ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರತಿ ಮಾತಿಗೂ
ಜವಾಬು ಇರಲು ಸಾಧ್ಯವಿಲ್ಲಬಿಡು
ಪ್ರತಿ ಪ್ರೇಮವೂ
ಖರಾಬು ಆಗಲು ಸಾಧ್ಯವಿಲ್ಲನಿಡು

ಪಾನಪ್ರಿಯರೆಲ್ಲ ನಶೆಯಲಿ ಓಲಾಡಬಹುದು
ಪ್ರತಿ ನಶೆಯೂ
ಶರಾಬು ಆಗಲು ಸಾಧ್ಯವಿಲ್ಲಬಿಡು

ಯಾರೊಂದಿಗೋ
ಕಾರಣವಿಲ್ಲದೆ ಬೆನ್ನು
ತಿರುಗಿಸಿ ನಡೆಯುತ್ತೇವೆ
ಅದೇ ಸಂಬಂಧ ಬೆಸುಗೆ
ಅಧಿಕ ತೀವ್ರತೆ
ಇರದೆ ಇರಲು ಸಾಧ್ಯವಿಲ್ಲಬಿಡು

ಯಾರೋ ದೇವರಲಿ
ಬೇಡಿದರಂತೆ ತಮ್ಮ ಸಾವನ್ನು..
ಸಾವನ್ನು ವರವಾಗಿ
ನೀಡಿದ ದೇವನ ಉತ್ತರವಿದು “
ನಿನ್ನ ಜೀವನ ವರವಾಗಿ
ಬೇಡಿದವರಿಗೇನು ಕೊಡಲಿ? ‘
ದೇವನಿಗೂ ಗೊಂದಲ
ಇಲ್ಲದೇ ಇರಲು ಸಾಧ್ಯವಿಲ್ಲಬಿಡು

ಪ್ರತಿ ಮನುಜನ ಹೃದಯ
ಖರಾಬಿಲ್ಲ ಬಿಡು
ಪ್ರತಿ ಮನುಜ
ಕೆಟ್ಟವನೂ ಅಲ್ಲ ಬಿಡು
ಒಮ್ಮೊಮ್ಮೆ ಎಣ್ಣೆ ಮುಗಿದೂ
ದೀಪ ನಂದಿರಬಹುದು…
ಪ್ರತಿಬಾರಿಯೂ ಗಾಳಿಯ
ತಪ್ಪೆನ್ನಲು ಸಾಧ್ಯವಿಲ್ಲಬಿಡು.


About The Author

5 thoughts on “ಗುಲ್ಜಾರ್ ಅವರ ಕವಿತೆಯ ಕನ್ನಡಾನುವಾದ ಅನಸೂಯ ಜಹಗೀರದಾರ”

Leave a Reply

You cannot copy content of this page

Scroll to Top