ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಅಂಬೇಡ್ಕರ್ ಜಯಂತಿ ವಿಶೇಷ ಬರಹ ಅಸ್ಪೃಶ್ಯತೆಯ ವಿರುದ್ದ ಅಂಬೇಡ್ಕರ್ ರವರ ಹೋರಾಟ ೧೯೨೭ರಿಂದ ೧೯೩೨ರವರೆಗೆ, ಅಹಿಂಸಾತ್ಮಕ ಆಂದೋಲನಗಳ ಮುಂದಾಳತ್ವ ವಹಿಸಿ ಅಸ್ಪೃಶ್ಯರಿಗೆ ದೇವಾಲಯ ಪ್ರವೇಶದ ಹಕ್ಕು, ಸಾರ್ವಜನಿಕ ಕೆರೆ, ಬಾವಿಗಳಿಂದ ನೀರು ಸೇದುವ ಹಕ್ಕು ಇತ್ಯಾದಿಗಳಿಗಾಗಿ ಹೋರಾಡಿದರು. ಇವುಗಳಲ್ಲಿ ನಾಸಿಕದಲ್ಲಿಯ ಕಾಳ ರಾಮನ ದೇವಸ್ಥಾನ ಮತ್ತು ಮಹಾಡದ ಚೌಡಾರ್ ಕೆರೆಯ ವಿಷಯವಾಗಿ ಅಸ್ಪೃಶ್ಯರನ್ನು ಹೊರಗಿಟ್ಟಿರುವರ ವಿರುದ್ಧ ಮಾಡಿದ ಆಂದೋಲನಗಳು ಗಮನಾರ್ಹವಾಗಿವೆ. ಸಹಸ್ರಾರು ಅಸ್ಪೃಶ್ಯ ಸತ್ಯಾಗ್ರಹಿಗಳು ಭಾಗವಹಿಸಿದ ಈ ಅಹಿಂಸಾತ್ಮಕ ಚಳುವಳಿಗಳಿಗೆ ಸವರ್ಣೀಯರು ಹಿಂಸಾತ್ಮಕವಾಗಿ ಪ್ರತಿಕ್ರಿಯಿಸಿದರು. ನ್ಯಾಯಾಲಯದ ಕಟ್ಟೆ ಹತ್ತಿದ ಚೌಡಾರ್ ಕೆರೆಯ ಚಳುವಳಿಯು, ಅನೇಕ ವರ್ಷಗಳ ನಂತರ, ಕೆಳವರ್ಗಗಳ ಪರವಾಗಿ ವಿಜಯ ಸಾಧಿಸು ವುದರೊಂದಿಗೆ ಪರ್ಯವಸಾನ ಹೊಂದಿತು. ಅಸ್ಪೃಶ್ಯರನ್ನು ಸಮಾಜ ನಡೆಸಿಕೊಳ್ಳುತ್ತಿದ್ದ ಕ್ರೂರ ರೀತಿಗೆ ಮೂಲ ಕಾರಣ ‘ಮನುಸ್ಮೃತಿ’ ಎಂದು ಅಂಬೇಡ್ಕರ್ ನಂಬಿದ್ದರು. ಮನುಸ್ಮೃತಿಯನ್ನು ಇದೇ ಚಳುವಳಿಯಲ್ಲಿ ವಿಧ್ಯುಕ್ತವಾಗಿ ದಹನ ಮಾಡಲಾಯಿತು. ಈ ಕೃತಿಯನ್ನು ಹೀಗೆ ಸಾರ್ವಜನಿಕವಾಗಿ ಅವಮರ್ಯಾದೆ ಮಾಡುವುದರ ಮೂಲಕ ಅಂಬೇಡ್ಕರರ ಅನುಯಾಯಿಗಳು ಸಮಾನತೆಯ ಹಕ್ಕು ಪ್ರತಿಪಾದನೆ ಮಾಡಬಯಸಿದ್ದರು. ಆದರೆ, ಹಿಂದೂ ಧರ್ಮದ ಅನುಯಾಯಿಗಳಲ್ಲಿ ಮನುಸ್ಮೃತಿಯ ಮಹತ್ವವೇನು ಎಂಬುದೇ ಅಸ್ಪಷ್ಟ ಹಾಗೂ ವಿವಾದಿತ ವಿಷಯವಾದ್ದರಿಂದ, ಅದರಲ್ಲಿಯೂ ಮುಖ್ಯವಾಗಿ ಮನುಸ್ಮೃತಿಯನ್ನು ಹಿಂದೂ ಧರ್ಮಶಾಸ್ತ್ರಗಳಲ್ಲಿ ಒಂದಾಗಿ ಪರಿಗಣಿಸದೇ ಇದ್ದು, ಹಳ್ಳಿಗಾಡುಗಳಿಂದ ಹೊರಗೆ ಅದಕ್ಕೆ ಧಾರ್ಮಿಕ ಮಹತ್ವವೂ ಇಲ್ಲದಿದ್ದುದರಿಂದ, ಈ ಉದ್ದೇಶ ನೆರವೇರಿತೋ ಇಲ್ಲವೂ ಎಂಬುದು ಚರ್ಚಾಸ್ಪದ. ಮೊದಲೇ ತಮ್ಮ ಚಟುವಟಿಕೆಗಳಿಂದ ಸಂಪ್ರದಾಯಶೀಲ ಹಿಂದೂಗಳ ಅಸಮಾಧಾನವನ್ನು ಗಳಿಸಿದ್ದ ಅಂಬೇಡ್ಕರ್ , ೧೯೩೧-೩೨ ರಲ್ಲಿ ಮತ್ತಷ್ಟು ಅಪ್ರಿಯರಾದರು. ಅವರೇ ಹೇಳಿಕೊಂಡಂತೆ, ಭಾರತದ ಹಿಂದುಗಳು ಅತ್ಯಂತ ದ್ವೇಷಿಸುವ ವ್ಯಕ್ತಿಯಾದರು. ಅಂಬೇಡ್ಕರ್ ದಲಿತರಿಗೆ ಪ್ರತ್ಯೇಕ ಚುನಾವಣಾ ಕ್ಷೇತ್ರಕ್ಕಾಗಿ ಪಟ್ಟು ಹಿಡಿದದ್ದೇ ಈ ಅಸಮಾಧಾನಕ್ಕೆ ಕಾರಣವಾಗಿತ್ತು. ಮಹಾತ್ಮ ಗಾಂಧಿ ಹಾಗೂ ಕಾಂಗ್ರೇಸ್ ಪಕ್ಷದ ಧೋರಣೆ ಇದಕ್ಕೆ ವಿರೋಧವಾಗಿತ್ತು. ಗಾಂಧಿ ಹಾಗೂ ಅಂಬೇಡ್ಕರರಲ್ಲಿ ಈ ವಿಷಯದ ಮೇಲೆ ಎರಡನೆಯ ದುಂಡು ಮೇಜಿನ ಪರಿಷತ್ತಿನಲ್ಲಿ ಚಕಮಕಿಯೂ ನಡೆದಿತ್ತು. ಹಿಂದೂ ಸಮಾಜದಿಂದ ಜಾತಿಪದ್ಧತಿ ಹಾಗೂ ತಾರತಮ್ಯ ವನ್ನು ನಿರ್ಮೂಲನ ಮಾಡುವ ಪರವಾಗಿದ್ದ ಗಾಂಧಿ, ದಲಿತರ ಹಿತರಕ್ಷಣೆಗಾಗಿ ದನಿಯೆತ್ತಿದ ಮೊದಲಿಗರಲ್ಲಿ ಒಬ್ಬರಾಗಿದ್ದರೂ, ಬ್ರಿಟಿಷರಿಗೆ ಈ ವಿಷಯದಲ್ಲಿ ಹಿಂದೂಗಳನ್ನು ಜಾತಿಯ ಆಧಾರದ ಮೇಲೆ, ರಾಜಕೀಯವಾಗಿ ಒಡೆಯಲು ಅವಕಾಶ ಕೊಡಬಾರದೆಂಬುದು ಅವರ ನಿಲುವಾಗಿತ್ತು. ೧೯೩೨ರಲ್ಲಿ ಬ್ರಿಟಿಷರು ಜಾರಿಗೆ ತಂದ ಕೋಮುವಾರು ಕಾನೂನಿನಲ್ಲಿ ಅಸ್ಪೃಶ್ಯರಿಗೆ ಪ್ರತ್ಯೇಕ ಕ್ಷೇತ್ರವನ್ನು ಮಂಜೂರು ಮಾಡಲಾಯಿತು. ಇದಕ್ಕೆ ಪ್ರತಿಭಟನೆಯಾಗಿ ಗಾಂಧಿ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡ ಫಲವಾಗಿ, ಅಂಬೇಡ್ಕರ್, ಕಾಂಗ್ರೇಸ್ ಮತ್ತು ಸನಾತನ ಹಿಂದೂ ಮುಖಂಡರೊಂದಿಗೆ ಚರ್ಚಿಸಿ, ಕೊನೆಗೂ ಪ್ರತ್ಯೇಕ ಕ್ಷೇತ್ರ ಹಾಗೂ ಕೋಟಾ ಬೇಡಿಕೆಯನ್ನು ಕೈಬಿಟ್ಟರು.ಇದಕ್ಕೆ ಪ್ರತಿಯಾಗಿ, ಕಾಂಗ್ರೆಸ್ ಪಕ್ಷವು, ಅಸ್ಪೃಶ್ಯರಿಗೆ ಪ್ರಾತಿನಿಧ್ಯವನ್ನು ಹೆಚ್ಚುಮಾಡಲು ಒಪ್ಪಿಕೊಂಡಿತು. ಹಿಂದೂ ಧಾರ್ಮಿಕ ಮುಖಂಡರುಗಳು ಅಸ್ಪೃಶ್ಯತೆಯ ಹಾಗೂ ಜಾತ್ಯಾಧಾರಿತ ತಾರತಮ್ಯದ ವಿರುದ್ಧವಾಗಿ ಹೆಚ್ಚು ಹೆಚ್ಚಾಗಿ ದನಿಯೆತ್ತ ತೊಡಗಿದರು. ಇಂದು ಡಾ. ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನ ಶಿಲ್ಪಿ ಎಂದು ಮುಕ್ತ ಕಂಠದಿಂದ ಹೇಳಲಾಗುತ್ತಿದೆ.ಇದೇ ವೇಳೆಗೆ ಸ್ವತಂತ್ರವಾದ ಅನೇಕ ದೇಶಗಳು ಸಾರ್ವಜನಿಕರ ಹಕ್ಕುಗಳನ್ನು ಕಾಪಾಡಲು ಅಸಮರ್ಥರಾದ ಹಿನ್ನೆಲೆಯಲ್ಲಿ ಭಾರತದ ಈ ಸಂವಿಧಾನ ಎದ್ದು ಕಾಣುತ್ತದೆ ಹಾಗೂ ಇದಕ್ಕೆ ಡಾ. ಅಂಬೇಡ್ಕರ್ ಕೊಡುಗೆಯನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳಲಾಗಿದೆ. ಜಾತಿ ಪದ್ಧತಿಯ ಪುನರ್ವಿಮರ್ಶೆ ನಡೆಸಲು ಸನಾತನಿ ಹಿಂದೂಗಳ ಅನಾಸಕ್ತಿಯಿಂದ, ಭ್ರಮನಿರಸನವಾದಂತೆ ಅನ್ನಿಸಿದ್ದು ಹಾಗೂ ಮಹತ್ವದ ರಾಜಕೀಯ ವಿಷಯಗಳಲ್ಲಿ ಗಾಂಧಿಯವರ ಅಭಿಪ್ರಾಯಗಳಿಗೆ ಮಣಿಯಬೇಕಾಗಿ ಬಂದದ್ದು, ಅಂಬೇಡ್ಕರರನ್ನು ಅಸಮಾಧಾನಕ್ಕೀಡು ಮಾಡಿತು. ಪ್ರತ್ಯೇಕ ಚುನಾವಣಾ ಕ್ಷೇತ್ರದ ವಿಷಯದಲ್ಲಿ ಎದುರಿಸಿದ ಪ್ರತಿಭಟನೆ ಮತ್ತು, ಕೆಲವು ದೇವಸ್ಥಾನಗಳಲ್ಲಿ ಅಸ್ಪೃಶ್ಯರಿಗೆ ಪ್ರವೇಶ ಇನ್ನೂ ನಿಷಿದ್ಧವಾಗಿರುವುದು ಭಾಗಶಃ ಇವುಗಳ ಫಲವಾಗಿ, ಅಂಬೇಡ್ಕರ್ ತಮ್ಮ ಯೋಜನೆಯನ್ನು ಬದಲಾಯಿಸಿದರು. ತಮ್ಮ ಅನುಯಾಯಿಗಳ ಜೀವನಮಟ್ಟವನ್ನು ಹೆಚ್ಚಿಸಿ ಕೊಂಡು , ರಾಜಕೀಯ ಅಧಿಕಾರವನ್ನು ಗಳಿಸುವತ್ತ ಲಕ್ಷ್ಯವಿಡಬೇಕೆಂದು ಆದೇಶಿಸಿದರು.ಜೊತೆಗೆ, “ಹಿಂದೂ ಧರ್ಮದಲ್ಲಿ ಅಸ್ಪೃಶ್ಯರ ಏಳಿಗೆ ಅಸಾಧ್ಯವಾದ್ದರಿಂದ ಅವರು ಬೇರೆಧರ್ಮಕ್ಕೆ ಮತಾಂತರಗೊಳ್ಳಬೇಕು”ಎಂಬ ಆಲೋಚನೆ ಮಾಡತೊಡಗಿದರು. ಇದಕ್ಕೆ ಹಿಂದೂ ಸಮಾಜ ದಿಂದ,ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಆ ವರ್ಷದಲ್ಲಿ ಅಂಬೇಡ್ಕರ್ ಖಾಸಗಿ ಜೀವನದಲ್ಲಿ ಕೆಲವು ಮಹತ್ವದ ಘಟನೆಗಳು ಘಟಿಸಿದವು: ಅಂಬೇಡ್ಕರರನ್ನು ಮುಂಬಯಿಯ ಸರಕಾರೀ ಕಾನೂನು ಕಾಲೇಜಿನ ಪ್ರಾಂಶುಪಾಲರಾಗಿ ನೇಮಕ ಮಾಡಿಕೂಳ್ಳಲಾಯಿತು. ನಂತರ ಅಂಬೇಡ್ಕರರು ತಮ್ಮದೇ ಆದ ಸ್ವಂತ ಮನೆ ಮಾಡಿ, ೫೦,೦೦೦ಕ್ಕೂ ಹೆಚ್ಚಿನ ಪುಸ್ತಕಗಳ ಗ್ರಂಥಾಲಯವನ್ನು ಕಟ್ಟಿಕೊಂಡರು. ಇದೇ ವರ್ಷ ಅವರ ಪತ್ನಿ ರಮಾಬಾಯಿಯವರು ಮರಣ ಹೊಂದಿದರು. ೧೯೦೮ರಲ್ಲಿ ಅವರ ಮದುವೆಯಾದಾಗ ಅಂಬೇಡ್ಕರ್ ವಯಸ್ಸು ಹದಿನಾರಾದರೆ, ಅವರ ಹೆಂಡತಿ ಕೇವಲ ಒಂಭತ್ತು ವರ್ಷದವರಾಗಿದ್ದರು. ಅವರಿಗೆ ಹುಟ್ಟಿದ ಐದು ಮಕ್ಕಳಲ್ಲಿ ಉಳಿದದ್ದು ಒಬ್ಬರೇ. ಅಂಬೇಡ್ಕರ್ ರವರು ಈ ಭೂಮಿ ಮೇಲೆ ಜನಿಸದಿದ್ದರೆ ಇಂದು ಅನೇಕ ಅಸ್ಪೃಷರ ಸ್ಥಿತಿ ಊಹಿಸಲೂ ಅಸಾಧ್ಯ. ಅಸ್ಪೃಶ್ಯ ರಿಗೆ ನ್ಯಾಯ ಒದಗಿಸಲು ಅವರು ಪಟ್ಟ ಶ್ರಮ ನಿಜಕ್ಕೂ ಶ್ಲಾಘನೀಯ. ಅವರ ನಡೆ ನುಡಿ ಆದರ್ಶ ಪ್ರತಿಯೊಬ್ಬರಿಗೂ ಆದರ್ಶಪ್ರಾಯ. *************************** ಆಶಾ ಸಿದ್ದಲಿಂಗಯ್ಯ .

Read Post »

ಅಂಕಣ ಸಂಗಾತಿ, ಕಾಲಾ ಪಾನಿ

ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-5 ಹ್ಯಾವ್ಲೊಕ್ ಲ್ಲಿ ನಮ್ಮ ರೆಸಾರ್ಟ್ ಹಿಂಭಾಗದ ಸಣ್ಣ ಖಾಸಗಿ ಬೀಚ್ ನ ಉದ್ದಕ್ಕೂ ಸರಸ್ವತಿ ಮತ್ತು ನಾನು ಎಷ್ಟು ದೂರ ನಡೆದೆವೋ ವಾಪಸ್ಸು ಬರಬೇಕೆಂದೇ ಅನಿಸಲಿಲ್ಲ.  ಮಕ್ಕಳು ಅಲ್ಲಿ ಇಲ್ಲಿ ಓಡಾಡಿಕೊಂಡು ಮೊಬೈಲಲ್ಲಿ, ಕ್ಯಾಮರಾದಲ್ಲಿ ಫೋಟೊ ತೆಗೆದುಕೊಳ್ಳುವುದರಲ್ಲೇ ಮಗ್ನರಾಗಿದ್ದರು. ಗಣೇಶಣ್ಣ ಸತೀಶ್ ಇಬ್ಬರೂ ಅಲ್ಲಿದ್ದ ಬೆಂಚ್ ಮೇಲೆ ಆರಾಮಾಗಿ ಅಲೆಗಳನ್ನು ನೋಡುತ್ತಾ ಕೂತರು. ನಾವು ತಿರುಗಿ ಬಂದರೂ ಮಕ್ಕಳಿಗೆ ರೂಮು ಸೇರಲು ಮನಸ್ಸೇ ಇಲ್ಲ. ಇನ್ನೂ ಸ್ವಲ್ಪ ಇನ್ನೂ ಸ್ವಲ್ಪ ಹೊತ್ತು ಎಂದು ಅಲ್ಲೇ ಇದ್ದುದರಿಂದ ನಾವೂ ಅಲ್ಲೇ ಕೂತು, ಅದು ಇದು ಮಾತು ಹಾಡು ಎಂದು ಹತ್ತೂವರೆಯವರೆಗೆ ಸಮಯ ಕಳೆದು, ಮರುದಿನ ಬೆಳಿಗ್ಗೆ ಎಂಟು ಗಂಟೆಯ ಒಳಗೆ ತಯಾರಾಗಲು ಹೇಳಿದುದರಿಂದ ಮಕ್ಕಳನ್ನು ಹೊರಡಿಸಿ ನಮ್ಮ ನಮ್ಮ ಕಾಟೇಜ್ ಸೇರಿದೆವು. ನಮ್ಮ ಮಕ್ಕಳು ಇಬ್ಬರಿದ್ದುದರಿಂದ ಎಲ್ಲಾ ಕಡೆ, ಅವರಿಗೆ ಪ್ರತ್ಯೇಕ ಕೊಠಡಿ ಅಥವಾ ಕಾಟೇಜ್ ಸಿಗುತಿತ್ತು. ಆದರೆ ಶ್ರೀಪಾದನಿಗೆ ಮಾತ್ರ ಪ್ರತೀ ಸಲವೂ ಅಪ್ಪ ಅಮ್ಮನ ಜೊತೆಯೇ ಅವರ ಕೋಣೆಯೊಳಗೆ ಇನ್ನೊಂದು ಹಾಸಿಗೆ ಹಾಸಿ ಕೊಡುತಿದ್ದರು. ಆ ಒಬ್ಬಳೇ ಬಂದ ಹುಡುಗಿಗೆ ಒಬ್ಬಳಿಗೇ ಒಂದು ಕೋಣೆ. ಇದು ಅನ್ಯಾಯ ಎಂದು ಶ್ರೀಪಾದನಿಗಿಷ್ಟು ಕೀಟಲೆ ಮಾಡುತಿದ್ದರು ಈ ಹುಡುಗಿಯರು. ಇನ್ನೊಮ್ಮೆ ಎಲ್ಲಾದರೂ ಹೋಗುವಾಗ ಅವನ ಟಿಕೇಟ್ ಬೇರೆಯೇ ತಗೊಳ್ಳಿ ಎಂದು ಅವನ ಅಪ್ಪ ಅಮ್ಮನಿಗೆ ಇವರ ಸಲಹೆ. ಪ್ರತಿಯೊಂದು ಕೋಣೆಗೂ ಪ್ರತೀ ದಿನ ಎರಡು ಲೀಟರಿನ ನೀರಿನ ಬಾಟಲ್ ಒದಗಿಸುತಿದ್ದರು. ಬೆಳಗ್ಗಿನ ತಿಂಡಿ ಮತ್ತು ರಾತ್ರಿಯ ಊಟ ನಾವು ಉಳಿದುಕೊಳ್ಳುವ ಹೊಟೇಲ್ ಅಥವಾ ರೆಸಾರ್ಟ್ ಗಳಲ್ಲೇ ಆಗುತಿತ್ತು. ಮದ್ಯಾಹ್ನದ ಊಟವನ್ನು ಆದಷ್ಟು ಒಳ್ಳೆಯ ಹೊಟೇಲ್ ಹುಡುಕಿ ಕರೆದುಕೊಂಡು ಹೋಗುತಿದ್ದರು. ಊಟ ತಿಂಡಿಗೆ ಎಲ್ಲೂ ಯಾವ ತೊಂದರೆಯೂ ಆಗಲಿಲ್ಲ. ಬೆಳಿಗ್ಗೆ ಎದ್ದು ಏಳೂವರೆಗೆ ತಯಾರಾಗಿ ಬೆಳಗಿನ ಉಪಹಾರ ತೆಗೆದುಕೊಂಡು ನಾವು ಹೋಗಲಿದ್ದಿದ್ದು ಅಂಡಮಾನ್ ನಲ್ಲಿ ಮಾತ್ರವಲ್ಲ ಇಡೀ ಏಷಿಯಾದಲ್ಲೇ ಸುಂದರ ರಾಧಾನಗರ್ ಬೀಚ್ ಗೆ. ಅಲ್ಲಿ ಸ್ನಾನ ಮಾಡಲು, ಸಮುದ್ರದಲ್ಲಿ ಆಟವಾಡಲು ಅನುಕೂಲಕರ ವಾತಾವರಣವಿದೆ. ಬಟ್ಟೆ ಬದಲಿಸಲು ವ್ಯವಸ್ಥೆಯೂ ಇತ್ತು. ನಮಗೆ ಅಲ್ಲಿ 12 ರ ವರೆಗೆ ಸಮಯವಿತ್ತು. ಎಲ್ಲರೂ ಮನಸೋ ಇಚ್ಛೆ ಸಮಯ ಕಳೆದರು. ಅಂಡಮಾನಿನ ಸಮುದ್ರದ ಬಗ್ಗೆ ಯೋಚಿಸುವಾಗ ಮೊದಲೆಲ್ಲ.. ಕಾಲಾಪಾನಿ ಎಂಬ ಶಬ್ದವೊಂದು ಭೀಕರವಾಗಿ ಕಿವಿಯೊಳಗೆ ಮೊಳಗುತಿದ್ದುದರಿಂದ ನನಗೇನೋ ಆ ನೀರು ವಿಷಪೂರಿತ, ಗಲೀಜು, ಕರ್ರಗೆ.. ಹೀಗೆ ಏನೇನೋ ಕಲ್ಪನೆಗಳಿದ್ದವು. ಆದರೆ., ಬಂಗಾಳ ಕೊಲ್ಲಿಯ ಸೌಂದರ್ಯಕ್ಕೆ ಸಾಠಿಯೇ ಇಲ್ಲ ಎಂಬುದು ಸ್ವತಃ ನೋಡಿದ ಮೇಲೆ ತಿಳಿಯಿತು. ತಿಳಿ ನೀಲಿ, ತಿಳಿ ಹಸಿರು, ನೀರಿನ ಮೇಲೆ ಬಿಳಿ ನೊರೆಯ ಸಾಲು ಷಿಫಾನ್ ಸೀರೆಯ ಮೇಲೆ ಕಸೂತಿ ಹೊಲಿದಂತೆ ನೋಡಲು ಅತೀ ಸುಂದರ. ತಿಳಿಯಾದ ನೀರು, ಎಲ್ಲೆಲ್ಲೂ ಶುಭ್ರ, ಸ್ವಚ್ಛ, ಸಣ್ಣ ಮರಳು. ಎಳೆ ಬಿಸಿಲಿನ ನಮ್ಮ ಆ ಬೆಳಗಿನ ಸಮಯ. ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತಿತ್ತು. ಎಷ್ಟೇ ವರ್ಣಿಸಿದರೂ ಆ ನೀರಿನ ಸೊಬಗಿನ ಮುಂದೆ ಶಬ್ದಗಳು ಸಪ್ಪೆಯಾಗುತ್ತವೆ.  ಹ್ಯಾವ್ಲೊಕಿಂದ ಹತ್ತು ಕಿ.ಮೀಟರ್ ದೂರದ ರಾಧಾನಗರ ಬೀಚ್ ಗೆ ನಮ್ಮನ್ನು ಬಸ್ಸಿನಲ್ಲಿ ಕರೆತಂದಿದ್ದರು. ಸಾವಕಾಶವಾಗಿ ಒಂದಿಷ್ಟು ಸಮಯವನ್ನು ಯಾವುದೇ ಗಡಿಬಿಡಿಗಳಿಲ್ಲದೆ ಕಳೆದೆವು. ಹ್ಯಾವ್ಲೊಕ್ ದ್ವೀಪಕ್ಕೆ ಬರುವವರೆಗೆ ಟೂರ್ ಮ್ಯಾನೇಜರ್ ಜೊತೆ ನಮ್ಮ ಪ್ರವಾಸದಲ್ಲಿ ಜೊತೆಗೂಡಿದ್ದು ನಮ್ಮನ್ನು ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದಿಂದ ಕರೆದೊಯ್ಯಲು ಬಂದ ವಿಜಯ್ ಅನ್ನುವ ಹುಡುಗ. ಅಲ್ಲಿಂದ ಮುಂದೆ.. ನಾವು ಹಡಗಿನಲ್ಲಿ ಪ್ರಯಾಣ ಮಾಡಿ ಹ್ಯಾವ್ಲೊಕ್ ದ್ವೀಪಕ್ಕೆ ಬಂದು ತಲುಪಿದಾಗ ಅಲ್ಲಿ ನಮಗೆ ರೆಸಾರ್ಟ್ ಮತ್ತಿತರ ಎಲ್ಲಾ ವ್ಯವಸ್ಥೆ ಮಾಡಿದ್ದು ದರ್ಶನ್. ಮೂಲತಃ ತಮಿಳುನಾಡಿನವರು. ಅವರ ತಂದೆ ಎಷ್ಟೋ ವರ್ಷಗಳ ಹಿಂದಿನಿಂದ ಅಂಡಮಾನ್ ನಲ್ಲಿ ನೆಲೆಸಿ ಟೂರಿಸಂ ನಡೆಸುತಿದ್ದಾರೆ. ಓದು ಮುಗಿಸಿ ದರ್ಶನ್ ಈಗ ಅಪ್ಪನ ಜೊತೆ ಸೇರಿದ್ದಾನೆ. ವ್ಯವಸ್ಥಿತವಾಗಿ, ಪ್ರತಿಯೊಂದು ಸಣ್ಣ ಸಣ್ಣ ವಿಷಯಗಳನ್ನೂ ಮರೆಯದೆ ನಮ್ಮ ಪ್ರವಾಸವನ್ನು ಅತ್ಯಂತ ಸುಖಮಯವಾಗುವಂತೆ ಮಾಡಿದ ಕೀರ್ತಿ ನಿರ್ಮಲಾ ಟ್ರಾವೆಲ್ಸ್ ಜೊತೆಗೆ ವಿಜಯ್ ಮತ್ತು ದರ್ಶನ್ ಅವರದು. ಪೋರ್ಟ್ ಬ್ಲೇರ್ ನಷ್ಟು ಮುಂದುವರಿದಿಲ್ಲವಾದುದರಿಂದ ಈ ಸಣ್ಣ ದ್ವೀಪಗಳಲ್ಲಿ ಇರುವುದರಲ್ಲೇ ಒಳ್ಳೆಯ ಹೋಟೆಲಲ್ಲಿ ಮದ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡಿಸಿದ್ದರು. ಶುಚಿ-ರುಚಿಯಾದ ಊಟದ ನಂತರ ನಮ್ಮ ಪ್ರಯಾಣ ಮುಂದುವರಿಯಿತು. ನಾವು ಇಂದು ಹೋಗಿ ಸೇರಬೇಕಿರುವುದು ಮತ್ತೊಂದು ದ್ವೀಪಕ್ಕೆ. ಎರಡೂ ದ್ವೀಪಗಳು ಒಂದರಿಂದೊಂದು ಬೇರ್ಪಟ್ಟು ಇರೋದ್ರಿಂದ ಸಮುದ್ರ ಯಾನ ಮಾತ್ರವೇ ಇಲ್ಲಿಯ ಸಂಪರ್ಕ ಸಾಧನ. ಸರಕಾರಿ ಫೆರ್ರಿಯಲ್ಲಿ ನಮ್ಮ ಬಸ್ಸಿನ ಜೊತೆಗೆ ನಮ್ಮ ಪ್ರಯಾಣ ನೀಲ್ ಐಲ್ಯಾಂಡ್ ಗೆ. ನೀಲ್ ಐಲ್ಯಾಂಡ್ ಈಗ ಶಹೀದ್ ದ್ವೀಪವೆಂದು ಮರುನಾಮಕರಣಗೊಂಡಿದೆ. ಬಾರ್ಜ್ ಅಥವಾ ಫೆರ್ರಿಯಲ್ಲಿ ಒಂದೂವರೆ ಗಂಟೆ ಪ್ರಯಾಣ ಮಾಡಿ ನಾವು ನೀಲ್ ದ್ವೀಪದ ಸಮುದ್ರದೊಳಗಿನ ಹವಳದ ಗಿಡಗಳನ್ನು ಮತ್ತು ನೈಸರ್ಗಿಕ ಸೇತುವೆಯನ್ನು ನೋಡಲು ಹೋದೆವು. ನೈಸರ್ಗಿಕವಾಗಿ ಕಲ್ಲುಗಳ ರೂಪದಲ್ಲಿ ಹವಳದ ದಿಂಡಿನಂತಹ ರಚನೆಗಳು ಪ್ರತೀ ಹೆಜ್ಜೆ ಹೆಜ್ಜೆಗೂ ಸಿಗುತಿದ್ದವು. ಉಬ್ಬರವಿಲ್ಲದ ಸಮುದ್ರ ತೀರವದು, ಕಲ್ಲು ಬಂಡೆಗಳಂತ ರಚನೆಗಳು. ಅಲೆಗಳ ಬಡಿತಕ್ಕೆ ನೈಸರ್ಗಿಕವಾಗಿ ಸಮುದ್ರದೊಳಗೆ ಇಂತಹ ಅನೇಕ ಆಕಾರಗಳ ಸೃಷ್ಟಿಯಾಗಿದೆ. ಕಲ್ಲುಗಳ ಮೇಲಿನಿಂದ, ನೀರಿನೊಳಗೆ ತುಂಬಾ ದೂರ ನಡೆದು ಹೋದ ಮೇಲೆ ನೋಡಲು ಸಿಕ್ಕಿದ್ದು ಇಂತಹ ಹವಳದ ಕಲ್ಲುಗಳಿಂದಲೇ ರಚಿತವಾದ ನೈಸರ್ಗಿಕ ಸೇತುವೆ. ಪಶ್ಚಿಮ ಬಂಗಾಳಕ್ಕೂ ಅಂಡಮಾನ್ ಗೂ ವಿಶೇಷ ನಂಟು. ಅನೇಕ ವರ್ಷಗಳದು. ಸೆಲ್ಯುಲರ್ ಜೈಲಿನ ಸಂಬಂಧವೆಂದೂ ಹೇಳಬಹುದು. ಬಂಗಾಳದ ಅನೇಕ ಕ್ರಾಂತಿಕಾರಿ ಹೋರಾಟಗಾರರನ್ನು ಶಿಕ್ಷೆಗೆಂದು ಅಂಡಮಾನ್ ಜೈಲಿಗೆ ಖೈದಿಗಳನ್ನಾಗಿ ಕರೆತಂದಿದ್ದರಿಂದ, ಬಂಗಾಳದ ಜನತೆಗೆ ತಮ್ಮ ಪೂರ್ವಜರ ಬಗ್ಗೆ ಅಪಾರ ಹೆಮ್ಮೆ ಮತ್ತು ಗರ್ವ. ಅಂಡಮಾನ್ ದ್ವೀಪ ಬಂಗಾಳದ ಜನತೆಗೆ ತೀರ್ಥಕ್ಷೇತ್ರಕ್ಕೆ ಸಮ. ಈಗಲೂ ಅಂಡಮಾನ್ ದ್ವೀಪ ಸಮೂಹಗಳಲ್ಲಿ ಬಂಗಾಳಿಗಳು ನೆಲೆಯೂರಿದ್ದಾರೆ. ಅಲ್ಲಿಯೇ ತಮ್ಮ ವ್ಯಾಪಾರ, ಕಸುಬುಗಳನ್ನು ಕೈಗೊಳ್ಳುತಿದ್ದಾರೆ. ನೈಸರ್ಗಿಕವಾಗಿ ರಚನೆಯಾದ ಸೇತುವೆಗೆ ಬಂಗಾಳದ ಜನರು ಮೊದಲಿಗೆ ರಬೀಂದ್ರ ಸೇತು ಎಂದು ಕರೆದರು. ಕಾಲಾನಂತರ ಕಲ್ಕತ್ತಾದ ಹೌರಾ ಬ್ರಿಜ್ ಗೆ ಹೋಲಿಸಿ ಇದನ್ನೂ ಹೌರಾ ಬ್ರಿಜ್ ಎಂದೇ ಕರೆಯುತ್ತಾರೆ. – ಅಂಡಮಾನ್ ಆಲ್ಬಂ (ಮುಂದುವರೆಯುವುದು..) ******************** ಶೀಲಾ ಭಂಡಾರ್ಕರ್.

Read Post »

ಕಾವ್ಯಯಾನ

ಹಬ್ಬದ ಸಂತೆ

ಕವಿತೆ ಹಬ್ಬದ ಸಂತೆ ಡಾ. ಅರಕಲಗೂಡು ನೀಲಕಂಠ ಮೂರ್ತಿ ಇನ್ನೇನುಹತ್ತಿರ ಹಬ್ಬದ ಕಾಲಸಂತೆಗಳಲಿ ಮಾರಾಟಕೆಪಂಚೆ ಸೀರೆ ಒಂದೆರಡು ಪಿಂಡಿಮುತುವರ್ಜಿ ವಹಿಸಿನೇಯತೊಡಗಿರುವನುನೇಕಾರ ಹಗಲು ರಾತ್ರಿ ಎನ್ನದೆಮುಂದಿನ ನಾಲ್ಕಾರು ತಿಂಗಳಹೊಟ್ಟೆಪಾಡಿಗೆ! ಇನ್ನು ವಾರದಲ್ಲೆಸಂತೆಗಳ ಸುರಿಮಳೆ…ಅಷ್ಟರಲ್ಲಿ ಅದೆಂಥದೋ ಕಾಯೆಲೆಜಗಕೆಲ್ಲ ಸುಂಟರಗಾಳಿಯ ಹಾಗೆಹಬ್ಬಿಅದೇನೋ ಸಂಜೆ ಕರ್ಫ್ಯೂಅಂತ ಹೇರಿದರುಜೊತೆಜೊತೆಗೆ ಘಂಟೆ ಜಾಗಟೆಬಾರಿಸಿರೆಂದರುದೀಪ ಬೆಳಗಿಸಿ ಕುಣಿಸಿದರುಎಲ್ಲರೊಡನೆ ತಾವೂ ಕೂಡಿಕೊಂಡರುಈ ನೇಕಾರರುಅಮಾಯಕರು… ಹಾಗೆ ಕುಣಿಕುಣಿದುದೀಪ ಜಾಗಟೆಗಳಶಬ್ದ ಬೆಳಕಿನಾಟದ ನಡುವೆಯಲಿದಿಢೀರನೆ ಸಿಡಿಲು ಬಡಿದುಮರಗಳು ಬೆಂದು ಉರಿದ ಹಾಗೆಲಾಕ್ ಡೌನ್! ಲಾಕ್ ಡೌನ್!ಎಂದು ಗುಡುಗಿದರುನಾಡೆಲ್ಲ ಒಟ್ಟೊಟ್ಟಿಗೆ ಬಂದ್ ಬಂದ್!ಮತ್ತೆ ಗುಡುಗುಟ್ಟಿದರು… ಮೂಲೆಯಲಿ ಸದ್ದಿಲ್ಲದೆ ಕೂತಿದ್ದಪಿಂಡಿಗಳುಇದ್ದಕ್ಕಿದ್ದಂತೆ ನೆಲಕ್ಕುರುಳಿಅಂಗಾತ ಮಲಗಿಬಿಟ್ಟವುನೇಕಾರನ ಕಣ್ಣುಗಳುಅಸಹಾಯಕವಾಗಿಆ ಪಿಂಡಿಗಳನೇ ನೆಟ್ಟಗೆ ದಿಟ್ಟಿಸಿತಮಗೆ ತಾವೇ ಬಲವಾಗಿ ಒತ್ತಿಮುಚ್ಚಿಮೆಲ್ಲ ಮೆಲ್ಲ ಸುರಿದ ಕಣ್ಣೀರೊಡನೆಉರುಳಿದವು ಒಂದೆರಡುಕೆಂಪು ಹನಿ…! *********

ಹಬ್ಬದ ಸಂತೆ Read Post »

ಕಾವ್ಯಯಾನ

ಹೊಸ ಹಿಗ್ಗು…..!!

ಕವಿತೆ ಹೊಸ ಹಿಗ್ಗು…..!! ಯಮುನಾ.ಕಂಬಾರ ಎಲ್ಲಿಹುದು ಹೊಸಹಿಗ್ಗು – ಕ್ಷಣ ನಾನುಕಣ್ತೆರೆವೆ – ಮೈ ಮನ ಒಂದಾಗಿ ಕಾಯುತಿರುವೆಬೆಳ್ಳಿ ಮೋಡದಕಪ್ಪಿನಲ್ಲೋ …ಇಲ್ಲಾಕರಿಯ ನೆಲದ ಕಣ್ಣಿನಲ್ಲೋ …ಅಂತೂ ರಚ್ಚೆಹಿಡಿದು ಕುಳಿತಿರುವೆ. //ಪ// ನೀಲಿ ಆಗಸದಎದೆ ತುಂಬಿತುಳುಕಿದೆ – ಮೊಗ್ಗಿನೊಲು ಹೊಸ ಕಬ್ಬ ಹೀರಲು ಮುಂದಾಗಿಅದೇ ಆ ಎಂದಿನಕಲುಷಿತ ಹವೆಏರಿ ಬರುತಿದೆ ಮುಗಿಲ ಮಾರಿಗೆ ನಾಚಿಕೆಯ ಸರಿಸಿ //ಪ// ಋಷಿ ಮುನಿಯತಪದಂತೆ ಏಕವೃತಸ್ಥೆಯಾಗಿ ಹಸಿರು ಚಿಮ್ಮಿದ ಚಲುವೆ ದೀನಳಾಗಿಹಳುಹೊಸ ಚಿಗುರುಹಸಿರೆಲೆಯು ಕಳೆಗುಂದಿ ನಲುಗುತಿವೆ ನುಂಗದ ವಿಷ ಜಲವ ಒಕ್ಕಿ //ಪ// ಹೊರಳುತಿವೆ ಹಗಲುಗಳುಸರಿಯುತಿವೆ ರಾತ್ರಿಗಳುಅಂಕೆ ಸಂಕಲೆಗಳಿಲ್ಲದೇ ನವಿರು ನವಿರಾಗಿಗಡಿಯ ದಾಟಿದಲೆಕ್ಕ ವಿಧಿ ಮಿಕ್ಕಿ ಹರಿಯುತಿದೆಮೂಗಿನ ನೇರಕ್ಕೆ ಗುಣಕ ಚಿನ್ಹವ ಹಾಕಿ //ಪ// ಅಧಿಕಾರ ಅಂತಸ್ತುಕೇಕೆ ಹಾಕಿವೆ ಇಲ್ಲಿಭಾತೃತ್ವ ಸಹಕಾರ ಕೊಲೆಯ ಮಾಡಿಸತ್ತ ಶವಗಳಕಬ್ಬವಾಸನೆಯು ಎಲ್ಲೆಲ್ಲೂಹೊಸ ಹಿಗ್ಗು ಎಲ್ಲಿಹುದು ಹುಡುಕುತಿರುವೆ. //ಪ್// ಇದ್ದ ಮೂವರಲ್ಲಿಕದ್ದವರು ಯಾರೆಂದುಹುಡುಕುವುದು ಕಷ್ಟವೇ….!!?? ಅಂತೂ ಒಗಟುಜಾಳಿಗೆ ಬಗರಿಕೈಯಲ್ಲಿ ಇರಲುತಿರಗದೇನು…..??!! ಬುಗುರಿ ತಡವೇತಕೇ……!!!?? //ಪ// ನಾನು ನಾನೇ ಎಂಬನನ್ನ ಸುಖವೇ ಮೊದಲೆಂಬವರ್ತುಳಗಳು ಸುತ್ತಿತ್ತಿರುವ ನಿತ್ಯ ಸಮಯನನ್ನ ವರ್ತುಳ ಫರಿಧಿಮತ್ತೊಂದ ವರ್ತುಳಗಡಿಗೆ ಬದುಕ ಹಂಚಿಕೊಂಡ ಸತ್ಯ ಮರೆತಿಹೆವು ಇಂದು //ಪ// ಅಂಗೈ ಹುಣ್ಣಿಗೆಕನ್ನಡಿ ಏಕೆ..?ಬಲ್ಲೆವಾದರೂ ನಾವು ಕೈ ನೋಡಲಾರೆವುಹೊಸ ಹೊಸ ಶಬ್ದಹೊಸ ಹೊಸ ಕವಿತೆಬರೆದೆವಾದರೂ ನಾವು ಓದಲಾರೆವು. //ಪ// ****************************************

ಹೊಸ ಹಿಗ್ಗು…..!! Read Post »

ಕಾವ್ಯಯಾನ

ಹಾಯ್ಕುಗಳು

ಹಾಯ್ಕುಗಳು ಭಾರತಿ ರವೀಂದ್ರ 1)ಹೆಣ್ಣಲ್ಲವೇ ನೀ :ಕಲ್ಲು ರೂಪದಿ ಕೂಡಾಮಮತೆ ಸೆಲೆ. 2)ಕಲ್ಲಾಗಿ ಹೋದೆ :ಸ್ವಾರ್ಥಿ ಜಗವು ಕೊಟ್ಟನೋವು ಕಾಣಿಕೆ. 3)ಹಣೆಯ ಬೊಟ್ಟುಅವನಿಟ್ಟ ನೆನಪುಹೃದಯೋಡೆಯ 4)ಕಾದು ಕಲ್ಲಾದೆ :ನಲ್ಲನ ಆಗಮನಕಾಮನಬಿಲ್ಲು. 5)ಅಹಲ್ಯ ರೂಪಶ್ರೀ ರಾಮ ಬರುವನೇ,ಕಲಿಯುಗದಿ. 6)ಗಂಭೀರ ಮೊಗಕಂದನಂದದ ಮನಬಾಳು ನಂದನ. 7)ಮೌನದ ತಾಣಹೆಣ್ಣು ಜೀವದ ಕಣ್ಣು,ತೀರದ ಋಣ. *************************************

ಹಾಯ್ಕುಗಳು Read Post »

ಇತರೆ

ಯುಗ ಯುಗಾದಿ ಕಳೆದರೂ..!

ಯುಗಾದಿ ವಿಶೇಷ ಬರಹ ಯುಗ ಯುಗಾದಿ ಕಳೆದರೂ..! ಯುಗ ಯುಗಾದಿ ಕಳೆದರೂ ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.                     ಹೊಂಗೆ ಹೂವ ತೊಂಗಳಲಿ,                     ಭೃಂಗದ ಸಂಗೀತ ಕೇಳಿ                     ಮತ್ತೆ ಕೇಳ ಬರುತಿದೆ.                     ಬೇವಿನ ಕಹಿ ಬಾಳಿನಲಿ                     ಹೂವಿನ ನಸುಗಂಪು ಸೂಸಿ                     ಜೀವಕಳೆಯ ತರುತಿದೆ. ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು ಅಖಿಲ ಜೀವಜಾತಕೆ. ಒಂದೇ ಒಂದು ಜನ್ಮದಲಿ ಒಂದೇ ಬಾಲ್ಯ, ಒಂದೇ ಹರೆಯ ನಮಗದಷ್ಟೇ ಏತಕೋ.                     ನಿದ್ದೆಗೊಮ್ಮೆ ನಿತ್ಯ ಮರಣ,                     ಎದ್ದ ಸಲ ನವೀನ ಜನನ,                     ನಮಗೆ ಏಕೆ ಬಾರದು?                     ಎಲೆ ಸನತ್ಕುಮಾರ ದೇವ,                     ಎಲೆ ಸಾಹಸಿ ಚಿರಂಜೀವ,                     ನಿನಗೆ ಲೀಲೆ ಸೇರದೂ. ಯುಗ ಯುಗಗಳು ಕಳೆದರೂ ಯುಗಾದಿ ಮರಳಿ ಬರುತಿದೆ. ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.               # ಅಂಬಿಕಾತನಯದತ್ತ ……………………………………………. ಯುಗಾದಿ ಹಬ್ಬದ ಮಹತ್ವವೂ..! ಯುಗಾದಿ ಹಬ್ಬ ಆಗಲೇ ಬಂದಿದೆ. ಜನರು ಹೇಗೆ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಮತ್ತು ವಿಶೇಷ ಆಚರಣೆಗೆ ಹೇಗೆ ಸಿದ್ಧರಾಗಬೇಕು. ಯುಗಾದಿಯ ವಿಶೇಷ ಆಚರಣೆ ಏನು ಎಂಬುದರ ವಿವರಣೆ ಇಲ್ಲಿದೆ… ಯುಗಾದಿ ಹಬ್ಬದ ಮಹತ್ವ, ಇತಿಹಾಸ, ಮತ್ತು ಆಚರಿಸುವ ವಿಧಾನ..! ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ… ಯುಗಾದಿ ಆಚರಣೆ ಎದುರಿಗಿದೆ. ಮುಂಬರುವ ಮಂಗಳವಾರ ಏಪ್ರಿಲ್​ 13 ನೇ ತಾರೀಕಿನಂದು ಈ ವರ್ಷದ ಯುಗಾದಿ ಹಬ್ಬವನ್ನು ಆಚರಿಸಲಾಗುತ್ತಿದೆ.  ತಮಿಳುನಾಡು ಮತ್ತು ಕೇರಳದಲ್ಲಿ ವಿಷು ಎಂದು ಈ ಹಬ್ಬವನ್ನು ಕರೆಯಲಾಗುತ್ತದೆ. ಇನ್ನು, ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವ ಎಂದು ಕರೆಯುತ್ತಾರೆ. ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವ ಎಂದರೆ, ಪಾಡ್ಯಮಿ ದಿವಸ ಗುಡಿ ಏರಿಸುವುದು ಎಂದರ್ಥ. ಅಂದರೆ, ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ ಗುಡಿ ಎಂದು ಮೂಲೆಯಲ್ಲಿ ಇರಿಸುವ ಸಂಪ್ರದಾಯವಿದೆ. ಇದು ಹೊಸ ವರ್ಷದ ಆಗಮಕ್ಕೆ ಸಂಕೇತವಾಗಿದೆ. ಜೊತೆಗೆ ಮನೆಯಲ್ಲಿ ವೀಶೆಷ ಪೂಜೆಯನ್ನೂ ಕೈಗೊಳ್ಳಲಾಗುತ್ತದೆ. ಪೂಜೆ ಅಂದರೆ ಬೇರೇನೂ ಅಲ್ಲ. ನಮ್ಮ ಬದುಕಿನ ಹೊಸ ಜೀವನದ ಮುಖ್ಯ ವಿಚಾರಗಳು ಹೇಗಿರಬೇಕೆಂಬ ವಿಧಾನದ ಕ್ಯಾಲೆಂಡರ್ ಅಷ್ಟೇ. ಯುಗಾದಿ ಹಬ್ಬ ಅಂದಾಕ್ಷಣ ಹೊಸ ವರ್ಷ ಪ್ರಾರಂಭದ ದಿನ. ಹೊಸ ವರ್ಷದ ಜೊತೆಗೆ ಹೊಸ ಭರವಸೆ ಮತ್ತು ಹೊಸ ಚೈತನ್ಯ ತುಂಬುವ ದಿನ. ಯುಗ, ಅಂದರೆ ವಯಸ್ಸು ಮತ್ತು ಆದಿ ಅಂದರೆ ಪ್ರಾರಂಭ ಎಂಬುದಾಗಿ ‘ಯುಗಾದಿ’ ಎಂಬ ಹೆಸರೂ ಬಂದಿದೆ. ಯುಗಾದಿ ಆಚರಣೆ– ಚೈತ್ರ ಮಾಸದ ಮೊದಲ ದಿನದಂದು ಯುಗಾದಿಯನ್ನು ಆಚರಿಸಲಾಗುತ್ತದೆ. ಇದು ಚೈತ್ರ ನವರಾತ್ರಿಯ ಮೊದಲ ದಿನವೂ ಹೌದು. ಚಳಿಗಾಲದ ಅಂತ್ಯ ಮತ್ತು ಸುಗ್ಗಿಯ ಋತುವಿನ ಆರಂಭದಲ್ಲಿ ಯುಗಾದಿ ಹಬ್ಬ ಬರುವುದು. ಚಂದ್ರಮನ ಯುಗಾದಿ 2021 ದಿನಾಂಕ ಮತ್ತು ಮುಹೂರ್ತ ಸಮಯವೂ– ಯುಗಾದಿ ಹಬ್ಬ 2021 ರ ಏಪ್ರಿಲ್ 12 ನೇ ತಾರೀಕು ಪ್ರತಿಪದ ತಿಥಿಯಂದು ಬೆಳಿಗ್ಗೆ 7:59 ಕ್ಕೆ ಆರಂಭಗೊಳ್ಳುತ್ತದೆ. ಮರುದಿನ ಏಪ್ರಿಲ್​ 13 ನೇ ತಾರೀಕು ಬೆಳಿಗ್ಗೆ 10.16 ರ ಸಮಯಕ್ಕೆ ಮುಕ್ತಾಯಗೊಳ್ಳುತ್ತದೆ ಹಿಂದೂ ಸಾಂಪ್ರದಾಯದಂತೆ. ಈ ಆಚರಣೆ ಗೊಡ್ಡು ಆಚರಣೆ ಆದರೆ ಯಾವ ಫಲವೂ ಇಲ್ಲ. ಸರ್ವವಿಧದ, ಸರ್ವ ಜಾತಿ ಜನಾಂಗದ ಜನರ ಒಗೂಡಿಕೆವೊಂದೆಗೇ ಆಚರಣೆ ಆಗಬೇಕು. ಹಬ್ಬಕ್ಕೆ ಸಿದ್ಧತೆಗಳು– ಭಾರತೀಯ ಸಂಸ್ಕೃತಿಯ ಪ್ರಕಾರ ಯುಗಾದಿ ಹಬ್ಬ ಹೊಸ ವರ್ಷದ ಆಗಮನ. ಮನೆಯನ್ನು ಸ್ವಚ್ಛಗೊಳಿಸಿ ಮನೆಯ ಮುಂದೆ ರಂಗೋಲಿಯನ್ನಿಟ್ಟು ಹಬ್ಬಕ್ಕೆ ಬೆಳಿಗ್ಗೆಯಿಂದಲೇ ಮೆರಗುಗೊಳಿಸಲಾಗುತ್ತದೆ. ಯುಗಾದಿಯಂದು ಹೊಸ ಬಟ್ಟೆ, ಹೊಸ ವಿಚಾರ ಹೊಸ ಭರವಸೆಯತ್ತ ಇಡೀ ವರ್ಷ ಸಾಗಲಿ ಎಂಬ ನಂಬಿಕೆಯ ಜೊತೆ ಮುನ್ನಡೆಯವ ಹೆಜ್ಜೆಯಾಗಿರುತ್ತದೆ ಯುಗಾದಿ. ಯುಗಾದಿ ಹಬ್ಬದ ಆಚರಣೆ ಹೇಗೆ?– ಬೆಳಗ್ಗೆ ಬೇಗ ಎದ್ದು ಮನೆಯಲ್ಲಿ ಸಡಗರ, ಸಂಭ್ರಮ. ಮನೆಯ ಅಂಗಳವನ್ನು ಸ್ವಚ್ಛಗೊಳಿಸಿ ರಂಗಿನ ರಂಗೋಲಿ ಬಿಡಿಸುತ್ತಾರೆ. ಬೆಳಿಗ್ಗೆ ಎಣ್ಣೆ ಹಚ್ಚಿ ಸ್ನಾನ ಮಾಡಿ ಶುದ್ಧಗೊಳ್ಳುತ್ತಾರೆ. ಮನೆಯ ಎದುರಿನ ಬಾಗಿಲು, ದೇವಾಲಯದ ಬಾಗಿಲಿಗೆ ಮಾವಿನ ಎಲೆಗಳ ಹಾರ (ತಳಿರು ತೋರಣ) ಮಾಡಿ ಹೂವಿನ ಅಲಂಕಾರ ಮಾಡಲಾಗುತ್ತದೆ. ಯುಗಾದಿ ದಿನದಂದು ಸಂತೋಷದ ಪ್ರತೀಕವಾಗಿ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾಗಿ ಬೇವನ್ನು ಬೆರೆಸಿ ಪ್ರಸಾದವಾಗಿ ಸೇವಿಸುತ್ತಾರೆ. ಇದಿಷ್ಟೇ ಆದರೆ ಸಾಲದು ಹೊಸ ಸವಂತವನು ಹೊಸ ಜೀವನದ ಭರವಸೆಯೊಂದಿಗೆ ಆಚರಣೆಯಾಗಬೇಕು. ಸರ್ವರಳೊಂದುಗೂಡಿ ಬದುಕಿನ ಆಚರಣೆ ಆಗಬೇಕು. ಆ ಮಾತ್ರ ಈ ಯುಗಾದಿ ಆಚರಣೆಗೆ ಮಹತ್ವ ಬರುವುದು..! ************************ ಕೆ.ಶಿವು.ಲಕ್ಕಣ್ಣವರ

ಯುಗ ಯುಗಾದಿ ಕಳೆದರೂ..! Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಅಶೋಕ ಬಾಬು ಟೇಕಲ್ ಹಾಲುಂಡ ಹಸುಳೆಯೇ ಹದ್ದಂತೆ ಕುಕ್ಕಿ ಕುಕ್ಕಿ ತಿನ್ನುತ್ತಿದೆ ಈಗಹೊತ್ತೊತ್ತಿಗೂ ಮಡಿಲೇರಿದ ಕೂಸೇ ಕಾಳ ಸರ್ಪದಂತೆ ಬುಸುಗುಟ್ಟುತ್ತಿದೆ ಈಗ ನಿತ್ರಾಣಗೊಂಡು ಪಾತಾಳ ತುಳಿದಾಗ ಕೈ ಹಿಡಿದು ಮೇಲೆತ್ತಿದ್ದೆಕೃತಜ್ಞತೆಯ ಮರೆತು ನೇಣು ಕುಣಿಕೆ ಹುರಿಗೊಳಿಸುತ್ತಿದೆ ಈಗ ಮಾನವೀಯತೆ ಮುಂದೆ ಮಿಕ್ಕೆಲ್ಲವೂ ಗೌಣವೆಂದೇ ಭಾವಿಸಿದ್ದೆಅದೇ ಮಾನವೀಯತೆಗೆ ಚಟ್ಟ ಕಟ್ಟಿ ಬೀದಿಗಿಟ್ಟು ಹರಾಜಾಕುತ್ತಿದೆ ಈಗ ಊರಿಗೆ ಊರೇ ಅಪಸ್ವರದ ಕೊಳಲು ನುಡಿಸುತಿತ್ತು ಅಲ್ಲಿ !ಬುದ್ಧ ಸಾಗಿ ಬಂದ ಹಾದಿಯೂ ಮುಳ್ಳುಗಳನು ಮೊಳೆಸುತ್ತಿದೆ ಈಗ ಈಚಲು ಮರದ ನೆರಳು ಮಜ್ಜಿಗೆಗೆ ಯೋಗ್ಯವಲ್ಲ ಎಂದು ಅಬಾಟೇ ಗೆ ಹೇಳಿದ್ದೆಕಂಡವರ ಕಣ್ಣು ನಶೆ ಕುಡಿದು ಅಮಲೇರಿ ಬೊಬ್ಬೆ ಇಡುತ್ತಿದೆ ಈಗ. *************************************

ಗಜಲ್ Read Post »

ಪುಸ್ತಕ ಸಂಗಾತಿ

ಒಳಿತಿನ ಉಣಿಸಿನ ಕಥೆಗಳು…

ಪುಸ್ತಕ ಸಂಗಾತಿ ಒಳಿತಿನ ಉಣಿಸಿನ ಕಥೆಗಳು… “ಚಮತ್ಕಾರಿ ಚಾಕಲೇಟ” “ಚಮತ್ಕಾರಿ ಚಾಕಲೇಟ” ಮಕ್ಕಳ ಕಥಾಸಂಲನ.ಲೇಖಕರು: ಸೋಮು ಕುದರಿಹಾಳ.ಬೆಲೆ:100ರೂ.ಪ್ರಕಟಣೆ:2020.ಪ್ರಕಾಶಕರು: ತುಂಗಾ ಪ್ರಕಾಶನ ಚಂದಾಪುರ. ಗಂಗಾವತಿ.9035981798 ಸೋಮು ಕುದರಿಹಾಳ ಮಕ್ಕಳ ಪ್ರೀತಿಯ ಶಿಕ್ಷಕರಾಗಿ ನಮಗೆಲ್ಲಾ ಪರಿಚಿತರು. ಅವರನ್ನು ನಾನಿನ್ನೂ ಮುಖತಹ ಭೆಟ್ಟ ಆಗಿಲ್ಲವಾದರೂ ಅವರ ಬರಹ, ಅವರು ಶಾಲೆಯಲ್ಲಿ ನಡೆಸುತ್ತಿರುವ ಪ್ರಯೋಗಗಳು. ಒಂದು ಪುಟ್ಟ ಸರಕಾರಿ ಶಾಲೆಯನ್ನು ಮಕ್ಕಳ ಎಲ್ಲ ಒಳಿತಿನ ಕಡೆಗೆ ಅಣಿಗೊಳಿಸುತ್ತಿರುವ ರೀತಿ ಎಲ್ಲ ಗಮನಿಸುತ್ತ ಅವರ ಸ್ನೇಹದ ವರ್ತುಲದಲ್ಲಿ ನಾನೂ ಸೇರಿ ಹೋಗಿದ್ದೇನೆ. ಅವರು ಈಗ ಮಕ್ಕಳ ಕಥಾ ಸಂಕಲನ ತರುವ ಮೂಲಕ ತಮ್ಮ ಸ್ನೇಹದ ವರ್ತುಲ ಇನ್ನೂ ವಿಸ್ತರಿಸಿಕೊಂಡಿದ್ದಾರೆ. ಇರಲಿ. ನಾನು ಶಿಕ್ಷಕನಾಗಿ ಬಹಳ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಆಗಿದ್ದರೂ ನನ್ನ ಆಲೋಚನೆಗಳೆಲ್ಲ ಮಕ್ಕಳ ಸುತ್ತಲೇ ಅರಳಿಕೊಳ್ಳುತ್ತಿರುತ್ತವೆ. ಅದು ಯಾವುದೋ ಮಗುವಿನ ತುಂಟಾಟವನ್ನೋ, ಪ್ರತಿಭೆಯನ್ನೋ, ಮಕ್ಕಳ ಸುತ್ತಲೂ ನಾವು ನಿರ್ಮಿಸಬೇಕಾದ ಪರಿಸರವನ್ನೋ, ಅವರ ಖುಷಿ ಹೆಚ್ಚಿಸುವ ಹಂಬಲವನ್ನೋ, ಮಕ್ಕಳು ಅನುಭವಿಸುವ ನೋವನ್ನೋ ಧ್ಯಾನಿಸುತ್ತಿರುತ್ತದೆ. ಹೌದು ಶಿಕ್ಷಕರಾಗಿದ್ದವರಿಗೆ ಹಾಗೂ ಮಕ್ಕಳ ಒಳಿತನ್ನು ಅಪಾರವಾಗಿ ಪ್ರೀತಿಸುವವರಿಗೆಲ್ಲ ಹಾಗೇ ಅನಿಸುತ್ತದೆ. ಇದೆಲ್ಲಾ ಏಕೆ ಹೇಳುತ್ತಿದ್ದೇನೆ ಅಂದರೆ ಸೋಮು ಕುದರೀಹಾಳ ಅವರ ‘ಚಮತ್ಕಾರಿ ಚಾಕಲೇಟ’ ಕಥಾಸಂಕಲನ ಮಕ್ಕಳ ಸುತ್ತಲೇ ಹರಡಿಕೊಳ್ಳುತ್ತ ಒಂದಿಷ್ಟು ಮಕ್ಕಳಿಗೆ ಒಳಿತಿನ ಉಣಿಸನ್ನು ಉಣಿಸಬೇಕು ಎಂಬ ಚೌಕಟ್ಟನ್ನು ಹಾಕಿಕೊಳ್ಳುತ್ತ ಅರಳಿದ ಕಥೆಗಳು ಎಂದು ನನಗೆ ಅನಿಸುತ್ತದೆ. ಸೋಮು ಅವರು ಇಲ್ಲಿ ಮಕ್ಕಳ ಸುತ್ತಲಿನ ಹಲವಾರು ಸಂಗತಿಗಳನ್ನು ಕಥೆಯಾಗಿಸಿದ್ದಾರೆ. ಇಲ್ಲಿ ಕೆಲವು ಜಾನಪದ ಮಾದರಿಗಳಿವೆ ಹಾಗೂ ಅವನ್ನು ಇಂದಿನ ತುರ್ತಿಗೆ ಅಗತ್ಯವಾದ ಕುಲಾವಿ ಆಗಿಸುವ ಪ್ರಯತ್ನವೂ ಇದೆ. ಬಹು ಪ್ರಚಲಿತವಾದ ಕಾಗಕ್ಕ ಗುಬ್ಬಕ್ಜಕನ ಕಥೆಯನ್ನೇ ಮಕ್ಕಳು ಇಂದು ಉಪಯೋಗಿಸುವ ಮೊಬೈಲ ಬಳಕೆಗೆ ಬೇಕಾಗುವ ಡಾಟಾ ಕದಿಯುವ ಕಾಗೆಯನ್ನಾಗಿಸಿ ಗುಬ್ಬಿಗೆ ಮೋಸ ಮಾಡುವಂತೆÀ ಕಥೆಯನ್ನು ಹೆಣೆದಿದ್ದಾರೆ. ಡಾಟಾ… ಪಾಸವರ್ಡ… ಅದರ ಸಾಫಲ್ಯತೆ ಗೆಲ್ಲಾ ಮಕ್ಕಳು ವಿಸ್ತರಿಸಿ ತಿಳುವಳಿಕೆ ಮೂಡಲಿ ಎಂಬ ಹಂಬಲದೊಂದಿಗೆ ಮೋಸ ಸರಿಯಲ್ಲ ಎನ್ನುವ ತಿಳುವಳಿಕೆಯನ್ನೂ ಕಥೆ ಇಡಲಿ ಎಂಬ ಹಂಬಲವಿದೆ.   ಯಾರು ಹೆಚ್ಚು ಕಥೆಯಲ್ಲಿ ಪೆನ್ನು, ಪೆನ್ಸಿಲ್, ಕ್ರೆಯಾನ್ಸ, ರಬ್ಬರ ಮುಂತಾದ ಮಕ್ಕಳ ಬ್ಯಾಗಿನಲ್ಲಿ ಯಾವಾಗಲೂ ಇರುವ ಅವರಿಗೆ ಆಪ್ತವಾದ ವಸ್ತುಗಳ ಸಂಗತಿ ಇದೆ. ಇವೆಲ್ಲ ತಾನು ಹೆಚ್ಚು ತಾನು ಹೆಚ್ಚು ಎಂದು ಕಿತ್ತಾಡಿ ಚಲ್ಲಾಪಿಲ್ಲಿ ಆಗುವುದು ಇದರಿಂದಾಗಿ ಅವು ಕಸದ ಬುಟ್ಟಿ ಸೇರುವುದು ಇದೆ. ಎಲ್ಲರೂ ಒಂದಾಗಿರಬೇಕು, ಜಗಳವಾಡಬಾರದು ಎಂದು ಹೇಳುವ ಈ ಕಥೆ ಮಕ್ಕಳನ್ನು ಸೆಳೆಯುತ್ತದೆ. ಶಾಲೆಯಲ್ಲಿ ನಡೆಯುವ ವಾಸ್ತವ ಸಂಗತಿಯ ಎಳೆಯೊಂದನ್ನು ಹಿಡಿದು ಬರೆದಿರುವ ‘ತಿಮ್ಮನ ಸಾಲ’ ಕಥೆಯಲ್ಲಿ ತಿಮ್ಮ ಹಿರಿಯರೊಬ್ಬರಿಗೆ ಸಹಾಯ ಮಾಡುವುದಕ್ಕಾಗಿ ಕೌಜುಗ ಹಕ್ಕಿಯನ್ನು ಹಣಕ್ಕೆ ಪಡೆದು ಸಾಲಗಾರನಾಗುತ್ತಾನೆ. ಇದರಿಂದ ಮಕ್ಕಳೆಲ್ಲ ಅವನನ್ನು ಸಾಲಗಾರನೆಂದು ಹೀಯಾಳಿಸುತ್ತಾರೆ. ಆದರೆ ತಿಮ್ಮನ ನಿಜವಾದ ಉದ್ಧೇಶ ತಿಳಿದ ಶಿಕ್ಷಕರು ಅವನ ಕುರಿತಾದ ತಪ್ಪು ಅಭಿಪ್ರಾಯ ಹೋಗಲಾಡಿಸುತ್ತಾರೆ. ಹೀಗೆ ವಾಸ್ತವಕ್ಕೆ ಹತ್ತಿರವಾದ ಇಂತಹ ಕಥೆಗಳು ಮಕ್ಕಳನ್ನು ಹೆಚ್ಚುಬೇಗ ಆವರಿಸಿಕೊಳ್ಳುತ್ತವೆ ಎಂದು ನನಗೆ ಅನಿಸುತ್ತದೆ. ಅಜ್ಜ ಹೇಳುವ ಚಾಕಲೇಟ ತಿನ್ನುತ್ತ ಚೆನ್ನ ಎನ್ನುವ ಬಾಲಕ ಎಡಬಿಡದ ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಗೆಲುವು ಕಾಣುವುದನ್ನು ‘ಚಮತ್ಕಾರಿ ಚಾಕಲೇಟ’ ಕಥೆÀ ಹೇಳುತ್ತದೆ. ಆತ್ಮವಿಶ್ವಾಸ ಮತ್ತು ಪ್ರಯತ್ನಗಳು ಮುಖ್ಯ ಎಂಬ ಸಂದೇಶ ನೀಡುತ್ತದೆ ಈ ಕಥೆ. ವಿಚಿತ್ರ ಸುದ್ದಿ ಹೇಳದಿದ್ದರೆ ಸಾಹುಕಾರ ಕೆಲಸದಿಂದ ತೆಗೆದುಹಾಕುತ್ತಿದ್ದ. ವಿಚಿತ್ರ ಸುದ್ದಿಯ ಮೂಲಕವೇ ಸಾಹುಕಾರ ರಾತ್ರಿ ಪೂರಾ ಸೈಕಲ್ ಹೊಡೆಯುವಂತೆ ಮಾಡಿ ಅವನಿಗೆ ಬುದ್ಧಿ ಕಲಿಸುವುದು ಒಂದು ಕಥೆಯಾದರೆ… ಅಜ್ಜ ಕೊಡುವ ಹಣದಿಂದ ಏನಾದರೂ ಖರೀದಿಸುವ ರೋಸಿ ಎನ್ನುವ ಬಾಲಕಿ ಅಂಗಡಿಯವನೊಬ್ಬನ ಮೋಸದಿಂದ ತೊಂದರೆಗೆ ಒಳಗಾಗುತ್ತಾಳೆ. ಆದರೆ ತನ್ನ ಜಾಣತನದಿಂದ ತಾನು ಕಳೆದುಕೊಂಡ ಹಣ ಪುನಹ ದೊರಕಿಸಿಕೊಳ್ಳುವ ಕಥೆ ಇನ್ನೊಂದು.  ‘ಮನಸ್ಸಿನಂತೆ ಫಲ’, ‘ಕೆಟ್ಟ ಮೇಲೆ ಬುದ್ಧಿ ಬಂತು’ ಮುಂತಾದ ಕಥೆಗಳ ತಲೆಬರಹಗಳೇ ಉದ್ಧೇಶಗಳನ್ನು ಹೇಳಿಬಿಡುತ್ತವೆಯಾದರೂ ಒಳ್ಳೆಯ ಮನಸ್ಸು, ಹಿರಿಯರ ಜಾಣ್ಮೆ ಎಲ್ಲ ನಮ್ಮ ಮುಂದೆ ಇಡುತ್ತ ಗೆಲುವು ಪಡೆಯುತ್ತವೆ. ಸೋಮು ಕುದರಿಹಾಳ ಅವರು ಮಕ್ಕಳ ಒಳಿತಿನ ವಿಸ್ತಾರಕ್ಕೆ ಯತ್ನಿಸುತ್ತ ಅವರಿಗೆ ಆಪ್ತವಾಗುವ ಕಥೆಗಳ ಮೂಲಕವೇ ಪಠ್ಯಗಳಿಗಿಂತಲೂ ವಿಸ್ತಾರದ ಉಣಿಸನ್ನು ನೀಡಲು ಪ್ರಯತ್ನಿಸಿದ್ದಾರೆ. ಇದು ಅವರ ಮೊದಲ ಪ್ರಯತ್ನ. ದೊಡ್ಡವರಿಗಾಗಿಯೂ ಬರೆಯುತ್ತ, ಒಳ್ಳೊಳ್ಳೆಯ ಕವಿತೆಗಳನ್ನು ನೀಡುತ್ತ ನಮ್ಮ ಮುಂದಿರುವ ಸೋಮು ಅವರು ಮಕ್ಕಳ ಪ್ರೀತಿಯನ್ನು ಈ ಸಂಕಲನದ ಮೂಲಕ ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ. ಈ ಪ್ರೀತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಕಲಾತ್ಮಕವಾಗಿ ಅರಳುವ ಎಲ್ಲ ಸಾಧ್ಯತೆಗಳಿಗೆ ಅವರು ತೆರೆದುಕೊಳ್ಳಿಲಿ ಎಂದು ಹೇಳುತ್ತ ಒಂದು ಒಳ್ಳೆಯ ಪ್ರಯತ್ನದೊಂದಿಗೆ ನಮ್ಮೊಂದಿಗಿರುವ ಅವರಿಗೆ ಕೃತಜ್ಞತೆ ಸಲ್ಲಿಸುತ್ತ… ತಾವೆಲ್ಲರೂ ಅವರ ಕಥಾ ಸಂಕಲನ ಓದಿ ಪ್ರೋತ್ಸಾಹಿಸಿ ಎಂದು ಕೇಳಿಕೊಳ್ಳುತ್ತೇನೆ. ***************************************************** ತಮ್ಮಣ್ಣ ಬೀಗಾರ.

ಒಳಿತಿನ ಉಣಿಸಿನ ಕಥೆಗಳು… Read Post »

ಕಾವ್ಯಯಾನ

ಕವಿತೆ ಮತ್ತೆ ಯುಗಾದಿ ಹೊಸ ವರ್ಷವ ಸ್ವಾಗತಿಸುತ ಬಂದಿದೆ ಯುಗಾದಿಯುಗ ಯುಗಗಳ ಹೊಸ ಪಲ್ಲವಿಯನು ಹಾಡಿ. ಮಾರನ ಹೂ ಬಾಣದ ಜುಮ್ಮೆನ್ನುವ ಅಮಲುಪ್ರತಿ ಹೃದಯದ ಮೇಲೆರಗಿದೆ ಮೈಗಂಧದ ಘಮಲು. ಎಲೆಯುದುರುವ ಕಾಡಲ್ಲಿ ಚಿಗುರಿನ ದನಿ ಹಾಡುಪ್ರತಿ ಗಿಡಗಳು ಹಸಿರುಟ್ಟಿವೆ ಹೂ ಬಟ್ಟೆಯ ನೋಡು. ಹೂ ಹೂಗಳ ಕೇಸರದಲಿ ದುಂಬಿಯ ಹೂ ಮುತ್ತುಗಿಡ ಮರಗಳು ಅನುಭವಿಸಿವೆ ಪ್ರಣಯದ ನಶೆ ಮತ್ತು! ಒಣ ಶಿಶಿರವು ಚೇತರಿಸದು ಹೂ ಚೈತ್ರದ ಹೊರತುವನಮಾಲಿಯ ಅಡಿ ಅಡಿಯಲು ಮಧು ಮಾಸದ ಗುರುತು. ಪ್ರತಿ ಕಾಡಲು ಬರಿ ಬಯಲಲು ಹೂ ಹಣ್ಣಿನ ರಾಶಿಹಕ್ಕಿಗಳುಲಿ ಇಂಪಲು ಸವಿ ಕಂಪನು ಸೂಸಿ. ಯುಗ ಯುಗಾದಿಯು ಬರುತಿರಲಿ ನಮ್ಮಯ ಹೊಸತನಕೆನಾಳೆಯ ಸದ್ವಿಕಾಸಕೆ ನವ ಚೈತನ್ಯದ ಹರಕೆ ************************************************************ ಫಾಲ್ಗುಣ ಗೌಡ ಅಚವೆ

Read Post »

ಇತರೆ

ಯುಗಾದಿ ವಿಶೇಷ ಬರಹ ಯುಗಾದಿಯೆಂಬ ನಮ್ಮ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ ಎಂದು ಹೇಳುವುದು ಪ್ರಮುಖವಾಗಿ ಭಾಷೆ,  ಆಚರಣೆ-ಸಂಪ್ರದಾಯಗಳು, ಉಡುಗೆ-ತೊಡುಗೆ, ಆಹಾರ ಮೊದಲಾದವುಗಳಿಗೆ ಸಂಬಂಧಿಸಿದಂತೆ . ಇಲ್ಲಿನ  ವೈವಿಧ್ಯತೆ ಎಷ್ಟೆಂದರೆ  ರಾಜ್ಯ ರಾಜ್ಯಗಳ ನಡುವಿನ ಮಾತಿರಲಿ, ಅಕ್ಕಪಕ್ಕದ ತಾಲೂಕುಗಳಲ್ಲಿ, ಊರುಗಳಲ್ಲೇ ಭಿನ್ನತೆಯನ್ನು ಕಾಣಬಹುದು.   ಆದರೆ ಕಳೆದ 2 ದಶಕಗಳಿಂದ ಇಂಥ ಪ್ರಾದೇಶಿಕ ಭಿನ್ನತೆಗಳು ಬದಲಾಗುತ್ತಿವೆ  ಅಥವಾ  ಕೆಲವು  ಇಲ್ಲವಾಗಿವೆ. ಇದಕ್ಕೆ ಬಹುಮುಖ್ಯ ಕಾರಣ ದೊಡ್ಡ ಪಟ್ಟಣ ಹಾಗೂ ಶಹರಗಳಿಗೆ ಉದ್ಯೋಗ ಹಾಗೂ  ಜೀವನ ನಿರ್ವಹಣೆಯ ದಾರಿಗಳನ್ನು ಅರಸುತ್ತ ನಡೆದಿರುವ  ನಿರಂತರ ವಲಸೆ. 20ನೇ ಶತಮಾನದ ಕೊನೆಯ ದಶಕದಲ್ಲಿ ಭಾರತದ ಮಹಾನಗರಗಳಿಗೆ ಲಗ್ಗೆ ಇಟ್ಟ ಐಟಿಬಿಟಿ ಕಂಪನಿಗಳು ಈ ನಗರಗಳ ಬದುಕನ್ನು ಅನಾಮತ್ತಾಗಿ ಎತ್ತಿ ಪಲ್ಟಿ ಮಾಡಿದವು.  ವಿದೇಶಿ ಮೂಲದ ಕಂಪನಿಗಳ ಮೂಲಕ  ಹಣದ ಹೊಳೆ  ಇಲ್ಲಿ ಹರಿಯಲಾರಂಭಿಸಿದಂತೆ ಅದರ ಉಪ ಉತ್ಪನ್ನವಾಗಿ ಹಳ್ಳಿಯ, ಸಣ್ಣ ಪಟ್ಟಣಗಳ ಯುವಜನತೆ ನಗರಗಳಿಗೆ ಗುಳೆ ಬಂದಿತು. ಅವರ ಮೂಲ ಊರುಗಳಲ್ಲಿ ಮಧ್ಯವಯಸ್ಸು ಮೀರಿದವರಷ್ಟೇ ಇರುವುದು ಅಂದಿನ ವಾಸ್ತವವಾಗಿತ್ತು.  ಇದರಿಂದ ದೊಡ್ಡ ಪ್ರಮಾಣದಲ್ಲಿ  ಆರ್ಥಿಕ, ರಾಜಕೀಯ ಬದಲಾವಣೆಗಳಾದರೆ, ಅದಕ್ಕಿಂತ ತೀವೃ ಪರಿಣಾಮಗಳು ಸಾಮಾಜಿಕವಾಗಿ ಕಂಡು ಬಂದವು. ಅದರಲ್ಲಿ ವಿಶೇಷವಾಗಿ  ನಮ್ಮ ಹಬ್ಬ- ಹರಿದಿನಗಳ ಆಚರಣೆಯಲ್ಲಾದ ಬದಲಾವಣೆಗಳು. ನಮ್ಮ ಬಹುತೇಕ ಹಬ್ಬಗಳನ್ನು ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಆಚರಿಸುತ್ತ ಈಗ ದಶಕಗಳೇ ಕಳೆದಿವೆ. ನಗರಗಳಲ್ಲಿ   ಒದಗುವಿಕೆ, ಸಮಯಾವಕಾಶ, ರಜೆ, ಬಿಡುವು ಮೊದಲಾದ ವೈಯುಕ್ತಿಕವಾಗಿ ಮನೆಯ ಸದಸ್ಯರ ಅನುಕೂಲತೆಗಳಿಗೆ ತಕ್ಕಂತೆ ಹಿಗ್ಗುವ, ಕುಗ್ಗುವ ಅಥವಾ ಇಲ್ಲವಾಗುವ ಒಂದು ವಿಶೇಷ ದಿನ ಹಬ್ಬದ ದಿನ.  ಗ್ರಾಮೀಣ ಭಾಗಗಳಲ್ಲಿ ಅದು ಕಟ್ಟುನಿಟ್ಟಿನ  ಆಚರಣೆ , ಸಂಪ್ರದಾಯ, ರೀತಿ-ರಿವಾಜು, ಪರಂಪರೆಗಳ ಒಟ್ಟೂ ಮೊತ್ತ. ಅನೇಕ ಬಾರಿ  ಊರಿಗೆ ಊರೇ ಭಾಗವಹಿಸಿ ಸಂಭ್ರಮಿಸುವ ಊರ  ಹಬ್ಬ.         ನಮ್ಮ ಸಂವಿಧಾನ  ‘ ಇಂಡಿಯಾ ದಟ್ ಈಸ್ ಭಾರತ್ ‘ ಎಂದು ನಮ್ಮ ದೇಶವನ್ನು ಗುರುತಿಸಿದೆಯಷ್ಟೇ. ಅದರಂತೆ ಇಂಡಿಯಾ ಆಧುನಿಕ, ನಗರ ಕೇಂದ್ರಿತ  ದೇಶವನ್ನು ಪ್ರತಿನಿಧಿಸಿದರೆ ಭಾರತ ಅದಕ್ಕೆ ತದ್ವಿರುದ್ಧವಾದ ಹಿಂದುಳಿದ, ಗ್ರಾಮೀಣ ದೇಶವನ್ನು ಪ್ರತಿನಿಧಿಸುತ್ತದೆಯೋ ಎಂಬಷ್ಟು ಕಂದಕ ಈ ಹಬ್ಬ-ಹರಿದಿನಗಳ ಆಚರಣೆಯಲ್ಲಿ ಇತ್ತೀಚೆಗೆ  ಕಾಣುತ್ತಿದೆ ಎಂದರೆ ಅತಿಶಯೋಕ್ತಿಯಲ್ಲ. ನಗರಗಳಲ್ಲಿ ಹಬ್ಬಗಳೆಂದರೆ ಜೋರಾದ ಹೂ-ಹಣ್ಣುಗಳ ಮಾರಾಟ, ಬೇಕರಿಗಳಲ್ಲಿ ತರಹೆವಾರು ಸಿಹಿತಿನಿಸುಗಳ ಜೋಡಣೆ, ಅಂಗಡಿಗಳಲ್ಲಿ ಭರಾಟೆಯ ಸೇಲ್, ಡಿಸ್ಕೌಂಟುಗಳ ಆಕರ್ಷಣೆ, ಹೊಟೆಲ್ಲುಗಳಲ್ಲಿ ಹಬ್ಬದಡಿಗೆಯ ಊಟ…ಎಲ್ಲವೂ ದುಬಾರಿ.  ಇಲ್ಲಿಗೆ ನಿಲ್ಲದೆ ಈ ಹಬ್ಬಗಳ ಸಡಗರ ದೇವಾಲಯಗಳಿಗೂ ವಿಸ್ತರಿಸಿದೆ. ಮೊದಲಾದರೆ ಕೆಲ ಹಬ್ಬಗಳಲ್ಲಿ ಮಾತ್ರ   ಅಭಿಷೇಕ, ಹೋಮಗಳು   ದೇವಾಲಯಗಳಲ್ಲಿ ನಡೆಯುತ್ತಿದ್ದವು. ಇಂದು ಹೆಚ್ಚವರಿ  ಗಳಿಕೆಗಾಗಿ  ಎಲ್ಲ ಹಬ್ಬಗಳಿಗೂ ಅವು ನಡೆಯುತ್ತವೆ.  ನಗರಗಳ ಹಬ್ಬಗಳೆಂದರೆ ದುಂದು, ಖರ್ಚು, ಹೆಚ್ಚು ಕಸ, ಮಾಲಿನ್ಯ ಎಂಬಂತಾಗಿದೆ  ಪರಿಸ್ಥಿತಿ. ಇದಕ್ಕೆ ಹಬ್ಬಗಳ ಮಾರನೇ ದಿನ ಬೀದಿಗಳನ್ನು  ಸ್ವಚ್ಛಗೊಳಿಸಲು ಹೆಣಗುವ  ಪೌರಕಾರ್ಮಿಕರ ಬವಣೆಯೇ ಸಾಕ್ಷಿ. ಈ ಕಾರಣದಿಂದ ಗ್ರಾಮೀಣ ಭಾಗದಲ್ಲಿ ನಡೆಯುವ ಸರಳ,  ನೆಲಮೂಲ ಸಂಸ್ಕೃತಿಯ. ಆಚರಣೆಯಾದ,  ಪರಿಸರ ಸ್ನೇಹಿ ಹಬ್ಬಗಳು ನನಗಿಷ್ಟ.    ಭಾರತೀಯ ಋತುಮಾನಕ್ಕೆ ಅನುಗುಣವಾಗಿ ಬರುವ ಯುಗಾದಿ  ವರ್ಷದ ಮೊದಲ ಹಬ್ಬ. ಪ್ರಕೃತಿಯ ನಲಿವಿನಲ್ಲಿ  ನಾವೂ ಜೊತೆಯಾಗುವ ಹಬ್ಬ. ನಮ್ಮ ಎಲ್ಲ ಹಬ್ಬಗಳೂ ಪ್ರಕೃತಿಗೆ ಪೂರಕವಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬೇಕು.  ಇದಕ್ಕೆ ಯುಗಾದಿಯೂ ಹೊರತಲ್ಲ. ವಸಂತನ ಆಗಮನವನ್ನು ಪ್ರಕೃತಿಯು ಹೊಸ ಹೂ-ಹಣ್ಣುಗಳನ್ನು ಒದಗಿಸುವುದರ ಮೂಲಕ ಸಂಭ್ರಮಿಸಿದರೆ,  ಅವುಗಳನ್ನು ಬಳಸಿ,  ವ್ಯಂಜನಗಳನ್ನು ತಯಾರಿಸಿ ಮನೆ-ಮಂದಿ, ಊರು-ಕೇರಿ ಸವಿದು ಸಂಭ್ರಮ ಪಡುತ್ತವೆ. ಅಂದು ತಯಾರಾಗುವ ಪದಾರ್ಥಗಳಾದರೂ ಎಂಥವು!   ನಾವು ಚಿಕ್ಕವರಿದ್ದಾಗ  ಮಾವಿನಕಾಯಿ ಚಿತ್ರಾನ್ನ,  ಮಾವಿನ ಉಪ್ಪಿನಕಾಯಿ, ಅಮಟೆಕಾಯಿಯ ಹುಳಿಸಿಹಿಪಲ್ಯ,  ಹೋಳಿಗೆ, ಕಡಲೆ ಬೇಳೆಯ ಸಿಹಿತಿನಿಸು ಮಾಲ್ದಿ, ಉದ್ದಿನ ಕಾಳಿನ ಷಂಡಿಗೆ ಇತ್ಯಾದಿ. ಜೊತೆಗೆ ಹದಮಜ್ಜಿಗೆ ಎಂದು ಕರೆಯಲ್ಪಡುವ ಮಸಾಲೆ ಮಜ್ಜಿಗೆ ಇವು ಮುಖ್ಯವಾದ ಕೆಲವು. ಇವನ್ನೆಲ್ಲ ಸಾಂಪ್ರದಾಯಿಕ ರುಚಿಕಟ್ಟಿನಲ್ಲೇ ಮಾಡುತ್ತಿದ್ದ ಅಮ್ಮನ ಕೈ ಅಡುಗೆಯ ರುಚಿಯೇ ರುಚಿ. ಇದನ್ನು ಅಪ್ಪ-ಅಮ್ಮ, ಅಕ್ಕ-ಅಣ್ಣಂದಿರೊಂದಿಗೆ  ಜೊತೆಯಾಗಿ  ನೆಲದ ಮೇಲೆ ಮಣೆಯಲ್ಲಿ ಕೂತು  ಹಿತ್ತಲ  ಬಾಳೆ ಎಲೆಯಲ್ಲಿ  ಉಂಡರೆ ಹಬ್ಬದ ಮಜವೇ ಬೇರೆ.     ಯುಗಾದಿ  ಹಬ್ಬದಲ್ಲಿ  ಮೊದಲು ಮನೆಯಲ್ಲಿ ಮಾಡುತ್ತಿದ್ದುದು ಹಿರಿಯರ ಪೂಜೆ. ಇದೊಂದು ಭಾವನಾತ್ಮಕ ಸಂದರ್ಭ. ನಾವು ಕಾಣದ ನಮ್ಮ ಅಜ್ಜ, ಮುತ್ತಜ್ಜಂದಿರನ್ನು ಸಾಂಕೇತಿಕವಾಗಿ ಹೊಸ ಬಟ್ಟೆ ಇಟ್ಟು, ಅವರಿಗೆ ದೊಡ್ಡ ಬಾಳೆ ಎಲೆಯಲ್ಲಿ ಎಡೆ ಇಟ್ಟು ಮನೆಯ ಎಲ್ಲರೂ ಆರತಿ ಮಾಡಿ ಕೈಮುಗಿಯುವಾಗ ಗಂಟಲುಬ್ಬಿ ಬರುವಂತೆ ದುಃಖ. ಕಣ್ಣರಿಯದಿದ್ದರೂ ಕರುಳು ಅರಿಯುವ ಬಾಂಧವ್ಯ. ಆ ಕ್ಷಣಕ್ಕೆ ಸಂಭ್ರಮವೆಲ್ಲ  ಮರೆಯಾಗಿ ಅಲ್ಲಿ ನೆಲೆಸುತ್ತಿದ್ದುದು ಗಂಭೀರ ಮೌನ.  ಇಂಥ ಆಚರಣೆಗಳು ನನ್ನನ್ನು ಸೋಲಿಸುತ್ತವೆ. ಬದುಕಿನ ವಿರಾಟ್ ದರ್ಶನವಾಗುವುದು ಇಂಥ ನಾಜೂಕಿನ ಸಂದರ್ಭದಲ್ಲಿ. ಆಗ ಚಿಕ್ಕವರಾದ ನಾವು ಧರಿಸುತ್ತಿದ್ದ ಹೊಸ ಬಟ್ಟೆಯ ಮೋಹಕ್ಕೂ ಮೀರಿ ಕಾಣದ ಹಿರಿಯರ ಅವ್ಯಕ್ತ ಇರುವು ನಮ್ಮನ್ನು ಹಿಡಿದು ಕಂಪಿಸುತ್ತಿತ್ತು. ಅಂದಿನ ದಿನವಿಡೀ ಕೆಲಸದ ಹೈರಾಣು ಬದುಕಿನಲ್ಲಿ ಇಂಥ ಒಂದು ದಿನ ಮರೆಯದೇ ಹಿರಿಯರನ್ನು ನೆನೆಯುವ ಆ ನಿರಾಡಂಬರ ಸಂಪ್ರದಾಯದಲ್ಲಿ  ನನಗೆ ಅಳಿದ ಮೇಲೂ ಉಳಿದ, ಉಳಿಯಲೇಬೇಕಾದ ಪ್ರೀತಿಯ  ದ್ಯೋತಕವಷ್ಟೇ ಕಾಣುತ್ತದೆ.  ದೇವರ  ಕೋಣೆಯಲ್ಲಿ  ಇಷ್ಟು ನಡೆದು ಬಾಗಿಲಾಚೆ ದಾಟಿದರೆ ಮತ್ತೆ ನಾವು ಚಿಮ್ಮುವ ನಡಿಗೆಯ ಮಕ್ಕಳೇ. ನನ್ನ ಅಮ್ಮ,” ಅಜ್ಜ- ಅಮ್ಮನಿಗೆ ಪೂಜೆ ಮಾಡ್ರಿ” ಎಂದು ಮೆಲುದನಿಯಲ್ಲಿ ನೀಡುತ್ತಿದ್ದ ಹುಕುಂ ಹಿಂದೆ ಅವರ ಬಗ್ಗೆ ಇದ್ದ ಗೌರವಾದರಗಳ ಭಾವ ಇಂದಿಗೂ ಕಿವಿಯಲ್ಲಿ ಅನುರಣಿಸುತ್ತದೆ.  ಇಂಥ ಅಮ್ಮ ನಮಗೆಂದೂ ಕಹಿ ಬೇವನ್ನು ತಿನ್ನಿಸಿಯೇ ಇರಲಿಲ್ಲ. ಮಾಲ್ದಿಯಲ್ಲಿ ಬೇವಿನ ಹೂಗಳನ್ನು ಹಾಕಿ ತಿನ್ನಲು ಕೊಡುತ್ತಿದ್ದರು. ಮಕ್ಕಳ  ಬದುಕಲ್ಲಿ ಸಿಹಿಯ ಪಾಲೇ ಹೆಚ್ಚಿರಲಿ ಎಂಬುದು ಎಲ್ಲ ತಾಯಂದಿರ ಹಾರೈಕೆಯಲ್ಲವೇ? ಅತ್ತೆಯ ಮನೆಯಲ್ಲಿ ಹಬ್ಬದ ಆರಂಭ ಕಹಿಬೇವು- ಬೆಲ್ಲವನ್ನು ತಿನ್ನುವುದರೊಂದಿಗೆ! ಇದನ್ನು ವಿಧಿಯೆನ್ನಿ ಬೇಕಾದರೆ. ಬದುಕಲ್ಲಿ ಕಹಿ- ಸಿಹಿ ಎರಡನ್ನೂ ಸಮನಾಗಿ ಸ್ವೀಕರಿಸಬೇಕು ಎಂಬ ತತ್ವದ ಈ ಆಚರಣೆ ನನಗೆ ಇಷ್ಟವಾಗಿ ಮುಂದುವರೆಸಿದೆ. ಪ್ರತಿ ವರ್ಷ ಬೇವಿನ ಎಲೆಯ ಚಿಕ್ಕ ತುಣುಕನ್ನು ತಿಂದು ಮೈ ಮುಖ ಹಿಸುಕುವ ಮಗನಿಗೆ ಜೀವನ ಹೀಗೆ. ಕಹಿಯನ್ನು ಅನುಭವಿಸಲೇಬೇಕು ಎಂದು ಹೆಳುತ್ತೇನೆ. ಈ ಸಂಪ್ರದಾಯ ಬಿಟ್ಟರೆ ಅಂಥ ಮುತ್ತಿನಂಥ ಮಾತು ಹೇಳುವ ಪ್ರಮೇಯವೆ ಬರದಲ್ಲ!  ನಮಗೆ ಯುಗಾದಿಯ ಇನ್ನೊಂದು    ವಿಶೇಷವೆಂದರೆ ಸಂಜೆಯ  ಚಂದ್ರದರ್ಶನ. ನಮ್ಮ ಮನೆಯಿದ್ದ ಉದ್ದನೆಯ ಮುಖ್ಯ ರಸ್ತೆಯ ಉದ್ದಕ್ಕೂ ಕೈಯಲ್ಲಿ ಊದಿನಕಡ್ಡಿ ಹಚ್ಚಿ ಹಿಡಿದುಕೊಂಡು ಪೂರ್ವ ಆಗಸದತ್ತ ಮುಖ ಮಾಡಿ ನಿಂತ ಸಾಲು ಸಾಲು ಜನ. ಪಾಡ್ಯದಂದು ತೆಳು ಗೆರೆಯಂತಿರುವ ಚಂದ್ರ ಸುಲಭವಾಗಿ ಗೋಚರಿಸಲಾರ. ಶುಭ್ರ ಆಕಾಶವಿದ್ದರೆ ಚುರುಕು ಕಣ್ಣುಗಳು ಬೆಳ್ಳಿಯ ಕೂದಲೆಳೆಯನ್ನು  ಗುರುತಿಸಿದಾಕ್ಷಣ ಉಸಿರು ಬಿಗಿ ಹಿಡಿದು ಕಾಯುತ್ತಿದ್ದವರಲ್ಲಿ ಮಿಂಚಿನ ಸಂಚಾರ ವಾಗುತ್ತಿತ್ತು. ಆಗ ಎಲ್ಲರ ತೋರು ಬೆರಳುಗಳೂ ಅದೇ ದಿಕ್ಕಿಗೆ ಚಾಚಿರುತ್ತಿದ್ದವು. ಕಂಡವರ ಮುಖದಲ್ಲಿ ಅರಳುತ್ತಿದ್ದ ಸಂತಸಕ್ಕೆ ಪಾರವಿರಲಿಲ್ಲ. ಕಾಣದಿದ್ದವರಲ್ಲಿ ಕೆಲವರು ಸಪ್ಪಗಾಗಿ ಒಪ್ಪಿಕೊಂಡರೂ ಕೆಲವರಿಗೆ ಕಾಣದಿದ್ದನ್ನು ಒಪ್ಪಿಕೊಳ್ಳಲಾಗದ ಬಿಗುಮಾನ. ಬೀದಿಯಲ್ಲಿ ಪರಸ್ಪರ  ಮಾತನಾಡದವರೂ ಚಂದ್ರನ  ಕಾಣಲು, ಕಾಣಿಸಲು ಒಂದಾಗುತ್ತಿದ್ದ ಅಪರೂಪದ ಕ್ಷಣವದು. ಬಹಳ ಹೊತ್ತಿನವರೆಗೂ ಅಲ್ಲಿ ಚಂದ್ರದರ್ಶನದ ಸುತ್ತಲೇ ಮಾತುಕತೆಗಳು ನಡೆಯುತ್ತಿದ್ದವು. ಕಳೆದ ಕೆಲ ವರ್ಷಗಳ ಚಂದ್ರದರ್ಶನದ ನೆನಪುಗಳು ತಾಜಾ ಆಗುತ್ತಿದ್ದವು. ಮತ್ತೆ ಇಂಥ ಭೇಟಿಗೆ ಒಂದು ವರ್ಷ ಕಾಯಬೇಕಲ್ಲ ಎಂಬ ಕಾರಣಕ್ಕೋ ಏನೋ ಯಾರಿಗೂ ಬೇಗನೇ ಅಲ್ಲಿಂದ ಕದಲಲು ಆಗುತ್ತಿರಲಿಲ್ಲ. ಕೊನೆಗೆ ಹಿರಿಯರೊಬ್ಬರು ನಡೀರಿ ದೇವರಿಗೆ ದೀಪ ಹಚ್ಚಬೇಕು ಎಂದಾಗ ಮತ್ತೊಮ್ಮೆ ಗಡಿಬಿಡಿ ಶುರುವಾಗುತ್ತಿತ್ತು. ಹಕ್ಕಿಗಳು ಗೂಡು ಸೇರುವಾಗಿನ ಕಲಕಲ  ಮನೆಯವರೆಗೂ ಸಂಚರಿಸಿ ನಿಧಾನಕ್ಕೆ ಬೀದಿ ಮೊದಲಿನಂತಾಗುತ್ತಿತ್ತು. ಸಂಜೆ ಮನೆಯ ಹಿರಿಯರಿಗೆ ನಮಸ್ಕರಿಸುವುದರೊಂದಿಗೆ  ಹಬ್ಬ ಮುಗಿಯುತ್ತಿತ್ತು.  ಈ ಒಂದು ದಿನಕ್ಕಾಗಿ ವಾರಗಳಿಂದ ಆರಂಭವಾಗುತ್ತಿದ್ದ ಮನೆಯ ಸ್ವಚ್ಛತೆ, ಅಟ್ಟದ ಧೂಳು ಕೊಡವುವುದು, ತಿಂಡಿ- ತಿನಿಸುಗಳನ್ನು ಮಾಡಲು, ತುಂಬಲು ಬೇಕಾದ ಪಾತ್ರೆಗಳನ್ನು ತೊಳೆಯುವುದು, ಸಾಮಾನುಗಳನ್ನು ಪಟ್ಟಿ ಮಾಡಿಕೊಂಡು ಶಾನಭಾಗರ ಅಂಗಡಿಗೆ ಹೋಗಿ ಕೊಟ್ಟು ಬರುವುದು, ನಸುಕಿನಲ್ಲೇ ಬಂದು ಬಾಗಿಲಿಗೆ ಹೂ ಸಿಕ್ಕಿಸಿ ಅದೃಶ್ಯವಾಗುವ   ವರ್ತನೆಯ ಹೂ ಮಾರುವವಳಿಗೆ ಹಬ್ಬಕ್ಕೆ ಎಲ್ಲರಿಗೂ ಒಂದೊಂದು ದಂಡೆ ಮಲ್ಲಿಗೆ ಹೂ ಇರಬೇಕು ಎಂದು ಹೇಳಲು  ಹಬ್ಬಕ್ಕೆ ಎರಡು ದಿನ ಮೊದಲು ಬೇಗ ಎದ್ದು  ಕಾದು ಕುಳಿತುಕೊಳ್ಳುವುದು, ಮನೆಯ ಮುಂಭಾಗದ ಅಂಗಳ ಸಾರಿಸಿ ಯಾವ ರಂಗೋಲಿ ಇಡಬೇಕು ಎಂದು ರಂಗೋಲಿ  ಬಿಡಿಸಿ ಸಂಗ್ರಹಿಸಿಟ್ಟುಕೊಂಡ ಪುಸ್ತಕವನ್ನು ಗಣಿತವೋ, ವಿಜ್ಞಾನವೋ ಅಭ್ಯಾಸ ಮಾಡಿದಂತೆ ಬಿಡಿಸಿ ಬಿಡಿಸಿ ಕಲಿತುಕೊಳ್ಳುವುದು….ಮುಂತಾಗಿ ಮನೆಯ ಎಲ್ಲರಿಗೂ ಕೆಲಸವೋ ಕೆಲಸ !!  ಹಬ್ಬದ ದಿನ  ಬೆಳಿಗ್ಗೆ ಬೇಗನೇ ಎದ್ದು   ಕೊಟ್ಟಿಗೆಯಲ್ಲಿದ್ದ ಸಗಣಿಯನ್ನು ಬಾಚಿ  ಹಳೆಯ ಬಕೀಟಿಗೆ ತುಂಬಿ ನೀರು ಸುರುವಿ ಕೈಯಾಡಿಸುತ್ತ ಅಂಗಳ ಸಾರಣೆಗೆ ಬೇಕಾಗುವ ಹದಕ್ಕೆ ಗಂಜಲ ತಯಾರಿಸುವುದನ್ನು ನಿಷ್ಠೆಯಿಂದಲೇ ಮಾಡುವುದು. ಅದರ ವಾಸನೆಗೆ ಯಾವತ್ತೂ ‘ ಇಶ್ಯಿ’  ಎನಿಸಲೇ ಇಲ್ಲ. ಅಂಗಳದ ಒಂದು ತುದಿಯಿಂದ ತಂಬಿಗೆಯಲ್ಲಿ ಸ್ವಲ್ಪ ಸ್ವಲ್ಪವೇ ಹಾಕುತ್ತ ಕಡ್ಡಿಹಿಡಿಯಲ್ಲಿ  ನಯವಾಗಿ ಕಸಬರಿಗೆಯ ಒಂದು ಕಡ್ಡಿಯ ಗುರುತೂ ಬರದಂತೆ  ಹರಡುತ್ತ ಅಂಗಳ ಪೂರ್ತಿ ಬಳಿದರೆ ನನಗೂ, ಅಮ್ಮನಿಗೂ ಖುಷಿ. ಇವೆಲ್ಲ ನಾವು ನೋಡಿ ಕಲಿತ ಪುಟ್ಟ ಜವಾಬ್ದಾರಿಗಳು. ಅದಕ್ಕಾಗಿ ಅಮ್ಮನ ಮುಖದಲ್ಲಿ ಆ ಸಂತಸದ ನಗು ಉಕ್ಕುತ್ತಿತ್ತು ಎಂದು ಈ ತಾಯಿಗೆ ಈಗ  ಅರಿವಾಗಿದೆ.  ಅದೆಂಥ ತುಂಬು ಬದುಕು!! ಈಗ ಬದಲಾಗಿದೆ ಎಂದೆನಲ್ಲವೇ? ಅಡುಗೆಗಳು ಬಹುತೇಕ  ಹಾಗೇ ಇವೆ. ಮಾಲ್ದಿ ಹೆಚ್ಚು ಇಷ್ಟ ಪಡದ ಕಾರಣ ಮೆನುವಿನಿಂದ ಕಣ್ಮರೆಯಾಗಿದೆ. ಹೊಸತಾಗಿ ಕೆಲವು ಸೇರ್ಪಡೆಯಾಗಿವೆ.  ಈಗಲೂ ಸಂಜೆ ಊದಿನಕಡ್ಡಿ ಹಚ್ಚಿಕೊಂಡು  ಟೆರೇಸಿನ ಮೇಲೆ ಹೋಗಿ ಚಂದ್ರನನ್ನು ಹುಡುಕುತ್ತೇನೆ. ಕಂಡರೆ ಎಲ್ಲ ಮೊದಲಿನಂತೆ..ಮಗ ಅಣಕಿಸಿದಾಗ ಹೇಳುತ್ತೇನೆ. ಇದು ನಮ್ಮ ಪರಂಪರೆಯ ಭಾಗ. ಬಿಟ್ಟರೆ ಕಳೆದು ಹೋಗಿಬಿಡುತ್ತದೆ. ಅನುಸರಿಸಿದರೆ ಕಳೆದ ಕಾಲವನ್ನು ಕಟ್ಟಿ ಹಾಕಿದ ಸಂತೋಷ ಆ ಕ್ಷಣಕ್ಕೆ ಆಗುತ್ತದೆ.  ಹೆಚ್ಚೇನಿಲ್ಲ.  ಇದನ್ನು ವ್ಯಾಮೋಹವೆನ್ನಿ. ಗೊಡ್ಡು ಎಂದು ಮೂಗು ಮುರಿಯಿರಿ. ಬೇಸರವಿಲ್ಲ. ಹೊಟೆಲ್ಲುಗಳಲ್ಲಿ ದುಬಾರಿ ಬಿಲ್ ತೆತ್ತು ಬೀಗುವ ಹಬ್ಬಕ್ಕಿಂತ ಇಂಥ ಬಾಗುವ ಹಬ್ಬವೇ ನನಗೆ ಪ್ರಿಯ.  ಅಡುಗೆಯನ್ನು ಹಂಚಿ ತಿನ್ನುವುದು ಹಳ್ಳಿಗಳ, ಸಣ್ಣ ಪಟ್ಟಣಗಳ ಸುಂದರ ಅಭ್ಯಾಸ. ಅದೇ ನೆವದಲ್ಲಿ ಹಾಲು- ಹೈನು ಸಮೃದ್ಧವಾಗಿ ನೀಡುವ ಆಕಳಿಗೆ ಒಂದು ಎಡೆ, ಮನೆ ದೇವರಿಗೆ ಒಂದು, ಹಿತ್ತಲಲ್ಲಿರುವ ಭೂತನ/ ಚೌಡಿ ಕಟ್ಟೆಗೆ ಒಂದು, ಊರು ದೇವರಿಗೆ ಒಂದು, ಹಿರಿಯರಿಗೆ ಒಂದು, ಹೊಸ್ತಿಲುಗಳಿಗೆ ಒಂದು..ಹೀಗೆ ಎಲ್ಲರನ್ನೂ- ಎಲ್ಲವನ್ನೂ ನೆನೆಯುವ ಸತ್ಸಂಪ್ರದಾಯವನ್ನು ಅಮ್ಮ ಅನುಸರಿಸಿಕೊಂಡು ಬಂದಿದ್ದರು.. ಇದನ್ನು ಬಿಡಲಾರದ ನಾನು ಮನೆಗೆ ಹಾಲು ಕೊಡುವವರಿಗೆ, ಅವರ ಮನೆಯ ಆಕಳಿಗೆ, ಎದುರು ಇರುವ ದೇವಸ್ಥಾನಕ್ಕೆ ಕೊಡುತ್ತೇನೆ. ಅಂದು ದೇವಾಲಯ ತುಂಬಿ ತುಳುಕುವುದರಿಂದ ಪಾಪ ಭಟ್ಟರಿಗೆ ಮನೆಗೆ ಹೋಗಲೂ ಪುರಸೊತ್ತಿರುವುದಿಲ್ಲ. ಪ್ರತಿ ಹಬ್ಬದಲ್ಲೂ ಅವರಿಗೆ ನಮ್ಮ ಮನೆಯದೇ ಊಟ. ಜೊತೆಗೆ ದೇವಾಲಯದ ಸುತ್ತಲೂ ಇರುವ ಉದ್ಯಾನ ನೋಡಿಕೊಳ್ಳುವ ಮಾಲಿಗಳಿಗೂ.  ಸಂಪ್ರದಾಯ ಗೊಡ್ಡಲ್ಲ. ಅದನ್ನು ನಾವು ಅರ್ಥಪೂರ್ಣವಾಗಿ ಮುಂದುವರೆಸಿಕೊಂಡು ಹೋಗಬಹುದು. ಹಬ್ಬದ ನೆವದಲ್ಲಿ ಇಷ್ಟೆಲ್ಲ ನೆನಪಾಗಿ ಮನಸ್ಸು ಒದ್ದೆಯಾಯಿತು. ಹೊಸ ವರ್ಷ ದುಡಿಯುವ ಕೈಗಳಿಗೆ ಬಲವನ್ನೂ,

Read Post »

You cannot copy content of this page

Scroll to Top