ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಿಸಿಲ ಬೇಗೆಯು ತಡೆಯಲಾಗುತ್ತಿಲ್ಲ
 ಹನಿ ಹನಿಯ ನೀರಿಗಾಗಿ ಪರಿತಪಿಸುತಿರಲೆಲ್ಲ  
 ಯಾಕೋ ತಿಳಿಯೆ  ಮಳೆರಾಯ ಮುನಿದಿರಲು
 ಇಳೆಯೂ  ಗಗನವನು ನೋಡುತಲಿ  ಕುಳಿತಿರಲು ….

 ಯುಗಾದಿ ಕಳೆದಿದೆ ದೇವನೆ ಕೇಳು ನೀ ಒಮ್ಮೆ
 ಮಳೆರಾಯ ಮುನಿದು ಕುಳಿತಿಹನು ದೇವಾ
 ಲೋಕದಲಿ  ನೀರಿಲ್ಲದೆ ಪರದಾಡುತಿಹರು ಜನತೆ
 ದಯಮಾಡಿ  ಚುಂಬಿಸು ಇಳೆಯ ಬಾ ಮಳೆರಾಯ …..

 ರೈತರ ಸ್ಥಿತಿಯು  ನೋಡಲಾಗುತಿಲ್ಲ
 ವಾತಾವರಣವು ಯಾರಿಗೂ ಹಿಡಿಯುತಿಲ್ಲ
 ದವಸ ಧಾನ್ಯಗಳಿಗೆ ಕೊರತೆಯಾಗುತಿಹದಲ್ಲ
 ಬದುಕು ಏನಾಗುವುದು ಎಂಬ ಆತಂಕದಿ ಇರುವರೆಲ್ಲ….

 ತಂಪು ಪಾನೀಯದ ಮೊರೆ ಹೋಗುತಿರಲು
 ಏಳ ನೀರು ಎಲ್ಲೂ ಸಿಗದೇ ಪರದಾಡುತಿರಲು
 ರೋಗರುಜಿನೆಗಳು ಹೆಚ್ಚಾಗಬಹುದೆಂಬ ಭಯದಲಿ
 ಮಳೆರಾಯನ  ಪ್ರಾರ್ಥನೆಯಲ್ಲಿ ಪೂಜಿಸುತಿಹರೆಲ್ಲ

———————————

About The Author

3 thoughts on “ಬೇಸಿಗೆಯ ವಿಶೇಷ-ಹೆಚ್. ಎಸ್. ಪ್ರತಿಮಾ ಹಾಸನ್.”

Leave a Reply

You cannot copy content of this page

Scroll to Top