ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮುಗಿಲಿನೆಲ್ಲೆಡೆಯಲ್ಲೂ ಮೋಡಗಳು ತುಂಬಿರಲು
ಸೂರ್ಯನ ರಣಬೆಂಕಿ ಮಾಸುತಿಹುದು
ತಣ್ಣನೆಯ ತಂಗಾಳಿ ಸುಂಯ್ ಎಂದು ಸೋಕಲು
ಜೀವರಾಶಿಯ ಒಡಲು ತಂಪಾಗುತಿಹುದು
ಓಡುತಿಹ ಮೇಘಗಳು ಮಿಕ್ಕಿ ಮಳೆಯಾಗಲು
ಜಲಧಾರೆ ಭುವಿಯೊಳಗೆ ಜಾರುತಿಹುದು
ಸ್ವಚ್ಛಂದ ಹಕ್ಕಿಗಳ ಪಿಲಿಪಿಲಿಯು ಕೇಳಿಸಲು
ತೊರೆಗಳು ಉಕ್ಕುಕ್ಕಿ ಹರಿಯುತಿಹುದು
ಎಲ್ಲೆಲ್ಲೂ ಹಸಿರಬನ ಮೈ ಚಾಚಿ ಹಬ್ಬಿರಲು
ಎಳೆಯೊಡಲು ಬಸಿರಾಗಿ ನಾಚುತಿಹುದು
ಏನಿದು ಸಂಭ್ರಮವು ಸೃಷ್ಟಿಯ ಐಸಿರಿಯು
ನಿಸರ್ಗವೋ ನಾಕದ ಅವತರಣವ

****

ಮಂಗನ ಕೈಯಲ್ಲಿ ಮಾಣಿಕ್ಯ ಬಂದರೆ.. ಎಂಬ ನುಡಿಗೆ ಇದೊಂದು ಒತ್ತು
ಈಗ ಮಂಗಗಳ ಕೈಯಲ್ಲಿ ಮೊಬೈಲ್ ಬಂತು
ಮೊಬೈಲ್ ಮನುಷ್ಯನ ಮಂಗ ಮಾಡಿಯಾಯ್ತು
ಅನ್ನ ನೀರು ನಿದ್ದೆ ಬಿಟ್ಟು ಮೊಬೈಲ್ ನೊಳಗೆ ಮನುಷ್ಯ ಮಂಕಾಗಿ ಬಿಟ್ಟ
ಶಾಲೆ ಪುಸ್ತಕ ಗುರು ಹಿರಿಯರನ್ನು ತ್ಯಜಿಸಿ ಮಗ ಮೊಬೈಲ್ ದಾಸನಾದ
ಹಗಲು ರಾತ್ರಿ ಮಳೆ ಚಳಿ ಬಿಸಿಲು ಗಾಳಿ ಎನ್ನದೆ ಮೊಬೈಲ್ ಸಂಗ ಮಾಡಿದ
ಗೆಳೆತನ ಸಂಬಂಧ ಅಭಿರುಚಿ ಮಾನ ಮೌಲ್ಯ ಮನುಷ್ಯತ್ವ ಎಲ್ಲವನ್ನು ಮರೆತ
ವ್ಯಕ್ತಿತ್ವ ತೊರೆದು ನರ ವಾನರನಾದ
ಅದೇ ಮೊಬೈಲ್ ಗೆ ಕಿಸಿಯುತ್ತಾ ಸೆಲ್ಫಿ ಕ್ಲಿಕ್ಕಿಸಿದ


About The Author

1 thought on “ಶಾಲಿನಿ ಕೆಮ್ಮಣ್ಣುಅವರ ಎರಡು ಕವಿತೆಗಳು”

  1. Shobha Mallikarjun

    ಇಂತಹ ಎಲೆ ಮರೆಯ ರಾಷ್ಟ ನಾಯಕರ ಪರಿಚಯವನ್ನು ನಮ್ಮ ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಸರ್ ಉತ್ತಮ ಲೇಖನ ಅಭಿನಂದನೆಗಳು.

Leave a Reply

You cannot copy content of this page

Scroll to Top