ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬದುಕು ಬೆಳೆದಂತೆಲ್ಲಾ
ಬೆಳೆಯಲಿಲ್ಲ ಬವಣೆ
ಬವಣೆಗೂ ಬೇಡವೇ ಬೆಣೆ!

ಬವಣೆಗೂ ಉಂಟು
ಬೇಲಿಗಳ ನಂಟು
ಭೋರ್ಗರೆವ ಜಲಪಾತಗಳ
ಧುಮ್ಮುಕ್ಕುವಾಟದ ನಂಟು.

ಸುತ್ತಿ ಕೊರಕಲುಗಳ ಮುಟ್ಟಿ
ಸನ್ಮಿತ್ರರ ಘಮ ಘಮದ ಅಂಟು
ಮತ್ತು
ಅಯೋಗ್ಯರ ಅಪಾತ್ರರ
ಅಮಲುಗಳ ದುರ್ಗಂಧಗಳ
ಅನ್ಯಾಯಗಳ ಅಧ್ಯಾಯಗಳ
ಕೊಳೆತ ನಾತಗಳ ನಂಟು

ಇದೀಗ
ಬವಣೆಗಳ ಶಿಖರ ಅಂತಿಮವಾಗಿ
ಕಾಯುವಿಕೆ ಪ್ರಖರವಾಗಿ
ಹರಿವ ನದಿ ವಿಶಾಲ ಸಾಗರ ಸೇರುವ ಅಂತಿಮ ಮುಕ್ತಿ.

ಒಡಲಲ್ಲಿ ಅಡಗಿಸಿ
ಹೊಳೆ ಮೀನು ಮೊಸಳೆ ಏಡಿ
ಮೇಲೆ
ಬಂದು ಸೇರಿದ ಕಡಲ ಹಕ್ಕಿಗಳೇ
ಒಡನಾಡಿ
ನೀವಿನ್ನು ಹೊರಡಿ ನನ್ನ ನಡೆ
ವಿಶಾಲ ಸಾಗರ ದೆಡೆ

ನಾನೀಗ ಸಾಗರ
ಬರುವೆನು ಆಗಾಗ
ದಡಕ್ಕಪ್ಪಳಿಸುವ ತೆರೆ!

ಅವಿರತ
ಅಘೋಷಿತ
ಅನಿಯಮಿತ


About The Author

8 thoughts on “ಡಾ ಡೋ ನಾ ವೆಂಕಟೇಶ ಅವರ ಕವಿತೆ-ʼಸಾಗರ ಸೇರಿದ ಹರಿವುʼ”

Leave a Reply

You cannot copy content of this page

Scroll to Top