ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಂದು ಹೋಗುವ ನಡುವೆ
ನಕ್ಕು ಹಗುರಾಗಬೇಕು
ಅರೆಗಳಿಗೆ ನೋವಿದೆ
ಮರುಗಳಿಗೆ ನಲಿವಿದೆ
ಸೋಲಿದೆ ಗೆಲುವಿದೆ
ಬದುಕಿಗೊಂದು ವೇಗವಿದೆ
ಬದುಕಿಗೊಂದು ಲಯವಿದೆ
ಜೀವನಕ್ಕೊಂದು ಅರ್ಥವಿದೆ
ಸುತ್ತಮುತ್ತಲು ಕಣ್ಮನ
ಸೆಳೆಯುವ ಚೆಲುವಿದೆ
ಖುಷಿಯ ಹರಡುವ ಅಲೆಯಿದೆ
ನೋವ ನೀಡುವ ಜಾಲವಿದೆ
ಕಷ್ಟ ನಷ್ಟಗಳ ಮರೆತು
ಜೀವಿಸಲು ಒಂದಿಷ್ಟು ಸಮಯವಿದೆ
ಪ್ರತಿ ನೋವಿಗೂ ಕೊನೆಯಿದೆ
ಪ್ರತಿ ಗೆಲುವಿಗೂ ಒಂದು ಅಂತ್ಯವಿದೆ ನೋವಿರಲಿ ನಲಿವಿರಲಿ
ಬದುಕಿನ ಪಯಣ ಸಾಗುತ್ತಿರಲಿ
ಅಂಜದೆ ಅಳುಕದೆಯೇ
ಮುನ್ನುಗ್ಗುವ ಛಲವಿರಲಿ
ಸೋಲನ್ನು ಸೋಲಿಸುವ
ಚೈತನ್ಯವು ತುಂಬಿರಲಿ
ಗೆಲುವನ್ನು ಹಂಚಿ
ಆಸ್ವಾದಿಸುವ ಗುಣವಿರಲಿ
ಬರುವುದೆಲ್ಲವೂ ಬರಲಿ
ಎದುರಿಸುವ ತಾಕತ್ತು
ನಮ್ಮದಾಗಿರಲಿ
ಮನವ ಹಿಂಡುವ ಕಹಿಗಳಿಗೆ
ಖುಷಿಯ ಚಿಮ್ಮುವ ಸಿಹಿಗಳಿಗೆ
ಎಲ್ಲವನ್ನು ಸಮಾನವಾಗಿ
ಸ್ವೀಕರಿಸುವ ಮನೋಭಾವ
ತುಂಬಿರಲಿ
ಪ್ರೀತಿಯ ಹಂಚುತ್ತ
ದ್ವೇಷವ ಮರೆಯುತ್ತ
ಸಾರ್ಥಕತೆಯ ಜೀವನ ಹೊಂದುತ್ತ
ಜೀವರಥವ ಸಂಭ್ರಮದಿ
ಎಳೆಯಬೇಕು
ಜೀವನ್ಮುಖಿ ಪಯಣ
ನಗುನಗುತ ಮುಗಿಸಬೇಕು
ಮರಳಿ ಮಣ್ಣಿಗೆ ಸೇರಬೇಕು

ನಾಗರಾಜ ಜಿ. ಎನ್.  ಬಾಡ

About The Author

1 thought on “ನಾಗರಾಜ ಜಿ. ಎನ್. ಬಾಡ ಕವಿತೆ “ಬಂದು ಹೋಗುವ ನಡುವೆ..””

  1. ಒಂದು ಚೆಂದದ ಕವನ. ಕವನದ ಉದ್ದಕ್ಕೂ ಸರಳ ಸಾಲುಗಳಲ್ಲಿ ಸಹಜ ಬದುಕಿನ ಸ್ಫೂರ್ತಿಯಾಗಿ ಭರವಸೆಯಾಗಿ ಆಪ್ತವಾಗಿ ನಿಲ್ಲುವ ನಿಲುವು ಇದೆ. ಎಲ್ಲವನ್ನೂ ಪ್ರೀತಿಸುವ,ತಾಳಿ ಬದುಕುವ, ಬದುಕಿಸುವ ನಗುವೊಂದು ಕವನ ಪರಿಚಯಿಸುತ್ತದೆ. ಬದುಕಿನ ಸೂಕ್ಷ್ಮಗಳಲ್ಲಿ ಆಪ್ತತೆಯ ಅನುಬಂಧವನ್ನು ಕಟ್ಟಿಕೊಡುತ್ತಾ ಒಂದು ಒಳ್ಳೆಯ ಸಂಭ್ರಮವಾಗಿ ಬದುಕು ಭಾವಗಳಿಗೆ ಆರಾಧನೆಯಾಗುತ್ತದೆ.

Leave a Reply

You cannot copy content of this page

Scroll to Top