ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೌನದ ಹಿಂದೆ
ಹೇಳಲಾರದ
ಅಗಾಧ ನೋವಿದೆ
ನಲಿವಿನ ಹಿಂದೆ ಕಾಣದ
ಪರಿಶ್ರಮವು ಅಡಗಿದೆ
ಏನೇ ಆದರೂ ಕಣ್ಣ ತುಂಬ
ಕರಗದ ಕನಸಿದೆ
ಸೋಲಿಗೂ ಕೊನೆಯಿದೆ
ಗೆಲುವಿಗೂ ಮಿತಿಯಿದೆ
ಬದುಕಿಗೆ ಅದರದೇ ಸೊಗಸಿದೆ
ಅರಿಯ ಬೇಕಿದೆ
ಬೆರೆಯ ಬೇಕಿದೆ
ನೋವಿನಾಚೆಗೆ ಸುಂದರ
ಬದುಕಿದೆ
ಗೆಲುವು ನಿನಗೆ ಕಾದಿದೆ
ಕಣ್ಣೀರಿಗೆ ಕೊನೆಯಿದೆ
ಪ್ರತಿ ಬದುಕಿಗೂ ಇಲ್ಲಿ
ಬೆಲೆ ಇದೆ
ನೆಲೆ ಇದೆ
ಬೇವ ತಿಂದ
ನಿನ್ನದೇ ಜೀವ
ಗೆಲುವ ಸವಿಯ
ಬೇಕಿದೆ
ನಿನ್ನದೇ ನೋವ
ನೀನೇ ದಾಟಿ
ಮುಂದೆ ಸಾಗಬೇಕಿದೆ
ಕನಸು ಕರಗುವ
ಮುನ್ನವೇ
ಗುರಿಯ ಸೇರಬೇಕಿದೆ.


About The Author

1 thought on “”

  1. ಪ್ರತಿ ಬದುಕಿಗೂ ಯಾರೂ ಗುರುತಿಸದ ಮೌನ ಸಾಲುಗಳ ಹೊದಿಕೆ ಯಾವಾಗಲೂ ಇರುತ್ತದೆ. ನೋವೆಂಬ ಅಪರಿಚಿತ ಪರಿಚಿತನಂತೆ ಅಡಗಿ ಕುಳಿತಿರುತ್ತಾನೆ. ಏನಿದ್ದರೂ ನಲಿವು ಇದ್ದರೆ ಬದುಕು ಭರವಸೆಯಾಗುತ್ತದೆ. ಸೋಲು ಗೆಲುವಾಗುತ್ತದೆ. ಶ್ರಮ ಪರಿಶ್ರಮವಾಗಿ ಬದಲಾದರೆ ಯಶದ ದಾರಿ ಸುಲಭ ಮತ್ತು ಆಪ್ತವಾಗುತ್ತದೆ. ಜೀವನ ಇಷ್ಟವಾದರೆ ಬದುಕು ಪರಮಾಪ್ತ. ಪ್ರತಿ ಗೆಲುವೊಂದು ನಗುವಾಗಿ ಉಳಿದರೆ ಬಾಳು ಸುಂದರ ಎನ್ನುವ ಸಾಲುಗಳು ಕವನದ ಸೂಕ್ಷ್ಮತೆ ಎನಿಸುತ್ತದೆ……..ಚೆಂದಾಗಿದೆ……ಕವನ

    ನಾಗರಾಜ ಬಿ.ನಾಯ್ಕ.
    ಹುಬ್ಬಣಗೇರಿ.
    ಕುಮಟಾ.
    .

Leave a Reply

You cannot copy content of this page

Scroll to Top