ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಾವು ಬೇವಿನ ತೋರಣವಿರಲಿ ಬಾಳ ಹಾದಿಗೆ
ರಣ ರಣ ಬಿಸಿಲು ನೆರಳಿರಲಿ ದುಡಿಯುವಾ ಜೀವಿಗೆ

ಪ್ರಕೃತಿ ಪುರುಷರ ಮಿಲನಕೆ ಸುಮ ಬೀರಿದೆ ಪರಿಮಳ
ಪಿಕದ ಇಂಪಾದ ಗಾನವಿರಲಿ ನೊಂದ ಮನಸಿಗೆ

ಜಗದ ವನವು ಚಿಗುರಿ ಬಳಕುತ ಮಿಡಿ ಉಡಿ ತುಂಬಿದೆ
ಬನದಲಿ ಕುಸುಮ ಕಂಪಿರಲಿ ಬೇಸರದ. ಉಸಿರಿಗೆ

ಚೈತ್ರವು ಬರಿದಾದ ಗಿಡ ಮರಕೆ ಉಡಿಸಿದೆ ಹಸಿರು
ವಸಂತನ ಆಗಮನ ಇರಲಿ ಅಗಲಿದ ವಿರಹಿಗೆ

ಮೂಡಣವು ರಂಗೇರಿ ರವಿ ಕಿರಣ ತಬ್ಬಿದೆ ಭುವಿ
ಯುಗಾದಿ ಚೈತನ್ಯ ನೀಡಲಿ ಪ್ರಭೆಯ. ಬದುಕಿಗೆ


About The Author

Leave a Reply

You cannot copy content of this page

Scroll to Top