ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನಸು ಮನಸು ಬೆರೆತಾಗ
ಕನಸುಗಳು ನನಸಾದಾಗ
ದಿನವೆಲ್ಲ ಕ್ಷಣದಂತೆ ಕಳೆಯುವುದು
ಸುಡುವ ಸೂರ್ಯನ ಕಿರಣವು ಬೆಳದಿಂಗಳಂತೆ ಎನಿಸುವುದು
ಬದುಕು ಸಂಭ್ರಮದಿ ಸಾಗುವುದು ಮಲ್ಲಿಗೆಯ ಕಂಪು ಮನದಿ
ಸುಳಿದಾಡುವುದು
ಖುಷಿಯ ಹೊಂಗಿರಣ ಎಲ್ಲೆಲ್ಲೂ ತೋರುವುದು
ಬದುಕೊಂದು ಜಾತ್ರೆಯಂತೆ ಕಳೆದು ಹೋಗುವುದು
ದಿನ ದಿನವು ವಸಂತ ಕಾಲದಂತೆ
ಕೋಗಿಲೆಯ ಗಾನ ಕಿವಿಯ
ತುಂಬುವುದು
ಕೇಳುವ ಮಾತೆಲ್ಲ ಇಂಪಾದ ಹಾಡಂತೆ ಮನವ ಪುಳಕಿತಗೊಳಿಸುವುದು
ಮನಸ್ಸಿನ ಮಾಯೆಗೆ ಜಗ ಹೂವಿನ ತೋಟದಂತೆ ತೋರುವುದು
ತಂಪಾದ ತಂಗಾಳಿ ಎಲ್ಲೆಲ್ಲೂ ಬೀಸುವುದು
ಮನದಿ ಖುಷಿಯ ಚಿಲುಮೆ ಚಿಮ್ಮುವುದು
ಜಗದ ತುಂಬೆಲ್ಲ ಕಾಂತಿ ಹೊಮ್ಮುವುದು
ಕಾಮನ ಬಿಲ್ಲು ಎಲ್ಲೆಲ್ಲೂ ತೋರುವುದು


About The Author

1 thought on “ನಾಗರಾಜ ಜಿ. ಎನ್. ಬಾಡ ಕವಿತೆ-ಮಾಯೆ”

  1. ಬದುಕು ಒಂದು ಸುಂದರ ಸಂಭ್ರಮ. ಅದು ಎಲ್ಲರ ಅನುಭವದ ಪರಿ.ದಿನದ ಆರಾಧನೆಯೂ ಬದುಕೇ. ಅಂದುಕೊಂಡಂತೆ ಸಾಗಿದರೆ ಅದು ಸಂತಸವಾಗಿ ಕಳೆದು ಹೋಗುವುದು.ವಸಂತದ ಚಿಗುರಲಿ ಕೋಗಿಲೆ ಹಾಡಲಿ ಮಾತು ಇಂಪಾಗುವುದು. ಮನ ತಂಪಾಗುವುದು. ಕಾಣುವ ಜಗ ಸುಂದರವಾಗುವುದು.ನೋಡುವ ನೋಟ ಆಪ್ತವಾಗಬಲ್ಲದು. ಒಂದು ಸಾರ್ಥಕತೆಯ ಅನುಭೂತಿಯಾಗಿ ಖುಷಿಯಾಗಿ ಉಳಿಯಬಲ್ಲದು. ಬದುಕೆಂದರೆ ಎಲ್ಲವೂ ಹೌದು ಎನ್ನುವ ಸಾಲುಗಳು ಈ ಕವನದ ವಿಶಿಷ್ಟತೆ.

    ನಾಗರಾಜ ಬಿ.ನಾಯ್ಕ
    ಹುಬ್ಬಣಗೇರಿ.
    ಕುಮಟಾ.

Leave a Reply

You cannot copy content of this page

Scroll to Top