ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಯಾನ

ಗಜಲ್

ರತ್ನರಾಯಮಲ್ಲ

ಮಧುಶಾಲೆಯತ್ತ ನಡೆಯುತಿರುವೆ ನೆಮ್ಮದಿಗಾಗಿ
ಮದಿರೆಯನ್ನು ಕುಡಿಯುತಿರುವೆ ನೆಮ್ಮದಿಗಾಗಿ

ಸಾಕಿ ಕೈಯಲ್ಲಿ ಮಧುಬಟ್ಟಲು ನೋಡೊದೆ ಚಂದ
ಷೇರ್-ಅಶಅರ್ ಬರೆಯುತಿರುವೆ ನೆಮ್ಮದಿಗಾಗಿ

ಮದಿರಾಲಯವು ತುಳುಕುತಿದೆ ಮಧುದಾಸರಿಂದ
ಗಾಲಿಬ್ ಅವರನ್ನು ಅರಿಯುತಿರುವೆ ನೆಮ್ಮದಿಗಾಗಿ

ನೋವಿಗೂ ನಗುತಿರಲು ಕಲಿಸುತಿದೆ ಮಧುಬನವು‌
ನನ್ನೊಳಗಿನ ನಾನನ್ನು ಹರಿಯುತಿರುವೆ ನೆಮ್ಮದಿಗಾಗಿ

ಮಧು ತುಂಬಿದ ಹೂಜಿಯೊಳಗೆ ಇರುವನು ‘ಮಲ್ಲಿ’
ನೆನ್ನೆಯ ದಿನಗಳನ್ನು ಮರೆಯುತಿರುವೆ ನೆಮ್ಮದಿಗಾಗಿ


About The Author

Leave a Reply

You cannot copy content of this page

Scroll to Top