ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹಸಿರು ತುಂಬಿರಲು ಇಳೆ
ಸುರಿವುದು ಧಾರಕರದಿ ಮಳೆ
ತುಂಬಿ ಹರಿವುದು ಹೊಳೆ
ತೊಳೆಯುವುದು ಜಗದ ಕೊಳೆ

ಉತ್ತಿ ಬಿತ್ತುವನು ರೈತ
ಹೊಲದ ತುಂಬ ಹಸಿರು
ನಾಡಿಗೆ ಹೊಸ ಉಸಿರು
ಬೆಳೆ ಚೆನ್ನಾಗಿ ಬೆಳೆದು ಬರುವುದು
ಒಳ್ಳೆಯ ಫಸಲು

ರೈತನ ಮುಖದಿ ಮೂಡುವುದು
ಮಂದಹಾಸ
ಸಮೃದ್ಧ ಬೆಳೆ ನೀಗುವುದು
ಜಗದ ಹಸಿವು

ನಕ್ಕು ನಲಿಯುವುದು ಜಗವು
ಉದ್ಯೋಗ ಸಿಗುವುದು ಹಲವು
ಜನರ ಕಷ್ಟವು ನೀಗುವುದು
ಸಮೃದ್ಧ ಜೀವನ ನಮ್ಮದಾಗುವುದು

ಹಸಿರ ಪರಿಸರವ ಉಳಿಸೋಣ
ಗಿಡ ಮರಗಳ ಸುತ್ತಲೂ ಬೆಳೆಸೋಣ
ನಮ್ಮ ಭವಿಷ್ಯವನ್ನು ಚಂದವಾಗಿ ರೂಪಿಸೋಣ

ನೆಮ್ಮದಿಯ ನಾಳೆಗಳ ನಮ್ಮದಾಗಿಸಿ ನಿರ್ಮಿಸೋಣ
ಹಸಿರು ಉಳಿಸುವ ಮೂಲಕ ನಮ್ಮನ್ನ
ನಾವು ರಕ್ಷಿಸಿಕೊಳ್ಳೋಣ


About The Author

Leave a Reply

You cannot copy content of this page

Scroll to Top