ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯ ದರ್ಪಣ, ಗಝಲ್

ಗಜಲ್ ಜುಗಲ್ ಬಂದಿ

ತರಹೀ ಗಜಲ್ : ನಯನ. ಜಿ. ಎಸ್ ಅವರ ಊಲಾ ಮಿಸ್ರಾ”

ಅವರಿವರನ್ನು ಜರೆಯುತ್ತಾ ನಾಳೆಗಳ ಭವ್ಯ ಸಾರವನ್ನು ಹಿಂಡುತ್ತಿದ್ದೇನೆ
ಅಗಮ್ಯವನ್ನು ನೆನೆಯುತ್ತಾ ಈ ಕ್ಷಣದ ನಲಿವನ್ನು ಕಳೆದುಕೊಳ್ಳುತ್ತಿದ್ದೇನೆ

ಅಲಕ್ಷಿಸುತ ಮುನ್ನಡೆಯಬೇಕು ಅನ್ಯರ ದೋಷಗಳನ್ನು ನಾವಿಲ್ಲಿ
ಅರಿವಿರದ ವ್ಯಾಜ್ಯಗಳ ಕಟಕಟೆಯಲ್ಲಿರಿಸಿ ಕಾಲವನ್ನು ವ್ಯಯಿಸುತ್ತಿದ್ದೇನೆ

ಅಂತರವನ್ನು ಬಯಸಿದವರ ಮನದಲ್ಲಿ ಆತ್ಮೀಯತೆಗೆಲ್ಲಿರುವುದು ಸ್ಥಾನ
ಎಳೆದು ಮುಚ್ಚಿದ ಕದದ ಬಳಿ ಕುಳಿತು ಭವಿಷ್ಯವನ್ನು ನಿರ್ಲಕ್ಷಿಸುತ್ತಿದ್ದೇನೆ

ಪ್ರಬುದ್ಧ ಮನದಲ್ಲಷ್ಟೇ ನಡೆಯುವುದು ನಿರ್ಲಿಪ್ತತೆಯಿಂದ ನಿದಿಧ್ಯಾಸನ
ಪ್ರಕ್ಷುಬ್ಧತೆಯ ಪರಾಕಾಷ್ಠೆಯಲ್ಲಿ ತಪಿಸುತ ಚಿತ್ತಸ್ವಾಸ್ಥ್ಯವನ್ನು ಸುಡುತ್ತಿದ್ದೇನೆ

ಉಡಿಯೊಳಗೆ ಇರಿಸಿದ ಇಂಗಳವದು ದಹಿಸದಿರುವುದೇ ಒಳಗೊಳಗೆ
ಹುಚ್ಚು ಮನಸ್ಸಿನ ಹೊಯ್ದಾಟದಲ್ಲಿ ‘ವಿಜಯ’ವನ್ನು ವರ್ಜಿಸುತ್ತಿದ್ದೇನೆ.
ವಿಜಯಪ್ರಕಾಶ್. ಕೆ

ಗಜಲ್ ಜುಗಲ್ ಬಂದಿ Read Post »

ಕಾವ್ಯಯಾನ

ಗುರುವೆಂಬ ಬೆಳಕಿಗೆ.ವಿಷ್ಣು ಆರ್. ನಾಯ್ಕ

ಕಾವ್ಯ ಸಂಗಾತಿ ಗುರುವೆಂಬ ಬೆಳಕಿಗೆ ವಿಷ್ಣು ಆರ್. ನಾಯ್ಕ ಬಾ.. ದೇವ…ಗುರುದೇವಹೇ ದೇವ…ಪ್ರಭು ದೇವನೀ ದೇವ ಕನಿಕರಿಸು, ನೀ ಬೇಗ ಬಾವಿದ್ಯೆ ಸಿರಿ ವರವನ್ನು ಕೊಡು ಬೇಗ ಬಾ ಆದರ್ಶದುಸಿರಾಗಿ, ಮುನ್ನಡೆವ ಪಥವಾಗಿಗೈದ ಕಾರ್ಯದ ಕನಸ ನನಸಾಗಿ  ಬಾ..ಮೈದಳೆದು ಗುರುವೇ ನೀ ವರವಾಗಿ ಬಾ.. ಮಕ್ಕಳೆನ್ನುವ ಬಳ್ಳಿ  ಹೂ, ಮೊಗ್ಗು, ಹಣ್ಣುಗಳುಅಕ್ಕರ ರೂಪದಿ ತೊನೆವ ಶಕುತಿ ಕೊಡು ಬಾ..ನಕ್ಕ ಮೊಗ್ಗಿಗೆ ಜೀವ ನೀ ತುಂಬು ಬಾ… ವಿದ್ಯೆಯೆಂಬ ಶುಭ್ರ ವಾರಿಧಿಯ ಮಧ್ಯದೊಳುಮದದ ಮತ ಮೌಢ್ಯವನೆಲ್ಲ ನೀ ನೀಗು ಬಾ..ಸಾಧನೆಯ ಸಮರಸವ  ನೀ ತೋರು ಬಾ.. ರಾಜಕೀಯದ ರಂಗು ಶಿಕ್ಷಣದಿ ತುಂಬಿರಲುರಾಜಸದ ಕೊಳೆಯನ್ನು ಕಳೆ ಬೇಗ ಬಾ..ಬಿಜ್ಜೆಯೊಳು ಸಜ್ಜನತೆ ನೀ ತುಂಬು ಬಾ.. ನೀತಿ ಮೌಲ್ಯಗಳನೆಲ್ಲ ಹೆಡೆಮುರಿಯ ಕಟ್ಟಿರುವರೀತಿ ರಾಕ್ಷಸರನ್ನು ನೀನಳಿಸು ಬಾ..ಭೀತ ಮನಗಳನೆಲ್ಲ ನೀ ಮುದಗೊಳಿಸು ಬಾ ಧನವೆಂಬ ದಾನವನ ದುಷ್ಕಾರ್ಯವಳಿಸುತಲಿಜನಕೆ ಘನ ವಿದ್ಯೆಯನು ನೀ ಹಂಚು ಬಾ..ಮನದಿ ಕಾಂತಿಯ ತುಂಬಿ ಜಗ ಬೆಳಗು ಬಾ ಚೇತನವನಿಕೇತನದ ವರವಾಗಿ ರೂಪಿಸುವಗತದ ಬದುಕಿಗೆ ನೀ ಬಲ‌ ನೀಡು ಬಾ..ಋತದ ಕಾರ್ಯದಿ ಜಗವ ನೀ ಕಟ್ಟು ಬಾ..

ಗುರುವೆಂಬ ಬೆಳಕಿಗೆ.ವಿಷ್ಣು ಆರ್. ನಾಯ್ಕ Read Post »

You cannot copy content of this page

Scroll to Top