ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಜಲ್

ಈರಪ್ಪ ಬಿಜಲಿ

ಕಡುಕೋಪದ ಆ ನಿನ್ನ ದೃಷ್ಟಿ ಎದೆಯ ಸುಡುತಿದೆ ನೋಡು
ಕೇಡು ಮಾಡದೆ ಶಾಂತನಾಗಲು ಮನ ಬೇಡುತಿದೆ ನೋಡು ||

ದಕ್ಷನು ನೀಡಿದ ಆಹ್ವಾನ ಸ್ವೀಕರಿಸಲಿಲ್ಲ
ಏಕೆ
ಸತಿ ಪಾರ್ವತಿಯ ಚಿತ್ತ ತವರಿನ ಕಡೆಗೆ ಓಡುತಿದೆ ನೋಡು

ಸುರರೆಲ್ಲ ಯಜ್ಞ ಯಾಗಾದಿಯಲ್ಲಿ ಪಾಲ್ಗೊಂಡಿಹರಲ್ಲ
ಕೈಲಾಸಪತಿಯ ಅನುಪಸ್ಥಿತಿ ವಿಷ್ಣು,ಬ್ರಹ್ಮರ
ಕಾಡುತಿದೆ ನೋಡು

ಮದವೇರಿದ ಮಾವನ ಗರ್ವವು ಸೌಜನ್ಯದ
ಗಡಿ ದಾಟಿದೆಯಲ್ಲ
ಮದ್ದಾನೆಯ ಹುಟ್ಟಡಗಿಸಲು ವೇದಿಕೆ ಸಿದ್ದ ಆಗುತಿದೆ ನೋಡು

ಮುಕ್ಕಣ್ಣ ಮೂರನೆ ಕಣ್ಣು ಬಿಡಲು ಭೂಕಂಪ ಗುಡುಗು ಸಿಡಲಲಿ ಬಿಜಲಿ ಕೆಂಬೆಳಕು
ತಕ್ಷಣ ಉದಿಸಿದ ವೀರಭದ್ರನ ರೋಷ ಅಜ್ಜನ ನೆತ್ತರು ಹೀರುತಿದೆ ನೋಡು ||


About The Author

Leave a Reply

You cannot copy content of this page

Scroll to Top