ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಗೆಳತಿ”

ಕಾವ್ಯ ಸಂಗಾತಿ ಕಲ್ಪನಾ ಎಸ್ ಪಾಟೀಲ “ಗೆಳತಿ” ಮರೆತಿಲ್ಲ ಗೆಳತಿ‌ ನಿನಗೆ ಕೊಟ್ಟ ಮಾತಅರಿತಿರುವೆ ನಿನ್ನ ಮನವ ನಾ ಏನಂತ!ಸರಿದು ಸಾಗದಿರು ಕೇಳಿ ನೀ ಯಾರಂತ.! ಜನುಮದ ಬಂಧಕೆ ಸಾಕ್ಷಿ ಬೇಕಿಲ್ಲಅನುದಿನವು ಜೊತೆ ಇದ್ದರೆ ಸಾಕಲ್ಲ!ನಾನು ನೀನು ಇಬ್ಬರಾದ್ರು ಆತ್ಮ ಒಂದಲ್ಲ.! ಬೆನ್ನ ಮೇಲೆ ಹೊತ್ತು ಆಡಿದ ಆಟಾನಇನ್ನ ಮರಿಯದಂತೆ ನಕ್ಕು ನಲಿದ ಎಳೆತನ!ನನ್ನ ನಿನ್ನ ಬೆಸೆದ ಆ ಗೆಳೆತನ.! ಚೆಂದಕಿಂತ ಚೆಂದಿತ್ತು ಮುಗ್ಧತೆಯು ಕೂಡಿತ್ತುಅಂದದ ಹಂಗು ತೊರೆದಿತ್ತು !ನಂದು ನಿಂದೆನ್ನುವ ಭೇದ ನಮ್ಮಿಂದ ದೂರಿತ್ತು.! ಕಲ್ಪನಾ ಎಸ್ ಪಾಟೀಲ

ಕಲ್ಪನಾ ಎಸ್ ಪಾಟೀಲ ಅವರ ಕವಿತೆ “ಗೆಳತಿ” Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ರೆಕ್ಕೆ ಮುರಿದ ಹಕ್ಕಿ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ರೆಕ್ಕೆ ಮುರಿದ ಹಕ್ಕಿ” ಗುಡಿಸಿಲಿನ ಗುಬ್ಬಚ್ಚಿ ನಾನು.ತಂದೆ–ತಾಯಿಯ ಪ್ರೀತಿ,ಅಪ್ಪನ ದುಡಿಮೆ ದುಡ್ಡಿನಿಂದಮೃಷ್ಟಾನ್ನ ಭೋಜನ, ಅವ್ವನ ಬುದ್ಧಿಮಾತು— ನಿಧಾನವಾಗಿಹಾರಲು ಕಲಿತೆ. ಗೂಡು ಬಿಟ್ಟು,ಗುರುತಿಲ್ಲದ ಕಡೆಗೆ ಸಾಗುತ್ತಿದ್ದೆ;ಅಡೆತಡೆ ಇಲ್ಲದ ಸ್ವಚ್ಛಂದ ಹಾರಾಟ,ಎತ್ತರಕ್ಕೆ ಏರುತ್ತಿದ್ದೆ. ಗುಬ್ಬಚ್ಚಿಯ ಗೂಡಲ್ಲಿಬಡತನ ಇದ್ದರೂ ಬವಣೆ ಇರಲಿಲ್ಲ;ಹಣ ಇರಲಿಲ್ಲ, ಆದರೆ ಆನಂದ ಇತ್ತು.ನೋವಿತ್ತು, ನಂಜಿರಲಿಲ್ಲ;ಕೊಳಕು ಇತ್ತು, ಕತ್ತಲೆ ಇರಲಿಲ್ಲ. ಶುಭ್ರ ನೀಲಿ ಆಕಾಶ,ತಣ್ಣನೆಯ ಗಾಳಿ,ತಳಿರಿನ ತಂಪು,ಮಲ್ಲಿಗೆಯ ಕಂಪು—ಇವೆಲ್ಲಾ ನನಗೆ ಗುರಿಯಾಗಿ,ಗುರುವಾಗಿ,ಗುರಿಯವರೆಗೂ ಕರೆದೊಯ್ದವು. ಆಮೇಲೆ…ಅರಮನೆ ಸೇರಿದೆ.ಅಂದ–ಚಂದದ ಮೈಮಾಟ,ಮೋಹ–ಮಾಯೆಯ ಪಾಶ;ಅಲ್ಲಿ ರೆಕ್ಕೆ ಬಿಚ್ಚಲು ಆಗಲಿಲ್ಲ,ಹಾರಲು ಆಗಲಿಲ್ಲ. ಪಂಜರದೊಳಗೆ ರೆಕ್ಕೆ ಬಡಿಯುತ್ತಾ,ನಿದ್ರೆ ಬಾರದ ರಾತ್ರಿಯ ನರಳಾಟದಲ್ಲಿನಲಿವು ಕಾಣದೆಕಾದು ಕುಳಿತು ಕಂಗಾಲಾದೆ. ಹೊಸ ಪ್ರಪಂಚದಲ್ಲಿದಾರಿ ತಪ್ಪಿದೆ;ದಾರಿ ತೋರಿಸುವವರೇಕತ್ತಲಿನ ಪರದೆ ಕಟ್ಟಿದರು. ಹಾರಲೂ ಆಗದೆ,ಹೊರಳಲೂ ಆಗದೆ,ಮರುಗುತ, ಸೊರಗುತ, ಕೊರಗುತಕುಳಿತೆ—ರೆಕ್ಕೆ ಮುರಿದ ಹಕ್ಕಿಯಂತೆ. ಪಂಜರದಿಂದ ಬಿಡುಗಡೆ ಯಾವಾಗ?ನಾನು ಹಾರಬೇಕು—ಶುಭ್ರ ಗಾಳಿಯ ತಂಪಿನಲ್ಲಿ,ಸ್ವಚ್ಛ ನೀಲಿ ಆಕಾಶದ ಕಡೆಗೆ. ಮೌನವೇ ಮಾತಾಗಿದೆ.ಮಾಡಿದ ತಪ್ಪಿಗೆ ಪ್ರಾಯಶ್ಚಿತ ಯಾವಾಗ?ಒಂದು ದಿನ ಪಂಜರದ ಸರಳು ಮರುಗಿತು“ಬಿಡುಗಡೆ ನೀಡುವೆ ಹೋಗು ನೀನು” ಹಾರುವ ಚೈತನ್ಯ ಇಲ್ಲ;ಅದೇ ಆಕಾಶ, ಅದೇ ಗಾಳಿ—ರೆಕ್ಕೆ ಮುರಿದಿವೆ ನಾನಿನ್ನು ಹಾರಲು ಆಗದರೆಕ್ಕೆ ಮುರಿದ ಹಕ್ಕಿ. ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ರೆಕ್ಕೆ ಮುರಿದ ಹಕ್ಕಿ” Read Post »

ಕಾವ್ಯಯಾನ

ಕುವೆಂಪು,ಬೇಂದ್ರೆ ಬಗ್ಗೆಸುಮತಿ ನಿರಂಜನ್‌ ಅವರ ಎರಡು ಪುಟ್ಟ ಕವಿತೆಗಳು

ಕಾವ್ಯ ಸಂಗಾತಿ ಕುವೆಂಪು,ಬೇಂದ್ರೆ ಬಗ್ಗೆ ಸುಮತಿ ನಿರಂಜನ್‌ ಅವರ ಎರಡು ಪುಟ್ಟ ಕವಿತೆಗಳು ಕನ್ನಡವೆಂದರೆ ಇಷ್ಟು ಚೆಂದದ ನುಡಿಯೇ ಎಂದು ತಿರುತಿರುಗಿ ನೋಡುವಂತೆ ಮಾಡಿದ ಮೊದಲ ಕವಿ ನಮ್ಮ ಕುವೆಂಪು. ಅವರ ಕಾವ್ಯಫಲದಲ್ಲಿ ಭಾವುಕತೆಯ ಸಿಹಿ, ಅಧ್ಯಾತ್ಮದ ಪಕ್ವತೆ, ಕನ್ನಡದ ತಿರುಳು.ಅಸಂಖ್ಯ ಕನ್ನಡಿಗರ ಮನೆಗಳಲ್ಲಿ ಕನ್ನಡದ ದೀಪ ಹಚ್ಚಿದ ಕವಿಚೇತನ. ನಮ್ಮ ಮನಗಳೆ ನಿಮ್ಮಾನಿಕೇತನ. ಕನ್ನಡವೆಂದರೆ ಕುವೆಂಪು !ಕವಿಶೈಲದ ಇಂಚರ ಇಂಪುಮಲೆನಾಡಿನ ಹಸಿರಿದೆಜೋಗದ ಭರವಿದೆಕಾಜಾಣದ ಕರೆಯಿದೆಅದರಲಿಅಮ್ಮನ ಲಾಲಿಯ ತಂಪು ಇದೆ ! — ಬೇಂದ್ರೆ ಎಂದರೆ ಬೆಂದರೆ ಬರುವ ಪರಿಪಾಕಕಾವ್ಯಗಂಗೆ ಇಳೆಗಿಳಿವ ಭಗೀರಥ ಕಾಯಕನಾಕು ತಂತಿ ಮೀಟುವ ಶಬ್ದ ವೈಣಿಕದರ್ಶನ, ಸಂಗೀತ, ಗಣಿತ ಲಯ ಮಾಂತ್ರಿಕಪಂಡಿತ ಪಾಮರರ ಪ್ರೀತಿಪಾತ್ರಕನ್ನಡಾಂಬೆಯ ಔರಸ ಪುತ್ರಕಾವ್ಯಾಂತರಿಕ್ಷದ ಧ್ರುವ ನಕ್ಷತ್ರವರಕವಿಯ ಕೀರುತಿ ಸರ್ವತ್ರ ಸುಮತಿ ನಿರಂಜನ್

ಕುವೆಂಪು,ಬೇಂದ್ರೆ ಬಗ್ಗೆಸುಮತಿ ನಿರಂಜನ್‌ ಅವರ ಎರಡು ಪುಟ್ಟ ಕವಿತೆಗಳು Read Post »

ಕಾವ್ಯಯಾನ

ರತ್ನರಾಯಮಲ್ಲ ಅವರ ಗಜಲ್

ಕಾವ್ಯ ಸಂಗಾತಿ ರತ್ನರಾಯಮಲ್ಲ ಗಜಲ್ ಕಾಲ ತಡೆಗೋಡೆ ಕಟ್ಟದು ಒಲವಿನ ಮಳೆ ಜಿನುಗಲು ಒಲವರಸಿಯಾರಿಗೂ ಆಗದು ಮಲ್ಲಿಗೆ ಸುಮ ಕಂಪು ತಡೆಯಲು ಒಲವರಸಿ ನಿನ್ನ ರೂಪವು ಪ್ರೇಮಾಲಯ ನಿರ್ಮಿಸಿ ಯುಗಳ ಗೀತೆ ಹಾಡುತಿದೆಅನುದಿನ ಕಾಯುವೆ ನಿನ್ನ ಚೆಲುವಿನ ಪುಟ ತಿರುವಲು ಒಲವರಸಿ ಆರುಮೆ ಅಂಗಳದಲಿ ಪೂಜಿಸುವೆನು ಮನದುಂಬಿ ದೀಪ ಬೆಳಗುತಭಾವದೀಪ್ತಿಯು ಕೆಂಪೇರುತದೆ ನಿನ್ನಧರಗಳು ಚದುರಲು ಒಲವರಸಿ ತನು ಮನ ಮಿಥುನಕೆ ಹಂಬಲಿಸುತ ಕನಸಿನ ಗೋಪುರ ಕಟ್ಟುತಿದೆನನ್ನ ಬೇಟೆಯಾಡು ವದನದ ಅಂಚು ಅಮೃತ ಸುರಿಸಲು ಒಲವರಸಿ ಮಲ್ಲಿಯ ಉಸಿರಿನ ಉಷ್ಣವು ನಿನ್ನಲಿ ಬೆರೆಯಲು ಕನವರಿಸುತಿದೆಆಲಂಗಿಸು ಬಾ ನನ್ನೆದೆಯ ರಸದೋಕುಳಿ ಎರಚಲು ಒಲವರಸಿ ರತ್ನರಾಯಮಲ್ಲ

ರತ್ನರಾಯಮಲ್ಲ ಅವರ ಗಜಲ್ Read Post »

ಕಾವ್ಯಯಾನ

ನಿರಂಜನ ಕೇಶವ ನಾಯಕ “ಶೂನ್ಯದ ಸವಿ”

ಕಾವ್ಯ ಸಂಗಾತಿ ನಿರಂಜನ ಕೇಶವ ನಾಯಕ “ಶೂನ್ಯದ ಸವಿ” ನಿದ್ದೆ ಸುಲಭದಿ ಒಲಿದರೆ ವರಕಳೆವುದು ಬಾಳಿನ ದಿನದ ಭಾರಕನಸ ಕಂಗಳಿಗೆ ಈತ ಸರದಾರಮಂಜಿನಷ್ಟು ಈಗ ಮನ ಹಗುರ. ಕುಳಿತಲ್ಲೇ ತೂಕಡಿಕೆಯ ತಡವರಿಕೆಬೇಸರ ತೀರದ ಬವಣೆಯ ಹರಕೆತಂಗಾಳಿಯ ಸವಿಯ ಬೀಸಣಿಕೆಇರದು ಸಂಕೋಲೆಗಳ ಎಣಿಕೆ. ಜಗವ ಮರೆತು ಶೂನ್ಯವಾಗಿಕಂಡ ಕಲ್ಪನೆಯ ಮಗುವಾಗಿಹಿತವಾಗಿ ಉಸಿರನೇರಿ ಸಾಗಿರೋಗಿಯೂ ಆಗುವನು ಭೋಗಿ. ಕಾಯಕ್ಕಿರಲಿ ವಿರಾಮದ ಜಾಗನಿರಂತರತೆ ತರುವುದು ರೋಗಅಲ್ಪಕಾಲದ ಈ ವೈಭೋಗಸಿಗದಿದ್ದರೆ ಇರದು ಸುಯೋಗ. ನಿರಂಜನ ಕೇಶವ ನಾಯಕ

ನಿರಂಜನ ಕೇಶವ ನಾಯಕ “ಶೂನ್ಯದ ಸವಿ” Read Post »

ಕಾವ್ಯಯಾನ, ನಿಮ್ಮೊಂದಿಗೆ

ಶ್ರೀದೇವಿ ಗುಮ್ಮಗೋಳ ಅವರ ಕವಿತೆ “ಜಗದ ಕವಿ”

ಕಾವ್ಯ ಸಂಗಾತಿ ಶ್ರೀದೇವಿ ಗುಮ್ಮಗೋಳ “ಜಗದ ಕವಿ” ಓ ಕವಿ ನಾಯಕ ಕುವೆಂಪುನೀವ ಬರೆದ ಕವನಗಳ ಇಂಪುನೀಡಿದೆ ಕನ್ನಡ ಸಾಹಿತ್ಯಕ್ಕೆ ತಂಪುಪಸರಿಸಿದೆ ಹಾವ ಭಾವಗಳ ಕಂಪು| ಹಸ್ತದ ಸಂಗೀತಕ್ಕೆ ನಾಟ್ಯವಾಡಿತು ‘ನವಿಲು’|ಪದಪುಂಜ ನಾದದ ‘ಕೊಳಲು’ಗೆಮೊಳಗಿತು ‘ಪಾಂಚಜನ್ಯ’|ಕನ್ನಡವಾಯಿತು ಧನ್ಯ| ಕನ್ನಡ ನಿಸರ್ಗದಲ್ಲಿಮೂಡಿಬಂದ ‘ಪಕ್ಷಿ ಕಾಶಿ’|ಕನ್ನಡ ಮಾತೆಯ ಮಡಿಲಲ್ಲಿಬೆಳದ  ‘ಷೋಡಶಿ’ ಕನ್ನಡ ಸಾಗರದ ಆಳದಿಂದಹೊರಬಂದ ಮುತ್ತು|ನೀಡಿದ್ದು ನಮ್ಮಗೆಲ್ಲಶಾಶ್ವತ ಸಾಹಿತ್ಯ ಸೊತ್ತು| ಅಮೋಘ ಸೇವೆಯ ಫಲದೊರೆತ ಅಗ್ರ ಜ್ಞಾನ ಪೀಠ ಪ್ರಶಸ್ತಿ|ತಾವು ಎಂದೆಂದು ಮರೆಯಾಲಗದಕನ್ನಡ ಕುಲಕೋಟಿಯ ಆಸ್ತಿ |        ಶ್ರೀದೇವಿ ಗುಮ್ಮಗೋಳ

ಶ್ರೀದೇವಿ ಗುಮ್ಮಗೋಳ ಅವರ ಕವಿತೆ “ಜಗದ ಕವಿ” Read Post »

ಕಾವ್ಯಯಾನ

ಡಾ. ಡೋ. ನಾ. ವೆಂಕಟೇಶ ಕವಿತೆ,”ಮತ್ತೊಂದು ಶ್ರೀಕಾರ”

ಕಾವ್ಯ ಸಂಗಾತಿ ಡಾ. ಡೋ. ನಾ. ವೆಂಕಟೇಶ “ಮತ್ತೊಂದು ಶ್ರೀಕಾರ” ನನ್ನಿಂದಾಗುವುದಿಲ್ಲಗೆಳೆಯಾ ಈಗೀಗಬರೆಯಲಿಕ್ಕೆ ಕೊಟ್ಟ ಈ ಚಿತ್ರಕ್ಕೆ ಆ ವಿಚಿತ್ರಕ್ಕೆ! ಹೂ ಹಣ್ಣು ಗಿರಿ ಪಂಕ್ತಿಗಳ ಜಾಡುಹಕ್ಕಿ ಪಿಕ್ಕಿಗಳ ನೃತ್ಯಮನುಜರ ಕೃತ್ಯರಕ್ಕಸರ ಕುಕೃತ್ಯ ಕುರಿತೋದದ ಜೀವನ ಕಹಳೆಗಳುಕೇಳರಿಯದ ಸುಗಂಧದ ಚೆಂದಹೂವಿನ ಪಕಳೆಆಕಾಶದ ನಕ್ಷತ್ರ ರಾತ್ರಿ ಹಗಲುಗನಸು ಹಾಗೂಮತ್ತಷ್ಟು ಬ್ರಹ್ಮಾಂಡಗಳು! ಹೇಗೆ ಬರೆಯಲಿ ಗೆಳೆಯ ಉದ್ದುದ್ದ ಸಾಲುಗಳುನಿರ್ಮೋಹಿ ಮನಸುಗಳುನಿರ್ದಯ ಕನಸುಗಳುಅಗಮ್ಯ ಅನೂಚನ ಕಾಯಗಳುಬಾಡಿದ ಮೊಗ್ಗುಗಳು. ಹೇಗೆ ಬರೆಯಲಿ ಕಥೆಶಾಯಿ ಮುಗಿಯುವ ಮುನ್ನಬರೆದ ಲೆಕ್ಕಣಿಕೆ ಮುರಿದು ಹೋಗುವ ಮುನ್ನ? ಮತ್ತಷ್ಟುಕವನ ಕಗ್ಗಂಟು ಮುಗ್ಗಂಟುಧಾರಾವಾಹಿಯಾಗಿ ಹೊಸತೊಂದು ಅಧ್ಯಾಯಹೊಸೆಯುವ ಮುನ್ನ-ಹೇಗೆ ಹಾಡಲಿ ಹೊಸ ರಾಗ! ಹೇಗೆ ಬರೆಯಲಿ ಚಿನ್ನಮತ್ತೊಂದು ಶ್ರೀಕಾರಕ್ಕೆಚೆನ್ನುಡಿ ಹಾಕುವ ಮುನ್ನಕ್ಕೆ! ಡಾ. ಡೋ. ನಾ. ವೆಂಕಟೇಶ

ಡಾ. ಡೋ. ನಾ. ವೆಂಕಟೇಶ ಕವಿತೆ,”ಮತ್ತೊಂದು ಶ್ರೀಕಾರ” Read Post »

ಕಾವ್ಯಯಾನ

“ಬೇಂದ್ರೆ ಅಜ್ಜನ ನೆನಪು”ಶಿವಕುಮಾರ ಕೋಡಿಹಾಳ ಮೂಡಲಗಿ

ಕಾವ್ಯ ಸಂಗಾತಿ ಶಿವಕುಮಾರ ಕೋಡಿಹಾಳ ಮೂಡಲಗಿ “ಬೇಂದ್ರೆ ಅಜ್ಜನ ನೆನಪು” ಜನೇವರಿ ತಿಂಗಳ ಬಂತಂದ್ರ ನೆನಪಾಗೋ ಜೀವ ಅಂದ್ರ ಬೇಂದ್ರೆ ಅಜ್ಜಾ§ನನಕ್ಕು ಸಾಯ್ರೋ ನಕ್ಕು ಸಾಯ್ರಿ ಅಂತಾ ನಮಗೆಲ್ಲಾ ಹೇಳಿ ನಕ್ಕೋತ ಹೋದ ದತ್ತು ಮುತ್ಯಾಬಡತನಕ ಹೇಸಿದಾವಲ್ಲ  ಮೆಟ್ಟಿ ನಿಂತಾವಬೆಂದು ಬೇಂದ್ರೆಯಾದಾವ ರಾಮಚಂದ್ರ ಅಂಬೂತಾಯಿಯ ಮಗನಾಗಿಗೋದೂಬಾಯಿ ನೆರಳಿನಾಗ ಕನ್ನಡ ನಾಡಿನ ಆಲದ ಮರಾ ಆಗಿದ್ದಾ§ವಮಾತು ಆಡಿದರ ಹಸಿ ಗೋಡ್ಯಾಗ ಹಳ್ಳ ಒಗದಂಗ ಮಾತಾಡಾವಕನ್ನಡದವ್ವ ಅಂದ್ರ ನಿನಗ ಪಂಚಪ್ರಾಣತಾಯಿ ಋಣ ತೀರಸಾಕ ಅಕ್ಷರದ ಮಹಲು ಕಟ್ಟಿದಾವ ತನ್ನ ಹಾಡಿನಾಗಮಲ್ಲಿಗಿ ಹೂವಿನಗಮಗಮಕುರುಡು ಕಾಂಚಾಣದ ಜಣಜಣಕರಡಿ ಕುಣಿತದತಕತಕ  ಮೂಡಲ ಮನೆಯಚುಮು ಚುಮುಕಾಣಿಸಿದಾವ ಇನ್ನೂ ಯಾಕ ಬರಲಿಲ್ಲಾವ ಹುಬ್ಬಳ್ಳಿಯಾವ ಅಂತ ಹೇಳಿಕನಸಿನೊಳಗೆ ಬಂದು ಕನಸು ಬಿತ್ತಿದಾವನಮಗೆಲ್ಲಾ ಹುಸಿನಗುತ ಬಂದೀರಿನಸುನಗುತ ತೆರಳಿಅಂತಾ ನೀತಿ ಪಾಠ ಹೇಳಿದಾವ ಕನ್ನಡದವರು ಮನಸು ಮಾಡಿದರ ಚರಿತ್ರೆ ಸೃಷ್ಟಿಸ್ಯಾರ ಆ ಕಡೆ ಲಕ್ಷ್ಯ ಕೊಡ್ರಿ ಎಂದು ಹೇಳಿನಮಗೆಲ್ಲಾ ತಾಯಿ ಸೇವೆ ಮಾಡಾಕ ಹಚ್ಚಿದಾಂವಕನ್ನಡ ನಮ್ಮ ಮೈಯಾಗ ಕಣಕಣದಾಗ ಬೆರತೈತಿ ಅನ್ನೋ ಸತ್ಯ ತಿಳಿಸಿದಾವ ಗುಂಗುರು ಕೂದಲಿನ ಮುತ್ಯಾಮಾತಿನ ಮಲ್ಲ ಶಬ್ದ ಗಾರುಡಿಗನಮ್ಮ ನಾಡಿನ ಮಾಣಿಕ್ಯನಮಗಅರಳು ಮರಳು ಆದ್ರೂನಿನ್ನ ನೆನಪು ಎಂದೂ ಸಾಯುವುದಿಲ್ಲನೀನು ನಮ್ಮ ನಾಡಿನಾಗ ಹುಟ್ಟಿದ್ದೇ ಒಂದು ಪವಾಡನಿನ್ನ ಜನುಮದಿನ ನಮಗೆಲ್ಲಾ ಹಬ್ಬನಮಗೆಲ್ಲಾ ಹಬ್ಬಆಶೀರ್ವಾದ ಮಾಡು ಮುತ್ಯಾ  ಶಿವಕುಮಾರ ಕೋಡಿಹಾಳ ಮೂಡಲಗಿ

“ಬೇಂದ್ರೆ ಅಜ್ಜನ ನೆನಪು”ಶಿವಕುಮಾರ ಕೋಡಿಹಾಳ ಮೂಡಲಗಿ Read Post »

ಕಾವ್ಯಯಾನ

“ಅರ್ಥವಾಗದವಳು”ಡಾ ತಾರಾ ಬಿ ಎನ್ ಧಾರವಾಡ

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್ ಧಾರವಾಡ “ಅರ್ಥವಾಗದವಳು”  ನಿಶ್ಶಬ್ದದೊಳಗೆ ಮಾತಾಡುವವಳು,ನಗುವಿನ ಹಿಂದೆ ಸಾವಿರ ಪ್ರಶ್ನೆಗಳನ್ನು ಮರೆಸುವವಳು.ಕಣ್ಣಲ್ಲಿ ಕನಸುಗಳ ನದಿ ಹರಿದರೂಕಾಣದವರ ಮಧ್ಯೆ ಬದುಕುವವಳು.ತನ್ನತನವನ್ನು ತಾನೇ ಹೊತ್ತುಕೊಂಡುಪ್ರಪಂಚದ ತೂಕವನ್ನೂಸಹ ನಗುತ್ತಲೇ ಸಾಗಿಸುವವಳು,“ಬಲಿಷ್ಠ” ಎಂದರೆ ಕಲ್ಲಿನಂತೆಇರಬೇಕು ಎಂದುಕೊಂಡವರಿಗೆಹೂವಿನಂತೆ ಮೃದುವಾಗಿಬಲವಾಗಿರುವವಳು.ಮೌನವನ್ನು ಅಹಂಕಾರವೆಂದವರುಅಳುವನ್ನು ದುರ್ಬಲತೆ ಎಂದರು, ಪ್ರಶ್ನೆಗಳನ್ನು ಬಂಡಾಯವೆಂದರು,ಆದರೆ ಅವಳೊಳಗಿನ ಸತ್ಯವನ್ನುಯಾರೂ ಕೇಳಲಿಲ್ಲ.ತನ್ನವರ ನಡುವೆ ಇದ್ದೂಒಂಟಿಯಾಗಿದ್ದಳು,ತನ್ನ ಭಾಷೆಯನ್ನೇ ಮಾತಾಡುತ್ತಿದ್ದರೂ ಅಂತರಂತೆ,ಅನ್ಯಭಾಷೆಯಂತೆಅವಳ ಮನಸ್ಸಿನ ಅಕ್ಷರಗಳುಅವರ ಕಣ್ಣಿಗೆ ಒಂದಾಗಲೇ   ಇಲ್ಲ,  ಅಸ್ಮಿತೆ ಕಾಣಲೇ ಇಲ್ಲ.ತನ್ನ ನೋವಿಗೆ ತಾನೇಸಮಾಧಾನ ಹೇಳಿಕೊಂಡಳು,ತನ್ನ ಕಣ್ಣೀರಿಗೆ ತಾನೇ ಉತ್ತರವಾದಳು.ಬಿದ್ದಾಗ ಕೈ ಹಿಡಿಯುವವರುಇರಲಿಲ್ಲ,ಆದರೂಮತ್ತೆ ನಿಂತು ನಡೆಯುವ ಧೈರ್ಯಅವಳು ಕಳೆದುಕೊಳ್ಳಲಿಲ್ಲ,ಅವಳು ವಿಭಿನ್ನ. ವಿಶಿಷ್ಟ,ಅವಳು ದುರ್ಬಲ ಅಲ್ಲ,ಅವಳು ಆಳವಾದಳು.ಒಂದು ದಿನ…ಅವಳನ್ನು ಅರ್ಥಮಾಡಿಕೊಳ್ಳದ ಲೋಕವೇಬೆಳಕಿಗೆ ದಾರಿ ಕೇಳುತ್ತದೆ.ಆಗಲೂ  ಕಹಿಯಾಗುವುದಿಲ್ಲ,ನಗುಮುಖದಿಂದಲೇ ದಾರಿದೀಪವಾಗುತ್ತಾಳೆ.ಏಕೆಂದರೆನನ್ನವರಿಗೇ ಅರ್ಥವಾಗದವಳುಒಂದು ದಿನತನ್ನನ್ನೇ ಸಂಪೂರ್ಣವಾಗಿ ಅರ್ಥಮಾಡಿಕೊಂಡವಳು. ಡಾ ತಾರಾ ಬಿ ಎನ್ ಧಾರವಾಡ

“ಅರ್ಥವಾಗದವಳು”ಡಾ ತಾರಾ ಬಿ ಎನ್ ಧಾರವಾಡ Read Post »

ಕಾವ್ಯಯಾನ

“ಹುಬ್ಬಳಿಯಾಂವ” ಕವಿತೆ ಎಮ್ಮಾರ್ಕೆ

ಕಾವ್ಯ ಸಂಗಾತಿ ಎಮ್ಮಾರ್ಕೆ “ಹುಬ್ಬಳಿಯಾಂವ” ಈ ಭೂಮಿಗಿ ಬಿದ್ದಾಂವಆ ಬಾನಿಗಿ ಎದ್ದಾಂವ,ಇದ್ದುದೆಲ್ಲಾನು ಗೆದ್ದಾಂವನೀ ಹುಬ್ಬಳಿಯಾಂವ ಪದ ಪದವ ಕುಣಿಸಾಂವಮುದದಿ ಉಣಿಸಾಂವ,ಎದಿಗುದಿಯ ತಣಿಸಾಂವಅಂದತ್ತನ ನೆನೆಸಾಂವ ಬ್ಯಾನಿ ಹೊತ್ತ ನಡದಾಂವಜ್ಞಾನಪೀಠ ಪಡದಾಂವ,ಮೂಗುದಾನ ಹಿಡದಾಂವಬಿಗುಮಾನ ಬಿಡದಾಂವ ನಿದ್ದಿ ನೀರಡಿಕಿ ಕೆಡಸಾಂವಗಾರುಡಿಯ ನಡಸಾಂವಹಾಳು ಹಂಗು ಬಿಡಸಾಂವಗುಂಗೊಂದ ಹಿಡಸಾಂವ ಬಾಳಿನುದ್ದಕೂ ಬೆಂದಾಂವಬೆಂದ ಬೇಂದ್ರೆಯಾದಾಂವ,ದತ್ತ ಅಂದತ್ತನೇ ಆದಾಂವಇಂದೆತ್ತ ಎದ್ದ ಹೋದಾಂವ ಎಮ್ಮಾರ್ಕೆ

“ಹುಬ್ಬಳಿಯಾಂವ” ಕವಿತೆ ಎಮ್ಮಾರ್ಕೆ Read Post »

You cannot copy content of this page

Scroll to Top