ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಾಮನನ ಕಾಲಡಿಯಲ್ಲಿ
ಎಲ್ಲವನೂ ಕಳೆದ ಬಲಿಯ ಕಥೆ
ಯುಗಗಳೇ ಕಳೆದು ಹೋದರೂ
ನಿಂತಿಲ್ಲ ಯಾರದೋ ತುಳಿತಕ್ಕೆ
ಹಿಡಿತಕ್ಕೆ ಉರುಳಿ ಪಾತಾಳಕ್ಕೆ
ಇಳಿಯುತ್ತಲೇ ಇರುತ್ತಾರೆ

ಯುದ್ಧದಲಿ ಸೈನಿಕರ ಕೊಚ್ಚಿ ಬಲಿ
ನೀಡಿ ಸಾಮ್ರಾಟರಾದವರ
ನೆನಪಿಗಾಗಿ ಮಹಲು ಕಟ್ಟಿ
ಕೆಲಸಗಾರರ ಬೆರಳು ಕತ್ತರಿಸಿದವರ
ಪುಸ್ತಕ ಓದಿ ಪರೀಕ್ಷೆಯಲ್ಲಿ
ಉತ್ತೀರ್ಣರಾಗುತ್ತೇವೆ.

ಸಾವಿರ ಕೈ ಗಳು ದುಡಿಯುತ್ತ
ಬೆವರು ಆವಿಯಾಗುವದು
ಕಣ್ಣಿಗೆ ಕಾಣದೆ ಮೋಡವಾಗಿ
ಕಣ್ಣೀರು ಹರಿಯುತ್ತಲೆ ಇರುತ್ತದೆ
ಮಾಲಿಕರ ಬಚ್ಚಿಟ್ಟ ಸಂಪತ್ತು
ಬಹಿರಂಗವಾದ ಸುದ್ದಿಯ ನಾಟಕ
ನಡೆಯುತ್ತಲೇ ಇರುತ್ತದೆ

ಹಸಿರು ಹುಲ್ಲ ಉಣ್ಣಿಸಿ ಬೆಳೆಸಿದ
ಕುರಿಗಳು ಬಲಿಯಾಗಿ ದೇವರ
ಪ್ರೀತಿಯನ್ನು ಎತ್ತಿ ಹಿಡಿ ಯುತ್ತಾರೆ
ದ್ವೇಷ ಈರ್ಶೆ ಮೋಸ ಸಂಚು
ಹೊಂಚಿಗೆ ಹಾಕಿದ ಬಲಿಗಳು
ಮೂರು ರಸ್ತೆಗಳು ಕೂಡುವಲ್ಲಿ
ಚೆಲ್ಲಾ ಪಿಲ್ಲಿಯಾಗಿರುತ್ತವೆ.

About The Author

3 thoughts on “ಎಸ್ ವಿ ಹೆಗಡೆ ಅವರ ಕವಿತೆ-ಬಲಿ”

  1. ಮನುಷ್ಯ ಮಾತ್ರ ಬಲಿ ಕೊಡುತ್ತಾನೆ. ಬೇರಾವ ಪ್ರಾಣಿಗಳಲ್ಲಿ ಈ ನೀಚತನ ಇಲ್ಲ.
    ಒಳ್ಳೆ ಪದ್ಯ.

Leave a Reply

You cannot copy content of this page

Scroll to Top