ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೀನು ಮರೆತು ಬಿಟ್ಟೆ
ಏನೋ ಕಳೆದು ಹೋದ
ಮುಗ್ಧ ಬಿಳಿ ನಗೆ

ಆಯ್ದು ಕೊಂಡೆ
ಹವಳ ಮುತ್ತು ರತ್ನ
ಹುಡುಕುತ್ತಿರುವೆ ಪ್ರೀತಿ

ಒಡೆದ ಚಿಪ್ಪು
ಕಳೆದ ಸಮಯ
ನೆನಪು ನಂದಾ ದೀಪ

ಅವಸರ ಆತಂಕ
ಭಯ ಭೀತಿ ನಡುಕು
ಕಾಣುತಿದೆ ಭರವಸೆ ಬೆಳಕು

ತಿರುಗುವ ಭೂಮಿಗೋಳ
ಭೇಟಿ ಆಗಬಹುದು ಒಮ್ಮೆ
ಹಂಚಿಕೊಂಡರಾಯಿತು ಬಿಡಿ

ಕಳೆದುಕೊಳ್ಳುವುದು ಬೇಡ
ಸ್ನೇಹ ಪ್ರೀತಿ ಸಮಯ
ಕೂಡಿ ಸಾಗೋಣ ಒಲವ ಹೊತ್ತು


About The Author

6 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಕವಿತೆ”ಒಡೆದ ಚಿಪ್ಪು””

  1. ಭರವಸೆಯ ಬೆಳಕು ಹೊತ್ತು…ಕೂಡಿ ಸಾಗೋಣ… ಎನ್ನುವ ಸಂದೇಶ ಹೊತ್ತ
    ಕವನ ಅರ್ಥವತ್ತಾಗಿದೆ…

    ಸುಶಿ

  2. ಶುಭೋದಯ……..
    *ಕಳೆದು ಕೊಳ್ಳುವುದು ಬೇಡ*
    *ಸ್ನೇಹ ಪ್ರೀತಿ ಸಮಯ*
    *ಕೂಡಿ ಸಾಗೋಣ ಒಲವ ಹೊತ್ತು*….

    –ಕವಿ ಹೃದಯದ ಸವಿ ಆಶಯ
    ಸಾಕಾರವಾಗಿ ನೆನಪ ನಂದಾದೀಪದ
    ಕನಸು ನನಸಾಗಲಿ….. “ಇಂದು”

Leave a Reply

You cannot copy content of this page

Scroll to Top