ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಿಲದಿಂದ
ಹೊರಬದ ಇಲಿಯೊಂದು
ವಿಲವಿಲನೆ ಒದ್ದಾಡಿ
ಉಸಿರಾಟ ನಿಲ್ಲಿಸಿತು ಕಾರಣ ಇಷ್ಟೆ
ಕಾಣುವಷ್ಟು ದೂರ ಹೋದರು ಕಾಳು ಸಿಕ್ಕಿರಲಿಲ್ಲ
ಕುಡಿಗೂ ತನಗೂ ಹಸಿವ ತೀರಿಸಲು ಸಾಧ್ಯವಾಗಲಿಲ್ಲ

ಹೊಲದಿಂದ
ಹೊರಬಂದ ಮೊಲವೊಂದು
ಪಟಪಟನೆ ಉರುಳಾಡಿ
ಪ್ರಾಣ ಬಿಟ್ಟಿತು ಕಾರಣ ಇಷ್ಟೇ
ಪಡಬಾರದ ಕಷ್ಟ ಪಟ್ಟರೂ ಗರಿಕೆ ಸಿಗಲಿಲ್ಲ
ತನಗೂ ಪರಿವಾರಕ್ಕೂ ಹೊಟ್ಟೆಯ ಸಂಕಟ ತಡೆಯಲಾಗಲಿಲ್ಲ

ನೀರಿನಿಂದ
ಹೊರಬಂದ ಮೀನೊಂದು
ಚಟಪಟನೆ ಹೊರಳಾಡಿ
ಸತ್ತೇ ಹೋಯಿತು ಕಾರಣ ಇಷ್ಟೇ
ಹಳ್ಳ ಕೊಳ್ಳ ನದಿ ಸಾಗರ ಸುತ್ತಿದರು ನೀರಿಲ್ಲ
ಸಕಲ ಜಲಚರಕೂ ಜೀವಿಸಲು ಹನಿ ನೀರಿಲ್ಲದೆ ಬದುಕಲಾಗಲಿಲ್ಲ

ಕಾಡಿನಿಂದ
ಹೊರಬಂದ ಹುಲಿಯೊಂದು
ನಡೆಯದೇ ಅಲುಗಾಡಿ
ಉಸಿರು ಚೆಲ್ಲಿತು ಕಾರಣ ಇಷ್ಟೇ
ಭೂಮಿಯ ಸುತ್ತಿದರೂ ಕಾಡು ಮೇಡಗಳಿಲ್ಲ
ವನ್ಯಜೀವಿಗಳಿಗೆ ಮಾನವನ ಆಕ್ರಮಣ  ತಡೆಯಲಾಗಲಿಲ್ಲ

ಮನೆಯಿಂದ
ಹೊರಬಂದ ಮಾನವನಿಂದು
ಬಿಸಿಲು ತಡೆಯಲಾಗದೆ ನರಳಾಡಿ
ರಸ್ತೆಯಲಿ ಬಿದ್ದು  ಸತ್ತು ಹೋದ ಕಾರಣ ಇಷ್ಟೇ
ಪರಿಸರ ಹಾಳು ಮಾಡಿ ತನ್ನ ಗುಂಡಿ ತೋಡಿಕೊಂಡ
ವಾಯು,ನೀರು,ಭೂಮಿ, ಕಾಡು ಮಾಲಿನ್ಯ ಮಾಡಿ ಬದುಕಿಗೆ
ಸಂಚಕಾರ ತಂದುಕೊಂಡ

————————

About The Author

2 thoughts on “ಹನಮಂತ ಸೋಮನಕಟ್ಟಿ ಕವಿತೆ- ಬೇಸಿಗೆ”

Leave a Reply

You cannot copy content of this page

Scroll to Top