ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಹಸಿರು ಕುದುರೆ ನೀ.ಶ್ರೀಶೈಲ ಹುಲ್ಲೂರು ಹಸಿರು ಕುದುರೆ ರಾಜನೊಂದು ಸಂಜೆ ತನ್ನ ರಾಜ ತೋಟದಲ್ಲಿ ಬರಲು ಮೋಜುಗರೆವ ಹಕ್ಕಿಯುಲಿಗೆ ಸೋತುಹೋದನು ಹಚ್ಚಹಸಿರು ಕಂಡ ತಾನು ಮೆಚ್ಚಿ ಹರುಷ ಸೂಸುತಿರಲು ಹುಚ್ಚು ಮನದಿ ಆಸೆಯೊಂದು ಹುಟ್ಟಿಕೊಂಡಿತು ಹಸಿರು ಸಿರಿಯ ನಡುವೆ ನಲಿದು ಹೊಸತನೊಂದ ಯೋಚಿಸುತಲಿ ಹಸಿರು ಕುದುರೆ ಏರೊ ಕನಸು ತುಂಬಿಕೊಂಡನು ಬೀರಬಲ್ಲನನ್ನು ಕರೆದು ಕೊರೆವ ಆಸೆ ಹೇಳಿಕೊಂಡು ವಾರದಲ್ಲಿ ಹಸಿರು ಕುದುರೆ ತರಲು ಹೇಳಿದ ಉಕ್ಕಿಬರುವ ನಗೆಯ ತಡೆದು ಅಕ್ಕರೆಯಲಿ ಒಪ್ಪಿಕೊಂಡು ಸಿಕ್ಕ ಸಿಕ್ಕ ಊರಿನಲ್ಲಿ ಸುಮ್ಮನಲೆಯತೊಡಗಿದ ಉಂಟೆ ಜಗದಿ ಹಸಿರು ಕುದುರೆ? ಕುಂಟು ನೆಪವ ಮಾಡಿ ರಾಜ ಗಂಟು ಬಿಡಿಸಲವಗೆ ಒಂದು ದಾಳ ಹಾಕಿದ ಏಳು ದಿನಕೆ ಸಭೆಗೆ ಬಂದು ಹೇಳಿಕೊಂಡ ಹಸಿರು ಕುದುರೆ ನಾಳೆಗೇನೆ ತರಲುಬಹುದು ಇಚ್ಛೆಪಟ್ಟರೆ ಕುದುರೆ ಒಡೆಯನೆರಡು ಮಾತು ಮುದದಿ ನೆರವೇರಿಸಲೆಬೇಕು ಅದನು ಕೇಳಿ ಮೊದಲು ನೀವು ಗಮನದಿಂದಲಿ ಮೊದಲ ಮಾತು ರಾಜನಷ್ಟೆ ಕುದುರೆ ತರಲು ಹೋಗಬೇಕು ಇದಕೆ ತಮ್ಮಭಿಮತವದೇನು ಹೇಳಿ ಈಗಲೆ ಒಪ್ಪಿಕೊಂಡ ರಾಜನದಕೆ ತಪ್ಪಿನಡೆಯೆ ಎನಲು ಅವಗೆ ಗಪ್ಪನೆಯೆ ಮತ್ತೊಂದು ಮಾತ ಹೇಳಿಬಿಟ್ಟನು ವಾರದೇಳು ದಿನವ ಬಿಟ್ಟು ಬರಲುಬೇಕು ನಿಮ್ಮ ರಾಜ ಕರೆದು ಬೇಗ ತರಹೋಗೆಂದು ನನಗೆ ಹೇಳಿದ ಇದನು ಕೇಳಿ ಬೆಚ್ಚಿ ರಾಜ ವದನ ಮುಚ್ಚಿ ನಾಚಿಕೊಂಡು ಸದನದೆದುರು ತನ್ನ ಸೋಲನೊಪ್ಪಿಕೊಂಡನು ಬೀರಬಲ್ಲ ನಿನ್ನ ಜಾಣ್ಮೆ ಮೀರಬಲ್ಲ ಮನುಜರಿಲ್ಲ ಅರಸನ ಕೊಹಿನೂರ ವಜ್ರ ನೀನು ಎಂದನು ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನನ್ನೂರಲಿ ಏನಿದೆ….? ರೇಖಾವಿ.ಕಂಪ್ಲಿ ನನ್ನೂರಲಿ ಏನಿದೆ….? (ನನ್ನದು ಪ್ರಾಸವಿಲ್ಲದ ಹಾಡು) ನಾಲ್ಕಾರು ಪುಡಿಗಾಸು ಮಾಡಿಕೊಳ್ಳುವ ನನ್ನೂರಲಿ ಏನಿದೆ ಎಂದೆನುತ ಊರಕೇರಿ ಬಿಟ್ಟು ದೂರದೂರಿಗೆ ಪಯಣ ಬೆಳಸಿದರು ನನ್ನನ್ವ ನನ್ನಪ್ಪ ತಮ್ಮನೊಂದಿಗೆ……… ಮಹಾನಗರದಲಿ ಅಲ್ಲೊಂದು ಮೇಲ್ಚಾವಣಿ ಇಲ್ಲದ ಗುಡಾರದಲ್ಲಿ ಬೀದಿ ಬದಿಯ ಒಲೆಯಲಿ ರೊಟ್ಟಿ ತಟ್ಟಿ ನನ್ನನ್ವ ಪುಡಿಗಾಸು ದುಡಿದು ಬರುವ ನನ್ನಪ್ಪನಿಗಾಗಿ ಕಾದು ಕುಳಿತಳು ತಮ್ಮನೊಂದಿಗೆ… ಅದಾವ ಮಸಣದ ಕರೆಯೊ ತಿಳಿಯೆ ನನ್ನಪ್ಪನ ಕೂಗಿ ಕರೆಯಿತು ಬಾರದೂರಿಗೆ ಕರೋನಾ ಎನ್ನುವ ರೋಗದ ರೂಪದಲಿ ತಪ್ಪಿತಸ್ಥನಂತು ಖಂಡಿತ ಅಲ್ಲ ನನ್ನಪ್ಪ…… ಮಾಯೆಗೆ ಕಣ್ಣ ರೆಪ್ಪೆ ಮುಚ್ಚಿಬಿಟ್ಟ ನನ್ನಪ್ಪ ನನ್ನನ್ವನ ಗೋಳು ಕೇಳುವ ಕಿವಿಗಳಿಲ್ಲ ಪುಡಿಗಾಸು ದುಡಿವವನ ಕಳೆದುಕೊಂಡು ಬಿಡಿಗಾಸು ಇಲ್ಲದೆ ಮತ್ತೆ ನಮ್ಮೂರಿನತ್ತ ಪಯಣ… ಬರಿಗಾಲಿನಲಿ ಬಿಸಿಲ ಧಗೆಯಲಿ ತಮ್ಮನೊತ್ತು ಕಣ್ಣ ಹನಿ ನುಂಗಿಕೊಂಡು ಕಾದ ಹೊಟ್ಟೆಗೆ ಬಟ್ಟೆ ಕಟ್ಟಿ ದುಃಖದ ಬುಟ್ಟಿ ಹೊತ್ತು ಬರುವ ದಾರಿಯಲಿ ಬೇಡಿ ತಿನ್ನುತಾ…… ಮುಳ್ಳು ಕಲ್ಲುಗಳ ತುಳಿಯುತಾ ಧೂಳು ದುಮ್ಮು ವರಸಿಕೊಳ್ಳುತಾ ಬೇವರ ಹನಿ ಸೆರಗಲಿ ವರಸಿ ಹೊತ್ತ ತಮ್ಮನ ಸರಸಿಕೊಳ್ಳುತಾ ರಕ್ತಗಾಲಲಿ ಬಂದು ಸೇರಿದಳು ನನ್ನನ್ವ ನನ್ನೂರನು.. ********

ಕಾವ್ಯಯಾನ Read Post »

ಕಾವ್ಯಯಾನ

ಗಝಲ್

ಗಝಲ್ ರತ್ನರಾಯಮಲ್ಲ ಧ್ಯಾನ ಮಾಡಲು ಜಾಗ ಹುಡುಕುತಿರುವೆ ಶರಣ ನನ್ನ ಹೃದಯವನ್ನೇ ಸ್ವಚ್ಛ ಮಾಡುತಿರುವೆ ಶರಣ ಪಡೆದುಕೊಳ್ಳಲು ಹತ್ತು ಹಲವಾರು ದಾರಿಗಳಿವೆ ಇಲ್ಲಿ ಕಳೆದುಕೊಳ್ಳಲು ದಾರಿಯನ್ನು ಅರಸುತಿರುವೆ ಶರಣ ಬದುಕುತಿದ್ದೇವೆ ಬಣ್ಣ ಬಣ್ಣದ ಮನಸ್ಸುಗಳೊಂದಿಗೆ ಕನಸುಗಳೊಂದಿಗೆ ಸಾಗಲು ಹೆಣಗುತಿರುವೆ ಶರಣ ಭೋಗದ ಗರ್ಭಗುಡಿ ಚಂಚಲಗೊಳಿಸುವುದೇ ಹೆಚ್ಚು ಕಾನನದ ಗುಹೆಗಳಿಂದ ಹಿಂತಿರುಗುತಿರುವೆ ಶರಣ ಸಂಸಾರದಿ ಓಡಿ ಹೋಗವುದು ಸಾಧನೆಯಲ್ಲ ‘ಮಲ್ಲಿ’ ಜೀವನದ ರಂಗಭೂಮಿಯಲ್ಲಿ ನಟಿಸುತಿರುವೆ ಶರಣ

ಗಝಲ್ Read Post »

ಕಾವ್ಯಯಾನ

ಕಾವ್ಯಯಾನ

ತೋರಣ ಕಟ್ಟುವೆವು ಸುಜಾತ ಗುಪ್ತ ಜಗನ್ನಾಥನು ಜೊತೆ ನಿವಸಿಸಿ ನಮ್ಮನ್ನು ಕಾಯಲು ಅನವರತ ಹೃದಯದ ಭಾವಕೆ ಮಾನವತಾ ತೋರಣ ಕಟ್ಟುವೆವು.. ಜಗದಂಬೆಯ ಮನ ಒಲಿಸಿ ಹಸನ್ಮುಖಿಯಾಗಿರಿಸಲು ಮನದ ದ್ವಾರಕೆ ನೀತಿಯ ತೋರಣ ಕಟ್ಟುವೆವು… ಬಾಳಲಿ ಹಿನ್ನಡೆಸುವ ಸೋಲಿನ ಸಾಲಿಗೆ ನಾವ್ ಚೇತನಾಪ್ರದ ಗೆವುವಿನ ತೋರಣ ಕಟ್ಟುವೆವು. ಕಂದನ ಖುಷಿಯ ಸಿರಿಗೆ ಹರಸುತ ಹರುಷದೆ ಮುತ್ತಂತ ತ್ಯಾಗದ ತೋರಣ ಕಟ್ಟುವಳಮ್ಮ ********

ಕಾವ್ಯಯಾನ Read Post »

ಪುಸ್ತಕ ಸಂಗಾತಿ

ಪುಸ್ತಕ ಸಂಗಾತಿ

ಮಗರಿಬ್ ಗಜಲ್ ಕೃತಿ: ಮಗರಿಬ್ ಗಜಲ್ ಸಂಕಲನ ಲೇಖಕರು: ಸಾವನ್ ಕೆ ಸಿಂಧನೂರು ಪ್ರಕಾಶನ: ಅಮ್ಮಿ ಪ್ರಕಾಶನ* ಗಜಲ್ ಉರ್ದು ಕಾವ್ಯದ ಅತ್ಯಂತ ಜನಪ್ರಿಯ ರೂಪ. ಉರ್ದು ಸಾಹಿತ್ಯದಲ್ಲಿ ಜನಪ್ರಿಯವಾಗಿರುವ ಗಜಲ್ ಗಂಭೀರ ಕಾವ್ಯವೂ ಹೌದುಪ್ರಾಯಶಃ ಹನ್ನೊಂದನೇ ಶತಮಾನದಲ್ಲಿ ಪ್ರಾರಂಭವಾಗಿರಬೇಕು. ಗಜಲ್ ಅನ್ನು ಉರ್ದು ಕಾವ್ಯದ ರಾಣಿ ಎನ್ನುತ್ತಾರೆ. ಗಜಲ್ ಅಂದರೆ ಫಾರಸಿ ಭಾಷೆಯಲ್ಲಿ ಜಿಂಕೆ! ಸ್ವಚ್ಛಂದವಾಗಿ ಕಾಡಿನಲ್ಲಿ ಓಡಾಡುವ ಈ ಜಿಂಕೆ ಸೆರೆಸಿಕ್ಕಾಗ ಹೊರಡಿಸುವ ಅರ್ತನಾದವೇ ಕರುಣಾ ರಸವನ್ನೊಳಗೊಂಡ `ಗಜಲ್~ ಎಂದು ಅರ್ಥೈಸುತ್ತಾರೆ.  ಗಜಲ್ ರಾಣಿಯ ಹುಚ್ಚು ಹಿಡಿಸಿಕೊಂಡು ಅವಳದೇ ಧ್ಯಾನದಲ್ಲಿ ತಲ್ಲಿನರಾದವರ ಸಾಲಿನಲ್ಲಿ ಸಾವನ್ ಕೆ ಸಿಂಧನೂರು ಅವರು ಹೊಸ ಸೇರ್ಪಡೆಯಾಗುತ್ತಿದ್ದಾರೆ. ಸಾವನ್ ಕೆ ಸಿಂಧನೂರು ಅವರು ರಸಾಯನಶಾಸ್ತ್ರದಲ್ಲಿ ಪದವಿ ಪಡೆದು ಪ್ರೌಢಶಾಲೆಯಲ್ಲಿ ಲೆಕ್ಕಾಚಾರದ ಗಣಿತ ಶಿಕ್ಷಕರಾದ ಇವರಿಗೆ ಕನ್ನಡ ಸಾಹಿತ್ಯದ ಸೆಳೆತ ತೀರ್ವವಾಗಿ ಕಾಡಿ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು, ಪದವಿ ಓದುತ್ತಿರುವಾಗಲೇ ಸಾಹಿತ್ಯದ ಅಭಿರುಚಿ ಹಚ್ಚಿಸಿಕೊಂಡಿದ್ದ ಇವರಿಗೆ ವೃತ್ತಿಯ ಒತ್ತಡ, ಸಾಂಸಾರಿಕ ಜೀವನ ಕಟ್ಟಿಹಾಕಿತ್ತು, ಮತ್ತೆ ಇವರಿಗೆ ಸಾಹಿತ್ಯದ ಜೀವಸೆಲೆ ಪುಟಿದೇಳುವಂತೆ ಮಾಡಿದ್ದು ವಾಟ್ಸಪ್ ಬಳಗವಾದ ಹನಿ ಹನಿ ಇಬ್ಬನಿ ಸಾಹಿತ್ಯ ಬಳಗ. ಗಜಲ್ ರಾಣಿಯ ಹುಚ್ಚು ಇವರಿಗೆ ಅಷ್ಟಿಷ್ಟು ಹಿಡಿಯಲಿಲ್ಲ ತೀರ್ವವಾಗಿ ಹುಚ್ಚು ಹಿಡಿಸಿಕೊಂಡ ಪರಿಣಾಮ ಇವರ ಚೊಚ್ಚಲ ಗಜಲ್ ಸಂಕಲನವಾದ ಮಗರೀಬ್ ಗಜಲ್ ಸಂಕಲನ. ಈ ಗಜಲ್ ಸಂಕಲನದಲ್ಲಿ ಒಟ್ಟು ೫೨ ಗಜಲ್ ಗಳಿವೆ. ಇವರೇ ಹೇಳಿಕೊಂಡಂತೆ ನನ್ನ ಪಾಲಿನ ದ್ರೋಣಾಚಾರ್ಯ ಶ್ರೀ ಅಲ್ಲಾಗಿರಿರಾಜ್ ರವರು ಎಂದು , ಅಲ್ಲಾಗಿರಿರಾಜ್ ಅವರ ಗಜಲ್ ಗಳ ಓದು, ಹಾಗೂ ಹನಿ ಹನಿ ಇಬ್ಬನಿ ಬಳಗದಿಂದ ನನ್ನಲ್ಲೂ ಗಜಲ್ ಬರೆಯುವ ಶಕ್ತಿ ಇದೆ ಎಂದು ಹುರಿದುಂಬಿಸಿದ ಪರಿಣಾಮ ಈ ಗಜಲ್ ಗಳು. ಇವರ ಗಜಲ್ ಸಂಕಲನದಲ್ಲಿ ವಾಸ್ತವದಲ್ಲಿ ನಡೆಯುವ ಘಟನೆಗಳೇ ವಸ್ತುವಿಷಯಗಳಾಗಿವೆ, ಪ್ರೀತಿ ಪ್ರೇಮದ ಕಡೆ ವಾಲಿದರೂ ವಾಸ್ತವದಲ್ಲಿ ನಡೆಯುವ ಘಟನೆಗಳಿಗೂ ಧ್ವನಿಯಾಗಿದ್ದಾರೆ. ಮಹಾತ್ಮಾ ಗಾಂಧಿಯವರು ಇವರನ್ನು ಕಾಡಿ ಗಜಲ್ ಬರೆಸಿದ್ದಾರೆಂದೆ ಹೇಳಬೇಕು, ಗಾಂಧಿಯ ಕೋಲು, ಕನ್ನಡಕ ರೂಪಕಗಳನ್ನಾಗಿ ಬಳಸಿಕೊಂಡಿದ್ದಾರೆ. ಸ್ತ್ರೀ ಸಂವೇದನೆ, ವಿರಹ, ರೈತನ ದಾರುಣ ಸ್ಥಿತಿ, ಹೆಣ್ಣಿನ ಮುಟ್ಟಿನ ಬಗ್ಗೆ, ಜಾತಿ ,ಧರ್ಮ, ಪ್ರೀತಿ, ದ್ವೇಷ ಹೀಗೆ ಪ್ರತಿಯೊಂದು ವಿಷಯ ವಸ್ತುವಿನಿಂದ ಈ ಗಜಲ್ ಸಂಕಲನ ಗಮನ ಸೆಳೆಯುತ್ತದೆ.*”ಕಾದಿರುವನು ಸಾವನ್ ನಿನ್ನ ಪ್ರೇಮ ತುಂಬಿದ ಸುರಪಾನಕ್ಕೆ**ಸುರಿದುಬಿಡು ಅಮರವಾಗಲಿ ಜೀವ ಉಳಿಸಿಬಿಡು ಮರಳಬೇಡ ಚಿನ್ನ”*ಪ್ರೇಮ ಎಲ್ಲರನ್ನೂ ಕಾಡುತ್ತದೆ ಅದರಂತೆ ಸಾವನ್ ಅವರನ್ನು ಕಾಡಿದ ಪರಿಣಾಮ ಈ ಮೇಲಿನ ಶೇರ್ *”ಹಾಡುವ ಹಕ್ಕಿಗೂ ಗಂಟಲು ಕಟ್ಟಿದೆ ಕಣ್ಣೀರಿನಿಂದ ಕಟ್ಟಬೇಕಿದೆ ಜಲಾಶಯ**ಕೇಡುಗಾಲಕ್ಕೂ ಸೋಬಾನೆ ಹಾಡೆಂದರೆ ಮದ್ದು ಬೇಡಿದ್ದೇ ತಪ್ಪಾ”*ಹಾಡುವ ಹಕ್ಕಿಗೂ ನೋವಿದೆ ಎನ್ನುವ ಆಶಯ ವ್ಯಕ್ತಪಡಿಸುವ ಗಜಲ್ ಇದಾಗಿದೆ. ಗಂಟಲು ಕಟ್ಟಿದೆ ಕಣ್ಣೀರಾಗಿ ಹೊರಗೆ ಬಂದರೆ ಜಲಾಶಯವಾಗಬಹದು ಎನ್ನುವಲ್ಲಿ ನೋವು ಎಷ್ಟಿದೆ ಎನ್ನುವುದನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ *”ಇದಹದೊಳಗೆ ಪರ ಹುಡುಕುವ ಊರಿನೊಳು ಒಬ್ಬಂಟಿ ಪಯಣಿಗ ನಾನು**ಮಧು ಪಾತ್ರೆಗೆ ತುಟಿ ತಾಕದೆ ನಶೆ ಏರಿದ ವ್ಯಸನಿ ಮಧುಮಗ ನಾನು”*ಒಬ್ಬಂಟಿ ಪಯಣಿಗ ನಾನು ಪ್ರೀತಿ ಪ್ರೇಮವನ್ನೆ ಹಂಚುತ್ತಾ ಸಾಗುವವನು, ಜಾತಿ ಧರ್ಮ ಎನ್ನುತ್ತಾ ತಿರುಗುವವರ ಮಧ್ಯೆ ಪ್ರೀತಿ ಹಂಚುವೆ ಎನ್ನುತ್ತಾರೆ ಈ ಗಜಲ್ ನಲ್ಲಿ.*”ನಿದಿರೆ ಇಲ್ಲದೆ ಹೆಣೆದ ಕನಸುಗಳಿಗೆ ಪ್ರಸವ ಪೂರ್ವ ಗರ್ಭಪಾತ**ಜನ್ನತ್ ಗೂ ನಿನಗೂ ಒಂದೇ ಹೆಸರು ನರಕಕ್ಕೆ ತಳ್ಳುವ ಹುನ್ನಾರವೇ ಗೆಳತಿ”*ಬಡತನವನ್ನು ನೋಡಿ ತೊರೆದು ಹೋದ ಅವಳ ಬಗೆಗೆ ಎದೆಯಾಳದ ನೋವು ಹೊರಚೆಲ್ಲಿದ್ದಾರೆ, ಅದೇಷ್ಟು ಸುಂದರವಾದ ರೂಪಕ ಕೊಟ್ಟಿದ್ದಾರೆ ಈ ಗಜಲ್ ನಲ್ಲಿ, ನಿದಿರೆಯಿಲ್ಲದೆ ಹೆಣೆದ ಕನಸುಗಳನ್ನು ಕೊಂದುಹೋದವಳು ಎಂದು ಅವಲತ್ತುಕೊಳ್ಳುತ್ತಾರೆ. *”ಹಸಿರ ಸಿರಿಯ ಸೊಬಗು ನೋಡವ್ವ ಗೆಳತಿ**ಕರುನಾಡು ಇದು ಸ್ವರ್ಗಕ್ಕೆ ಸಮನವ್ವ ಗೆಳತಿ”*ಕನ್ನಡನಾಡಿನ ವರ್ಣನೆ, ಕನ್ನಡದ ಲಿಪಿ, ಜ್ಞಾನ, ಧ್ಯಾನ, ಕನ್ನಡ ನಾಡಲ್ಲೇ ಹುಟ್ಟಬೇಕು ಎಂಬ ಅಭಿಮಾನ ಮೂಡಿಸುವ ಗಜಲ್ ಇದಾಗಿದೆ. *”ಉಸಿರು ಬಿಡುವಾಗಲು ರಾಮನನ್ನೇ ನೆನೆದು ರಾಮರಾಜ್ಯ ಕಂಡ ಕನಸುಗಾರ**ರಘುಪತಿ ರಾಜನ ಜೊತೆ ಈಶ್ವರ ಅಲ್ಲಾನನ್ನೇ ಸೇರಿಸಿ ತಿರಂಗ ಲೆಹರಾಯಿಸಲು ಗಾಂಧಿಯಲ್ಲದೆ ಇನ್ನಾರು?”*ಗುಂಡಿಗೂ ಗುಂಡಿಗೆ ಒಡ್ಡಲು ಗಾಂಧಿಯಿಂದ ಮಾತ್ರ ಸಾಧ್ಯ ಎನ್ನುವ ಇವರ ಗಜಲ್ ಗಾಂಧಿಯ ಬಗೆಗೆ ಹೆಮ್ಮೆಯ ಭಾವ ಮೂಡುಸುತ್ತದೆ *”ದೇಹವಷ್ಟೆ ಬೇಕಿದ್ದರೆ ಬಿಸಿ ತಾಕಿಸಿ ಕುಲುಮೆ ಲೋಹಕ್ಕೆ ನೀರು ಕುಡಿಸುತ್ತಿದ್ದೆ**ಸುರಪಾನದಂತ ಮೊಹಬ್ಬತಿಗೆ ಈಗಲೂ ಬೊಗಸೆಯಿದೆ ವಿಷಕಾರಿದವಳೇ ನನ್ನ ತಪ್ಪೇನು”*ಮೋಸ ಮಾಡಿದ ಅವಳ ಬಗ್ಗೆ ಮಾರ್ಮಿಕವಾಗಿ ರೂಪಕಗೊಂದಿಗೆ ಮೂಡಿಬಂದ ಗಜಲ್ ಇದು ವಿರಹ ವೇದನೆಯನ್ನು ಅದೇಷ್ಟು ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.*”ಬೀಜ ಬಿತ್ತುವ ಹಿಮ್ಮತ್ ಇದೆ ಎಂದು ಸೆಟೆದು ಸಾಗುವ ಯಜಮಾನರೇ**ಹಡೆವ ಬ್ಯಾನಿಯ ಜಹನ್ನುಮ್ಮಿನ ಪಡೆಯಲು ನೋವು ಯಾರು ಸಿದ್ದರಿಹರಿಲ್ಲಿ ಸಖಿ”*ಪುರುಷ ಸಮಾಜದ ಮೇಲೆ ಹೆಣ್ಣಿನ ಆಕ್ರೋಶ ವ್ಯಕ್ತವಾಗುವ ಈ ಗಜಲ್ ನಲ್ಲಿ ಬೀಜ ಬಿತ್ತುವದೇ ಯೋಗ್ಯತೆಯಾ ಎಂದು ಪ್ರಶ್ನಿಸುತ್ತಲೆ ಹಡೆವ ಬ್ಯಾನಿ ನಿಮಗೆ ಗೊತ್ತಿದೆಯಾ ಎಂದು ಪ್ರಶ್ನಿಸುತ್ತಾ ಹೆಣ್ಣಿನ ನೋವಿನ ಚಿತ್ರಣವನ್ನು ಕಟ್ಟಿಕೊಡುತ್ತಾರೆ. *”ಇರುವುದೊಂದು ಗೋಳ ಅದೆಷ್ಟು ಬೇಲಿ ಹಾಕುವಿರಿ ನೀವು**ಬಿತ್ತಿದ್ದೆ ಬೆಳೆಯುವಿರಿ ಬೇವ ರಾಶಿಯ ಜಾಗದಲ್ಲಿ ಜೇನಿಲ್ಲ ಯಾಕೇ?”*ಇರುವುದೊಂದೆ ಭೂಮಿ ಅದೆಷ್ಟು ಬೇಲಿ ಹಾಕುವಿರಿ ಎಂದು ಮನುಜನನ್ನು ಪ್ರಶ್ನಿಸುತ್ತಾರೆ, ಜಾತಿ, ಧರ್ಮದದಿಂದ ಬೇಲಿಯಾಕುವ ಮಂದಿಯನ್ನು ತಣ್ಣಗೆ ಕುಟುಕಿದ್ದಾರೆ.*”ಸತ್ತ ದೇಹದ ಕಫನಿನ ಮೇಲೆ ಅವರು ಎಸೆಯಬಲ್ಲರು ಪರಿಹಾರ ಸಾವನ್**ಅನ್ನ ಬೆಳೆವ ಮಣ್ಣ ಕಲೆಗೆ ಇನ್ನಾರು ಗತಿ ಆಳಿದ ನೋಡು ಭೂಮಿ ಪುತ್ರ”*ರೈತನ ಶವದ ಮೇಲೆ ಪರಿಹಾರದ ಎಂಜಲು ಕಾಸನ್ನು ಮಾತ್ರ ರಾಜಕಾರಣಿಗಳಿಂದ ಕೊಡಲು ಸಾಧ್ಯ, ಉತ್ತಿ ಬಿತ್ತಿ ಬೆಳೆಯಲು ಅವರಿಂದ ಸಾಧ್ಯವಿಲ್ಲ ಅದು ಭೂಮಿಪುತ್ರನೆಂಬ ರೈತನಿಂದ ಮಾತ್ರ ಎಂದು ರೈತನ ಬಗ್ಗೆ ಒಂದೊಳ್ಳೆ ಗಜಲ್ ರಚಿಸಿದ್ದಾರೆ. ಸಲಿಂಗಿಗಳ ಕುರಿತಾಗಿ ಮೂಡಿಬಂದ ಗಜಲ್ ಅವರ ಬಗ್ಗೆ ಕರುಣೆಯ ನೋಟ ಬೀರುವಂತೆ ಮಾಡುತ್ತದೆ. ಅವರು ಮನುಷ್ಯರಲ್ಲವೇ ಎಂದು ಚಿಂತಿಸುವಂತೆ ಮಾಡುತ್ತದೆ.ಮದುವೆಗೆ ಹೆಣ್ಣು ಹುಡುಕುವ ಬ್ರಹ್ಮಚಾರಿ ಹುಡುಗರ ಮನದ ಅಳಲನ್ನು ದೇವರಿಗೆ ಮುಟ್ಟಿಸುತ್ತಿದ್ದಾರೆ. ಒಳ್ಳೆಯ ಸತಿಯನ್ನು ಕರುಣಿಸು ಎಂದು ಹುಡುಗರ ಪರವಾಗಿ ಮೊರೆಯಿಡುತ್ತಿದ್ದಾರೆ. ಮುಟ್ಟಿನ ಬಗ್ಗೆ ಮೂಡಿಬಂದ ಗಜಲ್ ಹಾಗೂ ಭಾರತದ ಬಗೆಗಿನ ಪ್ರೇಮದ ಗಜಲ್ ಗಳು ಗಮನ ಸೆಳೆಯುತ್ತವೆ. ಮಾತೃಭಾಷೆ ಹಿಂದಿ ಇರುವುದರಿಂದ ಉರ್ದು ಪದಗಳನ್ನು ಗಜಲ್ ಗಳಲ್ಲಿ ಬಳಸುವುದರ ಮೂಲಕ ಗಜಲ್ ಪಂಚ್ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀಯುತ ಸಾವನ್ ಕೆ ಸಿಂಧನೂರು ಅವರ ಮೊದಲ ಗಜಲ್ ಸಂಕಲನವಾದ್ದರಿಂದ ಹಾಗೂ ಅಧ್ಯಯನದ ಕೊರತೆ ಇರುವುದನ್ನು ಅವರೇ ಒಪ್ಪಿಕೊಂಡಿದ್ದಾರೆ. ಬಹುತೇಕ ಗಜಲ್ ಗಳು ಮುರದ್ದಪ್ಪ ಗಜಲ ಗಳಾಗಿದ್ದು ಕೆಲವು ಗಜಲ್ ಗಳು ಆಜಾದಿ ಗಜಲ್ ಗಳಾಗಿವೆ. ಗಜಲ್ ಲೋಕದಲ್ಲಿ ಭರವಸೆಯ ಗಜಲ್ ಕವಿಯಾಗಿ ಭಾಗಶಃ ಯಶಸ್ವಿಯಾಗಿದ್ದಾರೆಂದೆ ಹೇಳಬಹುದು. ಗಜಲ್ ಬಗೆಗೆ ಅಧ್ಯಯನ ಮಾಡಲಿ ಇನ್ನೂ ಹೆಚ್ಚು ಗಜಲ್ ಸಂಕಲನಗಳನ್ನು ನಾಡಿಗೆ ಕೊಡುಗೆಯಾಗಲಿ ನೀಡಲಿ ಎಂದು ಹಾರೈಸುತ್ತೇನೆ. ********** ಶಿವಕುಮಾರ ಮೋ ಕರನಂದಿ

ಪುಸ್ತಕ ಸಂಗಾತಿ Read Post »

ಇತರೆ

ಪ್ರಸ್ತುತ

ಅವಕಾಶ  –   ವಂಚಿತರ ಗೆಲುವಿನ ಹೆಬ್ಬಾಗಿಲು! ವಸುಂಧರಾ ಕದಲೂರು   ಜನರು ಅವಕಾಶ ವಂಚಿತರಾಗಲು ಇರುವ ಕಾರಣಗಳು ಬಹಳ ಸಲ ಕ್ಷುಲ್ಲಕವಾಗಿರುತ್ತವೆ. ಅದರಲ್ಲೂ ಬಣ್ಣ, ಹಣ, ಅಧಿಕಾರ, ಜಾತಿ- ಇತರೆ ತಾರತಮ್ಯಗಳು ಪ್ರಮುಖವಾದವು. ಆದರೆ ಕೇವಲ ‘ಹೆಣ್ಣು’ ಎಂಬ ಕಾರಣಕ್ಕೇ ಅವಕಾಶ ವಂಚಿತರಾಗುವುದು ಇದೆಯಲ್ಲಾ ಇದಕ್ಕೆ ಏನೆನ್ನುವುದು..?            ತಮಗೆ ದೊರಕಿದ ಒಂದು ಸದಾವಕಾಶದಿಂದ ಎತ್ತರದ ಸಾಧನೆ ಮಾಡಿರುವ ಸುಧಾಮೂರ್ತಿ, ಕಿರಣ್ ಮಜುಂದಾರ್, ಹಿಮಾದಾಸ್ ಗುಪ್ತಾ, ಸಾನಿಯಾ ಮಿರ್ಜಾ, ಪಿ ಟಿ ಉಷಾ, ಪಂಢರೀಬಾಯಿ, ಲಕ್ಷ್ಮೀ, ಮಾಧವಿ, ಮಾಧುರಿ ದೀಕ್ಷಿತ್, ವೈದೇಹಿ, ತ್ರಿವೇಣಿ, ಬಿ. ಜಯಶ್ರೀ, ಎಸ್. ಜಾನಕಿ, ಬಿ ಆರ್ ಛಾಯಾ, ಡಾ. ಆಶಾ ಬೆನಕಪ್ಪ, ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಡಾ. ಮಲ್ಲಿಕಾ ಘಂಟಿ, ಡಾ. ಲೀಲಾ ಅಪ್ಪಾಜಿ, ಡಾ. ಉಷಾದಾತಾರ್, ಮಂಜುಭಾರ್ಗವಿ… ಹೀಗೆ ನಾನಾ ಬಗೆಯ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದವರನ್ನು ಜಗತ್ತು ಹೆಮ್ಮೆಯಿಂದ ಮೆಚ್ಚುತ್ತದೆ. ಆದರೆ, ಅದೆಷ್ಟೋ ಹೆಣ್ಣು ಜೀವಗಳು ಬದುಕುವ ಅವಕಾಶವೇ ಸಿಗದೆ, ತಾವು ಜೀವಂತ ಇರುವ ಕುರುಹನ್ನು ಬಿಟ್ಟುಕೊಡಲಾಗದೇ ಹೇಗೋ ದಿನದೂಡುತ್ತಿರುವುದನ್ನು ನಿರಾಕರಿಸಲಾಗುವುದೇ?   ತಾವೂ ಸಹ ಇತರರಂತೆಯೇ ಅಪಾರ ಸಾಮರ್ಥ್ಯ- ಸಾಧ್ಯತೆಗಳನ್ನು ಹೊಂದಿರುವವರು, ಅನನ್ಯ ಪ್ರತಿಭೆಗಳ ಪ್ರತಿನಿಧಿಗಳಾಗಿರುವವರು, ತಮಗೂ ಸಹ ಸೂಕ್ತ ವೇದಿಕೆ ದೊರೆತರೆ ಜಗಮಗಿಸಿ ಮಿಂಚಬಲ್ಲೆವು ಎನ್ನುವ ಹಲವಾರು ಪ್ರತಿಭಾನ್ವಿತರು ನಮ್ಮೊಡನಿದ್ದಾರೆ. ಆದರೆ ಅವರು ಅವಕಾಶ ವಂಚಿತರಾಗಿ ಅಜ್ಞಾತವಾಸ ಮಾಡುತ್ತಿದ್ದಾರೆ.  ಹೀಗೆ ಕತ್ತಲಲ್ಲಿ ಕೊಳೆಯುತ್ತಿರುವ ಚೈತನ್ಯಗಳನ್ನು ಬೆಳಕಿನ ಬಯಲಿಗೆ ತರುವುದು ಹೇಗೆ?             ನಮ್ಮ ನಡುವೆಯೇ ಹಲವು ಬಗೆಯಲ್ಲಿ ಅವಕಾಶ ವಂಚಿತರಾಗಿರುವವರಿದ್ದಾರೆ. ಒಂದಷ್ಟು ತಾಳ್ಮೆ ಹಾಗೂ ಅಂತಃಕರುಣೆಯಿಂದ ನೋಡಿದರೆ ಅಂತಹವರು ಕಣ್ಣಿಗೆ ಕಂಡಾರು…     ಆಕೆ ನನ್ನ ಅಕ್ಕನ ಕಾಲೇಜು ಗೆಳತಿ. ಆಕೆಗೆ ಸಂಬಂಧದಲ್ಲೇ ಮದುವೆಯಾಗಿ ಊರಿನಲ್ಲೇ ಉಳಿದವಳು. ಕಾಲೇಜಿನ ಸಾಂಸ್ಕೃತಿಕ ವೇದಿಕೆಗಳಲಿ ಮಿಂಚುತ್ತಿದ್ದವಳಿಗೆ ಪದವಿ ಶಿಕ್ಷಣ ಮುಗಿಸಿ, ಮುಂದೆಯೂ ಹೆಚ್ಚು ಓದಿ, ಉದ್ಯೋಗ ಹಿಡಿಯುವ ಮಹದಾಸೆ ಇತ್ತು. ಅದೇನಾಯಿತೋ ತಿಳಿಯದು, ಪದವಿಯ ಕೊನೆಯ ವರ್ಷದಲ್ಲಿ ಮದುವೆಯಾಗಿ ಹೋಯಿತು. ವರ್ಷ ಕಳೆಯುವಷ್ಟರಲ್ಲಿ ಒಂದು ಮಗುವಿನ ತಾಯಿಯೂ ಆದಳು. ಇನ್ನು ಪದವಿ ಮುಗಿಸುವುದಂತೂ ಅವಳ ಕನಸಾಗಿ ಉಳಿಯಿತು. ಕಳೆದ ವರ್ಷ ಯಾವುದೋ ಸಮಾರಂಭದಲ್ಲಿ  ಭೇಟಿಯಾದಾಗ ಆಕೆ ಹೇಳಿದ್ದಿಷ್ಟಿ, “ಮಗು ಬೆಳೆದು ದೊಡ್ಡದಾಯ್ತು. ಈಗಷ್ಟೇ ಎಜುಕೇಷನ್ ಕಂಪ್ಲೀಟ್ ಆಯ್ತು.  ಇನ್ನು ದೊಡ್ಡ ನಗರಕ್ಕೆ ಹೋಗಿ ಉದ್ಯೋಗ ಹಿಡಿದು ಲೈಫ್ ಸೆಟಲ್ ಮಾಡಿಕೊಳ್ಳಬೇಕನ್ನೋ ಹುಮ್ಮಸ್ಸಿನಲ್ಲಿದೆ. ನಂಗೆ ಖುಷಿ. ಆದರೆ ಮನೇಲಿ ನಾನು ಒಬ್ಬಳೇ ಉಳಿದೆ. ಈಗ ನನಗೂ ಏನಾದ್ರು ಮಾಡಬೇಕನ್ನೋ ಆಸೆಯಾಗ್ತಿದೆ. ಅಟ್ ಲೀಸ್ಟ್ ಡಿಗ್ರೀನಾದ್ರೂ ಕಂಪ್ಲೀಟ್ ಮಾಡ್ಕೊಳ್ಳೋಣ ಅಂತ” ಎಂದಳು.            ಆ ದಿನವೆಲ್ಲಾ ಆಕೆಯದ್ದೇ ಗುಂಗು ನನಗೆ. ಆಕೆಯ  ಪಾಸಿಟೀವ್ ನೇಚರ್ ನೋಡಿ ಖುಷಿ. ಆದರೆ ಅಪಾರ ಉತ್ಸುಕಳಾಗಿರುವ ಆಕೆಗೆ, ಹಿಂದೆ ಎಂದೋ ಅರ್ಧಕ್ಕೇ ಕೊನೆಗೊಂಡಿದ್ದ ಪದವಿ ಶಿಕ್ಷಣವನ್ನು ಪೂರ್ಣಗೊಳಿಸುವ ಚಿಗುರಿದ ಕನಸು ಹೆಮ್ಮರವಾಗಲು ಸಾಧ್ಯವಾದರೆ…! ಅದಕ್ಕಾಗಿ ಆಕೆಗೊಂದು ಅವಕಾಶ ಬೇಕಿದೆ.            ನಾಗರತ್ನ ನನ್ನ ಹೈಸ್ಕೂಲಿನ ಸಹಪಾಠಿ. ಉತ್ತಮ ಕ್ರೀಡಾಪಟು. ಓಟದಲ್ಲಂತೂ ಚಿಗರೆಯೇ. ಶಾಲೆಯನ್ನು ಪ್ರತಿನಿಧಿಸಿ ರಾಜ್ಯಮಟ್ಟದವರೆಗೆ ಹೋಗಿದ್ದವಳು..!ಮುಂದೇನಾಯಿತೋ ಗೊತ್ತಿಲ್ಲ. ಆಕೆ ಪಿ ಯು ಸಿ ಗೂ ಸಹ ಕಾಲೇಜಿನ ಮೆಟ್ಟಿಲು ಹತ್ತಲಿಲ್ಲ. ಡಾಕ್ಟರಳಾಗಲು ಆಕೆಗೆ ಬಹಳ ಆಸೆಯಿತ್ತು. ಸಾಧನೆಯ ಮೆಡೆಲುಗಳಿಗೆ ತಲೆಬಾಗಬೇಕಾದವಳು ಅದಾವ ಜವಾಬ್ದಾರಿಯ ನೊಗ ಎಳೆಯಲು ತನ್ನ ಹೆಗಲು ನೀಡಿದಳೋ..  ಮನೆಯ ಬಡತನ, ನೆರವು- ಅರಿವು- ಅವಕಾಶದ ಕೊರತೆಯೋ ತಿಳಿಯದು. ಆ ಚೇತನ ಈಗ ಅಸಮಾಧಾನದ ನಿಟ್ಟುಸಿರಿಡುತ್ತಾ ಅದೆಲ್ಲಿ ಬೇಯುತ್ತಿದೆಯೋ. ಪ್ರತಿಭಾವಂತ ಹುಡುಗಿಯೊಬ್ಬಳು ಅವಕಾಶ ವಂಚಿತಳಾಗಿ ಇತಿಹಾಸ ನಿರ್ಮಿಸುವುದನ್ನು ನಾವು ಕಾಣದಾದೆವು.                  ಸುಗುಣಾಗೆ ಇಬ್ಬರು ಹೆಣ್ಣುಮಕ್ಕಳು. ಸಾಕಷ್ಟು ಸ್ಥಿತಿವಂತರಾಗಿದ್ದ ಆಕೆಯ ಮನೆಯವರಿಗೆ ತಮ್ಮ ವಂಶೋದ್ಧಾರಕ್ಕಾಗಿ ಒಂದು ಗಂಡು ಮಗು ಬೇಕೆಂದು ಮುಂದಿನ ಮೂರು ಗರ್ಭಧಾರಣೆಯಲ್ಲೂ ನಿಷೇಧಿತ ಭ್ರೂಣಲಿಂಗಪತ್ತೆ ಮಾಡಿಸುವ ಮೂಲಕ ಆ ಭ್ರೂಣ ಹೆಣ್ಣೆಂದು ತಿಳಿದುಕೊಂಡು  ಸತತ ಮೂರು ಗರ್ಭಪಾತ ಮಾಡಿಸಿದ್ದರು. ಇದರಲ್ಲಿ ಆಕೆಯ ತಾಯಿ ಮನೆ ಹಾಗೂ ಅತ್ತೆ ಮನೆಯವರ ಪಾಲು ಸಮವಾಗಿತ್ತು. ಮನೆತನದ ಮರ್ಯಾದೆಗಾಗಿ, ಆರ್ಥಿಕ ಸ್ವಾವಲಂಬನೆಯಿಲ್ಲದೆ, ಹೆಚ್ಚಿನ ವಿದ್ಯಾನುಕೂಲವಿಲ್ಲದೆ ಸುಗುಣಾ ನಿರಂತರ ಗರ್ಭಧರಿಸುವಿಕೆ ಹಾಗೂ ಅವೈಜ್ಞಾನಿಕ ಗರ್ಭಾಪಾತಗಳಿಂದಾಗಿ, ತನ್ನ ಎರಡು ಹೆಣ್ಣುಮಕ್ಕಳನ್ನು ಇದೀಗ ಮಲತಾಯಿಯ ವಶಕ್ಕೊಪ್ಪಿಸಿ ತಾನು ಯಮನ ಪಾಲಾದಳು. ಸಹಜವಾಗಿ ಬದುಕುವ ಅವಕಾಶದಿಂದಲೇ ವಂಚಿತಳಾದಳು.     ಇಂತಹ ಹಲವು ವಿಚಾರಗಳನ್ನು ಎಲ್ಲಿಯೋ ನೋಡಿದಾಗ, ಕೇಳಿದಾಗ, ಓದಿದಾಗ ನಮ್ಮಹೃದಯಭಾರವಾಗುವುದು ಸಹಜ. ಮನಸ್ಸು ಸಹಾಯಕ್ಕೆ ತುಡಿಯುವುದೂ ಉಂಟು. ಹಾಗೆಂದ ಮಾತ್ರಕ್ಕೆ ಅವಕಾಶ ವಂಚಿತರಾಗಿರುವ ಎಲ್ಲರಿಗೂ ನಾವೊಬ್ಬರೇ ಅವಕಾಶ ಕಲ್ಪಿಸಿ ಕೊಡಲಾಗದು. ನಿಜ, ಆದರೆ, ಯಾರಿಗೆ ಅವಕಾಶವಾಗುವುದೋ ಅವರು ಇತರರಿಗೆ ಸಹಾಯ ಮಾಡಬಹುದಲ್ಲವೇ? ಯಾರು ತಮಗೆ ಈಗಾಗಲೇ ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಮೇಲೇರಿದ್ದಾರೆಯೋ ಅವರ ಬಗ್ಗೆ ವೃಥಾ ಕರುಬದೇ ಅವರ ಸಾಧನೆಗೆ  ಸಹೃದಯ ಮೆಚ್ಚುಗೆಯನ್ನು ನೀಡಬಹುದಲ್ಲವೇ! ಯಾರು ಇನ್ನೂ ಬದುಕಿನಲ್ಲಿ ಮೇಲೆ ಬರುವ ಪ್ರಯತ್ನದಲ್ಲಿದ್ದಾರೆಯೋ ಅವರಿಗೆ ನಿರ್ವಂಚನೆ ಭರವಸೆಯನ್ನು ತುಂಬಬಹುದಲ್ಲವೇ? ಬನ್ನಿ ಈ ಶುಭಕಾರ್ಯಕ್ಕೆ ಕೈಜೋಡಿಸೋಣ. **************

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಕೆಂಡ ಸಂಪಿಗೆ ರೇಮಾಸಂ ನೀರಾಡಿದೆ ಕಣ್ಣಲಿ ಮಂದಹಾಸೆ ಗಂಟಲುಬ್ಬಿದರು ನಸುನಗು ಮಾಸೆ ಸೆರಗಲಿ ಕೆಂಡವು ನಿಗಿನಿಗಿಸುತಿದೆ ಎದೆಯ ಕ್ಷೀರಧಾರೆ ಅಮೃತವಾಗಿದೆ/ ಭೇದಭಾವದ ನೊಗದಲಿ ಕಳೆದೆ ಬಾಲ್ಯ ಅಯ್ಯೋ ನೀನು ಮಹಿಳೆಯಂದು ಕೂಗಿದರು ರೆಕ್ಕೆಗಳನು ಕತ್ತರಿಸಿದ್ದು ಲಕ್ಷ್ಮಣರೇಖೆ ಹೊಸ್ತಿಲವು ಹೆಬ್ಬಾವಾಗಿದೆ/ ಧಾರೆಗೆ ಬಾಲ್ಯಕೆ ಮನೆಯರಡು ಬೆಳಗಿದರೂ ಅವಳು ಕೊರಡು ಜ್ಯೋತಿಯಾದರೂ ಚುಕ್ಕೆಯೆಂದರು ಅಡುಗೆ ಗಡುಗೆಗವಳನು ಮೀಸಲಿಟ್ಟರು/ ಹೊತ್ತು ಗರ್ಭದಿ ನವಮಾಸಗಳು ನೋವನುಂಗಿ ನಗುವ ಹರಡಿದಳು ಕುಲವಧುವಾಗಿ ಕುಲಜ್ಯೋತಿಯಾದಳು ಮರಣಶಯ್ಯೇನೇರುತ ಜೀವದಾನಿಯಾದಳು/ ಮೊಗ್ಗುಗಳು ಕಾಮಿಗಳ ಅಟ್ಟಹಾಸಕೆ ಬಲಿಯಾಗಿ ಹೊಸಕಿದ ಅನಾಗರಿಕ ನಡೆಯಲಿ ಭ್ರಾತೃತ್ವ ನಗ್ನವಾಗಿದೆ ಅಬಲೆ ನಡತೆಗೆ ಸಬಲೆ ಭಾಷಣಕ್ಕಾಗಿದೆ/ ನಿರ್ಭಯದಿ ಒಂಟಿ ನಡಿಗೆಯಲಿ ನಿರ್ಭಯಾಳಾಗುವಳು ಹತ್ಯೆಯಲಿ ಅಮಾನುಷ ಹಸಿವಿನ ಪುಂಗವರಲಿ ಮಾನವೀಯತೆ ಸತ್ತಿದೆ ಕಾಮಕೇಳಿಯಲಿ/ ಜನನಿ ಸ್ತನಪಾನ ಹರಿಸಿದ ಅವನಿ ಮಮತೆಯ ಮಡಿಲಲಿ ತೂಗಿದ ಜೀವನದಲಿ ಪ್ರತಿಕ್ಷಣ ಸಿಗುವ ಸಂಗಾತಿ ಮರೆಯದಿರಿ ಅವಳು ಬಹು ಪಾತ್ರಗಳ ಒಡತಿ / *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹಸನಾಗಲಿ ಬಾಳು ಜ್ಯೋತಿ ಹೊಸಕೋಟೆ ನನ್ನ ಜೀವದ ಜೀವ ನೀ ನನ್ನೊಲವ ಉಸಿರು ನೀ// ಮೊಲೆಹಾಲ ಕುಡಿಸುವಾಗ ಪುಟ್ಟ ಪುಟ್ಟ ಹೆಜ್ಜೆಗಳಿಂದ ಎದೆಗೆ ಒದ್ದ ಕ್ಷಣ ಪುಳಕಗೊಂಡಿತ್ತು ತನು ಮನ ಎದೆ ಎತ್ತರಕ್ಕೆ ಬೆಳೆಸಿಹೆ ನಾನಿಂದು ಒದೆಯದಿರು ಚುಚ್ಚು ಮಾತುಗಳಿಂದ ನಿನ್ನ ಪ್ರೀತಿಗಾಗಿ ಹಾತೊರೆಯುವ ತಾಯಿಯ ಮನ ತಡೆಯಲಾರದು ಎಡವಿದಾಗ ಕೈ ಹಿಡಿದು ನಡೆಸಿ ದಾರಿ ತೋರಿದ್ದೆ ಅಂದು ಎಡವದಿರು ಮುಗ್ಗರಿಸದಿರು ನೋಡಿ ಸಹಿಸಲಾಗದು ಇಂದು ತಾಯಿಯ ಸೆರಗು ಹಿಡಿದವ ಸಂಗಾತಿಯ ಕೈ ಹಿಡಿದಿರುವೆ ಅವಳಲ್ಲೂ ಮಾತೃತ್ವ ತುಂಬಿಹುದು ನೋಯಿಸದೆ ಬಾಳಿಸು ಕೊನೆಯವರೆಗೂ ಮಮತೆಯ ಕುಡಿಯೊಂದು ನಿನ್ನ ಎದೆ ತಬ್ಬಲಿ ಹಬ್ಬಲಿ ಪ್ರೀತಿ ಹಚ್ಚ ಹಸಿರಾಗಿ ಹಸನಾಗಲಿ ಬಾಳು ಬೆಳಕಾಗಲಿ ********

ಕಾವ್ಯಯಾನ Read Post »

ಇತರೆ

ಪ್ರಸ್ತುತ

ಆರೋಗ್ಯ ಸಹಾಯಕರ ಸೇವೆ ಗುರುತಿಸುವ ಕಣ್ಣುಗಳಿಲ್ಲ ಮಲ್ಲಿಕಾರ್ಜುನ ಕಡಕೋಳ ಕೊರೊನಾ ಎಂಬ ಕರಾಳ ನೆರಳಿನಲ್ಲಿ ಯುದ್ಧೋಪಾದಿ ಕೆಲಸ ಮಾಡುತ್ತಿರುವವರು ಆರೋಗ್ಯ ಇಲಾಖೆಯ ವೈದ್ಯರು, ಶುಶ್ರೂಷಕರು, ಆಶಾ ಕಾರ್ಯಕರ್ತೆಯರು. ಇವರನ್ನು ಹೆಲ್ತ್ ವಾರಿಯರ್ಸ್ ಎಂದೇ ಬಣ್ಣಿಸಿ ಎಲ್ಲ ಕಡೆಗೂ ಅವರ ಸೇವಾ ಬಾಹುಳ್ಯ ಕೊಂಡಾಡಿ ಗೌರವಿಸುವುದನ್ನು ನಿತ್ಯವೂ ಕಾಣುತ್ತಿದ್ದೇವೆ. ಇದು ಸಂತಸ ಪಡುವ ವಿಷಯವೇ. ಆದರೆ ಇದೇ ಸಂದರ್ಭದಲ್ಲಿ ಅದೇ ಕೊರೊನಾ ಯುದ್ಧ ಭೂಮಿಯೊಳಗೆ ಅಕ್ಷರಶಃ ರಣರಂಗದ ಯೋಧರಂತೆ ಕೆಲಸ ಮಾಡುತ್ತಿರುವ ಬಹು ದೊಡ್ಡದಾದ ಮತ್ತೊಂದು ಆರೋಗ್ಯ ಸಮುದಾಯವೇ ಇಲ್ಲಿದೆ ಎಂಬುದನ್ನು ನಾವು ಮರೆತಿದ್ದೇವೆ. ನಾವು ಮರೆತ ಆ ಸಮುದಾಯದ ಹೆಸರು ಆರೋಗ್ಯ ಸಹಾಯಕರು. ಪ್ರಸ್ತುತ ಕೊರೊನಾ ಸಮರ ಭೂಮಿಯಲ್ಲಿ ಆರೋಗ್ಯ ಇಲಾಖೆಯ ಹದಿನೈದು ಸಾವಿರ ಮಹಿಳಾ ಮತ್ತು ಆರೇಳು ಸಾವಿರ ಪುರುಷ ಆರೋಗ್ಯ ಸಹಾಯಕರು ಸಂಪೂರ್ಣವಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಜನಾರೋಗ್ಯ ಕಾಪಾಡುವ, ಅದರಲ್ಲೂ ವಿಶೇಷವಾಗಿ ಸಾಂಕ್ರಾಮಿಕ ರೋಗಗಳ ಹುಟ್ಟು, ಬೆಳವಣಿಗೆ, ರೋಗ ಹರಡುವಿಕೆಯ ವಿವಿಧ ಹಂತಗಳ ಕುರಿತಾಗಿ ಮೂರು ವರ್ಷಗಳ ಅವಧಿಯ ನಿಪುಣ ತರಬೇತಿಯನ್ನು ಇವರು ಸರಕಾರದ ತರಬೇತಿ ಕೇಂದ್ರಗಳಲ್ಲಿ ಪಡೆದಿರುತ್ತಾರೆ. ಐದುಸಾವಿರ ಜನಸಂಖ್ಯೆಗೆ ಓರ್ವ ಮಹಿಳಾ, ಓರ್ವ ಪುರುಷ ಆರೋಗ್ಯ ಸಹಾಯಕರನ್ನು ಸರಕಾರ ಜನಾರೋಗ್ಯ ಸೇವಾ ರಕ್ಷಣೆಗೆಂದು ನೇಮಿಸಿರುತ್ತದೆ. ಅದು ಎಂದಿನಂತೆ ಅವರ ದಿನನಿತ್ಯದ ರುಟೀನ್ ಡ್ಯೂಟಿ. ಸಾಂಕ್ರಾಮಿಕ ರೋಗಗಳು ಬಾರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಂದು ಹಳ್ಳಿಗಳ ಮನೆ ಮನೆ ಭೆಟ್ಟಿಮೂಲಕ ಸೇವೆಮುಟ್ಟಿಸುವಲ್ಲಿ ಇವರು ಕರ್ತವ್ಯನಿರತರಾಗಿರುತ್ತಾರೆ. ಹೀಗಾಗಿ ಸಾಂಕ್ರಾಮಿಕ ರೋಗಗಳ ಪಿಡುಗಿನ ತೀವ್ರತೆ ಬಗ್ಗೆ ಆರೋಗ್ಯ ಸಹಾಯಕರಿಗೆ ಅಗತ್ಯ ಮಾಹಿತಿ, ಜ್ಞಾನ ಇರುವುದು ಸಹಜ. ಈ ಆರೋಗ್ಯ ಸಹಾಯಕರು ಈಗ ಹಳ್ಳಿ, ನಗರ, ಪಟ್ಟಣಗಳೆನ್ನದೇ ತಳಮಟ್ಟದಲ್ಲಿ ಮನೆ, ಮನೆ ಭೆಟ್ಟಿ ಕೊಟ್ಟು ಕೊರೊನಾ ಸಮೀಕ್ಷೆ ಮಾಡುವ ಕಾರ್ಯದಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದಾರೆ. ಜೀವದ ಹಂಗು ತೊರೆದು ಹಗಲು ರಾತ್ರಿಗಳನ್ನು ಲೆಕ್ಕಿಸದೇ ನಿಸ್ಪೃಹ ಕೆಲಸವಲ್ಲ ಸೇವೆಯನ್ನೇ ಮಾಡುತ್ತಿದ್ದಾರೆ. ಕೊರೊನಾ ರೋಗದ ತಪಾಸಣೆ, ಕ್ವಾರಂಟೈನ್ ಡ್ಯೂಟಿ, ಹಾಟ್ ಸ್ಪಾಟ್ ಡ್ಯೂಟಿ, ಚೆಕ್ ಪೋಷ್ಟ್, ರಾಷ್ಟ್ರೀಯ ಹೆದ್ದಾರಿ ಡ್ಯೂಟಿ… ಹೀಗೆ ಒಂದಲ್ಲ ಎರಡಲ್ಲ ಹತ್ತು ಹಲವು ರಿಸ್ಕಗಳ ನಡುವೆ ವಯಕ್ತಿಕ ರಕ್ಷಾಕವಚ(ಪಿ.ಪಿ.ಇ. ಕಿಟ್)ಗಳಿಲ್ಲದೇ ಗಲ್ಲಿ, ಮೊಹಲ್ಲಾಗಳೆನ್ನದೇ, ತಮ್ಮ ಕುಟುಂಬಗಳ ಹಿತಾಸಕ್ತಿ ಮರೆತು ಕೊರೊನಾ ನಿರ್ಮೂಲನಾ ಸೈನಿಕರಂತೆ ಕೆಲಸ ಮಾಡುತ್ತಿದ್ದಾರೆ. ಎಷ್ಟೋ ಮಂದಿ ಕರ್ತವ್ಯನಿರತ ಆರೋಗ್ಯ ಸಹಾಯಕರು ಸಾರ್ವಜನಿಕರ, ಪೋಲೀಸರ ಲಾಠಿ ಏಟುಗಳಿಗೆ ತಮ್ಮ ಕೈ ಕಾಲುಗಳನ್ನು ಬಲಿ ಕೊಟ್ಟಿದ್ದಾರೆ. ಉದಾ: ಬೆಳಗಾವಿ ಮತ್ತು ಕಲಬುರ್ಗಿ ಜಿಲ್ಲೆಯ ಸೇಡಂ, ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ಘಟನೆಗಳು. ಇದು ಆರೋಗ್ಯ ಸಹಾಯಕರ ಪಾಲಿನ ವರ್ತಮಾನದ ಕೊರೊನಾ ಯುದ್ಧ ಮಾತ್ರವಲ್ಲ. ಶತಮಾನದಷ್ಟು ಹಳತಾದ ಸಾಮಾಜಿಕ ಪಿಡುಗುಗಳಾಗಿಯೂ ಮನುಷ್ಯ ಕುಲವನ್ನು ಕಾಡಿದ, ಮನುಷ್ಯರ ಅಂಗವಿಕಲತೆಗೆ ಕಾರಣವಾಗುತ್ತಿದ್ದ ಸಿಡುಬು, ಕುಷ್ಠ, ನಾರುಹುಣ್ಣು, ಪೋಲಿಯೊ ಹೀಗೆ ಹತ್ತಾರು ಭಯಾನಕ ಮತ್ತು ಸಾಮಾಜಿಕವಾಗಿ ಕಳಂಕ ಭಾವಗಳ ಮೊತ್ತವೇ ಆಗಿದ್ದ ಅನೇಕ ಸಾಂಕ್ರಾಮಿಕ ರೋಗಗಳ ನಿರ್ಮೂಲನೆಯಲ್ಲಿ ಆರೋಗ್ಯ ಸಹಾಯಕರ ಪಾತ್ರ ಅಕ್ಷರಶಃ ಪ್ರಾತಃಸ್ಮರಣೀಯ. ಹೀಗೆ ನೂರೈವತ್ತಕ್ಕೂ ಹೆಚ್ಚು ವರ್ಷಗಳಿಂದ ಜನಾರೋಗ್ಯ ರಕ್ಷಣಾ ಕಾರ್ಯದಲ್ಲಿ ತಮ್ಮ ಆರೋಗ್ಯದ ಕಡೆಗೂ ಹೆಚ್ಚು ನಿಗಾವಹಿಸದೇ ಆರೋಗ್ಯ ಸಹಾಯಕರು ನಿರಂತರವಾಗಿ ವೈರಸ್, ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿದ ಇತಿಹಾಸವಿದೆ. ಅದೇರೀತಿ ಇವತ್ತು ಸೈನಿಕರೋಪಾದಿಯಲ್ಲಿ ಕೊವಿಡ್-19 ರ ವಿರುದ್ಧ ಹೋರಾಡುತ್ತಿದ್ದಾರೆ. ಈ ಆರೋಗ್ಯ ಸಹಾಯಕ ಸೇನಾನಿಗಳು ಯಾವೊಂದು ಪ್ರಶಸ್ತಿ, ಸನ್ಮಾನ, ಶ್ಲಾಘನೆಗಳ ನಿರೀಕ್ಷೆಗಳಿಲ್ಲದೇ ಇಲಾಖೆಯ ಹುಟ್ಟಿನಿಂದಲೂ ತಮ್ಮ ಸೇವಾ ಅಸ್ಮಿತೆಯನ್ನು ಕಾಪಿಟ್ಟುಕೊಂಡಿದ್ದಾರೆ. ಇಂಥವರ ಕುರಿತು ಹೊಗಳಿಕೆ, ಗೌರವ, ಸನ್ಮಾನಗಳು ಒತ್ತಟ್ಟಿಗಿರಲಿ. ಮಾಧ್ಯಮಗಳಿಂದಾಗಲಿ, ಮಂತ್ರಿಗಳಿಂದಾಗಲಿ ಸಣ್ಣದೊಂದು ಶಹಬ್ಬಾಶ್ ಎನ್ನುವ ಸ್ಪೂರ್ತಿ, ಪ್ರೋತ್ಸಾಹದಾಯಕ ಮಾತುಗಳು ಕೇಳಿ ಬರುತ್ತಿಲ್ಲ. ಆರೋಗ್ಯ ಸಹಾಯಕರ ಸಮರೋಪಾದಿ ಸೇವಾ ಕೈಂಕರ್ಯ ಗುರುತಿಸುವ ಕಣ್ಣುಗಳೇ ಮಾಯವಾದವೇ? ಆರೋಗ್ಯ ಇಲಾಖೆ ಎಂದೊಡನೆ ಮಂತ್ರಿಗಳಿಗೆ ಮತ್ತು ಮಾಧ್ಯಮಗಳಿಗೆ ಥಟ್ಟಂತ್ ಕಾಣಿಸೋದು ಡಾಕ್ಟರ್ಸ್ ಮತ್ತು ನರ್ಸಸ್ ಹೆಚ್ಚೆಂದರೆ ಕಂಪೌಂಡರ್ಸ್. ಈ ಕಾಣುವಿಕೆ ನಾಲ್ಕು ಗೋಡೆಗಳ ನಡುವಿನ ಆಸ್ಪತ್ರೆಯ ಜಗತ್ತು. ಗುಡ್ಡಗಾಡು, ಹಳ್ಳಿ, ಮೊಹಲ್ಲಾ, ನಗರ, ಪಟ್ಟಣಗಳಲ್ಲಿ ಎಲ್ಲೆಲ್ಲಿ ಮನುಷ್ಯರು ವಾಸವಾಗಿರುವರೋ ಅಲ್ಲೆಲ್ಲ ಆರೋಗ್ಯ ಸಹಾಯಕರ ಸೇವಾ ಕೈಂಕರ್ಯ ನಾಡಿನ ಸಮಸ್ತ ಸಮುದಾಯಕ್ಕೆ ಸಲ್ಲುತ್ತಲಿದೆ. ಆದರೆ ಇತ್ತೀಚಿನ ದಿನಮಾನಗಳಲ್ಲಿ (೨೦೦೫ ರಿಂದ) ಹೊರಗುತ್ತಿಗೆಯಾಗಿ ನೇಮಕಗೊಂಡಿರುವ ಆಶಾ ಕಾರ್ಯಕರ್ತೆಯರು ಮಾತ್ರ ಸಮುದಾಯದ ನಿಕಟ ಸಂಪರ್ಕದ ಫ್ರಂಟ್‌ಲೈನ್ ಸೇನಾನಿಗಳು ಎಂಬಂತೆ ಮಾಧ್ಯಮಗಳಲ್ಲಿ, ಪ್ರಭುತ್ವದ ಕಣ್ಣುಗಳಲ್ಲಿ ಬಿಂಬಿತವಾಗಿ ಆರೋಗ್ಯ ಸಹಾಯಕರ ಚರಿತ್ರಾರ್ಹ ಸೇವಾ ಕೈಂಕರ್ಯವು ನೇಪಥ್ಯಕ್ಕೆ ಸರಿದಿರಬಹುದು.? ಕಾರಣ ಏನೇ ಇರಲಿ ಆರೋಗ್ಯ ಸಹಾಯಕರು ಸಲ್ಲಿಸುತ್ತಿರುವ ಗುಣಮಟ್ಟದ ಸೇವೆಗಳನ್ನು ಮಾಧ್ಯಮಗಳು, ಮಂತ್ರಿ ಮಹೋದಯರು ಗುರುತಿಸದಿದ್ದರೆ ಹೇಗೆ? ಆರೋಗ್ಯ ಇಲಾಖೆಯ ಬಹುದೊಡ್ಡ ಸೇವಾವಲಯ ಕುರಿತು ಯಾಕೆ ಮೀನಾ ಮೇಷ…? ಇದೇ ಕಾಲಘಟ್ಟದಲ್ಲಿ ಆರೋಗ್ಯ ಮಂತ್ರಿಗಳು ಶುಶ್ರೂಷಕರ ಸೇವೆಮೆಚ್ಚಿ ಭಕ್ಷೀಸೆಂಬಂತೆ “ಶುಶ್ರೂಷಾಧಿಕಾರಿ” ಎಂದು ಅವರ ಪದನಾಮ ಬದಲಾವಣೆ ಮಾಡುವ ಬೇಡಿಕೆ ಕುರಿತು ಸುದ್ದಿ ಕೇಳಿಬಂದ ಮರುದಿನವೇ ಶುಶ್ರೂಷಾ ದಿನಾಚರಣೆಯಂದು ಸರ್ಕಾರ “ಶುಶ್ರೂಷಾಧಿಕಾರಿ” ಎಂದು ಪದನಾಮ ಬದಲಾಯಿಸಿ ಆದೇಶ ಹೊರಡಿಸಿದೆ. ಆದರೆ ಕಳೆದೊಂದು ವರ್ಷದಿಂದ ” ಸಮುದಾಯ ಆರೋಗ್ಯಾಧಿಕಾರಿ ” ಎಂದು ತಮ್ಮ ಪದನಾಮ ಬದಲಾವಣೆ ಮಾಡುವ ಕುರಿತು ಆರೋಗ್ಯ ಸಹಾಯಕರು ಬೇಡಿಕೆ ಸಲ್ಲಿಸಿದ್ದರೂ ಆರೋಗ್ಯ ಮಂತ್ರಿಗಳು ಇದುವರೆಗೆ ಯಾವುದೇ ಪ್ರತಿಕ್ರಿಯೆ ತೋರಿಲ್ಲ. ಹೀಗಾಗಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿರುವ ಆರೋಗ್ಯ ಸಹಾಯಕರಿಗೆ ತಾವು ಸಲ್ಲಿಸುತ್ತಿರುವ ಸೇವೆಗಳ ಕುರಿತಾಗಲಿ ಅವರ ಅಸ್ತಿತ್ವ ಕುರಿತಾಗಲಿ ಪ್ರಭುತ್ವಕ್ಕೆ ಯಾಕಿಂಥ ಉದಾಸೀನ ಎಂಬುದು ಅನಾರೋಗ್ಯದ ಪ್ರಶ್ನೆಯಾಗಿ ಕಾಡತೊಡಗಿದೆ. **********

ಪ್ರಸ್ತುತ Read Post »

You cannot copy content of this page

Scroll to Top