ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಜಾತಿ ಎಂಬ ಜಂಬದ ಕೋಳಿ
ರಾತ್ರಿಯೆಲ್ಲ ತಿಪ್ಪೆ ಕೆದರಿತು
ಆಚರಣೆ ಮತ ಪಂಥಗಳ
ವ್ಯರ್ಥ ಹುಡುಕಾಟ

ಬೆಳಿಗ್ಗೆ ಮಂಪರು  ನಿದ್ದೆ
ಕೋಳಿ  ಕೂಗಲೇ ಇಲ್ಲ
ಸೂರ್ಯ ಉದಯಿಸಿ ಬಿಟ್ಟ
ಜನರು ಹೊಲಕೆ ಹೋದರು

ಕೋಳಿಗೆ ಕೋಪ ಬಂತು
ತಾನು ಕೂಗದೆ
ಸೂರ್ಯ ಹೇಗೆ ಉದಯಿಸಿದ
ಜನರು ಹೇಗೆ ಎದ್ದರು

ಧರ್ಮ ಮಂತ್ರ ಜಪತಪ
ಕೆದರುವದನ್ನು ಬಿಡಲಿಲ್ಲ
ಹಬ್ಬಕ್ಕೆ ಬಲಿ ಪೂಜೆ
ಕೋಳಿಗೆ ಆಹ್ವಾನ

ಕೋಳಿ ಸತ್ತಿತು
ಸೂರ್ಯ ಹುಟ್ಟಿದ
ಜನರೂ ಎದ್ದರು
ಕೆದರಿದ ತಿಪ್ಪೆ ನಕ್ಕಿತು

—————————–

About The Author

5 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ-ತಿಪ್ಪೆ ನಕ್ಕಿತು”

  1. ಇಂಥ ವಿಡಂಬನೆಯ ಕವನದ ಮೂಲಕ ಸಮಾಜ ಸುಧಾರಿಸುವ ಕಾರ್ಯವನ್ನು ಸುತ್ತಮುತ್ತಲಿನ ಆಗು -ಹೋಗುಗಳ ಬಗೆಗೆ ಕಾಳಜಿ ಇರುವ… ಒಬ್ಬ ಹೃದಯವಂತ ಕವಿಗೆ ಮಾತ್ರ ಬರೆಯಲು ಸಾಧ್ಯ… ಸರ್

    ಸುಶಿ ( ಸುಧಾ ಶಿವಾನಂದ )

  2. ವ್ಯಂಗ್ಯ, ವಿಡಂಬನೆಯ ಕವನದ ಸಾಲುಗಳು ಚಿಂತನೆಗೆ ಹಚ್ಚುತ್ತವೆ. ಹೃದಯಸ್ಪರ್ಶಿಯಾಗಿವೆ

  3. ಡಾ ವೀಣಾ ಹೂಗಾರ

    ವ್ಯಂಗ್ಯ, ವಿಡಂಬನೆಯ ಕವನದ ಸಾಲುಗಳು ಚಿಂತನೆಗೆ ಹಚ್ಚುತ್ತವೆ. ಹೃದಯಸ್ಪರ್ಶಿಯಾಗಿದೆ
    ಸರ್ ತಮ್ಮ ಕವನ

Leave a Reply

You cannot copy content of this page

Scroll to Top