ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಬಾಪೂಜಿ

ಮಮತೆಯ ಬಾಪೂಜಿ
ಸತ್ಯಾಗ್ರಹಕೆ ನೀನಾದೆ ರಾಜಿ

ಧೀಮಂತ ನೇತಾರ
ಸತ್ಯ ಶಾಂತಿಯ ಮೂರ್ತಿ
ವರ್ಣಾತೀತ ನಿಲುವು
ಸ್ವಾತಂತ್ರ್ಯದ ಉಷಾಕಿರಣ

ದೇಶ ಪ್ರೇಮ ಹುರಿದುಂಬಿಸಿ
ಬ್ರಿಟಿಷರಿಗಾದೆ ಕಂಟಕ
ಬರೆದೆ ನವಯುಗದ ಭಾಷ್ಯ
ನ್ಯಾಯ ಪರತೆಗೆ ಸ್ಪೂರ್ತಿ

ದಾಸ್ಯದಿಂದ ಬಿಡುಗಡೆಗೆ ನಿನ್ನ ಕರೆ
ತ್ಯಾಗ ಬಲಿದಾನಕೆ ವರದಾನ
ಮೂಲಶಿಕ್ಷಣದ ಪರತೆ
ಸ್ವಚ್ಛತಾ ಆಂದೋಲನಕೆ ರುವಾರಿ

ಮೂಡಿಸಿದೆ ಸಂಚಲನ
ಭಾರತಾಂಬೆಯ ಕುಡಿಯಲಿ
ಬಡವನ ಅಂತಃಕರಣದ ಪ್ರತಿ
ಇದೋ ಮಹಾತ್ಮ ನಿನಗೆ ಒಂದನ‌.

******************************

About The Author

Leave a Reply

You cannot copy content of this page

Scroll to Top