ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಾಂಧಿ ವಿಶೇಷ

ನಮ್ಮ ಭಾಪು

ಮುಟ್ಟದವರ ಅಪ್ಪಿ
ಮೇಲು ಕೀಳು ಎಂಬದನ್ನು
ಕಾಲಡಿಯಲಿ ಮೆಟ್ಟಿ
ಮೌನದಲೇ ಸಂವಹನ
ಮಾಡಿ ಮಹಾತ್ಮರಾದರು

ಗಡಿಗಡಿಗಳ ದಾಟಿ
ಮನಮನಗಳ ತಲುಪಿ
ಸರಳತೆಯಲಿ ಬದುಕಿ
ಅಹಿಂಸೆಯ ಹಾದಿಯಲ್ಲಿ ನಡೆದರು
ದೀನರಿಗೆ ದೀವಿಗೆಯಾದರು

ಜನನಾಯಕರಾದರು
ಅಧಿಕಾರದ ಹತ್ತಿರ ಸುಳಿಯದೆ
ಉಳಿದರು , ಉಚ್ಚ ಪಂಥದವಾರದರೂ
ತಳಸಮುದಾಯದವರಿಗಾಗಿ ಬಾಳಿದರು

ಹಗಲು ಇರುಳು ಸತ್ಯವನ್ನೇ
ಪ್ರತಿಪಾದಿಸಿದರು
ತಮ್ಮ ಬದುಕನ್ನೆ ಒರೆಹಚ್ಚಿ
ತಾವೇ ನೋಡಿದರು
ಮಾಡು ಇಲ್ಲವೇ ಮಡಿ ಎಂದರು
ಅನ್ಯರ ದೋಷಿಸುವ ಬದಲು
ನಿನ್ನ ನೀ ಅರಿ ಎಂದರು

ಆದರ್ಶ ತತ್ವಗಳು ಪಠಣದ
ಮಂತ್ರವಲ್ಲ ಎಂದು
ಜೀವಿಸಿ ತೋರಿಸಿದರು
ಬಹುತ್ವ ಭಾರತಕ್ಕೆ ಭಾತೃತ್ವದ
ಮಡಿಲು ನೀಡಿದರು

ಅನೇಕತೆಯಲ್ಲಿ ಏಕತೆಯ
ಭಾರತವ ಕನಸ ಕಂಡರು
ನಮ್ಮ ರಾಷ್ಟ್ರ ಪಿತ ಎಂಬ
ಹೆಮ್ಮೆ ಇವರು
ಇಂದಿಗೂ ಅವರು ಜನಮನಗಳಲ್ಲಿ
ಅಳಿಯದೇ ಉಳಿದಿರುವರು ……

******************************

ರೇಶ್ಮಾಗುಳೇದಗುಡ್ಡಾಕರ್

ಗಾಂಧಿಯೇ ಮೊದಲ ಕವಿತೆ

About The Author

Leave a Reply

You cannot copy content of this page

Scroll to Top