ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಾದಸ್ವರಕೆ ಸೋತ ಮನವು
ಬೇಯುತಿದೆ ದಿನ ದಿನ
ಕೊಳಲಿನುಲಿಗೆ ನಲಿದ ತನುವು
ಅಲೆಯುತಿದೆ ಬನ ಬನ

ಗೋವ್ಗಳಿಲ್ಲ ಗೋಪರಿಲ್ಲ
ಬಿಡದೆ ಕಾಡ್ವ ಕೋತಿ ಇಲ್ಲ
ಹಚ್ಚ ಹಸಿರು ತಳಿರು ಇಲ್ಲ
ಬೆಚ್ಚನೆಯ ಒಡನಾಟವಿಲ್ಲ

ಕದ್ದು ನೋಡ್ವ ಕಣ್ಗಳಿಲ್ಲ
ಚಾಡಿ ಹೇಳ್ವ ಬಾಯ್ಗಳಿಲ್ಲ
ಬೆಂದ ಒಡಲು ನೊಂದ ಮಡಿಲು
ಕಡಲಾದರು ಮುತ್ತೆ ಇಲ್ಲ

ಸೊರಗಿದೆಮುನೆ ತೆವಳಿ ಸಾಗಿ
ಶರಧಿ ಸೇರದಳುತಿದೆ
ಭಾವ ತಂತಿ ಹರಿದ ವೀಣೆ
ನನ್ನ ಬಳಿಯೆ ಕುಳಿತಿದೆ

ನೀನು ಬರದೆ ಹೇಗೆ ಇರಲಿ
ಸಾಯುತಿರುವೆ ಕ್ಷಣ ಕ್ಷಣ
ಒಮ್ಮೆ ಬಂದು ವದನ ತೋರು
ನೀಗಿಬಿಡುವೆ ಮರುಕ್ಷಣ

ಜೀವವಿರದ ಕಾಯ ನನದು
ಸುಟ್ಟು ಬೂದಿಯಾಗಲಿ
ಹೊತ್ತು ತಿರುಗಿ ದಣಿದೆ ನಾನು
ಬಾನ ಚುಕ್ಕಿಯಾಗಲಿ


About The Author

1 thought on “”

Leave a Reply

You cannot copy content of this page

Scroll to Top