ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪಕ್ಷ ವಿಪಕ್ಷಗಳ ಜಾತಕವನು ತೆರೆದು
ಪೂರ್ವಾಪರಗಳ ಗ್ರಹಗತಿಯನು ತಿಳಿದು
ಮನೆಮನಗಳ ಕದವನು ತಟ್ಟುವಾಗ
ಪುಟ್ಟ ಅಂಗೈಯಲ್ಲಿ ದೊಡ್ಠ ನಕಾಶೆಯನಿಟ್ಟವರೇ ಮಹಾದೊರೆಗಳು

ಉರಿಯುವ ಬೆಂಕಿ ಕುದಿಯುವ ಎಣ್ಣೆ ಎಡಬಲಕೆ
ಬೆಂಕಿ ಸುಡುವುದಿಲ್ಲ  ಎಣ್ಣೆ ಕುದಿಸುವುದಿಲ್ಲ
ಎಲ್ಲೆಲ್ಲೂ ನಯ ವಿನಯಗಳ ಮಾತಿನ ಬೆಲ್ಲ
ದೇಶಸೇವೆಯೇ ಈಶಸೇವೆಯೆನ್ನುವವರ ಮೆರವಣಿಗೆ ಹೊರಟಿದೆಯಲ್ಲ!

‘ನಮಗೂ ಒಂದು ಕಾಲ ಬರುತ್ತದೆ’ಯೆಂದು
ಕಾಯುವವರ ಕಾಲವೂ ಬಂದಾಗಿದೆ
ಒಪ್ಪು ತಪ್ಪುಗಳನು ತಕ್ಕಡಿಯಲ್ಲಿಟ್ಟು ತೂಗಿ
ಯಾರನಾರಿಸಿ ಗದ್ದುಗೆಯೇರಿಸಬೇಕೆಂದರಿಯಲು
ರಾಮನಾದರೆ ಸಾಲದು ದಶಾವತಾರ ತಾಳಬೇಕು

ಇನ್ನು ಕೆಲವೇ ದಿನಗಳು ಮತ್ತೆ ಹಿಂದಿನಂತೆಯೇ
ಕರೆದಾಗ ಎದ್ದು ಹೋಗಿ ಘೋಷಣೆ ಕೂಗುವುದು
ಸಭೆ ಸಮಾರಂಭಗಳಿಗೆ ಜೀವ ತುಂಬುವುದು
ರಾಜಬೀದಿಯಲ್ಲಿ ಗತ್ತು ಗಮ್ಮತ್ತಿನ ಒಡ್ಡೋಲಗಕೆ
ಬದಿಗೆ ಸರಿದು ನಿಲ್ಲುವುದು.
ಪರವಾಗಿರದವುಗಳಿಗೆ ಮುಷ್ಕರ ಹೂಡುವುದು

ಓಟಿನೋಟದ ಬರದಲಿ
ಹಾಲು ಜೇನಿನ ಬಂಧ – ಸ್ನೇಹ ಸೌಹಾರ್ದತೆಯ ಚಂದ
ಕಳೆದು ಹೋಯಿತೆಷ್ಟೋ…!
ಈಗೀಗ ಸದ್ದು ಗದ್ದಲದ ನಡುವೆ ದುಮುಗುಡುವ ದಗೆ
 ಮನಸ್ಸಿನ ತುಂಬೆಲ್ಲ ಮತಬೇಧಗಳದೇ ಹೊಗೆ


About The Author

10 thoughts on “ಅನಿತಾ ಪಿ. ತಾಕೊಡೆ ಅವರ ಕವಿತೆ-ಒಡ್ಡೋಲಗ”

  1. ಪ್ರಸ್ತುತ ಪರಿಸ್ಥಿತಿಗೆ ಚೆನ್ನಾಗಿ ಹೊಂದುವಂತಹ ಕವಿತೆ

Leave a Reply

You cannot copy content of this page

Scroll to Top