ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನೆ ಅಂಗಳದಲಿ
ಆಡುತಿವೆ ನಾಯಿ
ಬೆಕ್ಕು ಗಿಳಿ ಮರಿಗಳು
ದ್ವೇಷ ಮರೆತು
ಸ್ನೇಹದಿ ಬೆರೆತು ಮೈಮರೆತಿರುವದು
ಕಂಡು ಮನವು
ತುಂಬಿ ಬಂದಿದೆ
    ಒಂದೇ ಕರುಳ
     ಬಳ್ಳಿಗಳು ಬೆಳೆಯುತ
     ದಾಯಾದಿಗಳಾಗಿ
     ಕಚ್ಚಾಡುವ ಕಾಲದಲಿ
     ಖಗ -ಮೃಗ ಬಾಂಧವ್ಯಕೆ
     ಸೋತು ಮನವು
      ತುಂಬಿ ಬಂದಿದೆ
ಗಿಡಮರ ಬಳ್ಳಿ
ಗರಿಕೆಹುಲ್ಲು ಬಿಸಿಲು
ಬಿರುಗಾಳಿ ಮಳೆ ಅಬ್ಬರ
ಎದುರಿಸಿ ಅಸ್ತಿತ್ವ
ಉಳಿಸಿಕೊಳುತ
ಹೂವು ಕಾಯಿ ಹಣ್ಣು
ನೀಡಿ ಅರಸಿ ಬಂದವರಿಗೆ
ಆಶ್ರಯ ನೀಡುತಲಿ
ಜಗದ ಉಸಿರಾದ
ಪರೋಪಕಾರಿ ಬದುಕು
ಕಂಡು ಮನವು
ತುಂಬಿ ಬಂದಿದೆ
       ಮನುಜರಾಗಿ ಮೌಲ್ಯ
       ಮರೆತು ಅಧಿಕಾರ
       ಅಂತಸ್ತು ತನಗೇ ಎನುತ
       ಅಟ್ಟಹಾಸದಿ ನಿಸರ್ಗ
       ನಿರ್ನಾಮ ಮಾಡುತ
       ತನ್ನದೇ ಗೋರಿ ತಾನೇ
       ತೋಡುತಿರುವ
      ದುರದೃಷ್ಟದ ಬದುಕು  
       ಕಂಡು ಭಯದಲಿ ಮನವು
       ತುಂಬಿ ಬಂದಿದೆ

—————————————–[

About The Author

1 thought on “ಡಾ ಗೀತಾ ಡಿಗ್ಗೆ ಅವರ ಕವಿತೆ-ತುಂಬಿ ಬಂದಿದೆ”

Leave a Reply

You cannot copy content of this page

Scroll to Top