ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

3d forest in india shape


     ಬೇಸಿಗೆಯ ಉರಿ ಮುಗಿಲು ಮುಟ್ಟಿದೆ. ಕಾರಣ? ಒಂದೇ.. ಕಡಿಮೆಯಾದ ಹಸಿರು, ಹೆಚ್ಚಿದ ಜನ ಸಂಖ್ಯೆ ಮತ್ತು ಕಾಂಕ್ರೀಟ್ ಕಾಡು. ಪ್ರತಿನಿತ್ಯ ಇಡೀ ದೇಶದಲ್ಲಿ ರಸ್ತೆಗಳ ಅಗಲೀಕರಣಕ್ಕಾಗಿ ಹಿಂದೆ ನೆಟ್ಟಿದ್ದ ಸಾಲು ಮರಗಳನ್ನು ಧರೆಗೆ ಉರುಳಿಸಲಾಗುತ್ತಿದೆ. ಅಷ್ಟೇ ಅಲ್ಲ, ಮನೆಯ ಅಂಗಳದಲ್ಲಿ ಇರುವ ಮರ ಉತ್ತಮ ಆಮ್ಲಜನಕ ಕೊಡುತ್ತದೆ, ನೆರಳು ಕೊಡುತ್ತದೆ ಹಾಗೂ ನಾವು ಹೊರ ಬಿಟ್ಟ ಇಂಗಾಲದ ಡೈಆಕ್ಸೈಡ್ ನ್ನು ಹಗಲಲ್ಲಿ ತಾನೇ ಉಸಿರಾಡಿ ಆಹಾರ ತಯಾರಿಸಿ ಇಡೀ ವಾತಾವರಣವನ್ನು ತಂಪು ಮಾಡುತ್ತದೆ. ಅಷ್ಟೇ ಅಲ್ಲ , ಮೋಡ ತಡೆದು ತಂಪಾಗಿಸಿ  ಮಳೆ ಸುರಿಸುತ್ತದೆ. ಹೂ ಹಣ್ಣು ಕಾಯಿ ಕೊಡುತ್ತದೆ. ಹಲವಾರು ಜೀವ ಜಂತುಗಳಿಗೆ ಬದುಕಲು ಆಶ್ರಯ ಒದಗಿಸಿ ಕೊಡುತ್ತದೆ. ಒಣಗಿದ ಎಲೆಗಳು ಕೆಳಗೆ ಬಿದ್ದು ತರಗೆಲೆಯಾಗಿ ಸಾವಯವ ಗೊಬ್ಬರ ಆಗುತ್ತದೆ. ಅದರ ಮೇಲೆ ಹಲವಾರು ಪಕ್ಷಿಗಳು ಕುಳಿತು ಹಾಡುತ್ತವೆ. ದನಗಳು ಮತ್ತು ಜನಗಳು , ನಾಯಿಗಳೂ ಕೆಳಗೆ ಮಲಗಿ ವಿಶ್ರಾಂತಿ ಪಡೆಯುತ್ತಾರೆ. ವಾತಾವರಣದ ಜಲಚಕ್ರ, ಅನಿಲ ಚಕ್ರಕ್ಕೆ ಸಹಕಾರ ನೀಡುತ್ತದೆ.
     ಆದರೆ ನಮಗೆ ಅದು ಕಾಣುವುದು ಹೀಗೆ. ಅದು ಬಹಳ ದೊಡ್ಡ ಮರ, ಮುದಿ ಆಗಿದೆ, ಮಳೆ, ಗಾಳಿ ಬಂದರೆ ಬೀಳಬಹುದು. ಅದರ ಒಣಗಿದ ಎಲೆಗಳೋ ಕಸ. ಗುಡಿಸಿ ಗುಡಿಸಿ ಸಾಕಾಗುತ್ತದೆ. ನಮ್ಮ ಅಂಗಳದ ಸ್ವಚ್ಛತೆ ಆ ಮರದಿಂದ ಹದಗೆಡುತ್ತದೆ. ಮನೆಯ ಮುಂದೆ ಇರುವ ಮರ ಮನೆಯ ಅಂದ ಕೆಡಿಸುತ್ತದೆ. ಮರದ ನೀರು ಬಿದ್ದು ಹಾಕಿದ ಸಿಮೆಂಟ್ ಕರಗಿ ಹೋಗುತ್ತದೆ. ಮರದ ಮೇಲೆ ಪಕ್ಷಿಗಳು ಕುಳಿತು ಹಿಕ್ಕೆ ಹಾಕಿ ಮನೆ ಮುಂದೆ ಗಲೀಜು. ಅಲ್ಲಿ ದನಗಳು ಬಂದು ಸೆಗಣಿ ಹಾಕಿ, ಮೂತ್ರ ಮಾಡಿ ಜಾಗ ಹಾಳು ಮಾಡುತ್ತವೆ. ವಾಸನೆ ಬರುತ್ತದೆ. ಆಯಾ ವಾಸನೆಗೆ ಸೊಳ್ಳೆ ಉತ್ಪತ್ತಿ ಆಗುತ್ತದೆ. ಅದರಿಂದ ಖಾಯಿಲೆ ಬರುತ್ತದೆ. ಮರದ ಟೊಂಗೆ ಗಾಳಿ ಮಳೆಗೆ ಏನಾದರೂ ಮುರಿದು ಬಿದ್ದರೆ ನಮಗೆ ಹಾನಿ. ನೀವೇನಂತೀರಿ?

——————-

About The Author

1 thought on ““ಹಸಿರ ಉಳಿಸೋಣ”ಹನಿಬಿಂದು ಅವರ ಲೇಖನ”

  1. ಸಕಾಲಿಕ ಲೇಖನ ಇಂತಹ ಹತ್ತು ಹಲವು ಲೇಖನಗಳು ಹೊರಬಂದರೇ ಬಹುಷಃ ಹಣದ ಬೆನ್ನು ಹತ್ತಿರುವ ಮಾನವನ ದನದಹ ದಾಹ ಕಡಿಮೆಯಾಗಿ ಸಸ್ಯ ಸಂಪತ್ತು ಹೆಚ್ಚಿ ಮಾನವನಿಗೆ ಪ್ರಾಣ ವಾಯು ಮತ್ತು ಜೀವ ಜಲ ಸಿಗಬಹುದು ಮುಂದಿನ ಜನಾಂಗ ನಮ್ಮನ್ನು ಶಪಿಸದೆ ಮರಿಸಬಹುದು

Leave a Reply

You cannot copy content of this page

Scroll to Top