ಗಜಲ್
ಕಾವ್ಯ ಸಂಗಾತಿ
ಗಜಲ್
ಅರುಣಾ ನರೇಂದ್ರ
ಕಾವ್ಯ ಸಂಗಾತಿ ತೀನ್ ಕಾಫಿಯಾ ಗಜಲ್ ನಯನ. ಜಿ. ಎಸ್ ಟಿಸಿಲೊಡೆಯುತಿಹ ಸಂಚಿನೊಳು ಭಾವಗಳ ಹರಣಕಂದಳಿಸುತಿಹ ಸ್ವಾರ್ಥತೆಯೊಳು ಜೀವಗಳ ಹರಣ ಮಬ್ಬಿನ ಸೋಗಿನಲಿ ಅಖಾಡಕ್ಕಿಳಿದಿವೆ ಚೋದ್ಯಗಳುಸವೆಸುತಿಹ ಹೆಜ್ಜೆಗೆಜ್ಜೆಗಳೊಳು ಭವ್ಯಅಸುಗಳ ಹರಣ ಪಾಪ ಭೀತಿಯನು ಮೀರಿತಲಿ ವಿಜೃಂಭಿಸುತಿದೆ ಕೃತ್ಯಎಣಿಕೆಯಾಗುತಿಹ ಸಾಲಂಕಿಗಳೊಳು ಸ್ವಪ್ನಗಳ ಹರಣ ಬಾಷ್ಪಗರೆಯುವ ಮುಗ್ಧತೆಗೆ ಜೀವಂತಿಕೆಯಲಿ ಸಮರಮೆರೆದಾಡುತಿಹ ಹೃದಯದೊಳು ಹಾರೈಕೆಗಳ ಹರಣ ‘ನಯನ’ಗಳಿಗೆ ಪಾಶವಿಕ್ಕುತ್ತಲಿವೆ ಲೋಭಿಗಳ ಹೀನತ್ವಅಬ್ಬರಿಸುತಿಹ ಅಸ್ಮಿತೆಯೊಳು ಚಿಗುರಾಸೆಗಳ ಹರಣ ನಯನ. ಜಿ. ಎಸ್
ಕಾವ್ಯ ಸಂಗಾತಿ ಮಾಜಾನ್ ಮಸ್ಕಿಯವರ ಗಜಲ್ ಗಳು ಗಜಲ್-ಒಂದು ಅಂತರಂಗ ಸ್ತಬ್ದವಾಯಿತು ಲೇಖನಿ ಮೌನವಾದ ಹೊತ್ತುಭಾವನೆ ಶೂನ್ಯವಾಯಿತು ಲೇಖನಿ ಮೌನವಾದ ಹೊತ್ತು ಉಸಿರು ಉಸಿರಾಡುವುದನ್ನು ಮರೆತು ಜಡವಾಯಿತು ದೇಹಕಣ್ಣ ಹನಿ ಹೆಪ್ಪಾಯಿತು ಲೇಖನಿ ಮೌನವಾದ ಹೊತ್ತು ಸಂಬಂಧಗಳಿಗೆ ಜೋತು ಬಿದ್ದ ಮನ ಸೋಲುವುದು ಏಕೆಮಂಡಿಯೂರಿ ಶರಣಾಯಿತು ಲೇಖನಿ ಮೌನವಾದ ಹೊತ್ತು ಸೋತ ಕನಸುಗಳು ಮಲಗಿ ಗೋರಿ ಶೃಂಗಾರಗೊಂಡಿತುಪೈಶಾಚಿಕ ಕುಣಿತ ಜೋರಾಯಿತು ಲೇಖನಿ ಮೌನವಾದ ಹೊತ್ತು “ಮಾಜಾ” ಬೆಳೆಯುವ ಮೊಳಕೆಯನ್ನು ಚಿವುಟಿ ನಂಜೇರಿಸುವರುಆರೈಕೆಯ ಕೊರತೆಯಾಯಿತು ಲೇಖನಿ ಮೌನವಾದ ಹೊತ್ತು *** ಗಜಲ್-2 ಕನ್ನಡಿಯ ಬಿಂಬ ನೋಡಿ ನಂಬಬೇಡ ಹೋಗಲಿ ಬಿಡುಬಾಹ್ಯ ಸೌಂದರ್ಯ ನೋಡಿ ಹಿಗ್ಗಬೇಡ ಹೋಗಲಿ ಬಿಡು ಕಾಲಕ್ಕೆ ತಕ್ಕಂತೆ ಬಣ್ಣ ಬದಲಾಯಿಸಿ ಬದುಕುತ್ತಿರುವರು ಜನಆಸೆಯಿಂದ ನಂಬಿ ಮೋಸ ಹೋಗಬೇಡ ಹೋಗಲಿ ಬಿಡು ನಿಬಿಡ ಜಾತ್ರೆಯಲ್ಲೂ ಒಂಟಿತನ ಕಾಡುತ್ತಿದೆ ಅದೇಕೋಕೊನೆಯೇ ಇಲ್ಲದೆ ಜೊತೆ ಆಗುವರೆಂದು ಭ್ರಮಿಸಬೇಡ ಹೋಗಲಿ ಬಿಡು ಅವಶ್ಯಕತೆಗೆ ಅಂಟುವರು ಸ್ವಾರ್ಥಿಗಳೆ ಇರುವರು ಎಚ್ಚರಎಲ್ಲರಿಗೂ ನೀ ಮೆಚ್ಚುಗೆ ಎಂದು ಬೀಗಬೇಡ ಹೋಗಲಿ ಬಿಡು ಅರಿತು ಅರಿಯದಂತೆ ಸಾಗಬೇಕಾಗಿದೆ ಬಾಳಯಾನದಲ್ಲಿ “ಮಾಜಾ”ಮೋಸದ ಜಾಲ ಹಬ್ಬಿದೆ ಬೀಳಬೇಡ ಹೋಗಲಿ ಬಿಡು *** ಗಜಲ್-3 ಬಿರು ಬಿಸಿಲಿನಲ್ಲಿ ತಂಗಾಳಿ ಬೀಸಿದೆ ಇನಿಯನ ಸನಿಹಆ ಮಧುರತೆಯು ಮರು ಕಳಿಸದೆ ಇನಿಯನ ಸನಿಹ ಬೆಂಕಿಯ ಉಂಡೆಯ ತಾಪವ ಸಹಿಸುವೆನು ಗಾಲಿಬ್ವಿರಹ ವೇದನೆ ಸಹಿಸಲಾರೆನು ಇಲ್ಲದೆ ಇನಿಯನ ಸನಿಹ ತಿರುಗಿಯೂ ನೋಡದೆ ಖದಮ್ ಅಳಿಸುತ್ತಿವೆಭ್ರಮೆಯ ಇಂತಜಾರಲ್ಲಿ ಬಾರದೆ ಇನಿಯನ ಸನಿಹ ಹೇಳಲೂ ನುಂಗಲು ಆಗದ ಈ ತಡಪಲ್ಲಿ ಸೋಲುತ್ತಿರುವೆಮನ – ದೇಹದ ರಸಿಕತೆಯೇ ಮರೆಸಿದೆ ಇನಿಯನ ಸನಿಹ ದಿಲ್ ಮಿಡಿಯುತ್ತಿದೆ “ಮಾಜಾ” ಳ ಭಾವನೆಗಳಲ್ಲಿಖುದಾನ ಬಕಷ್ ಗೆ ಕಾಯುತ್ತಿದೆ ಇನಿಯನ ಸನಿಹ ಮಾಜಾನ್ ಮಸ್ಕಿ
ಮಾಜಾನ್ ಮಸ್ಕಿಯವರ ಗಜಲ್ ಗಳು Read Post »
ಕಾವ್ಯ ಸಂಗಾತಿ ಗಜಲ್ ಆಸೀಫಾ ಮದಿರೆ ಬಟ್ಟಲು ತುಂಬಾ ಸುರಿದುಬಿಡು ಸಾಕಿ ಕುಡಿದುಬಿಡುವೆ ಎಲ್ಲಾನಶೆಯೇರುತಿರಲಿ ತಲೆಗೆ ನೋವುಗಳು ಮರೆತುಬಿಡುವೆ ಎಲ್ಲಾ ಘಾಸಿಯಾದ ಹೃದಯಕೆ ಯಾವ ಮುಲಾಮೂ ಮದ್ದಾಗಲಿಲ್ಲತುಸು ಹೊತ್ತಾದರೂ ಅಮಲಿನಲ್ಲಿದ್ದು ನೆನಪುಗಳು ನೂಕಿಬಿಡುವೆ ಎಲ್ಲಾ ಯಾವ ಚೌಕಟ್ಟಿನಲ್ಲಿ ನೆಲೆಸಲಿ ಹೇಳು ಭಾವ ಬರಿದು ಮಾಡಿಮೋಹವೇ ಮೋಸವಾದಾಗ ಒಲವೇಕೆ ಸುಟ್ಟುಬಿಡುವೆ ಎಲ್ಲಾ ಅಂತ್ಯವೋ ಆದಿಯೋ ಇನ್ನೇಕೆ ಅರಿಯಬೇಕು ಅದರ ಮರ್ಮಲೋಕವೇ ಲೆಕ್ಕವಿಲ್ಲದ ಮೇಲೆ ಬಡಿತಗಳು ಬಿಟ್ಟುಬಿಡುವೆ ಎಲ್ಲಾ ಮಧುಶಾಲೆಯ ಮೆಟ್ಟಿಲೇರಲು ಸ್ವರ್ಗವೇ ಸಮೀಪಿಸಿದಂತೆ ನನಗೆಹನಿಹನಿಗಳು ಹೊಕ್ಕುತಿರಲು ಹೃದಯ ಕನಸುಗಳು ಚೆಲ್ಲಿಬಿಡುವೆ ಎಲ್ಲಾ ಯಾವ ಆಕ್ರೋಶ ಆತಂಕವೂ ಆವರಿಸಲಾರದು ನಿನ್ನ ಮುಂದೆರೆಪ್ಪೆ ಮುಚ್ಚಿ ನಿರಾಳವಾಗಿ , ದಿಗಂತಕೆ ಆಸೆಗಳು ಎಸೆದುಬಿಡುವೆ ಎಲ್ಲಾ ಬಂಡಾಯವೆದ್ದ ಬರುಡು ಜೀವನ ಹೊರೆಯಲಾರೆ ಎದೆಯ ಮೇಲೆ ಆಸೀಆತ್ಮದ ಮೇಲೆಳೆದ ಬರೆಗಳು ಗುರುತಿಲ್ಲದೆ ಅಳಿಸಿಬಿಡುವೆ ಎಲ್ಲಾ
ಕಾವ್ಯ ಸಂಗಾತಿ ಜಯಂತಿ ಸುನಿಲ್ ಗಜಲುಗಳು ಅವನಿರುವಲ್ಲಿ ಶಿಶಿರ ಕಾಲದಲ್ಲೂ ಕವಿತೆಯ ಸಾಲುಗಳು ಚಿಗುರೊಡೆಯುತ್ತವೆ..ಗೋರಿಯೊಳಗಣ ದೇಹದಲ್ಲೂ ಬತ್ತಿದ ಭಾವಗಳು ಪುಟಿದೇಳುತ್ತವೆ..!! ಮುಗಿದ ದಾರಿಯ ಕೊನೆಯ ಹೆಜ್ಜೆಗೆ ಜೊತೆಯಾದವನು..ಅವನೆದೆಗೆ ಒರಗಿದಾಗ ಹತಾಶೆಗೀತೆಗಳು ಪ್ರೇಮಸುನೀತಗಳಾಗುತ್ತವೆ..!! ಪ್ರೇಮ,ತಲ್ಲಣ, ವಿಷಾದ,ರೋಮಾಂಚನಗಳ ರೂಪಕದಂತೆ ನನಗವನು..ಆತ್ಮದೊಳಗೆ ಮೌನಿಯಾದ ನನ್ನಲ್ಲೀಗ ಮಾತುಗಳು ತುಟಿಬಿಚ್ಚುತ್ತವೆ..!! ನನ್ನೊಳಗಿನ ಅವನ ನಡಿಗೆ ನಿಂತರೆ ಸಾಕು ಕಾಲದ ಜೊತೆ ಕಾಲು ಮನ್ನಡೆಯದು..ಕಂಗಳು ದಣಿದರೆ ಗಡಿಯಾರದೊಳಗಣ ಮುಳ್ಳುಗಳು ಚುಚ್ಚುತ್ತವೆ..!! ಶೃತಿ ತಪ್ಪಿದ ಬದುಕಲಿ ಸೇರಿ ಏಳು ಜನ್ಮಕ್ಕಾಗುವಷ್ಟು ಫನಾಸುರಿಸಿಹನು..ಅವನು ನನ್ನೊಳಗೆ ಕಾಲಿಟ್ಟ ಮೇಲೆ ಹಾಡಾಗದ ಲಯಗಳು ತಾಳವಾಗುತ್ತವೆ..!! ಅವನೆಂದರೆ ಮೊದಲ ರಾತ್ರಿಯಲ್ಲಿ ತೊಯ್ದ ಮಣ್ಣಿನ ಘಮಲುಮಂಜು ಮುಸುಕಿದ ಮನಸ್ಸಿಗೆ ಆವನೊಲುಮೆಯ ಕಿರಣಗಳು ತಾಕುತ್ತವೆ..!! ಅವನಿದ್ದರೆ ದಾಟಲಾಗದ ನದಿಗಳು ದಾರಿಮಾಡಿಕೊಡುತ್ತವೆ..ಜಯದ ಮೆಟ್ಟಿಲೇರಲು ಒಡ್ಡುವ ಅಡ್ಡಿಗಳ ಹಾದಿಗಳು ಬಟಾಬಯಲಾಗುತ್ತವೆ..!! *** ಮತ್ತದೇ ಇಳಿಸಂಜೆಗಳಲಿ ಹಾಜರಿ ಹಾಕಬೇಡಿ ಕಹಿ ನೆನಪುಗಳೇ ಸುಮ್ಮನಿರಿ..ಚಲಿಸುತಿಹ ಬದುಕಿಗೆ ಬೇಸರದಿ ಬದಿಒಡ್ಡದಿರಿ ನೋವುಗಳೇ ಸುಮ್ಮನಿರಿ..!! ಜೀವನಸತ್ವದ ಶರಾಬನ್ನು ಹನಿಹನಿಯಾಗಿ ಹೀರುವ ಉಮೇದಿ ಮನಕೆ..ಹಸಿ ಮಡಿಕೆಯೊಳಹೊಕ್ಕ ನೀರಾಗಿ ಸೋರಿಹೋಗಬೇಡಿ ಅನುಭವಗಳೇ ಸುಮ್ಮನಿರಿ..!! ಅದೆಷ್ಟೋ ತಿರುವುಗಳು ಹಠಾತ್ ಪಲ್ಲಟದ ಕಾಲದಂತೆ ನಮ್ಮ ಪಾಲಿಗೆ..ಮೊಳಕೆಯೊಡೆವ ಮೊದಲೇ ಸೊರಗಬೇಡಿ ಬೀಜಗಳೇ ಸುಮ್ಮನಿರಿ..!! ಜೀವನ ಯಾದಿಯಲ್ಲಿ ಹೆಜ್ಜೆ ಹೆಜ್ಜೆಗೂ ಎಡವಿದ ಕಲ್ಲುಗಳೇ ಮುತ್ತುಗಳಾಗಬಹುದು…ಸಾಣೆ ಹಿಡಿಯುವ ಸಂಗತಿಗಳಿಗೆ ದೂರಾಗಬೇಡಿ ಗಾಯಗಳೇ ಸುಮ್ಮನಿರಿ..!! ನಮ್ಮದೇ ನೈಜ ಸಾಲುಗಳು ಮತ್ಯಾರದೋ ಓದಲಿ ಕಥೆಯಾಗಬಹುದು…ಜಯದ ಮದವನ್ನು ನೆತ್ತಿಗೇರಿಸಿಕೊಳ್ಳಲುಬೇಡಿ ಸಾಧನೆಗಳೇ ಸುಮ್ಮನಿರಿ..!! ಜಯಂತಿ ಸುನಿಲ್
ಜಯಂತಿ ಸುನಿಲ್ ಗಜಲುಗಳು Read Post »
ಕಾವ್ಯ ಸಂಗಾತಿ ಗಝಲ್ ಆಸೀಫಾ ಆಗಸದ ಚುಕ್ಕಿ ಕಿತ್ತು ತಂದ ಮುಡಿಗೇರಿಸಿ ಮಿನುಗು ಎಂದಧರೆಗಿಳಿದ ರಂಭೆ ನೀನು ದರ್ಪಣಕೆ ನೀನೇ ಮೆರುಗು ಎಂದ ನಿಂತಲ್ಲೇ ನಗಿಸಿ ಮಾತಲ್ಲೆ ಮಣಿಸಿ ಮುದ್ದು ಮಾತಾಡಿದತಂಗಾಳಿ ತಂಪಲ್ಲಿ ಒಲವ ಕಂಪು ಕಳಿಸಿ ತಂಪಾಗು ಎಂದ ತುಟಿ ಕಚ್ಚಿ ತಡೆದ ಮಾತುಗಳಿನ್ನು ಎಲ್ಲೆಮೀರಿ ಹರಿದಿವೆಕಣ್ಣಲ್ಲಿ ಕಣ್ಣಿಟ್ಟು ಸುಂದರೀ ಪ್ರೇಯಸಿಯಾಗು ಎಂದ ಪುಳಕಿತವು ಮನ ತನುವು ರೋಮಾಂಚನ ಸಿಂಚನಹೂಹಾಸಿ ಹಾದಿಗೆ ಹೆಜ್ಜೆ ಇಟ್ಟು ಜೊತೆಯಾಗು ಎಂದ ಪ್ರೇಮದ ಪರಿಮಳ ಪರಿಸರವೆಲ್ಲ ಪಸರಿಸಿ ಘಮ ಘಮಇತಿಹಾಸ ಬರೆಯಬೇಕಿದೆ ಆಸೀ ಲೇಖನಿಯಾಗು ಎಂದ-
You cannot copy content of this page