ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಗಸಿಕಟ್ಟೆಯ ಟೊಂಗೆಗಳು ಎತ್ತತ್ತಲೋ ಚಾಚುತ್ತಿವೆ ನೀ ಬರಬೇಕು ಬುದ್ಧ
ಸುಣ್ಣದ ಗೋಡೆಗಳು ಬಣ್ಣ ಮೆತ್ತಿಕೊಳ್ಳುತ್ತಿವೆ ನೀ ಬರಬೇಕು ಬುದ್ಧ

ಹನುಮನ ಕಟ್ಟೆಗೂ ಪೀರಲ ಮಿಟ್ಟಿಗೂ ನಡುವೆ ಕಟ್ಟೆ ಬೆಳೆಯುತ್ತಿದೆ
ಮುತ್ತಜ್ಜನ ಮಾತುಗಳು ಸವಕಲಾಗುತ್ತಿವೆ ನೀ ಬರಬೇಕು ಬುದ್ಧ

ದನದಕ್ಕೆಯೊಳ ಕೀರಲು ಚೀತ್ಕಾರವಿಲ್ಲಿ ಕಿವಿಗಳಿಗೆ ಬೀಳುತ್ತಿಲ್ಲ
ಅಹಮ್ಮಿನ ಮಹಲುಗಳು ದಿನವಿಲ್ಲಿ ಬೆಳೆಯುತ್ತಿವೆ ನೀ ಬರಬೇಕು ಬುದ್ಧ

ಒಲೆಗಂಡಿಯ ಕಿಡಿಗಳಿಗೂ ನೆರೆಮನೆಯ ಇಣುಕಿಡುವ ಚಾಳಿ
ಹಗೆತನದ ಮಾತುಗಳು ಕೇರಿಯೋಳು ಕೇಳುತ್ತಿವೆ ನೀ ಬರಬೇಕು ಬುದ್ಧ

ಅರೆದ ಮದ್ದನು ಮುದ್ದೆ ಮಾಡಿ ತಿಂದಿರುವ ಅರಿಯದ ಮನಸುಗಳಿಲ್ಲಿ
ನನ್ನಟ್ಟಿಯ ನಟ್ಟನಡುವೆ ‘ಬೆಳಕ’ ಸುರಿದಿಟ್ಟು ನಿನ್ನತ್ತ ನೋಡುತ್ತಿವೆ ನೀ ಬರಬೇಕು ಬುದ್ಧ


About The Author

3 thoughts on “ಬೆಳಕು-ಪ್ರಿಯ ಅವರ ಗಜಲ್”

  1. Shobha Mallikarjun

    ಹನುಮನ ಕಟ್ಟೆಗೂ ಪೀರಲ ಮಿಟ್ಟಿಗು ಬೆಳೆದ ಕಟ್ಟೆಯಲ್ಲಿ ಜಾತೀಯತೆಯನ್ನು ಕಿತ್ತೊಗೆಯುವ
    ಜಾತ್ಯಾತೀತ ಮನದ ಹಂಬಲ ಒಂದು ಎದ್ದು ಕಾಣುತ್ತಿದೆ. ಅಹಮ್ಮಿನ ಮಹಲುಗಳಲ್ಲಿ ಹಮ್ಮು ಬಿಮ್ಮುಗಳನ್ನು ಬುಡ ಸಮೇತ ಕಿತ್ತೊಗೆಯುವ ಹಂಬಲ ಗೋಚರಿಸುತ್ತಿದೆ. ಬುದ್ಧ ಬಸವ ತಿರುಗಿ ಬರುವರೋ ಇಲ್ಲವೋ ಎಲ್ಲವನ್ನು ಸರಿದೂಗಿಸುವ ಮನಸ್ಸು ಬೆಳಕಿನಲ್ಲಿ ಚೆಲ್ಲಿದೆ.

Leave a Reply

You cannot copy content of this page

Scroll to Top