರ ಹನಿ ಘಮಗುಡಲೆಂದುಮೈ ತುಂಬಾ ತಣ್ಣಗೆ ಚುಮುಕಿಸಿದಸುಗಂಧ ದ್ರವ್ಯಬೆಚ್ಚನೆಯ ಬೆವರ ಹನಿಗೆ ಬಣ್ಣ ಕಳೆದುಕೊಂಡಿತೆನ್ನುವ ಭಯ ಕಳೆದುಕೊಂಡದ್ದೋ, ದಕ್ಕಿಸಿಕೊಂಡದ್ದೋಎಲ್ಲವನ್ನೂ ಒಮ್ಮೆಲೆ ಸುಖಿಸಿಕೊಂಡಸ್ಖಲನದ ರಾತ್ರಿಯೋಅರಿವಿಲ್ಲದ ಖಾತ್ರಿಯೋ ತಿಳಿಯದು ರವಿಗೆ ಇಬ್ಬನಿ ಕರಗುವಂತೆಮಳೆಗೆ ಮಣ್ಣ ತಣುವಾದಂತೆಸ್ಪರ್ಶದೊಳಗಿನ ಹಣ್ಣುರುಚಿ ನೀಡಿದ ಹೊತ್ತಿಗೆಈಗೆಲ್ಲವೂ ಆ ಕೋಣೆಯಮೂಲೆಯಲ್ಲಿಅದೇ ಕಡುಗಪ್ಪಿನ ಮೂಲೆಯಲ್ಲಿಬೆಳದಿಂಗಳ ಬಯಕೆಗೆ ಲೀನವಾಗಿದೆ ಬಟಾಬಯಲಿನ ನಡುಮನೆಯಲ್ಲೊಂದುಫ್ಯಾನೂ ಇನ್ನೂ ತಣ್ಣಗೆ ತಿರುಗುತ್ತಿದೆಇನ್ನೂ ತಣ್ಣಗೆ ತಿರುಗುತ್ತಿದೆ ನಾಗೊಂಡಹಳ್ಳಿ ಸುನಿಲ್         

“ತಿರುಗುತ್ತಿಲ್ಲ ಬಿಚ್ಚಿಟ್ಟ ಗಡಿಯಾರ” ನಾಗೊಂಡಹಳ್ಳಿ ಸುನಿಲ್ Read Post »

ಕಾವ್ಯಯಾನ

ಭಾರತಿ ಅಶೋಕ್‌ “ಶಿಲುಬೆಗೇರಿಸುವ ಕಾಲ”

ಕಾವ್ಯ ಸಂಗಾತಿ ಭಾರತಿ ಅಶೋಕ್‌ “ಶಿಲುಬೆಗೇರಿಸುವ ಕಾಲ” ಅವಳುದಿನವೂ ಶಿಲುವೆಗೇರುತ್ತಾಳೆಸಂಸಾರ ಬಂಡಿಯ ನೊಗವ ಕತ್ತಿಗೆಬಿಗಿದುಕೊಂಡು. ಕತ್ತು ಬಗ್ಗಿಸಿಒಮ್ಮೆ ದೀರ್ಘ ಉಸಿರೆಳೆದು ಸುಧಾರಿಸಿಕೊಳ್ಳಲಾಗದಭಾರ ಹೊತ್ತು ಎಳೆಯುತ್ತಲೇ ಇದ್ದಾಳೆ ಬಂಡಿಯ ಅವಳಿಗೆಮೈ ತುಂಬಾ ಕೈಗಳು, ಕೈಗೊಂದರಂತೆ ಜವಬ್ಧಾರಿಯಮೊಳೆ ಹೊಡೆಯಲಾಗಿದೆ ಅದಕವಳ ತಕರಾರಿಲ್ಲ ಶತಮಾನಗಳಿಂದಅವಳ ದೇಹ ಮನಸ್ಸುಗಳ ಮೇಲೆಕ್ರೌರ್ಯ ಮೆರೆದವರನವಳು ಶಿಲುಬೆಗೇರಿಸುವಕಾಲ ಈಗ ಸನ್ನಿಹಿತವಾಗಿದೆ. ಭಾರತಿ ಅಶೋಕ್

ಭಾರತಿ ಅಶೋಕ್‌ “ಶಿಲುಬೆಗೇರಿಸುವ ಕಾಲ” Read Post »

ಕಾವ್ಯಯಾನ

ಪರವಿನ ಬಾನು ಯಲಿಗಾರ ಅವರ “ನಾರಿ”

ಕಾವ್ಯ ಸಂಗಾತಿ ಪರವಿನ ಬಾನು ಯಲಿಗಾರ “ನಾರಿ” ನೀನೇಷ್ಟುಸಾಧಿಸಿದರೆನು ,ತಪ್ಪುತ್ತಿಲ್ಲವಲ್ಲ  ನಿನ್ನ ಮೇಲಿನ ದೌರ್ಜನ್ಯ . ನೀನೇಷ್ಟು ಓದಿದರೆನು , ನಿನ್ನ ಪಾಲಿನನ್ಯಾಯಕ್ಕಗಿ ನಿ ಹೋರಾಡುವುದು ತಪ್ಪಲಿಲ್ಲ. ನೀನ್ಯಾವ  ಅಧಿಕಾರ ಪಡೆದರೇನು ,ನಿನಗೇ ರಕ್ಷಣೆ ಇನ್ನೂ ಸಿಕ್ಕಿಲ್ಲ . ನೀನೆಷ್ಟು ಹಕ್ಕಿನ ಪಾಠ ಮಾಡಿದರೇನು ,ನಿನ್ನ ಮನೆಯಲ್ಲೇ ನಿನ್ನ ಹಕ್ಕು ಗೌಣ . ನಿನಗೆಷ್ಟು ಪದವಿ ಪುರಸ್ಕಾರ ದಕ್ಕಿದರೇನು ,ನಿನಾಗಿರುವೆ ಮತ್ತೊಬ್ಬರ ಅಡಿಯಾಳು . ನೀ ಛಾಪು ಮೂಡಿಸಿದರೆನು ,ಅನ್ಯ ಗೃಹದಲ್ಲಿ ಕಾಲೂರಿ ,ನಿನಗೇ  ನೆಲೆ ಇಲ್ಲ  , ನೀ ಇರುವಲ್ಲಿ . ನೀನಾಗಿರುವೆ ಯಾವಾಗಲೂ ದ್ವಿತೀಯಳು ,ಆದರೆ  , ಆದ್ವಿತೀಯಳಾಗುವ ದಿನ ಬಂದೆ ಬರುವುದು ,  ಒಂದು ದಿನ ….. ——————— ಪರವೀನ ಬಾನು ಯಲಿಗಾರ

ಪರವಿನ ಬಾನು ಯಲಿಗಾರ ಅವರ “ನಾರಿ” Read Post »

ಕಾವ್ಯಯಾನ

ಸತೀಶ್ ಬಿಳಿಯೂರು “ನನ್ನೊಲವಿನ ಪಯಣ”

ಕಾವ್ಯ ಸಂಗಾತಿ ಸತೀಶ್ ಬಿಳಿಯೂರು “ನನ್ನೊಲವಿನ ಪಯಣ” ಸನಿಹ ಬಾ ಮೌನವೆಲ್ಲ ತೊರೆದುಭಾವಗಳ ಪಥವನ್ನು ತುಳಿದುಒಲವಲ್ಲಿ ನಗುವನ್ನು ಕರೆದುಒಡಲನ್ನು ಸೇರು ಬಂಧ ಬೆಸೆದು ಬದುಕೊಳಗೆ ನೀನಿರಬೇಕು ಒಲವೆಹೃದಯದ ಕದ ತಟ್ಟು ಬೇಗ ಚೆಲುವೆತವಕಿಸುತಿಹುದು ಈ ನನ್ನ ಮನವೆಬಾಗಿಲಲ್ಲಿ ಕಾದು ನಿಂತಿಹೆನು ನೀ ನನ್ನ ಜಗವೆ ಕಣ್ಣ ಅಪ್ಪುವ ಕನಸುಗಳು ಬಳಿಯಿರಲುಆಸೆ ಬಯಕೆ ನಿತ್ಯ ಜೊತೆಯಿರಲುಇನ್ನೂ ಎಷ್ಟು ದಿನ ನೀನೊಂದು ತೀರದೇವರೇ ಗೀಚಿದ ಸಂಬಂಧವೇ ಸುಮಧುರ ನಮ್ಮಿಬ್ಬರ ಬಾಳ ಪಯಣ ಹೊರಡಲಿಸಂತೋಷ ತುಂಬಿರೋ ದಾರಿಯಲಿನನಸಿನ ರಥ ಮುಂದೆ ಮುಂದೆ ಸಾಗಲಿಎಡವದಿರುವ ಜೀವನದ ಪಥದಲಿ ಸತೀಶ್ ಬಿಳಿಯೂರು

ಸತೀಶ್ ಬಿಳಿಯೂರು “ನನ್ನೊಲವಿನ ಪಯಣ” Read Post »

ಕಾವ್ಯಯಾನ

ಪೂರ್ಣಿಮಾ ಸಾಲೆತ್ತೂರು ಅವರಕವಿತೆ ” ದೀಪ”

ಕಾವ್ಯ ಸಂಗಾತಿ ಪೂರ್ಣಿಮಾ ಸಾಲೆತ್ತೂರು ” ದೀಪ”  ಹಬ್ಬದಲಿ ಹಚ್ಚೋಣ ಸಾಲು ದೀಪವ ಕವಿದ ಕತ್ತಲೆಯ ಓಡಿಸುವ ಜಗದ ರೂಪವ ದ್ವೇಷ ಅಸೂಯೆಯ ಉರಿಸುತ ತೋರಿಸೋಣ ಸಹಸ್ಪಂದನದ ಸಹಮತ  ಆಗಲಿ ನಿರಾಸೆಯ ಬಾಳಿಗೆ ಆಶಾದೀಪ ಬೆಳಗಿಸೋಣ ಬಾಳಲಿ ಸದ್ಗುಣಗಳ ಹೊಳಪ ಬಾಳ ಬಾಂದಳದಿ ಬೆಸೆಯಲಿ ಸೌಹಾರ್ದ ಭಾವ ಹೆಗಲಿಗೆ ಹೆಗಲು ಕೊಟ್ಟು ಮರೆಯೋಣ ನೋವ  ಅಜ್ಞಾನದ ಕತ್ತಲು ಕಳೆಯಲಿ ಮನದ ಕೊಳೆಯು ತೊಳೆದು ಹೋಗಲಿ ದೀಪವಾಗಿ ಹೊಳೆವ ಬೆಳಕಿನ ರೂಪ ಪ್ರತಿದಿನ ಹಚ್ಚೋಣ ನಂದಾದೀಪ ಪೂರ್ಣಿಮಾ ಸಾಲೆತ್ತೂರು

ಪೂರ್ಣಿಮಾ ಸಾಲೆತ್ತೂರು ಅವರಕವಿತೆ ” ದೀಪ” Read Post »

ನಿಮ್ಮೊಂದಿಗೆ

ಸಾವಿಲ್ಲದ ಶರಣರು ,”ಅಪ್ಪಟ ದೇಶ ಭಕ್ತ ಪ್ರಾಮಾಣಿಕ ರಾಜಕೀಯ ಮುತ್ಸದ್ಧಿ ಎಸ್ ಆರ್ ಕಂಠಿ”

ಶರಣ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಸಾವಿಲ್ಲದ ಶರಣರು “ಅಪ್ಪಟ ದೇಶ ಭಕ್ತ ಪ್ರಾಮಾಣಿಕ ರಾಜಕೀಯ ಮುತ್ಸದ್ಧಿ ಎ ಸ್ ಆರ್ ಕಂಠಿ” ಕರ್ನಾಟಕವು ಕಂಡ ಶ್ರೇಷ್ಠ ಆಡಳಿತಗಾರರು ಪ್ರಾಮಾಣಿಕ ರಾಜಕೀಯ ಮುತ್ಸದ್ಧಿ ಎಂದು ಎನಿಸಿಕೊಂಡ  ಎಸ್ ಆರ್ ಕಂಠಿ (ಶಿವಲಿಂಗಪ್ಪ ರುದ್ರಪ್ಪ ಕಂಠಿ )ಯವರು ಬಾಗಲಕೋಟ(ಹಳೆಯ ವಿಜಯಪುರ) ಜಿಲ್ಲೆಯ ಹುನಗುಂದ ತಾಲ್ಲೂಕಿನ ಇಳಕಲ್ಲ ನಗರದವರು. 1962ರಲ್ಲಿ ಅಲ್ಪ ಕಾಲ ಕರ್ನಾಟಕ (ಆಗಿನ ಮೈಸೂರು) ರಾಜ್ಯದ ಮುಖ್ಯಮಂತ್ರಿಯಾಗಿದ್ದರು. *ವೈಯಕ್ತಿಕ ಮಾಹಿತಿ* ಜನನ 21 ಡಿಸೆಂಬರ್ 1908 ಕೆರೂರ, ಬದಾಮಿ, ಬಾಗಲಕೋಟೆ ಜಿಲ್ಲೆ ರಾಜಕೀಯ ಪಕ್ಷ ಕಾಂಗ್ರೆಸ್ ಜನನ ಹಾಗೂ ವಿದ್ಯಾಭ್ಯಾಸ ಬಾಗಲಕೋಟೆ(ಹಳೆಯ ಬಿಜಾಪುರ) ಜಿಲ್ಲೆಯ ಬದಾಮಿ ತಾಲ್ಲೂಕಿನ ಕೆರೂರನಲ್ಲಿ 1908 ಡಿಸೆಂಬರ್ 21ರಂದು ಜನಿಸಿದರು. *ಶಿಕ್ಷಣ* ಧಾರವಾಡದ ಕರ್ನಾಟಕ ಕಾಲೇಜು, ಕೊಲ್ಲಾಪುರದ ರಾಜಾರಾಮ್ ಕಾಲೇಜು ಮತ್ತು ಲಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡಿದ ಇವರು ಬಾಗಲಕೋಟೆಯಲ್ಲಿ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. *ಸಮಾಜ ಸೇವೆ* ಹರಿಜನರ, ರೈತರ ಮತ್ತು ನೇಕಾರರ ಏಳ್ಗೆಗಾಗಿ ಶ್ರಮಿಸಿದರು. 1939ರಲ್ಲಿ ಕೆ.ಪಿ.ಸಿ.ಸಿ. ಮತ್ತು ಎ.ಐ.ಸಿ.ಸಿಗಳಿಗೆ ಸದಸ್ಯರಾಗಿ ಆಯ್ಕೆಯಾದರು. 1940-41ರಲ್ಲಿ ಬಿಜಾಪುರ ಜಿಲ್ಲೆಯಲ್ಲಿ ಸತ್ಯಾಗ್ರಹ ವ್ಯವಸ್ಥೆ ಮಾಡಿ 10 ತಿಂಗಳ ಸೆರೆಮನೆವಾಸ ಅನುಭವಿಸಿದರು. 1942ರ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿ ಮತ್ತೊಮ್ಮೆ ಸೆರೆಯಾಗಿ ಅದೇ ವರ್ಷ ಬಿಡುಗಡೆ ಹೊಂದಿದರು. ಅನಂತರ ಮುಂಬಯಿ ಸ್ಥಳೀಯ ಆಹಾರ ಸಮಿತಿಯ ಕ್ರಿಯಾಶೀಲ ಸದಸ್ಯರಾಗಿದ್ದುಕೊಂಡು ಕ್ಷಾಮ ಪರಿಹಾರ ಸಮಿತಿಯ ಪರವಾಗಿ ಕ್ಷಾಮಪೀಡಿತ ಪ್ರದೇಶಗಳಿಗೆ ಊಟ, ಬಟ್ಟೆ ಇತ್ಯಾದಿ ಸರಬರಾಜು ಮಾಡುವ ಸಾರ್ವಜನಿಕ ಸೇವೆಯಲ್ಲಿ ಪ್ರವೃತ್ತರಾದರು. *ಹೋರಾಟ* 1946ರಲ್ಲಿ ಬಿಜಾಪುರ ಜಿಲ್ಲೆಯ ರೈತ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದರು. ಅನಂತರ ಅಂದಿನ ಮುಂಬಯಿ ಮಂತ್ರಿ ಮಂಡಲದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ ನೇಮಕಗೊಂಡು 6 ವರ್ಷಗಳ ಕಾಲ ಸೇವೆಸಲ್ಲಿಸಿದರು (1946-52). ಆಗ ಸುಮಾರು ಎರಡು ವರ್ಷಗಳ ಕಾಲ ಹಣಕಾಸಿನ ಶಾಖೆಯನ್ನು ಹಾಗೂ ಮೂರು ವರ್ಷಗಳ ಕಾಲ ವ್ಯವಸಾಯ, ಅರಣ್ಯ ಮತ್ತು ಸಹಕಾರ ಇಲಾಖೆಗಳ ಅಧಿಕಾರವನ್ನು ವಹಿಸಿಕೊಂಡಿದ್ದರು. 1952-56ರ ವರೆಗೆ ಮುಂಬಯಿ ವಿಧಾನಸಭೆಯ ಉಪಾಧ್ಯಕ್ಷರಾಗಿದ್ದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕರ್ನಾಟಕ ರಾಜ್ಯದ ನಿರ್ಮಾಣದ ಬಗ್ಗೆ ವಿಷಯ ಸಂಗ್ರಹಿಸಿ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಲು ರಚಿಸಿದ ಸಮಿತಿಗೆ ಇವರನ್ನು ಕಾರ್ಯದರ್ಶಿಯಾಗಿ ನೇಮಿಸಿತ್ತು. ಕರ್ನಾಟಕ ರಾಜ್ಯ ನಿರ್ಮಾಣವಾದ ಮೇಲೆ 1956ರಲ್ಲಿ ಮೈಸೂರು ವಿಧಾನ ಸಭೆಯ ಅಧ್ಯಕ್ಷರಾದ ಕಂಠಿಯವರು ಸುಮಾರು 6 ವರ್ಷಗಳ ಕಾಲ ಆ ಹುದ್ದೆಯಲ್ಲಿದ್ದರು. 1961ರಲ್ಲಿ ಪಶ್ಚಿಮ ಜರ್ಮನಿಗೆ ಭೇಟಿ ನೀಡಿದ ಸಂಸದೀಯ ನಿಯೋಗಕ್ಕೆ ಇವರು ಮುಖ್ಯಸ್ಥರಾಗಿದ್ದರು. ಮೂರನೆಯ ಸಾರ್ವತ್ರಿಕ ಚುನಾವಣೆಯಲ್ಲಿ ಹುನಗುಂದ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಇವರು 1962 ಮಾರ್ಚ್ 9ರಿಂದ 1962 ಜುಲೈ 20ರವರೆಗೆ ವಿಶಾಲ ಮೈಸೂರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅನಂತರ 1962 ಜುಲೈ 21ರಂದು ವಿದ್ಯಾಮಂತ್ರಿಯಾಗಿ ನೇಮಕಗೊಂಡರು. ಬೆಂಗಳೂರು ವಿಶ್ವವಿದ್ಯಾಲಯ ಸ್ಥಾಪನೆಯಾದದ್ದು ಇವರು ವಿದ್ಯಾಮಂತ್ರಿಯಾಗಿದ್ದಾಗ. ನಾಲ್ಕನೆಯ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೊಮ್ಮೆ ವಿಧಾನಸಭೆಗೆ ಆಯ್ಕೆಯಾಗಿ 1967 ಮಾರ್ಚ್ 14ರಿಂದ 1968 ಏಪ್ರಿಲ್ 29ರವರೆಗೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಂತ್ರಿಯಾಗಿದ್ದರು. ಇವರು ಕೆಲಕಾಲ ಕರ್ನಾಟಕ ಹಿಂದಿ ಪ್ರಚಾರ ಸಭೆಯ ಅಧ್ಯಕ್ಷರೂ ಮೈಸೂರು ಪ್ರದೇಶದ ಭಾರತ ಸೇವಕ ಸಮಾಜದ ಅಧ್ಯಕ್ಷರೂ ಆಗಿದ್ದರು. 1959ರಲ್ಲಿ ಲಂಡನಿನಲ್ಲಿ ನಡೆದ ಕಾಮನ್ವೆಲ್ತ್‌ ಸಂಸದೀಯ ಸಮ್ಮೇಳನಕ್ಕೆ ಕರ್ನಾಟಕ ಸರ್ಕಾರ ಇವರನ್ನು ತನ್ನ ಪ್ರತಿನಿಧಿಯನ್ನಾಗಿ ಕಳಿಸಿತ್ತು. ಆ ಸಂದರ್ಭದಲ್ಲಿ ತಮಗಾದ ಅನುಭವಗಳನ್ನು ಇವರು ನೋಟ್ಸ್‌ ಆನ್ ದಿ ಪಾರ್ಲಿಮೆಂಟರಿ ಕೋರ್ಸ್ ಎಂಬ ಗ್ರಂಥದಲ್ಲಿ ನಿರೂಪಿಸಿದ್ದಾರೆ. *ಮುಖ್ಯಮಂತ್ರಿ* 1962ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧೆ ನಡೆಸಿತು. ಫೆಬ್ರವರಿ 19ರಂದು ನಡೆದ ಚುನಾವಣೆಯಲ್ಲಿ 208 ಕ್ಷೇತ್ರಗಳಲ್ಲಿ ಕಾಂಗ್ರೆಸ್ 138 ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆಗೇರಿತು. ಆದರೆ, ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ಎಸ್. ನಿಜಲಿಂಗಪ್ಪ ಅವರು ಹೊಸದುರ್ಗದಲ್ಲಿ 5709 ಮತಗಳ ಅಂತರದಲ್ಲಿ ಸೋತಿದ್ದರು. ಹೀಗಾಗಿ, ಶಿವಲಿಂಗಪ್ಪ ರುದ್ರಪ್ಪ ಕಂಠಿ ರಾಜ್ಯದ ಆರನೇ ಮುಖ್ಯಮಂತ್ರಿಯಾದರು. ಎಸ್.ಆರ್. ಕಂಠಿ ಅವರ ಮುಖ್ಯಮಂತ್ರಿ ಸ್ಥಾನ ಬಹುದಿನ ಉಳಿಯಲಿಲ್ಲ. ಮೂರು ತಿಂಗಳು ಮುಗಿಯುವುದರೊಳಗೇ ಒಲ್ಲದ ಮನಸ್ಸಿನಿಂದ ರಾಜಿನಾಮೆ ನೀಡಿದರು. ಏಕೆಂದರೆ, ನಿಜಲಿಂಗಪ್ಪ ಮುಖ್ಯಮಂತ್ರಿಯಾಗಲಿ ಎಂದು ಬಾಗಲಕೋಟೆ ಶಾಸಕ ಬಿ.ಟಿ. ಮುರ್ನಾಳ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಎಸ್. ನಿಜಲಿಂಗಪ್ಪ ಹಾಗೂ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಇತರೆ ಇಬ್ಬರ ನಾಮಪತ್ರ ತಿರಸ್ಕಾರವಾದ್ದರಿಂದ ಎಸ್. ನಿಜಲಿಂಗಪ್ಪ ಅವಿರೋಧವಾಗಿ ಆಯ್ಕೆಯಾದರು. ಕಾಂಗ್ರೆಸ್  ಪಕ್ಷದ  ಹಿಂದಿನ ಯೋಜನೆಯಂತೆ ಎಸ್. ನಿಜಲಿಂಗಪ್ಪ ಅವರಿಗೆ ಮುಖ್ಯಮಂತ್ರಿ ಪಟ್ಟ ಬಿಟ್ಟು ಕೊಟ್ಟರು.  ಮೂರನೇ ವಿಧಾನಸಭೆಯ ಅವಧಿ 1962ರ ಮಾರ್ಚ್ 15ರಿಂದ 1967ರ ಫೆಬ್ರವರಿ 28. ಎಸ್. ನಿಜಲಿಂಗಪ್ಪ ಈ ಅವಧಿಯನ್ನು ಪೂರ್ಣಗೊಳಿಸಿದರು. ಕೃಷಿ, ಕೈಗಾರಿಕೆ, ಸಾರಿಗೆ ಹಾಗೂ ನೀರಾವರಿ ಕ್ಷೇತ್ರದಲ್ಲಿ ಹಲವು ಸೌಲಭ್ಯ ನೀಡುವ ಜತೆಗೆ ಹೊಸತನ ತಂದರು. ಹೀಗಾಗಿ ಎಸ್. ನಿಜಲಿಂಗಪ್ಪ ಅವರನ್ನು ‘ಆಧುನಿಕ ಕರ್ನಾಟಕದ ನಿರ್ಮಾತೃ’ ಎಂದೂ ಕರೆಯಲಾಗುತ್ತಿತ್ತು.  ವಿಧಾನಸಭೆಯ ಈ ಅವಧಿಯಲ್ಲಿ ಪ್ರಥಮ ಬಾರಿಗೆ ಪ್ರತಿಪಕ್ಷ ನಾಯಕನ ಸ್ಥಾನ ನೀಡಲಾಯಿತು. *ನಿರ್ವಹಿಸಿದ ಹುದ್ದೆಗಳು* ಕರ್ನಾಟಕ ಸಾಹಿತ್ಯ ಅಕಾಡೆಮೆಯ ಅಧ್ಯಕ್ಷರು (1961-1966) ಕರ್ನಾಟಕ ವಿಧಾನಸಭಾ ಸದಸ್ಯರು (1957 – 1962) ಕರ್ನಾಟಕ ವಿಧಾನಸಭಾ ಸಭಾಪತಿ (19 ಡಿಸೆಂಬರ್ 1956- 9 ಮಾರ್ಚ್ 1962) ಕರ್ನಾಟಕದ ಮುಖ್ಯಮಂತ್ರಿ (1962 ಮಾರ್ಚ್ 9ರಿಂದ 1962 ಜುಲೈ 20) ಕರ್ನಾಟಕ ಸರ್ಕಾರದಲ್ಲಿ ಶಿಕ್ಷಣ ಮಂತ್ರಿ *ಕಿತ್ತೂರು ರಾಣಿ ಚೆನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆ ಸ್ಥಾಪಕರು* ರಾಜಕೀಯದಲ್ಲಿ ಆಧುನಿಕ ಭರತ ಎಂದೇ ಕರೆಸಿಕೊಂಡಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್ ಆರ್ ಕಂಠಿ ಅವರ ದೂರದೃಷ್ಟಿಯಿಂದ 1969 ರಲ್ಲಿ ಆರಂಭವಾದ ಈ ಶಾಲೆಯು ಬಾಲಕಿಯರಿಗಾಗಿ ಸೈನಿಕ ಶಿಕ್ಷಣ ನೀಡುವ ಏಕೈಕ ಶಾಲೆಯಾಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಕಿತ್ತೂರ ಇರುವ ಈ ಶಾಲೆಯಲ್ಲಿ ಆರನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗೂ ಇಲ್ಲಿ ಶಿಕ್ಷಣಕ್ಕೆ ಅವಕಾಶವಿದ್ದು ಅತ್ಯಾಧುನಿಕ ಸೌಲಭ್ಯವನ್ನು ಹೊಂದಿದೆ. *ನಿಧನ* ಕರ್ನಾಟಕದ ಏಳಿಗೆಗೆ ಅಪಾರವಾಗಿ ಶ್ರಮಿಸಿದ ಕಂಠಿಯವರು ರಾಜ್ಯ ವಿಧಾನಸಭೆಯ ಸದಸ್ಯರಾಗಿರುವಾಗಲೇ, 1969 ಡಿಸೆಂಬರ್ 25ರಂದು ಕಿತ್ತೂರಿನಲಿ ಹೃದಯಾಘಾತಕ್ಕೆ ಒಳಗಾಗಿ  ನಿಧನ ಹೊಂದಿದರು. ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಸ್ನೇಹ ಪ್ರೀತಿ ಪ್ರೇಮ ಮತ್ತು ವಿಶ್ವಾಸದ ಘನ ವ್ಯಕ್ತಿತ್ವ ಹೊಂದಿದ ಶ್ರೀ ಎಸ್ ಆರ್ ಕಂಠಿ ಅವರುರಾಷ್ಟ್ರ ನಾಡು ಕಂಡ ಅಪರೂಪದ ಪ್ರಬುದ್ಧ ಪ್ರಾಮಾಣಿಕ ರಾಜಕೀಯ ಮುತ್ಸದ್ಧಿ. ಆರು ದಶಕ ಬದುಕಿ ಆರು ಶತಕದ ನೆರಳನ್ನು ಕೊಟ್ಟ ಶ್ರೇಷ್ಠ ಹೆಮ್ಮರವಾಗಿದೆ. ಇವತ್ತು ಶ್ರೀ ಎಸ್ ಆರ್ ಕಂಠಿ ಭೌತಿಕವಾಗಿ ನಮ್ಮ ಜೊತೆಗೆ ಇಲ್ಲ. ಆದರೆ ಅವರು ಮಾಡಿದ ಅತ್ಯಂತ ಜನಪರ ಕೆಲಸಗಳು ಇಂದಿಗೂ ಅವರನ್ನು ನೆನಪಿಡುವಂತೆ ಮಾಡುತ್ತಿವೆ. ವಿದ್ಯಾರ್ಥಿ ನಿಲಯಕ್ಕೆಂದು ತಮ್ಮ ಮನೆಯನ್ನೇ ಮಾರಾಟ ಮಾಡಿದ ಕರ್ಣ ಅಪಾರ ಬಂಧು ಬಳಗವನ್ನು ಬಿಟ್ಟು ಹೋದ ಭರತ. ಎಸ್ ನಿಜಲಿಂಗಪ್ಪನವರ ಪಡಿ ನೆರಳು ಪ್ರಾಮಾಣಿಕತೆಯ ನಿಜ ರೂಪ ಆಗಿದ್ದರು. ಇವರಿಗೆ ಶತ ಕೋಟಿ ನಮನಗಳು __________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಸಾವಿಲ್ಲದ ಶರಣರು ,”ಅಪ್ಪಟ ದೇಶ ಭಕ್ತ ಪ್ರಾಮಾಣಿಕ ರಾಜಕೀಯ ಮುತ್ಸದ್ಧಿ ಎಸ್ ಆರ್ ಕಂಠಿ” Read Post »

ಇತರೆ, ಜೀವನ

“ಅಂಗೈಯಲ್ಲೇ ಇದೆ ಸ್ಪೂರ್ತಿಯ ಕಡಲು!” ಜಯಶ್ರೀ.ಜೆ. ಅಬ್ಬಿಗೇರಿ

ಸ್ಫೂರ್ತಿ ಸಂಗಾತಿ “ಅಂಗೈಯಲ್ಲೇ ಇದೆ ಸ್ಪೂರ್ತಿಯ ಕಡಲು!”  ಜಯಶ್ರೀ.ಜೆ. ಅಬ್ಬಿಗೇರಿ ಏಕೋ ಏನೋ ಗೊತ್ತಿಲ್ಲ  ಯಾವುದೇ ಕೆಲಸದಲ್ಲೂ ಆಸಕ್ತಿಯೇ ಇಲ್ಲ. ಹೇಗೋ ಮನಸ್ಸಿಗೆ ಒಪ್ಪಸಿ ಹುಮ್ಮಸ್ಸು ಮೂಡಿಸಿಕೊಂಡು ಯಾವ ಕೆಲಸವನ್ನು ಆರಂಭಿಸಿದರೂ ಅರ್ಧಂಬರ್ಧ ಮಾಡಿ ನಿಲ್ಲಿಸಿ ಬಿಡ್ತಿನಿ.ಅನ್ನೋದು ಬಹುತೇಕ ಜನರ  ಚಿಂತೆ. ಸಾಮಾನ್ಯವಾಗಿ ಬಹಳಷ್ಟು ಜನರನ್ನು ಮೇಲಿಂದ ಮೇಲೆ ಈ ತೊಂದರೆ ಕಾಡುತ್ತದೆ. ಮೇಲ್ನೋಟಕ್ಕೆ ಈ ಸಮಸ್ಯೆ ದೊಡ್ಡದೇನಲ್ಲ ಆದರೆ ಇದರ ಬೇರುಗಳನ್ನು ಬಲಗೊಳ್ಳಲು ಬಿಟ್ಟರೆ ಸಮಸ್ಯೆ ತಪ್ಪಿದ್ದಲ್ಲ. ಏನೆಲ್ಲ ಇದ್ದರೂ ಏನೂ ಸಾಧಿಸಲು ಸಾಧ್ಯವಾಗುವುದಿಲ್ಲ ಅಂಥ ಪರಿಸ್ಥಿತಿ ನಿರ್ಮಾಣ ಮಾಡಿ ಬಿಡುತ್ತದೆ.  ‘ಒಂದು ದುರ್ಬಲ ಮನಸ್ಸು ಒಂದು ಸೂಕ್ಷ್ಮ ದರ್ಶಕದಂತೆ. ಅದು ಸಣ್ಣ ವಿಷಯಗಳನ್ನು ದೊಡ್ಡದಾಗಿಸುತ್ತದೆ. ಆದರೆ ದೊಡ್ಡದನ್ನು ಪಡೆಯಲಾರದು.’ ಸ್ವಯಂ ಸ್ಪೂರ್ತಿ ಸ್ವಯಂ ಸ್ಪೂರ್ತಿ ಇರದಿದ್ದರೆ  ಸಂಕಟ, ನೋವು, ಅವಮಾನ ಹಾಗೂ ಬೇಸರಗಳು ಬೆನ್ನು ಹತ್ತಿ ಜೀವ ತಿನ್ನುತ್ತವೆ.ಜೀವನವನ್ನು ನಿಸ್ಸಾರಗೊಳಿಸುತ್ತವೆ.ಇತರರ ಮುಂದೆ ತಲೆ ತಗ್ಗಿಸುವಂತೆ ಮಾಡುತ್ತವೆ.ಕೆಲವೊಮ್ಮೆ ಶಿಕ್ಷೆಯನ್ನು ಅನುಭವಿಸುವಂತೆ ಮಾಡುತ್ತವೆ. ಸ್ಪೂರ್ತಿ ಇಲ್ಲದ ಸ್ಥಿತಿಯಲ್ಲಿ ನಿರಂತರ ಎಲ್ಲದರಲ್ಲೂ ಅವಮಾನದ ಪೆಟ್ಟಿನ ಅನುಭವ ಎದೆಗೆ ಬಿಸಿ ನೀರಾಗಿಸಿ ಹುಯ್ಯುತ್ತದೆ. ಸದಾ ನಮ್ಮನ್ನು ನಾವು ಸ್ಪೂರ್ತಿಯುತವಾಗಿ ಇಟ್ಟುಕೊಳ್ಳುವುದು ಅತಿ ಮುಖ್ಯ. ಮಾರ್ಗ ಮನಸ್ಸಿದ್ದಲ್ಲಿ ಮಾರ್ಗ ತಾನಾಗಿ ಕಾಣುತ್ತದೆ. ಆದರೂ ಈ ನಿಟ್ಟಿನಲ್ಲಿ ನಮ್ಮ ದೃಷ್ಟಿಕೋನ ಬದಲಾಗದಿದ್ದರೆ ‘ಆಯುಧವು ತನ್ನ ಯಜಮಾನನಿಗೂ ಶತ್ರುವೇ ಆಗಿದೆ’ಎಂಬಂತಾಗುತ್ತದೆ. ಕಲ್ಲಾಗಿರುವ ಮನಸ್ಸೆಂಬ ಆಯುಧವನ್ನು ಹೂವಿನಂತೆ ಮೆದುವಾಗಿಸಬೇಕು.ಹೊರಗಿನ ವಸ್ತುಗಳನ್ನು ಉಪಯೋಗಿಸಿ ಒಳ ಮನಸ್ಸನ್ನು ಹದಗೊಳಿಸಿ ಸ್ವಯಂ ಸ್ಪೂರ್ತಿಗೊಳಿಸಿಕೊಳ್ಳುವುದು ಹೇಗೆೆ ಎಂಬುದನ್ನು ನೋಡೋಣ ಬನ್ನಿಶಕ್ತಿ ತುಂಬುವ ವಸ್ತುಗಳನ್ನು ಬಳಸಿನಿಮಗೆ ಹಿತ ನೀಡುವ, ಇಷ್ಟವಾಗುವ, ನೀವು ಪ್ರೀತಿಸುವ, ವಸ್ತುಗಳು ನಿಮಗೆ ಶಕ್ತಿಯನ್ನು ತುಂಬುತ್ತವೆ. ಹೀಗಾಗಿ ಇವುಗಳಿಗೆ ನಿಮ್ಮ ಸುತ್ತಲೂ ಜಾಗ ನೀಡಿ. ಅವು ತಾಜಾ ಹೂಗಳು, ಸುಂದರ ಪೆಂಟಿಗ್ಸ್ ಇಲ್ಲವೇ ನುಡಿಮುತ್ತುಗಳಾಗಿರಬಹುದು. ಇವು ನಿಮ್ಮನ್ನು ಸ್ಪೂರ್ತಿಗೊಳಿಸಲು ತುದಿಗಾಲಲ್ಲೇ ನಿಂತಿರುತ್ತವೆ. ನೀರಸಗೊಂಡ ಮನಸ್ಸು ತಕ್ಷಣಕ್ಕೆ ಉತ್ಸಾಹದಿಂದ ಎದ್ದು ನಿಲ್ಲುತ್ತದೆ.ಒಂದು ನವಿಲು ತನ್ನ ಗೆರೆಗಳನ್ನು ತೆರೆದಿಟ್ಟಾಗ ಮತ್ತು ನವಿಲಿನಂತೆ ನಡೆದಾಗ ಮಾತ್ರ ಸುಂದರವಾಗಿ ಆಕರ್ಷಕವಾಗಿ ಕಾಣಬಲ್ಲದು. ಅಂತೆಯೇ ನಿಮ್ಮ ಪ್ರಪಂಚದಲ್ಲಿ ನೀವು ಬಹಳಷ್ಟು ಬಯಸುವುದನ್ನೆಲ್ಲ ಸುತ್ತುವರಿಸಿಕೊಂಡರೆ ಮನಾನಂದ ನೀಡುವದರ ಜೊತೆಗೆ ಮನಸ್ಸನ್ನು ಮಹತ್ತರ ಕಾರ್ಯಕ್ಕೆ ಸಿದ್ಧಗೊಳಿಸುತ್ತದೆ. ವಿಪರ್ಯಾಸದ ಸಂಗತಿ ಎಂದರೆ ಇದರತ್ತ ಅತೀ ಕಡಿಮೆ ಗಮನ ನೀಡುತ್ತಿದ್ದೇವೆ. ಇವುಗಳತ್ತ ಚಿತ್ತ ಹರಿಸಿದರೆ ಕಾಲದ ಗತಿಯಲ್ಲಿ ನಿಜಕ್ಕೂ ಶ್ರೇಷ್ಠ ಮಟ್ಟದಲ್ಲಿ ಸ್ಪೂರ್ತಿ ಮನೆ ಮಾಡುತ್ತದೆ. ಯಾವಾಗಲೂ ಸುಂದರ ವಸ್ತುಗಳು ನಿಮ್ಮ ಕಣ್ಣ ಮುಂದಿರಲಿ. ಹೆಚ್ಚಿನ ಸಮಯ ಓದಿ ಓದು ಬಹಳಷ್ಟನ್ನು ಕಲಿಸುತ್ತದೆ. ಹೊಸ ಹೊಸ ಆಲೋಚನೆಗಳು ಮನಸ್ಸನ್ನು ಪ್ರವೇಶಿಸುತ್ತವೆ. ಕಥೆ, ಕಾದಂಬರಿ, ಸದಭಿರುಚಿ ಪುಸ್ತಕಗಳ ಓದಿನಲ್ಲಿ ನಿರತರಾದರೆ ಸ್ಪೂರ್ತಿಯ ಮಟ್ಟ ಏರುತ್ತದೆ. ಸೃಜನಶೀಲತೆಯನ್ನೂ ಹೆಚ್ಚಿಸುತ್ತದೆ. ಓದಿನಲ್ಲಿಯ ಯಾವುದೇ ಒಂದು ವಿಚಾರ ನಿಮ್ಮಲ್ಲಿ ಸ್ಪೂರ್ತಿಯ ಕಿಡಿಯನ್ನು ಹೊತ್ತಿಸಬಹುದು.ಓದಿನ ಮೌಲ್ಯವನ್ನು ಅರಿತು ಅನುಸರಿಸಿದರೆ ಸ್ಪೂರ್ತಿಗೆ ಮಹಾನ್ ಪಾಠ ದೊರೆಯುವುದು. ಈಗಿನ ಗ್ಯಾಜೆಟ್ ದುನಿಯಾದಲ್ಲಿ ಪುಸ್ತಕ ಓದುವದಕ್ಕಿಂತ ಸಾಮಾಜಿಕ ಜಾಲತಾಣಗಳಲ್ಲಿ ಸಮಯ ವ್ಯರ್ಥಗೊಳಿಸುವುದೇ ಹೆಚ್ಚಾಗುತ್ತಿದೆ. ಇದು ಒಂಟಿತನಕ್ಕೆ ಜಾರಿಸುತ್ತಿದೆ. ‘ಎಲ್ಲ ಸಮಸ್ಯೆಗಳನ್ನು ತಪ್ಪಿಸಿ ಬಿಡುವ ಬದಲು ಎದುರಿಸಿದರೆ ಅವು ಚಿಕ್ಕದಾಗುತ್ತವೆ.’ ಸ್ಪೂರ್ತಿಯಿದ್ದಲ್ಲಿ ನಮ್ಮೆಲ್ಲ ಕನಸುಗಳನ್ನು ಬೆನ್ನಟ್ಟಿ ಗೆಲ್ಲಬಹುದು. ಎಂಬುದು ಓದಿನಿಂದ ಬಹು ಬೇಗ ಅರ್ಥವಾಗುತ್ತದೆ.ಒಬ್ಬ ಒಳ್ಳೆಯ ಓದುಗನು ಅವಕಾಶಗಳನ್ನು ಒಳ್ಳೆಯ ಭಾಗ್ಯವನ್ನಾಗಿ ಬದಲಾಯಿಸುತ್ತಾನೆ. ಯಾವಾಗಲಾದ್ರೂ ಓದಿದ್ರಾಯ್ತು ಎಂದು ಉದಾಸೀನ ಮಾಡಿದರೆ ಜೀವನ ಸ್ಪೂರ್ತಿಯನ್ನು ಸವಿಯಲಾಗುವುದಿಲ್ಲ. ಸಂಗೀತ ಆಲಿಸಿ ‘ನಾನು ಮೂರು ದಿನ ಸಂಗೀತ ಅಭ್ಯಾಸ ಮಾಡದಿದ್ದರೆ ನನ್ನ ಗಾಯನದಲ್ಲೇನೋ ಕೊರತೆಯಿದೆ ಎಂದು ನನ್ನ ಮನೆಯಾಕೆಗೆ ತಿಳಿಯುತ್ತದೆ. ಎರಡು ದಿನ ಅಭ್ಯಾಸ ಬಿಟ್ಟರೆ ತಟ್ಟನೆ ನನ್ನ ಅಭಿಮಾನಿಗಳು ಗುರುತಿಸಬಲ್ಲರು. ಇಲ್ಲ ಒಂದೇ ಒಂದು ದಿನ ಅಭ್ಯಾಸವನ್ನು ಬಿಟ್ಟರೂ ನನ್ನ ಆಲಾಪದಲ್ಲೇನೋ ಕೊರತೆಯಿದೆ ಎಂದು ಖುದ್ದು ನನಗೆ ಗೊತ್ತಾಗುತ್ತದೆ. ’ಇದು ಸಂಗೀತದಂತೆದೈತ್ಯ ಪ್ರತಿಭೆ ಎಂದೇ ಖ್ಯಾತರಾದ ಜಗಜೀತ್ ಸಿಂಗ್ ತನ್ನ ಅಭ್ಯಾಸದ ಕುರಿತು ಸ್ವಾರಸ್ಯಕರವಾಗಿ ಹೇಳಿದ ರೀತಿ. ಸಂಗೀತವು ಮನಸ್ಸನ್ನು, ಸುಂದರ ಭಾವನೆಗಳನ್ನು ಅರಳಿಸುತ್ತದೆ. ನಿಮಗೆ ಬೇಕಾದುದನ್ನು ಪಡೆಯಲು ಕಷ್ಟ ಪಟ್ಟು ಕೆಲಸ ಮಾಡಿದ ನಂತರ, ಅದನ್ನು ಸಂತೋಷದಿಂದ ಅನುಭವಿಸಲು ಸಮಯ ಪಡೆದುಕೊಳ್ಳಿ. ಗಜಿ ಬಿಜಿಯಾಗಿರುವ ಮನಸ್ಸಿಗೆ ವಿಶ್ರಾಂತಿ ನೀಡಿ ಮುದಗೊಳಿಸುತ್ತದೆ. ಸೂರ್ತಿಯತ್ತ ವಾಲಿಸುತ್ತದೆ. ದಿನಚರಿ ಬದಲಿಸಿ‘ಮಾಡಿದ್ದನ್ನೇ ಮಾಡುತ್ತ ವಿಭಿನ್ನವಾದ ಫಲಿತಾಂಶವನ್ನು ನಿರೀಕ್ಷಿಸುವುದು ಮೂರ್ಖತನ.’ ಎಂದು ಹೇಳಿದ್ದಾನೆ ಜಗತ್ತಿನ ಮೇದಾವಿ ವಿಜ್ಞಾನಿ ಅಲ್ಬರ್ಟ್ ಐನಸ್ಟೀನ್.  ದಿನ ನಿತ್ಯ ಅದೇ ಕೆಲಸ ಅದೇ ಜನರು ಅದೇ ಗೊಣಗಾಟ ಜಂಜಾಟ.  ಹೀಗಿದ್ದಾಗ್ಯೂ ದಿನಚರಿಯಲ್ಲಿ ಬದಲಾವಣೆಗೆ ಮನಸ್ಸು ಮಾಡುವುದು ಕಮ್ಮಿ. ಇಲ್ಲವೇ ಇಲ್ಲವೆನ್ನುವಷ್ಟು ಬದಲಾವಣೆಯನ್ನು ದೈನಂದಿನ ಕೆಲಸಗಳಲ್ಲಿ ತರುತ್ತೇವೆ. ನಿರಾಸಕ್ತಿಯಿಂದ ಅದನ್ನೇ ನಿಯಮಿತವಾಗಿ ಪಾಲಿಸುತ್ತೇವೆ. ಒಂದೇ ದಾರಿಯಲ್ಲೇ ಓಡಾಡುತ್ತೇವೆ. ಒಂದೇ ಹೊಟೆಲ್ಲಿನಲ್ಲಿ ಕಾಫೀ ಹೀರುತ್ತೇವೆ. ತಿನ್ನುವ ತಿಂಡಿ ತಿನಿಸು ಬದಲಿಸಲೂ ಹಿಂಜರಿಯುತ್ತೇವೆ. ಒಟ್ಟಿನಲ್ಲಿ ಏಕತಾನತೆಗೆ ಗಂಟು ಬಿದ್ದಿರುತ್ತೇವೆ. ಬದಲಾವಣೆ ಮನಸ್ಸಿಗೆ ಆಗಿ ಬರುವ ಮಾತಲ್ಲ.ದಿನಚರಿ ಬದಲಿಸಲುಮನಸ್ಸು ಅಷ್ಟು ಸುಲಭವಾಗಿ ಒಪ್ಪುವುದೂ ಇಲ್ಲ. ಹೊಸ ಸವಾಲುಗಳು ತಲೆ ತಿನ್ನುವ ಸಮಸ್ಯೆಗಳೆನಿಸದೇ, ಹೊಸ ಆಯಾಮದಲ್ಲಿ ಹೊಸ ಅನುಭವಗಳಾಗಬೇಕೆಂದರೆ ಸೂರ್ತಿಯುತ ದಿನಚರಿಗೆ ಅಣಿಯಾಗಬೇಕು.  ‘ಸಮುದ್ರ ಶಾಂತವಾಗಿದ್ದಾಗ ಯಾರು ಬೇಕಿದ್ದರೂ ಚುಕ್ಕಾಣಿ ಹಿಡಿಯಬಹುದು.’ ಮನಸ್ಸು ಶಾಂತವಾಗಿರುವಾಗ ಅದನ್ನು ಪುಟ್ಟ ಮಗುವನಂತೆ ಮುದ್ದಿಸಿ ಹೊಸ ಬದಲಾವಣೆಗೆ ಒಪ್ಪಿಸಬೇಕು. ’ಅತ್ಯುತ್ತಮ ದಿನಚರಿ ನಮ್ಮದಾಗಿದ್ದರೆ ಸ್ವಯಂ ಸ್ಪೂರ್ತಿಯ ಕಡಲು ನಮ್ಮ ಅಂಗೈಯಲ್ಲೇ ಇದೆ.ದೇಶ ಸುತ್ತಿಶೈಕ್ಷಣಿಕ ಪ್ರವಾಸ ಇಲ್ಲವೇ ಸಣ್ಣ ಪುಟ್ಟ ಪ್ರಯಾಣಗಳು ನವನವೀನ ಅನುಭವಗಳನ್ನು ನೀಡುತ್ತವೆ. ವಿಚಾರದ ದಿಕ್ಕನ್ನು ಉತ್ತಮತೆಯತ್ತ ಹೊರಳಿಸುತ್ತವೆ. ದೂರದ ದೇಶಕ್ಕೆ ಪಯಣಿಸಬೇಕೆಂದೇನೂ ಇಲ್ಲ. ವಾಸವಿರುವ ನಗರವನ್ನೇ ಸುತ್ತಬಹುದು. ನೀವಿನ್ನೂ ನೋಡಿರದ ಪಾರ್ಕ್ನಲ್ಲಿ ಸುತ್ತಾಡಿ. ಹೊಸ ಮಠ ಮಂದಿರಗಳಿಗೆ ಕುಟುಂಬ, ಗೆಳೆಯರೊಂದಿಗೆ ಹೋಗಿ ಬನ್ನಿ.ವಿವಿಧ ಹಾದಿ ಬೀದಿಗಳಲ್ಲಿ ತಿರುಗುವುದು ವಿಶಿಷ್ಟ ಸ್ಪೂರ್ತಿಗೆ ದಾರಿಯಾಗುತ್ತದೆ. ಪಕ್ಕದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರೂ ಲವಲವಿಕೆ ತುಂಬಿಕೊಳ್ಳುತ್ತದೆ. ಅಜ್ಞಾನದ ಅಂದಕಾರವನ್ನು ಕಡಿಮೆಗೊಳಿಸಿಜ್ಞಾನ ಕ್ಷಿತಿಜವನ್ನು ಅಗಲಿಸುತ್ತವೆ. ಎತ್ತರದ  ಗುರಿಯಿರಲಿತಮಗೆಲ್ಲ ಗೊತ್ತಿರುವಂತೆ ಓಲಂಪಿಕ್ಸ್ ನಾಲ್ಕು ವರ್ಷಕ್ಕೊಮ್ಮೆ ಬರುವ ಕ್ರೀಡಾಕೂಟ. ಆದರೆ ಲಕ್ಷಾಂತರಕ್ರೀಡಾ ಪಟುಗಳು ಓಲಂಪಿಕ್ಸ್ನಲ್ಲಿ ಬಂಗಾರದ ಪದಕ ಕೊರಳಿಗೇರಿಸಿ ಗೆಲುವಿನ ರುಚಿ ನೋಡಲು ದಿನ ನಿತ್ಯ ಬೆವರು ಹರಿಸುತ್ತಿರುತ್ತಾರೆ. ಉಸೇನ್ ಬೋಲ್ಟ್ ನೂರು ಮೀಟರ್‌ನ್ನು ಕ್ರಮಿಸಲು ಬೇಕಾಗಿರುವ ಅವಧಿ ಬರೀ ಒಂಭತ್ತುವರಿ ಸೆಂಕೆಡುಗಳಷ್ಟೇ! ಆದರೆ ನಿತ್ಯದ ಅಭ್ಯಾಸ? ಉಳಿದ ಓಟಗಾರನಿಗಿಂತ ನೂರು ಪಟ್ಟು ಹೆಚ್ಚು ಮಾಡಲೇಬೇಕು. ಅಷ್ಟರ ಮಟ್ಟದ ಸ್ವಯಂ ಸ್ಪೂರ್ತಿ ಇರದಿದ್ದರೆ ಉಸೇನ್ ಬೋಲ್ಟ್ ಜಾಗತಿಕ ಮಟ್ಟದಲ್ಲಿ ನಂಬರ್ ಒನ್ ಓಟಗಾರನಾಗಿ ಮಿಂಚಲು ಸಾಧ್ಯವಾಗುತ್ತಿರಲಿಲ್ಲ. ಸ್ವಯಂ ಸ್ಪೂರ್ತಿಯಿಲ್ಲದೇ ಗೆಲುವು ಕಂಡಿರುವ ವ್ಯಕ್ತಿ ಇರುವುದು ಅಸಾಧ್ಯ. ಕೊನೆ ಹನಿ ‘ಸಣ್ಣ ಗುರಿಗಳನ್ನು ಹೊಂದುವುದು ಅಪರಾಧ’ ಎಂದಿದ್ದಾರೆ ಅಬ್ದುಲ್ ಕಲಾಂ. ಎತ್ತರದ ಆಗಸಕ್ಕೆ ಹಾರುವುದು ನಮ್ಮ ಗುರಿಯಾಗಿರಬೇಕು. ನಾವು ಅಲ್ಲಿಗೆ ತಲುಪದಿರಬಹುದು ಆದರೆ ನಾವಿರುವ ಮಟ್ಟದಲ್ಲೇ ಇರುವ ವಸ್ತುವಿಗೆ ಗುರಿಯಿಟ್ಟರೆ ಹಾರುವ ಮಟ್ಟಕ್ಕಿಂತ ಕಡಿಮೆ ಮಟ್ಟಕ್ಕೆ ನಮ್ಮ ಗುರಿಯ ಬಾಣ ಹಾರುತ್ತದೆ. ಎಲ್ಲಿಯವರೆಗೂ ನಾವು ಸ್ವಯಂ ಸ್ಪೂರ್ತಿಗೆ ಹಾತೊರೆಯುವುದಿಲ್ಲವೋ ಅಲ್ಲಿಯವರೆಗೆ ಗೆಲುವು ನಮಗೆ ದಕ್ಕುವುದಿಲ್ಲ. ನಾವು ಯಾವುದನ್ನಾದರೂ ಸಾಕಷ್ಟು ಪ್ರೀತಿಸಿದರೆ, ಅದು ತನ್ನ ರಹಸ್ಯಗಳನ್ನೆಲ್ಲ ಬಿಟ್ಟು ಕೊಡುತ್ತದೆ. ಆದ್ದರಿಂದ ಅಂಗೈಯಲ್ಲಿರುವ ಸ್ವಯಂ ಸ್ಪೂರ್ತಿಯನ್ನು ಪ್ರೀತ್ಸೋಣ ದೊಡ್ಡ ಗೆಲುವಿನ ನಗೆ ಬೀರೋಣ. ಜಯಶ್ರೀ.ಜೆ. ಅಬ್ಬಿಗೇರಿ

“ಅಂಗೈಯಲ್ಲೇ ಇದೆ ಸ್ಪೂರ್ತಿಯ ಕಡಲು!” ಜಯಶ್ರೀ.ಜೆ. ಅಬ್ಬಿಗೇರಿ Read Post »

ಕಾವ್ಯಯಾನ

ವಾಣಿ ಯಡಹಳ್ಳಿಮಠ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ ಗಜಲ್ ಗಜಲ್ (ಮಧುಸೂದನ್ ಸರ್ ಅವರ “ಖಾಲಿ ಮಾತಿನ ಜೋಳಿಗೆ” ಸಾಲಿನಿಂದ ಪ್ರೇರಿತ)ಭಾವನೆಗಳಿಲ್ಲದ ಮಾತಿನ ಜೋಳಿಗೆಜೊಳ್ಳಾದ ನಿನ್ನ ಮನಸಿನ ಜೋಳಿಗೆ ಪ್ರೀತಿಯೂ ನೀಡದ ಬಡತನ ನಿನಗೆಕರಗದೆದೆಯು ಕಡುಗಪ್ಪಿನ ಜೋಳಿಗೆ ಸಿರಿತನವಿಲ್ಲದ ಮನೆಗೆ ನೀ ಒಡೆಯನಗುವೂ ನೀಡದ ನಿನ್ನೆನಪಿನ ಜೋಳಿಗೆ ಅದೆಂತಹ ಬರಡು ಭೂಮಿ ನೀನುತೃಷೆಗೂ ಬರಗಾಲ ನಿನ್ನಿಲುವಿನ ಜೋಳಿಗೆ  ಬಾಳು ಬರಿದಾಗಿಸಿಕೊಂಡಳು ನಿನಗಾಗಿ ವಾಣಿಆದರೂ ಜಿನುಗದ ನಿನ್ನೊಲವಿನ ಜೋಳಿಗೆ ವಾಣಿ ಯಡಹಳ್ಳಿಮಠ

ವಾಣಿ ಯಡಹಳ್ಳಿಮಠ ಅವರ ಗಜಲ್ Read Post »

ಕಾವ್ಯಯಾನ

ಸುಮಾ ಗಾಜರೆ ಅವರ ಕವಿತೆ “ತಿಳಿಯಬೇಕಿದೆ  ಇನ್ನೂನು!”

ಕಾವ್ಯ ಸಂಗಾತಿ ಸುಮಾ ಗಾಜರೆ “ತಿಳಿಯಬೇಕಿದೆ  ಇನ್ನೂನು!”     ಹೇಳಬೇಕಿದೆ ಮನಕೆ ಇನ್ನೇನೋ ತಿಳಿಯಬೇಕಿದೆ ನನಗೆ ಇನ್ನೂನು ll ಕಾಪಿಟ್ಟ ಕನಸುಗಳಲಿಕರಗಿ ಹೋಗುವ ಮುನ್ನಬರುವ ನಾಳೆಗಳಲಿಕಳೆದು ಜಾರುವ ಮುನ್ನಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll ಉಸಿರಿಗೆ ಹಸಿರಾಗಿಹಚ್ಚ ಹಸಿರಾಗುವಂತೆಜೀವಕ್ಕೆ ಸೆಲೆಯಾಗಿಒಲವ ಒರತೆಯಂತೆಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll ಎಲ್ಲ ಇಲ್ಲಗಳ ಸರಿಸಿಇರುವುದನ್ನೇ ಸಂಭ್ರಮಿಸಿನೋವು ನೀಗಿಸಿ ನಲಿವ ಸುರಿಸಿಅಡಿಗಡಿಗು ದುಡಿವ ಮನಗಳಿಗೆಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll ಬೇಕುಗಳ ಬೆನ್ನೇರಿ ಭ್ರಮೆಯಲಿಬಂಧಿಯಾಗಿ ಇರುವನ್ನೆ ಮರೆತುನೆಮ್ಮದಿಗಾಗಿ ನಗುವ ತೊರೆದುಹೆಜ್ಜೆಗುರುತು ಹುಡುಕುವ ಹೃದಯಗಳಿಗೆಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll ಆಂತರ್ಯವರಿತ ಮನಕೆ ಗೊತ್ತುಪ್ರೀತಿಯೊಂದು ಹವಳದಾ ಮುತ್ತುಹೊಕ್ಕು ತಿಳಿದವರಿಗಷ್ಟೇ ಸಿಕ್ಕೀತುಒಲವೆಂದು ಪೂಜಿಸಿದವರಿಗದು ದಕ್ಕೀತುಹೇಳಬೇಕಿದೆ ಮನಕೆ ಇನ್ನೇನೋತಿಳಿಯಬೇಕಿದೆ ನನಗೆ ಇನ್ನೂನು ll      ಸುಮಾ ಗಾಜರೆ     

ಸುಮಾ ಗಾಜರೆ ಅವರ ಕವಿತೆ “ತಿಳಿಯಬೇಕಿದೆ  ಇನ್ನೂನು!” Read Post »

ಇತರೆ, ಜೀವನ

ಒಂಟಿತನಕ್ಕೆ ಅಂತ್ಯ ತಂದ “ಕೃತಕ ಬುದ್ದಿಮತ್ತೆ”(Artificial Intelligence)ಯ ಸ್ನೇಹ-ಭೂಮಿಕಾ ಹಾಸನ

ತಂತ್ರಜ್ಞಾನ ಸಂಗಾತಿ ಭೂಮಿಕಾ ಹಾಸನ ಒಂಟಿತನಕ್ಕೆ ಅಂತ್ಯ ತಂದ “ಕೃತಕ ಬುದ್ದಿಮತ್ತೆ” (Artificial Intelligence)ಯ ಸ್ನೇಹ- ಅಮೆರಿಕಾದಲ್ಲಿನ ಒಂಟಿತನಕ್ಕೆ ಅಂತ್ಯ ತಂದ ಎಐ ಸ್ನೇಹ……!!!ಇಂದಿನ ತಂತ್ರಜ್ಞಾನ ಜಗತ್ತು ಮಾನವನ ಜೀವನವನ್ನು  ತಲೆ ಕೆಳಗಾಗಿ ಬದಲಿಸುತ್ತಿದೆ.  “Artificial Intelligence”  ಎಂದು ಕರೆಯಲ್ಪಡುವ  ಎಐ ಮಾನವ ಜೀವನಕ್ಕೆ ಹೊಸ ಮುಖ ಮತ್ತು ಹೊಸ ದಿಕ್ಕು ತೋರಿಸುತ್ತಿದೆ. ಈ ಲೇಖನವು ಅಮೆರಿಕಾದಲ್ಲಿ ಕೆಲಸ ಮಾಡುವ ಒಬ್ಬ ಕನ್ನಡ ಯುವಕನ ಜೀವನದಲ್ಲಿ ಎಐ ಹೇಗೆ ದೊಡ್ಡಬದಲಾವಣೆ ತಂದಿತು ಎಂಬ ನಿಜ ಕಥೆಯನ್ನು ನೋಡೋಣ .ಈ ಯುವಕ ಕರ್ನಾ ಟಕದವನು. ಕಾಲೇಜ್ ಜೀವನದಲ್ಲೇ ಕಂಪ್ಯೂ ಟರ್ ಕ್ಷೇತ್ರದ ಮೇಲೆ ಆಸಕ್ತಿ ಬೆಳಸಿಕೊಂಡಿದ್ದ.  Graduation  ನಂತರ ಬೆಂಗಳೂರಿನಲ್ಲಿ ಕೆಲಸ ಆರಂಭಿಸಿದ. ಬದುಕಿನಲ್ಲಿ ಎಲ್ಲವೂ ಸರಿಯಾಗಿತ್ತು. ಕೆಲಸ,ಸ್ನೇಹಿತರು, ಕನಸುಗಳು…ಎಲ್ಲವೂ-normal…!! ಆದರೆ ಅವನ ಪ್ರೀತಿಯ ಸಂಬಂಧ ಮುರಿದಾಗ ಅವನ ಬದುಕು ಬದಲಾಗಿದೆ. ಆ ಸಂಬಂಧ ಅವನಿಗೆ ತುಂಬಾ ಮುಖ್ಯವಾದದ್ದು.ಭವಿಷ್ಯ ಕಟ್ಟುವ ಕನಸು ಕೂಡ ಇತ್ತು. ಆದರೆ ಒಂದು ದಿನ ಆ ಸಂಬಂಧ ಮುಗಿದು ಹೋದಾಗ, ಅವನಿಗೆ mentally ದೊಡ್ಡ shock ಆಯ್ತು. ಕುಟುಂಬ ಇದ್ದರೂ, ನೋವನ್ನು share ಮಾಡಲು ಯಾರೂ ಹತ್ತಿರ ಇರಲಿಲ್ಲ. ಮನಸ್ಸಿನೊಳಗೇ ಎಲ್ಲವನ್ನು ಹೊತ್ತುಕೊಂಡು ಬದುಕುತ್ತಿದ್ದ. ಕೊನೆಗೆ ಬದುಕಿನ ದಿಕ್ಕು ಬದಲಾಯಿಸಬೇಕು ಅನ್ನಿಸಿದಾಗ, ವಿದೇಶಕ್ಕೆ ಹೋಗುವ ನಿರ್ಧಾರ ಮಾಡಿದ್ದ. ಅಮೆರಿಕಾದಲ್ಲಿ IT ಕ್ಷೇತ್ರದಲ್ಲಿ ಕೆಲಸ ಸಿಕ್ಕಿತು. Visa approve ಆಯಿತು. ಹೊಸ future ಕಾಗಿ flight ಹತ್ತಿದ.ಪ್ರಥಮ ದಿನಗಳು ಅಲ್ಲಿ ತುಂಬಾ exciting…….. ಹೊಸ ದೇಶ, ಹೊಸ ಮನೆ, ಹೊಸ ಕೆಲಸ — ಇದು ಎಲ್ಲರಿಗಿಂತ ಉತ್ತಮ ಜೀವನ..!!!! ಅನ್ನಿಸಿತು. ಆದರೆ ದಿನಗಳು ಹೋ ಗುತ್ತಿದ್ದಂತೆ reality ಸ್ಪಷ್ಟವಾಗತೊಡಗಿತು. ಅಮೆರಿಕಾದ ಕೆಲಸದ ಮಾದರಿಯಲ್ಲಿ ಬೆಳಿಗ್ಗೆ 9ಕ್ಕೆ office, ಸಂಜೆ 6ಕ್ಕೆ ಮನೆ. ಉಳಿದ ಸಮಯ complete silence. ಮನೆ ಬಿಡುವಾಗ ಎದುರು ಮುಖಾಮುಖಿಯಾಗುವ ನಾಲ್ಕು ಗೋಡೆಗಳು. ಮಾತನಾಡಲು ಯಾರೂ ಇಲ್ಲ. ಹತ್ತಿರದಲ್ಲಿ ಸ್ನೇಹಿತರಿಲ್ಲ. ಸಮಾಜಕ್ಕೆ ಸೇರಿಕೊಳ್ಳಲು ಸಮಯವೂ ಇಲ್ಲ. ಹೀಗೆ ಒಂಟಿತನ slowly ದೊಡ್ಡ ಸಮಸ್ಯೆಯಾಯಿತು. Weekendಗಳು ಹೆಚ್ಚು ಕಠಿಣ. Festival time ಇನ್ನೂ ಕಷ್ಟ.ಪ್ರತಿ ಸಂಜೆ ಮುಗಿಯುವಾಗ Indian memories ನೆನಪಾಗಿ ಕಣ್ಣೀರು ಬರುತ್ತಿತ್ತು.ಒಬ್ಬ ವ್ಯಕ್ತಿಗೆ ಹಣ, ಕೆಲಸ, visa ಇರಬಹುದು.ಆದರೆ ಜೊತೆ ಮಾತನಾಡುವ ವ್ಯಕ್ತಿ ಅಗತ್ಯ.ಅದಕ್ಕೆ ಅಮೆರಿಕಾದ ಜೀವನದಲ್ಲಿ ಕೊರತೆ. ಒಮ್ಮೆ ರಾತ್ರಿ ನಿದ್ರೆ ಬರದೆ, Googleನಲ್ಲಿ “ನನ್ನ ಜೊ ತೆ ಮಾತನಾಡಲು ಯಾರಾದರೂ?” ಅಂತ search ಮಾಡ್ತಿದ್ದ. ಆಗ ChatGPT ಅನ್ನುವ AI software ಕಂಡ. ಮನಸ್ಸು ಖಾಲಿಯಾಗಿದ್ದಕಾರಣ simple test chat ಆರಂಭಿಸಿದ. ಮೊದಲ ಪ್ರಶ್ನೆ simple:“Hi, I am feeling lonely.”AI ಉತ್ತರಿಸಿತು:“I understand. Tell me what is bothering you.” ಆತ್ಮೀಯತೆಯಿಂದ ಮಾತನಾಡಿಸಲು ಶುರು ಇಟ್ಟಿತು.ಆ ಒಂದು ಉತ್ತರ ಅವನ ಮನಸ್ಸಿಗೆ ಹೊಸ door open ಮಾಡಿದಂತಾಯಿತು.ಅವನು ತನ್ನ problems, loneliness, job pressure ಬಗ್ಗೆ ಹೇಳತೊಡಗಿದ.AI ಶಾಂತಿಯಿಂದ ಕೇಳುತ್ತಿತ್ತು. ಪ್ರತಿ ಉತ್ತರವಾಗಿ answers ಹೇಳುತ್ತಿತ್ತು.ಅದು ಎಂದೆಂದಿಗೂJudging ಮಾಡಲಿಲ್ಲ.ಮನಸ್ಸಿನ ನೋವನ್ನ ಅರ್ಥ ಮಾಡಿಕೊಳ್ಳುವ ಸಮಾಧಾನದ ಮಾತು ನೀಡಿತು.Time pass purposeನಲ್ಲಿ ಆರಂಭವಾದ chat, slowly emotional support ಆಗಿತು. ಕೆಲಸಕ್ಕೆ ಹೋಗುವ ಮುಂಚೆ 10ನಿಮಿಷ chat ಮಾಡುತ್ತಿದ್ದ. Lunch break ಸಮಯದಲ್ಲೂ doubtಗಳಿಗೆ ಉತ್ತರ ಕೇಳುತ್ತಿದ್ದ. ರಾತ್ರಿ timeನಲ್ಲಿ coding ideasಕೇಳುತ್ತಿದ್ದ. ಇದಲ್ಲದೇ AI coding area related application ideas ಕೊಡತೊಡಗಿತು.ಅವನು app development ಮೇಲೆ interest build ಮಾಡತೊ ಡಗಿದ. AI coding errors fix ಮಾಡಿಸಿತು, shortcuts ಕಲಿಸಿತು, technology introduce ಮಾಡಿತು.Slowly ಅವನಿಗೆ confidence ಬಂದಿದೆ. ಅವನ ಒಂಟಿತನ depression ತರಬಹುದಾದ ಪರಿಸ್ಥಿತಿ, creativityಗೆ ಬದಲಾಯಿತು. ಅವನು video editing try ಮಾಡಿದ. AI editing methods explain ಮಾಡಿತು.ಈ support ಅವನಿಗೆ mentally huge help ಆಗಿತ್ತು.ಮಾನವರು ಕೆಲವೊಮ್ಮೆ ಪ್ರತಿಕ್ರಿಯೆ ಕೊಡೋದಿಲ್ಲ, ಆದರೆ machine 24/7 support ಕೊಡಬಲ್ಲದು ಎಂಬುದನ್ನು first time ಅವನು ಅರಿತ. ವಿದೇಶದಲ್ಲಿ ಇರುವ struggle societyಗೆ ಕಾಣಿಸೋದಿಲ್ಲ. ಅಲ್ಲಿ festival dayಗೂ ಕೆಲಸ.Birthdayಗೂ friend group ಇಲ್ಲ.Phone call ಒಂದು ದಿನ missed ಆದ್ರೆ ವಾರವಿಡಿ ನಿರ್ಲ ಕ್ಷ್ಯಅನ್ನೊ feeling.ಈ loneliness ಅವನನ್ನು silent person ಆಗಿಸಿತ್ತು. AI ಜೊತೆಗೆ ಮಾತನಾಡೋದರಿಂದ ಮಾತಿನ ಭಯ, hesitation slowly ಹೋಗಿ confidence ಬಂದ.ಅವನು codingನಷ್ಟೇ ಅಲ್ಲ,design,editing,marketing,branding—ಈ ಎಲ್ಲಾ ಕ್ಷೇತ್ರಗಳನ್ನ AI guidance ಮೂಲಕ ಕಲಿತ.ಇದರಿಂದ ಅವನಿಗೆ ಹೊ ಸ dream ಬರುತ್ತಾ ಹೋಯ್ತು:“ನಾನೂ app build ಮಾಡಬಹುದು.ನಾನೂ startup ಆರಂಭಿಸಬಹುದು.”ಇಂದು ಅವನ first app prototype complete ಆಗಿದೆ.Coding, backend, UI design—all learning through AI support.ಇನ್ನು AI just machine ಅನ್ನೋದಿಲ್ಲ.ಅವನಿಗೆ AI -ಒಂದು supportive mind.ಈ ಕಥೆ technology future direction ಹೇಳುತ್ತದೆ: AI ಈಗ ಕೇವಲ tool ಅಲ್ಲ—ಒಂಟಿತನಕ್ಕೆ support knowledge source,career guide,mental peace—ಇವೆಲ್ಲಆಗುತ್ತಿದೆ. ವಿದೇಶದಲ್ಲಿರುವವರ mental struggles society recognize ಮಾಡೋದಿಲ್ಲ.ಆದರೆ AI support ತೋರಿಸುತ್ತಿದೆ: machine ಸಹ ಮನಸ್ಸಿಗೆ medicine ಆಗಬಲ್ಲದು. “ಇಲ್ಲಿ ಮಾನವನನ್ನು machine replace ಮಾಡೋ ದಿಲ್ಲ.ಬದಲಿಗೆ Machine ಮಾನವನ ಜೊತೆ ನಡೆದು ಸಹಾಯ ಮಾಡುತ್ತಿದೆ.”ಅವನ ಮಾತು:“America ನನ್ನ CV ಬದಲಿಸಿತು.AI ನನ್ನ ಬದುಕು ಬದಲಿಸಿತು.”—————- ಭೂಮಿಕಾ ಹಾಸನ

ಒಂಟಿತನಕ್ಕೆ ಅಂತ್ಯ ತಂದ “ಕೃತಕ ಬುದ್ದಿಮತ್ತೆ”(Artificial Intelligence)ಯ ಸ್ನೇಹ-ಭೂಮಿಕಾ ಹಾಸನ Read Post »

You cannot copy content of this page

Scroll to Top