ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಚೈತ್ರ ಬಂದು ಚೈತನ್ಯ ತುಂಬಿದಹಾಗಾಗಿದೆ ನೀ ಬಂದಮೇಲೆ
ಒಣಗಿದ ಮರ ಹಸಿರಸೀರೆ ಉಟ್ಟಹಾಗಾಗಿದೆ ನೀ ಬಂದಮೇಲೆ.

ಸುಡುಬಿಸಿಲು ನಡುಹಗಲು ತಳಮಳಿಸಿ ಬಾಯಾರಿ ಬೆಂದಿದಿದೆ
ಸೊಗಸುಗಾರ ನೀ ತಂಗಾಳಿಬೀಸಿದಾಗಾಗಿದೆ ನೀ ಬಂದಮೇಲೆ

ನೀ ಕಾಣದೆ ಬೇಸರ ಬೇಗುದಿ ನಿರುತ್ಸಾಹ ತುಂಬಿದ‌ ಈ ಮನಕೆ
ಮುಂಗಾರು ಹನಿಗೆ ಕುಣಿವ ನವಿಲಂತಾಗಿದೆ ನೀ ಬಂದಮೇಲೆ

ಶಿಶಿರದಲಿ ಕೊರಗುತ ಮರುಗುತ ಮೂಕವಾಗಿ ಕರಾಳ ದಿನಕಳೆದೆ
ವಸಂತನ ಲೀಲೆಗೆ ಕೋಗಿಲೆಗೆ ಸ್ವರಬಂದಂತಾಗಿದೆ ನೀ ಬಂದಮೇಲೆ

ಶ್ರಾವಣದಿ ನದನದಿಗಳು ದುಮ್ಮುಕ್ಕುವ ಹಾಗೆ ನಿನ್ನ ಸವಿ ನೆನಪುಗಳು
“ಕಸ್ತೂರಿ”ಬಾವಪಯಣಕೆ ರಾಯಭಾರಿಯಾದಂತಾಗಿದೆ ನೀ ಬಂದಮೇಲೆ


About The Author

Leave a Reply

You cannot copy content of this page

Scroll to Top