ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮುಂಗಾರಿನ ಮಳೆಯು
ಬರೀ ಆರ್ಭಟವಂತೆ,
ಕಾದ ಹಂಚಿನ ಮೇಲೆ
ನೀರು ಸಿಡಿಸಿದಂತೆ.

ತ್ವೈದ ಬಿಸಿ ಮಣ್ಣಿನ
ಹಿತವಾದ ವಾಸನೆ,
ತಂಗಾಳಿ ಹೇಳುತಿದೆ
“ಎಲ್ಲೋ ಮಳೆಯಾಗಿದೆ”.

ಹಾತೊರೆದ ನೆಲಕೆ
ತೊರೆ ಬಿಚ್ಚಿದ ಮೋಡ,
ಪನ್ನೀರ ಸಿಂಪರಣೆ
ಘಮಿಸುವ ಧರಣಿ.

ಬಿಸಿಯಾಗಿದೆ ಇಳೆ
ಬಯಸುತಿದೆ ಮಳೆ,
ಸುರಿದ ಮಳೆ ಹನಿ
ಅರಳಿದ ಅವನಿ.

ಅವನಿಯ ತೃಷೆಯ
ತಣಿಸಿ ಮಳೆರಾಯ,
ಬೀಜದ ಬಿತ್ತನೆಗೆ
ಕೇಳಿದ ಒಪ್ಪಿಗೆಯ.

ಬಾಯಾರಿದ ಧರೆಯ
ದಾಹವ ತಣಿಸಲು.
ಅರಳಿತು ಧರಣಿ
ಬೀಜ ಸ್ವೀಕರಿಸಲು.


About The Author

Leave a Reply

You cannot copy content of this page

Scroll to Top