ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಫಲಬಯಸಿ
ನಡೆದ ಹಾದಿಯ
ತುಂಬೆಲ್ಲ ಕಂಡದ್ದು
ನನ್ನದೆ ಪ್ರತಿರೂಪ

ತಲುಪಿದ ಬಯಲಲ್ಲಿ
ಅದೆಷ್ಟು ಉಸಿರುಗಳ ಸದ್ದು
ಕಣ್ಹಾಯಿಸಿದರು ಕಾಣದ
ಸಜ್ಜಾದ ನ್ಯಾಯಪೀಠ

ಕಿವಿಗೊಟ್ಟೆಡೆಯೆಲ್ಲಾ
ನೆರೆಮನೆಯ ವರ್ಣನೆ
ಆಗಾಗೊಮ್ಮೆ ಕೇಳುತ್ತಿದ್ದ
ಸಾಧನೆಯ ಘರ್ಜನೆ

ಬೆವರ ಬೆಲೆ ಅರಿತ
ಮಂದಿಯ ನಡುವೆ
ದೊಡ್ಡಸ್ಥಿಕೆಯ ನುಡಿಯ
ಚಂಚಲ ಚಿತ್ತವೆಷ್ಟೊ

ಮುಂಬರುವ ಭಾಗ್ಯಕ್ಕೆ
ಮೊಗದಲ್ಲಿ ನಗುವೆಂದು
ನಡೆದ ಹೆಜ್ಜೆ ತಲುಪಿದ್ದು
ಅನ್ನಪೂರ್ಣೆಯ ಸನಿಹ

ಸಿಹಿಹೊತ್ತ ಮಂದಿ ಸಿಹಿ
ಇಟ್ಟ ಜಾಗದಲ್ಲೆ ಬಿಟ್ಟು
ನಡೆದಾಗ ಅದೆನೆತ್ತಿ ತಿಂದ
ಜೀವಗಳೂ ಅಲ್ಲಿದ್ದವು

ಹನಿ ನೀರಿಗೆ ಹರಸಿ
ದೂರದಿಂದ ಬಂದವರು
ಜೊತೆಗಾರರ ದನಿಯು
ಕೇಳದೆ ತಡವರಿಸಿದ್ದರು

ಇಷ್ಟೆಲ್ಲ ಆದರು ಎದೆಯ
ಉರಿ ತಣ್ಣಗೆ ಉರಿದಿತ್ತು
ಕಾರಣ ಮೊದಲ ಮಾತು
ಹೃದಯದ್ದೆ ಆಗಿತ್ತು

ಮಿಡಿಯುವ ಹೃದಯವ
ವಾದಕ್ಕಿಟ್ಟು ಮಣಿಸದಿರಿ
ಮನಸ್ಸು ಕಾಯಲಿ ಸದಾ
ಮನತುಂಬಿ ನಗಲು
   “ಮತ್ತೆ ವಸಂತಕ್ಕೆ”

———————–

About The Author

Leave a Reply

You cannot copy content of this page

Scroll to Top