ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಶಾಲೆಯ‌ಮುಂದೆ
ನಿಂದ ಮಕ್ಕಳ ದಂಡು
ನಕ್ಷತ್ರಗಳು
ಇಳಿದಂತೆ ಧರೆಗೆ
ಬಾನು ಬರಿದಾಗಿದೆ

ಹೆಸರೊಂದನು
ಕೊಡದಿರು ಹೊಳಗೆ
ಹರಿಯುತಿರೆ
ಮನದ ಮಲಿನತೆ
ಕಳೆಯುತಿರೆ ಸದಾ

ಸಂತಸವದು
ಎದೆಯೊಳಿರಬೇಕು
ಬಡತನವ
ಕಾಣಿಸದೆ ಹೊರಗೆ
ತುಂಬಿರಲಿ ಒಳಗೆ

ಜಗದ ನಿಂದೆ
ಹಿಂದೆ ಬಿಟ್ಟು ಸತತ
ಸಾಗು ನಿಲ್ಲದೆ
ನಿಂದೆ ಸ್ತುತಿಯ ಕೇಡು
ಬೆನ್ನು ಹಿಂದೆ ಇರೋದೆ

ಕುಡಿದಮಲು
ಇಳಿಯದ ಹೊರತು
ಅರಿವಾಗದು
ಇಳಿದ ಮೇಲೆ ಎಲ್ಲ
ಹೊರಟು ಹೋಗುವದು

ಸರಕಾರವ
ನಂಬಿದ ರೈತ ಕಾದ
ಪರಿಹಾರಕೆ
ಬಂದಿತು ಸಹಕಾರ
ರೈತ ಹೋದ ಕಾಲಕೆ


ಸಾಲವ ಮಾಡಿ
ಮಗನ ಕಲಿಸಿದ
ಎತ್ತರಕೇರಿದ
ಸುತ ಆಗಸಕೇರಿ
ಅಪ್ಪ ಈಗ ಅನಾಥ


ಸತ್ತವರನು
ಬೇಗ ಮರೆವ ನಾವು
ನೆನೆಯಬೇಕು
ನಮ್ಮ ಪಾಳಿ ಬಂದಾಗ
ಜಗ ಕಾಣೋದೆ ಹಾಗೆ


ಮಾಡಿದ‌ಪಾಪ
ಬೆನ್ನು ಹತ್ತೊ ಬೇತಾಳ
ಬಿಡಲಾರದು
ಸರಳಕೆ ನಮ್ಮನು
ತೆರಬೇಕು ತಗಾದೆ

೧೦
ಅಪ್ಪ ಬೆಳೆದ
ಮರ ನೀಡಿತು ಹಣ್ಣು
ಮಗನಕಾಲ
ಕಡಿದ ಗಿಡವು ತಾ
ಆಯತೀಗದು ಮಣ್ಣು


About The Author

Leave a Reply

You cannot copy content of this page

Scroll to Top