ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬದುಕಿನ ಹಲವು ದಿನ ಉನ್ಮಾದದಿ ಕಳೆದದ್ದುಂಟು
ಹಲವುದಿನ ಹಸಿವಿನಿಂದ ಬಳಲಿ ಸೊರಗಿದ್ದುಂಟು

ಹಲವು ಬಂಧು ಮಿತ್ರರ ಸಾವನ್ನು ಪ್ರತ್ಯಕ್ಷ ಕಂಡೆ
ಪಾಪಿ ಚಿರಾಯು ಎಂಬ ಗಾದೆ ನಿಜ ಅನಿಸಿದ್ದುಂಟು

ಕೆಲ ಸಹೃದಯ ಪರಿಚಿತರ ಭೀಕರ ಅಂತ್ಯ ಕಂಡೆ
ಧಾತನಲಿ ಇದ್ದ ಚೂರು ಭರವಸೆ ತೊರೆದದ್ದುಂಟು

ಅನುಭವದಿ ಜಾತ್ರೆ ದೊಂಬಿಯಲಿ ಜೀವಿಸುವುದ ಕಲಿತೆ
ಪ್ರಾಮಾಣಿಕರ ಕಷ್ಟವ ಕಂಡು ಹತಾಶನೂ ಆದದ್ದುಂಟು

ಕೃಷ್ಣಾ! ಹೆರಿಗೆ ನೋವೆಂದು ಕೂಸು ಬೇಡವೆನ್ನಲಾದೀತೆ
ನನಗೆ ಸಾಧ್ಯದ ಹೊಸ ಹಾದಿ ಹಿಡಿದು ಕೊನೆ ಸೇರಿದ್ದುಂಟು

—————————————————————————————————-

About The Author

Leave a Reply

You cannot copy content of this page

Scroll to Top