ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ರೈತಗಜಲ್ ಹಸಿರುಸಿರಿನ ಸಿರಿ ನೀನು ಧರಣಿ ಮೇಲೆ ದಯೆಬಾರದೆ ಮಳೆರಾಯಾಹರಸುವ ಹೆಸರೇ ನೀರು ಸುರಿಯುತ್ತ ಇಳೆಯ ಬೆರೆಯಬಾರದೆ ಮಳೆರಾಯಾ ನೇಗಿಲು ಕಾಯಕವಿಲ್ಲದೆ ಕುಳಿತಿದೆ ಸುಣ್ಣವಿರದ ಗೋಡೆಯನ್ನು ಅಂಟಿಕೊಂಡುರೈತನ ಹೊಲ ಉಳುವ ಜೋಡೆತ್ತನ್ನಾದರೂ ಬದುಕಿಸಬಾರದೆ ಮಳೆರಾಯಾ ಅಟ್ಟ ಬಿಟ್ಟು ಹಸಿದ ಹೊಟ್ಟೆ ಸೇರಿವೆ ಬೀಜಕ್ಕಿಟ್ಟ ಕಾಳೆಂಬುದನ್ನೂ ಮರೆತುಗುಟ್ಟಾಗುಳಿಯದ ಸಾಲಕ್ಕಾದರೂ ಬಡ್ಡಿಯಾಗಬಾರದೆ ಮಳೆರಾಯಾ ಮಣ್ಣ ಮಕ್ಕಳೆಲ್ಲ ನೊಂದು ಬೆಂದು ಕಣ್ಣೀರು ಹಾಕುತ್ತಿಹರುನಿನ್ನಿರುವಿಕೆಯ ಸಣ್ಣ ಸುಳಿವೊಂದು ತೋರಬಾರದೆ ಮಳೆರಾಯಾ ಬವಣೆಗೆಲ್ಲ ಪ್ರೀತಿಯುಣಿಸಿ ಧರೆಯೊಡಲಿಗೆ ವರವಾಗಿ ಬಾಸಕಲಕ್ಕಾಧಾರವೇ ಜಲವೆನ್ನುವ ‘ಸರೋಜ’ಳ ಮನವಿ ಸ್ವೀಕರಿಸಬಾರದೆ ಮಳೆರಾಯಾ *************************************** ಸರೋಜಾ ಶ್ರೀಕಾಂತ ಅಮಾತಿ

Read Post »

ಕಾವ್ಯಯಾನ, ಗಝಲ್

ರೈತ ಗಜಲ್ ಸಾವು ಸೋಯಿ ಯಾಗಿದೆ ಮನೆಯ ಹೊರಗೆ ಬಂದ ನೋಡುನಭದಿ ತೂತು ಆಗಿದೆ ನೀ ಬೀದಿಗಿಳಿದು ನೋಡು ಕೋಣೆ ಯಲ್ಲಿ ಕುಳಿತರೆ ರೈತ ಅರೆಯ ಬಹುದಾ ಮಳ್ಳಿಬೆವರಿನಿಂದ ತನ ತನು ನೀ ಝಳಕ್ ಮಾಡಿ ನೋಡು ಸುದ್ದಿಯ ನೀನು ಸಾಲು ಬರಿ ಸಾಲು ನಿನ್ನ ಪಾಲುಬೆಲೆ ಎಲ್ಲಿ ರೈತನಿಗೆ ನೀ ಮಾತ ನಾಡಿ ನೋಡು ಬೆನ್ನೆಲಬು ನಮ್ಮ ದೇಶದ ನೇಣಿಗೆ ಇನ್ನು ಶರಣ್ಆ ದೇವರಿಗೆ ನಿನ್ನ ಶರಣಾರ್ಥಿ ಯಾಗಿ ನೋಡು ಬಂಧಿಸ್ಥ ಗರ್ಭಗುಡಿಯ ಭಗವಂತನಿಗೆ ಉಳಿಸುತೆರಿ ಬೀಗ ಪಟದ ಎಲ್ಲ ಮನ ಗುಡಿಯೇ ಮಾಡಿ ನೋಡು ಭಯಭೀತ ರೋಗಗ್ರಸ್ತ ಈ ಜಗದ ಪ್ರತಿನಿಧಿ ನೀನೀ ಸ್ವಸ್ಥ ಉಸಿರಿಗಾಗಿ ಜಗ ಹಸಿರು ಮಾಡಿ ನೋಡು ಓ ಪ್ರಕಾಶ್”ನಿನ್ನ ಯತ್ನ ನಿನ ರೈತ ಮಾಡ ಬಹುದುಬೆಳೆ ಮೂಲ್ಯವಾನ ರತ್ನಾ ನೀ ಕಾಪಾಡಿ ನೋಡು ************************************* ಪ್ರಕಾಶಸಿಂಗ್ ರಜಪೂತ

Read Post »

You cannot copy content of this page

Scroll to Top