ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ನನ್ನ ಗುರುಕುಲ

ಕಾವ್ಯಯಾನ ನನ್ನ ಗುರುಕುಲ ನೇತ್ರಾ ಪ್ರಕಾಶ್ ಹಲಗೇರಿ ಹುಡಿ ಮಣ್ಣಿನ ಹಾದಿ ಗೊರ್ಪಿಕಲ್ಲು, ಮುಳ್ಳಿನ ಮಿಶ್ರಣ,ಮಳೆರಾಯ ಧರೆಗಿಳಿದರೆಕೆಸರು ಮುದ್ದೆ ರಾಡಿ ರಾಡಿಸುತ್ತ ಗದ್ದೆಯ….ನೋಟಕಿರು – ಕಾಲುವೆಗಳ ಜುಳು – ಜುಳು ಪಾಟಿ ಚೀಲ ಹೊತ್ತುಓಡಿದ್ದೇ ಓಡಿದ್ದುಯಾವುದರ ಪರಿವೆ ಇಲ್ಲದೆರಕ್ತ ಮಡುಗಟ್ಟಿದ ಬರೀ ಪಾದದಲ್ಲಿಎಲ್ಲಾ ಮೇಷ್ಟ್ರುಗಳ ಸ್ಪೆಷಲ್ ಕ್ಲಾಸಿಗೆ ಉಸಿರುಗಟ್ಟಿಕನಸಿನ ಕಣ್ಣಿನಲ್ಲಿ… ಸೂರ್ಯಚಂದ್ರರ ಕೋಟಿ ಜೀವ ಜಂತುಗಳು ಆಶ್ರಯ ತಾಣಮಧ್ಯೆ ನಮ್ಮೆಲ್ಲರ ಗುರುಕುಲಬೋಧಿ ವೃಕ್ಷ – ಕಲ್ಪವೃಕ್ಷದ ಬದುಕಿನ ಅಡಿಪಾಯವೇ ಸರಿ ನಮ್ಮೀ ಗೋಪುರದ ಶಿಖರ…. ತಿದ್ದಿ-ತೀಡಿ ಜುಲಪಿ ಏಟಿಗೆ ಬಾಗಿ ಬೆಂಡಾಗಿ ಕಲಿತದ್ದೆ ಕಲಿತದ್ದು ಇಂದು ನಮ್ಮೆಲ್ಲರ ರೂಪಕ ಪ್ರತಿಮೆಗಳ ಪ್ರತಿಭೆಗಳ ಆಗಿದ್ದೇವೆ….. ಮಧ್ಯಾಹ್ನದ ವೇಳೆ ಡಬ್ಬಿಯ ರೊಟ್ಟಿ ಪಲ್ಯ ಅನ್ನ ಮೊಸರು ಉಪಹಾರ ವಂಗೆಮರ ದಡಿಯ ಸವಿಯಲುಕ್ಷಣಗಳ ಎಣಿಕೆ ಹಸಿವಿನ ತಡವರಿಕೆ ವಾಲಿಬಾಲ್ ಕೊಕ್ಕೋ ಬ್ಯಾಡ್ಮಿಂಟನ್ ಹೊಡೆದಾಟ ಒಡನಾಟ ನಮ್ಮೆಲ್ಲರ ನೆಚ್ಚಿನ ಕೈತೋಟದ ಸ್ವಚ್ಛತೆ ಆಗಾಗ ಎರಡು ದಶಕಗಳು ಕಳೆದರೂ ನಾವೆಲ್ಲರೂ ಬೆಳೆದರು ನಮ್ಮೆಲ್ಲರ ಆಪ್ತತೆ ಸ್ನೇಹ ಸ್ಪಂದನ ಈ ಬಂಧನ ಉಳಿದಿದೆ ಮುಗಿಯದಬೆಸುಗೆಯ ಕೊಂಡಿ ಭಾವನೆಗಳ ಬಂಧವಾಗಿ ಬೆಸೆದಿದೆಈ ಗುರುಕುಲ ಸಾಧನೆಯ ಮೆಟ್ಟಿಲುಗಳನ್ನು ಮುಟ್ಟಿಸಿದಜ್ಞಾನ ಮಂದಿರ ಈ ಗುರುಕುಲ

ನನ್ನ ಗುರುಕುಲ Read Post »

ಕಾವ್ಯಯಾನ

ಈ ಸಂಜೆ

ಕಾವ್ಯಯಾನ ಈ ಸಂಜೆ ಅಕ್ಷತಾ ಜಗದೀಶ ಜೊತೆಯಾಗಿ ಮೂಡಿಸಿದೆವುನಮ್ಮ ‌ಹೆಸರು‌ ಮರಳಿನ ಮೇಲೆ..ಕಡಲ ಅಲೆಗಳ ಸ್ಪರ್ಶಿಸುತಜೊತೆಯಾಗಿ ನಡೆದೆವುಆ ಸುಂದರ ‌ಸಂಜೆಯಲಿ.. ರವಿ ಆಗಸದಿಂದ ಜಾರಿದರುಸಮಯವೇಕೆ ಇಷ್ಟು ಬೇಗ‌ಓಡುತ್ತಿದೆ ಎಂದುಮುನಿಸಿಕೊಂಡೆವು…..ನಿನ್ನೊಡನೆ ಪಿಸುಗುಡುವಾಗಅಲೆಗಳ ಬೋರ್ಗರೆತವೇಕೇಳಲಿಲ್ಲ ನನಗಂದು…. ಇಂದೆಕೊ ಮತ್ತೆ ಏಕಾಂತನಮ್ಮ ಹೆಸರನ್ನೇಕೊಕಡಲ ಅಲೆಗಳು ಬಂದುನುಂಗುತ್ತಿವೆ ಇಂದು… ಆಗಸದ ಸೂರ್ಯ ಅದೇಕೊನಿಧಾನಗತಿಯಲಿ ಚಲಿಸುತಿಹನೋ..ಕಡಲೇಕೊ ಬೋರ್ಗರೆದುನನ್ನ ನೋಡಿ ಆರ್ಭಟಿಸುತಿದೆಎನ್ನುವಂತೆ ಭಾಸ.. ಮರೆಯಾದೆ ಏಕೆ‌ ನನ್ನ ರಜನಿಅಗಾದ ಕಡಲಿಗೆ ಸೆರುತ್ತಿದೆನೀ ಉಳಿಸಿಹೋದ ಕಂಬನಿ…ಈ ಸಂಜೆ‌ ನೀ ಜೊತೆಗಿಲ್ಲಆದರೂ….ಕಡಲ ಅಲೆಗಳಿಗೆ ಸ್ಪರ್ಶಿಸುವುದನಾ ಮರೆತಿಲ್ಲ….‌‌

ಈ ಸಂಜೆ Read Post »

ಕಾವ್ಯಯಾನ

ರೆಕ್ಕೆಗಳ ಹರವಿದಷ್ಟು ಕಂಬನಿ

ಕಾವ್ಯಯಾನ ರೆಕ್ಕೆಗಳ ಹರವಿದಷ್ಟು ಕಂಬನಿ ಅಶೋಕ ಹೊಸಮನಿ ದೃಷ್ಟಿ ದೃಷ್ಟಿಯನೆದುರಿಸುವುದು ಸುಲಭದ ಮಾತಲ್ಲ ಸಖಾಎರಡೇ ಎರಡು ಹೆಜ್ಜೆಗಳ ಪ್ರೇಮಆತ್ಮಗಳ ಅನಂತ ಬಿಕ್ಕು ದೇವರು ದೇವರನೆದುರಿಸುವುದು ಸುಲಭದ ಮಾತಲ್ಲ ಸಖಾತೀರಿ ಹೋದವು ಅದೆಷ್ಟೋ ನದಿಗಳುಕಣ್ಮರೆಯಾದರು ಕಡು ತೀರದಷ್ಟು ಸೂರ್ಯ,ಚಂದ್ರರು ಮುಸ್ಸಂಜೆ ಮುಸ್ಸಂಜೆಯನೆದುರಿಸುವುದು ಸುಲಭದ ಮಾತಲ್ಲ ಸಖಾಸುಟ್ಟ ನೆತ್ತರಿನಲಿಬೆಂದ ಕನಸುಗಳ ಮೇಳವು ಖಡ್ಗ ಖಡ್ಗವನೆದುರಿಸುವುದು ಸುಲಭದ ಮಾತಲ್ಲ ಸಖಾಎತ್ತರಕ್ಕೇರಿಸುವಾಗಲೂ ಪ್ರೀತಿಉಕ್ಕೀತು ಶಾಂತಿಯ ಬಾವುಟವು ಸಖಾರೆಕ್ಕೆಗಳ ಹರವಿದಷ್ಟು ಕಂಬನಿತಾಕಿದಷ್ಟು ಒಡನಾಡಿ ನೋಟಗಳುಹಾದಿಗೊಂದಿಷ್ಟು ಕೋರಿಕೆಯೂ

ರೆಕ್ಕೆಗಳ ಹರವಿದಷ್ಟು ಕಂಬನಿ Read Post »

ಕಾವ್ಯಯಾನ

ಪ್ರಿಯ ಕೊಲೆಗಡುಕರೇ

ಕಾವ್ಯಯಾನ ಪ್ರಿಯ ಕೊಲೆಗಡುಕರೇ ಹೇಗಿದ್ದೀರಿ?ಬಹುಶಃ ಚೆನ್ನಾಗಿರುವಿರಿ ನನಗೆ ನೆನಪಿಲ್ಲನಿಮ್ಮ ಮಡಿಲನು ನಾನುತುಂಬಿದ ದಿನನಾನು ಹುಟ್ಟಿದ ಕಾರಣಕ್ಕೆನೀವು ಅಪ್ಪ ಅಮ್ಮರಾದಿರಿಎಂದು ನೀವು ಹೇಳಿಯೇ ಗೊತ್ತು… ನಾನು ಚಿಕ್ಕವಳಾಗಿದ್ದಾಗಊರಿನ ಜಾತ್ರೆಯಲ್ಲಿ ನಾನು ಇಷ್ಟಪಟ್ಟರಾಜಕುಮಾರನ ಬೊಂಬೆಯನ್ನು ಕೊಡಿಸಿನನ್ನ ಆಟವನ್ನು ನಿಮ್ಮ ಸಂಭ್ರಮವಾಗಿಸಿದಿರಿ ಬಹುಶಃ ನನಗೆ ಹನ್ನೆರಡೋಹದಿಮೂರೋ ವಯಸ್ಸಿರಬೇಕುಹೊಟ್ಟೆ ನೋವೆಂದು ಮುಖಕಿವಿಚಿದಾಗಹೆಣ್ಣಾದಳೆಂದು ಊರಿಗೆಲ್ಲಾ ಸುದ್ದಿಹಂಚಿದಿರಿ ಎಲ್ಲವೂ ಸರಿ ಇತ್ತುಅರವಿಂದ ನನ್ನನ್ನು ನೋಡುವವರೆಗೆಇಲ್ಲ ನಾನು ಅವನನ್ನು ಕಾಣುವವರೆಗೆಜಾತ್ರೆಯಲಿ ಕೊಂಡ ಬೊಂಬೆ ರಾಜಕುಮಾರಜೀವತಳೆದು ನನ್ನ ಅರವಿಂದನಾಗಿದ್ದ ಅವನನ್ನು ಕಂಡಂದು ಒಡಲೊಳಗೆಬಣ್ಣದ ಚಿಟ್ಟೆಯೊಂದು ರೆಕ್ಕೆ ಬಡಿದ ಹಾಗೆಮನಸ್ಸು ಅವನೆಡೆಗೆ ಹೊರಟಿತುಕಿಟಕಿ ಗಾಜಿನ ಮೇಲಿನ ನೀರ ಹನಿಯ ಹಾಗೆ ಅರವಿಂದ ನನ್ನೊಳಗಿನಹೆಣ್ಮನಸನ್ನು ಕದ್ದ ಕಳ್ಳಅವನಿಗೆ ನಾನು ಕಣ್ಣಾಗಿಅವನು ನನ್ನ ಕಣ್ಣ ರೆಪ್ಪೆಯಾಗಿಬದುಕಿಡೀ ಜೊತೆಯಾಗಿರಬೇಕೆಂಬುದುಹೃದಯ ನ್ಯಾಯಾಲಯದ ತೀರ್ಪು ನಿಜವಾಗಿಯೂನನಗೆ ಗೊತ್ತಿರಲಿಲ್ಲ ಪ್ರೀತಿಸುವುದುಒಂದು ಉದ್ಯೋಗ ಅದು ಖಾಯಂಆಗಬೇಕಾದರೆ ತಪ್ಪದೆ ನಡೆದಿರಬೇಕುಜಾತಿಯ ಪರಿಶೀಲನೆ ಎಂಬುದು ಅಪ್ಪಾ ನಿನಗೆ ನೆನಪಿದೆಯೇ?ಕೆಲ ವರ್ಷಗಳ ಹಿಂದೆ ನಡುರಸ್ತೆಯಲಿಅಪಘಾತವಾಗಿ ಬಿದ್ದಿದ್ದ ನಿನ್ನನ್ನುಉಪಚರಿಸಿದವರು, ಆಸ್ಪತ್ರೆ ಸೇರಿಸಿದವರು,ರಕ್ತ ನೀಡಿ ಉಪಕರಿಸಿದವರು ಯಾರಜಾತಿಯನ್ನು ನಾನು ಕೇಳಲಿಲ್ಲ, ನಿನ್ನೊಡಲ ರಕ್ತಕೊನೆಗೂ ಯಾವ ಜಾತಿ ತಿಳಿಯಲೇ ಇಲ್ಲ ‘ಮುಟ್ಟಿಸಿಕೊಂಡವನು’ ಕತೆಯನ್ನುಮನಮುಟ್ಟುವಂತೆ ಬೋಧಿಸುವ ಅಮ್ಮಾನಿನ್ನ ಕಿಡ್ನಿ ಕಸಿ ಮಾಡಿದ ವೈದ್ಯರುನಿನಗೆ ನೀಡಿದ ಕಿಡ್ನಿ ಯಾವಜಾತಿಯವರದೆಂದು ಹೇಳಿದರೇ?ಪ್ರತೀದಿನ ನಿನ್ನನ್ನು ಶುದ್ಧಗೊಳಿಸುವಕಿಡ್ನಿ ಯಾವ ಜಾತಿಯದೆಂದು ಅರಿವಾಗಲೇ ಇಲ್ಲ ನಿಮಗಗತ್ಯವಿದ್ದಾಗ ಎದುರಾಗದ ಜಾತಿನಮ್ಮನ್ನು ಬೆಸೆಯುವ ಸಮಯದಲ್ಲಿಎದುರಾಯಿತೇ?ಹಸಿದಾಗ ಅನ್ನವಿಡದದಿಕ್ಕುಗೆಟ್ಟಾಗ ದಾರಿ ತೋರದಬಿದ್ದಾಗ ಹುಸಿ ಸಂತಾಪ ತೋರುವಈ ಸತ್ವಹೀನ ಸಮಾಜ, ಮಠದ ಐಗಳಹುಸಿ ಮರ್ಯಾದೆಗೆ ಕಟ್ಟುಬಿದ್ದಿರಲ್ಲ… ಮದುವೆ, ಮಡದಿ, ಮಕ್ಕಳುಕೊನೆಗೆ ಮನೆಗೂ ವಿಮುಖರಾದಮಠದ ಐಗಳಿಗೆ ಅನ್ಯರ ಮದುವೆ ಚಿಂತೆ…!ಅವರಿಗೇಕೆ ನಮ್ಮ ಪ್ರೀತಿಯ ಗೊಡವೆ?ಅವರಿಗೇಕೆ ನಮ್ಮ ಮರ್ಯಾದೆಯ ಒಡವೆ? ಎಷ್ಟೊಂದು ಜನ್ಮಗಳಳಿದುಮತ್ತೆ ಸೇರಿದ್ದೆವು ನಾವುನಮ್ಮನ್ನು ದೂರಮಾಡುವುದರಲ್ಲಿಅವರಿಗೆ, ನಿಮಗೆ ಏಕಿಷ್ಟು ಆತುರ?ಬಾಳುಗೆಡುಹುವುದರಲ್ಲಿಏಕಿಷ್ಟೊಂದು ತರಾತುರಿ? ಬಿದ್ದಾಗ ಉಪಚರಿಸಿದಿರಿಬೇಕೆಂದಾಗ ಒದಗಿಸಿದಿರಿಪ್ರೀತಿ ಎಂದರೇನು ತಿಳಿಸಿದಿರಿಪ್ರೀತಿಸುವುದನ್ನು ಕಲಿಸಿದರಿಬದುಕಲು ಬಿಡಿ ಎಂದುಬೇಡಿದಾಗ ಕೊಂದಿರಿ… ಅಯ್ಯೋ….ಏನಾಗಿಹೋಯಿತು…ಅರಳಲು ಹಂಬಲಿಸಿದ ಮೊಗ್ಗೊಂದುನರಳಿ ಅವಸಾನ ಹೊಂದಿತುಯಾವ ಅತ್ತರಿನಿಂದತೊಳೆದರೂ ನಿಮ್ಮ ಕೈಗಂಟಿರುವರಕ್ತದ ವಾಸನೆ ದೂರಾಗದು ಪ್ರಿಯ ಕೊಲೆಗಡುಕರೇ…ಅರಿಯದೇ ಮಾಡಿದ ಪಾಪ ಅರಿತಂದುಪರಿಹಾರವಂತೆ, ನನಗೆ ಗೊತ್ತಿಲ್ಲ…ಕೊನೆಯಲ್ಲಿ ಒಂದೇ ಪ್ರಶ್ನೆನಾನು ಜನಿಸಿದಂದು ಇದ್ದ ಸಂಭ್ರಮನನ್ನನ್ನು ಕೊಲ್ಲುವಾಗಲೂ ಇತ್ತೇ?ಇರಲಿ ನಾನು ನಿಮ್ಮನ್ನು ಕ್ಷಮಿಸಿದ್ದೇನೆಹೇಳಿ, ನೀವು ಕ್ಷಮೆಗೆ ಅರ್ಹರೇ? ಇತಿಎಂದೂ ನಿಮ್ಮವಳಾಗದಹತಭಾಗಿನಿಅಭೀಪ್ಸ.. —————————- ಕಾಂತರಾಜು ಕನಕಪುರ

ಪ್ರಿಯ ಕೊಲೆಗಡುಕರೇ Read Post »

You cannot copy content of this page

Scroll to Top