ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೀನು ಇರಿದಿರುವ ಚೂರಿ
ಅವಳಿಗಷ್ಟೆ ಅಲ್ಲ
ಮಗಳನ್ನು ರಾಜಕುಮಾರಿ ಎಂದು ಬೆಳೆಸುತ್ತಿರುವ ಅಸಂಖ್ಯಾತ ಹೆತ್ತವರಿಗೆ

ನೀನು ಇರಿದಿರುವ ಚೂರಿ
ಅವಳಿಗಷ್ಟೆ ಅಲ್ಲ
ಲಕ್ಷಾಂತರ ನಿಜ ಪ್ರೇಮಿಗಳಿಗೆ

ನೀನು ಇರಿದಿರುವ ಚೂರಿ
ಅವಳಿಗಷ್ಟೆ ಅಲ್ಲ
ಜಗತ್ತನ್ನು ಪ್ರೀತಿಸುತ್ತಿರುವ
ಕೋಟ್ಯಂತರ ಮುಗ್ದ ಮನಸ್ಸುಗಳಿಗೆ

ನೀನು ಇರಿದಿರುವ ಚೂರಿ
ಅವಳಿಗಷ್ಟೆ ಅಲ್ಲ
ಮಾನವೀಯತೆಯ ಆದರ್ಶ ಸಮಾಜಕ್ಕೆ

ನೀನು ಇರಿದಿರುವ ಚೂರಿ
ಅವಳಿಗಷ್ಟೆ ಅಲ್ಲ
ದೇಶದ ಅತ್ಯಮೂಲ್ಯ ಭಾವೈಕ್ಯತೆಗೆ ,ಸಾಮರಸ್ಯಕ್ಕೆ

ನೀನು ಇರಿದಿರುವ ಚೂರಿ
ಅವಳಿಗಷ್ಟೆ ಅಲ್ಲ
ನಾಡಿನ ಶಾಂತಿ ,ಸಮೃದ್ಧಿ ,ಪ್ರಗತಿಗೆ

ನೀನು ಇರಿದಿರುವ  ಚೂರಿ   ಅವಳಿಗಷ್ಟೆ ಅಲ್ಲ
ನಿನ್ನ ಕುಟುಂಬ , ನಿನ್ನ ಸಮಾಜ ,ನಿನ್ನ
ಪವಿತ್ರ ಧರ್ಮಕ್ಕೆ ….

ತ್ಯಾಗ ಮಾಡಿದ್ದರೆ ಅಮರ ಪ್ರೇಮಿ ಆಗುತ್ತಿದ್ದೆ , ಆದರೆ ಕ್ರೂರಿಯಾದೆ ,
ದೇಶ ದ್ರೋಹಿಯಾದೆ…

————————

About The Author

2 thoughts on “ಡಾ.ಶಿವಕುಮಾರ್ ಮಾಲಿಪಾಟೀಲ ರವರ ಕವಿತೆ-ನೀ ಇರಿದ ಚೂರಿ”

  1. ಇ ಕವಿತೆ ಓದಿದ ನಂತರ ಎಲ್ಲರ ಮನಸ್ಸು ಬದಲಗುತ್ತೆ ಎಂದು ಆಶಿಸುವೆ

Leave a Reply

You cannot copy content of this page

Scroll to Top