ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಭರವಸೆಯ ಹೊನ್ನ ಬೆಳಕ ಬೀರುತˌˌˌˌ
ಬರುತಿಹ ನೇಸರ ಹೊನ್ನ ಕಿರಣವ ಸೂಸುತˌˌ

ಮುಚ್ಚಿದ ಬೊಗಸೆಯ ಅರಳಿಸಬೇಕಿದೆˌˌ
ಅರಳುವ ಬದುಕಿಗೆ ಬೆಳಕು
ಮೂಡಬೇಕಿದೆ ˌˌˌ

ಬಂಡೆಯಡಿ ಸಿಲುಕಿದ ಬೀಜಕ್ಕೆ
ಸ್ಪೂರ್ತಿಯದುˌˌ
ಭಾಸ್ಕರನ ಭರವಸೆಯ
ಬೆಳ್ಳಿಕಿರಣವದುˌˌ

ಕಗ್ಗತ್ತಲ ಕಾಡಿನಲ್ಲಿ ಸೂರ್ಯರಶ್ಮಿಯೆ ಜ್ಯೋತಿˌˌ
ಕತ್ತಲು ಕವಿದ ಮನಕೆ ಬೇಕು
ಭರವಸೆಯ ಪ್ರೀತಿˌˌ

ಅಂಧಕಾರವ ಸೀಳಿ ಬರುವ ರವಿಕಿರಣವುˌˌˌ
ಆಗಲಿ ಎಮ್ಮ ಮನಗಳಿಗೂ
ಆಶಾದೀಪವುˌˌ

ಬಂಡೆ ಸೀಳಿ ಬೆಳೆದು ಅರಳಿ ನಿಂತ ಸುಮದಂತೆ
ಗೆಲ್ಲಬೇಕಿದೆ ನಾವು ಮರೆತೆಲ್ಲ
ಚಿಂತೆ ˌˌ

ಬನ್ನಿ ಪ್ರಕ್ರತಿದೇವಿಯ ಆರಾಧಿಸೋಣˌˌ
ನಿತ್ಯ ಹೊಸ ಪಾಠವ ನಿಸರ್ಗದಿಂದಲೇ ಕಲಿಯೋಣˌˌ


About The Author

2 thoughts on “ಮಧುಮಾಲತಿ ರುದ್ರೇಶ್ ಕವಿತೆ “ಹೊಸಬೆಳಕು””

  1. ತುಂಬು ಧನ್ಯವಾದಗಳು..ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ತಮ್ಮ ಕಾರ್ಯ ಶ್ಲಾಘನೀಯ

  2. ಕಡೆಯ ಎರಡನೆಯ ಪದ್ಯದಲ್ಲಿರುವ ” ಬಂಡೆ ಸೀಳಿ ಅರಳುವ ಸುಮವು ” ತಾತ್ಕಾಲಿಕ ಪ್ರೇಮವನ್ನು ಸೂಚಿಸುತ್ತದೆ. ಏಕೆಂದರೆ ಬಂಡೆ ಸೀಳಿದ ಸಸಿ ಬಹಳದಿನ ಉಳಿಯೋಲ್ಲ
    ೦ ೦೦೦೦೦೦೦೦೦ ೦
    ಜಿ.ಎಸ್.ಪ್ರಕಾಶ್,ಬೆಂ ಗಳೂರು
    ೦೦೦

Leave a Reply

You cannot copy content of this page

Scroll to Top