ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇದೀಗ ಬಂದ ಸುದ್ದಿ
ಇಂದು ಬೆಳಗಿನ ಜಾವ ಅಮಾವಾಸ್ಯೆಯ ದಟ್ಟವಾದ ಕಾಡಿನ ಕತ್ತಲಿನ ಅವಳ ಎದೆಯೊಳಗೆ ಕೊರೆದು
ಸಾಗಿದ ಕಾರೊಂದು
ಸುರಂಗ ಮಾರ್ಗದೊಳು ಒಳಹೊಕ್ಕು
ರವ್ವನೇ ಹಾದು ಹೋಯಿತು
ಕರ್ಣ ಮಧುರ ಇಂಪನದಲಿ
ತಲ್ಲೀಣ ಮನ ಕೂಗಿ ಕರೆಯಿತು
ದೂರದಲಿ
ತಿರುಗಿ ನೋಡದ
ಬಹು ಅವಸರದ ಸಂಗಾತಿಯ ಕರೆಗೆ ಓಗೊಟ್ಟು ಸಾಗಿತು
ಕೂಗಿದ ಧ್ವನಿಯು ಹಿಂತಿರುಗಿ ಬಡಿದ ಬರ ಸಿಡಿಲು
ಉದರದೊಳ್ ನಾಟಿ
ಹೊರಬಂದ ರಭಸಕ್ಕೆ
ಒಳಗಿರುವ ಬ್ರೂಣ
ಹೊರಬಂದು ಬಿಕ್ಕಿತು
ಪ್ರಜ್ಞೆ ತಪ್ಪಿ ಬಿದ್ದ ತಾಯನ್ನು
ಎದೆಗೆ ಅವಚಿಕೊಂಡು ಕೂಗಿಯೇ ಕೂಗಿತು

ಹಾದು ಹೋದ ಕಾರಿನ ಮಾಲಿಕ ಮಂಗ ಮಾಯ
ಊರ ಜನರೆಲ್ಲ ವಿಡಿಯೋ ಕ್ಯಾಮರಾದಲ್ಲಿ ತಲ್ಲೀಣ
ಗುಸು ಗುಸು ಸಪ್ಪಳ
ಎಚ್ಚರಾದ ಅವ್ವ ಉಸಿರೊಳಗೆ
ಉಸಿರಾದ ಬ್ರೂಣವನು ಮತ್ತೆ
ಮಡಿಲೊಳಗೆ ಹಾಕಿ ಹೊಲೆದು ಕೊಂಡಳು ತನ್ನದೇ ಕೈಗಳಿಂದ
ನವೀರಾದ ಕೈಗಳನ್ನು ಸ್ಪರ್ಶಿಸುತ್ತ ಚುಚ್ಚಿಕೊಂಡಳು ಸೂಜಿ
ಕರೆದು ಕೂಗಿದ ನೋವಿನ
ಮುಂದೆ
ಇದಾವ ನೋವೆಂದು
ಅರಿತು ಹೆಜ್ಜೆ ಹಾಕಿದಳು ತೂಕಡಿಸುತ್ತ
ಸೋರಿ ಹೋದ
ಶಬ್ದ ರಕ್ತವು ಕೆಸರು ಮುದ್ದೆಯಾಯಿತು
ಹದವಾದ ಹೊಲ ಮಾಡಿ
ರಂಟೆ ಕುಂಟೆ ಮಾಡಿ
ಮಡಿ ಕಟ್ಟಿ ಮೈಲಿಗೆ ತೊಳೆದು ಕೊಂಡಳು
ತನ್ನದೇ ಕಂಬನಿಯ ಕಡಲಿನಲಿ
ಮಿಂದೆದ್ದಳು
ಅಹೋರಾತ್ರಿ ಭಯ ಭಕ್ತಿಯಿಂದ ಭಜಿಸಿದ
ಶಿವನ ಕಂಗಳು ತೆರೆದು ನೋಡಲಿಲ್ಲ
ಸುಟ್ಟು ಕೊಂಡಳು ಜೀವಂತ
ಹೆಣಕ್ಕೆ ಸಿಂಗರಿಸುತ್ತಾ
ಕಾಷ್ಠವನ್ನು ಕಡಿ ಕಡಿದು ಒಟ್ಟುತ್ತ
ಆಹುತಿಯಾದಳು
ವಿಡಿಯೋ ಮಾಡುತ್ತ ನಿಂತ ಪ್ರೇಕ್ಷಕರು ಮಂತ್ರ ಮುಗ್ಧರಾಗಿ ನೋಡುತ್ತ
ನಿಂತು ಕೊಂಡೇ ಬಿಟ್ಟರು
ಹಚ್ಚ ಬೇಡಮ್ಮ ಬೆಂಕಿ
ಎಂದು ಚಿರುತ್ತಿರುವ ಬ್ರೂಣಾವಸ್ಥೆಯ ಮಗು
ಅದು ಹೇಗೆ ?
ಬದುಕಿ ಉಳಿಯಿತೆಂದು
ಮತ್ತೆ ಗುಜು ಗುಜು ಶಬ್ದ
ಕೇಳಿ ಸುಮ್ಮನಾದ ಭಾವ ಭ್ರೂಣ
ನಕ್ಕು ಸುಮ್ಮನಾಗಿ ಬಿಟ್ಟಿತು
ಹಾಯಿಸಿ ಹೋದ ಕಾರಿನ ಮಾಲಿಕ
ಹಿಂತಿರುಗಿ ಬಂದು ಎತ್ತಿಕೊಂಡು ಸಾಗಿದ ರೀತಿ ನಿಜಕ್ಕೂ ಅವಿಸ್ಮರಣೀಯ …..


About The Author

Leave a Reply

You cannot copy content of this page

Scroll to Top