ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಣ್ಣಿನ ಆಳದಿ
ಬೇರಿನ ಚಿಗುರು
ಚೆಂದದಿ ಹುಟ್ಟಿ
ತಾ ಸುಮ್ಮನೆ ನಗುತ್ತಿತ್ತು…..

ಒಲವಿನ ಉಸಿರಿಗೆ
ಜೀವವ ಹಿಡಿದು
ಮರಕೆ ಹಬ್ಬಿ
ಬೆಳೆಯುತಾ ಸಾಗಿತ್ತು…..

ದೂರಕೆ ಹಬ್ಬುತಾ
ಹಸಿರನು ಚೆಲ್ಲುತಾ
ಹೂಗಳ ಅರಳಿಸಿ
ನಗುತಾ ನಿಂತಿತ್ತು……

ಗೆಲುವಿನ ಉಯಿಲಿಗೆ
ಪರಿಮಳ ಹರಡಿ
ಗಾಳಿಯ ಬಯಲಲಿ
ಮನವನು ತುಂಬಿತ್ತು……

ಬೆಳಕಿನ ಬಣ್ಣಕ್ಕೆ
ಭರವಸೆಯಾಗಿ
ಬುವಿಯ ಮಣ್ಣಲಿ
ಎಲ್ಲೆಡೆ ಹರಡಿತ್ತು……

ಮರದ ನೆರಳಿಗೆ
ಚಿಗುರನು ಹರಡಿ
ಬಿಸಿಲಿನ ಬೇಗೆಗೆ
ನೆರಳೇ ಆಗಿತ್ತು…….

ಮಣ್ಣಿನ ನಗುವಿಗೆ
ಹೂವನು ಹಾಸಿ
ಒಲವಿನ ಮಾತಿಗೆ
ಪಲ್ಲವಿ ಹಾಡಿತ್ತು…..

ಬದುಕದು ಬಳ್ಳಿ
ಚಿಗುರುತಾ ಬೆಳೆದು
ಬದುಕಿನ ಒಳಗೆ
ಒಳಿತನ್ನು ಹೇಳಿತ್ತು……


About The Author

2 thoughts on “ನಾಗರಾಜ ಬಿ.ನಾಯ್ಕ ಅವರ ಕವಿತೆ-ಬಳ್ಳಿಯ ಹೂಗಳು…….”

  1. ಮತ್ತೊಮ್ಮೆ ಕವಿ ಪ್ರಕೃತಿಯಲ್ಲಿ ಲೀನ. ಪ್ರಕೃತಿಯೊಂದಿಗೆ ಬದುಕಿನ ಮಿಲನ. ಸಾಗರವ ಸೇರಲು ಹೊರಟ ನದಿ ಸಾಗರವೇ ಆಗುವ ಪರಿ ಅದ್ಭುತ.

Leave a Reply

You cannot copy content of this page

Scroll to Top