ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನುಡಿದ ಮಾತಿಗೆ ಉತ್ತರವನು ನೀಡದೆ ಹೋದೆ
ಸುಡುವ ಬಿಸಿಲಲ್ಲೂ ಪ್ರೀತಿಯ ಬರುವಿಕೆಗೆ ಕಾದೆ

ಮಾಡದಿಹ ತಪ್ಪಿಗೆ ಮುನಿಸಿನಲ್ಲೆ ಜುಲ್ಮಾನೆ ಏಕೆ
ಕಾಡುವ ದುಃಸ್ವಪ್ನವೆ ಹೃದಯಕೆ ಆಘಾತದ ಬಾಧೆ

ಮೋಡಿಯಲಿ ಗೆದ್ದು ಒಲವಲ್ಲಿ‌ ಬೀಳಿಸಿದ ರಮಣಿ
ಹೂಡಿದ ಬಾಣದ ತುದಿಯಿಂದ ಎದೆಯ ಕೋದೆ

ನೋಡುವ ಅಕ್ಷಿಯ ನೋಟದಿ ಬೆರಗು ಮೂಡಿಸಿದೆ
ದಡಸೇರದ ನೀನಿಲ್ಲದ ಜೀವನ ಬೆಳಕಿಲ್ಲದ ಪೊದೆ

ಜಡವಾದ ಮನಸಿಗೆ ಸಾಂಗತ್ಯ ಬೇಡವಾದೀತು ಸಖಿ
ಅಡವಿಯ ಅಭಿನವನ ಕಾವ್ಯದಲಿ ನೀನೊಂದು ಗಾದೆ


About The Author

Leave a Reply

You cannot copy content of this page

Scroll to Top