ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಭ್ರಮಿಸುತ್ತಿದ್ದಳು ಇಳೆ ಉಟ್ಟು ಹಸಿರು ಸೀರೆಯನ್ನು,
ಪೋಷಿಸುತ್ತಾ ತಾರತಮ್ಯವಿಲ್ಲದೇ ಒಡಲ ಜೀವಗಳನ್ನು…

ಝರಿ, ನದಿಗಳಾಗಿ ಹರಿದಿತ್ತು ನರನಾಡಿಗಳಲ್ಲಿ ಜೀವ ಜಲ,
ಪ್ರತಿ ಉಸಿರಿನಲ್ಲಿ ಅಶುದ್ದತೆಯ ಛಾಯೆ ಇಲ್ಲದ ಅನಿಲ…

ಸಕಲ ಜೀವರಾಶಿಗಳಲ್ಲಿ  ಮನುಷ್ಯನಾದ ಬುದ್ದಿ ಜೀವಿ,
ಅಧಿಪತ್ಯ ಬೆನ್ನಟ್ಟಿ ಹೃದಯವಂತಿಕೆ ಮರೆತ ಸ್ವಾರ್ಥ ಜೀವಿ…

ಜೀವ ಜಲವನ್ನು ಕಲುಷಿತಗೊಳಿಸಿ ಕ್ರಯಗೊಳಿಸುತ್ತಿಹನು
ಪ್ರತಿ ಉಸಿರು ಶುದ್ದ ಜೀವಧಾತುವಿಗಾಗಿ ಪರದಾಡುವಂತೆ ಮಾಡಿಹನು…

ಒಡಲ ಅನ್ಯ ಜೀವಿಗಳನ್ನು ಹೊಸಕಿ ತಾ ಶ್ರೇಷ್ಠವೆಂದು ಬೀಗುತಿಹನು,
ಹಸಿರು ಸೀರೆಯನ್ನು ತುಂಡಾಗಿಸಿ ಸ್ವಚ್ಚಂದವೆಂದು ಸಂಭ್ರಮಿಸುತ್ತಿಹನು…

ನಲುಗಿ ಮೊರೆಯಿಡುತ್ತಿಹಳು ಇಳೆ, ಕೊಳೆಯ ತೊಳೆಯೆಲೆಂದು,
ಮಡಿಲ ಮಕ್ಕಳ ಹುಚ್ಚಾಟ ಕಂಡು ರೋಧಿಸುತ್ತಿಹಳು ಭೂತಾಯಿ ಇಂದು..

—————————–

About The Author

Leave a Reply

You cannot copy content of this page

Scroll to Top