ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಮಕ್ಕಳ ವಿಭಾಗ

ಅಲಕ್ಷ್ಯಕ್ಕೊಳಗಾಗಿರುವ ಮಕ್ಕಳ ಸಾಹಿತ್ಯ

ಲೇಖನ ಅಲಕ್ಷ್ಯಕ್ಕೊಳಗಾಗಿರುವ ಮಕ್ಕಳ ಸಾಹಿತ್ಯ ವಿಜಯಶ್ರೀ ಹಾಲಾಡಿ ಕರ್ನಾಟಕದ ಸಾಹಿತ್ಯ ಜಗತ್ತಿನಲ್ಲಿ `ಮಕ್ಕಳ ಸಾಹಿತ್ಯ’ ಎಂಬೊಂದು ಪ್ರಕಾರ ಹೇಗಿದೆ ಎನ್ನುವ ಕಡೆಗೆ ಯೋಚನೆ ಹರಿಸಿದರೆ ಬಹಳ ಖೇದವೂ, ಆಶ್ಚರ್ಯವೂ ಉಂಟಾಗುತ್ತದೆ. ಖೇದ ಏಕೆಂದರೆ ಏಕಕಾಲದಲ್ಲಿ ನಮ್ಮ ವರ್ತಮಾನವೂ, ಭವಿಷ್ಯವೂ ಆಗಿರುವ ಮಕ್ಕಳಿಗಾಗಿ ಇರುವ ಸಾಹಿತ್ಯ ಅಲಕ್ಷ್ಯವಾಗಿರುವುದಕ್ಕೆ. ಆಶ್ಚರ್ಯವೇಕೆಂದರೆ ಇಂತಹ ತಿರುಳನ್ನೇ ನಿರ್ಲಕ್ಷಿಸಿ ಇಡೀ ಸಾಹಿತ್ಯಲೋಕ ನಿಶ್ಚಿಂತೆಯಿಂದ ಇದ್ದು ಬಿಟ್ಟಿರುವುದಕ್ಕೆ! ಸಾಹಿತ್ಯ ವಲಯದ ಹಲವರೂ, ಸಂಸ್ಥೆ-ಅಂಗಸಂಸ್ಥೆಗಳೂ, ಸ್ವತಃ ಬರಹಗಾರರೂ, ಓದುಗರು ಎಲ್ಲರೂ ಸೇರಿ ಪಕ್ಕಕ್ಕೆ ಎತ್ತಿಟ್ಟು ಮರೆತುಬಿಟ್ಟ ಒಂದು ಸೃಜನಶೀಲ ಮಾಧ್ಯಮವಿದು. ಆದರೆ ಈ ಸಾಹಿತ್ಯ ಪ್ರಕಾರವನ್ನು ಅಲಕ್ಷಿಸಿದರೆ ನಮ್ಮ ಬದುಕಿನ ಆಶಾವಾದವಾದ ಮಕ್ಕಳನ್ನು, ಅವರ ಕನಸುಗಳನ್ನು ತುಳಿದಂತೆ ಎನ್ನುವುದಂತೂ ಸತ್ಯ!  ಶಿಶುಸಾಹಿತ್ಯದ ಕುರಿತು ಚಿಂತಿಸುವಾಗ ಏಳುವ ಬಹುಮುಖ್ಯ ಪ್ರಶ್ನೆಗಳೆಂದರೆ ಮಕ್ಕಳ ಸಾಹಿತ್ಯ ಕಡಿಮೆಯಾಗುತ್ತಿದೆಯೇ? ಗುಣಮಟ್ಟದ ಮಕ್ಕಳ ಸಾಹಿತ್ಯ ಕಡಿಮೆಯಾಗುತ್ತಿದೆಯೆ? ಈ ಸಾಹಿತ್ಯವನ್ನು ಓದುವವರು ಕಡಿಮೆಯೆ ಅಥವಾ ಗಾಂಭೀರ್ಯದ ಹೆಸರಲ್ಲಿ ಮಕ್ಕಳ ಸಾಹಿತ್ಯವನ್ನು ಮೂಲೆಗುಂಪಾಗಿಸಲಾಗಿದೆಯೆ? ಇಷ್ಟಕ್ಕೂ `ಮಕ್ಕಳ ಸಾಹಿತ್ಯ’ ಎನ್ನುವುದಕ್ಕೆ ವ್ಯಾಖ್ಯೆ ಏನು? ಮುಂತಾದವು. ಇಂತಹ ಹತ್ತಾರು ಪ್ರಶ್ನೆಗಳನ್ನಿಟ್ಟುಕೊಂಡು ಯೋಚಿಸುತ್ತ ಹೊರಟರೆ ಕನಿಷ್ಟ ಉತ್ತರದ ಹಾದಿಗಾದರೂ ತಲುಪಿಕೊಳ್ಳಬಹುದು ಎಂಬ ಆಶಯ ನನ್ನದು.    `ಮಕ್ಕಳ ಸಾಹಿತ್ಯ’ ಎಂದರೆ ಪ್ರೌಢ ಬರಹಗಾರರು ಮಕ್ಕಳಿಗಾಗಿಯೇ ಬರೆದ ಸಾಹಿತ್ಯ. ನಮ್ಮ ಮಕ್ಕಳಿಗೆ ಏನನ್ನು ಕೊಡಬೇಕು ಎಂಬ ದೃಷ್ಟಿಯನ್ನಿಟ್ಟುಕೊಂಡು ಅವರಿಗೆ ಇಷ್ಟವಾಗುವಂತೆ ಹಿರಿಯರು ಬರೆಯುವ ಕವಿತೆ, ಕತೆ ಇನ್ನಿತರ ಗದ್ಯ ಪ್ರಕಾರವೇ ಮಕ್ಕಳ ಸಾಹಿತ್ಯ. ಹಾಗಾದರೆ ಮಕ್ಕಳೇ ಬರೆದ ರಚನೆಗಳಿವೆಯಲ್ಲ; ಅವು ಏನು ಎನ್ನುವುದಕ್ಕೆ ಉತ್ತರ – ಅದು `ಸಾಹಿತ್ಯ’. ಮಗುವೊಂದು ಬರೆದದ್ದು ಇತರ ಮಕ್ಕಳಿಗಾಗಿ ಬರೆದ ಸಾಹಿತ್ಯವಾಗಿರಬಹುದು ಅಥವಾ ಅಲ್ಲದೆಯೂ ಇರಬಹುದು. ಈ ವಿಷಯದ ಕುರಿತು ಈಗಾಗಲೇ ಚರ್ಚೆಗಳಾಗಿವೆ ಮತ್ತು ಸಂವಾದಗಳು ನಡೆಯುತ್ತಲೂ ಇವೆ. ಏನೇ ಆದರೂ `ಮಕ್ಕಳಿಗಾಗಿ ಹಿರಿಯರು ಬರೆದದ್ದು’ ಮತ್ತು `ಮಕ್ಕಳೇ ಬರೆದದ್ದು’ ಈ ಎರಡು ಬಗೆಯ ಬರಹಗಳನ್ನೂ ಪ್ರತ್ಯೇಕವಾಗಿ ಪರಿಗಣಿಸುವುದು ಒಳ್ಳೆಯದು.   ಮುಖ್ಯವಾಗಿ ನಮ್ಮ ವ್ಯವಸ್ಥೆಯಲ್ಲಿ ಮಕ್ಕಳು ಅಲಕ್ಷಿತರು. ಪ್ರಸ್ತುತ ದಿನಗಳಲ್ಲಿ ಅವರವರ ಒಂದೋ, ಎರಡೋ ಮಕ್ಕಳಿಗೆ ಜನರು ಬಹಳ ಪ್ರಾಮುಖ್ಯತೆ ಕೊಡುತ್ತಿದ್ದಾರೆ ಎಂದು ನಮಗನ್ನಿಸಿದರೂ ಹೀಗಿಲ್ಲದ ಪೋಷಕರೂ ಬಹು ಸಂಖ್ಯೆಯಲ್ಲಿದ್ದಾರೆ. ಅದಲ್ಲದೇ ಊಟ, ವಸತಿ, ಪ್ರೀತಿ ಎಲ್ಲದರಿಂದ ವಂಚಿತರಾಗಿ ಅಕ್ಷರಶಃ ತಬ್ಬಲಿಗಳಾದ ಮಕ್ಕಳ ಸಂಖ್ಯೆಯೂ ನಾವು ಗಾಬರಿಬೀಳುವ ಪ್ರಮಾಣದಲ್ಲಿದೆ! ಪ್ರಾಮುಖ್ಯತೆ ಕೊಡುತ್ತಿರುವ ಪಾಲಕರಾದರೂ ತಮ್ಮ ಮಕ್ಕಳ ಬೇಕು-ಬೇಡಗಳನ್ನು ಗಮನಿಸುತ್ತಾರೋ ಅಥವಾ ತಮ್ಮ ಇಷ್ಟ ಅನಿಷ್ಟಗಳನ್ನು ಮಕ್ಕಳ ಮೇಲೆ ಹೇರುತ್ತಿದ್ದಾರೋ ಎಂದು ಗಮನಿಸಿದರೆ ಎರಡನೆಯ ಅಂಶವೇ ಉತ್ತರವೆಂಬುದು ಕಣ್ಣಿಗೆ ರಾಚುತ್ತದೆ. ತಮ್ಮ ಆಸೆಯಂತೆ ತಮ್ಮ ಮಕ್ಕಳನ್ನು `ತಿದ್ದುವುದೇ’ ಹೆಚ್ಚಿನ `ಪ್ರಜ್ಞಾವಂತ’ರ ಕಾಳಜಿ! ಈ ಕಾಳಜಿಯಲ್ಲಿ ಮಕ್ಕಳ ವಿದ್ಯಾಭ್ಯಾಸ ಕೂಡ ಭವಿಷ್ಯದ ದೊಡ್ಡ ಹುದ್ದೆ, ದೊಡ್ಡ ಹಣದ ಮೇಲೆ ಅವಲಂಬಿತವಾಗಿದೆ ಎಂದಾಗ ಮಕ್ಕಳ ಹವ್ಯಾಸ, ಆಸಕ್ತಿಯ ಕುರಿತಾದ ಜಾಗ್ರತೆ ಬಹುತೇಕ ಶೂನ್ಯ! ತಮ್ಮ ಮಕ್ಕಳು ಅವರಿಷ್ಟದ ಸೃಜನಶೀಲ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಲಿ; ಕತೆ, ಕವಿತೆ, ಕಾದಂಬರಿಗಳನ್ನು ಓದಲಿ ಎನ್ನುವವರು ಪ್ರಜ್ಞಾವಂತರಲ್ಲೂ ವಿರಳ. ಪರಿಸ್ಥಿತಿ ಹೀಗಿರುವಾಗ ಇನ್ನುಳಿದ ಮಂದಿ ಇಂಥವರ ಅನುಕರಣೆಯನ್ನು ಮಾತ್ರ ಮಾಡುವುದು ತಪ್ಪೆನ್ನಲಾಗದು! ಇದಕ್ಕೆ ಹೊರತಾಗಿ ಪೋಷಕರ ಆಸರೆಯೇ ಇಲ್ಲದೆ ಬದುಕುತ್ತಿರುವ ದೊಡ್ಡ ಸಂಖ್ಯೆಯ ಮಕ್ಕಳ ಅಭಿರುಚಿ, ಭಾವನೆಗಳನ್ನು ಕೇಳುವವರಾರು? ಹೀಗಾಗಿ ಮಕ್ಕಳ ಸಾಹಿತ್ಯ ಅಲಕ್ಷಿತವಾಗುವುದಕ್ಕೂ ಮಕ್ಕಳು ಅಲಕ್ಷಿತರಾಗಿರುವುದಕ್ಕೂ ಬಹು ಮುಖ್ಯ ಸಂಬಂಧವಿದೆ. ಇನ್ನು, ಮಕ್ಕಳ ಸಾಹಿತ್ಯವೇ ಕಡಿಮೆಯಾಗುತ್ತಿದೆಯೇ ಅಥವಾ ಗುಣಮಟ್ಟದ ಬರಹಗಳು ಕಡಿಮೆಯಾಗುತ್ತಿದೆಯೆ? ಎಂಬ ಎಳೆಯನ್ನಿಟ್ಟುಕೊಂಡು ಹೊರಟರೆ ಎರಡಕ್ಕೂ ‘ಹೌದು’ ಎನ್ನುವ ಉತ್ತರವೇ ದೊರಕುತ್ತದೆ. ಇದಕ್ಕೆ ಕಾರಣ, ಪರಿಸ್ಥಿತಿ, ಸಂದರ್ಭಗಳು ಹಲವು. ಈ ಕುರಿತುಅಧ್ಯಯನ ಮಾಡಿದ ವಿದ್ವಾಂಸರ ಪ್ರಕಾರ ನಮ್ಮರಾಜ್ಯದಲ್ಲಿ ಮಾತ್ರವಲ್ಲದೆ ಇತರ ಕಡೆಯೂ ಮಕ್ಕಳ ಸಾಹಿತ್ಯದ ಸ್ಥಿತಿ ಹೀಗೆಯೇ ಇದೆ. ಮಲಯಾಳಂ ಮತ್ತು ಹಿಂದಿಯಲ್ಲಿ ಬೇರೆಲ್ಲ ಭಾಷೆಗಿಂತ `ಅಡ್ಡಿಲ್ಲ’ ಎನ್ನುವ ವಾತಾವರಣಇದೆ ಅಷ್ಟೇ. ಅಮೇರಿಕಾದಂತಹ ದೇಶದಲ್ಲಿ ಮಕ್ಕಳ ಸಾಹಿತ್ಯಕ್ಕೆ ಬಹು ಬೇಡಿಕೆ, ಜನಪ್ರಿಯತೆ ಇರುವುದು ಹೌದಾದರೂ ಪ್ರೌಢ ಸಾಹಿತ್ಯಕ್ಕೆ ಹೋಲಿಸಿಕೊಂಡರೆ ಅಲ್ಲೂ ಮಕ್ಕಳ  ಸಾಹಿತ್ಯ ಒಂದು ಹೆಜ್ಜೆ ಹಿಂದೆಯೇ! ನಮ್ಮಲ್ಲಿ ಶಿಶು ಸಾಹಿತ್ಯದ ಪ್ರಮಾಣ ಪ್ರೌಢ ಸಾಹಿತ್ಯಕ್ಕಿಂತ ಕಮ್ಮಿ ಹೌದು. ಆದರೆ ಬರವಣಿಗೆ ಕಡಿಮೆ ಎನ್ನುವುದಕ್ಕಿಂತ ಗುಣಮಟ್ಟದ ಬರಹಗಳು ಕಮ್ಮಿ ಎಂಬ ಮಾತು ಮತ್ತಷ್ಟು ಸರಿಯೆನಿಸುತ್ತದೆ. ಮಕ್ಕಳ ಸಾಹಿತ್ಯವೆಂದರೆ `ಲಘು ಸಾಹಿತ್ಯ, ಯಾರೂ ಬರೆಯಬಹುದಾದದ್ದು, ಪಾಂಡಿತ್ಯ ತಿಳುವಳಿಕೆ ಬೇಡದಿರುವುದು’ ಎಂಬ ಅಭಿಪ್ರಾಯ ಸರ್ವೇಸಾಮಾನ್ಯವಾಗಿದೆ. ಹಾಗಾಗಿ ಹೊಸತನವೇ ಇಲ್ಲದ, ಅದೇ ಹಳೆಯ ಪ್ರಾಸಗಳಿಗೆ ಜೋತುಬಿದ್ದ, ಸಾಂಪ್ರಾದಾಯಿಕ ವಸ್ತು- ನಿರೂಪಣೆಗೆ ನಿಷ್ಠವಾದ ಶಿಶುಸಾಹಿತ್ಯ ಧಂಡಿಯಾಗಿ ರಚನೆಯಾಗುತ್ತಿದೆ. ಇಂತಹ ಸವಕಲು ಸರಕೇ ಈಚೆ ಯಾರೂ ಕಣ್ಣೆತ್ತಿ ನೋಡದಿರುವುದಕ್ಕೆ ಒಂದು ದೊಡ್ಡ ಕಾರಣವೂ ಆಗಿದೆ! `ಮಕ್ಕಳಿಗಾಗಿ ಪ್ರಕಟಿಸಿದ ಪುಸ್ತಕಗಳು ಮಾರಾಟವಾಗುವುದಿಲ್ಲ’  ಎಂದು ಪ್ರಕಾಶಕರು ಚಿಂತೆ ವ್ಯಕ್ತಪಡಿಸುವುದಕ್ಕೂ ಇದೊಂದು ಪ್ರಮುಖ ಕಾರಣ. ಆದರೆ ಈ ಹೊತ್ತಲ್ಲೇ ಹೇಳಬೇಕಾದ ಮಾತೆಂದರೆ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಮಕ್ಕಳ ಸಾಹಿತ್ಯ ಬದಲಾವಣೆಗೆ ತೆರೆದುಕೊಳ್ಳುತ್ತಿದೆ; ಅನೇಕ ಹೊಸಬರ, ಸೃಜನಶೀಲ ಬರಹಗಾರರ ಕಲ್ಪನೆಯ ಮೂಸೆಯಲ್ಲಿ ರೂಪು ಪಡೆಯುತ್ತಾ ಸಾಗಿದೆ ಎಂಬುದು. ಮಕ್ಕಳಿಗಾಗಿ ಫ್ರೆಶ್‌ ಆದ ಗದ್ಯ, ಪದ್ಯಗಳನ್ನು ಕೊಡಬೇಕೆಂಬ ತುಡಿತದಲ್ಲಿ ಇಂತವರು ಗಂಭೀರವಾಗಿ ತೊಡಗಿಸಿಕೊಂಡಿದ್ದಾರೆ. ನವೋದಯದ ಕಾಲದಲ್ಲಿ ಪಂಜೇ ಮಂಗೇಶರಾಯರು, ಕುವೆಂಪು, ಶಿವರಾಮ ಕಾರಂತ, ಹೊಯ್ಸಳ, ಜಿ.ಪಿ ರಾಜರತ್ನಂ, ಸಿದ್ದಯ್ಯ ಪುರಾಣಿಕರು ಮೊದಲಾದ ಹಿರಿಯರನೇಕರು ಬಹಳ ಆಸ್ಥೆಯಿಂದ ಮಕ್ಕಳಿಗಾಗಿ ಬರೆದಿದ್ದರು. ಅದರ ನಂತರ ಸುದೀರ್ಘಕಾಲದ ಬಳಿಕ ಕಳೆದ ಶತಮಾನದ ಕೊನೆಯ ದಶಕಗಳಲ್ಲಿ ಮತ್ತೊಮ್ಮೆ ಮಕ್ಕಳ ಸಾಹಿತ್ಯ ಚಿಗುರಿತು. ಈಗ ಪುನಃ ಅಂತಹ ದಿನಗಳು ಬರಲಾರಂಭಿಸಿವೆ ಎಂಬ ಆಶಾವಾದವನ್ನು ಮಕ್ಕಳ ಕ್ಷೇತ್ರದಲ್ಲಿ ತೊಡಗಿಕೊಂಡ ತಜ್ಞರು ವ್ಯಕ್ತಪಡಿಸುತ್ತಿದ್ದಾರೆ ಎಂಬುದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಬೇಕಾಗಿದೆ.    ಮಕ್ಕಳ ಸಾಹಿತ್ಯಕ್ಷೇತ್ರದ ವಿಕಾಸಕ್ಕೆ ತಡೆಯಾಗಿರುವ ಇನ್ನೊಂದು ಮುಖ್ಯ ಸಮಸ್ಯೆ `ಶ್ರೇಷ್ತ್ರತೆಯ ವ್ಯಸನ’! ಬಹಳ ಓದಿಕೊಂಡವರು, ಚಿಂತಕರು, ಗಂಭೀರ ಸಾಹಿತ್ಯ ಬರೆಯುವವರು ಮಕ್ಕಳ ಸಾಹಿತ್ಯಕೃಷಿ ಮಾಡಿದರೆ ಬೆಲೆ ಕಮ್ಮಿ ಎಂಬ ಒಂದು ಮನಸ್ಥಿತಿ ಪ್ರಚಲಿತದಲ್ಲಿದೆ. ಇದರಿಂದಾಗಿ ಮಕ್ಕಳ ಸಾಹಿತ್ಯಕ್ಕೆ ನಷ್ಟವಾಗಿದೆ ಎಂದೇ ಹೇಳಬಹುದು. ಅಂತಹ ಬರಹಗಾರರ ಸೃಜನಶೀಲತೆ, ಯೋಚನೆಗಳು ನಮ್ಮ ಮಕ್ಕಳಿಗೆ ದೊರಕಲಿಲ್ಲ. ನವೋದಯಕಾಲದ ಹಿರಿಯ ಕವಿಗಳನ್ನು ನೆನಪಿಸಿಕೊಂಡು ಈ ವಿಷಯದಲ್ಲಿ ಇನ್ನಾದರೂ ನಾವು ಬದಲಾಗಬೇಕಾದ ತುರ್ತಿದೆ. ಮಕ್ಕಳಿಗಾಗಿ ಬರೆಯುವುದು, ಮಕ್ಕಳ ಸಾಹಿತ್ಯ ಓದುವುದು ಇವೆರಡೂ ಬದುಕಿನ ಪ್ರೀತಿ, ಸರಳ ಖುಷಿ ಎಂದು ಪರಿಗಣಿಸಬೇಕಾಗಿದೆ. “ಮಕ್ಕಳಿಗಾಗಿ ಬರೆಯಬೇಕೆಂದರೆ ಮಕ್ಕಳ ಮಟ್ಟಕ್ಕೆ ನಾವು ಏರಬೇಕು” ಎನ್ನುತ್ತಾರೆ. ಏರುವುದೋ, ಇಳಿಯುವುದೋ ಒಟ್ಟಿನಲ್ಲಿ ಬರಹಗಾರನೇ/ಳೇ ಮಗುವಾಗಬೇಕಾದದ್ದು ಮೊದಲ ಅಗತ್ಯ. ಮಗುವಿನ ಮುಗ್ಧತೆ, ಕುತೂಹಲ, ಪ್ರಾಮಾಣಿಕತೆ ಮೊದಲಾದವು ಈ ಬರಹಗಾರರಲ್ಲಿ ಹುದುಗಿರಬೇಕಾದ ಬಹು ಮುಖ್ಯ ಅಂಶ. ಹೀಗೆ ಮಗುವೇ ಆಗಿ ಪರಕಾಯ ಪ್ರವೇಶ ಮಾಡಿದಾಗ ಮಾತ್ರ ಒಂದೊಳ್ಳೆ ಪದ್ಯವೋ, ಕತೆಯೋ ಬರೆಯಲು ಸಾಧ್ಯ. ದಿನನಿತ್ಯದ ದಂದುಗದಲ್ಲಿ ಏಗಿ ಸೂಕ್ಷ್ಮತೆಯನ್ನು, ಮಗುತನವನ್ನು ಕಳೆದುಕೊಂಡು ಜಡ್ಡುಬಿದ್ದಿರುವ ನಮ್ಮಂತಹ ದೊಡ್ಡವರಿಗೆ ಇದು ಕಷ್ಟವೆ! ಈ ಕಾರಣಕ್ಕಾಗಿಯೂಗುಣಮಟ್ಟದ ಮಕ್ಕಳ ಸಾಹಿತ್ಯ ಕಡಿಮೆಯಾಗಿರಬಹುದು. ಇಲ್ಲಿಯೇ ಚರ್ಚಿಸಬೇಕಾದ ಮತ್ತೊಂದು ಅಂಶವೆಂದರೆ ಮಕ್ಕಳ ಸಾಹಿತ್ಯಎಂದೊಡನೆ ಅದು `ಸರಳ’ ಆಗಿರಬೇಕು ಎಂಬ ತೀರ್ಮಾನಕ್ಕೆ ಬಂದುಬಿಡುವುದು! ಕೇಳಿ ಕೇಳಿ ಬೇಸರ ತರಿಸಿರುವ ಮಾದರಿಯನ್ನೇ ಆಯ್ದುಕೊಂಡು ಸರಳತೆಯ ಹೆಸರಲ್ಲಿ ಏನೋ ಬರೆದು ಬಿಡುವುದು! ಪುಟಾಣಿ ಮಗುವಿನಿಂದ ಹಿಡಿದು ಹದಿನೈದು-ಹದಿನಾರು ವರ್ಷದವರೆಗಿನ ಮಕ್ಕಳೂ ಈ ಸಾಹಿತ್ಯದ ವ್ಯಾಪ್ತಿಯಲ್ಲಿ ಪರಿಗಣಿತವಾಗುವುದರಿಂದ ರಚನೆಗಳಲ್ಲೂ ವೈವಿಧ್ಯತೆ ಇರಬೇಕಾದದ್ದು ಸಹಜ. ಆದರೆ ಯಾವ ವಯಸ್ಸಿನ ಮಕ್ಕಳಿಗೆ ಬರೆದದ್ದೇ ಇರಲಿ; ಗುಣಮಟ್ಟದ್ದಾಗಿದ್ದರೆ ಅದು ದೊಡ್ಡವರೂ ಓದಿ ಖುಷಿಪಡುವಂತಿರುತ್ತದೆ! ಹೀಗಾಗಿ ಮಕ್ಕಳ ಸಾಹಿತ್ಯ ಎಂದು ಪ್ರತ್ಯೇಕಿಸುವುದು ಸಾಹಿತ್ಯದ `ಪ್ರಕಾರ’ ಗುರುತಿಸುವುದಕ್ಕಾಗಿ, ವಿಮರ್ಶೆಯ ಸವಲತ್ತಿಗಾಗಿ ಮತ್ತೂ ಹೆಚ್ಚೆಂದರೆ ಪ್ರಶಸ್ತಿಗಳ ಪ್ರವೇಶಾತಿಗಾಗಿ ಅಷ್ಟೇ. ಪೂರ್ಣಚಂದ್ರ ತೇಜಸ್ವಿ ಅವರ ವಿಸ್ಮಯ, ದೇಶ-ವಿದೇಶ ಸರಣಿಯ ಪುಸ್ತಕಗಳು, ಅಮೇರಿಕಾದ ಲಾರಇಂಗಲ್ಸ್ ವೈಲ್ಡರ್ ಬರೆದ ಕಾದಂಬರಿ ಸರಣಿ ಇಂತಹ ಸಾಹಿತ್ಯವನ್ನು ಗಮನಿಸಿದರೆ ದೊಡ್ಡವರು-ಮಕ್ಕಳು ಎಂಬ ಭೇದವಿಲ್ಲದೆ ಓದುವಿಕೆ ಇರುತ್ತದೆ ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ಮಕ್ಕಳ ಸಾಹಿತ್ಯವೆಂದರೆ ಬರೀ ಪಂಚತಂತ್ರದ ಕತೆಗಳು, ಪ್ರಾಸಪದ್ಯಗಳು, ಕಥನಕವನಗಳು, ರಾಜರಾಣಿಯ ಕತೆಗಳು, ಪೌರಾಣಿಕ ವಿಷಯಗಳು ಅಲ್ಲ; ಇದರಾಚೆಗೆ ಅನೇಕ ವಸ್ತು-ವಿಷಯ-ನಿರೂಪಣೆಯ ಮಾಧ್ಯಮವಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕಾಗಿದೆ. ಅಳಿಲು, ಬೆಕ್ಕು, ನಾಯಿ, ಇರುವೆ, ಗೂಬೆ, ಬಸವನ ಹುಳು, ಇಲಿ, ಹೂವು, ಗಿಡಮರಗಳು, ಬದಲಾದ ಈ ಕಾಲದ ಮಗುವೊಂದರ ಖುಷಿ-ಸಂಕಷ್ಟಗಳು ಹೀಗೆ… ವಿಫುಲ ವಿಷಯಗಳಿವೆ. ಲಲಿತ ಪ್ರಬಂಧ, ಕಾದಂಬರಿ, ಪುಟಾಣಿಕತೆ, ಅನುಭವಕಥನ, ಫ್ಯಾಂಟಸಿಗಳು ಹೀಗೆ ವಿವಿಧ ಅಭಿವ್ಯಕ್ತಿಯ ಪ್ರಕಾರಗಳಿವೆ…..  ಈ ಸಂದರ್ಭದಲ್ಲಿ ಒಂದು ಮುಖ್ಯ ಪ್ರಶ್ನೆಯನ್ನು ಎತ್ತಿ ಈ ಬರಹವನ್ನು ಮುಗಿಸುತ್ತೇನೆ. `ಮಕ್ಕಳ ಸಾಹಿತ್ಯ’ ಒಂದು ಸಾಹಿತ್ಯ ಪ್ರಕಾರವಲ್ಲವೆ? ಸಣ್ಣಕತೆ, ಕವಿತೆ, ನಾಟಕ, ಕಾದಂಬರಿ, ಆತ್ಮಕಥೆ, ಜೀವನಚರಿತ್ರೆ, ವಿಚಾರಸಾಹಿತ್ಯ, ಪ್ರಬಂಧ ಹೀಗೆ ಇವೆಲ್ಲವೂ ವಿಮರ್ಶೆಗೆ, ಓದಿಗೆ, ಮರುಓದಿಗೆ ಒಳಪಡುತ್ತಿರುವ ಈ ಹೊತ್ತಿನಲ್ಲಿ ಮಕ್ಕಳ ಸಾಹಿತ್ಯವನ್ನೇಕೆ ಮೂಲೆಗುಂಪಾಗಿಸಲಾಗಿದೆ? ಕನಿಷ್ಠ ಒಂದು ಓದು, ವಿಮರ್ಶೆ, ಒಂದು ಗಮನಿಸುವಿಕೆಯನ್ನಾದರೂ ಈ ಸಾಹಿತ್ಯ ಕೃತಿಗಳು ಬಯಸಬಾರದೇ? ಕನಿಷ್ಠ ಒಂದು ಮೆಚ್ಚುಗೆಯ ಮಾತಾದರೂ ಮಕ್ಕಳ ಸಾಹಿತಿಗೆ ದೊರಕಬಾರದೆ? ಪ್ರೌಢ ಸಾಹಿತ್ಯದ ಮನ್ನಣೆಯ ಅಬ್ಬರದಲ್ಲಿ ನಿರ್ಲಕ್ಷಿತ ಮಕ್ಕಳ ಸಾಹಿತ್ಯ ಕೊಚ್ಚಿಹೋಗಬೇಕೆ? ಇದು ಖಂಡಿತಾ ಸರಿಯಲ್ಲ. ಪ್ರಜ್ಞಾವಂತ ಓದುಗರು, ವಿಮರ್ಶಕರು ಈ ಕುರಿತು ಗಮನ ಹರಿಸಲೇಬೇಕು. (ಪ್ರೋತ್ಸಾಹದದೃಷ್ಟಿಯಿಂದ ಸಾಹಿತ್ಯಅಕಾಡಮಿಯಿಂದ ತೊಡಗಿಇತರ ಕೆಲವು ಸಂಸ್ಥೆಗಳು ಕೊಡಮಾಡುವ ಕೆಲ ಪ್ರಶಸ್ತಿ, ಪುರಸ್ಕಾರಗಳು ಮಕ್ಕಳ ಸಾಹಿತ್ಯಕ್ಕಿವೆ ಎಂದು ಇಲ್ಲಿ ನೆನಪಿಸಿಕೊಳ್ಳುವೆ). ಮಕ್ಕಳ ಸಾಹಿತ್ಯ ಅಲಕ್ಷಿತವಾದರೆ ನಮ್ಮ ಮಕ್ಕಳು ಅಲಕ್ಷಿತವಾದಂತೆ, ಅವರು ಮೂಲೆಗುಂಪಾದರೆ ಇಡೀ ಸಮಾಜವೇ ಮೂಲೆಗುಂಪಾದಂತೆ ಎಂಬ ಎಚ್ಚರಿಕೆ ನಮ್ಮಲ್ಲಿರಬೇಕಾದದ್ದು ಅತ್ಯಗತ್ಯ.  ಪ್ರೌಢ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯ ಎರಡರಲ್ಲೂ ಗಂಭೀರವಾಗಿ ತೊಡಗಿಕೊಂಡು ಉತ್ತಮ ಕೃತಿಗಳನ್ನು ನೀಡುತ್ತಿರುವ ಬರಹಗಾರರ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಸಂತಸದ ಸಂಗತಿ. ಹಾಗೇ ಪುಸ್ತಕವನ್ನು ಕೊಂಡು ಓದುವ ಸಂಸ್ಕೃತಿಯೂ ಬೆಳೆಯಲಿ. ಮಕ್ಕಳ ಸಾಹಿತ್ಯ ಕೃತಿಗಳನ್ನು ಮಕ್ಕಳು, ದೊಡ್ಡವರು ಸಮಾನವಾಗಿ ಓದಬಲ್ಲ ಪೂರಕ ವಾತಾವರಣ ಸೃಷ್ಟಿಯಾಗಲಿ ಎನ್ನುವುದು ಪ್ರಜ್ಞಾವಂತರೆಲ್ಲರ ಆಶಯ. **************************************************

ಅಲಕ್ಷ್ಯಕ್ಕೊಳಗಾಗಿರುವ ಮಕ್ಕಳ ಸಾಹಿತ್ಯ Read Post »

ಇತರೆ

ಕೊಂಕಣಿ ಕವಿ ಪರಿಚಯ

ಕೊಂಕಣಿ ಕವಿ ಪರಿಚಯ ಫೆಲ್ಸಿ ಲೋಬೊ ಶ್ರೀಮತಿ ಫೆಲ್ಸಿ ಲೋಬೊಶಿಕ್ಷಕಿ, ಸಂತ ಎಲೋಶಿಯಸ್ ಪ್ರೌಢಶಾಲೆ, ಮಂಗಳೂರು.ಹವ್ಯಾಸ: ಕವನ, ಲೇಖನ ಬರಹಕನ್ನಡ, ಕೊಂಕಣಿ, ತುಳು ಭಾಶೆಗಳಲ್ಲಿ.ಕೊಂಕಣಿಯ, ರಾಕ್ಣೊ, ಉಜ್ವಾಡ್, ಸೆವಕ್, ಮುಂತಾದ ಪತ್ರಿಕೆಗಳಲ್ಲಿ, ವೀಜ್ ಪಾಕ್ಶಿಕ ದಲ್ಲಿ, ಕವಿತಾ ಡಾಟ್ ಕಾಮ್ ಗಳಲ್ಲಿ ಬರಹಗಳ ಪ್ರಕಟವಾಗಿದೆ. ಕವಿಗೋಶ್ಟಿಗಳಲ್ಲಿ ಭಾಗವಹಿಸುವಿಕೆ, ವಿವಿಧ ಸಾಹಿತ್ಯ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಲಾಗಿದೆ. ಆಕಾಶವಾಣಿ ಮಂಗಳೂರು ರೇಡಿಯೊ ಹಾಗೂ ಸಾರಂಗ್ ರೇಡಿಯೊ ದಲ್ಲಿ ಕಾರ್ಯಕ್ರಮಗಳು ಪ್ರಸಾರ ಕಂಡಿವೆ. ” ಗರ್ಜೆತೆಕಿದ್ ಗಜಾಲಿ” ಎಂಬ ಚೊಚ್ಚಲ ಲೇಖನ ಪುಸ್ತಕ ಪ್ರಕಟವಾಗಿದೆ. ವಿದ್ಯಾರ್ಥಿಗಳನ್ನು ಸಾಹಿತ್ಯಾಸಕ್ತಿ ಬೆಳೆಸಲು ವಿವಿಧ ಸ್ಪರ್ಧೆಗಳಿಗೆ ಪ್ರೋತ್ಸಾಹಿಸಿ ಕಳುಹಿಸಲಾಗಿದೆ. ಸೃಜನಾತ್ಮಕ ಬರಹಗಳಿಗೆ ಪ್ರೋತ್ಸಾಹಿಸಿ, ಚುಟುಕುಗಳ ಸಂಗ್ರಹ” ಝೇಂಕಾರ” ಪ್ರಕಟಗೊಂಡಿದೆ. ಜೆಸಿಐ ಮಂಗಳೂರು, ಲಾಲ್ ಭಾಗ್ ರವರು ಶಿಕ್ಷಕರ ದಿನದಂದು, ಬಹುಮುಖ ಪ್ರತಿಭಾ ಶಿಕ್ಷಕಿ ಸನ್ಮಾನ ನೀಡಿ ಗೌರವಿಸಿರುತ್ತಾರೆ. ಫೆಲ್ಸಿ ಲೋಬೊ ಅವರು ಬರೆದ ಕೊಂಕಣಿ ಮತ್ತು ಕನ್ನಡ ಕವಿತೆಗಳು ನಿಮ್ಮೆಲ್ಲರಿಗಾಗಿ. ತಾಂಚೆ ಫಾತರ್ ಆನಿ ಹಾಂವ್~~~ ಕೊಣಾಯ್ಚ್ಯಾ ಹೆಳ್ಕೆ ವಿಣೆಕಿರ್ಲೊನ್ ವಾಡ್ಲೆಲ್ಯಾ ದೆಣ್ಯಾಂರುಕಾರ್ ಕಾಳಾ ತೆಕಿದ್ಕೊಂಬ್ರೆ, ಫಾಂಟೆ ವಿಸ್ತಾರ್ಲೆಸೊಪ್ಣಾಂಚ್ಯಾ ಪಿಶ್ಯಾ ಫುಲಾಂನಿದೆಖ್ತೆಲ್ಯಾಕ್ ಪಿಶ್ಯಾರ್ ಘಾಲೆಂ ಬರಿಂ ಫುಲಾಂ ಘೊಸ್ ಭಾಂದ್ತಾನಾಫಳಾಂನಿ ಆಸ್ರೊ ಸೊದ್ಲೊಫಳಾ ರುಚಿಂನಿ ಗರ್ಜೊಥಾಂಭಯ್ತಾನಾ, ತಾಣಿಂಫಾತರ್ ವಿಂಚ್ಲೆ ಸುರ್ವೆರ್ ಹಳ್ತಾಚೆ ಮಾರ್ವಾಡಾತ್ತ್ ಗೆಲೆ ವರ್ಸಾಂಭರ್ಮಾರ್ಲೆಲ್ಯಾ ಹರ್ ಫಾತ್ರಾಂಕಿಹಗೂರ್ ವಿಂಚುನ್ ಪೆಳಿ ಭಾಂದ್ಲಿ ತುಮಿ ಮಾರ್ಲೆಲ್ಯಾ ಹರ್ ಫಾತ್ರಾಂಕಿಮೋಲ್ ಭಾಂದ್ಲಾಂವೆಂಪೆಳಿಯೆರ್ ಬಸೊನ್ಲಿಖ್ತಾಂ ಆಜ್ ಯಾದಿಂಚ್ಯೊ ವೊಳಿ ತುಮಿ ಛಾಪ್ಲೆಲ್ಯಾ ಪಯ್ಲ್ಯಾ ಪಾನಾಕ್ಆಜ್ ಹಾಂವೆ ಲಿಖ್ಚ್ಯಾ ಹರ್ ಪಾನಾಂಕ್ಫರಕ್ ಇತ್ಲೊಚ್ಫಾತ್ರಾಂ ಪೆಳಿಯೆ ಥಾವ್ನ್ ಖಾಂತ್ಚ್ಯಾಉತ್ರಾಂ ಪಾಟ್ಲ್ಯಾನ್ ನಾಂವ್ ಆಸಾಅನಾಮಿಕ್ ನೈಂ ನಿಮ್ಮ ಕಲ್ಲ ಬೆಂಚು~~~~ನನಗರಿವಿಲ್ಲದೆಯೆ ಬೆಳೆದುಹೆಮ್ಮರವಾದ ಸದ್ಗುಣದ ಮರದಎಳೆ ಚಿಗುರು, ಕೊಂಬೆಬಲಿತ ರೆಂಬೆಗಳೆಡೆಯಲಿಅದಾಗಲೆ ಹುಚ್ಚು ಹೂಗಳ ಸರದಿ ಹೀಚು ಕಾಯದು ಬೆಳೆದುಕಾಯಾಗಿ ಬಲಿತು ಬಲು ರುಚಿಯಿಂದ ನಿಮ್ಮ ಒಲಿದಾಗಕಲ್ಲೆಸೆದು ಕೊಯ್ದವರೆತುಸು ತಾಳಿ ಎಸೆದ ಒಂದೊಂದು ಕಲ್ಲತಾಳ್ಮೆಯಿಂ ಶೇಖರಿಸಿ ಬೆಂಚೊಂದಕಟ್ಟಿರುವೆನುಅಲ್ಲೆ ಕುಳಿತು ತಿರುಚುವ ಒಂದೊಂದುಕಾಗುಣಿತಕ್ಕು ಎತ್ತಣಿಂದೆತ್ತ ಸಂಬಂಧ ! ಪ್ರಹಾರಗಳ ನೋವು ಆರಿಕಲ್ಲು ಬೆಂಚು ಬೆಳೆದಿದೆ ಹೆಗಲೇರಿನಿಮ್ಮ ಹಾಳೆಯಂತಲ್ಲಇಲ್ಲಿ ಪೋಣಿಸುವ ಒಂದೊಂದುಅಕ್ಷರದ ಹಿಂದೊಂದು ಹೆಸರಿದೆಇದು ಅನಾಮಿಕವಲ್ಲ ಪ್ರಶಸ್ತಿ ನಾತ್ಲೆಲೆ ಪಾತ್ರ್ # ಜಿವಿತಾಚ್ಯೆ ರಂಗ್ ಮಾಂಚಿಯೆರ್ಉಂಚ್ಲೆ ಪಾತ್ರ್ ತುಜೆಪಾಳ್ಣ್ಯಾ ಥಾವುನ್ ಪೆಟೆ ಪರ್ಯಾಂತ್ವಿಚಾರ್ ಖೂಬ್ ಗರ್ಜೆಚೆ ರಂಗಾಳ್ ಆಂಗ್ಲಿಂ ನ್ಹೆಸೊನ್ಆಂಗಣ್ ಭರ್ ಚರ್ಲೆಲಿಂ ಪಾವ್ಲಾಂವಾಡೊನ್ ಎತಾಂ ಭಂವ್ತಿಲ್ಯಾ ದೊಳ್ಯಾಂಚಿಭುಕ್ ಥಾಂಭಂವ್ಚೆಂ ಆಹಾರ್ ಜಾತಾತ್ ಘರ್ಚ್ಯಾ ಚಲಿಯೆ ಖಾತಿರ್ಸೆಜ್ರಾ ಉಠ್ತಾ ಆಕಾಂತ್ದೊಳೆಚ್ಚ್ ಕೆಮರಾ ಜಾವುನ್ ಬಾಬಾಚಾರ್ ಕುಶಿಂ ಥಾವುನ್ ರಾಕೊನ್ ಥಕ್ತಾತ್ ಪಾಯ್ಜಾಣಾಂಗೊ ತುಜಿಂ ಆವಾಜಾವಿಣ್ಝಳ್ಜಳಿತ್ ವಸ್ತ್ರಾಂ ಬಾವ್ಲ್ಯಾಂತ್ ರಂಗ್ ಉಬೊವ್ನ್ದಿವ್ಳಾ ಭಿತರ್ ವೆಶಿ ದೇವ್ ಕೊಪ್ತಾ ಮಣ್ತಾತ್ವಚಾನಾ ಜಾಶಿ ಬುರ್ಬುರೆಂ ವೊಡುನ್ದೆವಾ ಹುಜ್ರಿಂಚ್ ಮಾನ್ ಲುಟ್ತಾತ್ ದೇವಿ ತೂಂ , ನಾ ತುಕಾ ಪೂಜಾ ಸನ್ಮಾನ್ಉಜ್ವಾಡ್ ತೂಂ , ನಾ ತುಕಾ ಸಂಭ್ರಮ್ಕಾಂಪಿಣ್ ಮಾರ್ತೆಲ್ಯಾ ಪೂಜಾರಿಕ್ ಯಿಗುಪ್ತಿಂ ಲಿಪ್ತಿಂ ಗರ್ಜ್ ತೂಂಬಗ್ಲೆ ನಿದ್ತೆಲ್ಯಾಚ್ಯಾ ನಿಳ್ಯಾ ಪಿಂತುರಾಂಕ್ ಯಿಸಂಪನ್ಮೂಳ್ ತೂಂ ಕೆನ್ನಾ ಪಾಪ್ಸುಂಕ್ ತುಕಾ ದಾವ್ಲ್ಯೊ ರಾಕ್ತಾತ್ಪ್ರತಿಭಾ ಪಿಸ್ಡುಂಕ್ ಸುಣಿಂ ವಾಗ್ಟಾಂ ವಾವುರ್ತಾತ್ಗುಡ್ಡಾಯ್ತೆಲ್ಯಾಂ ಮಧೆಂ ಮಿಲಾವಾಚಿ ಪುತ್ಳಿ ಜಾ — ರಾವ್ ಉಭೆಂತುಜ್ಯಾ ವೆಕ್ತಿತ್ವಾಚಿ ವಳಕ್ ತರಿ ಜಾಯ್ತ್ ? ಉಭಾರುನ್ ವರ್ ಪರ್ವತಾಚೆರ್ ತುಜೊ ತಾಳೊಕಿಂಕ್ರಾಟೆಂತ್ ಆಸೊಂ ಜಯ್ತಾಚೊ ವ್ಹಾಳೊಅಬಲ್ ನೈಂ ತುಂ , ಪೌರುಷಾಚ್ಯೆ ನದ್ರೆಂತ್ಲೆಂಅಬಲ್ಪಣಾಚೆಂ ಕೂಸ್ ಹುಮ್ಟಿಲಾಂಯ್ ತೆಂ ಪಾಚಾರ್ ಕುಟ್ಮಾ ಸಂಸಾರ್ ಸೆಜ್ ಸಾಮಾರಾಂತ್ಖೂಬ್ ಜಾಗ್ ಉಠಯ್ತಾಂ ತುಜಿ ಹಾಜ್ರಿಮೆಲ್ಲ್ಯಾ ಮೊಡ್ಯಾಂಕ್ ಕಳಾತ್ ಕಶಿ ಶಾಥಿ ತುಜಿ?ಸಾಧನೆಚ್ಯಾ ಧಾಂವ್ಣೆಂತ್ ಥಾಂಭ್ಚಿ ಗರ್ಜ್ ನಾಕಾ ಆಜಿ , ಆವಯ್ , ಧುವ್ , ಸುನ್ , ಭಯ್ಣ್ವಿಭಿನ್ನ್ ಪಾತ್ರಾಂನಿ ಭರ್ಪೂರ್ ಜೀವ್ ಭರ್ತಾಯ್ಆಧಾರ್ ಗರ್ಜ್ ಆಸ್ಚ್ಯಾ ನಾಸ್ಚ್ಯಾಂಕಿತೆಂಕೊ ದಿಲಾಯ್ಪ್ರಶಸ್ತಿ ನಾಸ್ಲೆಲೆ ಪಾತ್ರ್ ತುಜೆ ನಿಮ್ಣೆಂ ಪಯ್ಣ್ ಸಂಪ್ತಚ್ಆವಯ್ ಗರ್ಭಾಂತ್ ಆಸ್ರೊ ಘೆತಾಯ್ಮಾತಿಯೆ ವಾಸ್ ಚಡಂವ್ಕ್ಜರೂರ್ ಕಾಡ್ತಾಂ ಯಾದ್ ತುಜಿಪಯ್ಲ್ಯಾ ಪಾವ್ಸಾ ಥೆಂಬ್ಯಾಚ್ಯಾ ಪರ್ಮೊಳಾಂತ್ ಪ್ರಶಸ್ತಿಗಳಿಲ್ಲದ ಪಾತ್ರಗಳು ಬಾಳ ರಂಗಮಂಚದಲಿ ನಿನ್ನ ಪಾತ್ರಗಳೆಲ್ಲವು ಉನ್ನತವೆತೊಟ್ಟಿಲಿನಿಂದ ಶವದ ಪೆಟ್ಟಿಗೆಯ ತನಕವಿಚಾರಗಳು ಮನಮುಟ್ಟುವಂತವೆ ಬಣ್ಣದಂಗಿಯ ತೊಟ್ಟು ಅಂಗಳದೆಲ್ಲೆಡೆಓಡಾಡಿದ ಪುಟ್ಟಪಾದಗಳುಬೆಳೆದಂತೆಲ್ಲ ಸುತ್ತಲ ಹಸಿದ ಕಂಗಳಿಗೆಆಹಾರವಾಗುವವು ಅರಿಯದೆಯೆ. ಈ ಮನೆಯ ಮಗಳಿಗಾಗಿ ನೆರೆಮನೆಗಳಲಿ ಯಾತಕೋ ಆತಂಕ!ತೆರೆದ ಕಣ್ಣೇ ಕ್ಯಾಮೆರಾಗಳಾಗುತನಾಲಕ್ಕು ದಿಕ್ಕುಗಳಲೂ ಕಾವಲು ಝಣ್ ಗುಡುವ ಗೆಜ್ಜೆಗಿಂದು ವಿಶ್ರಾಂತಿಝಗಮಗಿಸುವ ಉಡುಗೆಗಿಲ್ಲ ಕಳೆಗುಡಿಯೊಳಗ ಹೋದೆಯೆಂದುಕೋಪಿಸುವ ಜನಹೋಗದಿರೆ ಧರಧರನೆಳೆದು ನಿನ್ನದೇವನೆದುರೆ ಮಾನಗೆಡಿಸುವರಣ್ಣಾ ದೇವಿಯಲ್ಲವೆ ನೀ ನಿನಗೇತಕೊಪೂಜೆ ಸನ್ಮಾನ?ಬೆಳಕಂತೆ ನೀ ಏತಕೋ ಸಂಭ್ರಮವು?ಗುಡಿಯ ದೇವನ ತೊಳೆತೊಳೆದುಪೂಜೆಗೈವ ಪೂಜಾರಿಗೂಗುಟ್ಟಿನಲಿ ಬೇಕಲ್ಲ ನೀನೆನೀಲಿ ಚಿತ್ರಗಳಿಗು ಸಂಪನ್ಮೂಲ? ಕೆನ್ನಾಲಗೆಯಾಗಿ ಸುಡಲುಪ್ರತಿಭೆಗಳ ದಮನಿಸಲು ಕಾದಿವೆನರಿ ತೋಳಗಳ ಹಿಂಡು ಹಸಿದುಕಂಚಿನ ಪ್ರತಿಮೆಯಾಗಿ ನಿಂತುಬಿಡುಒದ್ದು ತುಳಿವವರ ಮಧ್ಯೆಭವ್ಯ ವ್ಯಕ್ತಿತ್ವದ ಅರಿವಾಗಲವರಿಗೆ ! ಉತ್ತುಂಗಕೇರಿಸು ಪರ್ವತಗಳ ಸೀಳಿಪ್ರತಿಧ್ವನಿಸಲಿ ನಿನ್ನುಲಿಯುಪ್ರತಿ ಚೀರಾಟದಲೂ ಬೆಸೆದಿರಲಿಜಯದ ಹರಿವುಅಬಲೆಯಲ್ಲ ನೀನು ಪೌರುಷದ ದಿಟ್ಟಿಯಲ್ಲಡಗಿದ ಅಪನಂಬಿಕೆಯ ಬೇರಕಿತ್ತು ಜಗಕೆ ಸಾರು ಕುಟುಂಬ ನೆರೆಯ ವಠಾರದಿ ಬೀರುವಸಾಂತ್ವನದ ಎಚ್ಚರದ ಹಾಜರಿಯಲಿನಿನ್ನಿರುವ ಲಕ್ಷಣದ ಅರಿವಾದರುಎಲ್ಲಿಹುದು ಸತ್ತ ಹೆಣಗಳಿಗೆ?ಸಾಧನೆಯ ಹಾದಿಯಲಿ ಹಿಂದೆನೋಡದಿರು, ತಂಗದಿರು ಅಜ್ಜಿ, ತಾಯಿ, ಮಗಳುಸೊಸೆ, ತಂಗಿಯಂದದಿ ವಿಭಿನ್ನಪಾತ್ರಗಳ ಜೀವವಾಗಿಬೇಡಿದ, ಬೇಡದವಗೂ ಆಸರೆಯನೀಡಿದ ನಿನ್ನೆಲ್ಲ ಪಾತ್ರಗಳಿಗೆಪ್ರಶಸ್ತಿಗಳಿಲ್ಲ ಕಾಣು ! ಬಾಳಪಯಣವು ಅಂತ್ಯವಾದಂತೆಭುವಿಯ ಗರ್ಭದೊಳು ಲೀನವಾಗಿರುವನಿನ್ನ ಸ್ಮರಣೆಯೆ ಪುನರಪಿ ಎನಗೆಮೊದಲ ಹೂಮಳೆಯು ಸೂಸ್ವ ಕಂಪಿಗೆಊರೆಲ್ಲ ಪಸರಿಸುವ ತಂಪಿಗೆ. *************************************** ಶೀಲಾ ಭಂಡಾರ್ಕರ್

ಕೊಂಕಣಿ ಕವಿ ಪರಿಚಯ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ರೇಷ್ಮಾ ಕಂದಕೂರ ಮಾತು ಮೌನಗಳ ನಡುವಿನ ಸಮರಕೆ ಕೊನೆಯಿಲ್ಲಸಹನೆಯ ಹೆಸರಿಗೆ ಕಿಂಚಿತ್ತೂ ಬೆಲೆಯಿಲ್ಲ ರೋಗಗ್ರಸ್ತ ಮನಸಿಗೆ ಉಪಶಮನದ ಅವಶ್ಯಕತೆ ಇದೆಚಿಗುರೊಡೆದೆ ಬಾಂಧವ್ಯಕೆ ಸಹಕಾದರ ಬಳುವಳಿಯಿಲ್ಲ ಜಗದ ಜಂಜಡಕೆ ನಿತ್ಯ ರಂಗುರಂಗಿನ ಆಟಉದ್ವೇಗ ವಿಷಾದದ ನಡುವಿನ ಪ್ರಸ್ತಾವನೆಗೆ ಕೊನೆಯಿಲ್ಲ ಬಡಿವಾರದಿ ಊಹಾಪೋಹಗಳು ತುಂಬಿ ತುಳುಕಿವೆಹಮ್ಮಿನ ಕೋಟೆಯಲಿ ಮೆರೆದವರಿಗೆ ಉಳಿಗಾಲವಿಲ್ಲ ಅಂಗಲಾಚಿ ಬೇಡುತಿದೆ ಭಿನ್ನತೆಗೆ ವಿರಮಿಸೆಂದು ರೇಷಿಮೆ ಮನಒಳಗಣ್ಣು ತೆರೆಯದೆ ನಿರ್ಣಯಿಸಿದರೆ ಕೊಡಲಿ ಏಟಿಗೆ ಕೊನೆಯಿ *****************************

ಗಝಲ್ Read Post »

ಕಾವ್ಯಯಾನ

ಹಗಲಲಿ ಅರಳದ ವಿರಹಿಣಿ

ಕವಿತೆ ಹಗಲಲಿ ಅರಳದ ವಿರಹಿಣಿ ಅನಿತಾ ಪಿ. ಪೂಜಾರಿ ತಾಕೋಡೆ ಅಂದು…ಹಿಂದೆಂದೂ ಮೂಡದ ಒಲವೊಂದು ಅನುವಾದಾಗಅವನ ಹಿರಿತನವನು ಮರೆತುನನ್ನ ಮಗುತನವನೇ ಪೊರೆದುಇತಿ ಮಿತಿಯ ರೇಖೆಗಳಿಂದ ಮುಕ್ತವಾಗಿಹಕ್ಕಿಹಾಡನು ಮನಬಿಚ್ಚಿ ಹಾಡಿದಾಗಲೆಲ್ಲಅವನು ಕೇಳುತ್ತಿದ್ದುದೊಂದೇ ನಿತ್ಯ ದಗದಗಿಸುತ್ತಲೇ ಊರೂರು ಸುತ್ತುವಮುಟ್ಟಿದರೆ ಮುನಿದು ಬಿಡುವಕಟು ಮನಸ್ಸಿನ ಸೂರ್ಯ ನಾನುಎಲೇ ಮುದ್ದು ಪಾರಿಜಾತವೇನಾನೆಂದರೆ ನಿನಗ್ಯಾಕೆ ಇಷ್ಟೊಂದು ಪ್ರೀತಿ ಆಗ…ನನ್ನಾಲಯದಲ್ಲಿ ಅವನು ಇನ್ನಷ್ಟು ಪ್ರಕಾಶವಾಗುತ್ತಿದ್ದಬೆಳ್ಳನೆ ಹೊಳಪು ಕೇಸರಿ ಕದಪಿನಲಿ ರಂಗು ಮೂಡಿಅವನಿರುವಿನಲಿ ಇನಿತಿನಿತಾಗಿ ಕರಗುತ್ತಲೇನಾನೆಂದಿಗೂ ನಿನ್ನವಳೆನ್ನುತಿದ್ದೆ ಅವನೂ ಸುಮ್ಮನಿರುತಿರಲಿಲ್ಲನನ್ನ ಇತಿಹಾಸವನೇ ಬಯಲಿಗೆಳೆಯುತಿದ್ದಸುರಭಿ ವಾರಿಣಿಯರ ಸಾಲಿನವಳುಕ್ಷೀರ ಸಮುದ್ರದೊಳವಿರ್ಭವಿಸಿದಪಂಚವೃಕ್ಷಗಳಲಿ ನೀನೋರ್ವಳುಇಂದ್ರನ ನಂದನವನದಲ್ಲಿ ಪಲ್ಲವಿಸಿದವಳುಸತ್ಯಭಾಮೆಯೊಲವಿಗೆ ಕೃಷ್ಣ ನ ಜೊತೆ ಬಂದವಳುನಿನಗ್ಯಾಕೆ ನನ್ನ ಸಾಂಗತ್ಯ ಬಯಕೆ? ವಾದ ವಿವಾದಗಳ ನಡುವೆ ಪ್ರೀತಿ ನಿಜವಾಗಿದ್ದು ಸುಳ್ಳಲ್ಲನನಗೂ ಅವನಿಗೂ ಬಾನು ಭುವಿಯಷ್ಟೇ ಅಂತರವಿದ್ದರೂಕ್ಷಣಕ್ಷಣಕೂ ನನ್ನ ಸನ್ನಿಧಿಯಲ್ಲೇ ಇರುತಿದ್ದನಲ್ಲಾ… | ಕೆಲವೊಮ್ಮೆ ಕಪ್ಪು ಮೋಡ ಕವಿದುಪರಿಛಾಯೆಯ ಲವಲೇಶವಿಲ್ಲದೆಹೇಳದೇ ಕೇಳದೇ ಏಕಾಏಕಿ ಮರೆಯಾದಾಗಕಾಯುವಿಕೆ ಅಸಹನೀಯವಾಗಿಅವನ ಓರಗೆಯವರಲ್ಲಿ ವಿಚಾರ ಮಾಡಿದ್ದುಂಟುಅವನ ಕ್ಷೇಮದ ಸುದ್ದಿ ತಿಳಿಯಲು ಹುಚ್ಚಳಾಗಿದ್ದುಂಟು ನಿತ್ಯ ಹೊಸದಾಗಿ ಅರಳುವ ನಾನುಒಂದೊಂದು ನೆಪ ಹೇಳಿ ಇಲ್ಲವಾಗುವ ಅವನುಮತ್ತೆ ಬಂದು ಹೇಳುವ ಕಥೆ ವ್ಯಥೆಗಳುಬಾಗುವಿಕೆಯಿಲ್ಲದೆ ಕ್ಷೀಣವಾಗುತಿಹ ಭಾವಾನುರಾಗಗಳುಹೀಗೆಯೇ ನಡೆದಿತ್ತು ವರ್ಷಾನುವರ್ಷ ಅದೇ ವಿರಹದ ಸುಳಿಯಲ್ಲಿ ನಲುಗಿನಾನೀಗ ಹಗಲಲಿ ಎಂದೂ ಅರಳದ ವಿರಹಿಣಿ ಯಾರೂ ಸುಳಿಯದ ಕಪ್ಪಿರುಳಿನಲಿಮೊಗ್ಗು ಮನಸು ಹದವಾಗಿ ಒಡೆದುನೆಲದ ಮೇಲುರುಳಿ ಹಗುರಾಗುತ್ತೇನೆಅವ ಬರುವ ವೇಳೆಯಲಿಅದೇನೋ ನೆನೆದು ಬಿದ್ದಲ್ಲೇ ನಗುತ್ತೇನೆ.ನಮ್ಮೀರ್ವರ ಮಾತಿರದ ಮೌನಕೆಒಳಗೊಳಗೆ ಸುಡುವ ಝಳದಲಿ ತೆಳುವಾಗುತ್ತೇನೆ ಅವನೂ ಹಾಗೆಯೇ ಕಂಡೂ ಕಾಣದಂತೆಮೂಡಣದಿಂದ ಪಡುವಣಕ್ಕೆ ತಿರುಗುತ್ತಲೇ ಇರುತ್ತಾನೆನಾನೂ ನೋಡು ನೋಡುತ್ತಲೇನೆಲದ ಗುಣವನು ಒಪ್ಪಿಕೊಳ್ಳುತ್ತೇನೆಬರುವ ನಾಳೆಯಲಿ ಮತ್ತೆ ಗೆಲುವಾಗಲು ***************************.

ಹಗಲಲಿ ಅರಳದ ವಿರಹಿಣಿ Read Post »

ಕಾವ್ಯಯಾನ

ಎಲ್ಲಾ ಹೆಣ್ಣು ಹೆಣ್ಣು ಹೆಣ್ಣು

ಕವಿತೆ ಎಲ್ಲಾ ಹೆಣ್ಣು ಹೆಣ್ಣು ಹೆಣ್ಣು ಸುಧಾ ಹಡಿನಬಾಳ ಹೇ ದುರುಳ ವಿಕೃತ ಕಾಮಿಗಳೆನಿಮ್ಮ ದಾಹ, ಕ್ರೌರ್ಯಕೆ ಕೊನೆಯಿಲ್ಲವೇನು? ನೀವು ಪೂಜಿಸುವ ಜಗನ್ಮಾತೆ ಹೆಣ್ಣುನಿಮ್ಮ ಹೆತ್ತ ಜನ್ಮದಾತೆ ಹೆಣ್ಣುನಿಮ್ಮ ಪೊರೆವ ಭೂಮಿತಾಯಿ ಹೆಣ್ಣುನಿಮ್ಮ ಮನೆ ಬೆಳಗುವ ಮಡದಿ ಹೆಣ್ಣುಮನೆತುಂಬ ಕಿಲ ಕಿಲ ಗೆಜ್ಜೆನಾದ ಹೆಣ್ಣುಎಲ್ಲಾ ಹೆಣ್ಣು ಹೆಣ್ಣು ಹೆಣ್ಣುಆದರೂ ಅನ್ಯ ಹೆಣ್ಣಿನ ಮೇಲೇಕೆ ನಿಮ್ಮ ಕಣ್ಣು? ಒಮ್ಮೆ ಯೋಚಿಸಿ ಕಲ್ಪಿಸಿಕೊಳ್ಳಿನಿಮಗೂ ಒಬ್ಬ ಹೆಣ್ಣು ಮಗಳಿದ್ದುಅವಳ ಮೇಲೂ ಇಂತದೆ ಭಯಾನಕದೌರ್ಜನ್ಯ, ಕ್ರೌರ್ಯ ನಡೆದರೆಸಹಿಸಲಾದೀತೇ ಊಹಿಸಿಕೊಳ್ಳಲಾದೀತೇ? ಎಲ್ಲಾ ಹೆಣ್ಣು ಮನೆಯ ಮಕ್ಕಳಂತಲ್ಲವೆ?ಸಾಕು ನಿಲಿಸಿ ನಿಮ್ಮ ವಿಲಾಸೀ ಪೌರುಷವತಣಿಸಿಕೊಳ್ಳಿ ಮಡದಿಯಿಂದಲೇ ನಿಮ್ಮ ದಾಹವಬದುಕಲು ಬಿಡಿ ಹೆಣ್ಣು ಸಂಕುಲವಉಳಿಸಿ ಗೌರವಿಸಿ ಅವರ ಸ್ವಾತಂತ್ರ್ಯವ *****************************

ಎಲ್ಲಾ ಹೆಣ್ಣು ಹೆಣ್ಣು ಹೆಣ್ಣು Read Post »

ಕಾವ್ಯಯಾನ

ಕಳೆದವರು

ಕವಿತೆ ಕಳೆದವರು ಅಬ್ಳಿ ಹೆಗಡೆ. ಕಳೆದವರು ನಾವುಕಳೆದವರು.ಉಳಿದಿಹ ಗಳಿಕೆಯನಿತ್ಯವೂ ಎಣಿಸುತ್ತಬೆಳೆಸಲಾಗದ್ದಕ್ಕೆಅಳುವವರು.ಘಾಢಕತ್ತಲಿನಲ್ಲಿಕಪ್ಪುಪಟ್ಟಿಯು ಕಣ್ಗೆಎಲ್ಲೆಲ್ಲೊ ಗುದ್ದುತ್ತಒದ್ದಾಡುವವರು.ಚೆಲುವ ನಂದನದಲ್ಲಿಎಂದೆಂದೂ ನಿಂತಿದ್ದುಕಣ್ಣಹಸಿವಿಂಗದಲೆಸಾಯುವವರು.ಪ್ರೀತಿಯಮ್ರತದ ಕಲಶಎದೆ ನೆಲದಿ ಹೂತಿಟ್ಟುಪ್ರೀತಿಯಾ ಬರದಲ್ಲೆಬದುಕಿ ಸತ್ತವರು.ದೀಪವಾರಿದ ಕೋಣೆಕತ್ತಲಲೆ ಕುಳಿತಿದ್ದುಕಪ್ಪು ಶಾಯಲಿ ಬೆಳಕಗೆರೆಯೆಳೆವರು.ನಡೆವ ಹಾದಿಯ ಬದಿಗೆಆಲದ ನೆರಳಿದ್ದೂಬಿಸಿಲಲ್ಲೆ ಮಲಗಿದ್ದುದಣಿವ ಕಳೆವವರು.ತನ್ನೊಳಗೇ ಅನಂತಶಾಂತಿಯ ಕಡಲಿದ್ದುಶಾಂತಿಯ ಹುಡುಕುತ್ತಸಂತೆಯಾದವರು.ಕಳೆದವರು ನಾವುಕಳೆದವರು.ಎಷ್ಟುಕಳೆದರೂ ಸ್ವಲ್ಪಉಳಿದವರು. **********************

ಕಳೆದವರು Read Post »

ಪುಸ್ತಕ ಸಂಗಾತಿ

ಗಿರಗಿಟ್ಟಿ

ಪುಸ್ತಕ ಪರಿಚಯ ಗಿರಗಿಟ್ಟಿ ಲೇಖಕರು: ತಮ್ಮಣ್ಣ ಬೀಗಾರ. ‌ಪ್ರಕಾಶನ: ಪ್ರೇಮ ಪ್ರಕಾಶನ ಮೈಸೂರು.ಮೊಬೈಲ ನಂ: ೯೮೮೬೦೨೬೦೮೫ಪುಟ: ೧೦೦.ಬೆಲೆ:೯೦ ರೂ.ಪ್ರಕಟಣೆ:೨೦೨೦ ಹಿರಿಯ ಕಿರಿಯರೆಲ್ಲ ಓದಬೇಕಾದ “ ಗಿರಗಿಟ್ಟಿ” ತಮ್ಮಣ್ಣ ಬೀಗಾರ ಅವರು ಮಕ್ಕಳಿಗಾಗಿ ಕತೆ, ಕವಿತೆ, ಪ್ರಬಂಧ, ಕಾದಂಬರಿಗಳನ್ನು ಬರೆಯುವುದರಲ್ಲಿ ತೊಡಗಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಿರಿಯ ಸಾಹಿತಿಗಳು. ಕಿರಿಯರನ್ನೂ ಗೌರವಿಸುವ ಸೌಮ್ಯ ಸ್ವಭಾವದವರು. ಹೀಗೆ “ಪ್ರಾಗಿ” ಕತೆಯ ಸನ್ನಿವೇಶ ಕುರಿತು ಮಾತನಾಡುವಾಗ ‘ಹುಡುಗರು ಕಪ್ಪೆಗೆ ಹಿಂಸೆ ಮಾಡುವುದು ಸಹಜ. ಅದನ್ನು ನೀವೇಕೆ ಬರವಣಿಗೆಯಲ್ಲಿ ಕಾಣಿಸಲಿಲ್ಲ ?’ಎನ್ನುವ ಪ್ರಶ್ನೆಗೆ ಹಿಂಸೆಯ ಆಚೆಗೂ ಇರುವ ಬಹಳಷ್ಟು ವರ್ತನೆಗಳನ್ನು ಕಾಣಿಸುವುದು ಮುಖ್ಯವಾಗಿದೆ ಎನ್ನುವುದರ ಮೂಲಕ ನನಗೆ ತುಂಬಾ ಅಚ್ಚರಿ ಮೂಡಿಸಿದವರು. ಕಲೆ ಮತ್ತು ಸಾಹಿತ್ಯಗಳೆರಡನ್ನು ಸಮ ಸಮವಾಗಿ ದುಡಿಸಿಕೊಂಡ ಕ್ರಿಯಾಶೀಲ ಸ್ನೇಹ ಜೀವಿಗಳು. ಇತ್ತೀಚೆಗೆ ಪ್ರಕಟವಾದ ಉಲ್ಟಾ ಅಂಗಿಯ ನಂತರ ಇದೀಗ “ಗಿರಗಿಟ್ಟಿ” ಎನ್ನುವ ೧೫ ಕತೆಗಳನ್ನು ಹೊಂದಿರುವ ಸಂಕಲನದ ಮೂಲಕ ನಮ್ಮ ಮುಂದಿದ್ದಾರೆ. ಮಲೆನಾಡಿನ ಪ್ರಕೃತಿ ಸೌಂದರ್ಯ ಮತ್ತು ಜೀವ ವೈವಿಧ್ಯತೆ ಈ ಕತೆಗಳಲ್ಲಿ ಕಂಡುಬರುವ ಪ್ರಮುಖ ಅಂಶವಾಗಿದ್ದರೂ ಈ ಬಾರಿ ಭಾವನಾತ್ಮಕ ಅಂಶಗಳೊಂದಿಗೆ ಪುಳಕಿತಗೊಳಿಸುತ್ತಾರೆ. ಇದಕ್ಕೆ ‘ಹಸಿವಾಗಿಲ್ವಾ’ ಕತೆಯಲ್ಲಿ ಹಸಿವನ್ನು ಕುರಿತು ತಾಯಿ ಆಡುವ ಮಾತು ನಡೆದುಕೊಳ್ಳುವ ರೀತಿಯ ಮೂಲಕ ಮಕ್ಕಳಲ್ಲಿ ಹುಟ್ಟುವ ಪ್ರಶ್ನೆಗಳು ಅವರ ಮತ್ತು ಓದುಗರ ಅಂತರಂಗವನ್ನು ಕಲಕುತ್ತವೆ. ನನ್ನ ಒಂದು ಅವಲೋಕನದ ಮೂಲಕ ಕಪ್ಪೆ ಇವರ ಬರವಣಿಗೆಯಲ್ಲಿ ಬಹು ವೈವಿಧ್ಯಮಯವಾಗಿ ಅಭಿವ್ಯಕ್ತಿಗೊಳ್ಳುವ ಬತ್ತದ ಒರತೆಯಾಗಿದೆ. ಇದಕ್ಕೆ “ಕಪ್ಪೆಯ ಕಣ್ಣು” ಕಥೆ ಉದಾಹರಣೆಯಾಗಿದೆ. ಮಕ್ಕಳು ಮತ್ತು ದೊಡ್ಡವರ ನಡುವಿನ ವರ್ತನೆಗಳನ್ನು ಸೂಕ್ಷ್ಮವಾಗಿ ತೌಲನಿಕವೆಂಬಂತೆ “ಕತ್ತಲು” ಕತೆಯ ಮೂಲಕ ಚಿತ್ರಿಸುವ ಇವರು ಮಕ್ಕಳ ಬೆರಗುಗಣ್ಣನ್ನು ಅರವತ್ತೊಂದರ ಹರಯದಲ್ಲೂ ಉಳಿಸಿಕೊಂಡಿದ್ದಾರೆ. “ರೋಹನ ಗಣಪು ಮತ್ತು ನಾನು” ಕತೆ ಆಧುನಿಕತೆಯಿಂದ ದೂರ ಇರುವ ಮಕ್ಕಳಲ್ಲಿ ಪ್ರತಿಭೆ ಹುದುಗಿರುವುದನ್ನು ಅನಾವರಣ ಮಾಡಿದರೆ, “ದೆವ್ವದ ಮರ” ಕತೆಯ ಮೂಲಕ ಮಕ್ಕಳ ಕಲಿಕೆಯ ಹೊಸ ಬಗೆಯ ಪ್ರಯೋಗವನ್ನು ಸೂಚ್ಯವಾಗಿ ಹೇಳುತ್ತಾರೆ. ಅಜ್ಞಾನವು ಭಯ ಹುಟ್ಟಿಸಿದರೆ ವಿಜ್ಞಾನವು ಜ್ಞಾನವನ್ನು ಹೆಚ್ಚಿಸುವುದಲ್ಲದೆ ಧೈರ್ಯವನ್ನೂ ಹೆಚ್ಚಿಸುವುದೆಂಬುದಕ್ಕೆ ಸಾಕ್ಷಿಯಾಗಿದೆ. ಓಇತಿ ರಾಜತಿರಾಜ ಕತೆಯಲ್ಲಿ ಮಕ್ಕಳ ಕುತೂಹಲ ಸೊಗಸಾಗಿ ಚಿತ್ರಿತವಾಗಿದ್ದರೆ ಹಣ್ಣು ತಿನ್ನೋ ಆಸೆ ಕತೆಯಲ್ಲಿ ಮಕ್ಕಳ ಸ್ವಭಾವಗಳ ಬಣ್ಣಗಳು ಪರಿಚಯವಾಗುತ್ತವೆ. “ಅಲ್ಲಿ ಕಂಡಿದ್ದೇನು” ಕತೆಯಲ್ಲಿ ಮಕ್ಕಳ ತುಂಟತನದ ಜೊತೆಗೆ ಹಾವಿನ ಪ್ರಸಂಗದಿಂದ ವಿಚಲಿತರಾಗಿ ಮನೆಗೆ ಬಂದಾಗ ಮನೆಯವರ ಎಲ್ಲ ಮುಖಗಳಲ್ಲಿಯೂ ಹಾವನ್ನೇ ಕಾಣುವುದು ವಾಸ್ತವಕ್ಕೆ ಹಿಡಿದ ಕನ್ನಡಿಯಂತಿದೆ. ಮಕ್ಕಳು ಸೂತ್ರ ಹರಿದ ಗಾಳಿ ಪಟದಂತೆ ಎಲ್ಲೆಂದರಲ್ಲಿ ಗಿರಕಿ ಹೊಡೆವ ಹುಮ್ಮಸ್ಸಿನ ಬುಗ್ಗೆಗಳಾಗಿರುತ್ತಾರೆ. ಇಂತಹ ಮುಕ್ತ ವಾತಾವರಣದ ಹಕ್ಕುದಾರರಿಗೆ ಪಾಲಕರು ಹಾಕುವ ಚೌಕಟ್ಟುಗಳು ವ್ಯಕ್ತಿತ್ವ ನಿರ್ಮಾಣದ ತೊಡಕುಗಳಾಗಬಲ್ಲವೆಂಬುದನ್ನು ಸೂಚ್ಯವಾಗಿ ಸೆರೆಹಿಡಿದಿದ್ದಾರೆ. ಮಣ್ಣಿನ ವಾಸನೆ ಕತೆಯಲ್ಲಿ ನಮ್ಮದಲ್ಲದ ವಸ್ತುವನ್ನು ನಮ್ಮದೆಂದುಕೊಂಡು ಬೀಗುವವರ ಗರ್ವ ಭಂಗ ನೈಜವಾಗಿ ನೈಸರ್ಗಿಕವಾಗಿಯೇ ಆಗುತ್ತದೆ ಎಂಬ ಸಿದ್ಧಾಂತವನ್ನು ಪ್ರತಿಪಾದಿಸುವಂತೆ ರಚಿಸಿದ್ದರೆ, ಹೆಗಲ ಮೇಲೆ ಕುಳಿತು ಕತೆಯ ಮೂಲಕ ಇಡೀ ಸಮಾಜದ ಚಿತ್ರಣವನ್ನೇ ಕಣ್ಣಿಗೆ ಕಟ್ಟುತ್ತಾರೆ. ಹೆಣ್ಣು ನಾಯಿ ಮರಿಯೊಂದು ಬೆಳೆದ ಮೇಲೆ ಸಾಕಷ್ಟು ಮರಿ ಹಾಕುತ್ತದೆ ಎಂಬ ಕಾರಣಕ್ಕೆ ತಾಯಿಯಿಂದ ಅಗಲಿಸುವುದು ಆ ಚಿಕ್ಕ ವಯಸ್ಸಿನಲ್ಲಿಯೇ ಆ ನಾಯಿ ಮರಿ ಹಸಿವೆಯಿಂದ ಬಳಲುವುದು ವೃದ್ಧರ ಮತ್ತು ಮಕ್ಕಳಲ್ಲಿ ಉಳಿದಿರುವ ಅಷ್ಟಿಷ್ಟು ಅಂತಃಕ್ಕರಣದಿಂದ ಜೀವ ಉಳಿಸಿಕೊಳ್ಳುವುದು ಕರುಣಾಜನಕವಾಗಿ ಮೂಡಿಬಂದಿದೆ. ಹೀಗೆ ಇಲ್ಲಿರುವ ಹದಿನೈದು ಕತೆಗಳೂ ವಸ್ತು ವೈವಿಧ್ಯತೆಯ ಮೂಲಕ ಗಮನ ಸೆಳೆಯುತ್ತವೆ . ಒಂದು ಚಂದದ ಮಕ್ಕಳ ಪುಸ್ತಕಕ್ಕೆ ಎಷ್ಟು ಹುಡಕಬೇಕೆಂದು ಪ್ರತಿಷ್ಟಿತ ಪುಸ್ತಕ ಮಳಿಗೆಗಳಿಗೆ ಭೇಟಿ ಕೊಟ್ಟವರಿಗೇ ಗೊತ್ತು. ಇಂತಹ ಸೊಗಸಾದ ಪುಸ್ತಕವನ್ನು ಮನೆಗೆ ತಲುಪಿಸಿದ ತಮ್ಮಣ್ಣ ಬೀಗಾರ ಅವರು ಸಾಂಪ್ರದಾಯಕ ಚೌಕಟ್ಟನ್ನು ಮರಿದು ಸೊಗಸಾದ ಮಕ್ಕಳ ಕತೆ ಕಟ್ಟುವುದರಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು.ಮತ್ತು ಇದರಲ್ಲಿ ಯಶಸ್ಸನ್ನು ಕಂಡವರು. ನೀತಿಯನ್ನು ಹೇಳುವುದೇ ಮಕ್ಕಳ ಸಾಹಿತ್ಯವೆಂಬ ತುಂಬಾ ಬಾಲಿಶವಾದ ಹಾಗೂ ನೀರಸವಾದ ಬರವಣಿಗೆ ಕ್ರಮವನ್ನು ಅಲ್ಲಗಳೆದು ನೈಜತೆಯನ್ನು ಅಚ್ಚುಕಟ್ಟಾಗಿ ಸೆರೆಹಿಡಿಯಬಲ್ಲವರಾಗಿದ್ದಾರೆ. ಮತ್ತೊಂದು ಪುಸ್ತಕದ ನಿರೀಕ್ಷೆಯಲ್ಲಿ ಗಿರಿಗಿಟ್ಟಗೆ ಶುಭಕೋರುತ್ತೇನೆ. ಗಿರಿಗಿಟ್ಟಿ ಟೈಟಲ್ ಕತೆ ಅದ್ಭುತ ರಮ್ಯ ಸ್ವರೂಪದ್ದು ಅದನ್ನು ಓದುಗರು ಓದಿಯೇ ಆನಂದಿಸಬೇಕು. ಶುಭವಾಗಲಿ. *************************************** ವಿನಾಯಕ ಕಮತದ.

ಗಿರಗಿಟ್ಟಿ Read Post »

ಕಾವ್ಯಯಾನ

ಏಕಾಂತ… ಮೌನ…

ಕವಿತೆ ಏಕಾಂತ… ಮೌನ… ಡಾ.ಕಾತ್ಯಾಯಿನಿ ಕುಂಜಿಬೆಟ್ಟು ನಿನ್ನೆ ಆಗಸದಲ್ಲಿಇರುಳಿನ ಹೊಕ್ಕುಳಲ್ಲಿಅರಳಿದ್ದ ಹೂವು ಇಂದು ಬಾಡುತ್ತಿದೆ ಅದರ ಎಸಳುಗಳನ್ನುನಾಳೆ ಭೂಮಿಯಲ್ಲಿ ಹುಡುಕಬೇಕು… ಹುಣ್ಣಿಮೆ – ಅಮಾವಾಸ್ಯೆಗಳನಡುವೆ ಮನವನ್ನು ಸವರಿಕೊಂಡುಕರಗಿ ಹೋದ ಪರಿಮಳವನ್ನುಗಾಳಿಯಲ್ಲಿ ಅರಸಬೇಕುದೀಪ ಹುಡುಕುವ ಕುರುಡನಂತೆ ನಿನ್ನೆ ಚಂದಿರ ನನ್ನ ಕೈಯಏಕತಾರಿಯಾಗಿದ್ದನಾಳೆ ನಾನೇ ಬೆಂಕಿ ಉರಿವ ಮಡಕೆಯಾಗುತ್ತೇನೆ ಅವನ ಕೈಯಲ್ಲಿ.ನಾಳಿದ್ದು…!ಉಳಿಯುವುದು ಬರೇಏಕಾಂತ… ಮೌನ… ***************************

ಏಕಾಂತ… ಮೌನ… Read Post »

ಅನುವಾದ

ದ್ರೌಪದಿ ಶಸ್ತ್ರಧಾರಿಯಾಗು

ಅನುವಾದಿತ ಕವಿತೆ ದ್ರೌಪದಿ ಶಸ್ತ್ರಧಾರಿಯಾಗು ಕೆಲ ದಿನಗಳ ಹಿಂದೆ ಹಿಂದಿಯ ಹಾಸ್ಯ ನಟ ವೃಜೇಶ್ ಹೀರ್ಜಿ ಅವರು,  ತಮ್ಮ ಮಿತ್ರ  ಪುಷ್ಯಮಿತ್ರ ಉಪಾಧ್ಯಾಯ ಅವರ ಹಿಂದಿ ಕವಿತೆಯನ್ನು ಓದುವ ಒಂದು ವೀಡಿಯೋ ಫೇಸ್ ಬುಕ್ಕಿನಲ್ಲಿ ಕಾಣಿಸಿತ್ತು. ಅವರು ಭಾವಪೂರ್ಣವಾಗಿ ಓದಿದ್ದು ಅದನ್ನು ಪೂರ್ಣ ನೋಡುವಂತೆ ಮಾಡಿತು.  ಆ ಹಿಂದಿ ಕವಿತೆಯನ್ನು ನಾನು ಕನ್ನಡಕ್ಕೆ ಅನುವಾದಿಸಿದ್ದೇನೆ. ನೂತನ ದೋಶೆಟ್ಟಿ ಕೈಗೆ ಮದರಂಗಿ ಹಾಕುತ್ತ ಕೂರುವ ಸಮಯವಿದಲ್ಲನಿನ್ನನ್ನು ನೀನು ಸಂಭಾಳಿಸಿಕೊಳ್ಳಬೇಕಾದ ಕಾಲನೀನೇ ನಿನ್ನ ಹುರಿದುಂಬಿಸಿಕೊಹಾಸು ಹಾಕಿ ಶಕುನಿ ಹೊಂಚಿ ಕುಳಿತಿದ್ದಾನೆಎಲ್ಲ ತಲೆಗಳೂ ಬಿಕರಿಯಾಗುತ್ತವೆಕೇಳು ದ್ರೌಪದಿ , ಶಸ್ತ್ರಧಾರಿಯಾಗುಈಗ ಗೋವಿಂದ ಬರುವುದಿಲ್ಲ ಚದುರಿ ಚಿಂದಿಯಾಗಿರುವ ಈ ಸುದ್ದಿ ಪತ್ರಿಕೆಗಳಿಂದ.ಇನ್ನೂ ಎಷ್ಟು ಕಾಲ ನಿರುಕಿಸುವಿ?ಈ ದುಶ್ಯಾಸನರ ದರ್ಬಾರಿನಲ್ಲಿಎಂಥ ರಕ್ಷಣೆಯ ಅಹವಾಲು?ಈ ದುಶ್ಯಾಸನ ಕಡು ದುಷ್ಟಕಡು ಲಜ್ಜಾಹೀನನೂಅವನಿಂದ ನಿನ್ನ ಶ್ರೀರಕ್ಷೆಯೇ?ಕೇಳು ದ್ರೌಪದಿ , ಶಸ್ತ್ರಧಾರಿಯಾಗುಈಗ ಗೋವಿಂದ ಬರುವುದಿಲ್ಲ ನಿನ್ನೆಯ ತನಕ ಕುರುಡಾಗಿದ್ದ ರಾಜಈಗ ಮೂಗನೂ, ಕಿವುಡನೂಪ್ರಜೆಗಳ ತುಟಿಯನ್ನು ಹೊಲಿದಿದ್ದಾನೆಜೊತೆಗೆ ಕಿವಿಯ ಮೇಲೆ ಬಿಗಿ ಪಹರೆನಿನ್ನ ಈ ಕಣ್ಣೀರುಯಾರನ್ನು ತಾನೆ ಕರಗಿಸಬಲ್ಲುದು ?ಕೇಳು ದ್ರೌಪದಿ , ಶಸ್ತ್ರಧಾರಿಯಾಗುಈಗ ಗೋವಿಂದ ಬರುವುದಿಲ್ಲ. *************************

ದ್ರೌಪದಿ ಶಸ್ತ್ರಧಾರಿಯಾಗು Read Post »

ಕಾವ್ಯಯಾನ

ಜೀವನ ಜಲಧಿ

ಕವಿತೆ ಜೀವನ ಜಲಧಿ ವೃತ್ಯಾನುಪ್ರಾಸ ಕವನ ಶುಭಲಕ್ಷ್ಮಿ ಆರ್ ನಾಯಕ ಜೀವನವು ಜಂಜಡದ ಜಟಿಲ ಜಲಧಿಸಹನೆ ಸದಾಚಾರದಿ ಸಾಗು ಸಮಚಿತ್ತದಿಹೂವಂಥ ಹೊಂಗನಸ ಹೊತ್ತು ಹೃದಯದಿಮನಕೆ ಮಾಧುರ್ಯವೀವ ಮಾತೃ ಮಮತೆಯಲಿ// ಸುಖದುಃಖಗಳ ಸುಮನದಿ ಸ್ವೀಕರಿಸಿ ಸಾಗಲಿಬದುಕಿನ ಬವಣೆಗಳ ಬೇಗುದಿಯ ಬದಿಗಿಡುತನಮ್ರತೆಯಲಿ ನಗುನಗುತ ನಲುಮೆಯ ನೀಡುತಸನ್ನಡತೆಯಲಿ ಸಮಾಜಕ್ಕೆ ಸಂದೇಶ ಸಾರುತ// ಅತ್ಯಾಚಾರ ಅನಾಚಾರ ಅಂಧಕಾರವ ಅಳಿಸುವಹೆಣ್ಣುಗಳ ಹಿಂಸಿಸುವ ಹಮ್ಮೀರರ ಹತ್ತಿಕ್ಕುವಕಪಟ ಕಾಮಗಳಿಗೆ ಕಡಿವಾಣವ ಕಟ್ಟುವಮೋಸದ ಮಾಯೆಗೆ ಮದ್ದರೆದು ಮಣಿಸುವ// ನೋವು ನಲಿವುಗಳಿಗೆ ನಗುತ ನಮಿಸುವಬದುಕು ಬರಡಾದರೂ ಭರವಸೆಯಲಿ ಬದುಕುವಆತ್ಮವಿಶ್ವಾಸ ಆಶಾಭಾವದಲಿ ಆಡುತ ಆನಂದಿಸುವತಾಮಸವ ತೊಲಗಿಸಿ ತನ್ನರಿವಲಿ ತೇಲುವ// ****************************

ಜೀವನ ಜಲಧಿ Read Post »

You cannot copy content of this page

Scroll to Top