ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸೋತವರು ನಾವು
ಹಾಗಂತ ಸೋಲಿಗೆ
ಶರಣಾನಾದವರಲ್ಲ ನಾವು
ಸೋಲು ನಮ್ಮನ್ನು
ಸೋಲಿಸಲಾರದು
ಸೋಲನ್ನೇ ಮೆಟ್ಟಿ
ನಿಂತವರು ನಾವು

ಸೋಲಿಗೆ ಕೈಕಟ್ಟಿ
ಕುಳಿತು ಕೊಳ್ಳದೆ
ಮತ್ತೆ ಮತ್ತೆ ಪ್ರಯೋಗಕ್ಕೆ
ಒಡ್ಡಿಕೊಳ್ಳುವವರು ನಾವು

ಬೀಳುತ್ತಾ ಏಳುತ್ತಾ
ಎದ್ದು ಬಿದ್ದವರು ನಾವು
ಬಿದ್ದಲ್ಲಿಂದ ಸಲೀಸಾಗಿ
ಎದ್ದು ಓಡಿದವರು ನಾವು

ಗೆದ್ದವರ ಎದಿರು ಕೈ ಕಟ್ಟಿ
ನಿಲ್ಲದವರು ನಾವು
ನಮ್ಮದೇ ದಾರಿಯನ್ನು
ಕಂಡು ಕೊಂಡವರು ನಾವು

ಕಿತ್ತು ತಿನ್ನುವ ಹಸಿವೆಯಿಂದ
ಚಡ ಪಡಿಸಿದವರು ನಾವು
ಹಸಿವೆ ನೀಗಲು ಕೈಗೆ
ಸಿಕ್ಕಿದ್ದನ್ನು ತಿಂದು
ಜೀರ್ಣಿಸಿ ಕೊಂಡವರು ನಾವು

ರುಚಿಯನ್ನು ಹುಡುಕಿ ಹುಡುಕಿ
ತಿಂದವರಲ್ಲ ನಾವು
ತಿಂದುದರಲ್ಲೇ ರುಚಿಯನ್ನು
ಕಂಡುಕೊಂಡವರು ನಾವು

ಹಸಿದು ಬಂದವರಿಗೆ ಮೊದಲು ಉಣಬಡಿಸುವವರು ನಾವು
ಅವರ ಸಂತೃಪ್ತಿಯಲ್ಲೇ
ಹಸಿವನ್ನು ಮರೆತವರು ನಾವು

ಕೊಟ್ಟು ಖುಷಿಯನ್ನು
ಪಟ್ಟವರು ನಾವು
ಬಚ್ಚಿಟ್ಟುಕೊಳ್ಳಲು
ಉಳಿಸಿಕೊಳ್ಳದವರು ನಾವು

ನಮ್ಮವರ ಖುಷಿಯಲ್ಲಿ
ಖುಷಿಯ ಕಂಡವರು ನಾವು
ನಮ್ಮ ಬಗ್ಗೆ ಯೋಚಿಸದೆ
ಹಾಯಾಗಿ ಇರುವವರು ನಾವು

ಬದುಕು ಬಂದಂತೆ ಮುಂದೆ
ಸಾಗುವವರು ನಾವು
ನಾಳೆಗಳ ಬಗ್ಗೆ ಚಿಂತೆ ಮಾಡಿಕೊಂಡು
ತಲೆ ಕೆಡಿಸಿಕೊಳ್ಳದ
ಈ ಮಣ್ಣಿನ ಮಕ್ಕಳು ನಾವು
ಮಣ್ಣಲ್ಲೇ ಮಣ್ಣಾಗಿ
ಹೋಗುವವರು ನಾವು


About The Author

1 thought on “ನಾಗರಾಜ ಜಿ. ಎನ್. ಬಾಡ ಅವರ ಕವಿತೆ ‘ಮಣ್ಣಿನ ಮಕ್ಕಳು’”

  1. ಮಣ್ಣು ಬದುಕಿನ ಜೀವಾಳ. ಅಂತಃಸತ್ವದಿ ಋಣವಾಗುಳಿವ ದೊಡ್ಡ ಉಳಿವು ಅದರದ್ದು. ಜೀವ, ಜೀವಿತ ಎರಡೂ ಅದರ ಧನ್ಯತೆ ಪರಿಣಾಮವೇ ಸರಿ. ಇದ್ದಲ್ಲೇ ಉಳಿದು ಅನ್ನಕೊಡುವುದು ಮಣ್ಣಿನ ಸೂಕ್ಷ್ಮ ಸಂವೇದನೆಯ ಗುಣ. ಬೆವರ ಹನಿಗಳ ಬಿತ್ತಿ ಹಸಿವಿಗೆ ಅನ್ನವನ್ನು ನೀಡುವುದು ಜೀವ ಉಳಿಸಿದಂತೆ. ಬದುಕಿನ ಕಷ್ಟಗಳು ಏನೇ ಇದ್ದರೂ ದುಡಿತವೇ ಹೆಚ್ಚು ಖುಷಿಯನ್ನು ಕೊಡುತ್ತದೆ ಆ ಮನಸ್ಸಿಗೆ. ಹಸಿವೆ ಎಲ್ಲರದ್ದೂ. ಅದು ನಿತ್ಯದ ವಾಸ್ತವ. ಅದರಂತೆ ದುಡಿಯುವ ಕೈಗಳ ಕಾಯಕವೂ ಶ್ರೇಷ್ಠ ಎನ್ನುವ ಕವನದ ಸಾಲುಗಳು ತುಂಬಾ ಇಷ್ಟವಾದವು…….. ಕವಿತೆಯ ಸಾಲುಗಳು ಬದುಕಿನ ಭರವಸೆಯ ಬಗ್ಗೆ ಹೇಳುತ್ತಾ ಬದುಕನ್ನು ಪ್ರೀತಿಸುತ್ತದೆ……….

    ನಾಗರಾಜ ಬಿ.ನಾಯ್ಕ
    ಹುಬ್ಬಣಗೇರಿ
    ಕುಮಟಾ.

Leave a Reply

You cannot copy content of this page

Scroll to Top