ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಪತ್ತಿನಸಿರಿ ಧರಣಿಯೋಡಲನ್ನ
ಕಾಂಕ್ರೀಟ್ ಕಾವಲಿಯಾನ್ನಾಗಿಸಿ
ದಳ್ಳುರಿಯಿಟ್ಟು ಕಾಯಿಸಿಬಿಟ್ಟಿದ್ದೇವೆ
ಕೆಂಡದ ಬಿಸಿ ಹೆಚ್ಚಿ ಕರಗುತ್ತಿದ್ದೇವೆ

ಧಗ ಧಗಿಸುವ ನಿಗಿಗೆಂಡದಲ್ಲಿ ನಿಂತ
ಕೊನರು ತರುಲತೆಗಳ ಹಸಿರನ್ನೆಲ್ಲಾ
ಒಡನಾಡಿಯಾದ ಖಗ ಮೃಗಗಳನ್ನೆಲ್ಲಾ
ಕಮರಿಸಿ ಕರಕಲಾಗಿಸಿಬಿಟ್ಟಿದ್ದೇವೆ

ಸರ್ವಸ್ವವನ್ನೂ ಉರಿಸಿ ಉರಿಸಿ
ಇಂಧನ ಖಾಲಿಯಾಗಿಸಿದ್ದೇವೆ ಈಗ
ಉರುವಲಾಗಿ ಉಳಿದಿರುವುದೊಂದೆ
ಕೊರಗುವ ನಮ್ಮ ಜೀವಗಳು ಮಾತ್ರ

ಇಂದಾದರೂ ನಮ್ಮ ತಪ್ಪನ್ನು ನಾವು
ಅರಿತರೆ ತುಸು ನಿರಾಳವಾದೀತೇನೊ
ಸಾವಿನೊಂದಿಗೆ ಸೆಣೆಸಾಡಿ ಸೋಲುವ
ಬಡ ಜೀವಗಳು ಬದುಕಬಹುದೇನೊ

ಬಂಧು ಬಾಂಧವರೆಲ್ಲಾ ಒಟ್ಟಾಗಿ ಬನ್ನಿ
ಇಂದೆ ಹಸಿರಿನ ಹರಕೆಯ ಕಟ್ಟೋಣ
ಉದ್ವೇಗದ ಉಸಿರನ್ನು ತಣಿಸುವಂತ
ಸಸ್ಯ ಸಂಕುಲವನ್ನು ಮತ್ತೆ ಸೃಜಿಸೋಣ

ಗಾಳಿ ನೀರನ್ನು ಕೊಂಡು ಬದುಕುವ
ಈ ಬದುಕಿಗೆ ವಿದಾಯ ಹೇಳೋಣ
ತರಾವರಿ ಖಾಯಿಲೆಯಿಂದ ಮುಕ್ತಾರಾಗೋಣ
ಹಸಿರಿನ ಆರೋಗ್ಯದಲ್ಲಿ ಬೆರೆಯೋಣ


About The Author

Leave a Reply

You cannot copy content of this page

Scroll to Top